Homeಕರ್ನಾಟಕವೈರಲ್‌ ಪೋಸ್ಟ್‌: ಕಣ್ಣಲ್ಲಿ ನೀರು ತರಿಸಿದ ನೆರೆಹೊರೆಯವರಿಗೆ ಜಲೀಲ್ ಮುಕ್ರಿ ಬರೆದ ಭಾವನಾತ್ಮಕ ಪತ್ರ...

ವೈರಲ್‌ ಪೋಸ್ಟ್‌: ಕಣ್ಣಲ್ಲಿ ನೀರು ತರಿಸಿದ ನೆರೆಹೊರೆಯವರಿಗೆ ಜಲೀಲ್ ಮುಕ್ರಿ ಬರೆದ ಭಾವನಾತ್ಮಕ ಪತ್ರ…

- Advertisement -
- Advertisement -

ನೆರೆಮನೆಯ ಶಾಂತಮ್ಮ, ಎದುರು ಮನೆ ಅಣ್ಣು ಅಣ್ಣ, ಹಿಂಬದಿ ಮನೆ ಪೊರ್ಬುಲೇ… ನಮಸ್ಕಾರ…

ಮುಸಲ್ಮಾನರೆಂಬ ಏಕೈಕ ಕಾರಣಕ್ಕಾಗಿ ನಮ್ಮನ್ನು ದೇಶದಿಂದ ಹೊರ ಹಾಕುವ ಅಥವಾ ಡಿಟೆನ್ಷನ್ ಸೆಂಟರ್ ಗೆ ಹಾಕುವ ಹುನ್ನಾರ ನಡೀತಾ ಇರುವ ಬಗ್ಗೆ ನಿಮಗೆ ತಿಳಿದಿರಬಹುದು. ಇದರಿಂದ ಮುಸಲ್ಮಾನರಿಗೆ, ಹಿಂದುಗಳಿಗೆ ಏನೂ ಆಗುವುದಿಲ್ಲವೆಂದು ನಿಮ್ಮನ್ನು ನಂಬಿಸಿರಬಹುದು. ನೀವು ನೋಟ್ ಬ್ಯಾನ್, ಜಿಎಸ್ಟಿ, ಕಪ್ಪು ಹಣದಂತೆ ಇದನ್ನು ನಂಬಿರಲೂ ಬಹುದು. ಪರವಾಗಿಲ್ಲ ನಾನು ಹೋಗಲು ಸಿದ್ದನಿದ್ದೇನೆ. ಆದರೆ ನೀವು ನನ್ನನ್ನು ಹೋಗು ಎಂದರೆ ಮಾತ್ರ ಮರು ಮಾತಿಲ್ಲದೆ ನಿಮಗೆ ನಾನಿಲ್ಲದೆ ಸಂತೋಷ ,ನೆಮ್ಮದಿ ಮತ್ತಷ್ಟು ಹೆಚ್ಚು ಸಿಗುವುದಾದರೆ ಹೋಗಲು ಸಿದ್ದ. ಇದುವರೆಗೂ ಒಂದೇ ತಂದೆ ತಾಯಿಯ ಮಕ್ಕಳಂತೆ ಬದುಕಿದ್ದೇವೆ. ಸುಖ ದುಃಖ ಸಂತೋಷ ಸಂಭ್ರಮ ಹಂಚಿದ್ದೇವೆ. ನನ್ನ ನಿರ್ಗಮನದಿಂದ ನಿಮಗೆ ಮತ್ತಷ್ಟು ಸಂತೋಷ ಸಂಭ್ರಮ ಸಿಗುವುದಾದರೆ ಅದಕ್ಕಿಂತ ದೊಡ್ಡ ಪುಣ್ಯ ಮತ್ತೇನಿದೆ.

ಆದರೆ ಕುರ್ಚಿಗಾಗಿ, ಅಧಿಕಾರಕ್ಕಾಗಿ, ರಾಜಕೀಯದವರು ನನ್ನನ್ನು ಹೋಗಲು ಹೇಳಿದರೆ ಅದನ್ನು ಸ್ವೀಕರಿಸಲು ತಯಾರಿಲ್ಲ. ದೇಶದಲ್ಲಿ ಬದುಕಲು ಬಿಡದಿದ್ದರೂ ಸತ್ತು ದೇಶದ ಋಣ ತೀರಿಸುವೆ.
ನಿಮ್ಮೊಂದಿಗೆ ದ್ವೇಷ ಮಾಡಿ, ಪರಸ್ಪರ ನಾವು ವಿಭಜನೆಗೊಂಡು ಹೋಗಲು ನಾನು ಬಿಲ್ಕುಲ್ ಒಪ್ಪಲಾರೆ….

ನೀವು ಪ್ರೀತಿ ಪೂರ್ವಕ ಹೋಗು ಎಂದರೆ ಆ ಕ್ಷಣದಿಂದ ನಾನು ನಿಮ್ಮಿಂದ ದೂರ ಕಾಣದೂರಿಗೆ ಹೋಗಲು ತಯಾರಿದ್ದೇನೆ. ಜತೆ ಜತೆಯಲ್ಲಿ ಆಡಿ, ಹಾಡಿ ಬೆಳೆದ ನಾನು ಇಷ್ಟಾದರೂ ತ್ಯಾಗ ಮಾಡದಿದ್ದರೆ ನಾನು ಒಬ್ಬ ಮನುಷ್ಯನಾ?..

ಇನ್ನು ಪೌರತ್ವ ಕಾಯಿದೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಪದೇ ಪದೇ ಮನವರಿಕೆ ಮಾಡಿಯಾರು. ಆದರೆ ದೇವರ ಮೇಲೆ ಆಣೆ ಹಾಕಿ ಹೇಳುತ್ತೇನೆ ಇದರಿಂದ ನಮ್ಮ ನಡುವಿನ ಪ್ರೀತಿ, ವಾತ್ಸಲ್ಯ, ಸೌಹಾರ್ದ ಹಾಳಾಗುವುದಂತೂ ಖಂಡಿತಾ. ರಾಜಕೀಯ ಪಕ್ಷದವರಿಗೆ ಬೇಕಾದದ್ದು ಕೂಡ ಇದೆ. ಕಳೆದ ಹಲವು ದಶಕಗಳಿಂದ ನಾವು ಅನುಭವಿಸುತ್ತಾ ಬಂದಿದ್ದೇವೆ. ನಿಜ ತಾನೇ..

ಹುಟ್ಟಿದ ಮೇಲೆ ಸಾಯುವುದು ಶತಸಿದ್ದ. ಆದರೆ ಎಲ್ಲಿ ಹುಟ್ಟಬೇಕು, ಯಾವ ತಾಯಿಯ ಗರ್ಭದಲ್ಲಿ ಹುಟ್ಟಬೇಕು, ಯಾವ ಧರ್ಮದಲ್ಲಿ ಹುಟ್ಟಬೇಕು ಹಾಗೆಯೇ ಎಲ್ಲಿ ಸಾಯಬೇಕು, ಯಾವಾಗ ಸಾಯಬೇಕು ನಾವು ತೀರ್ಮಾನಿಸಲಿಲ್ಲ. ತೀರ್ಮಾನಿಸುವ ಹಕ್ಕು ನಮಗಿಲ್ಲ. ಅದು ದೇವನ ಇಚ್ಚೆ. ಅವನ ತೀರ್ಮಾನ. ಧರ್ಮಗಳು ಯಾವುದೇ ಇರಲಿ ಮನುಷ್ಯ ಧರ್ಮ ಮೊದಲು. ಆದರೆ ಬರಬರುತ್ತಾ ಸ್ವಾರ್ಥ ರಾಜಕಾರಣಿಗಳ ಮಂಕು ಮರಳು ಮಾತಿಗೆ ಬಲಿಯಾದೆವು. ಹರಕೆಯ ಕುರಿಯಾದೆವು. ನೂರಾರು ಘಟನೆಗಳು ಪುನರಾವರ್ತಿಸಿಯೂ ನಾವು ಮರಳಿ ಮನುಷ್ಯ ಧರ್ಮದತ್ತ, ಮನುಜ ಮತದತ್ತ ಮರಳಲಿಲ್ಲ. ಮರಳಲಾರದಷ್ಟು ದೂರ ನಾವು ಸಾಗಿ ಆಗಿದೆ.. ಏನೇ ಇರಲಿ ನಿಮ್ಮ ಪ್ರೀತಿ, ಸಹಕಾರ, ಆರ್ಥಿಕ ಸಹಾಯ, ನಿಮ್ಮ ಮಮತೆ ಎಂದೂ ಮರೆಯಲಾಗದು.

ಅದರ ಋಣ ತೀರಿಸಲೂ ಆಗದು. ನೀವು ಜಾತಿ ಧರ್ಮವನ್ನು ನೋಡದೆ ಜತೆ ಜತೆಯಾಗಿ ಒಂದೇ ಮನೆಯ ಕುಟುಂಬವಾಗಿ ಬದುಕಿದ ದಿನಗಳು ಮುಂದೆ ಮರೀಚಿಕೆಯಷ್ಟೇ. ಮತ್ತೊಮ್ಮೆ ನೀನು ಇಲ್ಲಿಂದ ಹೋಗು ಎಂದರೆ ಮಾತನಾಡದೇ ಉಟ್ಟ ಉಡುಗೆಯಲ್ಲಿ ಹೋಗಲು ನಾನು ತಯಾರು… ಆದರೆ ಸ್ವಾರ್ಥ ರಾಜಕಾರಣಿಗಳು ಹೇಳಿದರೆ ಬದುಕಲಾಗದಿದ್ದರೆ ಸಾಯಲು ನಾನು ತಯಾರು. ಬೀತಿಯಿಲ್ಲ,ಭಯವಿಲ್ಲ, ದೇಶವೇನು ಒಂದು ದಿನ ದೇಹವನ್ನೇ ಬಿಟ್ಟು ಹೋಗುವವರು…

ಅಂದು ನಾವು ನೆಟ್ಟು ಪೋಷಿಸಿದ ಸೌಹಾರ್ದ ಗಿಡ ಇಂದು ಮರವಾಗಿದೆ. ಇಂದು ಕಟುಕರು ಮರದ ಬುಡವ ಕತ್ತರಿಸಲು ಬಂದಿದ್ದಾರೆ. ಹೃದಯ ತುಂಡಾಗಿದೆ. ಮನಸ್ಸು ಮಲಿನಲಾಗಿದೆ..

ಸಂಜೆ ಆದಾಗ ಕಡಲಲ್ಲಿ ರವಿ ಮರೆಯಾದಂತೆ ನಿಮಗಾಗಿ ನಿಮ್ಮ ನೆನಪಲ್ಲಿ ನಾನೂ ಮರೆಯಾಗುತ್ತೇನೆ. ಕಡಲ ತೆರೆ ಶಾಂತವಾಗಿ ಸದಾ ನರ್ತಿಸುತ್ತಿರಲಿ. ಕೋಮುವಾದದ ಸುನಾಮಿಯಲ್ಲಿ ದೇಶ ಬರ್ಬಾದ್ ಆಗದಿರಲಿ. ಇದೇ ನನ್ನ ಪ್ರಾರ್ಥನೆ, ಇದೇ ನನ್ನ ಹಾರೈಕೆ. ಕೊನೆಗೂ ಒಂದು ವಿನಂತಿ…. ನನ್ನದು ಎನ್ನುವ ದೇಶದಲ್ಲಿ ನನ್ನ ಪುಟ್ಟ ಅರಮನೆಯೊಂದಿದೆ. ನಿಮಗೆ ಅಗತ್ಯವಿಲ್ಲದಿದ್ದರೆ ಅದನ್ನು ಬಡಬಗ್ಗರಿಗೆ, ಅಲೆಮಾರಿಗಳಿಗೆ, ರೋಡ್ ಸೈಡಲ್ಲಿ ಮಲಗುವವರಿಗೆ, ದರಿದ್ರರಿಗೆ ನೀಡಿಬಿಡಿ.

ಪ್ರೀತಿ ಸದಾ ಇರಲಿ.
ಜಲೀಲ್ ಮುಕ್ರಿ.

(ಜಲೀಲ್‌ ಮುಕ್ರಿಯವರ ಫೇಸ್‌ಬುಕ್‌ ಗೋಡೆಯಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...