Homeಕರ್ನಾಟಕಒಳಮೀಸಲಾತಿ: ಸರ್ಕಾರದ ನಿರ್ಲಕ್ಷ್ಯ, ಇಂದು ಮಧ್ಯರಾತ್ರಿಯಿಂದ ಹೋರಾಟಗಾರರ ಅಮರಣಾಂತ ಉಪವಾಸ ಸತ್ಯಾಗ್ರಹ

ಒಳಮೀಸಲಾತಿ: ಸರ್ಕಾರದ ನಿರ್ಲಕ್ಷ್ಯ, ಇಂದು ಮಧ್ಯರಾತ್ರಿಯಿಂದ ಹೋರಾಟಗಾರರ ಅಮರಣಾಂತ ಉಪವಾಸ ಸತ್ಯಾಗ್ರಹ

- Advertisement -
- Advertisement -

ಸರ್ಕಾರಕ್ಕೆ ಎಚ್ಚರಿಕೆ, ಜನತೆಗೆ ಕರೆ

ಬೆಂಗಳೂರು: ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುತ್ತಿರುವ ಶೋಷಿತ ಸಮುದಾಯಗಳಿಗೆ ಇನ್ನೂ ಸಮಾನ ಹಕ್ಕುಗಳು ದಕ್ಕಿಲ್ಲ ಎಂದು ಆರೋಪಿಸಿ, ಒಳಮೀಸಲಾತಿ ಹೋರಾಟಗಾರರು ಆಗಸ್ಟ್ 14ರ ಮಧ್ಯರಾತ್ರಿಯಿಂದಲೇ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ ಎಂದು ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್‌ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ದಶಕಗಳಿಂದಲೂ ಕೇಳಿ ಬರುತ್ತಿರುವ ಒಳಮೀಸಲಾತಿಯ ಬೇಡಿಕೆಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಅನ್ವಯ ಜಾರಿಗೆ ತರುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೋರಾಟಗಾರ ಅಂಬಣ್ಣ ಅರೋಲಿಕರ್ ಸ್ಪಷ್ಟಪಡಿಸಿದ್ದಾರೆ.

ಮೂರು ದಶಕಗಳ ಕಾಲ ನಡೆದ ಈ ಹೋರಾಟ ಆಯೋಗ ರಚನೆ, ಅದರ ಅಧ್ಯಯನ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಮತ್ತು ವರದಿ ಜಾರಿಗೆ ನಿರಂತರವಾಗಿ ನಡೆದಿದೆ. ಇದು ಆಳುವ ಸರ್ಕಾರಗಳ ಮಲತಾಯಿ ಧೋರಣೆಗೆ ಸ್ಪಷ್ಟ ನಿದರ್ಶನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ಹೋರಾಟವೇ ನಮ್ಮ ಜೀವನ, ಹೋರಾಟದಿಂದಲೇ ಪ್ರಗತಿ ಸಾಧನ” ಎಂದು ಅವರು ಘೋಷಿಸಿದರು.

ಹೋರಾಟದ ಸ್ವರೂಪ ಮತ್ತು ಸಿದ್ಧತೆಗಳು

ಈ ಹೋರಾಟಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಮೊದಲ ತಂಡದಲ್ಲಿ ಕರಿಯಪ್ಪ ಗುಡಿಮನಿ, ದಾನಪ್ಪ ನಿಲೋಗಲ್, ಜೆ.ಬಿ. ರಾಜು, ಅಂಬಣ್ಣ ಅರೋಲಿಕರ್, ಲೋಕೇಶ್ ಗೋಸಂಘಿ, ಮತ್ತು ಉಮಾದೇವಿ ಅವರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಇವರಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ, ಎರಡನೇ ತಂಡದ ಸದಸ್ಯರಾದ ಚಂದ್ರು ತರಹುಣಿಸೆ, ಗಣೇಶ್, ಡೇವಿಡ್, ಮಂಜುನಾಥ್ ಮರಾಟ, ಮತ್ತು ವೇಣುಗೋಪಾಲ್ ಮೌರ್ಯ ಅವರು ಉಪವಾಸವನ್ನು ಮುಂದುವರೆಸಲಿದ್ದಾರೆ. ಈ ಮೂಲಕ ನಿರಂತರವಾಗಿ ಹೋರಾಟವನ್ನು ಜೀವಂತವಾಗಿ ಇಡಲು ನಿರ್ಧರಿಸಲಾಗಿದೆ ಎಂದರು.

ಹೋರಾಟದ ತೀವ್ರತೆಯನ್ನು ವಿವರಿಸಿದ ಅಂಬಣ್ಣ ಅರೋಲಿಕರ್, ಬ್ರಿಟಿಷರು ರಾತ್ರೋರಾತ್ರಿ ಭಾರತವನ್ನು ಬಿಟ್ಟು ಹೋಗಲು ಗಾಂಧೀಜಿಯವರ ಸತ್ಯಾಗ್ರಹ ಮಾತ್ರವಲ್ಲ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್ ಅವರಂತಹ ಕ್ರಾಂತಿಕಾರಿಗಳ ಬಲಿದಾನವೂ ಕಾರಣ ಎಂದು ನೆನಪಿಸಿಕೊಂಡರು.

ಈ ಸರ್ಕಾರವು ಕಾಲಹರಣ ಮಾಡುತ್ತಿದೆ, ಇದು ಕಾನೂನುಬಾಹಿರ, ಸಂವಿಧಾನಬಾಹಿರ, ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ತಳೆದಿದೆ ಎಂದು ಅವರು ಹೇಳಿದರು. ಆದ್ದರಿಂದ, ಸ್ವಾತಂತ್ರ್ಯ ಸಿಗದ ನಮಗೆ “ಅನ್ನವೂ ಬೇಡ, ನೀರೂ ಬೇಡ” ಎಂದು ಘೋಷಿಸಿದ ಅವರು, ನಾಗಮೋಹನ್ ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಸರ್ಕಾರವು ಇದಕ್ಕೆ “ಕುಂಟು ನೆಪಗಳನ್ನು ಹೇಳಿದರೆ ನಮ್ಮ ಆಕ್ರೋಶ, ನಮ್ಮ ಸಹನೆಯ ಕಟ್ಟೆ ಒಡೆಯುತ್ತದೆ” ಎಂದು ಎಚ್ಚರಿಸಿದರು.

ಸಮತಾ ಸೈನಿಕ ದಳದ ಮಾದರಿಯಲ್ಲಿ ಹೋರಾಟ

ಉಪವಾಸ ಸತ್ಯಾಗ್ರಹದ ಸ್ಥಳದಲ್ಲಿ ಹೋರಾಟಗಾರರನ್ನು ರಕ್ಷಿಸಲು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮತಾ ಸೈನಿಕ ದಳದ ಪರಿಕಲ್ಪನೆಯಂತೆ ಉಳಿದ ಹೋರಾಟಗಾರರು ‘ರಕ್ಷಾ ಕವಚ’ದಂತೆ ಇರಬೇಕು ಎಂದು ಅಂಬಣ್ಣ ಕರೆ ನೀಡಿದರು.

ಅಂಬೇಡ್ಕರ್ ಅವರಿಗೆ ಭಾರತದ ಪ್ರಭುತ್ವವು ಬ್ರಿಟಿಷರಷ್ಟೇ ಕ್ರೂರವಾಗಿರುತ್ತದೆ ಎಂಬುದು ಗೊತ್ತಿತ್ತು, ಆದ್ದರಿಂದಲೇ ಅವರು ತಮ್ಮದೇ ಆದ ಸೈನ್ಯವನ್ನು ಕಟ್ಟಿದ್ದರು ಎಂದು ಅವರು ವಿವರಿಸಿದರು. ಈ ದಳಕ್ಕೆ ಬಿಳಿ ಮತ್ತು ಕಪ್ಪು ಬಣ್ಣದ ಡ್ರೆಸ್‌ಕೋಡ್ ಇತ್ತು, ಕೈಯಲ್ಲಿ ಲಾಠಿ ಮತ್ತು ಚಕ್ರದ ಚಿತ್ರಣವಿತ್ತು. ಈ ಹೋರಾಟಗಾರರು ನಿದ್ದೆಗೆಟ್ಟು ಹಗಲು ರಾತ್ರಿ ಟೆಂಟ್‌ ಸುತ್ತ ಕಾವಲು ಕಾಯಬೇಕು. ಉಪವಾಸದಲ್ಲಿರುವವರನ್ನು ಸರ್ಕಾರ ಎತ್ತಿಕೊಂಡು ಹೋಗಲು ಪ್ರಯತ್ನಿಸಿದರೆ, ಅದನ್ನು ಪ್ರತಿರೋಧಿಸಬೇಕು ಎಂದು ಸೂಚಿಸಿದರು. ಇದು ವ್ಯಕ್ತಿಗತ ಹೋರಾಟವಲ್ಲ, ಸಾಮೂಹಿಕ ಹೋರಾಟ ಎಂದು ಅವರು ಸ್ಪಷ್ಟಪಡಿಸಿದರು.

ರಾಜಧಾನಿ ರಸ್ತೆಗಳು ರಣಾಂಗಣವಾಗಲಿ

“ನಾವು ಅ. 16ರಂದು ಒಳಮೀಸಲಾತಿ ಜಾರಿಯಾಗಲಿದೆ ಎಂದು ಸಂತೋಷದಿಂದ ಇಲ್ಲಿಂದ ಹೋಗುತ್ತೇವೆ ಎಂದುಕೊಂಡಿದ್ದೆವು. ಆದರೆ ಸರ್ಕಾರವು ’16ರಲ್ಲ, 26ರಲ್ಲ, 46 ಮಾಡುತ್ತೇವೆ’ ಎಂದು ಹೊರಟಿದೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ ಅವರು, “ಯಾವುದೇ ಕ್ಷಣದಲ್ಲಿಯೂ ಈ ರಾಜಧಾನಿಯ ರಸ್ತೆ ರಣಾಂಗಣವಾಗಲಿಕ್ಕೆ ಸಿದ್ಧರಾಗಬೇಕು” ಎಂದು ಕರೆ ನೀಡಿದರು. ಇದು ಒಂದು ಅಗ್ನಿಪರೀಕ್ಷೆ ಎಂದು ಹೋರಾಟಗಾರರಿಗೆ ಹೇಳಿದರು.

ಸುಪ್ರೀಂ ಕೋರ್ಟ್ ಒಪ್ಪಿದ ಒಳಮೀಸಲಾತಿಯನ್ನು ಜಾರಿಗೆ ತರದಿರುವುದು ನ್ಯಾಯಾಲಯದ ತೀರ್ಮಾನಕ್ಕೆ ಅಗೌರವ ಮತ್ತು ಸಂವಿಧಾನ ವಿರೋಧಿ ನಡೆ. ಇದು 101 ಜಾತಿಗಳನ್ನು ಮತ್ತಷ್ಟು ತಾತ್ಸಾರ ಮಾಡುವ ದುರಹಂಕಾರದ ಪ್ರತೀಕ ಎಂದು ಅವರು ಗುಡುಗಿದರು.

ಹುಟ್ಟುಹಬ್ಬವನ್ನು ತ್ಯಾಗ ಮಾಡಿದ ಹೋರಾಟಗಾರ

ಇದೇ ಸಂದರ್ಭದಲ್ಲಿ, ಅಂಬಣ್ಣ ಅರೋಲಿಕರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದು, ಒಳಮೀಸಲಾತಿ ಹೋರಾಟಕ್ಕೆ ಅದನ್ನು ಸಮರ್ಪಿಸಿದ್ದಾರೆ. ದೇವನೂರು ಮಹಾದೇವ ಅವರು ಕೂಡಲೇ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿ, ಅವರಿಗೆ ತಂಡದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಒಳಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದರೂ ಅದನ್ನು ಜಾರಿಗೊಳಿಸದಿರುವುದು ಸಂವಿಧಾನ ವಿರೋಧಿ ಮತ್ತು ಕೋರ್ಟ್ ತೀರ್ಪಿಗೆ ಅಗೌರವ ಎಂದು ಅರೋಲಿಕರ್ ಗುಡುಗಿದರು. ಇದು 101 ಜಾತಿಗಳನ್ನು ಮತ್ತಷ್ಟು ತಾತ್ಸಾರ ಮಾಡುವ ದುರಹಂಕಾರದ ಪರಮಾಧಿಕಾರ ಎಂದು ಆಕ್ರೋಶ ಹೊರಹಾಕಿದರು.

ಇದು ಅಂತಿಮ ಯುದ್ಧ: ಸರ್ಕಾರದ ನಿಲುವಿಗೆ ಸ್ಪಷ್ಟ ಸಂದೇಶ

“ಉಪವಾಸ ಸತ್ಯಾಗ್ರಹಿಗಳಿಗೆ ಸಾಯುವ ಪರಿಸ್ಥಿತಿ ಬಂದರೆ, ನಾವು ಸಾಯಲಿಕ್ಕೂ ಸಿದ್ಧ” ಎಂದು ಹೇಳಿದ ಅರೋಲಿಕರ್, ಇದು ಅಂತಿಮ ಯುದ್ಧ ಎಂದು ಘೋಷಿಸಿದರು.

ಎಲ್ಲರೂ ಈ ಹೋರಾಟದಲ್ಲಿ ಸೈನಿಕರಂತೆ ಭಾಗವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಬೇಕು. ಆದರೆ, ಅನಗತ್ಯ ವಾದ-ವಿವಾದಗಳಲ್ಲಿ ತೊಡಗಬಾರದು. ಜಾಲತಾಣಿಗರ ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೆ ತಮ್ಮ ಕೆಲಸವನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

“ನಮ್ಮ ಮನವಿ ಮತ್ತೊಂದು ಏನೂ ಇಲ್ಲ. ಸಾವಿರಕ್ಕೂ ಹೆಚ್ಚಿರುವ ಸಮಗ್ರ ಒಳಮೀಸಲಾತಿ ವರದಿ ಜಾರಿ ಮಾಡಬೇಕೆಂಬುದೇ ನಮ್ಮ ಬೇಡಿಕೆಯಾಗಿದೆ” ಎಂದರು. ಯಾವುದೇ ರಾಜಕಾರಣಿಗಳು ಟೆಂಟ್‌ಗೆ ಬರುವುದಾದರೆ, ಒಳಮೀಸಲಾತಿಯನ್ನು ಅಂಗೀಕಾರ ಮಾಡುವ ಆದೇಶ ಪತ್ರದೊಂದಿಗೆ ಬರಬೇಕು ಎಂದು ಸ್ಪಷ್ಟಪಡಿಸಿದರು. ಹೋರಾಟಕ್ಕೆ ಬೆಂಬಲವಾಗಿ ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಪ್ರತಿರೋಧ ಆರಂಭವಾಗುತ್ತದೆ ಎಂದು ತಿಳಿಸಿ, “ಜೈ ಭೀಮ್” ಎಂದು ಘೋಷಿಸಿದರು.

ಸರ್ಕಾರಕ್ಕೆ ಎಚ್ಚರಿಕೆ ಮತ್ತು ಬೆಂಬಲದ ಮಾತುಗಳು

ಇಂತಹ ಹೋರಾಟಕ್ಕೆ ಸರ್ಕಾರ ಅವಕಾಶ ನೀಡಬಾರದಿತ್ತು ಎಂದು ಜಾಗೃತ ಕರ್ನಾಟಕದ ಮುತ್ತುರಾಜ್ ಹೇಳಿದ್ದಾರೆ. ಇಷ್ಟು ದಿನ ಹಸಿವಿನಿಂದ ಬಳಲಿದವರು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ನಡೆಸುವುದನ್ನು ನೋಡಿ ನೋವಾಗುತ್ತಿದೆ ಎಂದ ಅವರು, ಸರ್ಕಾರವು ಹೋರಾಟಗಾರರನ್ನು ಕರೆದು ಮಾತನಾಡಿ, ಉಪವಾಸ ಕೈಬಿಡುವಂತೆ ಮನವಿ ಮಾಡುವ ಮೂಲಕ ತನ್ನ ದೊಡ್ಡತನ ತೋರಬೇಕು ಎಂದು ಆಶಿಸಿದರು.

ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಎಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಒಳಮೀಸಲಾತಿ ಹೋರಾಟಗಾರ ಪ್ರಶಾಂತ್ ದಾನಪ್ಪ ಅವರು, “ಸಾಮಾಜಿಕ ಅನ್ಯಾಯದ ಜಿಡ್ಡುಗಟ್ಟಿದ ಮೌಲ್ಯಗಳಿಂದ ಸ್ವಾತಂತ್ರ್ಯವು ವಂಚಿತ ದುರ್ಬಲ ಸಮುದಾಯಗಳಿಗೆಲ್ಲಾ ಸಿಗಲಿ… ಬಾಬಾಸಾಹೇಬರ ಸಂವಿಧಾನದ ಆಶಯಗಳು ಚಿರಾಯುವಾಗಲಿ” ಎಂದು ಹಾರೈಸಿದರು.

“ನನ್ನ ಸಮುದಾಯವನ್ನು ಅತ್ಯಂತ ನಿಕೃಷ್ಟವಾಗಿ ಬೀದಿಗೆ ಬರುವಂತೆ ಮಾಡಿಬಿಟ್ಟರು, ನಾವು ಯಾವುದನ್ನು ನಂಬಿದ್ದೆವೋ ಅದೆಲ್ಲವೂ ಉರುಳುತ್ತಿದೆ, ಸಂವಿಧಾನದ ಕಣ್ಣುಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ, ಅದರೂ ನನ್ನ ಸಮುದಾಯದ ಸ್ಥಿತಿಯನ್ನು ನೆನಸಿಕೊಂಡರೆ ನಿಜಕ್ಕೂ ಬಹಳ ದುಃಖವೆನಿಸುತ್ತದೆ” ಎಂದು ಅವರು ತಮ್ಮ ಅಂತರಾಳದ ನೋವನ್ನು ಹಂಚಿಕೊಂಡರು.

ಒಳಮೀಸಲಾತಿ ತಕ್ಷಣ ಜಾರಿಗೆ ಆಗ್ರಹ: ಮುಖ್ಯಮಂತ್ರಿಯವರಿಗೆ ದೇವನೂರು ಮಹಾದೇವ ಬಹಿರಂಗ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...