Homeಕರ್ನಾಟಕಇಂದೇ ಸರ್ಕಾರ ಪತನ, ಶಾಸಕರ ಅನರ್ಹತೆ? ಗುರುವಾರದವರೆಗೆ ಜಗ್ಗಲು ಸ್ಪೀಕರ್‍ಗೆ ದೇವೇಗೌಡ ಮನವಿ!

ಇಂದೇ ಸರ್ಕಾರ ಪತನ, ಶಾಸಕರ ಅನರ್ಹತೆ? ಗುರುವಾರದವರೆಗೆ ಜಗ್ಗಲು ಸ್ಪೀಕರ್‍ಗೆ ದೇವೇಗೌಡ ಮನವಿ!

- Advertisement -
- Advertisement -

ಇಂದು ವಿಶ್ವಾಸಮತದ ಪ್ರಕ್ರಿಯೆ ಪೂರ್ಣಗೊಳ್ಳುವ ಎಲ್ಲ ಸಾಧ್ಯತೆಗಳಿದ್ದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಶುಕ್ರವಾರ ಸ್ಪೀಕರ್ ರಮೇಶಕುಮಾರ್ ಸೇರಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸೋಮವಾರ ವಿಶ್ವಾಸಮತವನ್ನು ಮತಕ್ಕೆ ಹಾಕುವ ಪ್ರಕ್ರಿಯೆ ಮುಗಿಯಲಿದೆ ಎಂದಿರುವುದನ್ನು ಗಮನಿಸಬೇಕು.

ಕಾಂಗ್ರೆಸ್ ಪಕ್ಷಕ್ಕೆ ಈಗ ಸದನವನ್ನು ಉನ್ನಷ್ಟು ಮುಂದಕ್ಕೆ ಜಗ್ಗುವ ಯಾವ ಇರಾದೆಯೂ ಉಳಿದುಕೊಂಡಿಲ್ಲ. ಆದರೆ ಜೆಡಿಎಸ್ ಪಾಳೆಯಕ್ಕೆ ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠರು ಹೇಗಾದರೂ ಸದನವನ್ನು ಗುರುವಾರದವರೆಗೆ ನಡೆಯುವ ಹಾಗೆ ಮಾಡಿ, ಅಷ್ಟರಲ್ಲಿ ಹಲವು ಅತೃಪ್ತರ ವಿಶ್ವಾಸವನ್ನು ಗಳಿಸಿ ಸರ್ಕಾರ ಉಳಿಸಿಕೊಳ್ಳುವ ಬಯಕೆ ಇದೆ. ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಪಟ್ಟ ಕೊಟ್ಟಾದರೂ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕು ಎಂಬ ನಿರ್ಧಾರಕ್ಕೆ ಅವರಿಬ್ಬರು ಬಂದಂತಿದೆ.

ಇಂದು ಬರಬಹುದಾದ ಸುಪ್ರಿಂಕೋರ್ಟ್ ತೀರ್ಪು ಅಥವಾ ಸೂಚನೆಯೂ ವಿಶ್ವಾಸಮತ ಇಂದೇ ಆಗಬೇಕೋ ಅಥವಾ ಚರ್ಚೆಗೆ ಅವಕಾಶ ಇನ್ನಷ್ಟು ಸಿಗಬೇಕೋ ಎಂಬುದನ್ನು ನಿರ್ಧರಿಸಲಿದೆ. ಸಿದ್ದರಾಮಯ್ಯ ಎತ್ತಿರುವ ಕ್ರಿಯಾಲೋಪದ ಕುರಿತು ಇಂದು ಸ್ಪೀಕರ್ ಪಾಯಿಂಟ್ ಆಫ್ ಆರ್ಡರ್ ನೀಡಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕನಾಗಿ ತಮ್ಮ ಪಕ್ಷದ ಶಾಸಕರಿಗೆ ವಿಪ್ ನೀಡುವ ತಮ್ಮ ಹಕ್ಕಿಗೆ ಕಳೆದ ವಾರದ ಸುಪ್ರಿಂಕೋರ್ಟ್ ಆದೇಶ ಧಕ್ಕೆ ತಂದಿದೆ ಎಂದು ಗುರುವಾರವೇ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ್ದರು.

ಇನ್ನೊಂದು ಬೆಳವಣಿಗೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಸ್ಪೀಕರ್ ರಮೇಶಕುಮಾರ್ ಅವರಿಗೆ ಗುರುವಾರದವರೆಗೆ ಗ್ರಹಗತಿ ಸರಿಯಿಲ್ಲ, ಅಲ್ಲಿವರೆಗೆ ವಿಶ್ವಾಸಮತ ಮುಂದಕ್ಕೆ ಹೋಗುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸ್ಪೀಕರ್ ಒಪ್ಪಿಲ್ಲವೆಂಬ ಮಾತೂ ಕೇಳಿ ಬರುತ್ತಿದೆ. ಇಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಬೇಕು ಎಂದು ಇಬ್ಬರು ಪಕ್ಷೇತರ ಶಾಸಕರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದೇ ನಡೆದು ಸುಪ್ರೀಂ ಕೋರ್ಟ್ ಕೂಡ ಇಂದೇ ವಿಶ್ವಾಸಮತ ಮುಗಿಯಲಿ ಎಂದು ಸೂಚಿಸಲೂಬಹುದು.

ಈ ಎಲ್ಲ ಕಾರಣಗಳಿಂದಾಗಿ ಇಂದು ವಿಶ್ವಾಸಮತವನ್ನು ಮತಕ್ಕೆ ಹಾಕುವ ಪ್ರಕ್ರಿಯೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಬಹುಮತ ಇಲ್ಲದ ಕುಮಾರಸ್ವಾಮಿ ನೇತೃತ್ವದ 14 ತಿಂಗಳ ಸರ್ಕಾರ ಪತನವಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಗೆಯೇ ಮುಂಬೈ ಸೇರಿರುವ ಅತೃಪ್ತ ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸುವ ಪ್ರಕ್ರಿಯೆಯೂ ಇಂದು ಅಥವಾ ನಾಳೆ ಜರುಗುವುದು ಪಕ್ಕಾ ಆಗಿದೆ. ವಿಪ್ ಮಾರ್ಗದ ಮೂಲಕ, ಅದಾಗದಿದ್ದರೆ ಏನೆಲ್ಲ ಸಾಧ್ಯವೋ ಆ ಮಾರ್ಗ ಬಳಸಿ ಅವರನ್ನೆಲ್ಲ ಅನರ್ಹಗೊಳಿಸಲು ಕಾಯಲಾಗುತ್ತಿದೆ.

ಸದ್ಯ 14 ತಿಂಗಳಿಂದ ಪ್ರತಿಕ್ಷಣವೂ ಮುಖ್ಯಮಂತ್ರಿ ಆಗುವ ಕನಸಿನಲ್ಲೇ ಬಾಳುತ್ತಿರುವ ಯಡಿಯೂರಪ್ಪನವರ ಇಷ್ಟಾರ್ಥ ಕೂಡಿಬರುವ ದಿನ ಹತ್ತಿರದಲ್ಲಿದೆ ಇದ್ದಂತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...