Homeಕರ್ನಾಟಕಪಕ್ಷಾಂತರ ನೀಷೇಧ ಕಾಯ್ದೆಯ ಜೀವ ತೆಗೆಯುತ್ತಿದ್ದಾರೆ: ದೇವನೂರು ಮಹಾದೇವ

ಪಕ್ಷಾಂತರ ನೀಷೇಧ ಕಾಯ್ದೆಯ ಜೀವ ತೆಗೆಯುತ್ತಿದ್ದಾರೆ: ದೇವನೂರು ಮಹಾದೇವ

ರಾಜೀನಾಮೆ ಅಂಗೀಕಾರವಾಗುವವರೆಗೆ ಮುಂಬೈ ಹೋಟೆಲ್‍ಗೆ ಹೋಗಿ ಕೂತಿದ್ದು ಅನೈತಿಕತೆಯ ವಾಸನೆ ಹೊಡಿಸ್ತು

- Advertisement -
- Advertisement -

15ಕ್ಕೂ ಹೆಚ್ಚು ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈಗೆ ಹಾರಿಹೋದಾಗಿನಿಂದ ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆದುಕೊಂಡು ಅಸಹ್ಯ ಹುಟ್ಟಿಸುತ್ತಿದೆ. ಇದನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಡಿನ ಹಿರಿಯ ಸಾಕ್ಷಿಪ್ರಜ್ಞೆಗಳಾದ ದೇವನೂರು ಮಹಾದೇವ ಮತ್ತು ಎಚ್.ಎಸ್ ದೊರೆಸ್ವಾಮಿಯವರು ಸ್ಪೀಕರ್ ರಮೇಶ್ ಕುಮಾರ್ ರವರಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾನುಗೌರಿ.ಕಾಂ ವತಿಯಿಂದ ದೇವನೂರು ಮಹಾದೇವರನ್ನು ಸಂದರ್ಶಿಸಲಾಯಿತು.

ಪತ್ರಿಕೆ: ನೀವು ಸ್ಪೀಕರ್‍ರಿಗೆ ಪತ್ರ ಬರೆಯಬೇಕೆಂದುಕೊಂಡಿದ್ದು ಯಾಕೆ ಸಾರ್?
ದೇವನೂರ ಮಹಾದೇವ: ರಾಜ್ಯದ ಶಾಸಕರ ನಾಪತ್ತೆ ರಾಜಕಾರಣವನ್ನು ಮಾಧ್ಯಮಗಳೆಲ್ಲವೂ ಹೈಡ್ರಾಮಾ ಎಂದು ಬಿಂಬಿಸುತ್ತಿವೆ. ಆದರೆ ನಡೀತಿರೋದು ಕೊಳಕು ಡ್ರಾಮಾ. ಈಗ ಏನು ನಡೀತಿದೆ ಗೊತ್ತೇ? ಇದು ಪಕ್ಷಾಂತರ ನಿಷೇಧ ಕಾಯ್ದೆಯ ಜೀವ ತೆಗೀತಿರೋದು. ಇದಕ್ಕೆ ನಮ್ಮ ನ್ಯಾಯಾಂಗ, ರಾಜ್ಯಪಾಲರು ಹಾಗೂ ರಾಜಕಾರಣಿಗಳು ಒಂದಲ್ಲಾ ಒಂದು ರೀತಿ ಕಾರಣರಾಗಿದ್ದಾರೆ. ಮೇಲ್ಕಂಡವರಿಗೆ ಸಂವಿಧಾನದ ಬಗ್ಗೆ, ನ್ಯಾಯಾಲಯದ ಬಗ್ಗೆ ನಂಬಿಕೆ ಗೌರವ ಇದೆಯಾ ಎನ್ನೋ ಅನುಮಾನ ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ಸುಮ್ಮನಿರಬಾರ್ದು ಅನ್ನಿಸ್ತು.

ಪತ್ರಿಕೆ: ಸ್ಪೀಕರ್‍ರಿಗೇ ಯಾಕೆ ಬರೆದ್ರಿ?
ದೇ.ಮ: ನೋಡಿ, ಇಲ್ಲಿ ಕೆಲವ್ರು ಆಪರೇಷನ್ ಮಾಡ್ತಾ ಇದಾರೆ. ಕೆಲವ್ರು ಆಪರೇಷನ್ ಮಾಡಿಸ್ಕತಾ ಇದಾರೆ. ಕೊನೇಗೆ ಇದು ನಮ್ಮನ್ನ ಎಲ್ಲಿಗೆ ಕರೆದೊಯ್ತದೆ? ಈ ರೆಸಾರ್ಟ್ ರಾಜಕಾರಣದಿಂದ ನಾವೂ ತಲೆ ತಗ್ಗಿಸೋಂಗಾಗಿದೆ. ಸ್ಪೀಕರ್ ನಡೆ ನುಡಿ ನೋಡಿದರೆ ಅವ್ರು ಸಾಕ್ಷಿಪ್ರಜ್ಞೆ ಇಟ್ಟುಕೊಂಡು ಸೂಕ್ತವಾಗಿ ನಿರ್ವಹಿಸಬಹುದು ಅಂತ ಅನ್ನಿಸ್ತು. ಹಾಗಾಗಿ ಅವ್ರಲ್ಲಿ ಪ್ರಾರ್ಥನೆ ಮಾಡ್ಕೊಂಡ್ವಿ. ಅದಕ್ಕಿಂತ ಮುಖ್ಯವಾಗಿ ಸ್ಪೀಕರ್ ಶಾಸಕಾಂಗದ, ಶಾಸಕರ ಕಸ್ಟೋಡಿಯನ್ ಎಂಬ ಭಾವನೆ ಇದೆ. ಈ ಮಾತು ಅನೇಕ ಸಲ ಶಾಸನ ಸಭೆಯ ಚರ್ಚೆಯಲ್ಲೂ ಬಂದಿದೆ. ಅವ್ರು ಪ್ರತ್ಯಕ್ಷವಾಗಿ ಶಾಸಕರ ಕಸ್ಟೋಡಿಯನ್ ಆಗಿರುವುದಾದರೆ, ಪರೋಕ್ಷವಾಗಿ ಆ ಶಾಸಕರನ್ನು ಆರಿಸಿದ ಮತದಾರರ ಆಯ್ಕೆಯ ಹಕ್ಕಿನ ಕಸ್ಟೋಡಿಯನ್ ಸಹಾ ಆಗ್ಬೇಕು. ಆದ್ರಿಂದ ಅವ್ರಿಗೆ ಪತ್ರ ಬರೆದೆವು.

ಪತ್ರಿಕೆ: ಶಾಸಕರಿಗೆ ರಾಜೀನಾಮೆ ನೀಡೋ ಹಕ್ಕೇ ಇಲ್ಲ ಅಂತ ಹೇಳೋಕಾಗುತ್ತಾ?
ದೇ.ಮ: ಖಂಡಿತವಾಗ್ಲೂ ಇಲ್ಲ. ನಾವು ಯಾರಿಗೂ ರಾಜೀನಾಮೆ ಕೊಡೋದು ಬೇಡ ಅಂತ ಹೇಳಲ್ಲ. ಆದರೆ ಆ ಶಾಸಕರು ರಾಜೀನಾಮೆ ಊರ್ಜಿತವಾಗೋ ತನಕವಾದರೂ ಆ ಕಾಲವಧಿಯಲ್ಲಿ ಜನರ ಜೊತೆ ಇರಬೇಕೆಂದು ಕೇಳುವುದು ನ್ಯಾಯ ತಾನೇ? ಅದು ನೈತಿಕವಾಗಿ ಸರಿ ತಾನೇ? ತಮ್ಮದೇ ನಿರ್ಧಾರದ ಬಗ್ಗೆ ಗ್ಯಾರಂಟಿ ಇಲ್ಲದೇ ಬೇರೆ ರಾಜ್ಯದ ರೆಸಾರ್ಟ್‍ನಲ್ಲಿ ಕೂರೋದು ಕೊಡೋ ಸಂದೇಶ ಏನಂದ್ರೆ ಅದ್ರಲ್ಲಿ ಒಂದೋ ಬೇರೆ ಅನೈತಿಕ ಹಿತಾಸಕ್ತಿ ಇದೆ, ಇಲ್ಲವೇ ಯಾರೋ ಇವ್ರನ್ನ ಹಿಡ್ಕೊಂಡು ಕೂರಿಸ್ಕೊಂಡಿದಾರೆ ಅಂತ.

ಪತ್ರಿಕೆ: ಇದನ್ನ ತಡೆಯೋಕೆ ಏನು ಮಾಡಬೇಕು ಅನಿಸುತ್ತೆ ಸಾರ್?
ದೇ.ಮ: ರಾಜೀನಾಮೆ ಕೊಡೋರು ತಮ್ಮ ಮತದಾರರ ಜೊತೆಗೇ ಇರಬೇಕು ಅಂತ ಮಾಡ್ಬೇಕು. ಇಂತಹ ಹೊಸದೊಂದು ಪರಂಪರೆಯನ್ನು ನಮ್ಮ ಸ್ಪೀಕರ್ ರವರು ಹುಟ್ಟು ಹಾಕುತ್ತಾರೆಂಬ ನಂಬಿಕೆ ನಮಗಿದೆ. ಅಂತಹ ಕಾನೂನು ಸಹಾ ಇಲ್ಲ ನಿಜ. ಇವೆಲ್ಲವನ್ನ ಕೇವಲ ಕಾನೂನಿನ ನಿಯಮಗಳ ಪುಸ್ತಕ ಇಟ್ಕೊಂಡೇ ಬದಲಾಯಿಸಕ್ಕೆ ಆಗಲ್ಲ. ಆದ್ರೆ, ಇವತ್ತಿನ ಸಂದರ್ಭದಲ್ಲಿ ರೆಸಾರ್ಟ್ ರಾಜಕಾರಣದಂತಹ ಚೆಂಗಲು, ಎಂಜಲು ಮತ್ತು ಅಹಂನ ಮದದ ರಾಜಕಾರಣಿಗಳಿಗೆ ಮಾನ ಮರ್ಯಾದೆಗೆ ಹೆದರೋ ಥರದ ಒಂದು ತೀರ್ಮಾನ ಸ್ಪೀಕರ್ ಕಡೆಯಿಂದ ಆಗ್ಲೇಬೇಕು ಅಂತ ನನಗೆ ಅನ್ನಿಸುತ್ತೆ.

ಇದನ್ನೂ ಓದಿ: ದೇವನೂರು ಮತ್ತು ದೊರೆಸ್ವಾಮಿಯವರಿಂದ ಸ್ಪೀಕರ್ ರಿಗೆ ದೂರು ಸಲ್ಲಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...