Homeಮುಖಪುಟಅಜೇಯ ಎನ್ನುವ ಇಮೇಜ್ ಶಿಥಿಲವಾಗುತ್ತಿದೆ; ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ ಈಗ..

ಅಜೇಯ ಎನ್ನುವ ಇಮೇಜ್ ಶಿಥಿಲವಾಗುತ್ತಿದೆ; ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ ಈಗ..

- Advertisement -
- Advertisement -

ನರೇಂದ್ರ ಮೋದಿಯವರ ಆಡಳಿತವನ್ನು ಎರಡು ವರ್ಷ national public broadcasterನ ಮುಖ್ಯಸ್ಥನಾಗಿ ಹತ್ತಿರದಿಂದ ನೋಡುವ ಅವಕಾಶ ನನಗೆ ಬಂದಿತ್ತು.  ಇನ್ನು ಸಾಧ್ಯವೇ ಇಲ್ಲ ಅನ್ನಿಸಿ ರಾಜೀನಾಮೆ ಕೊಟ್ಟೆ. ಇಡೀ ಆಡಳಿತ ಯಂತ್ರವೇ ಶಿಥಿಲವಾಗಿ ಕುಸಿದು ಈಗ ಕಾಣುತ್ತಿರುವಂಥಾ ವಿಪತ್ತಿಗೆ ಆಹ್ವಾನ ನೀಡುವ ಪರಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ.

ಪರಿಕಲ್ಪನೆಯ ಮಟ್ಟದಲ್ಲಿ ವ್ಯಕ್ತಿಗತ ನಿರ್ವಹಣೆಯ ಮೊಹರುಳ್ಳ ಅಮೆರಿಕ ಅಧ್ಯಕ್ಷೀಯ ಮಾದರಿಯನ್ನು ಬ್ರಿಟಿಶ್‌ ಮಾದರಿ ಇರುವ ನಮ್ಮಲ್ಲಿ  ಹೇರಲಾಯಿತು. ಅಗಾಧ ವೈವಿಧ್ಯತೆಯುಳ್ಳ ಈ ದೇಶವನ್ನು ಫೆಡರಲ್‌ ಸಮತೋಲನದ ಮೂಲಕವಷ್ಟೇ ನಿರ್ವಹಿಸಬಹುದು ಎಂಬುದನ್ನು ಅರಿಯಲು ಬಹಳ ಐಕ್ಯೂ ಬೇಡ. ಅದು ಬಿಟ್ಟು ಏಕವ್ಯಕ್ತಿ ಶೈಲಿಯನ್ನು ಹೇರಿದರೆ ಅಧಿಕಾರ-ಜವಾಬ್ದಾರಿಯ ಉತ್ತರದಾಯಿತ್ವದ ಮಾದರಿ ಕುಸಿದು ಬೀಳುತ್ತದೆ.

ಪೇಲವ ಸರಕಾರ ಕಂಡು ಬೇಜಾರಾಗಿದ್ದ ಜನರು  ನಿರ್ಧಾರ ತೆಗೆದುಕೊಳ್ಳುವ ನಾಯಕತ್ವ ಕಂಡು ಉತ್ಸಾಹ ಪಟ್ಟಿದ್ದಾದ ಬಳಿಕ ಇನ್ನೊಂದು ವಾಸ್ತವ ತಲೆ ಎತ್ತಿತು. ಮೋದಿ ತಾವು ಸಂಶಯಿಸುವ ಎಲ್ಲಾ ಅಧಿಕಾರವನ್ನೂ ಕೇಂದ್ರೀಕರಿಸುವ ಮತ್ತು ಬೇಷರತ್ತು ವಿಧೇಯತೆಯನ್ನು ಬೇಡುವ ಪ್ರವೃತ್ತಿಯನ್ನು  ತ್ಯಜಿಸಿಯಾರು ಎಂಬ ಆಶಾ ಭಾವನೆಯಲ್ಲಿ ಹಿರಿಯ ಅಧಿಕಾರಿಗಳಿದ್ದರು. ಅಂತರ್‌ ಸಚಿವಾಲಯಗಳ ಕ್ಯಾತೆ ಜಗಳಕ್ಕೆ ಅವರು ಅಂತ್ಯ ಹಾಡಿದರೂ ಮೂಲ ಪ್ರವೃತ್ತಿಗಳೇನೂ ಬದಲಾಗಲಿಲ್ಲ. ಯಾವುದೇ ಮಾಹಿತಿಯನ್ನು ಸಾದರಪಡಿಸಲು ಅವರು ಕಾರ್ಯದರ್ಶಿಗಳನ್ನು ಕರೆಸುವ ತೀವ್ರತೆ ತೀರಾ ವಿಚಿತ್ರವಾಗಿತ್ತು. ಯಾವ ಪ್ರಧಾನಿಯೂ ಈ ರೀತಿಯ ಮೈಕ್ರೋ ಮ್ಯಾನೇಜ್‌ ಮೆಂಟ್‌ ಮಾಡಿರಲಿಲ್ಲ.

ತನ್ನ ಸಚಿವರನ್ನು ನಿರ್ಲಕ್ಷಿಸಿ ಎಲ್ಲವನ್ನೂ ನಿಯಂತ್ರಿಸುವ ಅವರ ಚಟ ಜಾಹೀರಾಗಿತ್ತು. ಸದಾ ಕೆಕ್ಕರಗಣ್ಣಿಂದ ತನ್ನ ಕಾರ್ಯದರ್ಶಿಗಳನ್ನು ನೋಡುವ ಪರಿಪಾಠದಿಂದಾಗಿ ಅಧಿಕಾರಿಗಳು ಭೀತರಾಗತೊಡಗಿದರು. ಇದರೊಂದಿಗೇ ತನ್ನ ಪ್ರಿಯ ಅಧಿಕಾರಿಗಳ ಮೂಲಕ ಆಡಳಿತ ನಿರ್ವಹಿಸತೊಡಗಿದರು. ಇದು ಇತರ ದಕ್ಷ ಪ್ರತಿಭಾವಂತ  ಅಧಿಕಾರಿಗಳ ಮನೋಬಲವನ್ನೇ ಕುಗ್ಗಿಸಿತು. ಇಂಥಾ ಅಧಿಕಾರಿಗಳು ತೆವಳಿ ಹತ್ತಿರವಾಗುವ ಕೆಲಸ ಮಾಡಲಿಲ್ಲ. ಮಿಂಚಿನ ವರ್ಗಾವಣೆಗಳು ನಿತ್ಯದ ಸಂಗತಿಗಳಾದವು. ಪ್ರಧಾನ ಮಂತ್ರಿಗಳ ಕಾರ್ಯಾಲಯವು ಎಲ್ಲಾ ನೇಮಕಾತಿಗಳ ನಿಯಂತ್ರಣ ಹೊಂದಿತ್ತು. ಆರೆಸ್ಸೆಸ್ಸಿನಿಂದ ಮಾಹಿತಿ ಪಡೆದರೂ ರಾಷ್ಟ್ರೀಯ ಭದ್ರತಾ ಸಂಸ್ಥೆಯ  ಮುಖ್ಯಸ್ಥರೇ ಹೆಚ್ಚು ಪ್ರಭಾವಿಯಾದರು. ಎಷ್ಟೋ ಸಂಸ್ಥೆಗಳು  ವರ್ಷಗಟ್ಟಲೆ ನೇಮಕಾತಿ ಇಲ್ಲದೇ  ಒದ್ದಾಡಿದವು. ಅಧಿಕಾರಿಗಳು, ಉದ್ಯಮಪತಿಗಳು ನಕಲಿ ವಿಧೇಯತೆ ಕಲಿತರು. ಸಂಘಿಗಳಿಗೆ ಹತ್ತಿರವಾಗುವುದನ್ನೂ ಕಲಿತರು.

ಆದರೆ ಯಾವ ಸರಕಾರಕ್ಕೂ ತನ್ನ ಆಯ್ಕೆಯ ಬೆರಳೆಣಿಕೆಯ ಮಂದಿಯ ಮೂಲಕ ಆಡಳಿತ ನಡೆಸುವುದು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು  ಭಯಭೀತರಾಗಿ ತಮ್ಮ ಜೀವಮಾನದ ಅನುಭವಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದರು. ದಕ್ಷ ಸಚಿವರನ್ನು ತಿರಸ್ಕಾರದಿಂದ ನೋಡುವ ಪರಿಪಾಠ ಆರಂಭವಾಯಿತು. ಪರಿಣಾಮವಾಗಿ  ಭಾರತದ ಮಟ್ಟ ಅಂತಾರಾಷ್ಟ್ರೀಯವಾಗಿ ಎಲ್ಲಾ ಮಾನದಂಡಗಳಲ್ಲೂ ಕುಸಿಯಲಾರಂಭಿಸಿತು. ಅಂಕಿ-ಸಂಖ್ಯೆಗಳನ್ನು ತಿರುಚುವುದು ಶುರುವಾಯಿತು. ಅಧಿಕಾರಿಗಳಿಗೆ ತಿರುಳಿನ ಬದಲು ಪ್ರದರ್ಶನವೇ ಮುಖ್ಯ ಎಂದು ಗೊತ್ತಾಯಿತು!

ಅಸ್ತಿತ್ವದಲ್ಲಿದ್ದ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು  ಪ್ರಧಾನ ಮಂತ್ರಿ ಯೋಜನೆ ಎಂದು ಪುನರ್‍ನಾಮಕರಣಗೊಳಿಸಲಾಯಿತು. ದುಬಾರಿ ಜಾಹೀರಾತು ಮಂದಿ ಗಮನ ಸೆಳೆಯುವ ಸಂಕ್ಷಿಪ್ತಾಕ್ಷರಗಳ ಹೆಸರು ನೀಡಿದರು. ಪ್ರಧಾನಿಯೂ ಈ ರೀತಿಯ ಅಕ್ಷರಗಳ ಜೊತೆ ಆಟವಾಡುವುದನ್ನು ಇಷ್ಟಪಟ್ಟರು. ಕೆಲಸವಾಗಲಿಲ್ಲವೆಂದಲ್ಲ. ಆದರೆ ಕಹಿಸತ್ಯವನ್ನು ವರದಿಮಾಡುವುದು ಆತ್ಮಹತ್ಯಾಕಾರಿಯಾಗಿತ್ತು. ನೋಟು ಅಮಾನ್ಯದಂಥಾ ನಿರ್ಧಾರಗಳನ್ನು ಗುಪ್ತವಾಗಿ ನಿರ್ಧರಿಸಿದ್ದಾಯಿತು. ಇದಕ್ಕೆ ಯಾರೂ ತಯಾರಿರಲಿಲ್ಲ. ಯಾವ ಚರ್ಚೆಯೂ ನಡೆದಿರಲಿಲ್ಲ. ನಾಯಕನೋ ನಾಟಕೀಯ ಘೋಷಣೆಗಳ ಮೂಲಕ ದೇಶವನ್ನು ಸ್ತಂಭೀಭೂತಗೊಳಿಸುವ ಖಯಾಲಿಗೆ ಬಿದ್ದಿದ್ದು ಸ್ಪಷ್ಟವಿತ್ತು.

ಆದ್ದರಿಂದಲೇ ಕಳೆದ ವರ್ಷ ಕೋವಿಡ್ ಸ್ಫೋಟವಾದಾಗ ಇವೆಂಟ್‌ ಮ್ಯಾನೆಜ್‌ ಮೆಂಟ್‌ ಮತ್ತು ಇಮೇಜ್‌ ವರ್ಧನೆ ಮೊದಲ ಆದ್ಯತೆಯಾಗಿತ್ತು. ತಜ್ಞರ ಸಲಹೆ, ಉಳಿದವರ ಅನುಭವ ಪಡೆಯುವುದು, ಪ್ಲಾನಿಂಗ್‌, ಅಗತ್ಯ ವಸ್ತುಗಳ ವ್ಯವಸ್ಥೆಗಳೆಲ್ಲಾ ಅಮುಖ್ಯವೆನಿಸಿತು. ವಿಪರೀತ ಅಧಿಕಾರ ಕೇಂದ್ರೀಕರಣದಿಂದಾಗಿ ಮಾಸ್ಕ್‌ , ಪಿಪಿಇ ಕಿಟ್‌ ಉತ್ಪಾದನೆಯೂ ಪ್ರಧಾನಿಯೇ ನಿರ್ಧರಿಸುವಂತಾಯಿತು. ಕೋವಿಡ್‌ ಪ್ರಕರಣಗಳು ತೀರಾ ಕಡಿಮೆ ಇದ್ದಾಗ  ನಾಟಕೀಯವಾಗಿ ದಿಢೀರನೆ ಲಾಕ್‌ ಡೌನ್ ಹೇರಿದ್ದು ಅನಗತ್ಯವಾಗಿತ್ತು. ಆದರೆ ಅದು ಅಧಿಕಾರದ  ಮಟ್ಟವನ್ನು ತೋರಿಸಿಕೊಟ್ಟಿತ್ತು.

ಆಗಲೇ ಬಾಗಿದ್ದ ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಇದು ಮುರಿಯಿತು. ಗೃಹ ಮಂತ್ರಿ ಮೋದಿಯ ಅತ್ಯಂತ ನಂಬಿಕಸ್ಥ ಬಂಟ ಆಗಿದ್ದರೂ ಅವರ ಸಾಮರ್ಥ್ಯಕ್ಕೆ ಮೀರಿದ ನಿರ್ಧಾರಗಳನ್ನೂ ಗೃಹ ಸಚಿವಾಲಯವೇ ತೆಗೆದುಕೊಂಡಿತು. ಆರೋಗ್ಯ ಸಚಿವಾಲಯ ಅಲ್ಲ! ಯಾವುದೇ ಸಮಾಲೋಚನೆ ಇಲ್ಲದೇ ರೆಗ್ಯುಲರ್‌ ಆಗಿ ಫರ್ಮಾನುಗಳನ್ನು ಹೊರಡಿಸಲಾಯಿತು. ಪರಿಹಾರ ಕಾರ್ಯ ಎಂಬುದು ಭಾರತದ ಆಡಳಿತದ ಅವಿಭಾಜ್ಯ ಅಂಗ.  ಆದರೆ ಈ  ಇಬ್ಬರು ನಾಯಕರು ಸ್ಮಶಾನ ಮೌನ ವಹಿಸಿದ ಕಾರಣ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಯಾವ ಪರಿಹಾರವೂ ಸರಿಯಾಗಿ ದೊರಕಲಿಲ್ಲ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕೊರೊನಾ ಔಷಧಿಯ ತುರ್ತು ಬಳಕೆಗೆ ಅನುಮೋದಿಸಿದ ಡಿಸಿಜಿಐ! | NaanuGauri

ವಿವೇಕವಿರುವ ಎಲ್ಲಾ ದೇಶಗಳೂ ಲಸಿಕೆ ಮತ್ತು ಆಮ್ಲಜನಕದ ಅಗತ್ಯವನ್ನು ಲೆಕ್ಕ ಹಾಕಿ ಅದರ ಉತ್ಪಾದನೆ, ಆಮದು, ಹಂಚಿಕೆ  ಕುರಿತ ಎಲ್ಲವನ್ನೂ ಹಲವಾರು ತಿಂಗಳ ಮೊದಲೇ ಯೋಜನೆ ಸಿದ್ಧಪಡಿಸಿಕೊಂಡಿದ್ದವು.  ಆದರೆ ನಮ್ಮ ಸರಕಾರ ಬೆಲೆ ನಿಗದಿ, ಪೂರೈಕೆ, ಅಂತಾರಾಷ್ಟ್ರೀಯ  ಜವಾಬ್ದಾರಿ ಇತ್ಯಾದಿ  ಬಗ್ಗೆ ಈಗ್ಗೆ ಒಂದೆರಡು ತಿಂಗಳ ಹಿಂದೆ ಎಚ್ಚರವಾಗಿದ್ದು. ಬೇಡಿಕೆ-ಪೂರೈಕೆಯಂಥಾ ಸರಳ ಲೆಕ್ಕಾಚಾರವೂ ಅರ್ಥವಾಗದ ಸ್ಥಿತಿಯಲ್ಲಿ ಆಡಳಿತವಿತ್ತು.  ತಜ್ಞರ ಸಲಹೆಗಳಿಗೆ ಕಡಿಮೆ ಆದ್ಯತೆ ನೀಡಲಾಯಿತು. ಭಾರತ ಕೋವಿಡ್‌ ಯುದ್ಧ ಗೆದ್ದಿದೆ, ಇದೀಗ ಭಾರತ  ಜಗತ್ತಿನ ಫಾರ್ಮಸಿಯಾಗಿದೆ ಎಂದು ಬೀಗಿದರು.

ಅಮೂಲ್ಯ ಲಸಿಕೆ ಮತ್ತು ಆಕ್ಸಿಜನ್‍ಅನ್ನು ರಫ್ತು ಮಾಡಲಾಯಿತು. ಕೊನೆಗೆ ಕೋಟಿಗಟ್ಟಲೆ ಮಂದಿ ಭಾಗವಹಿಸಲು ಬಿಟ್ಟ ಕುಂಭ ಮೇಳವೇ ದೇವರ ಆಗ್ರಹಕ್ಕೆ ಕಾರಣವಾಯಿತು. ಎರಡನೇ ಅಲೆ ನಮ್ಮನ್ನು ಅಪ್ಪಳಿಸಲು ಕಾಯುತ್ತಿದ್ದರೆ ಮೋದಿ ಮತ್ತು ಶಾ ಇದಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸಲು ಸಾಧ್ಯವೇ ಇಲ್ಲದಂತೆ ಚುನಾವಣಾ ರ್ಯಾಲಿಗಳಲ್ಲಿ ಬಿಜಿಯಾಗಿದ್ದರು. ಕಪಿಮುಷ್ಠಿಯ ಕೇಂದ್ರೀಕೃತ ಸರಕಾರ ಕುಸಿಯಿತು. ಜವಾಬ್ದಾರಿ ಹೊರಬೇಕಾದವರು ತಲೆ ತಪ್ಪಿಸಿಕೊಂಡರು. ಅಭೂತಪೂರ್ವ ಅರಾಜಕತೆ ತಾಂಡವವಾಡುತ್ತಿದೆ.  ಸಾವು ಮತ್ತು ದುರಂತದ ಚಿತ್ರಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ಮೋದಿಯನ್ನು ಹುರಿದು ಮುಕ್ಕುತ್ತಿವೆ.

ಅಜೇಯ ಎನ್ನುವ ಇಮೇಜ್‌ ಶಿಥಿಲವಾಗುತ್ತಿದೆ. ಆದರೆ ಈಗ ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ.

  • ಜವಹರ್‌ ಸರಕಾರ್

‌ ಸಂಸ್ಕೃತಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮತ್ತು ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ

(ಕನ್ನಡಕ್ಕೆ): ಕೆ ಪಿ ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...