HomeUncategorizedಸರೋವರ್ ಬೆಂಕೀಕೆರೆಯವರ ಸಣ್ಣ ಕಥೆ - “ಜೈ ಶ್ರೀರಾಮ್”

ಸರೋವರ್ ಬೆಂಕೀಕೆರೆಯವರ ಸಣ್ಣ ಕಥೆ – “ಜೈ ಶ್ರೀರಾಮ್”

- Advertisement -
- Advertisement -

“ಇಂಥ ಪರೀಕ್ಷೆ ಮಾಡ್ಲೇಬೇಕಿತ್ತಾ? ಬೆಂಕಿ ಸುಡದೇ ಇರಲು ಸಾಧ್ಯವಾ?” ಕೋಪ ಮತ್ತು ಬೇಸರದಿಂದ ಅಭಿಲಾಷ ಶೃತಿಯನ್ನು ಕೇಳಿದಳು. “ಏನ್ ಮಾಡೋಕೆ ಆಗುತ್ತೆ ನೀನೇ ಹೇಳು ಎಲ್ಲಾ ಆ ಅಗಸನಿಂದ ಆಗಿದ್ದು. ಅವನಿಗೆ ಇರುವಂತೆ ಬೇರೆಯವರಿಗೂ ಅನುಮಾನ ಇರುತ್ತೆ ಅಲ್ವ? ಹಾಗಾಗಿ ಈ ಅಗ್ನಿ ಪರೀಕ್ಷೆಯಂತೆ” ಉತ್ತರಿಸಿದಳು ಶೃತಿ.

ಸೀತೆಯ ಪಾವಿತ್ರತೆಯನ್ನು ಪರೀಕ್ಷೆ ಮಾಡಲು ಅಗ್ನಿಪರೀಕ್ಷೆಗೆ ಸಿದ್ಧತೆಗಳು ನಡೆದಿತ್ತು. ಊರಿನ ಜನರೆಲ್ಲಾ ಅಗ್ನಿ ಪರೀಕ್ಷೆ ನೋಡಲು ಸೇರಿದ್ದರು. ಅಭಿಲಾಷಳಿಗೆ ಕೋಪದಲ್ಲಿಯೇ ವಿಚಾರವೊಂದು ಹೊಳೆದಿತ್ತು, ಜನಜಾತ್ರೆಯ ಮಧ್ಯದಲ್ಲಿಯೇ ಕೂಗಿ ಹೇಳಿದಳು “ನಾನೇನು ಸೀತೆ ಅಲ್ಲ, ಎಲ್ಲಾನೂ ಒಪ್ಕಂಡು ಸುಮ್ನಿರೋಕೆ. ನನಗೂ ನನ್ನ ಗಂಡನ ಮೇಲೆ ಅನುಮಾನವಿದೆ. ಇದೇ ಅಗ್ನಿಯಲ್ಲಿ ನನ್ನ ಗಂಡನ ಪರೀಕ್ಷೆಯೂ ಆಗಲಿ” ಎಂದು ಕೂಗಿದಳು. ಸುತ್ತ ನಿಂತಿದ್ದ ಮಹಿಳೆಯರ ಮುಖ ನೋಡುತ್ತಾ ನಿಮ್ಮಲ್ಲಿ ಯಾರಿಗೂ ನಿಮ್ಮ ಗಂಡನ ಮೇಲೆ ಅನುಮಾನವಿಲ್ಲವೇ? ಎಂದು ಪ್ರಶ್ನೆ ಎಸೆದಳು. ಹಲವರು ಗಾಬರಿಯಲ್ಲಿ ಅಭಿಲಾಷಳ ಮುಖ ನೋಡುತ್ತಾ ಮೌನವಾಗಿ ನಿಂತುಬಿಟ್ಟರು, ಇನ್ನು ಕೆಲವರು ಯೋಚಿಸುತ್ತಾ ಗೊಂದಲದಲ್ಲಿದ್ದರು. ಸ್ವಲ್ಪ ದೂರದಲ್ಲೇ ನಿಂತಿದ್ದ ಅಭಿಲಾಷಳ ಗಂಡ ಮತ್ತು ಇತರ ಗಂಡಸರ ಗುಂಪು ಭಯಭೀತರಾಗಿದ್ದರು. ಅಭಿಲಾಷಳ ಸುತ್ತ ನಿಂತವರಲ್ಲಿ ಕೆಲವರು ಅವಳ ಪ್ರಶ್ನೆಗೆ “ಹೌದು ನಮಗೂ ಅನುಮಾನವಿದೆ” ಎಂದು ಹೇಳುತ್ತಿದ್ದಂತೆಯೇ ಗಂಡಸರ ಗುಂಪು ಇವರ ದನಿ ಕೇಳಿಸದ ರೀತಿಯಲ್ಲಿ ಜೋರಾಗಿ “ಜೈ ಶ್ರೀರಾಮ್” ಎಂದು ಘೋಷಣೆ ಹಾಕಲು ಶುರು ಮಾಡಿತು. ಜೈ ಶ್ರೀರಾಮ್ ಘೋಷಣೆಗೆ ದನಿಗೂಡಿಸುವ ಗಂಡಸರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಘೋಷಣೆ ಕೂಗಲು ಶುರು ಮಾಡಿ ಬರೀ ಎರಡು ನಿಮಿಷ ಮಾತ್ರವಾಗಿತ್ತು. ಒಂದು ಗುಂಪಿನಿಂದ ಶುರುವಾಗಿದ್ದು ಇದೀಗ ಸುಮಾರು 15 ಬೇರೆ ಬೇರೆ ಗುಂಪುಗಳಾಗಿದೆ. ಹೋಟೆಲ್, ಅಂಗಡಿ, ಮನೆಗಳಿಗೆ ನುಗ್ಗಿ ಜೈ ಶ್ರೀರಾಮ್ ಎಂದು ಕೂಗಲು ಒತ್ತಾಯಿಸುತ್ತಿದ್ದಾರೆ. ನೋಡನೋಡುತ್ತಿದ್ದಂತೆಯೇ ಘೋಷಣೆ ಕೂಗುತ್ತಿದ್ದವರ ಕೈಗಳಲ್ಲಿ ದೊಣ್ಣೆ, ಕಲ್ಲುಗಳು ಬಂದುಬಿಟ್ಟಿವೆ. ಜೈ ಶ್ರೀರಾಮ್ ಎಂದು ಕೂಗಲು ನಿರಾಕರಿಸುವವರಿಗೆ ‘ಧರ್ಮ’ದೇಟು ಹಾಕುತ್ತಿದ್ದಾರೆ. ಕ್ಷಣಮಾತ್ರದಲ್ಲಿ ಶುರುವಾಗಿದ್ದ ಈ ಗಲಭೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ಇದೇನಾಯಿತು ಎಂಬ ಅರಿವಿಲ್ಲದೆ ಆಘಾತಕ್ಕೊಳಗಾಗಿ ಏನು ಮಾಡುವುದೆಂದು ತಿಳಿಯದೆ ಎಲ್ಲವನ್ನೂ ನೋಡುತ್ತ ನಿಂತಿದ್ದ. ಈ ವ್ಯಕ್ತಿಯನ್ನು ಗಮನಿಸಿದ ಗುಂಪು ಈತನೆಡೆಗೆ ಓಡಿಬಂತು. “ಹೇಯ್ ಜೈ ಶ್ರೀರಾಮ್ ಹೇಳೋ” ಎಂದು ಗುಂಪಿನಿಂದ ಒಬ್ಬ ಗದರಿದ ಗೊಂದಲಕ್ಕೊಳಗಾದ ಆ ವ್ಯಕ್ತಿ ಗುಂಪಿನಲ್ಲಿ ಒಬ್ಬಾತ ಹಿಡಿದಿದ್ದ ದೊಣ್ಣೆಯನ್ನೇ ನೋಡುತ್ತಾ ನಿಂತ. ಗುಂಪಿನಿಂದ ಮತ್ತೊಬ್ಬ ಏನೋ ಸುಮ್ನೆ ನಿಂತಿದ್ದೀಯಾ, ಎಷ್ಟೋ ಧೈರ್ಯ ನಿನಗೆ, ಜೈ ಶ್ರೀರಾಮ್ ಹೇಳು ಎಂದು ಮುಂದಕ್ಕೆ ಬಂದ. ವ್ಯಕ್ತಿ ಇನ್ನೂ ಸುಮ್ಮನೇ ನಿಂತಿದ್ದ. ಇವನ್ಯಾರೋ ಸಾಬನೇ ಇರಬೇಕು ಕಣ್ರೋ ಅದಕ್ಕೆ ಬಾಯಿ ಬಿಡ್ತಿಲ್ಲ ಎಂದ ಇನ್ನೊಬ್ಬ “ಇಲ್ಲ, ಟೋಪಿ ಇಲ್ಲ ಗಡ್ಡ ಇಲ್ಲ, ಬಹುಶಃ ಬುದ್ಧಿಜೀವಿಯೋ, ವಿಚಾರವಾದಿಯೋ ಇರಬೇಕು ಬಿಲ್ಲು ಬಾಣ ಬೇರೆ ಇಟ್ಕೊಂಡ್ ಬಂದಿದ್ದಾನೆ, ಇಲ್ಲಿ ನಡಿಯೋ ಪವಿತ್ರವಾದ ಅಗ್ನಿಪರೀಕ್ಷೆಯನ್ನ ಕೆಡಿಸೋಕೆ ಬಂದಿರಬೇಕು. ಬಡಿರೋ ಇವ್ನಿಗೆ” ಎಂದು ಮಗದೊಬ್ಬ ಹೇಳುತ್ತಿದ್ದಂತೆಯೇ ಇಡೀ ಗುಂಪು ಥಳಿಸಲು ಶುರು ಮಾಡಿದರು. ಕಲ್ಲುದೊಣ್ಣೆಗಳಿಂದ ದಾಳಿ ಶುರುವಾಯಿತು. ದೊಡ್ಡ ಕಲ್ಲೊಂದು ಕಾಲಿನ ಮೇಲೆ ಎತ್ತಿ ಹಾಕಿದರು ಆ ವ್ಯಕ್ತಿಯ ಪಾದ ಜಜ್ಜಿಹೋಗಿತ್ತು.

ದೂರದಿಂದ ಇದನ್ನು ಗಮನಿಸಿದ ಮಹಿಳೆಯೊಬ್ಬಳು ಗಲಾಟೆ ನಡೆಯುತ್ತಿದ್ದ ಗುಂಪಿನತ್ತ ಓಡಿಬಂದಳು. ಅಯ್ಯೋ ಇವರು ನನ್ನ ಗಂಡ ಬಿಟ್ಟುಬಿಡಿ ಎಂದು ಗೋಳಾಡಿದಳು. ಗುಂಪು ಮಾತ್ರ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಲೇ ಥಳಿಸುತ್ತಿದ್ದರು. ಆಗ ಆ ಮಹಿಳೆ “ಅಯ್ಯೋ ಇವರೇ ಶ್ರೀರಾಮ ನನ್ನ ಗಂಡ, ನಾನು ಸೀತೆ. ನಿಮ್ಮ ಕಾಲಿಗೆ ಬೀಳ್ತೀನಿ ನನ್ನ ಗಂಡ ರಾಮನನ್ನು ಬಿಟ್ಟುಬಿಡಿ” ಎಂದು ಕೂಗಿದಳು. ಹೌದು ಅವರು ರಾಮನನ್ನೇ ಬಡಿಯುತ್ತಿದ್ದರು! ಎಲ್ಲರೂ ಗಾಬರಿಯಾಗಿ ನಿಂತುಬಿಟ್ಟರು. ಒಬ್ಬ ಮಾತ್ರ ಮೈಮೇಲೆ ದೇವರು ಬಂದವರಂತೆ ಜೈ ಶ್ರೀರಾಮ ಎಂದು ಅರಚಿಕೊಳ್ಳುತ್ತಾ ದೊಣ್ಣೆಯಿಂದ ರಾಮನಿಗೆ ಹೊಡೆಯುತ್ತಲೇ ಇದ್ದ. ಗುಂಪಿನವರು ಅವನನ್ನು ಎಳೆದು ಇವರೇ ಶ್ರೀರಾಮ ಬಿಡು ಎಂದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಅವನನ್ನ ಎಲ್ಲರೂ ಸೇರಿ ಎತ್ತಿಕೊಂಡು ನಡೆದರು. ಅವನು ಹುಚ್ಚು ಹಿಡಿದವನಂತೆ ಜೈ ಶ್ರೀರಾಮ್ ಎಂದು ಅರಚಿಕೊಳ್ಳುತ್ತಲೇಯಿದ್ದ. ತನ್ನ ಗುಂಪಿನ ಸದಸ್ಯರ ಬಟ್ಟೆಗಳನ್ನೆಲ್ಲಾ ಹರಿದುಹಾಕುತ್ತಿದ್ದ.

ದಾರಿಹೋಕರ ಸಹಾಯದಿಂದ ಸೀತೆ ರಾಮನನ್ನು ಆಸ್ಪತ್ರೆಗೆ ಸೇರಿಸಿದಳು ಇಲ್ಲಿ (ಭೂಲೋಕದಲ್ಲಿ) ಬದುಕುವುದು ಕಷ್ಟ, ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ವೈದ್ಯರು ಸಲಹೆ ನೀಡಿದರು. ಸೀತೆ ರಾಮನನ್ನು ಕೈಲಾಸಕ್ಕೆ ಕರೆದುಕೊಂಡುಹೋದಳು. ಇಂದಿಗೂ ಗುಂಪುಗಳು ಜೈ ಶ್ರೀರಾಮ್ ಎಂದು ರಾಮನ ಹೆಸರಲ್ಲಿ ನರಮಾನವರ ಮೇಲೆ ಹೊಡೆಯುವ ಒಂದೊಂದು ಏಟುಗಳು ಕೈಲಾಸದ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಮನ ಮೈ ಮೇಲೆ ಪವಾಡದ ರೀತಿಯಲ್ಲಿ ಬೀಳುತ್ತಿದೆ. ಹಾಗಾಗಿ ರಾಮ ಗುಣಮುಖವಾಗದೆ ಆಸ್ಪತ್ರೆಯಲ್ಲಿಯೇ ನರಳುತ್ತಿದ್ದಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...