Homeರಾಜಕೀಯಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

ಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

- Advertisement -
ಢೋಂಗಿ ಪರಿಸರ ಪರಾಕ್ರಮಿಗಳ ದಗಲುಬಾಜಿ ಆಟದಿಂದ ಉತ್ತರ ಕನ್ನಡಿಗರೀಗ ಬೇಸತ್ತು ಹೋಗಿದ್ದಾರೆ. ಮೂಲತಃ ತಮ್ಮ ಅಡಿಕೆ ತೋಟಗಳ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವ ಹವ್ಯಕ ಬ್ರಾಹ್ಮಣರ ಮುಖವಾಡವಾಗಿಯಷ್ಟೆÃ ಚಲಾವಣೆಗೆ ಬರುವ ಈ ಢೋಂಗಿ ಪರಿಸರವಾದ ಅಬ್ರಾಹ್ಮಣ ಸಮುದಾಯಗಳಿಗೆ ದಕ್ಕೆಯಾಗುವ ಯಾವ ಯೋಜನೆಗಳಿಗೂ ಚಕಾರವೆತ್ತುವುದಿಲ್ಲ. ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಯಿಂದ ಅನಂತ್ ಹೆಗಡೆ ಆಶೀಸರನಂಥ ಬ್ರಾಹ್ಮಣ ಜಾತ್ಯಸ್ಥರೆಲ್ಲ ಪರಿಸರವಾದವನ್ನು ತಮ್ಮಿಷ್ಟದಂತೆ ಕನವರಿಸೋದು ತಮ್ಮ ಜಾತಿಯ ಹಿತ ಕಾಪಾಡುವುದಕ್ಕಷ್ಟೆÃ!
ಜಿಲ್ಲೆಯ ಅಭಿವೃದ್ಧಿಗೆ ಅನಿವಾರ್ಯ ಅಗತ್ಯವಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಡ್ಡಗಾಲು ಹಾಕುವ ಈ ಪ್ರಚಂಡರು, ತಮ್ಮ ಶಿರಸಿ-ಯಲ್ಲಾಪುರ ಹೈಗರ ಸೀಮೆಗೆ ಅನುಕೂಲವಾಗುವ ತಾಳಗುಪ್ಪಾ-ಸಿದ್ಧಾಪುರ-ಶಿರಸಿ-ಹಾವೇರಿ ರೈಲು ಮಾರ್ಗಕ್ಕೆ ಒತ್ತಾಯಿಸುತ್ತಾರೆ. ಆಗ ಆಗುವ ಪರಿಸರ-ಅರಣ್ಯ ನಾಶ ಇವರಿಗೆ ಕಾಣಿಸುವುದಿಲ್ಲ. ಈ ದ್ವಿಮುಖ ನಾಟಕದ ಪರಿಸರವಾದಿ ತಂಡದಲ್ಲಿ ಆರಂಭದಲ್ಲಿ ಕೇಂದ್ರ ಮಂತ್ರಿ ಅನಂತ್ಮಾಣಿಯೂ ಇದ್ದ. ಯಾವಾಗ ಅನಂತ್ ಹೆಗಡೆ ಆಶೀಸರ ಎಂಬ ಮತ್ತೊÃರ್ವ ಬ್ರಾಹ್ಮಣ ಪಟು ಪರಿಸರ ಹೋರಾಟವನ್ನೆÃ ತನ್ನ ಚೆಡ್ಡಿ ರಾಜಕಾರಣಕ್ಕೆ ಚಿಮ್ಮುಹಲಗೆ ಮಾಡಿಕೊಳ್ಳಲು ಹವಣಿಸಿದನೋ ಆಗ ಅನಂತ್ಮಾಣಿ ತಿರುಗಿಬಿದ್ದ. ಒಂದು ಹಂತದಲ್ಲಿ ಈ ಪರಿಸರವ್ಯಾಧಿ ಅಶೀಸರ ಆರೆಸ್ಸೆಸ್ ಸಂಪರ್ಕ ಸಾಧಿಸಿ, ಮಾಣಿಗೆ ಕೊಕ್ ಕೊಟ್ಟು  ಬಿಜೆಪಿ ಸಂಸದಗಿರಿ ಟಿಕೆಟ್ ತರಲು ಹವಣಿಸಿದ್ದೂ ಇದೆ. ಅದೇ ಕಾರಣಕ್ಕೆ ಅನಂತ್ಮಾಣಿ ಈಗ ಈ ಪರಿಸರ ಗ್ಯಾಂಗನ್ನು ಅಭಿವೃದ್ಧಿ ವಿರೋಧಿ ಅಡ್ನಾಡಿಗಳು ಎಂಬಂತೆ ಮೂದಲಿಸುತ್ತಿದ್ದಾನೆ.
ಢೋಂಗಿ ಪರಿಸರವಾದಿ ತಂಡದ ಕೆಟ್ಟ ಕಣ್ಣಿÃಗ ಕುಮಟಾ-ಶಿರಸಿ ರಸ್ತೆ ಅಗಲೀಕರಣ ಯೋಜನೆ ಮೇಲೆ ಬಿದ್ದಿದೆ. ರಾಜ್ಯ ಹೆದ್ದಾರಿಯಾಗಿದ್ದ ಸದ್ರಿ ರಸ್ತೆಯನ್ನು ಹಾವೇರಿಯಿಂದ ಕುಮಟಾವರೆಗೆ ರಾಷ್ಟಿçಯ ಹೆದ್ದಾರಿ 766ಇ ಎಂದು ಘೋಷಿಸಲಾಗಿದೆ. ಸಾಗರಮಾಲಾ ಯೋಜನೆಯಲ್ಲಿ ಮಂಜೂರಾಗಿರುವ ಈ 60 ಕಿ.ಮೀ ಉದ್ದದ ರಸ್ತೆ ಯೋಜನಾ ವೆಚ್ಚ ಬರೋಬ್ಬರಿ 360.60 ಕೋಟಿ ರೂಪಾಯಿಗಳು. ಈ ಕಾಮಗಾರಿ ಗುತ್ತಿಗೆ ಆರ್‌ಎನ್‌ಎಸ್ ಇನ್‌ಫ್ರಾಸ್ಟçಕ್ಚರ್ ಲಿಮಿಟೆಡ್ ಮತ್ತು ಗಾಯತ್ರಿ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಸಹಭಾಗಿತ್ವದಲ್ಲಿ ಪಡೆದುಕೊಂಡಿವೆ. ಯೋಜನೆಯ ವಿಸ್ತೃತ ವರದಿ(ಡಿಪಿಆರ್)ನಂತೆ ಈಗಿರುವ ರಸ್ತೆಯನ್ನು 11 ಮೀಟರ್‌ನಿಂದ 18 ಮೀಟರ್ ಅಗಲ ಮಾಡಲಾಗುತ್ತದೆ. ಈಗಿರುವ 11 ಸೇತುವೆಗಳನ್ನು ಪುನರ್ ನಿರ್ಮಿಸಲಾಗುತ್ತದೆ.
ಹಾಗೆ ನೊಡಿದರೆ ಈ ಅಗಲೀಕರಣ ಬಹುದಿನದ ಅಗತ್ಯವಾಗಿತ್ತು. ಆದರೆ ಇಲ್ಲಿಯ ಹೊಣೆಗೇಡಿ ಎಂಪಿ, ಎಮ್ಮೆಲ್ಲೆ, ಮಿನಿಸ್ಟರ್‌ಗಳು ಎಷ್ಟೆÃ ಸಾವು-ನೋವಾದರೂ, ಸರಕು ಸಾಗಾಣಿಕೆಗೆ ತೊಂದರೆಯಾದರೂ, ಅಭಿವೃದ್ಧಿ ವೇಗಕ್ಕೆ ಬ್ರೆÃಕ್ ಬಿದ್ದಿದ್ದರೂ ತಲೆಯೇ ಕೆಡಿಸಿಕೊಂಡಿರಲಿಲ್ಲ. ಆದರೆ ಸದ್ರಿ ಯೋಜನೆಯ ಪ್ರಸ್ತಾಪ ಹೊರೆ ಬೀಳುತ್ತಿದ್ದಂತೆಯೇ ಘಟ್ಟದ ಮೇಲಿನ ಪರಿಸರ ವ್ಯಾಧಿ ತಂಡ ಹುಸಿ ಹಸಿರು ಕಳಕಳಿ ಪ್ರದರ್ಶಿಸತೊಡಗಿದೆ. ಅನಂತ ಹೆಗಡೆ ಆಶೀಸರನ ಗ್ಯಾಂಗ್ ಪಶ್ಚಿಮ ಘಟ್ಟ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ ಬರುತ್ತದೆ; ಗಿಡಮೂಲಿಕೆ ಸಂರಕ್ಷಿತ ದೇವಿಮನೆ ಘಟ್ಟ ಪ್ರದೇಶ ಧ್ವಂಸವಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿದೆ. ಕಂಡ-ಕಂಡ ಅಧಿಕಾರಿಗಳಿಗೆಲ್ಲಾ ಮನವಿ ಕೊಟ್ಟು ಉದ್ದುದ್ದ ಬೋಗಸ್ ಭಾಷಣ ಬಿಗಿಯುತ್ತಿದ್ದಾರೆ.
ಆದರೆ ವಾಸ್ತವ ಇವರೇಳುವಷ್ಟು ಭೀಭತ್ಸವಾಗೇನೂ ಇಲ್ಲ. ದೇವಿಮನೆಯ ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ರಸ್ತೆಯಿಂದ ತುಂಬ ದೂರದಲ್ಲಿದೆ. ಇಲ್ಲಿಯ ಔಷಧಿ ಮೂಲಿಕೆಗಳ ವಾಸ್ತವ ಸ್ಥಿತಿ ಅರಣ್ಯ ಇಲಾಖೆಗೂ ಗೊತ್ತಿಲ್ಲ. ಪರಿಸರ ವ್ಯಾಧಿಗಳು ಮಾತ್ರ ಅಮೂಲ್ಯ ಗಿಡಮೂಲಿಕೆಯಿದೆ ಎಂದು ಬೊಂಬಡಾ ಬಜಾಯಿಸುತ್ತಿದ್ದಾರೆ. ಸ್ವಾತಂತ್ರö್ಯ ನಂತರ ಶಿರಸಿ-ಕುಮಟಾ ರಸ್ತೆ ನಿರ್ಮಾಣವಾಗಿದೆ. ಆಗಾಗ ರಸ್ತೆ ಅಗಲೀಕರಣವೂ ಆಗಿದೆ. ಇದರಿಂದ ಗುಡ್ಡಗಳ ಕುಸಿತವಾಗಲಿ, ಹತ್ತಿರದ ಗ್ರಾಮಗಳಿಗೆ ಅನಾಹುತವಾಗಲಿ ಆಗಿದ್ದಿಲ್ಲ; ರಸ್ತೆ ಅಗಲೀಕರಣದಿಂದ ವನ್ಯಜೀವಿಗಳ ಓಡಾಟಕ್ಕೆ ಕಷ್ಟವಾಗಲಿದೆ ಎಂಬುದೇ ಹಾಸ್ಯಾಸ್ಪದ. ಈಗಾಗಲೇ ಇಲ್ಲಿ ರಸ್ತೆಯಿದೆ. ಹಗಲೂ-ಇರುಳು ವಾಹನ ಓಡಾಟವಿದೆ. ಪ್ರಾಣಿಗಳಿಗೆ ತೊಂದರೆಯೇನಾಗಿಲ್ಲ. ದೇವಿಮನೆ ಘಟ್ಟ-ಕಣಿವೆಯಲ್ಲಿ ವಿದ್ಯುತ್ ಮಾರ್ಗದ ಕಾರಿಡಾರ್ ಕೂಡ ಇದೆ. ಇದರಿಂದ ಪರಿಸರಕ್ಕೆ ಹಾನಿಯೇನಾಗಿಲ್ಲ. ಅಷ್ಟಕ್ಕೂ ಕಡಿಯುವುದು ರಸ್ತೆ ಅಂಚಿನ ಸ್ವಲ್ಪ ಕಾಡಷ್ಟೆÃ! ಹೆದ್ದಾರಿ ನಿರ್ಮಾಣದ ನಂತರ ಅಕ್ಕ-ಪಕ್ಕದಲ್ಲಿ ಮರ ಬೆಳೆಸಲು ಅವಕಾಶ ಇದ್ದೆÃಯಿದೆ.
ಮೂರು ದಶಕದಿಂದ ಹಾವೇರಿ-ಕುಮಟಾ-ತಡಸ-ಕುಮಟಾ ರಸ್ತೆ ಮೇಲ್ದರ್ಜೆಗೇರಿಸುವ ಬೇಡಿಕೆ ವಾಣಿಜ್ಯೊÃದ್ಯಮಿಗಳು, ಜನಸಾಮಾನ್ಯರು ಮಂಡಿಸುತ್ತಾ ಬಂದಿದ್ದರು. ಈ ರಸ್ತೆ ಅಗಲೀಕರಣ ಜಿಲ್ಲೆಯ ಅಭಿವೃದ್ಧಿಗೆ ಹೆಬ್ಬಾಗಿಲು. ಜಿಲ್ಲೆಯ ಬಂದರುಗಳ ಅಭಿವೃದ್ಧಿ ಇದರಿಂದಾಗುತ್ತದೆ. ಹುಬ್ಬಳ್ಳಿ-ಹಾವೇರಿ-ದಾವಣಗೆರೆ ಮುಂತಾದೆಡೆಯಿಂದ ಕರಾವಳಿಗೆ ಉತ್ಪಾದಿತ ವಸ್ತುಗಳ ರಫ್ತಿಗೆ ಉತ್ತೆÃಜನ ಸಿಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮ, ಸ್ಕೊಬಾ ಡ್ರೆöÊವಿಂಗ್‌ಗೆ ಈ ಹೆದ್ದಾರಿ ಪೂರಕÀವಾಗುತ್ತದೆ. ಕಡಿಮೆ ಅವಧಿಯಲ್ಲಿ ಸುರಕ್ಷಿತ ಪ್ರಯಾಣ ಮಾಡಬಹುದು. ಈಗಿನದು ಯಮಯಾತನೆಯ ಪ್ರವಾಸ!! ರಸ್ತೆ ಅಗಲಿಕರಣ ಉದ್ಯಮಿಗಳಗಷ್ಟೆÃ ಅಲ್ಲ. ಶಿಕ್ಷಣ, ಆರೋಗ್ಯ, ಮತ್ತಿತರ ಕಾರಣಕ್ಕೆ ಕರಾವಳಿಯತ್ತ ಹೋಗುವವರಿಗೆ ಮತ್ತು ಕರಾವಳಿಯಿಂದ ಬಯಲು ಸೀಮೆಗೆ ಹೋಗುವವರಿಗೂ ವರದಾನವೇ ಸರಿ.
ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ತುಲನಾತ್ಮಕವಾಗಿ ಕಡಿಮೆ ಬಂಡವಾಳ ಸಾಕು. ಯಲ್ಲಾಪುರ-ಶಿರಸಿ-ಸಿದ್ಧಾಪುರ-ಮುಂಡಗೋಡ ತಾಲ್ಲೂಕುಗಳು ರೈಲು ಮಾರ್ಗ ಕಾಣುವುದು ಅನುಮಾನ ಎಂದು ಹೊಣೆಗೇಡಿ ಸಂಸದ ಕಮ್ ಕೇಂದ್ರ ಮಂತ್ರಿ ಅನಂತ್ಮಾಣಿಯೇ ಬಡಬಡಿಸುತ್ತಿದ್ದಾನೆ. ಹೀಗಿರುವಾಗ ರಾಷ್ಟಿçÃಯ ಹೆದ್ದಾರಿಯಾಗಿ ರಸ್ತೆ ಅಗಲೀಕರಣವೂ ಬೇಡವೆಂದರೆ ಹೇಗೆ? ಸ್ವಾರ್ಥಕ್ಕಾಗಿ ಪರಿಸರ ಸಂರಕ್ಷಣೆ ಪ್ರಹಸನ ಮಾಡುತ್ತಿರುವ ಹುಸಿ ಪರಿಸರವಾದಿಗಳಿಗೆ ಜನರೀಗ ಉಗಿಯುತ್ತಿದ್ದಾರೆ. ಉತ್ತರ ಕನ್ನಡಿಗರು ಈ ಛಲವನ್ನು ದಶಕದ ಹಿಂದೆಯೇ ತೋರಿಸಬೇಕಿತ್ತು. ಸೋಗಲಾಡಿ ಪರಿಸರ ಪರಾಕ್ರಮಿಗಳ ಬಂಡಲ್ ಭಾಷಣ, ಅಂಕಣ, ಮಾನವ ಸರಪಳಿಗಳಿಗೆ ಜಿಲ್ಲೆಯ ಮುಗ್ಧ ಜನ ಸಿಲುಕಿದ್ದರಿಂದಲೇ ಅಭಿವೃದ್ಧಿ ಕಾಣದಂತಾಯ್ತು. ಪರಿಸರವಾದಿಗಳ ಕಿರಿಕಿರಿಯೊಂದಿಲ್ಲದಿದ್ದರೆ ಎಂದೋ ಜಿಲ್ಲೆಗೆ ರೈಲು-ಸುಸಜ್ಜಿತ ರಸ್ತೆ, ಬಂದರು, ಬೃಹತ್ ಉದ್ಯಮ ಬರುತ್ತಿತ್ತು. ವಿದ್ಯೆ, ಉದ್ಯೊಗ, ವ್ಯವಹಾರಕ್ಕೆ ಗುಳೇ ಹೋಗುವುದು ತಪ್ಪುತ್ತಿತ್ತು. ಉತ್ತರ ಕನ್ನಡ ಪಕ್ಕದ ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡದಂತೆ ಪ್ರಗತಿ ಕಾಣುತ್ತಿತ್ತು.
ಈಗ ಜನರಿಗೆ ಪರಿಸರ ವ್ಯಾಧಿಗಳ ಬಣ್ಣ ಗೊತ್ತಾಗಿದೆ. ತದಡಿ ಬಂದರು ಬೇಕೆಂದು ಪರಿಸರವಾದಿಗಳಿಗೆ ತಿರುಗಿ ಬಿದ್ದಿದ್ದ ಜನರೀಗ ಕುಮಟಾ-ಹಾವೇರಿ ರಸ್ತೆ ಅಗಲೀಕರಣದ ಪರವಿದ್ದಾರೆ. ಇನ್ನಾದರೂ ಪರಿಸರವಾದಿಗಳು ದ್ರೊÃಹದ ಆಟ ನಿಲ್ಲಿಸುವರಾ?
– ಶುದ್ಧೊಧನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...