Homeಮುಖಪುಟಹಲವು ರಾಜ್ಯಗಳಲ್ಲಿ ಬಿಜೆಪಿ ಸೋತ ನಂತರ ಮೋದಿ ವರ್ಚಸ್ಸು ಕಡಿಮೆಯಾಗಿದೆಯೆ? - ಡಿ.ಉಮಾಪತಿ

ಹಲವು ರಾಜ್ಯಗಳಲ್ಲಿ ಬಿಜೆಪಿ ಸೋತ ನಂತರ ಮೋದಿ ವರ್ಚಸ್ಸು ಕಡಿಮೆಯಾಗಿದೆಯೆ? – ಡಿ.ಉಮಾಪತಿ

ಮೋದಿಯವರ ಪ್ರಭಾವ ಸರ್ವವ್ಯಾಪಿಯಾಗಿ ರಾಷ್ಟ್ರಮಟ್ಟದಲ್ಲಿ ತಗ್ಗಿದೆ ಎಂದು ಈಗಲೇ ಹೇಳಲು ಬಾರದು.

- Advertisement -
- Advertisement -

ಜಾರ್ಖಂಡ್‌ನಲ್ಲಿ ಬಿಜೆಪಿ ಸೋತಿದೆ. ಹಿಂದೂ ಮುಸ್ಲಿಮ್ ಧ್ರುವೀಕರಣ ಫಲ ನೀಡಿಲ್ಲ. ಬಹುಮತ ಸಿಗದಿದ್ದರೂ ಇತರೆ ಪಕ್ಷಗಳನ್ನು ಒಡೆದು, ಬೆದರಿಸಿ, ಬ್ಲ್ಯಾಕ್‌ಮೇಲ್ ಮಾಡಿ ಸರ್ಕಾರ ರಚಿಸುವ ತಂತ್ರಕ್ಕೂ ಸೋಲಾಗಿದೆ. ಈ ಜನವಿರೋಧಿ ಹುನ್ನಾರಗಳು ಸದಾಕಾಲ ರಾಜಕೀಯ ಲಾಭ ನೀಡುವುದಿಲ್ಲ ಎಂಬ ಸತ್ಯವನ್ನು ಜಾರ್ಖಂಡ್ ಚುನಾವಣಾ ಫಲಿತಾಂಶಗಳು ಮರು ದೃಢೀಕರಿಸಿವೆ. ಜಾರ್ಖಂಡ್ ಮುಕ್ತಿ ಮೋರ್ಚಾ ನಡೆಸಿದ ಸುದೀರ್ಘ ಹೋರಾಟದ ನಂತರ ಜಾರ್ಖಂಡ್ ಪ್ರತ್ಯೇಕ ಸ್ವತಂತ್ರ ರಾಜ್ಯವಾಯಿತು. ಇಲ್ಲಿನ ಆದಿವಾಸಿಗಳ ಮತಗಳು, ಒಟ್ಟು ಮತಗಳ ಮೂರನೆಯ ಒಂದಕ್ಕಿಂತ ಕಡಿಮೆ ಹೌದು. ಆದರೂ ಭಾವನಾತ್ಮಕವಾಗಿ ಜಾರ್ಖಂಡ್ ಆದಿವಾಸಿ ಸೀಮೆಯೆಂದೇ ಹೆಸರಾದದ್ದು.

ಬಿಜೆಪಿಯ ಸರ್ವಶಕ್ತ ಜೋಡಿಯಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ 2014ರಲ್ಲಿ ಜಾರ್ಖಂಡ್ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಆರಿಸಿದ್ದು ಆದಿವಾಸಿ ಅಲ್ಲದ ರಘುಬರದಾಸ್ ಅವರನ್ನು. ದಾಸ್ ಐದು ವರ್ಷಗಳ ಕಾಲ ನಡೆಸಿದ ಸರ್ಕಾರದ ಸ್ವರೂಪ ಆದಿವಾಸಿ ವಿರೋಧಿ ಎನಿಸಿಕೊಂಡಿತ್ತು. ಭೂಸ್ವಾಧೀನ ಕಾಯಿದೆಗೆ ದಾಸ್ ಸರ್ಕಾರ ತಂದಿದ್ದ ತಿದ್ದುಪಡಿ ಮತ್ತು ಆದಿವಾಸಿ ಸೀಮೆಯನ್ನು ವ್ಯಾಪಿಸಿದ ಸ್ವಯಮಾಡಳಿತದ ‘ಪತ್ತಲ್ ಗಡಿ’ ಆಂದೋಲನ ಹಾಗೂ ಮತಾಂತರ ತಡೆ ವಿಧೇಯಕ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾದವು. ಕಳೆದ ಎರಡು ವರ್ಷಗಳಲ್ಲಿ ಜಾರ್ಖಂಡ್‌ನಲ್ಲಿ ಗುಂಪು ಬೀದಿಬೀದಿಗಳಲ್ಲಿ ಬಡಿದು ಜಜ್ಜಿ ಕೊಂದ ಗುಂಪು ಹತ್ಯೆ ಪ್ರಕರಣಗಳ ಸಂಖ್ಯೆ 20. ಹತ್ಯೆಗೆ ಈಡಾದವರ ಪೈಕಿ 11 ಮಂದಿ ಮುಸಲ್ಮಾನರಾಗಿದ್ದರು.

ಸ್ವಾಭಾವಿಕವಾಗಿಯೇ ರಘುಬರದಾಸ್ ಅವರು ಆದಿವಾಸಿಗಳ ವಿಶ್ವಾಸ ಕಳೆದುಕೊಂಡರು. ಬಿಜೆಪಿಯಿಂದ ದೂರ ಸರಿದು ಜಾರ್ಖಂಡ್ ಮುಕ್ತಿ ಮೋರ್ಚಾದ ಜೊತೆ ಕೈಕಲೆಸಿದರು.

2017ರಲ್ಲಿ ಅಧಿಕಾರ ಗಳಿಕೆಯಲ್ಲಿ ಯಶಸ್ಸಿನ ಶಿಖರ ಮುಟ್ಟಿದ್ದ ಬಿಜೆಪಿ ದೇಶದ ಶೇ.71ರಷ್ಟು ಭೂ ಭಾಗವನ್ನು ಆಳತೊಡಗಿತ್ತು. ಇದೀಗ ಜಾರ್ಖಂಡ್ ಸೋಲಿನ ನಂತರ ಈ ಪ್ರಮಾಣ ಶೇ.35ಕ್ಕೆ ಕುಸಿದಿದೆ. ಜನಸಂಖ್ಯೆಯ ಲೆಕ್ಕ ಹಿಡಿದು ಹೇಳುವುದಾದರೆ ಈ ಪ್ರಮಾಣ ಶೇ.69ರಿಂದ ಶೇ.43ಕ್ಕೆ ತಗ್ಗಿದೆ.

2019 ಬಿಜೆಪಿಯ ಪಾಲಿಗೆ ಗೆಲುವು ಮತ್ತು ಸೋಲಿನ ಸಂಗಮವಾಗಿತ್ತು. ಲೋಕಸಭಾ ಚುನಾವಣೆಗಳಲ್ಲಿ 303 ಸೀಟುಗಳು ಮತ್ತು ಶೇ.37ರಷ್ಟು ವೋಟುಗಳ ಧಾರಾಳ ಬಹುಮತ ಗಳಿಸಿತು. ಆದರೆ ಈ ಆತ್ಮವಿಶ್ವಾಸದ ಗೆಲುವಿನ ಬೆನ್ನಿನಲ್ಲೇ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಕೈಬಿಟ್ಟಿವೆ. ಹರಿಯಾಣದಲ್ಲಿ ಬಹುಮತ ದೊರೆಯಲಿಲ್ಲ.

ಮಹಾರಾಷ್ಟ್ರದಲ್ಲಿ ಕೈಗೆ ಬಂದ ತುತ್ತನ್ನು ಬಾಯಿಗೆ ಇರಿಸಿಕೊಳ್ಳುವಲ್ಲಿ ತಾನು ಎದುರಿಸಿದ ವೈಫಲ್ಯ ಮತ್ತು ಜಾರ್ಖಂಡ್‌ದ ನಿರ್ಣಾಯಕ ಸೋಲು ಕೇಸರಿ ಪಕ್ಷದ ವಿರೋಧಿಗಳ ಕೈಗೆ ಬಡಿಗೆ ನೀಡಿದೆ. ಬಿಜೆಪಿ ಇಳಿಜಾರಿನ ಹಾದಿ ಹಿಡಿದಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ದೇಶಾದ್ಯಂತ ಭುಗಿಲೆದ್ದಿರುವ ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧ ಕೂಡ ಈ ಸಂದೇಹದ ಸಾಲು ಸೇರಿದೆ.

ಇತ್ತೀಚೆಗೆ ಜಾರ್ಖಂಡ್‌ನಲ್ಲಿ ನಡೆಸಲಾದ ಲೋಕನೀತಿ- ಸಿ.ಎಸ್.ಡಿ.ಎಸ್ ಸಮೀಕ್ಷೆಯ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಭಾವ ತಗ್ಗಿದೆ. ಆದರೆ ಕೇವಲ ಇಷ್ಟು ಮಾತ್ರದಿಂದಲೇ ಅವರ ಪ್ರಭಾವ ಸರ್ವವ್ಯಾಪಿಯಾಗಿ ರಾಷ್ಟ್ರಮಟ್ಟದಲ್ಲಿ ತಗ್ಗಿದೆ ಎಂದು ಹೇಳಲು ಬರುವುದಿಲ್ಲ ಎನ್ನುತ್ತಾರೆ ಈ ಸಮೀಕ್ಷೆ ನಡೆಸಿರುವ ಸಿ.ಎಸ್.ಡಿ.ಎಸ್.ನ ಸಂಜಯಕುಮಾರ್. ಮಧ್ಯಪ್ರದೇಶ, ಛತ್ತೀಸಗಢ ಹಾಗೂ ರಾಜಸ್ತಾನ ವಿಧಾನಸಭಾ ಚುನಾವಣೆಗಳಲ್ಲಿ ಸೋತಿದ್ದರೂ, ಆ ನಂತರ ಜರುಗಿದ ಲೋಕಸಭಾ ಚುನಾವಣೆಗಳಲ್ಲಿ ಈ ಮೂರೂ ರಾಜ್ಯಗಳ 65 ಸೀಟುಗಳ ಪೈಕಿ 62ನ್ನು ಬಿಜೆಪಿ ಗೆದ್ದುಕೊಂಡ ಕುರಿತು ಕುಮಾರ್ ಗಮನ ಸೆಳೆದಿದ್ದಾರೆ.

ಸದ್ಯಕ್ಕೆ ಜಾರ್ಖಂಡ್ ರಾಜ್ಯಕ್ಕೆ ಸೀಮಿತವಾಗಿರುವ ಈ ಕುಸಿತ ಮುಂಬರುವ ದಿನಗಳಲ್ಲಿ ವಿಶೇಷವಾಗಿ ಪೌರತ್ವ ಕಾಯಿದೆ ತಿದ್ದುಪಡಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಆಚೆಗೂ ಹಬ್ಬಲಿದೆಯೇ ಅಥವಾ ಕೇಂದ್ರ ಸರ್ಕಾರ ಅದನ್ನು ತಡೆಹಿಡಿಯುವುದೇ ಎಂಬುದನ್ನು ಕಾದು ನೋಡಬೇಕಿದೆ ಎಂಬ ಅಡ್ಡ ಗೀಟನ್ನು ಕುಮಾರ್ ಎಳೆದಿದ್ದಾರೆ.

2018ರಿಂದ ಬಿಜೆಪಿ ಹಲವು ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಏಳು ರಾಜ್ಯಗಳಲ್ಲಿ (ಅರುಣಾಚಲ ಪ್ರದೇಶ, ತ್ರಿಪುರ, ಉತ್ತರಪ್ರದೇಶ, ಹಿಮಾಚಲ, ಉತ್ತರಾಖಂಡ, ಗುಜರಾತ್ ಹಾಗೂ ಕರ್ನಾಟಕ) ಸ್ವತಂತ್ರವಾಗಿ ಅಧಿಕಾರ ಹಿಡಿದಿದೆ. ಒಂಬತ್ತು ರಾಜ್ಯಗಳಲ್ಲಿ ಮಿತ್ರಪಕ್ಷಗಳ ನೆರವಿನೊಂದಿಗೆ ಸರ್ಕಾರಗಳನ್ನು ನಡೆಸಿದೆ.

ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಅತಿಹೆಚ್ಚು ಸೀಟು ಗೆದ್ದ ಪಕ್ಷವಾಗಿ ಹೊರಹೊಮ್ಮಿತ್ತು. ಜಾರ್ಖಂಡ್‌ನಲ್ಲಿ ಸೋತರೂ ಶೇ.33ರಷ್ಟು ಮತಗಳನ್ನು ಗಳಿಸಿತು ಎಂಬುದು ಅವರ ವಾದ. ಮತದಾರರ ಆಯ್ಕೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಭಿನ್ನ ಭಿನ್ನ ಎಂಬುದು ನಿರ್ವಿವಾದಿತ ಅಂಶ. ರಾಜ್ಯ ಸರ್ಕಾರಗಳ ಮಾತು ಬಂದಾಗ ಮತದಾರರು ಬಿಜೆಪಿಯ ಆಚೆಗೂ ನೋಡಿದ್ದಾರೆ. ಮೋದಿಯವರ ವೈಫಲ್ಯ ಇಲ್ಲಿ ಎದ್ದು ಕಂಡಿದೆ.

2020ರ ಅರಂಭದಲ್ಲೇ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆ ಮತ್ತು ಅಂತ್ಯದಲ್ಲಿ ಜರುಗುವ ಬಿಹಾರ ವಿಧಾನಸಭಾ ಚುನಾವಣೆಗಳು ಮೋದಿಯವರ ಜನಪ್ರಿಯತೆಯನ್ನು ಮತ್ತಷ್ಟು ಪರೀಕ್ಷಿಸಲಿವೆ. 2021ರಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್ ವಿಧಾನಸಭೆಗಳಿಗೆ ಚುನಾವಣೆ ಜರುಗಲಿದೆ. ಈ ಎರಡೂ ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯಿದೆ ಹುಟ್ಟಿಸಿರುವ ಭೂಕಂಪದ ಬಹುಮುಖ್ಯ ಕಂಪನ ಕೇಂದ್ರಗಳು. ಹೀಗಾಗಿ ಈ ರಾಜ್ಯಗಳು ಮೋದಿಯವರ ಕೈಹಿಡಿಯುವುವೇ ಇಲ್ಲವೇ ಕೆಡವಲಿವೆಯೇ ಎಂಬುದು ಕಾದು ನೋಡಬೇಕಿರುವ ಅಗ್ನಿಪರೀಕ್ಷೆ.

ಈ ನಡುವೆ ಮಣ್ಣುಪಾಲಾಗಿದ್ದ ಕಾಂಗ್ರೆಸ್ ಪಕ್ಷ ಚೇತರಿಕೆಯ ಸೂಚನೆಗಳನ್ನು ತೋರತೊಡಗಿದೆ. ಕಾಂಗ್ರೆಸ್ಸಿನ ನಿಜವಾದ ಶಕ್ತಿಯ ಅಂದಾಜು ಅದರ ಟೀಕಾಕಾರರಿಗಿಂತ ಹೆಚ್ಚಾಗಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಇದ್ದಂತಿದೆ. ಸಂಘ ಪರಿವಾರ ಕಾಂಗ್ರೆಸ್ಸಿನ ಮೇಲೆ ದಶದಿಕ್ಕುಗಳಿಂದ ನಡೆಸುತ್ತಿರುವ ದಾಳಿಯೇ ಈ ಮಾತಿಗೆ ಸಾಕ್ಷಿ. ಕಾಂಗ್ರೆಸ್ ಪಕ್ಷದ ದಿನಗಳು ಮುಗಿದುಹೋದವೆಂದು ತಾನು ಹಗಲಿರುಳು ಚೀರಿ ಹೇಳುತ್ತಿದೆ. ಮುಗಿದುಹೋಗಿದ್ದೇ ನಿಜವಾಗಿದ್ದರೆ ಆ ಮಾತನ್ನು ಹಗಲಿರುಳು ಚೀರಿ ಹೇಳುವ ಅಗತ್ಯ ಇರಲಿಲ್ಲ. ಕಾಂಗ್ರೆಸ್ಸಿಗೆ ತನ್ನಲ್ಲೇ ತನಗೆ ನಂಬಿಕೆ ಕಳೆದುಹೋಗಿದ್ದರೂ, ಮತದಾರರಲ್ಲಿ ಈ ನಂಬಿಕೆಯ ಬೇರು ಸಂಪೂರ್ಣವಾಗಿ ಅಳಿದಿಲ್ಲ ಎಂಬ ಸುಳಿವನ್ನು ಅರಿಯುವಷ್ಟು ಜಾಣತನ ಬಿಜೆಪಿಗೆ ಇದ್ದೇ ಇದೆ. ಇತ್ತೀಚಿನ ದಿನಗಳಲ್ಲಿ ತಾನು ಕಳೆದುಕೊಂಡಿರುವ ಮೂರು ಮುಖ್ಯ ರಾಜ್ಯಗಳು ಕಾಂಗ್ರೆಸ್ ಪಾಲಾಗಿವೆ ಮತ್ತು ಉಳಿದೆರಡರ ಅಧಿಕಾರವನ್ನು ಕಾಂಗ್ರೆಸ್ ತನ್ನ ಮಿತ್ರಪಕ್ಷಗಳೊಂದಿಗೆ ಹಂಚಿಕೊಂಡಿದೆ ಎಂಬ ಅಂಶಕ್ಕೆ ಬಿಜೆಪಿ ಕುರುಡಾಗುವುದು ಹೇಗೆ ತಾನೇ ಸಾಧ್ಯ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. sir
    once EVEM Stops see BJP will not win in the country, all parties must see that evm must be banned at any cost, They can loose purpsefully Jarkand to get get little confidence on EVM on public

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...