Homeಮುಖಪುಟಅಜೇಯ ಎನ್ನುವ ಇಮೇಜ್ ಶಿಥಿಲವಾಗುತ್ತಿದೆ; ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ ಈಗ..

ಅಜೇಯ ಎನ್ನುವ ಇಮೇಜ್ ಶಿಥಿಲವಾಗುತ್ತಿದೆ; ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ ಈಗ..

- Advertisement -
- Advertisement -

ನರೇಂದ್ರ ಮೋದಿಯವರ ಆಡಳಿತವನ್ನು ಎರಡು ವರ್ಷ national public broadcasterನ ಮುಖ್ಯಸ್ಥನಾಗಿ ಹತ್ತಿರದಿಂದ ನೋಡುವ ಅವಕಾಶ ನನಗೆ ಬಂದಿತ್ತು.  ಇನ್ನು ಸಾಧ್ಯವೇ ಇಲ್ಲ ಅನ್ನಿಸಿ ರಾಜೀನಾಮೆ ಕೊಟ್ಟೆ. ಇಡೀ ಆಡಳಿತ ಯಂತ್ರವೇ ಶಿಥಿಲವಾಗಿ ಕುಸಿದು ಈಗ ಕಾಣುತ್ತಿರುವಂಥಾ ವಿಪತ್ತಿಗೆ ಆಹ್ವಾನ ನೀಡುವ ಪರಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ.

ಪರಿಕಲ್ಪನೆಯ ಮಟ್ಟದಲ್ಲಿ ವ್ಯಕ್ತಿಗತ ನಿರ್ವಹಣೆಯ ಮೊಹರುಳ್ಳ ಅಮೆರಿಕ ಅಧ್ಯಕ್ಷೀಯ ಮಾದರಿಯನ್ನು ಬ್ರಿಟಿಶ್‌ ಮಾದರಿ ಇರುವ ನಮ್ಮಲ್ಲಿ  ಹೇರಲಾಯಿತು. ಅಗಾಧ ವೈವಿಧ್ಯತೆಯುಳ್ಳ ಈ ದೇಶವನ್ನು ಫೆಡರಲ್‌ ಸಮತೋಲನದ ಮೂಲಕವಷ್ಟೇ ನಿರ್ವಹಿಸಬಹುದು ಎಂಬುದನ್ನು ಅರಿಯಲು ಬಹಳ ಐಕ್ಯೂ ಬೇಡ. ಅದು ಬಿಟ್ಟು ಏಕವ್ಯಕ್ತಿ ಶೈಲಿಯನ್ನು ಹೇರಿದರೆ ಅಧಿಕಾರ-ಜವಾಬ್ದಾರಿಯ ಉತ್ತರದಾಯಿತ್ವದ ಮಾದರಿ ಕುಸಿದು ಬೀಳುತ್ತದೆ.

ಪೇಲವ ಸರಕಾರ ಕಂಡು ಬೇಜಾರಾಗಿದ್ದ ಜನರು  ನಿರ್ಧಾರ ತೆಗೆದುಕೊಳ್ಳುವ ನಾಯಕತ್ವ ಕಂಡು ಉತ್ಸಾಹ ಪಟ್ಟಿದ್ದಾದ ಬಳಿಕ ಇನ್ನೊಂದು ವಾಸ್ತವ ತಲೆ ಎತ್ತಿತು. ಮೋದಿ ತಾವು ಸಂಶಯಿಸುವ ಎಲ್ಲಾ ಅಧಿಕಾರವನ್ನೂ ಕೇಂದ್ರೀಕರಿಸುವ ಮತ್ತು ಬೇಷರತ್ತು ವಿಧೇಯತೆಯನ್ನು ಬೇಡುವ ಪ್ರವೃತ್ತಿಯನ್ನು  ತ್ಯಜಿಸಿಯಾರು ಎಂಬ ಆಶಾ ಭಾವನೆಯಲ್ಲಿ ಹಿರಿಯ ಅಧಿಕಾರಿಗಳಿದ್ದರು. ಅಂತರ್‌ ಸಚಿವಾಲಯಗಳ ಕ್ಯಾತೆ ಜಗಳಕ್ಕೆ ಅವರು ಅಂತ್ಯ ಹಾಡಿದರೂ ಮೂಲ ಪ್ರವೃತ್ತಿಗಳೇನೂ ಬದಲಾಗಲಿಲ್ಲ. ಯಾವುದೇ ಮಾಹಿತಿಯನ್ನು ಸಾದರಪಡಿಸಲು ಅವರು ಕಾರ್ಯದರ್ಶಿಗಳನ್ನು ಕರೆಸುವ ತೀವ್ರತೆ ತೀರಾ ವಿಚಿತ್ರವಾಗಿತ್ತು. ಯಾವ ಪ್ರಧಾನಿಯೂ ಈ ರೀತಿಯ ಮೈಕ್ರೋ ಮ್ಯಾನೇಜ್‌ ಮೆಂಟ್‌ ಮಾಡಿರಲಿಲ್ಲ.

ತನ್ನ ಸಚಿವರನ್ನು ನಿರ್ಲಕ್ಷಿಸಿ ಎಲ್ಲವನ್ನೂ ನಿಯಂತ್ರಿಸುವ ಅವರ ಚಟ ಜಾಹೀರಾಗಿತ್ತು. ಸದಾ ಕೆಕ್ಕರಗಣ್ಣಿಂದ ತನ್ನ ಕಾರ್ಯದರ್ಶಿಗಳನ್ನು ನೋಡುವ ಪರಿಪಾಠದಿಂದಾಗಿ ಅಧಿಕಾರಿಗಳು ಭೀತರಾಗತೊಡಗಿದರು. ಇದರೊಂದಿಗೇ ತನ್ನ ಪ್ರಿಯ ಅಧಿಕಾರಿಗಳ ಮೂಲಕ ಆಡಳಿತ ನಿರ್ವಹಿಸತೊಡಗಿದರು. ಇದು ಇತರ ದಕ್ಷ ಪ್ರತಿಭಾವಂತ  ಅಧಿಕಾರಿಗಳ ಮನೋಬಲವನ್ನೇ ಕುಗ್ಗಿಸಿತು. ಇಂಥಾ ಅಧಿಕಾರಿಗಳು ತೆವಳಿ ಹತ್ತಿರವಾಗುವ ಕೆಲಸ ಮಾಡಲಿಲ್ಲ. ಮಿಂಚಿನ ವರ್ಗಾವಣೆಗಳು ನಿತ್ಯದ ಸಂಗತಿಗಳಾದವು. ಪ್ರಧಾನ ಮಂತ್ರಿಗಳ ಕಾರ್ಯಾಲಯವು ಎಲ್ಲಾ ನೇಮಕಾತಿಗಳ ನಿಯಂತ್ರಣ ಹೊಂದಿತ್ತು. ಆರೆಸ್ಸೆಸ್ಸಿನಿಂದ ಮಾಹಿತಿ ಪಡೆದರೂ ರಾಷ್ಟ್ರೀಯ ಭದ್ರತಾ ಸಂಸ್ಥೆಯ  ಮುಖ್ಯಸ್ಥರೇ ಹೆಚ್ಚು ಪ್ರಭಾವಿಯಾದರು. ಎಷ್ಟೋ ಸಂಸ್ಥೆಗಳು  ವರ್ಷಗಟ್ಟಲೆ ನೇಮಕಾತಿ ಇಲ್ಲದೇ  ಒದ್ದಾಡಿದವು. ಅಧಿಕಾರಿಗಳು, ಉದ್ಯಮಪತಿಗಳು ನಕಲಿ ವಿಧೇಯತೆ ಕಲಿತರು. ಸಂಘಿಗಳಿಗೆ ಹತ್ತಿರವಾಗುವುದನ್ನೂ ಕಲಿತರು.

ಆದರೆ ಯಾವ ಸರಕಾರಕ್ಕೂ ತನ್ನ ಆಯ್ಕೆಯ ಬೆರಳೆಣಿಕೆಯ ಮಂದಿಯ ಮೂಲಕ ಆಡಳಿತ ನಡೆಸುವುದು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು  ಭಯಭೀತರಾಗಿ ತಮ್ಮ ಜೀವಮಾನದ ಅನುಭವಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದರು. ದಕ್ಷ ಸಚಿವರನ್ನು ತಿರಸ್ಕಾರದಿಂದ ನೋಡುವ ಪರಿಪಾಠ ಆರಂಭವಾಯಿತು. ಪರಿಣಾಮವಾಗಿ  ಭಾರತದ ಮಟ್ಟ ಅಂತಾರಾಷ್ಟ್ರೀಯವಾಗಿ ಎಲ್ಲಾ ಮಾನದಂಡಗಳಲ್ಲೂ ಕುಸಿಯಲಾರಂಭಿಸಿತು. ಅಂಕಿ-ಸಂಖ್ಯೆಗಳನ್ನು ತಿರುಚುವುದು ಶುರುವಾಯಿತು. ಅಧಿಕಾರಿಗಳಿಗೆ ತಿರುಳಿನ ಬದಲು ಪ್ರದರ್ಶನವೇ ಮುಖ್ಯ ಎಂದು ಗೊತ್ತಾಯಿತು!

ಅಸ್ತಿತ್ವದಲ್ಲಿದ್ದ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು  ಪ್ರಧಾನ ಮಂತ್ರಿ ಯೋಜನೆ ಎಂದು ಪುನರ್‍ನಾಮಕರಣಗೊಳಿಸಲಾಯಿತು. ದುಬಾರಿ ಜಾಹೀರಾತು ಮಂದಿ ಗಮನ ಸೆಳೆಯುವ ಸಂಕ್ಷಿಪ್ತಾಕ್ಷರಗಳ ಹೆಸರು ನೀಡಿದರು. ಪ್ರಧಾನಿಯೂ ಈ ರೀತಿಯ ಅಕ್ಷರಗಳ ಜೊತೆ ಆಟವಾಡುವುದನ್ನು ಇಷ್ಟಪಟ್ಟರು. ಕೆಲಸವಾಗಲಿಲ್ಲವೆಂದಲ್ಲ. ಆದರೆ ಕಹಿಸತ್ಯವನ್ನು ವರದಿಮಾಡುವುದು ಆತ್ಮಹತ್ಯಾಕಾರಿಯಾಗಿತ್ತು. ನೋಟು ಅಮಾನ್ಯದಂಥಾ ನಿರ್ಧಾರಗಳನ್ನು ಗುಪ್ತವಾಗಿ ನಿರ್ಧರಿಸಿದ್ದಾಯಿತು. ಇದಕ್ಕೆ ಯಾರೂ ತಯಾರಿರಲಿಲ್ಲ. ಯಾವ ಚರ್ಚೆಯೂ ನಡೆದಿರಲಿಲ್ಲ. ನಾಯಕನೋ ನಾಟಕೀಯ ಘೋಷಣೆಗಳ ಮೂಲಕ ದೇಶವನ್ನು ಸ್ತಂಭೀಭೂತಗೊಳಿಸುವ ಖಯಾಲಿಗೆ ಬಿದ್ದಿದ್ದು ಸ್ಪಷ್ಟವಿತ್ತು.

ಆದ್ದರಿಂದಲೇ ಕಳೆದ ವರ್ಷ ಕೋವಿಡ್ ಸ್ಫೋಟವಾದಾಗ ಇವೆಂಟ್‌ ಮ್ಯಾನೆಜ್‌ ಮೆಂಟ್‌ ಮತ್ತು ಇಮೇಜ್‌ ವರ್ಧನೆ ಮೊದಲ ಆದ್ಯತೆಯಾಗಿತ್ತು. ತಜ್ಞರ ಸಲಹೆ, ಉಳಿದವರ ಅನುಭವ ಪಡೆಯುವುದು, ಪ್ಲಾನಿಂಗ್‌, ಅಗತ್ಯ ವಸ್ತುಗಳ ವ್ಯವಸ್ಥೆಗಳೆಲ್ಲಾ ಅಮುಖ್ಯವೆನಿಸಿತು. ವಿಪರೀತ ಅಧಿಕಾರ ಕೇಂದ್ರೀಕರಣದಿಂದಾಗಿ ಮಾಸ್ಕ್‌ , ಪಿಪಿಇ ಕಿಟ್‌ ಉತ್ಪಾದನೆಯೂ ಪ್ರಧಾನಿಯೇ ನಿರ್ಧರಿಸುವಂತಾಯಿತು. ಕೋವಿಡ್‌ ಪ್ರಕರಣಗಳು ತೀರಾ ಕಡಿಮೆ ಇದ್ದಾಗ  ನಾಟಕೀಯವಾಗಿ ದಿಢೀರನೆ ಲಾಕ್‌ ಡೌನ್ ಹೇರಿದ್ದು ಅನಗತ್ಯವಾಗಿತ್ತು. ಆದರೆ ಅದು ಅಧಿಕಾರದ  ಮಟ್ಟವನ್ನು ತೋರಿಸಿಕೊಟ್ಟಿತ್ತು.

ಆಗಲೇ ಬಾಗಿದ್ದ ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಇದು ಮುರಿಯಿತು. ಗೃಹ ಮಂತ್ರಿ ಮೋದಿಯ ಅತ್ಯಂತ ನಂಬಿಕಸ್ಥ ಬಂಟ ಆಗಿದ್ದರೂ ಅವರ ಸಾಮರ್ಥ್ಯಕ್ಕೆ ಮೀರಿದ ನಿರ್ಧಾರಗಳನ್ನೂ ಗೃಹ ಸಚಿವಾಲಯವೇ ತೆಗೆದುಕೊಂಡಿತು. ಆರೋಗ್ಯ ಸಚಿವಾಲಯ ಅಲ್ಲ! ಯಾವುದೇ ಸಮಾಲೋಚನೆ ಇಲ್ಲದೇ ರೆಗ್ಯುಲರ್‌ ಆಗಿ ಫರ್ಮಾನುಗಳನ್ನು ಹೊರಡಿಸಲಾಯಿತು. ಪರಿಹಾರ ಕಾರ್ಯ ಎಂಬುದು ಭಾರತದ ಆಡಳಿತದ ಅವಿಭಾಜ್ಯ ಅಂಗ.  ಆದರೆ ಈ  ಇಬ್ಬರು ನಾಯಕರು ಸ್ಮಶಾನ ಮೌನ ವಹಿಸಿದ ಕಾರಣ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಯಾವ ಪರಿಹಾರವೂ ಸರಿಯಾಗಿ ದೊರಕಲಿಲ್ಲ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕೊರೊನಾ ಔಷಧಿಯ ತುರ್ತು ಬಳಕೆಗೆ ಅನುಮೋದಿಸಿದ ಡಿಸಿಜಿಐ! | NaanuGauri

ವಿವೇಕವಿರುವ ಎಲ್ಲಾ ದೇಶಗಳೂ ಲಸಿಕೆ ಮತ್ತು ಆಮ್ಲಜನಕದ ಅಗತ್ಯವನ್ನು ಲೆಕ್ಕ ಹಾಕಿ ಅದರ ಉತ್ಪಾದನೆ, ಆಮದು, ಹಂಚಿಕೆ  ಕುರಿತ ಎಲ್ಲವನ್ನೂ ಹಲವಾರು ತಿಂಗಳ ಮೊದಲೇ ಯೋಜನೆ ಸಿದ್ಧಪಡಿಸಿಕೊಂಡಿದ್ದವು.  ಆದರೆ ನಮ್ಮ ಸರಕಾರ ಬೆಲೆ ನಿಗದಿ, ಪೂರೈಕೆ, ಅಂತಾರಾಷ್ಟ್ರೀಯ  ಜವಾಬ್ದಾರಿ ಇತ್ಯಾದಿ  ಬಗ್ಗೆ ಈಗ್ಗೆ ಒಂದೆರಡು ತಿಂಗಳ ಹಿಂದೆ ಎಚ್ಚರವಾಗಿದ್ದು. ಬೇಡಿಕೆ-ಪೂರೈಕೆಯಂಥಾ ಸರಳ ಲೆಕ್ಕಾಚಾರವೂ ಅರ್ಥವಾಗದ ಸ್ಥಿತಿಯಲ್ಲಿ ಆಡಳಿತವಿತ್ತು.  ತಜ್ಞರ ಸಲಹೆಗಳಿಗೆ ಕಡಿಮೆ ಆದ್ಯತೆ ನೀಡಲಾಯಿತು. ಭಾರತ ಕೋವಿಡ್‌ ಯುದ್ಧ ಗೆದ್ದಿದೆ, ಇದೀಗ ಭಾರತ  ಜಗತ್ತಿನ ಫಾರ್ಮಸಿಯಾಗಿದೆ ಎಂದು ಬೀಗಿದರು.

ಅಮೂಲ್ಯ ಲಸಿಕೆ ಮತ್ತು ಆಕ್ಸಿಜನ್‍ಅನ್ನು ರಫ್ತು ಮಾಡಲಾಯಿತು. ಕೊನೆಗೆ ಕೋಟಿಗಟ್ಟಲೆ ಮಂದಿ ಭಾಗವಹಿಸಲು ಬಿಟ್ಟ ಕುಂಭ ಮೇಳವೇ ದೇವರ ಆಗ್ರಹಕ್ಕೆ ಕಾರಣವಾಯಿತು. ಎರಡನೇ ಅಲೆ ನಮ್ಮನ್ನು ಅಪ್ಪಳಿಸಲು ಕಾಯುತ್ತಿದ್ದರೆ ಮೋದಿ ಮತ್ತು ಶಾ ಇದಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸಲು ಸಾಧ್ಯವೇ ಇಲ್ಲದಂತೆ ಚುನಾವಣಾ ರ್ಯಾಲಿಗಳಲ್ಲಿ ಬಿಜಿಯಾಗಿದ್ದರು. ಕಪಿಮುಷ್ಠಿಯ ಕೇಂದ್ರೀಕೃತ ಸರಕಾರ ಕುಸಿಯಿತು. ಜವಾಬ್ದಾರಿ ಹೊರಬೇಕಾದವರು ತಲೆ ತಪ್ಪಿಸಿಕೊಂಡರು. ಅಭೂತಪೂರ್ವ ಅರಾಜಕತೆ ತಾಂಡವವಾಡುತ್ತಿದೆ.  ಸಾವು ಮತ್ತು ದುರಂತದ ಚಿತ್ರಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ಮೋದಿಯನ್ನು ಹುರಿದು ಮುಕ್ಕುತ್ತಿವೆ.

ಅಜೇಯ ಎನ್ನುವ ಇಮೇಜ್‌ ಶಿಥಿಲವಾಗುತ್ತಿದೆ. ಆದರೆ ಈಗ ಸೇಡಿನ ಬದಲು ಬೆಂಕಿ ಆರಿಸುವ ಕೆಲಸ ಆಗಬೇಕಿದೆ.

  • ಜವಹರ್‌ ಸರಕಾರ್

‌ ಸಂಸ್ಕೃತಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮತ್ತು ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ

(ಕನ್ನಡಕ್ಕೆ): ಕೆ ಪಿ ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...