Homeಸಾಮಾಜಿಕ20 ಕೋಟಿ ಆ್ಯಂಬಿಯೆಂಟ್ ಎಂಜಲಿಗೆ ಜೊಲ್ಲು ಸುರಿಸಿದ ಬಿಲಿಯನೇರ್ ಜನಾರೆಡ್ಡಿ!!

20 ಕೋಟಿ ಆ್ಯಂಬಿಯೆಂಟ್ ಎಂಜಲಿಗೆ ಜೊಲ್ಲು ಸುರಿಸಿದ ಬಿಲಿಯನೇರ್ ಜನಾರೆಡ್ಡಿ!!

- Advertisement -
- Advertisement -

ಆ್ಯಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿಗೆ ಶರಣಾಗುವ ಮೊದಲು ಸತ್ಯ ಹರಿಶ್ಚಂದ್ರನಂತೆ ವ್ಯಾಟ್ಸಾಪ್ ಸಂದೇಶ ಹರಿಬಿಟ್ಟ ಗಾಲಿ ಜನಾರ್ಧನ ರೆಡ್ಡಿ, ‘ನನ್ನದು ಕೊಡುವ ಕೈಯೇ ಹೊರತು ಬೇಡುವ ಕೈಯಲ್ಲ.. ನಾನು ತಲೆ ಮರೆಸಿಕೊಂಡಿದ್ದೆÃನೆಂಬ ಮಾಧ್ಯಮಗಳ ವರದಿ ನೋಡಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ’ ಎಂದು ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತ, ಮಾಧ್ಯಮಗಳನ್ನೆÃ ಗೇಲಿ ಮಾಡಿದರು. ಆದರೆ ಅಂದು ನಗುತ್ತಲೇ ಬಿಕ್ಕಿಬಿಕ್ಕಿ ಅತ್ತಿದ್ದು ಈತನಿಂದ ಅವ್ಯಾಹತವಾಗಿ ಲೂಟಿಗೊಳಗಾಗಿ, ಅವಶೇಷಗಳಂತಾಗಿರುವ ಬಳ್ಳಾರಿ, ಆಂಧ್ರದ ಕಬ್ಬಿಣದ ಅದಿರು ಪ್ರದೇಶಗಳು.
ಸದ್ಯ ಜೈಲು ಪಾಲಾಗಿರುವ ರೆಡ್ಡಿ ಬರೀ ನೈಸರ್ಗಿಕ ಸಂಪತ್ತಿನ ದರೋಡೆಕೋರನಷ್ಟೆÃ ಅಲ್ಲ, ಡೀಲು ಕುದುರಿಸಿ ಕೊಟ್ಟು ಅಷ್ಟಿಷ್ಟು ಗೆಬರಿಕೊಳ್ಳಬಲ್ಲ ದಲ್ಲಾಳಿಯೂ ಹೌದು ಎಂಬ ಸತ್ಯವನ್ನು ಈ ಪ್ರಕರಣವು ತೆರೆದಿಟ್ಟಿದೆ.
ಏನಿದು ಆ್ಯಂಬಿಡೆಂಟ್ ಅಧ್ವಾನ?
ಆ್ಯಂಬಿಡೆಂಟ್ ಎಂಬ ಪಾಶ್ ಹೆಸರಿನ ಬೆಂಗಳೂರು ಕಂಪನಿ ಸಾವಿರಾರು ಕೋಟಿ ಲೂಟಿ ಮಾಡಿದ್ದೆÃ ಶ್ರಮ, ಬೆವರು ಇಲ್ಲದೇ ದಿಢೀರ್ ಶ್ರಿÃಮಂತರಾಗುವ ಅತಿಯಾಸೆಯ ಮೇಲ್‌ಮಧ್ಯಮ, ಮಧ್ಯಮವರ್ಗಗಳ ಮನಸ್ಥಿತಿಯನ್ನು ಬಳಸಿಕೊಂಡು. ‘ನಮ್ಮಲ್ಲಿ ಹಣ ಹೂಡಿ, ಮರ‍್ನಾಲ್ಕು ತಿಂಗಳಲ್ಲಿ ಅದನ್ನು ಡಬಲ್ ಮಾಡ್ತಿÃವಿ’ ಎಂಬ ಟ್ಯಾಗ್‌ಲೈನ್ ಅನ್ನು ಅತಿಯಾಶೆಯ ಅಮಾಯಕರ ತಲೆಗೆ ತುಂಬುವಲ್ಲಿ ಆ್ಯಂಬಿಡೆಂಟ್ ಮಾಲೀಕ ಫರೀದ್ ಮತ್ತು ಆತನ ಮಗ, ಕಂಪನಿಯ ನಿರ್ದೇಶಕ ಯಶಸ್ವಿಯಾದರು. ಹೇಗೆ ಎಂದು ಕೇಳಿದವರಿಗೆ ‘ಸರ್ವರಿಗೂ ಸಂಪತ್ತಿನ ಹಂಚಿಕೆ’ ಎಂಬ ಸಾಮಾಜಿಕ ನ್ಯಾಯದ ಬೋಧನೆ ಮಾಡಿದ ‘ನವ ಸಮಾಜವಾದಿ’ ಫರೀದ್, ‘ನೀವು ಕೊಟ್ಟ ಹಣವನ್ನು ಡೈಮಂಡ್ ಬ್ಯುಸಿನೆಸ್ ಮತ್ತು ರಿಯಲ್ ಎಸ್ಟೆÃಟ್‌ನಲ್ಲಿ ಹೂಡಿ, ಭಾರಿ ಲಾಭಗಳಿಸಿ ನಿಮಗೆ ಕೊಡ್ತಿÃವಿ’ ಎಂದು ರೀಲುಬಿಟ್ಟ.
ಈ ‘ಬಂಗಾರದ ಮನುಷ್ಯ’ನ ಮಾತು ನಂಬಿದ ಸಿಲಿಕಾನ್ ಸಿಟಿಯ ಸಾವಿರಾರು ಕುಟುಂಬಗಳು ದೊಡ್ಡ ಆ್ಯಂಬಿಷೆನ್ ಇಟ್ಟುಕೊಂಡು ಆ್ಯಂಬಿಡೆಂಟ್‌ನಲ್ಲಿ ಪ್ರಾಮಾಣಿಕವಾಗಿ ದುಡ್ಡನ್ನು ಸುರಿಯತೊಡಗಿದವು.
ಆದರೆ ತಿಂಗಳುಗಳು ಕಳೆದ ಮೇಲೆ ಫರೀದ್‌ನ ಬಳಿ ಹೋಗಿ ತಮ್ಮ ಕನಸಿನ ಮೊತ್ತ ಕೇಳಿದ ಗ್ರಾಹಕರಿಗೆ ಫರೀದ್ ಏನೇನೋ ಸಬೂಬು ಹೇಳಿ ಕಾಯಲು ಹೇಳತೊಡಗಿದ. ಬರುಬರುತ್ತ ಸತ್ಯದ ವಾಸನೆ ಹಿಡಿದ ಗ್ರಾಹಕರಿಗೆ ದುಸ್ವಪ್ನಗಳು ಕಾಡತೊಡಗಿದವು. ತಾವೆಲ್ಲ ಯಾಮಾರಿದೆವು ಎಂದು ಅರಿತ ‘ಸಮಾನಮನಸ್ಕ’ ಗ್ರಾಹಕರಿಗೆ ಪುಣ್ಯಕ್ಕೆ ಆಗಲಾದರೂ ಕಾನೂನು, ಪೊಲೀಸ್ ವ್ಯವಸ್ಥೆಗಳು ನೆನಪಾದವು. ಥಟ್ಟಂತ ಜಾತಿ-ಧರ್ಮಗಳ ಭೇದಭಾವ ಮರೆತು ಒಟ್ಟಾದ ಈ ಗ್ರಾಹಕರು ಸೀದಾ ಬೆಂಗಳೂರಿನ ಡಿಜೆ ಹಳ್ಳಿಯ ಪೊಲೀಸರ ಬಳಿ ಹೋಗಿ ಬದುಕಿಸಲು ಮನವಿ ಮಾಡಿ, ದೂರು ದಾಖಲಿಸಿದರು.
ಸಿಸಿಬಿ ಎಂಟ್ರಿ
ಪ್ರಕರಣ ಸಿಸಿಬಿ ಕೈಗೆ ಬಂತು. ಫರೀದ್ ಮತ್ತಾತನ ಅಕೌಂಟುಗಳನ್ನು ಪರಿಶೀಲನೆ ಮಾಡತೊಡಗಿದ ಸಿಸಿಬಿಗೆ ಭಯಂಕರ ವಂಚನೆಯ ಜಾಲವೊಂದು ತೆರೆದುಕೊಳ್ಳತೊಡಗಿತು. 15 ಸಾವಿರ ಜನರ 900 ಕೋಟಿ ಈ ವಂಚಕರ ಅಕೌಂಟ್‌ನಲ್ಲಿ ಕಂಡುಬಂತು! ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಬಿಕಾ ಆಭರಣ ಮಳಿಗೆಯ ಮಾಲೀಕ ರಮೇಶ್ ಎಂಬಾತನ ಖಾತೆಗೆ ಸುಮ್ಮಸುಮ್ಮನೇ 20 ಕೋಟಿ ವರ್ಗಾಯಿಸಿದ್ದ ಫರೀದ್. ಇದರ ಜಾಡು ಹಿಡಿದು ಹೋದರೆ, ಜನಾರ್ಧನರೆಡ್ಡಿ, ಆತನ ಭಂಟ ಅಲಿಖಾನ್, ಫರೀದನ ಗೆಳೆಯ ಬೃಜೇಶ ರೆಡ್ಡಿಯ ಹೆಸರುಗಳು ಪತ್ತೆಯಾದವು.. ‘ಇಡಿ ಅಧಿಕಾರಿಗಳು ಗೊತ್ತು. ತನಿಖೆಯಲ್ಲಿ ನಿನಗೆ ಸಹಾಯ ನೀಡುವುದಾಗಿ ಹೇಳಿ ಜನಾರ್ಧನ ರೆಡ್ಡಿ 20 ಕೋಟಿ ಕೇಳಿದ್ದರು’ ಎಂದ ಫರೀದ್ ..
ಬೃಜೇಶÀ ರೆಡ್ಡಿಯೇ ಕೊಂಡಿ!
ಗ್ರಾಹಕರ ದೂರು ದಾಖಲಾಗುವ ಮೊದಲೇ ಇ.ಡಿ ಫರೀದನ ಹಿಂದೆ ಬಿದ್ದಿತ್ತು. ಆಗ ಬೃಜೇಶ ರೆಡ್ಡಿ ಫರೀದ್‌ಗೆ ನೆರವು ನೀಡುವುದಾಗಿ ಹೇಳಿ ಜನಾರೆಡ್ಡಿ, ಅಲಿಖಾನರನ್ನು ಪರಿಚಯಿಸಿದ್ದ. ಆಗಲೇ ರೆಡ್ಡಿ 20 ಕೋಟಿ ಡೀಲ್‌ನ ಮಾತಾಡಿದ್ದು. ಈ ಡೀಲ್ ಮಾರ್ಚ್ನಲ್ಲಿ ತಾಜ್‌ವೆಸ್ಟ್ ಎಂಡ್ ಹೊಟೇಲಿನಲ್ಲಿ ನಡೆದಿತ್ತು. ಮೊದಲು ನಗದು ಕೇಳಿದ್ದ ಜನಾರೆಡ್ಡಿ, ನಂತರ ಆಭರಣಂಗಡಿಯ ಮಾಲೀಕರನ್ನು ಕರೆತಂದ. ಅಲಿಖಾನ್ ಸೂಚನೆಯಂತೆ ಫರೀದ್ ಬೆಂಗಳೂರಿನ ಅಂಬಿಕಾ ಜ್ಯುವೆಲರಿಯ ರಮೇಶ್‌ಕೊಠಾರಿಯ ಖಾತೆಗೆ ಹಾಕಿದ್ದ. ಈ ಹಣ ಇಟ್ಟುಕೊಂಡ ಕೊಠಾರಿ ಅದಕ್ಕೆ ಪ್ರತಿಯಾಗಿ 57 ಕೆಜಿ ಚಿನ್ನದ ಗಟ್ಟಿಗಳನ್ನು ಬಳ್ಳಾರಿ ಆಭರಣ ವ್ಯಾಪಾರಿ ರಮೇಶನಿಗೆ ನೀಡಿದ್ದ. ಈ ಗಟ್ಟಿಗಳನ್ನು ಅಲಿಖಾನ್ ಜನಾಗೆ ತಲುಪಿಸಿದ್ದ!
ಗಣಿಗಳ್ಳರು, ಇಂಟರ್ ನ್ಯಾಷನಲ್ ಆರ್ಥಿಕ ವಂಚಕ, ಆಭರಣ ವ್ಯಾಪಾರಿಗಳು…. ದಿಗ್ಭçಮೆ ಹುಟ್ಟಿಸುವ ವಂಚನೆಯ ಜಾಲ! ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಅಪರಾಧ ಲೋಕದ ಚಿತ್ರಕತೆಗಳನ್ನು ಬರೆಯುವವರು ಅಲಿಖಾನ್, ರೆಡ್ಡಿ, ಫರೀದ್‌ಗಳನ್ನು ಭೇಟಿಯಾದರೆ ಕಥಾಗುಚ್ಛಗಳೇ ಸಿಗಬಹುದು.
ಅಂದಂತೆ ಈ ಅಲಿಖಾನ್ ಜನಾರೆಡ್ಡಿಯ ಗಣಿಯ ಲೂಟಿಯ ಸ್ಕೆಚ್‌ಗಳನ್ನು ಅಪಾರ ’ಶ್ರಮ’ದಿಂದ ಹೆಣೆದ ಮಾಸ್ಟರ್ ಮೈಂಡ್. ಇಂಜಿನಿಯರಿಂಗ್ ಓದುವಾಗ ಇವನ ಟ್ಯಾಲೆಂಟ್ ನೋಡಿ ಪ್ರಾಧ್ಯಾಪಕರೇ ಅಚ್ಚರಿ ಪಡುತ್ತಿದ್ದರು. ಬಿಇ ನಂತರ ಈ ಹುಡುಗ ಐಟಿ ಅಥವಾ ಫೈನಾನ್ಸಿಯಲ್ ಸ್ಟಾರ್ಟ್ಅಪ್ ತೆರೆಯಬಲ್ಲ ಪ್ರತಿಭೆ ಹೊಂದಿದ್ದಾನೆ ಎಂದು ಗುಣಗಾನ ಮಾಡುತ್ತಿದ್ರಂತೆ. ಆದರೆ ಬಿಇ ಜುಜುಬಿ ಅಂದ ಅಲಿಖಾನ್ ಹೇಗೋ ರೆಡ್ಡಿಯ ಸಂಪರ್ಕಕ್ಕೆ ಬಂದ. ತನ್ನ ಜಾಣ್ಮೆತನವನ್ನು ವಂಚನೆಗೆ ಬಳಸಿ ರೆಡ್ಡಿಗಳಿಗೆ ಆಪ್ತನಾದ. ಬಳ್ಳಾರಿಯ ಸಾಮಾನ್ಯ ಅಕ್ಕಸಾಲಿಗರು, ಟೇಲರ್‌ಗಳ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು, ಅವುಗಳಲ್ಲಿ ಗಣಿಲೂಟಿ ದುಡ್ಡನ್ನು ಜಮಾ ಮಾಡಿದ್ದ, ಈ ಖಾತೆಗಳ ಜಾಡು ಹಿಡಿದು ಹೋದ ಅರಣ್ಯಾಧಿಕಾರಿಗಳು, ಲೋಕಾಯುಕ್ತ ಸಂತೋಷ ಹೆಗಡೆಯವರು ಬೆಚ್ಚಿ ಬಿದ್ದಿದ್ದರು. ಪಾಪ, ಈ ಅಮಾಯಕ ಬಡ ಅಕ್ಕಸಾಲಿಗರು, ಟೇಲರ್‌ಗಳಿಗೆ ಅಲಿಖಾನ್ ಗೊತ್ತೂ ಇರಲಿಲ್ಲ, ತಮ್ಮ ಹೆಸರಲ್ಲಿ ಖಾತೆಗಳಿರುವುದೂ ಗೊತ್ತಿರಲಿಲ್ಲ! ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ಫೋರ್ಜರಿ ಮಾಡಿ ಖಾತೆಗಳನ್ನು ಸೃಷ್ಟಿಮಾಡಿ, ಸಾವಿರಾರು ಕೋಟಿಗಳ ವ್ಯವಹಾರ ನಡೆಸಿದ ‘ಪ್ರತಿಭಾವಂತ’ ಈ ಅಲಿಖಾನ್. ಬೇಲಿಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ಸ್ಟಾಕ್ ಮಾಡಿದ್ದ ಅಕ್ರಮ ಅದಿರನ್ನೆÃ ಚೀನಾಕ್ಕೆ ರಫ್ತು ಮಾಡಿದ ಭೂಪ ಈ ಅಲಿಖಾನ್!
ಫರೀದ್ ನಂಬಿ ವಂಚನೆಗೊಳಗಾದ 15 ಸಾವಿರ ಗ್ರಾಹಕರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಗೃಹ ಸಚಿವ ಪರಮೇಶ್ವರ್ ಅವರದ್ದು. ಅವರು ಪೊಲೀಸ್ ಅಧಿಕಾರಿಗಳ ಕರ್ತವ್ಯದಲ್ಲಿ ಹಸ್ತಕ್ಷೆÃಪ ಮಾಡದಿದ್ದರೆ ಸಾಕಷ್ಟೆÃ.
‘ಆ್ಯಂಬಿಡೆಂಟ್ ಪ್ರಕರಣದಲ್ಲಿ ನಮ್ಮದೇನೂ ಪಾತ್ರವಿಲ್ಲ. ಸುಮ್ಮಸುಮ್ಮನೇ ಕೆಲವು ಕಿಡಿಗೇಡಿಗಳು ನಮ್ಮ ಪಬ್ಲಿಕ್ ಚಾನೆಲ್, ಮುಖ್ಯಸ್ಥ ಎಚ್‌ಆರ್ ರಂಗನಾಥ, ಸಿಬ್ಬಂದಿ ಅಜ್ಮತ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಫೇಕ್‌ನ್ಯೂಸ್ ಹರಡುತ್ತಿದ್ದಾರೆ. ಇಂತಹವರನ್ನು ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳುತ್ತೆÃವೆ’ ಎಂದು ಪಬ್ಲಿಕ್ ಟಿವಿ ಸ್ಪಷ್ಟನೆ ನೀಡಿದ ಕೂಡಲೇ ಸೋಷಿಯಲ್‌ಮೀಡಿಯಾ ಬಳಸದ ‘ಅಸಂಖ್ಯ’ ರಂಗಣ್ಣಾಭಿಮಾನಿಗಳು ಗಲಿಬಿಲಿಗೆ ಬಿದ್ದಿದ್ದಾರೆ.
‘ರಂಗಣ್ಣರ ಮೇಲೆ ಕಿಡಿಗೇಡಿಗಳು ಮಾಡಿರುವ ಸುಳ್ಳು ಆರೋಪವೇನು’ ಎಂದು ಈ ವೀಕ್ಷಕ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಇದೆಲ್ಲ ಗೊತ್ತೆÃ ಇರದ ಜನಸಾಮಾನ್ಯರಿಗೆ ‘ಏನೋ ಲಫಡಾ ನಡೆದಿದೆಯಾ’ ಎಂಬ ಸಂಶಯ ಬರುವಂತೆ ಮಾಡಿ, ಸುಮ್ಮನೆ ಇರುವೆ ಬಿಟ್ಟುಕೊಂಡಿತಲ್ಲ ನಮ್ಮ ಚಾನೆಲ್ ಎಂದು ಹಲವು ಜಿಲ್ಲಾ ವರದಿಗಾರರು ಪಬ್ಲಿಕ್ಕಾಗಿಯೇ ನಗಾಡುತ್ತಿದ್ದರಂತೆ.
ಗೊಂದಲದಲ್ಲಿರುವ ಪಬ್ಲಿಕ್‌ನ ವೀಕ್ಷಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ತಿಳಿಸುವುದು ನಮ್ಮ ವೃತ್ತಿಧರ್ಮ ಎಂದು ಬಗೆದು ಅದನ್ನು ಇಲ್ಲಿ ನಿರೂಪಿಸುವ ಯತ್ನ ಮಾಡಿದ್ದೆÃವೆ. (ಇಲ್ಲಿ ಪ್ರಿಂಟ್ ಮೀಡಿಯಾ ಓದುಗರಿಗೆ ಬೋರ್ ಆಗದಿರಲೆಂದು ನಿರೂಪಣೆಯಲ್ಲಿ ರೋಚಕತೆ ಇದ್ದರೆ ಅದನ್ನು ಟಿವಿ ಮೀಡಿಯಾ ಪ್ರಭಾವವೆಂದು ಬಗೆದು ಕ್ಷಮಿಸಬೇಕು)
“ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರ್ ಮಿರರ್‌ನಲ್ಲಿ ಕ್ರೆöÊಮ್ ಬೀಟ್‌ಗಳಲ್ಲಿ ಕೆಲಸ ಮಾಡುತ್ತಾ ಅಪರಾಧ ಲೋಕದ ಒಳಸುಳಿವುಗಳನ್ನು ಪತ್ತೆ ಹಚ್ಚುತ್ತಾ, ತಾನೇ ಕ್ರಿಮಿನಲ್ ಆಗಿಬಿಟ್ಟರೆಂಬ ವದಂತಿ (ಇದು ಈ ‘ಫೇಕ್‌ನ್ಯೂಸ್’ ಹೊರಬಂದ ಮೇಲೆ ಹುಟ್ಟಿಕೊಂಡ ಕಥೆಯೂ ಇರಬಹುದು!) ಅಜ್ಮತ್ ಎಂಬ ಪತ್ರಕರ್ತನ ಕುರಿತು ಇದೆ. ಈತನ ಬಗ್ಗೆ ಬೆಂಗಳೂರಿನ ರೌಡಿಗಳು, ದಂಧೆಕೋರರ ಬಳಿ ರಂಗುರಂಗಿನ ಕತೆಗಳಿವೆಯಂತೆ. ಕೆಲವು ಪೊಲೀಸ್ ಅಧಿಕಾರಿಗಳಿಗೂ ಈತನ ‘ಪವಾಡ’ಗಳು ಗೊತ್ತಂತೆ. ಆದರೆ ಇಂತಹ ಹಿನ್ನೆಲೆಯ ಅಜ್ಮತ್ ಹಿರಿಯ ಪತ್ರಕರ್ತ ರಂಗನಾಥರ ಪಬ್ಲಿಕ್ ಟಿವಿಯಲ್ಲಿದ್ದಾರೆ ಈಗ! ಪಾಪ, ರಂಗನಾಥರಿಗೆ ಈತನ ಹಿನ್ನೆಲೆ ತಿಳಿಯಲು ಟೈಮ್ ಇರಲಿಲ್ಲವೆಂದೇ ಭಾವಿಸೋಣ.
ಅಜ್ಮತ್ ಸಂದರ್ಶ ಮಾಡುವಾಗ, ‘ ಈ ಕಾಲದಲ್ಲಿ ಚಾನೆಲ್ ನಡೆಸಲು ಎಷ್ಟು ದುಡ್ಡಾದರೂ ಸಾಲದು. ನಿನ್ನ ಟ್ಯಾಲೆಂಟನ್ನೆಲ್ಲ ಬಳಸಿ ತಿಂಗಳಿಗೆ 40 ಲಕ್ಷ ಆದಾಯ ತರಬೇಕು’ ಎಂದು ಅಜ್ಮತ್ ಮುಂದೆ ಚಾಲೆಂಜ್ ಇಡಲಾಗಿತ್ತಂತೆ. ‘ಓಕೆ’ ಎಂದು ರಿಪೋರ್ಟಿಂಗ್ ಶುರು ಹಚ್ಚಿದ ಅಜ್ಮತ್‌ಗೆ ಆ್ಯಂಬಿಡೆಂಟ್‌ನ ಫರೀದ್ ಅಕ್ಷಯಾಪಾತ್ರೆಯಂತೆ ಕಂಡದ್ದು ಸಹಜವೇ ಆಗಿತ್ತು.
‘ಆ್ಯಂಬಿಡೆಂಟ್‌ನಿಂದ ಭಾರಿ ವಂಚನೆ’ ಎಂದು ಬ್ರೆÃಕಿಂಗ್ ನ್ಯೂಸ್ ಹೊಡೆದ ಅಜ್ಮತ್ ಅದನ್ನು ಫರೀದನಿಗೆ ವ್ಯಾಟ್ಸಪ್ ಮಾಡಿದ. ಕಂಗಾಲಾದ ಫರೀದ್ ಸುದ್ದಿ ನಿಲ್ಲಿಸುವಂತೆ ಅಂಗಲಾಚುತ್ತಾನೆ. ಆಗ ಅಜ್ಮತ್ 5 ಕೋಟಿಗೆ ಬೇಡಿಕೆ ಇಡುತ್ತಾನೆ. ಸಾವಿರ ಕೋಟಿಯ ಒಡೆಯ ಫರೀದ್‌ಗೆ 5 ಕೋಟಿ ಜುಜುಬಿ. ಮೊದಲು ಅಜ್ಮತ್ ಅಕೌಂಟಿಗೆ 3 ಕೋಟಿ ಆರ್‌ಟಿಜಿಎಸ್ ಮಾಡಿ ಸ್ವಲ್ಪ ನಿರಾಳನಾಗಿತ್ತಾನೆ. ಆಹಣವನ್ನು ಅಜ್ಮತ್ ಪಬ್ಲಿಕ್ ಕ್ಯಾಪ್ಟನ್‌ಗೆ ನೀಡುವುದೆಲ್ಲ ಪ್ರೆöÊವೇಟ್ ಆಗಿ ನಡೆಯುತ್ತದೆ.
ಇಂತಹ ಎಂಜಲು ನೆಕ್ಕುವುದರಲ್ಲಿ ‘ಸಮಯಪ್ರಜ್ಞೆ’ ಹೊಂದಿರುವ ಸಮಯ್ ಚಾನೆಲ್‌ನ ವಿಜಯ್ ತಾತಯ್ಯ ತಂದೂ ಒಂದು ಕೈಚಾಚಿ ಆಖಾಡಕ್ಕೆ ಇಳಿಯುತ್ತಾನೆ.. ತನ್ನ ನಿತ್ಯ ಕಾಯಕದಂತೆ….ಇದಕ್ಕೆ ವೀಣಾ ಎಂಬ ಡೀಲ್-ಡಾಲ್ ಸಾಥ್ ನೀಡುತ್ತಾಳೆ. 40 ಕೋಟಿ ದೇಣಿಗೆ ನೀಡುವಂತೆ ಫರೀದ್‌ಗೆ ಪಾಪಿಗಳು ಬೇಡಿಕೆ ಇಡುತ್ತಾರೆ. 37 ಕೋಟಿ ವೈಟ್‌ಮನಿ, 3 ಕೋಟಿ ಬ್ಲಾö್ಯಕ್‌ಮನಿ (ಡಿಮಾನಿಟೇಷನ್‌ನಿಂದ ಕಪ್ಪು ಹಣಕ್ಕೆ ಕಡಿವಾಣ ಬಿತ್ತು, 3 ಲಕ್ಷ ಅಕ್ರಮ ಮತ್ತು ಫ್ಲೊÃಟಿಂಗ್ ಕಂಪನಿಗಳು ಮುಚ್ಚಿದವು ಎಂದು ಗಂಟಲು ಹರಿಯುವಂತೆ ಕಿರುಚುತ್ತಲೇ ಇರುವ ರಿ-‘ಪಬ್ಲಿಕ್’ ಗೋಸ್ವಾಮಿ ಮತ್ತಾತನ ‘ಆದರ್ಶ’ ನಾಯಕ ಇದನ್ನು ಗಮನಿಸಲಿ ಎಂದು ಕೋರಿಕೆ) ಸಂದಾಯ ಮಾಡುತ್ತಾನೆ ಫರೀದ್.
ಫರೀದ್ ಸಾರ್ವಜನಿಕರ ಹಣ ಲೂಟಿ ಹೊಡೆದ, ‘ಪಬ್ಲಿಕ್’ ಫರೀದ್‌ನಿಂದಾದ ಒಂದಿಷ್ಟು (ಸಖತ್ತಾಗೇ) ಕಿತ್ತುಕೊಂಡಿತು! ಜೈ ಪತ್ರಿಕೋದ್ಯಮ, ಜೈ ಜಾಗತಿಕರಣ, ಆರ್ಥಿಕ ಶಿಸ್ತು ತಂದು ಕಪ್ಪುಹಣಕ್ಕೆ ಕಡಿವಾಣ ಹಾಕಿದ ಚೌಕಿದಾರನಿಗೂ ಜೈಅನ್ನಲೇಬೇಕ್ಲವೇ?” ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಡೀಲ್ ಪ್ರಕರಣ.

– ಮಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...