Homeಮುಖಪುಟನವೆಂಬರ್ ಇರಾನ್ ನಿರ್ಬಂಧಗಳು ಮತ್ತು ತೈಲ ಬೆಲೆಯ ಬಿಕ್ಕಟ್ಟುಗಳು!

ನವೆಂಬರ್ ಇರಾನ್ ನಿರ್ಬಂಧಗಳು ಮತ್ತು ತೈಲ ಬೆಲೆಯ ಬಿಕ್ಕಟ್ಟುಗಳು!

- Advertisement -
- Advertisement -

ಪೆಟ್ರೋಲ್ ಬೆಲೆ 150 ರೂ. ಆದರೂ ಪರವಾಗಿಲ್ಲ. ನಾನು ನಡೆದುಕೊಂಡೇ ಹೋಗಿ ಮೋದಿಗೇ ಓಟು ಹಾಕುತ್ತೇನೆ’ ಎಂಬ ಒಂದು ‘ಜೋಕ್’ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಈ ಭಾವನೆಯು ಇಂದಿನ ಜನಸಾಮಾನ್ಯರ ಅನಿಸಿಕೆಯೋ ಅಥವಾ ಬಿಜೆಪಿ ಐಟಿ ಸೆಲ್‍ನ ಸೃಷ್ಟಿಯೋ ಎಂಬ ಮಾತು ಬೇರೆ. ಆದರೆ, ಜಾಗತಿಕ ತೈಲ ರಾಜಕಾರಣದ ಸ್ಥಿತಿಯನ್ನು ನೋಡಿದರೆ ತೈಲ ಬೆಲೆಯು ಮತ್ತಷ್ಟು ಏರಲಿದೆ ಎಂಬುದರಲ್ಲಿ ಸಂಶಯವಿಲ್ಲ.
ಕೆಲವು ಸಂದರ್ಭ ಬಿಟ್ಟರೆ ಮೋದಿ ಸರ್ಕಾರವು ತಾನು ಬಂದಾಗಿನಿಂದ ತೈಲಬೆಲೆಯನ್ನು ಏರಿಸುತ್ತಲೇ ಇದೆ. ಆಗಸ್ಟ್ 2014ರ ನಂತರ ಅಂತರ್ರಾಷ್ಟ್ರೀಯ ಕಚ್ಚಾ ತೈಲದ ಬೆಲೆಯು ಅತೀ ಕೆಳಗೆ ಇಳಿದುದ್ದರ ಹೊರತಾಗಿಯೂ ಈ ಏರಿಕೆ ನಡೆಯುತ್ತಿದೆ. ಯುಪಿಎ 1 ಮತ್ತು ಯುಪಿಎ 2ರ ಅವಧಿಯಲ್ಲಿ ಕಚ್ಚಾ ತೈಲದ ಸರಾಸರಿ ಬೆಲೆ ಬ್ಯಾರೆಲ್‍ಗೆ 98 ಡಾಲರ್‍ಗಳಾಗಿದ್ದವು. ಎನ್‍ಡಿಎ ಅವಧಿಯಲ್ಲಿ ಇದು ಬ್ಯಾರೆಲ್‍ಗೆ 45 ಡಾಲರ್‍ಗಳು. ಅಂದರೆ ಅರ್ಧಕ್ಕಿಂತ ಕಡಿಮೆ. ಈಗ ಅದು ಬ್ಯಾರೆಲ್‍ಗೆ 74 ಡಾಲರ್‍ಗಳು. ಮನಮೋಹನಸಿಂಗರ ಆಡಳಿತದ ಸಂದರ್ಭದಲ್ಲಿ ಬಿಜೆಪಿಯು ವಿರೋಧ ಪಕ್ಷವಾಗಿ ಎಲ್‍ಪಿಜಿ ಮತ್ತು ಪೆಟ್ರೋಲ್ ಬೆಲೆಗಳ ಏರಿಕೆಯ ಬಗ್ಗೆ ದೊಡ್ಡ ಗಂಟಲಿನಲ್ಲಿ ಮಾತನಾಡುತ್ತಿತ್ತು. ಆದ್ದರಿಂದಲೇ, ಈಗ ತನ್ನದೇ ಅವಧಿಯಲ್ಲಿ ಕೇಂದ್ರ ಸರ್ಕಾರ ಇಂಧನ ಬೆಲೆಯಲ್ಲಿ ಮಾಡುತ್ತಿರುವ ಅಗಾಧ ಏರಿಕೆಯ ವಿಚಾರ ಯಾಕೆ ಬಿಜೆಪಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದೆ ಎಂಬುದು ಅರ್ಥವಾಗದ ವಿಚಾರವೇನಲ್ಲ!
ಕೈಗಾರಿಕೀಕರಣದ ಆರಂಭದ ದಿನಗಳಲ್ಲಿ ಮೊದಲ ವಾಹಕವಾಗಿ ಬಳಕೆಯಲ್ಲಿದ್ದದ್ದು ಕಲ್ಲಿದ್ದಲು. ನಂತರ ಕಚ್ಚಾ ತೈಲ. ಈಗ ಅಣುಶಕ್ತಿ ಹಾಗೂ ಬೇರೆ ಬಗೆಯ ಪುನಶ್ಚೇತನಗೊಳ್ಳಬಲ್ಲ ಶಕ್ತಿಮೂಲಗಳ ಮೇಲೆ ಹೆಚ್ಚಿನ ಭರವಸೆ ವ್ಯಕ್ತವಾಗುತ್ತಿದೆ. ಕೈಗಾರಿಕಾ ಜನಗತ್ತಿನ ಸೃಷ್ಟಿಯು, ಅಗಾಧ ಪ್ರಮಾಣದ ಕಚ್ಚಾತೈಲದ ಲಭ್ಯತೆಯಿಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂಬ ಜನಪ್ರಿಯ ವಾದವೊಂದು ಚಲಾವಣೆಯಲ್ಲಿದೆ. ಜಗತ್ತಿನಾದ್ಯಂತ ತೈಲವೊಂದು ಪ್ರಧಾನವಾದ ಸರಕು ಸಾಮಗ್ರಿಯಾಗಿ ಬೆಳೆದಿದ್ದು, ಯಾವುದೇ ದೇಶದ ಪ್ರಗತಿ, ಬೆಳವಣಿಗೆ ಮತ್ತು ಅದರ ಒಟ್ಟಾರೆ ಆರ್ಥಿಕತೆಯ ಶಕ್ತಿಯನ್ನು ಅಳೆಯುವುದು ಇದೇ ಆಧಾರದ ಮೇಲೆ ಎಂಬಂತಾಗಿದೆ.
ತೈಲಮೂಲಗಳನ್ನು ನಿಯಂತ್ರಿಸುವ ದುರಾಸೆಯ ಸ್ಫರ್ಧೆಯಲ್ಲಿ, ಮಧ್ಯಪ್ರಾಚ್ಯವು ಭೂಗರ್ಭ ರಾಜಕಾರಣದ ಚೆಸ್ ಮಣೆಯಾಗಿ ಪರಿವರ್ತನೆಯಾಗಿದೆ. ಯುಎಸ್‍ಎಸ್‍ಆರ್‍ನ ಪತನದ ನಂತರ ಮಧ್ಯಪ್ರಾಚ್ಯದ ಸಮೃದ್ಧ ತೈಲ ನಿಕ್ಷೇಪದ ಅವಿರೋಧ ಅಧಿಪತಿ ಯಾರಾಗಿರಬೇಕೆಂಬ ವಿಚಾರದಲ್ಲಿ ಏರ್ಪಟ್ಟಿರುವ ಸ್ಫರ್ಧೆಯಿಂದಾಗಿ ನಿರಂತರ ಯುದ್ಧಗಳು ನಡೆಯುತ್ತಿದೆ. ವಿಶೇಷವಾಗಿ ತನ್ನ ಯುದ್ಧಕೋರ ಸ್ಫರ್ಧೆಯ ಕಾರಣಕ್ಕೆ ಅಮೇರಿಕಾದ ಕೈವಾಡ ಬಲವಾಗಿರುವ ಈ ಬೆಳವಣಿಗೆಗಳಿಂದಾಗಿ ಆ ದೇಶಗಳ ಜನರಿಗೆ ನಿರಂತರ ಸಂಕಷ್ಟ ಮತ್ತು ಗೊಂದಲವನ್ನು ಎದುರಿಸಬೇಕಾಗಿ ಬಂದಿದೆ. ಮಧ್ಯಪ್ರಾಚ್ಯದಲ್ಲಿ ಆರಿಸಲ್ಪಟ್ಟ ಸರ್ಕಾರಗಳನ್ನು ಉರುಳಿಸುವ ಮತ್ತು ಪ್ರಜಾಪ್ರಭುತ್ವದ ಸ್ಥಾಪನೆಯ ಹೆಸರಿನಲ್ಲಿ ಅಮೇರಿಕಾದ ಕೈಗೊಂಬೆ ಸರ್ಕಾರಗಳನ್ನು ಕೂರಿಸಲು ಆಂತರಿಕ ದಂಗೆಗಳನ್ನು ಹುಟ್ಟುಹಾಕುವ ಮೂಲಕ ಆ ದೇಶಗಳನ್ನು ಅಸ್ಥಿರಗೊಳಿಸಿ ಅಲ್ಲಿ ಅರಾಜಕ ವಾತಾವರಣವನ್ನು ಹುಟ್ಟುಹಾಕಲಾಗಿದೆ. ಇತಿಹಾಸದಲ್ಲಿ, ಇಂತಹ ಸಾಮ್ರಾಜ್ಯಶಾಹಿ ಪ್ರಯತ್ನಗಳನ್ನು ಎದುರಿಸುವ ಧೈರ್ಯವನ್ನು ತೋರಿರುವುದು ಕೆಲವೆ ಸರ್ಕಾರಗಳು ಮಾತ್ರ. 1979ರಲ್ಲಿ ಅಮೇರಿಕಾ ಬೆಂಬಲಿತ ಶಾ ಆಳ್ವಿಕೆಯ ವಿರುದ್ಧ ಇರಾನಿನಲ್ಲಿ ನಡೆದ ಪ್ರಜಾದಂಗೆಯು ಕಚ್ಚಾತೈಲದ ಬೆಲೆ ಬ್ಯಾರಲ್‍ಗೆ 128 ಡಾಲರ್‍ಗೆ ಏರುವಂತೆ 1980ರಲ್ಲಿ ಬಹುದೊಡ್ಡ ತೈಲ ಬಿಕ್ಕಟ್ಟಿಗೆ ಕಾರಣವಾಯಿತು.
ಇರಾನ್ ರೂಪಿಸಿಕೊಂಡ ಅಣ್ವಸ್ತ್ರ ನೀತಿಯನ್ನು ಸಹಿಸಲಾರದೆ ಅಮೇರಿಕಾ ತನ್ನ ನಿರ್ಭಂಧಗಳ ಮೂಲಕ ಆ ದೇಶವನ್ನು ಅಂಗವೈಕಲ್ಯಕ್ಕೆ ತಳ್ಳಿತು. ಕೊನೆಗೆ, 2014ರಲ್ಲಿ ಒಬಾಮಾ ಸರ್ಕಾರ ಕೊನೆಯ ಹಂತದಲ್ಲಿದ್ದಾಗ, ಚೀನಾ, ರಷ್ಯಾ, ಫ್ರಾನ್ಸ್, ಜರ್ಮನಿ ಮತ್ತು ಇಂಗ್ಲೆಂಡ್ ಸೇರಿದಂತೆ ಎಲ್ಲರೂ ಸೇರಿ ‘ಜಂಟಿ ಸಮಗ್ರ ಕಾರ್ಯನೀತಿ’ ಎಂಬ ಹೆಸರಿನಲ್ಲಿ ‘ಇರಾನ್ ಅಣ್ವಸ್ತ್ರ ಒಪ್ಪಂದ’ದ ಅಡಿಯಲ್ಲಿ ಮಾತುಕತೆಗೆ ಬಂದರು. ಇದರ ಪ್ರಕಾರ ಇರಾನ್ ತನ್ನ ಸ್ವಂತ ಅಣ್ವಸ್ತ್ರ ನೀತಿಯನ್ನು ಕೈಬಿಟ್ಟು ಅಂತರಾಷ್ಟ್ರೀಯ ಆಣು ಶಕ್ತಿ ಸಂಸ್ಥೆ(ಐಎಇಎ)ಯ ನಿಬಂಧನೆಗಳಿಗೆ ಒಳಪಡುವುದಾದಲ್ಲಿ ಹಲವಾರು ಆರ್ಥಿಕ ಮತ್ತು ವ್ಯಾಪಾರಿ ನಿರ್ಭಂಧಗಳನ್ನು ತೆಗೆದು ಹಾಕುವುದಾಗಿ ಹೇಳಲಾಗಿತ್ತು. ಇರಾನ್ ಒಪ್ಪಿತು. ನಿರ್ಭಂಧಗಳು ಸಡಿಲಾದವು, ಇರಾನ್‍ನ ವ್ಯಾಪಾರ ವಹಿವಾಟು ಹೆಚ್ಚಿತು ಮತ್ತು ಆರ್ಥಿಕತೆ ವೃದ್ಧಿಸತೊಡಗಿತು. ಮಧ್ಯಪ್ರಾಚ್ಯದುದ್ದಕ್ಕೂ ಪಸರಿಸತೊಡಗಿದ ಇರಾನಿನ ಪ್ರಭಾವವು ಅಮೇರಿಕದ ಆಡಳಿತಕ್ಕೆ ಸಹ್ಯವಾಗಲಿಲ್ಲ. ತನ್ನ ‘ದೊಡ್ಡಣ್ಣ’ ದಬ್ಬಾಳಿಕೆಯ ನಿರ್ದಿಷ್ಟ ರೀತಿಯಲ್ಲಿ ಇರಾನ್ ಅಣ್ವಸ್ತ್ರ ಒಪ್ಪಂದವನ್ನು ಟ್ರಂಪ್ ಸರ್ಕಾರ ಏಕಪಕ್ಷೀಯವಾಗಿ ಮೇ 8, 2018ರಲ್ಲಿ ರದ್ದು ಮಾಡಿತು. ಅಷ್ಟೇ ಅಲ್ಲದೆ ವ್ಯಾಪಾರಿ ನಿರ್ಭಂಧಗಳನ್ನು ಮತ್ತೆ ಹೇರಿದ್ದಲ್ಲದೆ ಅಕ್ಕಪಕ್ಕದ ದೇಶಗಳು ನವೆಂಬರ್ 4ರ ನಂತರ ಇರಾನ್ ಜೊತೆಗೆ ವಹಿವಾಟು ನಡೆಸಬಾರದೆಂದೂ, ನಡೆಸಿದ್ದೇ ಆದಲ್ಲಿ ಅಮೇರಿಕಾ ತನ್ನ ರೀತಿಯಲ್ಲಿ ವರ್ತಿಸಬೇಕಾಗುತ್ತದೆಂದು (ವ್ಯಾಪಾರಿ ನಿರ್ಭಂಧಗಳ ರೂಪದಲ್ಲಿ) ಆ ದೇಶಗಳಿಗೆ ಎಚ್ಚರಿಕೆ ನೀಡಲಾಯಿತು.
ಅಮೇರಿಕಾ, ಚೀನಾ, ಭಾರತ, ಜಪಾನ್ ಮತ್ತು ರಷ್ಯಾ ದೇಶಗಳು ಕಚ್ಚಾತೈಲದ ಅತಿದೊಡ್ಡ ಗ್ರಾಹಕರಾಗಿವೆ. ಅಮೇರಿಕಾ, ಸೌದಿ, ರಷ್ಯಾ, ಕೆನಡಾ, ಇರಾಕ್, ಇರಾನ್‍ಗಳು ಅತಿದೊಡ್ಡ ತೈಲ ಉತ್ಪಾದಕ ದೇಶಗಳು. 2008ರ ಆರ್ಥಿಕ ಕುಸಿತದ ನಂತರ ಅಮೇರಿಕಾ ‘ಫ್ರಾಕಿಂಗ್’ (ನೆಲದೊಳಗೆ ಅತ್ಯಧಿಕ ಒತ್ತಡದಲ್ಲಿ ದ್ರವವನ್ನು ನುಗ್ಗಿಸಿ, ಸುತ್ತಲಿನ ಭೂಪದರಗಳನ್ನು ಸ್ಫೋಟಿಸಿ ಆ ಮಣ್ಣಿನ ಮಡಿಕೆಗಳಡಿ ಶೇಖರವಾಗಿರಬಹುದಾದ ನಿಕ್ಷೇಪಗಳನ್ನೂ ಬಿಡದೆ ಗಣಿಗಾರಿಕೆ ಮಾಡುವ ವಿನಾಶಕಾರಿ ವಿಧಾನ-ಅದು) ವಿಧಾನದ ಮೂಲಕ ಹೆಚ್ಚೆಚ್ಚು ಪ್ರಮಾಣದ ಕಚ್ಚಾತೈಲವನ್ನು ಉತ್ಪಾದಿಸಲಾರಂಭಿಸಿತು ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆಯನ್ನು ಹೆಚ್ಚಿನ ಮಟ್ಟದಲ್ಲೇ ಆಗಸ್ಟ್ 2014ರವರೆಗೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾಗೆಯೇ, ರಷ್ಯಾ, ಚೀನಾ ಮತ್ತು ಇರಾನ್‍ಗಳನ್ನು ತೈಲಮಾರುಕಟ್ಟೆಯಿಂದ ಹೊರನೂಕುವ ಕುತಂತ್ರಗಳನ್ನೂ ಅಮೇರಿಕಾ ಪೋಣಿಸಲಾರಂಭಿಸಿತು. ಈ ದೇಶಗಳು ಆರ್ಥಿಕ ನಿರ್ಭಂಧ ಮತ್ತು ತೈಲ ಯುದ್ಧಗಳನ್ನು ಎದುರಿಸಿ ನಿಂತಿವೆಯಾದರೂ, ಕಳೆದ 4 ದಶಕಗಳಲ್ಲಿ ಒಳಗೊಳಗೇ ಹೆಪ್ಪುಗಟ್ಟುತ್ತಿರುವ ಬಿಕ್ಕಟ್ಟು ಯಾವಾಗ ಬೇಕಾದರೂ ಸ್ಫೋಟಕ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಒಂದು ವೇಳೆ ಹಾಗಾದಲ್ಲಿ, ಅದು 1980ರ ಇರಾನ್ ಬಿಕ್ಕಟ್ಟಿಗಿಂತ ಬಹಳ ಗಂಭೀರವಾದ ಪರಿಣಾಮಗಳನ್ನು ಜಾಗತಿಕ ಸಂರಚನೆಯ ಮೇಲೆ ಬೀರಬಲ್ಲದು.
ಭಾರತದಂತಹ ಅಭಿವೃದ್ಧಶೀಲ ದೇಶದ ಆರ್ಥಿಕತೆಯು ತಾನು ಬಳಸುವ ತೈಲದ ಮೇಲೆ ಮತ್ತು ಆ ತೈಲದ ಬೆಲೆಯ ಮೇಲೆ ನೇರವಾಗಿ ಅವಲಂಬಿಸಿರುತ್ತದೆ. ತನ್ನ ಶಕ್ತಿಮೂಲಗಳ ವಿಚಾರದಲ್ಲಿ ಭಾರತವು ಸ್ವಯಂಪೂರ್ಣತೆಯನ್ನು ಸಾಧಿಸಿಲ್ಲ. ತನಗೆ ಬೇಕಿರುವ ಕಚ್ಚಾತೈಲದ ಪ್ರಮಾಣದಲ್ಲಿ ಕೇವಲ 17%ರಷ್ಟನ್ನು ಮಾತ್ರ ಭಾರತ ಉತ್ಪಾದಿಸುತ್ತದೆ ಹಾಗೂ ಉಳಿದ ಶೇ 83ರಷ್ಟನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. 2006ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಸುಮಾರು 71 ಡಾಲರ್/ಬ್ಯಾರಲ್ ಇತ್ತು ಮತ್ತು ಆ ಸಂದರ್ಭದಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಸುಮಾರು 50ರೂ/ಲೀಟರ್ ಇತ್ತು. ಆ ನಂತರ ಕಚ್ಚಾತೈಲದ ಬೆಲೆ ಒಂದಷ್ಟು ಕುಸಿದಾಗಲೂ ಮತ್ತು ಈಗ ಸ್ಥಿರವಾಗಿ ಅಷ್ಟೇ ಇರುವಾಗಲೂ ಭಾರತದ ಆಂತರಿಕ ಬಳಕೆಯ ಪೆಟ್ರೋಲ್ ಬೆಲೆ ಮಾತ್ರ 84ರೂ/ಲೀಟರ್ ಆಗಿದೆ. ಕೆಲವು ನಗರಗಳಲ್ಲಿ ಅದು ಲೀಟರ್‍ಗೆ 92ರೂ ತಲುಪುವ ಹಂತದಲ್ಲಿದೆ. ತಮಾಷೆಯ ಸಂಗತಿಯೆಂದರೆ, ಭಾರತ ತಾನು ತರಿಸಿಕೊಂಡ ಕಚ್ಚಾತೈಲದಿಂದ ಅಕ್ಕಪಕ್ಕದ ರಾಷ್ಟ್ರಗಳಾದ ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ ಮೊದಲಾದವುಗಳಿಗೆ ಒಂದಷ್ಟು ಭಾಗವನ್ನು ರಫ್ತು ಮಾಡುತ್ತದೆ. ಆದರೆ, ಈ ದೇಶಗಳಿಗೆ ತೈಲ ರಫ್ತು ಮಾಡುವ ಬೆಲೆಗಿಂತ ಹೆಚ್ಚು ಬೆಲೆಗೆ ತನ್ನದೇ ದೇಶದಲ್ಲಿ ತೈಲವನ್ನು ಮಾರುತ್ತಿದೆ! ಇಂತಹ ಗಂಭೀರ ವಿಚಾರವನ್ನು ಸರಿಯಾದ ರೀತಿಯಲ್ಲಿ ಎತ್ತಿಕೊಂಡು ಹೋರಾಡುವಲ್ಲಿ ಒಂದೆಡೆ ವಿರೋಧ ಪಕ್ಷಗಳು ವಿಫಲವಾಗುತ್ತಿದ್ದಾವೆ ಹಾಗೂ ಮತ್ತೊಂದೆಡೆ ಸಾಮಾನ್ಯ ಜನರನ್ನು ಅತಿಯಾಗಿ ಬಾಧಿಸುವ ಈ ವಿಚಾರವನ್ನಿಟ್ಟುಕೊಂಡು ಸರ್ಕಾರವನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ಸರ್ಕಾರದ ಪರ ವಕೀಲಿಕೆ ಮಾಡಲು ತುದಿಗಾಲಿನಲ್ಲಿ ನಿಂತಿವೆ.
ಚಾರಿತ್ರಿಕವಾಗಿ, ಈ ವಿಚಾರದಲ್ಲಿ ಇರಾನ್ ಮತ್ತು ಭಾರತ ಸ್ನೇಹಯುತವಾದ ಬಾಂಧವ್ಯವನ್ನು ಹೊಂದಿವೆ ಹಾಗೂ ಸಂದರ್ಭ ಬಂದಾಗೆಲ್ಲ ಪರಸ್ಪರರಿಗೆ ನೆರವಾಗಿವೆ. ಆದರೆ, ಈಗ ದೊಡ್ಡಣ್ಣ ಅಮೇರಿಕಾದ ವ್ಯಾಪಾರ ನಿರ್ಭಂಧದ ಬೆದರಿಕೆಯ ಅಡಿಯಲ್ಲಿ, ಇರಾನ್ ಜೊತೆಗೆ ತೈಲ ವಹಿವಾಟು ಮುಂದುವರೆಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬೇಕಾದ ಇಕ್ಕಟ್ಟಿಗೆ ಭಾರತ ಸಿಲುಕಿದೆ. ಇದುವರೆಗೆ ಈ ವಿಚಾರ ಬಂದಾಗೆಲ್ಲ ಭಾರತ ಮಿಶ್ರ ಪ್ರತಿಕ್ರಿಯೆ ನೀಡುತ್ತಾ ಬಂದಿದೆ. ತಾನು ಇರಾನ್ ಜೊತೆಗೆ ವ್ಯಾಪಾರ ಮುಂದುವರೆಸುತ್ತೇನೆ; ಆದರೆ ಡಾಲರ್‍ಗಳಲ್ಲಲ್ಲ, ಬದಲಿಗೆ ಮನಮೋಹನ್ ಸಿಂಗ್ ಸರ್ಕಾರ ಆಗಿನ ನಿರ್ಭಂಧಗಳನ್ನು ಮೀರಲು ಉಪಾಯ ಮಾಡಿದಂತೆ ಭಾರತದ್ದೇ ಆದ ಯೂಕೋ ಬ್ಯಾಂಕುಗಳ ಮೂಲಕ ರುಪಾಯಿಯಲ್ಲಿ’ ಎಂಬಂತಹ ಸಂದೇಶ ನೀಡುತ್ತಿದೆ. ಇನ್ನೂ ಕೆಲವು ವರದಿಗಳಲ್ಲಿ ಭಾರತ, ಅಮೇರಿಕಾದ ಒತ್ತಡದ ಕಾರಣಕ್ಕೆ ತಾನು ಇರಾನ್ ಜೊತೆ ವ್ಯಾಪಾರ ಸಂಬಂಧ ಕಡಿದುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತಿದೆಯೇನೋ ಎಂಬ ಆತಂಕವನ್ನೂ ಕೂಡಾ ವ್ಯಕ್ತಪಡಿಸಿದೆ; ಇದು ಒಂದೇ ಹಂತದಲ್ಲಿ ಅಥವಾ ಹಂತ ಹಂತವಾಗಿ ನಡೆಯಬಹುದು ಎಂದೂ ಸೂಚಿಸುತ್ತದೆ. ಇರಾನಿನಿಂದ ತರಿಸಿಕೊಳ್ಳುತ್ತಿದ್ದ ಒಟ್ಟು ತೈಲ ಆಮದಿನ 12%ರಷ್ಟನ್ನು ಸೌದಿಯಿಂದ ತರಿಸಿಕೊಳ್ಳುವ ಬಗ್ಗೆ ಆಲೋಚಿಸುತ್ತಿದೆಯೆಂದು ವರದಿಗಳು ಹೇಳುತ್ತವೆ. ಆದರೆ ಇದರಿಂದ ಬಿಕ್ಕಟ್ಟೇನೂ ಬಗೆಹರಿಯುವುದಿಲ್ಲ. ಒಟ್ಟು ತೈಲ ಸರಪಳಿಯ ಶೇ.5ರಷ್ಟನ್ನು ಇರಾನ್ ಒಂದೇ ಉತ್ಪಾದಿಸುತ್ತಿದೆ. ಉಳಿದ ಎಲ್ಲ ತೈಲ ಉತ್ಪಾದಕ ದೇಶಗಳೂ ತಮ್ಮ ಸಾಮಥ್ರ್ಯವೆಷ್ಟಿದೆಯೋ ಅಷ್ಟೂ ಸಂಪೂರ್ಣ ತೈಲವನ್ನು ಈಗಾಗಲೇ ಉತ್ಪಾದಿಸುತ್ತಿವೆ. ಇರಾನನ್ನು ಈ ಸರಪಳಿಯಿಂದ ಹೊರಗಿಟ್ಟಿದ್ದೇ ಆದರೆ ಅದರಿಂದ ಉಂಟಾಗಬಹುದಾದ ಶೇ.5ರಷ್ಟು ಕೊರತೆಯನ್ನು ಪೂರೈಸಲು ಈ ಯಾವ ದೇಶಗಳೂ ಕೂಡಾ ಹೆಚ್ಚುವರಿ ಉತ್ಪಾದನೆ ಮಾಡುವ ಸ್ಥಿತಿಯಲ್ಲಿಲ್ಲ! ಆಗ ಮತ್ತೆ ಇನ್ನೊಂದು ಬಿಕ್ಕಟ್ಟಿಗೆ ಇದು ದಾರಿ ಮಾಡಿಕೊಡಬಲ್ಲದು.
ಒಟ್ಟಿನಲ್ಲಿ, ಯಾವ ರೀತಿಯಿಂದ ನೋಡಿದರೂ ಭಾರತವು ಕಚ್ಚಾತೈಲದ ಬೆಲೆಯ ವಿಚಾರದಲ್ಲಿ ಬಿಕ್ಕಟ್ಟೊಂದರೊಳಕ್ಕೆ ಪ್ರವೇಶಿಸುತ್ತಿದೆಯೆಂಬುದು ಖಚಿತ. ಈಗಾಗಲೇ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಗಳು ನವೆಂಬರ್ ವೇಳೆಗೆ ಇನ್ನಷ್ಟು ಏರಲಿರುವ ಸೂಚನೆಗಳೇ ಕಾಣುತ್ತಿವೆ. ಬಹುಶಃ ಇದನ್ನು ಪ್ರಧಾನಿಯವರು ‘ದೀಪಾವಳಿಗೆ ದೇಶವಾಸಿಗಳಿಗೆ ನಮ್ಮ ಕೊಡುಗೆ’ ಎಂದೂ ಹೇಳಬಹುದೇನೋ! ಮೋದಿ ಆಡಳಿತಾವಧಿಯಲ್ಲಿ ಹೆಚ್ಚುತ್ತಿರುವ ಬೆಲೆಗಳು-ನಿರುದ್ಯೋಗ, ಕೋಮು ಸಂಘರ್ಷಗಳು, ಅಸ್ಥಿರಗೊಂಡಿರುವ ಆರ್ಥಿಕತೆಯೊಂದಿಗೆ ಜನಸಾಮಾನ್ಯರು ಆಳವಾದ ಸಾಮಾಜಿಕ, ಆರ್ಥಿಕ, ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇನ್ನುಮುಂದೆ ಜನಸಾಮಾನ್ಯರನ್ನು ಸಂಬೋಧಿಸುವಾಗ ಪ್ರಧಾನಿಯವರು ಆಲೋಚಿಸಬೇಕು. ಏಕೆಂದರೆ ಅವರು ಈಗ `ಮಿತ್ರೋಂ’ ಆಗಿ ಉಳಿದಿಲ್ಲ.

– ಭರತ್ ಹೆಬ್ಬಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...