Homeಮುಖಪುಟಇದು ಫ್ಯಾಸಿಸ್ಟರು, ಬಂಡವಾಳಿಗರು V/S ದಮನಿತರ ಸ್ವಾಭಿಮಾನದ ನಡುವಿನ ಹೋರಾಟ…!

ಇದು ಫ್ಯಾಸಿಸ್ಟರು, ಬಂಡವಾಳಿಗರು V/S ದಮನಿತರ ಸ್ವಾಭಿಮಾನದ ನಡುವಿನ ಹೋರಾಟ…!

ದೆಹಲಿ ಹೋರಾಟದ ಸುತ್ತ ಒಂದು ಸುತ್ತು

- Advertisement -
- Advertisement -

ರೈತ ಹೋರಾಟವು ಮುಖ್ಯವಾದ ಯಶಸ್ಸನ್ನು ಕಂಡಿದೆ. ಈ ಗೆಲುವಿನ ಹಿಂದೆ ರೈತರು ಮತ್ತು ಪ್ರತಿಯೊಬ್ಬ ಪಂಜಾಬಿಗರ ಪಾತ್ರವಿದೆ. ವಿಶೇಷವಾಗಿ, ಪಂಜಾಬ್‌ನ ಸಂಸ್ಕೃತಿ ಏನೆಂದರೆ, ಎಲ್ಲರೂ ಸುತ್ತಾ ಕೂತ್ಕೊಂಡು ಮಾತಾಡೋದು. ಹೀಗೆ ನಾಲ್ಕು ಜನರ ಮಧ್ಯೆ ಚರ್ಚೆಯಾಗುವ ವಿಚಾರ ಹತ್ತು ಜನರಿಗೆ, ನೂರು ಜನರಿಗೆ, ಸಾವಿರ ಜನರ ನಡುವೆ ವಿನಿಮಯ ಆಗುತ್ತದೆ. ಮಾತ್ರವಲ್ಲ, ಈ ರೀತಿಯ ಗುಂಪುಗಳಲ್ಲಿ ಒಬ್ಬ ಮಾತ್ರ ಒಂದು ವಿಚಾರ ಹೇಳಲ್ಲ, ಎಲ್ಲರೂ ಒಂದೊಂದು ರೀತಿಯ ವಿಚಾರ ಹೇಳುತ್ತಾರೆ. ಕೊರೊನಾ ವಿಚಾರದಲ್ಲೂ ಸರ್ಕಾರ ಒಂದು ಸೋಂಕಿನ ಸಮಯವನ್ನು ಬಳಸಿಕೊಂಡು, ರೈತರನ್ನ, ಕಾರ್ಮಿಕರನ್ನ ತುಳಿಯಲು ಮುಂದಾಗಿತ್ತು. ಅದನ್ನು ಪಂಜಾಬ್ ಜನರು ಅರ್ಥ ಮಾಡಿಕೊಂಡರು. ಹೀಗಾಗಿ, ಅವರೆಲ್ಲರೂ ಯಾವುದೇ ಸೋಂಕು ಇದ್ದರೂ ಪರವಾಗಿಲ್ಲ, ನಾವು ಕೋವಿಡ್‌ನಿಂದ ಬೇಕಿದ್ದರೂ ಸಾಯುತ್ತೇವೆ. ಆದರೆ, ಸರ್ಕಾರದ ದಮನದಿಂದ ಸಾಯುವುದಿಲ್ಲ ಎಂದು ರೈತರು ಗಟ್ಟಿ ನಿರ್ಧಾರ ತಳೆದರು. ಆ ನಿರ್ಧಾರದ ಗಟ್ಟಿತನ ಈ ಹೋರಾಟವನ್ನ ಒಂದು ವರ್ಷ ಎಳೆದು ತಂದಿದೆ. ಫ್ಯಾಸಿಸ್ಟ್ ಸರ್ಕಾರವನ್ನ ಮಣಿಸಿದೆ.

ಇದು ಸತ್ಯ ಮತ್ತು ಮಿಥ್ಯದ ನಡುವಿನ ಸಂಘರ್ಷ, ಆಳುವವರು ಮತ್ತು ದುಡಿಯುವವರ ನಡುವಿನ ಸಂಘರ್ಷ, ಬಂಡವಾಳಿಗರು ಮತ್ತು ಸ್ವಾಭಿಮಾನಿಗಳ ನಡುವಿನ ಸಂಘರ್ಷ… ಸತ್ಯದ ಪರವಾಗಿ ಹೋರಾಡುವುದು ನಮ್ಮ‌ ಹಕ್ಕು. ಆ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಕೆಲಸವನ್ನ ರಾಜ್ಯದ ಕಲಾವಿದರು, ವ್ಯಂಗ್ಯಚಿತ್ರಕಾರರು, ಸಂಗೀತಗಾರರು, ಕತೆಗಾರರು ಮಾಡುತ್ತಲೇ ಇದ್ದಾರೆ.

ಇದನ್ನೂ ಓದಿ:ಸಂಸತ್‌ ಅಧಿವೇಶನ: ಅನ್ನದಾತರಿಗಾಗಿ ಸೂರ್ಯೋದಯ ಎಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ಒಂದು ಸಣ್ಣ ವ್ಯತ್ಯಾಸ ಏನಂದರೆ, ಪಂಜಾಬಿಗರಿಗೆ ಸಂಘರ್ಷ ಹೊಸದಲ್ಲ.. ಅದು ತಲೆಮಾರುಗಳಿಂದ ಪಂಜಾಬಿಗರಿಗೆ ರಕ್ತದಲ್ಲೇ ಬಂದಿದೆ. ಭಗತ್ ಸಿಂಗ್ ಅಜ್ಜ ಆರಂಭಿಸಿದ ಪಗಡಿ ಸಮಾಜ ಜಟ್ಟ ಹೋರಾಟ(ಸತತ ಒಂಬತ್ತು ತಿಂಗಳ ಕಾಲ ನಡೆಯಿತು)ದಿಂದ ಹಿಡಿದು, ಇಂದಿನವರೆಗೂ ಹೋರಾಟದ ಕಿಚ್ಚು ಪಂಜಾಬಿಗರ ದೇಹದ ನರ-ನಾಡಿಗಳಲ್ಲಿ ತುಂಬಿದೆ. ಲಾಂಗ್ ಲೀವ್ ರೆವಲೂಷನ್ ಎಂಬುದನ್ನು ನಾವು ನಿರಂತರವಾಗಿ ಪಾಲಿಸುತ್ತಾ ಬಂದಿದ್ದೇವೆ.

ಯಾವಾಗ, ರೈತರು ಮಾಡು ಇಲ್ಲವೇ ಮಡಿ ಎಂಬ ರೀತಿಯಲ್ಲಿ ಬೀದಿಗಿದ್ದಾರೆ ಎಂದು ಜನರಿಗೆ ಅರ್ಥವಾಗುತ್ತದೋ, ಆಗ ಇಡೀ ರಾಜ್ಯವೇ ರೈತರೊಂದಿಗೆ ನಿಲ್ಲತ್ತದೆ. ನಾವೂ ಎಣಿಸಿರಲಿಲ್ಲ ಈ ಹೋರಾಟ ಈ ಮಟ್ಟಿಗಿನ ಯಶಸ್ಸನ್ನು ಕಾಣುತ್ತದೆ ಎಂದು. ಅಲ್ಲದೆ, ಹರಿಯಾಣ ಕೂಡ ಈ ಮಟ್ಟಿಗೆ ಮುನ್ನುಗ್ಗಿ ಬರುತ್ತದೆ ಎಂದೂ ಗೊತ್ತಿರಲಿಲ್ಲ. ಹರಿಯಾಣಿಗರಿಗೆ ಅವರದ್ದೇ ಆದ ಸಾಕಷ್ಟು ಸಮಸ್ಯೆಗಳಿವೆ.

ಆದರೆ, ಅವರೂ ನಮ್ಮ ಜೊತೆಗೂಡಿದರು. ಸಾಕಷ್ಟು ಬೆಂಬಲ ನೀಡಿದರು. ಹಾಲು, ಗೂಧಿ ಹಿಟ್ಟು ಸೇರಿದಂತೆ ದಿನ ಬಳಕೆಯ ಸಾಮಗ್ರಿಗಳನ್ನು ಯತೇಚ್ಚವಾಗಿ ರೈತ ಹೋರಾಟಕ್ಕೆ ನೀಡಿದರು. ಹರಿಯಾಣ ಗಡಿಯಲ್ಲಿ ಹರಿಯಾಣದ ಜನರು ಜೊತೆಗೂಡದಿದ್ದರೆ, ಪಂಜಾಬಿಗರು ದೆಹಲಿ ತಲುಪುವುದಗಲೀ, ದೆಹಲಿ ಚಲೋ ಆಗಲೀ ಈ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ. ಅವರು ಗಡಿಯಲ್ಲಿ ಪೊಲೀಸರನ್ನ ತಡೆದು ನಿಲ್ಲಿಸಿದ್ದೇ ಒಂದು ಮೈಲುಗಲ್ಲು, ಪಂಜಾಬ್-ಹರಿಯಾಣ ಅಣ್ಣ-ತಮ್ಮಂದಿರಿದ್ದಂತೆ. ಅವರು ಅಣ್ಣನಿಗೆ ಅಗತ್ಯದ ಸಮಯದಲ್ಲಿ ಜೊತೆಗೂಡಿದರು. ನಂತರ, ಉತ್ತರ ಪ್ರದೇಶ, ಬಿಹಾರ ಎಲ್ಲರೂ ಅದೇ ಕಿಚ್ವಿನೊಂದಿಗೆ ಸಾಥ್ ಕೊಟ್ಟರು.

ಇದನ್ನೂ ಓದಿ: ಬಿಜೆಪಿಯ ದುರಹಂಕಾರಕ್ಕಾಗಿಯು ರೈತ ಚಳುವಳಿ ನೆನಪಿನಲ್ಲಿ ಉಳಿಯುತ್ತದೆ: ಪ್ರಿಯಾಂಕಾ ಗಾಂಧಿ

ಪಂಜಾಬ್, ಹರಿಯಾಣ, ಯುಪಿ, ಬಿಹಾರಿ ಜನರಿಗೆ ಎಂಎಸ್‌ಪಿ ಬಗ್ಗೆ ಹೇಗೆ ತಿಳಿಸುವುದು ಎಂದು ಚಿಂತಿಸುವಾಗ ಯುಪಿ ಮತ್ತು ಬಿಹಾರದಲ್ಲಿ ರೈತರ ಮೇಲೆ ಅತಿ ಹೆಚ್ಚಾಗಿ ದಮನ-ಲೂಟಿ ನಡೆಯುತ್ತಿದೆ ಎಂದು ಅರ್ಥವಾಯಿತು. ಪಂಜಾಬ್, ಹರಿಯಾಣದಲ್ಲಿ ಒಂದು ಕ್ವಿಂಟಾಲ್ ಗೋಧಿಗೆ 1,900 ರೂ‌. ಕೊಟ್ಟರೆ, ಯುಪಿ ಮತ್ತು ಬಿಹಾರದಲ್ಲಿ ಕೇವಲ 900 ರೂ. ಕೊಡುತ್ತಿದ್ದಾರೆ. ಈ ಪ್ರಮಾಣದಲ್ಲಿ ಆ ಎರಡೂ ರಾಜ್ಯಗಳ ರೈತರನ್ನು ಲೂಟಿ ಮಾಡಲಾಗುತ್ತಿದೆ. ಎಲ್ಲಾ ಪಕ್ಷಗಳೂ ಅವರನ್ನ ಲೂಟಿ ಮಾಡಿವೆ, ಮಾಡುತ್ತಿವೆ.

ಇಷ್ಟು ದೊಡ್ಡ ಸಂಘರ್ಷ ಇಷ್ಟು ದಿನ ಮುಂದುವರೆಯುವುದರಲ್ಲಿ ಇಲ್ಲಿನ ನಾಯಕತ್ವದ ಪಾತ್ರ ತುಂಬಾ ಇದೆ. ನಮ್ಮ ಶತ್ರು ಯಾರು ಎಂದು ಗುರುತಿಸಿ, ಆ ಶತ್ರುಗಳು ಯಾವ ರೀತಿಯಲ್ಲಿ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂದು ಜನರಿಗೆ ತಿಳಿಸುವಲ್ಲಿ ಅವರ ಪಾತ್ರ ಭಾರೀ ಇದೆ. ಇಲ್ಲಿನ ಹೋರಾಟಗಳನ್ನು ಒಡೆದು, ಸಧೆ ಬಡಿಯುವುದು ಸರ್ಕಾರಗಳ ಮೊದಲ ಅಜೆಂಡಾ ಆಗಿರುತ್ತದೆ. ಅಂತಹ ಹುನ್ನಾರಕ್ಕೆ ಈ ಹೋರಾಟ ಬಲಿಯಾಗದಂತೆ ಮುನ್ನಡೆಸುವಲ್ಲಿ ರೈತ ನಾಯಕತ್ವ ಸಾಕಷ್ಟು ಶ್ರಮಿಸಿದೆ. ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ನಮ್ಮ ಮುಂದಿರುವ ಶತ್ರು ಈಗ ಹಿಂದೆ ಸರಿದಿರಬಹುದು, ಆದರೆ ಅವರು ಸಂಪೂರ್ಣವಾಗಿ ಹಿಂದೆ ಹೋಗುವುದಿಲ್ಲ. ಅವರನ್ನು ಮಣಿಸಲು ನಮ್ಮ ಹೋರಾಟ ಮುನ್ನಡೆಯುತ್ತಲೇ ಇರಬೇಕು. ಅಲ್ಲದೆ, ಭಾರತ WTO (ವಿಶ್ವ ವಾಣಿಜ್ಯ ಸಂಸ್ಥೆ), LPG (ಉದಾರೀಕರಣ, ಖಾಸಗೀಕರಣ, ಜಾಗತೀಕರಣ)ಯಿಂದ ಹೊರಬರಬೇಕು. ಅದೇ ನಮ್ಮ ಹೋರಟ ಮುಂದಿನ ಗುರಿ…ಈ ಗುರಿಯನ್ನು ಜಯಿಸಿದರೆ, ಭಾರತ ಗೆಲ್ಲುತ್ತದೆ.

  • ~ಸುರೀಂದರ್ ಸಿಂಗ್
    ಬಿಕೆಯು ಡೆಕೌಂದ (ಭಾರತ್ ಕಿಸಾನ್ ಯೂನಿಯನ್)

ಇದನ್ನೂ ಓದಿ: ರೈತರ ಆತ್ಮಹತ್ಯೆ: ವಾಸ್ತವದಿಂದ ದೂರವಿರುವ ಸರಕಾರದ ವರದಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...