HomeUncategorizedಸರೋವರ್ ಬೆಂಕೀಕೆರೆಯವರ ಸಣ್ಣ ಕಥೆ - “ಜೈ ಶ್ರೀರಾಮ್”

ಸರೋವರ್ ಬೆಂಕೀಕೆರೆಯವರ ಸಣ್ಣ ಕಥೆ – “ಜೈ ಶ್ರೀರಾಮ್”

- Advertisement -
- Advertisement -

“ಇಂಥ ಪರೀಕ್ಷೆ ಮಾಡ್ಲೇಬೇಕಿತ್ತಾ? ಬೆಂಕಿ ಸುಡದೇ ಇರಲು ಸಾಧ್ಯವಾ?” ಕೋಪ ಮತ್ತು ಬೇಸರದಿಂದ ಅಭಿಲಾಷ ಶೃತಿಯನ್ನು ಕೇಳಿದಳು. “ಏನ್ ಮಾಡೋಕೆ ಆಗುತ್ತೆ ನೀನೇ ಹೇಳು ಎಲ್ಲಾ ಆ ಅಗಸನಿಂದ ಆಗಿದ್ದು. ಅವನಿಗೆ ಇರುವಂತೆ ಬೇರೆಯವರಿಗೂ ಅನುಮಾನ ಇರುತ್ತೆ ಅಲ್ವ? ಹಾಗಾಗಿ ಈ ಅಗ್ನಿ ಪರೀಕ್ಷೆಯಂತೆ” ಉತ್ತರಿಸಿದಳು ಶೃತಿ.

ಸೀತೆಯ ಪಾವಿತ್ರತೆಯನ್ನು ಪರೀಕ್ಷೆ ಮಾಡಲು ಅಗ್ನಿಪರೀಕ್ಷೆಗೆ ಸಿದ್ಧತೆಗಳು ನಡೆದಿತ್ತು. ಊರಿನ ಜನರೆಲ್ಲಾ ಅಗ್ನಿ ಪರೀಕ್ಷೆ ನೋಡಲು ಸೇರಿದ್ದರು. ಅಭಿಲಾಷಳಿಗೆ ಕೋಪದಲ್ಲಿಯೇ ವಿಚಾರವೊಂದು ಹೊಳೆದಿತ್ತು, ಜನಜಾತ್ರೆಯ ಮಧ್ಯದಲ್ಲಿಯೇ ಕೂಗಿ ಹೇಳಿದಳು “ನಾನೇನು ಸೀತೆ ಅಲ್ಲ, ಎಲ್ಲಾನೂ ಒಪ್ಕಂಡು ಸುಮ್ನಿರೋಕೆ. ನನಗೂ ನನ್ನ ಗಂಡನ ಮೇಲೆ ಅನುಮಾನವಿದೆ. ಇದೇ ಅಗ್ನಿಯಲ್ಲಿ ನನ್ನ ಗಂಡನ ಪರೀಕ್ಷೆಯೂ ಆಗಲಿ” ಎಂದು ಕೂಗಿದಳು. ಸುತ್ತ ನಿಂತಿದ್ದ ಮಹಿಳೆಯರ ಮುಖ ನೋಡುತ್ತಾ ನಿಮ್ಮಲ್ಲಿ ಯಾರಿಗೂ ನಿಮ್ಮ ಗಂಡನ ಮೇಲೆ ಅನುಮಾನವಿಲ್ಲವೇ? ಎಂದು ಪ್ರಶ್ನೆ ಎಸೆದಳು. ಹಲವರು ಗಾಬರಿಯಲ್ಲಿ ಅಭಿಲಾಷಳ ಮುಖ ನೋಡುತ್ತಾ ಮೌನವಾಗಿ ನಿಂತುಬಿಟ್ಟರು, ಇನ್ನು ಕೆಲವರು ಯೋಚಿಸುತ್ತಾ ಗೊಂದಲದಲ್ಲಿದ್ದರು. ಸ್ವಲ್ಪ ದೂರದಲ್ಲೇ ನಿಂತಿದ್ದ ಅಭಿಲಾಷಳ ಗಂಡ ಮತ್ತು ಇತರ ಗಂಡಸರ ಗುಂಪು ಭಯಭೀತರಾಗಿದ್ದರು. ಅಭಿಲಾಷಳ ಸುತ್ತ ನಿಂತವರಲ್ಲಿ ಕೆಲವರು ಅವಳ ಪ್ರಶ್ನೆಗೆ “ಹೌದು ನಮಗೂ ಅನುಮಾನವಿದೆ” ಎಂದು ಹೇಳುತ್ತಿದ್ದಂತೆಯೇ ಗಂಡಸರ ಗುಂಪು ಇವರ ದನಿ ಕೇಳಿಸದ ರೀತಿಯಲ್ಲಿ ಜೋರಾಗಿ “ಜೈ ಶ್ರೀರಾಮ್” ಎಂದು ಘೋಷಣೆ ಹಾಕಲು ಶುರು ಮಾಡಿತು. ಜೈ ಶ್ರೀರಾಮ್ ಘೋಷಣೆಗೆ ದನಿಗೂಡಿಸುವ ಗಂಡಸರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಘೋಷಣೆ ಕೂಗಲು ಶುರು ಮಾಡಿ ಬರೀ ಎರಡು ನಿಮಿಷ ಮಾತ್ರವಾಗಿತ್ತು. ಒಂದು ಗುಂಪಿನಿಂದ ಶುರುವಾಗಿದ್ದು ಇದೀಗ ಸುಮಾರು 15 ಬೇರೆ ಬೇರೆ ಗುಂಪುಗಳಾಗಿದೆ. ಹೋಟೆಲ್, ಅಂಗಡಿ, ಮನೆಗಳಿಗೆ ನುಗ್ಗಿ ಜೈ ಶ್ರೀರಾಮ್ ಎಂದು ಕೂಗಲು ಒತ್ತಾಯಿಸುತ್ತಿದ್ದಾರೆ. ನೋಡನೋಡುತ್ತಿದ್ದಂತೆಯೇ ಘೋಷಣೆ ಕೂಗುತ್ತಿದ್ದವರ ಕೈಗಳಲ್ಲಿ ದೊಣ್ಣೆ, ಕಲ್ಲುಗಳು ಬಂದುಬಿಟ್ಟಿವೆ. ಜೈ ಶ್ರೀರಾಮ್ ಎಂದು ಕೂಗಲು ನಿರಾಕರಿಸುವವರಿಗೆ ‘ಧರ್ಮ’ದೇಟು ಹಾಕುತ್ತಿದ್ದಾರೆ. ಕ್ಷಣಮಾತ್ರದಲ್ಲಿ ಶುರುವಾಗಿದ್ದ ಈ ಗಲಭೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ಇದೇನಾಯಿತು ಎಂಬ ಅರಿವಿಲ್ಲದೆ ಆಘಾತಕ್ಕೊಳಗಾಗಿ ಏನು ಮಾಡುವುದೆಂದು ತಿಳಿಯದೆ ಎಲ್ಲವನ್ನೂ ನೋಡುತ್ತ ನಿಂತಿದ್ದ. ಈ ವ್ಯಕ್ತಿಯನ್ನು ಗಮನಿಸಿದ ಗುಂಪು ಈತನೆಡೆಗೆ ಓಡಿಬಂತು. “ಹೇಯ್ ಜೈ ಶ್ರೀರಾಮ್ ಹೇಳೋ” ಎಂದು ಗುಂಪಿನಿಂದ ಒಬ್ಬ ಗದರಿದ ಗೊಂದಲಕ್ಕೊಳಗಾದ ಆ ವ್ಯಕ್ತಿ ಗುಂಪಿನಲ್ಲಿ ಒಬ್ಬಾತ ಹಿಡಿದಿದ್ದ ದೊಣ್ಣೆಯನ್ನೇ ನೋಡುತ್ತಾ ನಿಂತ. ಗುಂಪಿನಿಂದ ಮತ್ತೊಬ್ಬ ಏನೋ ಸುಮ್ನೆ ನಿಂತಿದ್ದೀಯಾ, ಎಷ್ಟೋ ಧೈರ್ಯ ನಿನಗೆ, ಜೈ ಶ್ರೀರಾಮ್ ಹೇಳು ಎಂದು ಮುಂದಕ್ಕೆ ಬಂದ. ವ್ಯಕ್ತಿ ಇನ್ನೂ ಸುಮ್ಮನೇ ನಿಂತಿದ್ದ. ಇವನ್ಯಾರೋ ಸಾಬನೇ ಇರಬೇಕು ಕಣ್ರೋ ಅದಕ್ಕೆ ಬಾಯಿ ಬಿಡ್ತಿಲ್ಲ ಎಂದ ಇನ್ನೊಬ್ಬ “ಇಲ್ಲ, ಟೋಪಿ ಇಲ್ಲ ಗಡ್ಡ ಇಲ್ಲ, ಬಹುಶಃ ಬುದ್ಧಿಜೀವಿಯೋ, ವಿಚಾರವಾದಿಯೋ ಇರಬೇಕು ಬಿಲ್ಲು ಬಾಣ ಬೇರೆ ಇಟ್ಕೊಂಡ್ ಬಂದಿದ್ದಾನೆ, ಇಲ್ಲಿ ನಡಿಯೋ ಪವಿತ್ರವಾದ ಅಗ್ನಿಪರೀಕ್ಷೆಯನ್ನ ಕೆಡಿಸೋಕೆ ಬಂದಿರಬೇಕು. ಬಡಿರೋ ಇವ್ನಿಗೆ” ಎಂದು ಮಗದೊಬ್ಬ ಹೇಳುತ್ತಿದ್ದಂತೆಯೇ ಇಡೀ ಗುಂಪು ಥಳಿಸಲು ಶುರು ಮಾಡಿದರು. ಕಲ್ಲುದೊಣ್ಣೆಗಳಿಂದ ದಾಳಿ ಶುರುವಾಯಿತು. ದೊಡ್ಡ ಕಲ್ಲೊಂದು ಕಾಲಿನ ಮೇಲೆ ಎತ್ತಿ ಹಾಕಿದರು ಆ ವ್ಯಕ್ತಿಯ ಪಾದ ಜಜ್ಜಿಹೋಗಿತ್ತು.

ದೂರದಿಂದ ಇದನ್ನು ಗಮನಿಸಿದ ಮಹಿಳೆಯೊಬ್ಬಳು ಗಲಾಟೆ ನಡೆಯುತ್ತಿದ್ದ ಗುಂಪಿನತ್ತ ಓಡಿಬಂದಳು. ಅಯ್ಯೋ ಇವರು ನನ್ನ ಗಂಡ ಬಿಟ್ಟುಬಿಡಿ ಎಂದು ಗೋಳಾಡಿದಳು. ಗುಂಪು ಮಾತ್ರ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಲೇ ಥಳಿಸುತ್ತಿದ್ದರು. ಆಗ ಆ ಮಹಿಳೆ “ಅಯ್ಯೋ ಇವರೇ ಶ್ರೀರಾಮ ನನ್ನ ಗಂಡ, ನಾನು ಸೀತೆ. ನಿಮ್ಮ ಕಾಲಿಗೆ ಬೀಳ್ತೀನಿ ನನ್ನ ಗಂಡ ರಾಮನನ್ನು ಬಿಟ್ಟುಬಿಡಿ” ಎಂದು ಕೂಗಿದಳು. ಹೌದು ಅವರು ರಾಮನನ್ನೇ ಬಡಿಯುತ್ತಿದ್ದರು! ಎಲ್ಲರೂ ಗಾಬರಿಯಾಗಿ ನಿಂತುಬಿಟ್ಟರು. ಒಬ್ಬ ಮಾತ್ರ ಮೈಮೇಲೆ ದೇವರು ಬಂದವರಂತೆ ಜೈ ಶ್ರೀರಾಮ ಎಂದು ಅರಚಿಕೊಳ್ಳುತ್ತಾ ದೊಣ್ಣೆಯಿಂದ ರಾಮನಿಗೆ ಹೊಡೆಯುತ್ತಲೇ ಇದ್ದ. ಗುಂಪಿನವರು ಅವನನ್ನು ಎಳೆದು ಇವರೇ ಶ್ರೀರಾಮ ಬಿಡು ಎಂದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಅವನನ್ನ ಎಲ್ಲರೂ ಸೇರಿ ಎತ್ತಿಕೊಂಡು ನಡೆದರು. ಅವನು ಹುಚ್ಚು ಹಿಡಿದವನಂತೆ ಜೈ ಶ್ರೀರಾಮ್ ಎಂದು ಅರಚಿಕೊಳ್ಳುತ್ತಲೇಯಿದ್ದ. ತನ್ನ ಗುಂಪಿನ ಸದಸ್ಯರ ಬಟ್ಟೆಗಳನ್ನೆಲ್ಲಾ ಹರಿದುಹಾಕುತ್ತಿದ್ದ.

ದಾರಿಹೋಕರ ಸಹಾಯದಿಂದ ಸೀತೆ ರಾಮನನ್ನು ಆಸ್ಪತ್ರೆಗೆ ಸೇರಿಸಿದಳು ಇಲ್ಲಿ (ಭೂಲೋಕದಲ್ಲಿ) ಬದುಕುವುದು ಕಷ್ಟ, ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ವೈದ್ಯರು ಸಲಹೆ ನೀಡಿದರು. ಸೀತೆ ರಾಮನನ್ನು ಕೈಲಾಸಕ್ಕೆ ಕರೆದುಕೊಂಡುಹೋದಳು. ಇಂದಿಗೂ ಗುಂಪುಗಳು ಜೈ ಶ್ರೀರಾಮ್ ಎಂದು ರಾಮನ ಹೆಸರಲ್ಲಿ ನರಮಾನವರ ಮೇಲೆ ಹೊಡೆಯುವ ಒಂದೊಂದು ಏಟುಗಳು ಕೈಲಾಸದ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಮನ ಮೈ ಮೇಲೆ ಪವಾಡದ ರೀತಿಯಲ್ಲಿ ಬೀಳುತ್ತಿದೆ. ಹಾಗಾಗಿ ರಾಮ ಗುಣಮುಖವಾಗದೆ ಆಸ್ಪತ್ರೆಯಲ್ಲಿಯೇ ನರಳುತ್ತಿದ್ದಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...