Homeಕರ್ನಾಟಕವೈರಲ್‌ ಪೋಸ್ಟ್‌: ಕಣ್ಣಲ್ಲಿ ನೀರು ತರಿಸಿದ ನೆರೆಹೊರೆಯವರಿಗೆ ಜಲೀಲ್ ಮುಕ್ರಿ ಬರೆದ ಭಾವನಾತ್ಮಕ ಪತ್ರ...

ವೈರಲ್‌ ಪೋಸ್ಟ್‌: ಕಣ್ಣಲ್ಲಿ ನೀರು ತರಿಸಿದ ನೆರೆಹೊರೆಯವರಿಗೆ ಜಲೀಲ್ ಮುಕ್ರಿ ಬರೆದ ಭಾವನಾತ್ಮಕ ಪತ್ರ…

- Advertisement -
- Advertisement -

ನೆರೆಮನೆಯ ಶಾಂತಮ್ಮ, ಎದುರು ಮನೆ ಅಣ್ಣು ಅಣ್ಣ, ಹಿಂಬದಿ ಮನೆ ಪೊರ್ಬುಲೇ… ನಮಸ್ಕಾರ…

ಮುಸಲ್ಮಾನರೆಂಬ ಏಕೈಕ ಕಾರಣಕ್ಕಾಗಿ ನಮ್ಮನ್ನು ದೇಶದಿಂದ ಹೊರ ಹಾಕುವ ಅಥವಾ ಡಿಟೆನ್ಷನ್ ಸೆಂಟರ್ ಗೆ ಹಾಕುವ ಹುನ್ನಾರ ನಡೀತಾ ಇರುವ ಬಗ್ಗೆ ನಿಮಗೆ ತಿಳಿದಿರಬಹುದು. ಇದರಿಂದ ಮುಸಲ್ಮಾನರಿಗೆ, ಹಿಂದುಗಳಿಗೆ ಏನೂ ಆಗುವುದಿಲ್ಲವೆಂದು ನಿಮ್ಮನ್ನು ನಂಬಿಸಿರಬಹುದು. ನೀವು ನೋಟ್ ಬ್ಯಾನ್, ಜಿಎಸ್ಟಿ, ಕಪ್ಪು ಹಣದಂತೆ ಇದನ್ನು ನಂಬಿರಲೂ ಬಹುದು. ಪರವಾಗಿಲ್ಲ ನಾನು ಹೋಗಲು ಸಿದ್ದನಿದ್ದೇನೆ. ಆದರೆ ನೀವು ನನ್ನನ್ನು ಹೋಗು ಎಂದರೆ ಮಾತ್ರ ಮರು ಮಾತಿಲ್ಲದೆ ನಿಮಗೆ ನಾನಿಲ್ಲದೆ ಸಂತೋಷ ,ನೆಮ್ಮದಿ ಮತ್ತಷ್ಟು ಹೆಚ್ಚು ಸಿಗುವುದಾದರೆ ಹೋಗಲು ಸಿದ್ದ. ಇದುವರೆಗೂ ಒಂದೇ ತಂದೆ ತಾಯಿಯ ಮಕ್ಕಳಂತೆ ಬದುಕಿದ್ದೇವೆ. ಸುಖ ದುಃಖ ಸಂತೋಷ ಸಂಭ್ರಮ ಹಂಚಿದ್ದೇವೆ. ನನ್ನ ನಿರ್ಗಮನದಿಂದ ನಿಮಗೆ ಮತ್ತಷ್ಟು ಸಂತೋಷ ಸಂಭ್ರಮ ಸಿಗುವುದಾದರೆ ಅದಕ್ಕಿಂತ ದೊಡ್ಡ ಪುಣ್ಯ ಮತ್ತೇನಿದೆ.

ಆದರೆ ಕುರ್ಚಿಗಾಗಿ, ಅಧಿಕಾರಕ್ಕಾಗಿ, ರಾಜಕೀಯದವರು ನನ್ನನ್ನು ಹೋಗಲು ಹೇಳಿದರೆ ಅದನ್ನು ಸ್ವೀಕರಿಸಲು ತಯಾರಿಲ್ಲ. ದೇಶದಲ್ಲಿ ಬದುಕಲು ಬಿಡದಿದ್ದರೂ ಸತ್ತು ದೇಶದ ಋಣ ತೀರಿಸುವೆ.
ನಿಮ್ಮೊಂದಿಗೆ ದ್ವೇಷ ಮಾಡಿ, ಪರಸ್ಪರ ನಾವು ವಿಭಜನೆಗೊಂಡು ಹೋಗಲು ನಾನು ಬಿಲ್ಕುಲ್ ಒಪ್ಪಲಾರೆ….

ನೀವು ಪ್ರೀತಿ ಪೂರ್ವಕ ಹೋಗು ಎಂದರೆ ಆ ಕ್ಷಣದಿಂದ ನಾನು ನಿಮ್ಮಿಂದ ದೂರ ಕಾಣದೂರಿಗೆ ಹೋಗಲು ತಯಾರಿದ್ದೇನೆ. ಜತೆ ಜತೆಯಲ್ಲಿ ಆಡಿ, ಹಾಡಿ ಬೆಳೆದ ನಾನು ಇಷ್ಟಾದರೂ ತ್ಯಾಗ ಮಾಡದಿದ್ದರೆ ನಾನು ಒಬ್ಬ ಮನುಷ್ಯನಾ?..

ಇನ್ನು ಪೌರತ್ವ ಕಾಯಿದೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಪದೇ ಪದೇ ಮನವರಿಕೆ ಮಾಡಿಯಾರು. ಆದರೆ ದೇವರ ಮೇಲೆ ಆಣೆ ಹಾಕಿ ಹೇಳುತ್ತೇನೆ ಇದರಿಂದ ನಮ್ಮ ನಡುವಿನ ಪ್ರೀತಿ, ವಾತ್ಸಲ್ಯ, ಸೌಹಾರ್ದ ಹಾಳಾಗುವುದಂತೂ ಖಂಡಿತಾ. ರಾಜಕೀಯ ಪಕ್ಷದವರಿಗೆ ಬೇಕಾದದ್ದು ಕೂಡ ಇದೆ. ಕಳೆದ ಹಲವು ದಶಕಗಳಿಂದ ನಾವು ಅನುಭವಿಸುತ್ತಾ ಬಂದಿದ್ದೇವೆ. ನಿಜ ತಾನೇ..

ಹುಟ್ಟಿದ ಮೇಲೆ ಸಾಯುವುದು ಶತಸಿದ್ದ. ಆದರೆ ಎಲ್ಲಿ ಹುಟ್ಟಬೇಕು, ಯಾವ ತಾಯಿಯ ಗರ್ಭದಲ್ಲಿ ಹುಟ್ಟಬೇಕು, ಯಾವ ಧರ್ಮದಲ್ಲಿ ಹುಟ್ಟಬೇಕು ಹಾಗೆಯೇ ಎಲ್ಲಿ ಸಾಯಬೇಕು, ಯಾವಾಗ ಸಾಯಬೇಕು ನಾವು ತೀರ್ಮಾನಿಸಲಿಲ್ಲ. ತೀರ್ಮಾನಿಸುವ ಹಕ್ಕು ನಮಗಿಲ್ಲ. ಅದು ದೇವನ ಇಚ್ಚೆ. ಅವನ ತೀರ್ಮಾನ. ಧರ್ಮಗಳು ಯಾವುದೇ ಇರಲಿ ಮನುಷ್ಯ ಧರ್ಮ ಮೊದಲು. ಆದರೆ ಬರಬರುತ್ತಾ ಸ್ವಾರ್ಥ ರಾಜಕಾರಣಿಗಳ ಮಂಕು ಮರಳು ಮಾತಿಗೆ ಬಲಿಯಾದೆವು. ಹರಕೆಯ ಕುರಿಯಾದೆವು. ನೂರಾರು ಘಟನೆಗಳು ಪುನರಾವರ್ತಿಸಿಯೂ ನಾವು ಮರಳಿ ಮನುಷ್ಯ ಧರ್ಮದತ್ತ, ಮನುಜ ಮತದತ್ತ ಮರಳಲಿಲ್ಲ. ಮರಳಲಾರದಷ್ಟು ದೂರ ನಾವು ಸಾಗಿ ಆಗಿದೆ.. ಏನೇ ಇರಲಿ ನಿಮ್ಮ ಪ್ರೀತಿ, ಸಹಕಾರ, ಆರ್ಥಿಕ ಸಹಾಯ, ನಿಮ್ಮ ಮಮತೆ ಎಂದೂ ಮರೆಯಲಾಗದು.

ಅದರ ಋಣ ತೀರಿಸಲೂ ಆಗದು. ನೀವು ಜಾತಿ ಧರ್ಮವನ್ನು ನೋಡದೆ ಜತೆ ಜತೆಯಾಗಿ ಒಂದೇ ಮನೆಯ ಕುಟುಂಬವಾಗಿ ಬದುಕಿದ ದಿನಗಳು ಮುಂದೆ ಮರೀಚಿಕೆಯಷ್ಟೇ. ಮತ್ತೊಮ್ಮೆ ನೀನು ಇಲ್ಲಿಂದ ಹೋಗು ಎಂದರೆ ಮಾತನಾಡದೇ ಉಟ್ಟ ಉಡುಗೆಯಲ್ಲಿ ಹೋಗಲು ನಾನು ತಯಾರು… ಆದರೆ ಸ್ವಾರ್ಥ ರಾಜಕಾರಣಿಗಳು ಹೇಳಿದರೆ ಬದುಕಲಾಗದಿದ್ದರೆ ಸಾಯಲು ನಾನು ತಯಾರು. ಬೀತಿಯಿಲ್ಲ,ಭಯವಿಲ್ಲ, ದೇಶವೇನು ಒಂದು ದಿನ ದೇಹವನ್ನೇ ಬಿಟ್ಟು ಹೋಗುವವರು…

ಅಂದು ನಾವು ನೆಟ್ಟು ಪೋಷಿಸಿದ ಸೌಹಾರ್ದ ಗಿಡ ಇಂದು ಮರವಾಗಿದೆ. ಇಂದು ಕಟುಕರು ಮರದ ಬುಡವ ಕತ್ತರಿಸಲು ಬಂದಿದ್ದಾರೆ. ಹೃದಯ ತುಂಡಾಗಿದೆ. ಮನಸ್ಸು ಮಲಿನಲಾಗಿದೆ..

ಸಂಜೆ ಆದಾಗ ಕಡಲಲ್ಲಿ ರವಿ ಮರೆಯಾದಂತೆ ನಿಮಗಾಗಿ ನಿಮ್ಮ ನೆನಪಲ್ಲಿ ನಾನೂ ಮರೆಯಾಗುತ್ತೇನೆ. ಕಡಲ ತೆರೆ ಶಾಂತವಾಗಿ ಸದಾ ನರ್ತಿಸುತ್ತಿರಲಿ. ಕೋಮುವಾದದ ಸುನಾಮಿಯಲ್ಲಿ ದೇಶ ಬರ್ಬಾದ್ ಆಗದಿರಲಿ. ಇದೇ ನನ್ನ ಪ್ರಾರ್ಥನೆ, ಇದೇ ನನ್ನ ಹಾರೈಕೆ. ಕೊನೆಗೂ ಒಂದು ವಿನಂತಿ…. ನನ್ನದು ಎನ್ನುವ ದೇಶದಲ್ಲಿ ನನ್ನ ಪುಟ್ಟ ಅರಮನೆಯೊಂದಿದೆ. ನಿಮಗೆ ಅಗತ್ಯವಿಲ್ಲದಿದ್ದರೆ ಅದನ್ನು ಬಡಬಗ್ಗರಿಗೆ, ಅಲೆಮಾರಿಗಳಿಗೆ, ರೋಡ್ ಸೈಡಲ್ಲಿ ಮಲಗುವವರಿಗೆ, ದರಿದ್ರರಿಗೆ ನೀಡಿಬಿಡಿ.

ಪ್ರೀತಿ ಸದಾ ಇರಲಿ.
ಜಲೀಲ್ ಮುಕ್ರಿ.

(ಜಲೀಲ್‌ ಮುಕ್ರಿಯವರ ಫೇಸ್‌ಬುಕ್‌ ಗೋಡೆಯಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...