Homeಅಂತರಾಷ್ಟ್ರೀಯಇಸ್ರೇಲ್‌ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್‌ ವಿಷಾದದ ಪತ್ರ

ಇಸ್ರೇಲ್‌ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್‌ ವಿಷಾದದ ಪತ್ರ

- Advertisement -
- Advertisement -

ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ದೀರ್ಘಕಾಲದ ಸಂಘರ್ಷ ಸದ್ಯಕ್ಕೆ ಒಂದು ಶಾಂತಿಯುತ ನಿಲುಗಡೆಗೆ ಬಂದಿದೆ. ಆದರೆ ಎರಡು ನೆರೆ ಹೊರೆಯ ದೇಶಗಳ ನಡುವಿನ ಅಸ್ತಿತ್ವದ ಈ ಹೋರಾಟ ಬೂದಿ ಮುಚ್ಚಿದ ಕೆಂಡವಿದ್ದಂತೆ. ಮತ್ತೆ ಯಾವಾಗ ಬೇಕಿದ್ದರೂ ಬಿಕ್ಕಟ್ಟು ಉಲ್ಬಣಿಸಿ ಪರಸ್ಪರ ಕಚ್ಚಾಟಗಳಿಗೆ ಮತ್ತು ಅಮಾಯಕರ ಸಾವಿಗೆ ಕಾರಣವಾಗಬಹುದು.

ವಿಶ್ವಸಂಸ್ಥೆ ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ಸಂಬಂಧವನ್ನು ಸರಿಪಡಿಸಲು ಇದುವರೆಗೆ ಹಲವು ಸುತ್ತಿನ ಮಾತುಕತೆಯನ್ನು ಮತ್ತು ಸಂಧಾನ ಯತ್ನವನ್ನು ನಡೆಸಿವೆ. ಆದರೆ ಯಾವ ಪ್ರಯತ್ನಗಳೂ ಇದುವರೆಗೆ ಸಫಲವಾಗಿಲ್ಲ. ಇದರ ನಡುವೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ಯಾಲಿಸ್ತೇನ್ ಮೇಲೆ ನಡೆದ ಇಸ್ರೇಲ್ ಧಾಳಿಯಲ್ಲಿ ಸಾವಿರಾರು ಪ್ಯಾಲಿಸ್ತೇನಿಗಳ ಮಾನವ ಹಕ್ಕನ್ನು ನಿಗ್ರಹಿಸಲಾಗಿದೆ ಎಂಬ ರೆಸಲ್ಯೂಶನ್ ಒಂದನ್ನು  ಮಂಡಿಸಲಾಗಿದ್ದು 24 ರಲ್ಲಿ 15 ಪರವಾದ ಮತಗಳಿಂದ ಈ ರೆಸಲ್ಯೂಶನ್ ಅಂಗೀಕಾರಗೊಂಡಿದೆ. ಆದರೆ ಭಾರತ ಮಾನವ ಹಕ್ಕುಗಳ ಆಯೋಗದ ಈ ರೆಸಲ್ಯೂಶನ್ ಪ್ರಕ್ರಿಯೆಗೆ ಗೈರು ಹಾಜರಾಗುವ ಮೂಲಕ ತನ್ನ ವಿದೇಶಾಂಗ ನೀತಿಯಲ್ಲಿ ಮಹತ್ವವಾದ ಬದಲಾವಣೆಗಳಾಗಿರುವ ಕುರಿತು ಅನುಮಾನ ಮೂಡಿಸಿದೆ.

ಭಾರತದ ಗೈರು ಹಾಜರಾತಿಯ ಸಂಬಂಧ ಪ್ಯಾಲಿಸ್ತೇನ್ ನ ವಿದೇಶಾಂಗ ಮಂತ್ರಿ ರೈದ್ ಮಲ್ಕಿ ಭಾರತದ ವಿದೇಶಾಂಗ ಮಂತ್ರಿ  ಎಸ್. ಜೈಶಂಕರ್ ಅವರಿಗೆ ವಿಷಾದದ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ “ಭಾರತ ಗಣತಂತ್ರವು  ದೀರ್ಘಾವಧಿಯ ಮತ್ತು ಬಹು ಮುಖ್ಯವಾದ ಒಂದು ಸಂದರ್ಭದಲ್ಲಿ ನ್ಯಾಯ ಮತ್ತು ಶಾಂತಿಯ ಸಲುವಾಗಿ ಅಂತರಾಷ್ಟ್ರೀಯ ಸಮುದಾಯದ ಜೊತೆ ನಿಲ್ಲುವ ಅವಕಾಶನ್ನು ಕಳೆದುಕೊಂಡಿದೆ” ಎನ್ನುವ ಮೂಲಕ ಭಾರತದ ಇಂದಿನ ನಡೆ ದೀರ್ಘಾವಧಿಯ ಭಾರತ ಪ್ಯಾಲಿಸ್ತೇನ್ ಸಂಬಂಧವನ್ನು ದುರ್ಬಲಗೊಳಿಸಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಈ ರೆಸಲ್ಯೂಶನ್ ಬಹುರಾಷ್ಟ್ರಗಳ ವ್ಯಾಪಕ ಮಾತುಕತೆಯ ಫಲವಾಗಿ ಹುಟ್ಟಿಕೊಂಡಿದೆ. ಈ ರೆಸಲ್ಯೂಶನ್ ನಲ್ಲಿ ಭಾರತದ ಗೈರು ಹಾಜರಾತಿ ಪ್ಯಾಲಿಸ್ತೇನಿಯರ ಮತ್ತು ಜಗತ್ತಿನ ಎಲ್ಲರ ಮಾನವ ಹಕ್ಕುಗಳನ್ನು ರಕ್ಷಿಸುವ  ಮಹತ್ವದ ಪ್ರಕ್ರಿಯೆಯನ್ನು ನಿಗ್ರಹಿಸುವಂತಹ ನಡೆಯಾಗಿದೆ ಎಂದು ರೈದ್ ಮಲ್ಕಿ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಶ್ವ ಮಾನವ ಹಕ್ಕುಗಳ ಆಯೋಗ ಕೈಗೊಂಡ ಈ ರೆಸಲ್ಯೂಶನ್ ಇಸ್ರೇಲ್ ನಡೆಸಿದೆ ಎನ್ನಲಾದ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯ ತನಿಖೆ ನಡೆಸಲು ದಾರಿ ಮಾಡಿಕೊಡುವ ಪ್ರಯತ್ನವಾಗಿದೆ. ಇದುವರೆಗೆ ಇಸ್ರೇಲ್ ಪ್ಯಾಲಿಸ್ತೇನ್‌ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಯಾವುದೇ ಸ್ವತಂತ್ರ ತನಿಖಾ ಆಯೋಗದಿಂದ ಅವಕಾಶ ನೀಡಿಲ್ಲ. ಹೊಸ ರೆಸಲ್ಯೂಶನ್ ಇಸ್ರೇಲ್ ನಡೆಸುತ್ತಿದೆ ಎನ್ನಲಾದ ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಕುರಿತಾಗಿ ಸ್ವತಂತ್ರ ನಿಯೋಗದಿಂದ ತನಿಖೆಗೆ ಇಸ್ರೇಲ್ ಮೇಲೆ ಒತ್ತಡ ಹೇರಲಿದೆ.

ಭಾರತದ ಬೆಂಬಲ ಸಂಪೂರ್ಣ ಇಸ್ರೇಲ್ ಕಡೆ ವಾಲಿದೆಯೇ? 

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿ ಅಲ್ ಅಕ್ಸಾ ಮಸೀದಿಯ ಮೇಲೆ ರಂಜಾನ್ ಪ್ರಾರ್ಥನೆಯ ವೇಳೆ ಇಸ್ರೇಲ್  ಅತಿಕ್ರಮವಾದ ಒತ್ತುವರಿಯನ್ನು ಮಾಡಲು ಮುಂದಾಗಿದ್ದೇ ಈ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿ  ಭಂಗಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು. ಆದರೆ 3 ದಿನಗಳ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ (General Assembly) ಯಲ್ಲಿ ಭಾರತ ಭದ್ರತಾ ಮಂಡಳಿಯಲ್ಲಿ ಹೇಳಿದ ಈ ಹೇಳಿಕೆಯನ್ನು ಹಿಂಪಡೆದಿದೆ. ಮತ್ತು ಸಾಮಾನ್ಯ ಸಭೆಯಲ್ಲಿ ಭಾರತ ಪ್ಯಾಲಿಸ್ತೇನಿಯರಿಗೆ ಕೇವಲ ಸಿಂಪತಿಯನ್ನು ಅಷ್ಟೇ ವ್ಯಕ್ತಪಡಿಸಿದೆ.

ಪ್ಯಾಲಿಸ್ತೇನ್ ಗೆ ತನ್ನ ಪ್ರಬಲ ಬೆಂಬಲ ಮತ್ತು ತನ್ನ ದೀರ್ಘಕಾಲದ ನಿಲುವು ‘ಎರಡು ದೇಶ ನೀತಿ’  ಬದ್ಧತೆಯನ್ನು ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೇಳಿತ್ತು. ಆದರೆ ತನ್ನ ಈ ನಿಲುವನ್ನು ಭಾರತ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬದಲಾಯಿಸಿದೆ.

ಇಸ್ರೇಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ನರ್ಸ್‌ ಸೌಮ್ಯ ಸಂತೋಶ್‌ ಹಮಾಸ್‌ ರಾಕೇಟ್‌ ದಾಳಿಗೆ ಮೃತಪಟ್ಟಿದ್ದಾರೆ. ಅವರ ಸಾವಿಗೆ ವಿಷಾಧ ವ್ಯಕ್ತಪಡಿಸಿದೆಯಷ್ಟೇ. ಆದರೆ ಇಸ್ರೇಲ್‌ ಪ್ಯಾಲಿಸ್ತೇನ್‌ ಮೇಲೆ ನಡೆಸಿದ ವ್ಯವಸ್ಥಿತ ಮಿಲಿಟರಿ ದಾಲಿಯ ಬಗ್ಗೆ ಭಾರತ ಯಾವುದೇ ಆಕ್ಷೇಪವನ್ನಾಗಲಿ ತನ್ನ ನಿಲುವನ್ನಾಗಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿಲ್ಲ. ಇದರಿಂದ ಭಾರತ ಇಷ್ಟು ದಿನ ವಿಶ್ವ ಸಂಸ್ಥೆಯಲ್ಲಿ ಪ್ಯಾಲಿಸ್ತೇನ್‌ ಗೆ ನೀಡಿದ್ದ ಬೆಂಬಲವನ್ನು ಮುಂದುವರೆಸಿಲ್ಲ. ಬದಲಾಗಿ ಈಗ ಭಾರತದ ಆದ್ಯತೆ ಇಸ್ರೇಲ್‌ ಕಡೆಗೆ ಹೊರಳಿರುವುದು ವಿಶ್ವ ಸಂಸ್ಥೆಯಲ್ಲಿ ಬಹಿರಂಗವಾಗಿದೆ.

ಪ್ಯಾಲಿಸ್ತೇನ್‌ ನೊಂದಿಗೆ ಇಸ್ರೇಲ್‌ ನಡವಳಿಕೆ ಮತ್ತು ಭಾರತದ ಮೌನ ಸಮ್ಮತಿ

ಮೇ 27 ರಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ಯಾಲಿಸ್ತೇನ್‌ ರೆಸಲ್ಯೂಶನ್‌ ನಲ್ಲಿ ಗೈರಾಗುವುದೊರೊಂದಿಗೆ ಭಾರತ ಈಗ ಮೊದಲಿನ ಇಸ್ರೇಲ್‌-ಪ್ಯಾಲಿಸ್ತೇನ್‌ ನಡುವೆ ಸಮತೋಲನದ ವಿದೇಶಾಂಗ ಸಂಬಂಧ ನೀತಿಗೆ ತಿಲಾಂಜಲಿ ಹಾಡಿ ಸದ್ಯ ಭಾರತದ ಬೆಂಬಲ ಇಸ್ರೇಲ್‌ ಕಡೆಗೆ ವಾಲಿದೆ.

ಕಳೆದ ಕೆಲವು ವರ್ಷಗಳಿಂದ ಭಾರತ ಇಸ್ರೇಲ್‌ ಪ್ಯಾಲಿಸ್ತೇನ್‌ ಕುರಿತಾದ ಹೇಳಿಕೆಗೆ ಚಿಕ್ಕ ಅಸಮ್ಮತಿಯನ್ನು ಸೂಚಿಸುತ್ತಿತ್ತು. ಹಾಗೇ ಪ್ಯಾಲಿಸ್ತೇನ್‌ ನಡೆಗೂ ವಿರೋಧವನ್ನು ಆಕ್ಷೇಪವನ್ನು ವ್ಯಕ್ತಪಡಿಸುತ್ತ ಬಂದಿದೆ. ಹಿಂದೆ ಪ್ಯಾಲಿಸ್ತೇನ್‌ ನ ಚಟುವಟಿಕೆಗಳು ಇಸ್ರೇಲ್‌ ವಿರುದ್ಧದ ಪ್ರತಿರೋಧ ಎಂದು ಹೇಳಿ ಸಮರ್ಥಿಸುತ್ತಿದ್ದ ಭಾರತ ಈಗ ಆ ನಡೆಯನ್ನು ಕೈ ಬಿಟ್ಟಿದೆ. ಕೆಲವು ಕಾಲ ಪ್ಯಾಲಿಸ್ತೇನ್‌ ಪರವಾಗಿ ವಿಶ್ವ ಸಂಸ್ಥೆಯಲ್ಲಿ ಮತ ಚಲಾಯಿಸುತ್ತಿದ್ದ ಭಾರತ ಮುಂದೆ ಯಾವ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಿದೆ ಎನ್ನುವುದು ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ಸಂಬಂಧವನ್ನು ನಿರ್ಧರಿಸಲಿದೆ.

ಭಾರತದ ವಿದೇಶಾಂಗ ನೀತಿಯು ಕೇವಲ ಅಂತರಾಷ್ಟೀಯ ಸಂಬಂಧವನ್ನು ಮಾತ್ರ ಅವಲಂಬಿಸಿಲ್ಲ. ಬದಲಾಗಿ ದೇಶದ ಆಂತರಿಕ ವಿಷಯಗಳ ಮೇಲೂ ಪ್ಯಾಲಿಸ್ತೇನ್‌ ವಿಷಯ ಪರಿಣಾಮ ಬೀರಲಿದೆ. ಭಾರತದ 30 ಕೋಟಿಗೂ ಮೀರಿದ ಮುಸ್ಲೀಂ ಸಮುದಾಯದ ಹಿತಾಸಕ್ತಿಯ ಮೇಲೆ ಭಾರತದ ಬದಲಾದ ಇಸ್ರೇಲ್‌ ಪರವಾದ ನಿಲುವು ಪರಿಣಾಮ ಬೀರಲಿದೆ. ಜೊತೆಗೆ ಆಂತರಿಕವಾಗಿ ಭಾರತದಲ್ಲಿರು ದೊಡ್ಡ ಪ್ರಮಾಣದ ಮುಸ್ಲೀಂ ಸಮುದಾಯದಲ್ಲಿ ಅಭದ್ರತೆಯನ್ನು ಹುಟ್ಟಿಸುವ ಸಾಧ್ಯತೆ ಕೂಡ ಇದೆ. ಇದರ ಜತೆಗೆ  ಮಧ್ಯ ಏಷ್ಯಾದಲ್ಲಿ ಕೆಲಸ ಮಾಡುತ್ತಿರುವ ಭಾರತದ 60 ಲಕ್ಷ ಉದ್ಯೋಗಿಗಳ ಮೇಲೂ ಇದರ ಪರಿಣಾಮಗಳು ಉಂಟಾಗಲಿವೆ.

ಅರಬ್‌ ರಾಷ್ಟ್ರಗಳ ಇದುವರೆಗಿನ ಇಸ್ರೇಲ್‌ ಕುರಿತಾದ ದ್ವೇಷ ಕಡಿಮೆಯಾಗುತ್ತಿದೆ. ಯುಎಇ ಜೋರ್ಡಾನ್‌ ಮುಂತಾದ ರಾಷ್ಟ್ರಗಳು ಈಗ ಈಜಿಪ್ಟ್‌ ಜೊತೆಗೆ ಕೈಜೋಡಿಸಿದ್ದು ಇಸ್ರೇಲ್‌ ಬಗೆಗಿನ ತಮ್ಮ ನಿಲುವನ್ನು ಬದಲಿಸಿಕೊಂಡಿವೆ. ಅರಬ್‌ ವಲಯದಲ್ಲಿ ಹೆಚ್ಚುತ್ತಿರುವ ಐಎಸ್‌ಐಎಸ್‌ ಮತ್ತು ಹಮಾಸ್‌ ಪ್ರಭಾವವನ್ನು ತಗ್ಗಿಸಲು ಈಗ ಅರಬ್‌ ರಾಷ್ಟ್ರಗಳು ಇಸ್ರೇಲ್‌ ಕಡೆ ನಿಧಾನಕ್ಕೆ ವಾಲುತ್ತಿವೆ. ಜೊತೆಗೆ ಅಮೆರಿಕ ಪ್ರಭಾವವನ್ನು ಇದರಲ್ಲಿ ಅಲ್ಲಗಳೆಯುವಂತಿಲ್ಲ.

ಪಶ್ಚಿಮ ಏಷ್ಯಾದ ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತ ಇಸ್ರೇಲ್ ಕಡೆ ವಾಲುತ್ತಿರುವ ಬೆಳವಣಿಗೆ ಮುಂದಿನ ದಿನಗಳಲ್ಲಿ  ಹಲವಾರು ಬಿಕ್ಕಟ್ಟುಗಳಿಗೆ ಮತ್ತು ಇರಾನ್‌ ಮತ್ತು ಭಾರತ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಮಿಲಿಟರಿ ತಂತ್ರಜ್ಞಾನ ಮತ್ತು ಉಪಕರಣಗಳಿಗೆ ಇಸ್ರೇಲ್‌ ಮೇಲಿನ ಅತಿಯಾದ ಅವಲಂಬನೆ ಕೂಡ ಭಾರತದ ಅಂತಾಷ್ಟ್ರೀಯ ಸಂಬಂಧಗಳ ಮೇಲೆ ದೀರ್ಘಕಾಲದ  ಪರಿಣಾಮವನ್ನು ಬೀರಲಿದೆ.

ಭಾರತ ಬಹಿರಂಗವಾಗಿ ಇಸ್ರೇಲ್‌ ಗೆ ಬೆಂಬಲವನ್ನು ನೀಡುತ್ತಿದ್ದರೂ ಇಸ್ರೇಲ್‌ ಮಾತ್ರ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಯಾಕೆಂದರೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಸಂಘರ್ಷದ ನಂತರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜಗತ್ತಿನ ಇಪ್ಪತ್ತು ರಾಷ್ಟ್ರಗಳಿಗೆ ಇಸ್ರೇಲ್‌ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ಆದರೆ ಆ ಇಪ್ಪತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ಇರಲಿಲ್ಲ. ಇದು ಇಸ್ರೇಲ್‌ ಭಾರತವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಹೇಳುತ್ತದೆ.

ಸಮತೋಲದ ಅಂತರಾಷ್ಟ್ರೀಯ ನೀತಿಯ ಅಗತ್ಯತೆ

ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಬಿಕ್ಕಟ್ಟಿನ ನಂತರ ವಿಶ್ವ ಸಂಸ್ಥೆಯಲ್ಲಿ ನಡೆದ ಮೂರು ಸಭೆಗಳು ಭಾರತ ಇಸ್ರೇಲ್‌ ಪರವಾದ ನಿಲುವನ್ನು ತಾಳಿರುವುದನ್ನು ಬಹಿರಂಗಗೊಳಿಸಿದೆ. ಆದರೆ ಇಸ್ರೇಲ್‌ ಪರವಾದ ಭಾರತ ನಿಲುವು ಹೆಚ್ಚು ಅಪಾಯಕಾರಿಯಾಗಿದೆ. ಜೊತೆಗೆ ಭಾರತದ ಒಳಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುತ್ವದ ಪ್ರೊಪಗೆಂಡಾದ ಕುರಿತು ಹಲವು ದೇಶಗಳು ಕಳವಳವನ್ನು ವ್ಯಕ್ತಪಡಿಸಿವೆ. ಇಸ್ರೇಲ್‌ ಜೊತೆಗಿನ ಅತಿಯಾದ ನಿಕಟತೆ ಮುಸ್ಲೀಮ್‌ ರಾಷ್ಟ್ರಗಳಿಗೆ ಮತ್ತು ತೈಲ ಸಂಪದ್ಭರಿತವಾದ ಅರಬ್‌ ರಾಷ್ಟ್ರಗಳಿಗೆ ಮುಸ್ಲೀಂ ವಿರೋಧಿ ಜೂವ್ಸ್-ಹಿಂದು ಒಕ್ಕೂಟದಂತೆ ಬಿಂಬಿತವಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಭಾರತ ಇಷ್ಟು ವರ್ಷದವರೆಗೆ ಇಸ್ರೇಲ್‌ ಪ್ಯಾಲಿಸ್ತೇನ್ ವಿಚಾರದಲ್ಲಿ ಪಾಲಿಸಿಕೊಂಡು ಬಂದ ಸಮತೋಲನ ನಡೆಯನ್ನೇ ಮುಂದುವರೆಸಿಕೊಂಡು ಹೋಗುವುದು ಭಾರತದ‌ ದೃಷ್ಟಿಯಿಂದ ಅನುಕೂಲಕರ ವಿದೇಶಾಂಗ ನೀತಿಯಾಗಿರಲಿದೆ.

ಭಾರತ ಬಹುದೀರ್ಘ ಕಾಲದಿಂದಲೂ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಹಿಂಸೆ ಮತ್ತು ಸಂಘರ್ಷಗಳನ್ನು ತ್ಯಜಿಸಿ ಮಾತುಕತೆಯ ಮೂಲಕ ಭೌಗೋಳಿಕ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಬೇಕು. ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಇರಡು ದೇಶಗಳು ಸಮಾನ ಸಾರ್ವಭೌಮ ರಾಷ್ಟ್ರಗಳೆಂದು ಎರಡೂ ಕಡೆಯವರು ಒಪ್ಪಬೇಕು ಎಂದು ಪ್ರತಿಪಾದಿಸುತ್ತ ಬಂದಿದೆ. ಭಾರತದ ಈ ವಿದೇಶಾಂಗ ನೀತಿ ಅತ್ಯಂತ ಜಾಣ್ಮೆಯದು ಮತ್ತು ಅಮೆರಿಕ ಮುಂತಾದ ದೇಶಗಳ ನಿಲುವಿಗಿಂತ ಹೆಚ್ಚು ಸಮತೋಲನದಿಂದ ಕೂಡಿದೆ. ಭಾರತ ಇಸ್ರೇಲ್‌ ಕಡೆಗೆ ವಾಲುವುದಕ್ಕಿಂತ ಇಸ್ರೇಲ್‌ ಪ್ಯಾಲಿಸ್ತೇನ್‌ ನಡುವೆ ಸಮತೋಲನದ ಸಂಬಂಧ ಮುಂದುವರೆಸಿಕೊಂಡು ಹೋಗುವುದು ಭಾರತದ ವಿದೇಶಾಂಗ ನೀತಿಯನ್ನು ಹೆಚ್ಚು ಆರೋಗ್ಯಕರವಾಗಿ ಇಡಲಿದೆ.

ಇಸ್ರೇಲ್‌ ಪ್ಯಾಲಿಸ್ತೇನ್‌ ಎರಡನ್ನೂ ನಿರಾಶೆಗೊಳಿಸಿದ ಭಾರತ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಟ್ವೀಟ್‌ ಮತ್ತು ಪ್ಯಾಲಿಸ್ತೇನ್‌ ವಿದೇಶಾಂಗ ಮಂತ್ರಿ ರೈದ್‌ ಮಲ್ಕಿ ಅವರು ಎಸ್‌ ಜೈಶಂಕರ್‌ ಅವರಿಗೆ ಬರೆದ ವಿಷಾದದ ಪತ್ರದಿಂದ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿರುವುದು ಕಾಣುತ್ತದೆ. ಇಂತ ಸಂಪೂರ್ಣವಾಗಿ ಇಸ್ರೇಲ್‌ ಪರ ನಿಲುವನ್ನು ತಾಳಲಾಗದೇ ಅತ್ತ ತನ್ನ ಹಿಂದಿನ ಟು ಸ್ಟೇಟ್‌ ಪಾಲಿಸಿಯನ್ನು ಮುಂದುವರೆಸಿಕೊಂಡು ಹೋಗಲಾಗದೆ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ಎರಡೂ ದೇಶಗಳಿಗೂ ನಿರಾಸೆಯನ್ನುಂಟುಮಾಡಿದೆ.

ಭಾರತದ ತನ್ನ ಈ ಹೊಸ ವಿದೇಶಾಂಗ ನೀತಿಯನ್ನು ಕೈಬಿಟ್ಟು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ವಿಶೇಷ ರಾಯಭಾರಿಯನ್ನು ನೇಮಿಸಿ ಇಸ್ರೇಲ್‌ ಮತ್ತು ಪ್ಯಾಲಿಸ್ತೇನ್‌ ನಡುವೆ ಹಳಸಿರುವ ಭಾರತದ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವಂತೆ ನೋಡಿಕೊಳ್ಳುವುದೊಂದೇ ಭಾರತದ ಮುಂದಿರುವ ಸದ್ಯದ ಆಯ್ಕೆಯಾಗಿದೆ.

ಮೂಲ : ದಿ ವೈರ್‌ – ಶಶಿ ತರೂರ್

ಅನುವಾದ: ರಾಜೇಶ್ ಹೆಬ್ಬಾರ್


ಇದನ್ನೂ ಓದಿ: 20 ಸಾವಿರ ಕೋಟಿ ರೂಪಾಯಿ ಕೊರೊನಾ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಮ್ಮ ವಿದೇಶಾ0ಗ ಸ್ವಲ್ಪ ಮಟ್ಟಿಗೆ ಅಮೇರಿಕಾ ದತ್ತ ವಾಳಿದಂತೆ ಕಂಡರೂ, ಈಗಲೂ ಸಮತೋಲನ ಮತ್ತು ಜಾಣ್ಮೆಯ ನೆಲೆಗತ್ತಿನಲ್ಲೇ ರೂಪಿತವಾಗಿದೆ.

    ಭಾರತೀಯ ಮುಸ್ಲಿಮರು ಅಭದ್ರತೆಗೆ ಒಳಗಾಗುತ್ತಾರೆ ಎನ್ನುವದಂತೂ ಶುದ್ಧ ಸುಳ್ಳು ಮತ್ತು ಅವಿವೇಕಿತನದ ಉತೃಷ್ಟಾತೆ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...