Homeಕರ್ನಾಟಕಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಲೇಬೇಕು; ಏಕೆ ಮತ್ತು ಹೇಗೆ?: ಕರ್ನಾಟಕ ಜನಶಕ್ತಿಯಿಂದ ಹೇಳಿಕೆ

ಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಲೇಬೇಕು; ಏಕೆ ಮತ್ತು ಹೇಗೆ?: ಕರ್ನಾಟಕ ಜನಶಕ್ತಿಯಿಂದ ಹೇಳಿಕೆ

- Advertisement -
- Advertisement -

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಶಿಪಾರಸ್ಸು ಮಾಡಿರುವ ಡಾ. ನಾಗಮೋಹನ್‌ ದಾಸ್‌ ವರದಿಯನ್ನು ಮತ್ತೆ ಮುಂದಕ್ಕೆ ತಗೆದುಕೊಂಡು ಹೋಗದೆ, ಎಲ್ಲಾ ಶೋಷಿತ ಸಮುದಾಯಗಳ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾರ್ಪಾಡುಗಳ ಜೊತೆ, ಈ ಕೂಡಲೇ ಜಾರಿ ಮಾಡಬೇಕೆಂದು ಕರ್ನಾಟಕ ಜನಶಕ್ತಿ ಹೇಳಿದೆ.

ಈ ಕುರಿತು ಸಂಘಟನೆಯ ಪರವಾಗಿ ನೂರ್‌ ಶ್ರೀಧರ್‌, ಮಲ್ಲಿಗೆ ಸಿರಿಮನೆ, ಕೆ.ಎಲ್. ಅಶೋಕ್,  ಕುಮಾರ್‌ ಸಮತಳ ಅವರು ಹೇಳಿಕೆ ಹೊರಡಿಸಿ, ಖಾಸಗೀಕರಣ ಹಾಗೂ ಗುತ್ತಿಗೆಕರಣಗಳು ಮೀಸಲಾತಿಯನ್ನು ನೆಲಸಮ ಮಾಡುತ್ತಾ ಹೋಗುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲಾ ಸಮುದಾಯಗಳಲ್ಲೂ ಶಿಕ್ಷಿತ ಯುವಜನರ ಸಂಖ್ಯೆ ಹೆಚ್ಚುತ್ತಿದೆ, ಆದರೆ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಪ್ರತಿಯೊಂದು ತಳ ಸಮುದಾಯಗಳಲ್ಲೂ ವಿದ್ಯಾವಂತ ನಿರುದ್ಯೋಗಿಗಳ ಅಥವಾ ಅರೆಬರೆ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವಕಾಶಗಳೇ ವಿರಳವಾಗುತ್ತಿರುವ ಸಂದರ್ಭದಲ್ಲಿ ಒಳ ಮೀಸಲಾತಿಯ ವಿಚಾರ ಬಂದೊಡನೆ ʼಇರುವ ಮೀಸಲಾತಿಯನ್ನೂ ಇನ್ನ್ಯಾರು ಕಸಿದುಕೊಂಡುಬಿಡುತ್ತಾರೋ ಎಂಬ ಆತಂಕಕ್ಕೆ ಶೋಷಿತ ಸಮುದಾಯಗಳು ಒಳಗಾಗುತ್ತಿವೆ. ಪರ – ವಿರೋಧದ ವಾದ ವಿವಾದಗಳು ಶುರುವಾಗುತ್ತಿವೆ. ಈ ಆತಂಕವನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಲು ಕಾಯುತ್ತಿರುವ ಶಕ್ತಿಗಳು ಉಪ್ಪು ಸವರಿ ಕೆರಳಿಸುವ ಕೆಲಸ ಮಾಡುತ್ತಿವೆ. ಈ ಪರಿಸ್ಥಿತಿ ನಮ್ಮನ್ನು ಮತ್ತಷ್ಟು ದುರ್ಬಲಗೊಳಿಸುತ್ತಿದೆ. ಶೋಷಿತ ಸಮುದಾಯಗಳ ನಡುವಿನ ಒಡಕನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಶೋಷಿತ ಸಮುದಾಯಗಳ ಐಕ್ಯತೆ ಮತ್ತು ಎಲ್ಲಾ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಬಯಸುವವರೆಲ್ಲರೂ ಸಂಯಮದಿಂದ ಆಲೋಚಿಸಿ, ಕ್ರಿಯಾಶೀಲ ಪಾತ್ರವಹಿಸಿ ಈ ವಿವಾದವನ್ನು ಅಂತ್ಯಗೊಳಿಸಿಕೊಳ್ಳಬೇಕಿದೆ. ಅಷ್ಟು ಮಾತ್ರವಲ್ಲ, ಶೋಷಿತರೆಲ್ಲರೂ ಜೊತೆಗೂಡಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು, ಖಾಸಗಿ ಮತ್ತು ಗುತ್ತಿಗೆ ಕ್ಷೇತ್ರಗಳಲ್ಲೂ ಮೀಸಲಾತಿ ದಕ್ಕಿಸಿಕೊಳ್ಳಲು ಹೋರಾಟ ರೂಪಿಸಬೇಕಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯು ಸಲಹೆ ನೀಡಿದೆ.

ಸರ್ಕಾರ ಮತ್ತೆ ಕಾಲಾಹರಣ ಮಾಡದೆ, ರಾಜಕೀಯ ಲಾಭ – ನಷ್ಟಗಳ ಲೆಕ್ಕ ಹಾಕುತ್ತಾ ಕೂರದೆ, ಎಲ್ಲಾ ಸಮುದಾಯಗಳ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯ ಸಮ್ಮತವಾಗಿ ಮತ್ತು ವಿವೇಕಯುತವಾಗಿ ಒಳ ಮೀಸಲಾತಿಯನ್ನು ಅನುಮೋದಿಸಿ ಜಾರಿಗೊಳಿಸಲು ಮುಂದಾಗಬೇಕಿದೆ ಎಂದು ಅದು ಒತ್ತಾಯಿಸಿದೆ.

ಮತ್ತೆ ಮುಂದೆ ಹೋಗದೆ, ಅಗತ್ಯ ಪರಿಷ್ಕರಣೆಗಳೊಂದಿಗೆ, ಡಾ. ನಾಗಮೋಹನ್‌ ದಾಸ್‌ ವರದಿ ಈ ಕೂಡಲೇ ಅನುಮೋದನೆಗೊಳ್ಳಬೇಕು ಏಕೆ? ಎಂದು ಪ್ರಕಟಣೆಯಲ್ಲಿ ಈ ಕೆಳಗಿನಂತೆ ವಿವರಿಸಿದೆ.

1. ಪರಿಶಿಷ್ಟ ಜಾತಿಗಳೊಳಗೆ ವಿವಿಧ ಕುಲ ಸಮುದಾಯಗಳು ಇರುವುದು ವಾಸ್ತವ, ಅವುಗಳ ಸಮಾಜಿಕ ಆರ್ಥಿಕ ಸ್ಥಿತಿಗತಿಗಳಲ್ಲಿ ಗಣನೀಯ ವ್ಯತ್ಯಾಸ ಇರುವುದೂ ಸತ್ಯ. ದೊಡ್ಡ ಸಂಖ್ಯಾಬಲವಿದ್ದರೂ ಅವಕಾಶಗಳನ್ನು ಸಾಪೇಕ್ಷವಾಗಿ ಕಡಿಮೆ ಪಡೆದಿರುವ ಮಾದಿಗ ಸಮುದಾಯ ಸುಮಾರು ಮೂರು ದಶಕಳಿಂದ ಒಳ ಮೀಸಲಾತಿಗಾಗಿ ಆಗ್ರಹಿಸಿ ಹೋರಾಡುತ್ತಾ ಬರುತ್ತಿದೆ. ತನ್ನ ಹೋರಾಟದ ಮೂಲಕ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಪ್ರೀಂ ಕೋರ್ಟು ಒಳ ಮೀಸಲಾತಿಯ ಹಕ್ಕೊತ್ತಾಯವನ್ನು ಅನುಮೋದಿಸುವಂತೆ ಮಾಡುವುದರಲ್ಲಿ ಯಶಸ್ವಿಗೊಂಡಿದೆ. ಇದು ಆ ಸಮುದಾಯ ಲಾಬಿ ಮಾಡಿ ಪಡೆಯುತ್ತಿರುವ ಹಕ್ಕಲ್ಲ, ಸತತ ಸಂಘರ್ಷ ನಡೆಸಿ ಪಡೆಯುತ್ತಿರುವ ಪಾಲು ಎಂಬುದನ್ನು ನಾವು ನೀವೆಲ್ಲರೂ ಒಪ್ಪಿಕೊಳ್ಳಲೇಬೇಕಿದೆ. ಈ ಸಮುದಾಯ ಬಹಳ ಕಾದಿದೆ. ಇನ್ನು ಕಾಯಿಸುವುದು ಯಾವ ರೀತಿಯಿಂದಲೂ ನ್ಯಾಯವಲ್ಲ. ಹಾಗಾಗಿಯೇ ಒಳ ಮೀಸಲಾತಿ ಈ ಬಾರಿ ಜಾರಿಯಾಗಲೇಬೇಕಿದೆ.

2. ಒಳ ಮೀಸಲಾತಿ ವಿವಾದದಿಂದಾಗಿ ಶೋಷಿತರ ನಡುವಿನ ಐಕ್ಯತೆಗೆ ಈಗಾಗಲೇ ಸಾಕಷ್ಟು ಧಕ್ಕೆಯಾಗಿದೆ. ಪರಸ್ಪರ ದೋಷಾರೋಪಣೆ ಮಾಡುವ, ಕೆಲವೊಮ್ಮೆ ಶತ್ರುಗಳಂತೆ ಕಾಣುವ ಮನೋಭಾವ ಸಮುದಾಯಗಳ ನಡುವಿನ ಬಂಧವನ್ನು ಸಾಕಷ್ಟು ದುರ್ಬಲಗೊಳಿಸಿದೆ. ಇದರ ದುರ್ಲಾಭ ಪಡೆದುಕೊಂಡ ಮನುವಾದಿ ಶಕ್ತಿಗಳು ಮಾದಿಗ ಸಮುದಾಯದ ಒಂದು ಭಾಗವನ್ನು ಈಗಾಗಲೇ ತಮ್ಮ ತೆಕ್ಕೆಗೆ ಎಳೆದುಕೊಂಡಿವೆ. ಮೀಸಲಾತಿಯನ್ನೇ ವಿರೋಧಿಸುವ ಮನುವಾದಿಗಳು ಅವಕಾಶವಾದಿ ರಾಜಕೀಯ ಉದ್ದೇಶದಿಂದ ತಾವು ಮಾದಿಗರ ಪರ ಇರುವಂತೆ ಕಪಟ ನಟನೆ ಮಾಡುತ್ತಿದ್ದಾರೆ. ಒಂದು ವೇಳೆ ಈ ಬಾರಿ ಇದು ಇತ್ಯರ್ಥಗೊಳ್ಳದೆ ಮುಂದುವರಿದಲ್ಲಿ ಪರಿಶಿಷ್ಟ ಸಮುದಾಯಗಳ ನಡುವಿನ ಮಾನಸಿಕ ಬಿರುಕು ಮತ್ತಷ್ಟು ಹೆಚ್ಚಾಗುತ್ತದೆ, ಮಾತ್ರವಲ್ಲ, ನಮ್ಮ ಸಮುದಾಯದ ಮತ್ತಷ್ಟು ಜನಸಂಖ್ಯೆಯನ್ನು ಬಿಜೆಪಿ ಮತ್ತು ಸಂಘಪರಿವಾರಗಳು ದಿಕ್ಕು ತಪ್ಪಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಅನಾಹುತವನ್ನು ತಡೆಗಟ್ಟಬೇಕಾದರೆ ಈ ಬಾರಿ ಒಳ ಮೀಸಲಾತಿ ಜಾರಿಯಾಗಲೇಬೇಕಿದೆ.

3. ಮೀಸಲಾತಿಯ ಪ್ರಮಾಣ ಹೆಚ್ಚಿಸಿಕೊಳ್ಳಲು ಮತ್ತು ಗುತ್ತಿಗೆ ಕ್ಷೇತ್ರದಲ್ಲೂ ಮೀಸಲಾತಿ ಜಾರಿಯಾಗುವಂತೆ ಮಾಡಲು ಶೋಷಿತ ಸಮುದಾಯಗಳೆಲ್ಲವೂ ಒಗ್ಗೂಡಿ ಹೋರಾಟ ರೂಪಿಸಬೇಕಾದ ಅಗತ್ಯವಿದೆ. ಆದರೆ ಈಗಿನ ಒಳ ಭಿನ್ನಾಭಿಪ್ರಾಯಗಳನ್ನು ಅಂತ್ಯಗೊಳಿಸಿಕೊಂಡರೇನೇ ಐಕ್ಯ ಚಳವಳಿ ರೂಪಿಸುವ ನಿಟ್ಟಿನಲ್ಲಿ ಮುನ್ಸಾಗಲು ಸಾಧ್ಯವಾಗುತ್ತದೆ. ಹಾಗಾಗಿಯೂ ಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಬೇಕಿದೆ.

ಸದ್ಯದ ಸ್ಥಿತಿಯಲ್ಲಿ, ಒಳ ಮೀಸಲಾತಿಯನ್ನು ಜಾರಿ ಮಾಡುವುದರ ಬಗ್ಗೆ ತಾತ್ವಿಕವಾಗಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ, [ಇದ್ದರೂ ಸುಪ್ರೀಂ ಕೋರ್ಟು ಆದೇಶ ನೀಡಿರುವುದರಿಂದ ಜಾರಿ ಮಾಡಲೇಬೇಕಿದೆ]. ಭಿನ್ನಾಭಿಪ್ರಾಯವಿರುವುದು ನಾಗಮೋಹನ್‌ ದಾಸ್‌ ವರದಿ ಶಿಫಾರಸು ಮಾಡಿರುವ ಹಂಚಿಕೆಯಲ್ಲಿ “ತಮಗೆ 0.5% ಅಥವಾ 1% ಕಡಿಮೆ ಆಯಿತು” ಅಥವಾ “ನಮ್ಮ ಪಂಗಡಕ್ಕೆ ಸೇರಬೇಕಾದ ಒಂದೆರಡು ಕುಲಗಳನ್ನು ಮತ್ತೊಂದು ಪಂಗಡದಡಿ ಸೇರಿಸಲಾಗಿದೆ” ಎಂಬ ಭಿನ್ನಸ್ವರಗಳು ಮಾತ್ರ. ಈ ಭಿನ್ನ ಅಭಿಪ್ರಾಯಗಳನ್ನು ದೊಡ್ಡ ಭಿನ್ನಾಭಿಪ್ರಾಯಗಳನ್ನಾಗಿ ಮಾಡಿಕೊಳ್ಳದೆ ಪರಸ್ಪರ ಕೊಟ್ಟು ತಗೆದುಕೊಳ್ಳುವ ವಿಶಾಲ ಮನೋಭಾವದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಎಲ್ಲಾ ಸಾಧ್ಯತೆಗಳಿವೆ ಎಂದು ಜನಶಕ್ತಿ ಸಂಘಟನೆಯು ಆಶಾಭಾವನೆಯನ್ನು ವ್ಯಕ್ತಪಡಿಸಿದೆ.

ಇಂದಿನ ತುರ್ತು ಅಗತ್ಯವೆಂದರೆ; ಸರ್ಕಾರ ಮೀನಾಮೇಶ ಎಣಿಸುತ್ತಾ ಕೂರದೆ, ಎಲ್ಲಾ ಸಮುದಾಯಗಳ ಆತಂಕ ಮತ್ತು ಅಹವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಆಗಸ್ಟ್‌ 19 ರ ಕ್ಯಾಬಿನೆಟ್‌ ಸಬೆಯಲ್ಲಿ ವಿವೇಕಯುವಾದ, ನ್ಯಾಯಸಮ್ಮತವಾದ ಮತ್ತು ಖಚಿತವಾದ ತೀರ್ಮಾನ ತೆಗೆದುಕೊಂಡು ವಿವಾದಕ್ಕೆ ತೆರೆ ಎಳೆಯಬೇಕಿದೆ. ಈ ವಿಚಾರದಲ್ಲಿ ತಮ್ಮ ವಿವೇಕ ಬಳಸಿ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಗಳಿಗೆ ಎಲ್ಲಾ ಶೋಷಿತ ಸಮುದಾಯಗಳೂ ಅವಕಾಶ ನೀಡಬೇಕಿದೆ. ಹಾಗೂ ಕೆಲವು ಅಸಮಾಧಾನಗಳು ಉಳಿದರೆ ಅವನ್ನು ಆಲಿಸಿ ಅಗತ್ಯ ಬದಲಾವಣೆಗಳನ್ನು ಮಾಡಲು “ಪರಿಷ್ಕರಣಾ ಸಮಿತಿ” ಯೊಂದನ್ನು ಸರ್ಕಾರ ರಚಿಸಬೇಕಿದೆ ಎಂದು ಅದು ಹೇಳಿದೆ.

ಇದು ಒಂದು ಕುಟುಂಬದ ಸೋದರ-ಸೋದರಿಯರ ನಡುವೆ ಆಗುತ್ತಿರುವ ಪಾಲು ಹಂಚಿಕೆಯ ಪ್ರಶ್ನೆಯಾಗಿರುವುದರಿಂದ ಬಿಸಿಬಿಸಿ ಚರ್ಚೆಗಳು ಸಹಜ, ಆದರೆ ಕುಟುಂಬದ ಘನತೆಗೇ ಧಕ್ಕೆ ಬರದಂತೆ ನಡೆದುಕೊಳ್ಳುವ ಪ್ರಬುದ್ಧತೆಯನ್ನು ಪ್ರತಿಯೊಬ್ಬರೂ ತೋರಬೇಕಿದೆ. ವಿಶೇಷವಾಗಿ ಕರ್ನಾಟಕದ ಸಾಕ್ಷಿ ಪ್ರಜ್ಞೆಗಳಂತಿರುವ, ಸದಾ ತಳ ಸಮುದಾಯಗಳ ಹಿತ ಕಾಯಲು ತುಡಿದ, ದುಡಿದ ಹಿರಿಯ ಚೇತನಗಳಾದ ಡಾ. ನಾಗಮೋಹನ್‌ ದಾಸ್‌, ಕೋಟಗಾನಹಳ್ಳಿ ರಾಮಯ್ಯ, ದೇವನೂರ ಮಹಾದೇವ, ಎನ್. ವೆಂಕಟೇಶ್‌ ಮುಂತಾದ ಘನ ವ್ಯಕ್ತಿತ್ವಗಳಿಗೆ ಅಪಚಾರವಾಗದಂತೆ ಎಲ್ಲರೂ ಎಚ್ಚರಿಕೆ ವಹಿಸೋಣ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಂಘಟನೆಯು ಕೊನೆಯ ವಿನಮ್ರ ಮನವಿ ಮಾಡಿದೆ.

ಸಂಘಟನೆಯು ಈ ಕೆಳಗಿನಂತೆ ಬೇಡಿಕೆಗಳನ್ನು ಇಟ್ಟಿದೆ.

  • ಎಲ್ಲಾ ಶೋಷಿತ ಸಮುದಾಯಗಳ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾರ್ಪಾಡುಗಳ ಜೊತೆ ಸರ್ಕಾರ ಒಳ ಮೀಸಲಾತಿಯನ್ನು ಅನುಮೋದಿಸಿ ಜಾರಿಗೊಳಿಸಲಿ
  • ಪರಸ್ಪರ ಕೊಡುಕೊಳು ಮನೋಭಾವದ ಜೊತೆ ಸಮಸ್ಯೆ ಬಗೆಹರಿಯಲು ಎಲ್ಲಾ ಸಮುದಾಯಗಳು ಸಹಕರಿಸಲಿ
  • ದಶಕಗಳಿಂದ ಕಾದಿರುವ ಮತ್ತು ಹೋರಾಡಿರುವ ಸಮುದಾಯದ ಕನಸು ಈಗಾದರೂ ನನಸಾಗಲಿ
  • ಶೀಘ್ರವೇ ಮೀಸಲಾತಿಯ ವಿಸ್ತರಣೆ ಹಾಗೂ ಅನುಷ್ಠಾನಕ್ಕಾಗಿ ಎಲ್ಲಾ ಶೋಷಿತ ಸಮುದಾಯಗಳ ಐಕ್ಯ ಚಳವಳಿ ಮರುಹುಟ್ಟು ಪಡೆಯಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...