Homeರಾಜಕೀಯಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

ಶಿರಸಿ-ಕುಮಟಾ ಹೆದ್ದಾರಿಗೆ ಗಂಟು ಬಿದ್ದಿರುವ  ಪರಿಸರವ್ಯಾಧಿಗಳು!!

- Advertisement -
ಢೋಂಗಿ ಪರಿಸರ ಪರಾಕ್ರಮಿಗಳ ದಗಲುಬಾಜಿ ಆಟದಿಂದ ಉತ್ತರ ಕನ್ನಡಿಗರೀಗ ಬೇಸತ್ತು ಹೋಗಿದ್ದಾರೆ. ಮೂಲತಃ ತಮ್ಮ ಅಡಿಕೆ ತೋಟಗಳ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವ ಹವ್ಯಕ ಬ್ರಾಹ್ಮಣರ ಮುಖವಾಡವಾಗಿಯಷ್ಟೆÃ ಚಲಾವಣೆಗೆ ಬರುವ ಈ ಢೋಂಗಿ ಪರಿಸರವಾದ ಅಬ್ರಾಹ್ಮಣ ಸಮುದಾಯಗಳಿಗೆ ದಕ್ಕೆಯಾಗುವ ಯಾವ ಯೋಜನೆಗಳಿಗೂ ಚಕಾರವೆತ್ತುವುದಿಲ್ಲ. ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಯಿಂದ ಅನಂತ್ ಹೆಗಡೆ ಆಶೀಸರನಂಥ ಬ್ರಾಹ್ಮಣ ಜಾತ್ಯಸ್ಥರೆಲ್ಲ ಪರಿಸರವಾದವನ್ನು ತಮ್ಮಿಷ್ಟದಂತೆ ಕನವರಿಸೋದು ತಮ್ಮ ಜಾತಿಯ ಹಿತ ಕಾಪಾಡುವುದಕ್ಕಷ್ಟೆÃ!
ಜಿಲ್ಲೆಯ ಅಭಿವೃದ್ಧಿಗೆ ಅನಿವಾರ್ಯ ಅಗತ್ಯವಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಡ್ಡಗಾಲು ಹಾಕುವ ಈ ಪ್ರಚಂಡರು, ತಮ್ಮ ಶಿರಸಿ-ಯಲ್ಲಾಪುರ ಹೈಗರ ಸೀಮೆಗೆ ಅನುಕೂಲವಾಗುವ ತಾಳಗುಪ್ಪಾ-ಸಿದ್ಧಾಪುರ-ಶಿರಸಿ-ಹಾವೇರಿ ರೈಲು ಮಾರ್ಗಕ್ಕೆ ಒತ್ತಾಯಿಸುತ್ತಾರೆ. ಆಗ ಆಗುವ ಪರಿಸರ-ಅರಣ್ಯ ನಾಶ ಇವರಿಗೆ ಕಾಣಿಸುವುದಿಲ್ಲ. ಈ ದ್ವಿಮುಖ ನಾಟಕದ ಪರಿಸರವಾದಿ ತಂಡದಲ್ಲಿ ಆರಂಭದಲ್ಲಿ ಕೇಂದ್ರ ಮಂತ್ರಿ ಅನಂತ್ಮಾಣಿಯೂ ಇದ್ದ. ಯಾವಾಗ ಅನಂತ್ ಹೆಗಡೆ ಆಶೀಸರ ಎಂಬ ಮತ್ತೊÃರ್ವ ಬ್ರಾಹ್ಮಣ ಪಟು ಪರಿಸರ ಹೋರಾಟವನ್ನೆÃ ತನ್ನ ಚೆಡ್ಡಿ ರಾಜಕಾರಣಕ್ಕೆ ಚಿಮ್ಮುಹಲಗೆ ಮಾಡಿಕೊಳ್ಳಲು ಹವಣಿಸಿದನೋ ಆಗ ಅನಂತ್ಮಾಣಿ ತಿರುಗಿಬಿದ್ದ. ಒಂದು ಹಂತದಲ್ಲಿ ಈ ಪರಿಸರವ್ಯಾಧಿ ಅಶೀಸರ ಆರೆಸ್ಸೆಸ್ ಸಂಪರ್ಕ ಸಾಧಿಸಿ, ಮಾಣಿಗೆ ಕೊಕ್ ಕೊಟ್ಟು  ಬಿಜೆಪಿ ಸಂಸದಗಿರಿ ಟಿಕೆಟ್ ತರಲು ಹವಣಿಸಿದ್ದೂ ಇದೆ. ಅದೇ ಕಾರಣಕ್ಕೆ ಅನಂತ್ಮಾಣಿ ಈಗ ಈ ಪರಿಸರ ಗ್ಯಾಂಗನ್ನು ಅಭಿವೃದ್ಧಿ ವಿರೋಧಿ ಅಡ್ನಾಡಿಗಳು ಎಂಬಂತೆ ಮೂದಲಿಸುತ್ತಿದ್ದಾನೆ.
ಢೋಂಗಿ ಪರಿಸರವಾದಿ ತಂಡದ ಕೆಟ್ಟ ಕಣ್ಣಿÃಗ ಕುಮಟಾ-ಶಿರಸಿ ರಸ್ತೆ ಅಗಲೀಕರಣ ಯೋಜನೆ ಮೇಲೆ ಬಿದ್ದಿದೆ. ರಾಜ್ಯ ಹೆದ್ದಾರಿಯಾಗಿದ್ದ ಸದ್ರಿ ರಸ್ತೆಯನ್ನು ಹಾವೇರಿಯಿಂದ ಕುಮಟಾವರೆಗೆ ರಾಷ್ಟಿçಯ ಹೆದ್ದಾರಿ 766ಇ ಎಂದು ಘೋಷಿಸಲಾಗಿದೆ. ಸಾಗರಮಾಲಾ ಯೋಜನೆಯಲ್ಲಿ ಮಂಜೂರಾಗಿರುವ ಈ 60 ಕಿ.ಮೀ ಉದ್ದದ ರಸ್ತೆ ಯೋಜನಾ ವೆಚ್ಚ ಬರೋಬ್ಬರಿ 360.60 ಕೋಟಿ ರೂಪಾಯಿಗಳು. ಈ ಕಾಮಗಾರಿ ಗುತ್ತಿಗೆ ಆರ್‌ಎನ್‌ಎಸ್ ಇನ್‌ಫ್ರಾಸ್ಟçಕ್ಚರ್ ಲಿಮಿಟೆಡ್ ಮತ್ತು ಗಾಯತ್ರಿ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಸಹಭಾಗಿತ್ವದಲ್ಲಿ ಪಡೆದುಕೊಂಡಿವೆ. ಯೋಜನೆಯ ವಿಸ್ತೃತ ವರದಿ(ಡಿಪಿಆರ್)ನಂತೆ ಈಗಿರುವ ರಸ್ತೆಯನ್ನು 11 ಮೀಟರ್‌ನಿಂದ 18 ಮೀಟರ್ ಅಗಲ ಮಾಡಲಾಗುತ್ತದೆ. ಈಗಿರುವ 11 ಸೇತುವೆಗಳನ್ನು ಪುನರ್ ನಿರ್ಮಿಸಲಾಗುತ್ತದೆ.
ಹಾಗೆ ನೊಡಿದರೆ ಈ ಅಗಲೀಕರಣ ಬಹುದಿನದ ಅಗತ್ಯವಾಗಿತ್ತು. ಆದರೆ ಇಲ್ಲಿಯ ಹೊಣೆಗೇಡಿ ಎಂಪಿ, ಎಮ್ಮೆಲ್ಲೆ, ಮಿನಿಸ್ಟರ್‌ಗಳು ಎಷ್ಟೆÃ ಸಾವು-ನೋವಾದರೂ, ಸರಕು ಸಾಗಾಣಿಕೆಗೆ ತೊಂದರೆಯಾದರೂ, ಅಭಿವೃದ್ಧಿ ವೇಗಕ್ಕೆ ಬ್ರೆÃಕ್ ಬಿದ್ದಿದ್ದರೂ ತಲೆಯೇ ಕೆಡಿಸಿಕೊಂಡಿರಲಿಲ್ಲ. ಆದರೆ ಸದ್ರಿ ಯೋಜನೆಯ ಪ್ರಸ್ತಾಪ ಹೊರೆ ಬೀಳುತ್ತಿದ್ದಂತೆಯೇ ಘಟ್ಟದ ಮೇಲಿನ ಪರಿಸರ ವ್ಯಾಧಿ ತಂಡ ಹುಸಿ ಹಸಿರು ಕಳಕಳಿ ಪ್ರದರ್ಶಿಸತೊಡಗಿದೆ. ಅನಂತ ಹೆಗಡೆ ಆಶೀಸರನ ಗ್ಯಾಂಗ್ ಪಶ್ಚಿಮ ಘಟ್ಟ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ ಬರುತ್ತದೆ; ಗಿಡಮೂಲಿಕೆ ಸಂರಕ್ಷಿತ ದೇವಿಮನೆ ಘಟ್ಟ ಪ್ರದೇಶ ಧ್ವಂಸವಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿದೆ. ಕಂಡ-ಕಂಡ ಅಧಿಕಾರಿಗಳಿಗೆಲ್ಲಾ ಮನವಿ ಕೊಟ್ಟು ಉದ್ದುದ್ದ ಬೋಗಸ್ ಭಾಷಣ ಬಿಗಿಯುತ್ತಿದ್ದಾರೆ.
ಆದರೆ ವಾಸ್ತವ ಇವರೇಳುವಷ್ಟು ಭೀಭತ್ಸವಾಗೇನೂ ಇಲ್ಲ. ದೇವಿಮನೆಯ ಔಷಧಿ ಮೂಲಿಕೆಗಳ ಸಂರಕ್ಷಿತ ಪ್ರದೇಶ ರಸ್ತೆಯಿಂದ ತುಂಬ ದೂರದಲ್ಲಿದೆ. ಇಲ್ಲಿಯ ಔಷಧಿ ಮೂಲಿಕೆಗಳ ವಾಸ್ತವ ಸ್ಥಿತಿ ಅರಣ್ಯ ಇಲಾಖೆಗೂ ಗೊತ್ತಿಲ್ಲ. ಪರಿಸರ ವ್ಯಾಧಿಗಳು ಮಾತ್ರ ಅಮೂಲ್ಯ ಗಿಡಮೂಲಿಕೆಯಿದೆ ಎಂದು ಬೊಂಬಡಾ ಬಜಾಯಿಸುತ್ತಿದ್ದಾರೆ. ಸ್ವಾತಂತ್ರö್ಯ ನಂತರ ಶಿರಸಿ-ಕುಮಟಾ ರಸ್ತೆ ನಿರ್ಮಾಣವಾಗಿದೆ. ಆಗಾಗ ರಸ್ತೆ ಅಗಲೀಕರಣವೂ ಆಗಿದೆ. ಇದರಿಂದ ಗುಡ್ಡಗಳ ಕುಸಿತವಾಗಲಿ, ಹತ್ತಿರದ ಗ್ರಾಮಗಳಿಗೆ ಅನಾಹುತವಾಗಲಿ ಆಗಿದ್ದಿಲ್ಲ; ರಸ್ತೆ ಅಗಲೀಕರಣದಿಂದ ವನ್ಯಜೀವಿಗಳ ಓಡಾಟಕ್ಕೆ ಕಷ್ಟವಾಗಲಿದೆ ಎಂಬುದೇ ಹಾಸ್ಯಾಸ್ಪದ. ಈಗಾಗಲೇ ಇಲ್ಲಿ ರಸ್ತೆಯಿದೆ. ಹಗಲೂ-ಇರುಳು ವಾಹನ ಓಡಾಟವಿದೆ. ಪ್ರಾಣಿಗಳಿಗೆ ತೊಂದರೆಯೇನಾಗಿಲ್ಲ. ದೇವಿಮನೆ ಘಟ್ಟ-ಕಣಿವೆಯಲ್ಲಿ ವಿದ್ಯುತ್ ಮಾರ್ಗದ ಕಾರಿಡಾರ್ ಕೂಡ ಇದೆ. ಇದರಿಂದ ಪರಿಸರಕ್ಕೆ ಹಾನಿಯೇನಾಗಿಲ್ಲ. ಅಷ್ಟಕ್ಕೂ ಕಡಿಯುವುದು ರಸ್ತೆ ಅಂಚಿನ ಸ್ವಲ್ಪ ಕಾಡಷ್ಟೆÃ! ಹೆದ್ದಾರಿ ನಿರ್ಮಾಣದ ನಂತರ ಅಕ್ಕ-ಪಕ್ಕದಲ್ಲಿ ಮರ ಬೆಳೆಸಲು ಅವಕಾಶ ಇದ್ದೆÃಯಿದೆ.
ಮೂರು ದಶಕದಿಂದ ಹಾವೇರಿ-ಕುಮಟಾ-ತಡಸ-ಕುಮಟಾ ರಸ್ತೆ ಮೇಲ್ದರ್ಜೆಗೇರಿಸುವ ಬೇಡಿಕೆ ವಾಣಿಜ್ಯೊÃದ್ಯಮಿಗಳು, ಜನಸಾಮಾನ್ಯರು ಮಂಡಿಸುತ್ತಾ ಬಂದಿದ್ದರು. ಈ ರಸ್ತೆ ಅಗಲೀಕರಣ ಜಿಲ್ಲೆಯ ಅಭಿವೃದ್ಧಿಗೆ ಹೆಬ್ಬಾಗಿಲು. ಜಿಲ್ಲೆಯ ಬಂದರುಗಳ ಅಭಿವೃದ್ಧಿ ಇದರಿಂದಾಗುತ್ತದೆ. ಹುಬ್ಬಳ್ಳಿ-ಹಾವೇರಿ-ದಾವಣಗೆರೆ ಮುಂತಾದೆಡೆಯಿಂದ ಕರಾವಳಿಗೆ ಉತ್ಪಾದಿತ ವಸ್ತುಗಳ ರಫ್ತಿಗೆ ಉತ್ತೆÃಜನ ಸಿಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮ, ಸ್ಕೊಬಾ ಡ್ರೆöÊವಿಂಗ್‌ಗೆ ಈ ಹೆದ್ದಾರಿ ಪೂರಕÀವಾಗುತ್ತದೆ. ಕಡಿಮೆ ಅವಧಿಯಲ್ಲಿ ಸುರಕ್ಷಿತ ಪ್ರಯಾಣ ಮಾಡಬಹುದು. ಈಗಿನದು ಯಮಯಾತನೆಯ ಪ್ರವಾಸ!! ರಸ್ತೆ ಅಗಲಿಕರಣ ಉದ್ಯಮಿಗಳಗಷ್ಟೆÃ ಅಲ್ಲ. ಶಿಕ್ಷಣ, ಆರೋಗ್ಯ, ಮತ್ತಿತರ ಕಾರಣಕ್ಕೆ ಕರಾವಳಿಯತ್ತ ಹೋಗುವವರಿಗೆ ಮತ್ತು ಕರಾವಳಿಯಿಂದ ಬಯಲು ಸೀಮೆಗೆ ಹೋಗುವವರಿಗೂ ವರದಾನವೇ ಸರಿ.
ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು ತುಲನಾತ್ಮಕವಾಗಿ ಕಡಿಮೆ ಬಂಡವಾಳ ಸಾಕು. ಯಲ್ಲಾಪುರ-ಶಿರಸಿ-ಸಿದ್ಧಾಪುರ-ಮುಂಡಗೋಡ ತಾಲ್ಲೂಕುಗಳು ರೈಲು ಮಾರ್ಗ ಕಾಣುವುದು ಅನುಮಾನ ಎಂದು ಹೊಣೆಗೇಡಿ ಸಂಸದ ಕಮ್ ಕೇಂದ್ರ ಮಂತ್ರಿ ಅನಂತ್ಮಾಣಿಯೇ ಬಡಬಡಿಸುತ್ತಿದ್ದಾನೆ. ಹೀಗಿರುವಾಗ ರಾಷ್ಟಿçÃಯ ಹೆದ್ದಾರಿಯಾಗಿ ರಸ್ತೆ ಅಗಲೀಕರಣವೂ ಬೇಡವೆಂದರೆ ಹೇಗೆ? ಸ್ವಾರ್ಥಕ್ಕಾಗಿ ಪರಿಸರ ಸಂರಕ್ಷಣೆ ಪ್ರಹಸನ ಮಾಡುತ್ತಿರುವ ಹುಸಿ ಪರಿಸರವಾದಿಗಳಿಗೆ ಜನರೀಗ ಉಗಿಯುತ್ತಿದ್ದಾರೆ. ಉತ್ತರ ಕನ್ನಡಿಗರು ಈ ಛಲವನ್ನು ದಶಕದ ಹಿಂದೆಯೇ ತೋರಿಸಬೇಕಿತ್ತು. ಸೋಗಲಾಡಿ ಪರಿಸರ ಪರಾಕ್ರಮಿಗಳ ಬಂಡಲ್ ಭಾಷಣ, ಅಂಕಣ, ಮಾನವ ಸರಪಳಿಗಳಿಗೆ ಜಿಲ್ಲೆಯ ಮುಗ್ಧ ಜನ ಸಿಲುಕಿದ್ದರಿಂದಲೇ ಅಭಿವೃದ್ಧಿ ಕಾಣದಂತಾಯ್ತು. ಪರಿಸರವಾದಿಗಳ ಕಿರಿಕಿರಿಯೊಂದಿಲ್ಲದಿದ್ದರೆ ಎಂದೋ ಜಿಲ್ಲೆಗೆ ರೈಲು-ಸುಸಜ್ಜಿತ ರಸ್ತೆ, ಬಂದರು, ಬೃಹತ್ ಉದ್ಯಮ ಬರುತ್ತಿತ್ತು. ವಿದ್ಯೆ, ಉದ್ಯೊಗ, ವ್ಯವಹಾರಕ್ಕೆ ಗುಳೇ ಹೋಗುವುದು ತಪ್ಪುತ್ತಿತ್ತು. ಉತ್ತರ ಕನ್ನಡ ಪಕ್ಕದ ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡದಂತೆ ಪ್ರಗತಿ ಕಾಣುತ್ತಿತ್ತು.
ಈಗ ಜನರಿಗೆ ಪರಿಸರ ವ್ಯಾಧಿಗಳ ಬಣ್ಣ ಗೊತ್ತಾಗಿದೆ. ತದಡಿ ಬಂದರು ಬೇಕೆಂದು ಪರಿಸರವಾದಿಗಳಿಗೆ ತಿರುಗಿ ಬಿದ್ದಿದ್ದ ಜನರೀಗ ಕುಮಟಾ-ಹಾವೇರಿ ರಸ್ತೆ ಅಗಲೀಕರಣದ ಪರವಿದ್ದಾರೆ. ಇನ್ನಾದರೂ ಪರಿಸರವಾದಿಗಳು ದ್ರೊÃಹದ ಆಟ ನಿಲ್ಲಿಸುವರಾ?
– ಶುದ್ಧೊಧನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...