Homeಕರ್ನಾಟಕಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!...

ಪತ್ರಿಕೆಯ ಮೂಲಕ ಜನಪರ ಹೋರಾಟಕ್ಕೆ ಆಖಾಡ ಸಿದ್ಧ!…

- Advertisement -
- Advertisement -

ಜನವಾಹಿನಿಯ ನೆನಪುಗಳು: ಅಂಕಣ-7
ನಿಖಿಲ್ ಕೋಲ್ಪೆ

ಕೃಪೆ: ’ಆರ್ಸೋ’ ಕೊಂಕಣಿ ಪತ್ರಿಕೆ

ಮೊದಲೇ ಹೇಳಿದಂತೆ ಕಂಪ್ಯೂಟರ್ ಇತ್ಯಾದಿ ಬಂದಿದ್ದರೂ, ಆಗ ಆನ್ಲೈನ್ ಎಡಿಟಿಂಗ್ ಹೊಸ ವಿಷಯವಾಗಿದ್ದುದರಿಂದ ಅದಕ್ಕಾಗಿಯೇ ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಪೂರೈಸಿದ ಕಂಪೆನಿಯವರು ವಿಶೇಷ ತರಬೇತಿ ಏರ್ಪಡಿಸಿದ್ದರು.

ನಮ್ಮಲ್ಲಿ ಕೆಲವರು ಪೇಜ್‍ಮೇಕರ್ ಇತ್ಯಾದಿಗಳಲ್ಲಿ ನಿಷ್ಣಾತರಾಗಿದ್ದರೂ, ನನ್ನನ್ನೂ ಸೇರಿದಂತೆ ಕೆಲವರಿಗೆ ಕನ್ನಡ ಟೈಪಿಂಗ್ ಕೂಡಾ ಬರುತ್ತಿರಲಿಲ್ಲ! ವಿಭಾಗ ಮುಖ್ಯಸ್ಥರು ಸುದ್ದಿಗಳನ್ನು ಆಯ್ಕೆ ಮಾಡಿ, ಉಪಸಂಪಾದಕರಿಗೆ ಹಂಚಬೇಕು. ಉಪಸಂಪಾದಕರು ಟೈಪ್ ಮಾಡಿದ್ದನ್ನು ಮತ್ತೊಮ್ಮೆ ಓದಿ ವಿಭಾಗ ಮುಖ್ಯಸ್ಥರಿಗೆ ಆಂತರಿಕ ನೆಟ್ವರ್ಕ್ ಮೂಲಕ ಕಳಿಸಬೇಕು. ಅದನ್ನವರು ಪರಿಶೀಲಿಸಿ, ಹೆಡ್ಡಿಂಗ್ ಇತ್ಯಾದಿ ಸರಿಪಡಿಸಿ ಮರಳಿ ಪೇಜ್ ಮಾಡಲು ಕಳಿಸಬೇಕು. ಪೇಜ್ ಮಾಡಿದ ಬಳಿಕ ಅದರ ಪ್ರಿಂಟ್ ತೆಗೆದು ಮತ್ತೆ ಮುಖ್ಯಸ್ಥರಿಗೆ ತೋರಿಸಿ, ಅವರು ಅಂಗೀಕರಿಸಿದ ಬಳಿಕ ಎ3 ಪ್ರಿಂಟರಲ್ಲಿ ಬಟರ್‍ಶೀಟ್‍ನಲ್ಲಿ, ಬಣ್ಣದ ಪುಟವಾಗಿದ್ದರೆ ಫಿಲ್ಮ್ ಶೀಟ್‌ನಲ್ಲಿ ಪ್ರಿಂಟ್ ತೆಗೆದು ಪ್ರೀಪ್ರೆಸ್‍ಗೆ ಕಳುಹಿಸಬೇಕು. ಅಲ್ಲಿ ಪ್ಲೇಟ್ ತಯಾರಿಸಿ ಮುದ್ರಣ ವಿಭಾಗಕ್ಕೆ ಕಳಿಸುತ್ತಾರೆ. ಇದಕ್ಕಾಗಿ ಎಲ್ಲಾ ಕಂಪ್ಯೂಟರ್‌ಗಳಿಗೆ ಸಿರಿಯಲ್ ನಂಬರ್ ನೀಡಲಾಯಿತು. (ನಂತರ ಬಣ್ಣದ ಪುಟಗಳಿಗೆ ದುಬಾರಿ ಬೆಲೆಯ ಆ ಕಾಲದಲ್ಲಿ ಅತ್ಯಾಧುನಿಕ ಎನಿಸಿದ ಇಮೇಜ್ ಸೆಟ್ಟರ್ ಬಂತು. ಅದು ಕಲರ್ ಸೆಪರೇಶನ್ ಮಾಡಿ ಇಡೀ ಪುಟದ ಫಿಲ್ಮ್ ಹೊರತೆಗೆಯುತ್ತಿತ್ತು.)

ಆಗ ಈಗಿನಂತೆ ಎಲ್ಲವೂ ಡಿಜಿಟಲ್ ಫೋಟೋಗಳಾಗಿರಲಿಲ್ಲ. ಪ್ರಿಂಟ್‍ಗಳೂ ಇರುತ್ತಿದ್ದವು. ಅವುಗಳನ್ನು ತಾಂತ್ರಿಕ ವಿಭಾಗಕ್ಕೆ ಕಳುಹಿಸಿದರೆ, ಅಲ್ಲಿ ಸ್ಕ್ಯಾನ್ ಮಾಡಿ ಆಯಾ ಫೋಲ್ಡರ್‌ಗಳಿಗೆ ಹಾಕುತ್ತಿದ್ದರು. ದೇಶ, ವಿದೇಶಗಳ ಫೋಟೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಅವು ಸಂಜೆಯ ಹೊತ್ತಿಗೆ ಇಂಟರ್‌ನೆಟ್ ಮೂಲಕ ಬರುತ್ತಿದ್ದವು. ನೆಟ್‍ಗಾಗಿಯೇ ಡೆಡಿಕೇಟೆಡ್ ಕೇಬಲ್ ಅಳವಡಿಸಲಾಗಿತ್ತು. ಆದರೂ, ಆಗಿನ ಸ್ಪೀಡ್ ನೆನೆಸಿಕೊಂಡರೆ ನಗು ಬರುತ್ತದೆ! ಒಂದು ಫೋಟೋ ಬರಲು ಹೆಂಡತಿಯ ಹೆರಿಗೆಗಾಗಿ ಆಸ್ಪತ್ರೆಯಲ್ಲಿ ಕಾಯುವ ಗಂಡನ ಸ್ಥಿತಿ!

ಇವೆಲ್ಲವೂ ಈಗ ನೆನಸುವಷ್ಟು ಸುಲಭವಾಗಿ ಇರಲಿಲ್ಲ! ಇದಕ್ಕೆ ಹೊಂದಿಕೊಳ್ಳಲು ಕೆಲವು ದಿನಗಳೇ ಹಿಡಿದವು! ಅದಕ್ಕಾಗಿಯೇ ತರಬೇತಿ. ಕಂಪೆನಿಯಿಂದ ಸೌರಭ್ ಎಂಬ ಯುವಕ ಬಂದಿದ್ದರು. ಆತ ಒಳ್ಳೆಯ ಶಿಕ್ಷಕ. ನಡುವೆ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದವರಿಗೆ ಒಂದು ಚಾಕಲೇಟ್ ಬಹುಮಾನ! ಕಂಪ್ಯೂಟರ್ ಅಜ್ಞಾನಿಯಾಗಿದ್ದ ನನಗೆ ಮೂರು ಚಾಕಲೇಟ್ ಸಿಕ್ಕಿದ್ದು ಇವತ್ತೂ ನೆನಪಿದೆ. ನಾವೆಲ್ಲ ಬಿಡುವಿನ ಸಂದರ್ಭದಲ್ಲಿ ಕನ್ನಡ ಟೈಪಿಂಗ್ ಕಲಿತೆವು. ಮೊದಲೇ ಹೇಳಿದಂತೆ DOS ಆಧರಿತ ‘ಪ್ರಕಾಶಕ್’ ಎಂಬ ಸಾಫ್ಟ್‌ವೇರ್. ಕಲಿಯಲು ಕಷ್ಟ. ಯಾಕೆಂದರೆ ಕೀ ಬೋರ್ಡ್ ಅಸಂಬದ್ಧ ಎಂಬಂತೆ ಕಾಣುತ್ತಿತ್ತು. ಇಂಗ್ಲೀಷ್ ಅಕ್ಷರಗಳಿಗೂ ಅದಕ್ಕೂ ಸಂಬಂಧವೇ ಇಲ್ಲ! ಒಮ್ಮೆ ಕಲಿತರೆ ಅತ್ಯಂತ ಸರಳ ಮತ್ತು ಅನುಕೂಲಕರ. ನಾನಂತೂ ಸ್ವಲ್ಪ ಸಮಯದಲ್ಲೇ ಹೆಚ್ಚುಕಡಿಮೆ ಮಾತಿನ ವೇಗದಲ್ಲಿ ಟೈಪ್ ಮಾಡಲು ಕಲಿತೆ! ಆಗ ಕಲಿತ ಒಂದು ಪಾಠವೆಂದರೆ, ಏನನ್ನಾದರೂ ಕಲಿಯಲು ಇರುವ ಅಡ್ಡಿಯೆಂದರೆ ಮಾನಸಿಕ ಹಿಂಜರಿಕೆ (mental block). ಇದನ್ನು ನಿವಾರಿಸಿದ್ದಕ್ಕಾಗಿ ಸೌರಭ್‌ರನ್ನು ನೆನಪಿಸಿಕೊಳ್ಳುತ್ತೇನೆ.

ಮೊದಲೇ ದುಬಾರಿ ಕಂಪ್ಯೂಟರ್! ಏನು ಮಾಡಿದರೆ ಏನು ಹಾಳಾಗುತ್ತದೋ ಎಂಬ ಭಯ ಬೇರೆ! “ನೀವು ಇದನ್ನು ಎತ್ತಿ ಹಾಕದ ಹೊರತು ಏನೂ ಆಗುವುದಿಲ್ಲ. ಪ್ರೋಗ್ರಾಂ ಫೈಲ್ಸ್ ಮುಟ್ಟಬೇಡಿ. ಮುಟ್ಟಿದರೂ ಅದು ಕನ್ಫರ್ಮೇಶನ್ ಕೇಳುತ್ತದೆ. ಡಿಲೀಟ್ ಮಾಡಬೇಡಿ. ಉಳಿದಂತೆ ನೀವು ಕಂಪ್ಯೂಟರ್ ಹಾಳು ಮಾಡಿ ತೋರಿಸಿ. ನಾನು ಬೇರೆ ಕಂಪ್ಯೂಟರ್ ಕೊಡುತ್ತೇನೆ” ಎಂದು ಅವರು ಧೈರ್ಯ ತುಂಬಿದ್ದರು! ಇದರಿಂದ ಮುಂದೆ ನಾವಾಗಿಯೇ ಒಂದೊಂದನ್ನೇ ಧೈರ್ಯವಾಗಿ ಕಲಿಯಲು ಸಾಧ್ಯವಾಯಿತು.

ಎಷ್ಟರ ಮಟ್ಟಿಗೆ ಎಂದರೆ, ಅವರು ಫೈಲ್ ಶೇರಿಂಗ್ ಮಾಡಲು ಇ-ಮೈಲ್‍ನಂತಹ ಸಾಫ್ಟ್‌ವೇರ್ ಕೊಟ್ಟಿದ್ದರು. ಅದು ಕಿರಿಕಿರಿ ಉಂಟು ಮಾಡುತ್ತಿತ್ತು! ಮುಂದೆ ನಾವೇ explorer ಮೂಲಕ ಕಾಪಿ ಪೇಸ್ಟ್ ಮಾಡುವ ಸರಳ ಉಪಾಯ ಕಂಡು ಹಿಡಿದೆವು!

ನಾವು ಸೀನಿಯರ್‌ಗಳಿಗೆ ಈ ತರಬೇತಿಗಳಲ್ಲಿ ನಿರಂತರ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದೆ. ಕಾರಣ ನಾವು ಪತ್ರಿಕೆಯಲ್ಲಿ ಇರಬೇಕಾದ ಸ್ಥಿರ ಶೀರ್ಷಿಕೆ, ವಿಭಾಗಗಳು ಇತ್ಯಾದಿಗಳ ಬಗ್ಗೆ ತಲೆಕೆರೆದುಕೊಳ್ಳುತ್ತಿದ್ದೆವು. ಪಟ್ಟಣಗಳ ಸುದ್ದಿ ಪುಟಗಳಿಗೆ ‘ಪೇಟೆ-ಪಟ್ಟಣ’, ಗ್ರಾಮೀಣ ಸುದ್ದಿಗಳ ಪುಟಗಳಿಗೆ ’ಊರು-ಕೇರಿ’, ಕ್ರೀಡಾಪುಟಗಳಿಗೆ ‘ಆಟ-ಕೂಟ’ ಹೀಗೆ ಹೆಸರುಗಳನ್ನು ಪಟ್ಟಿ ಮಾಡಿ ಅಂತಿಮಗೊಳಿಸುವುದೂ ದೊಡ್ಡ ಕೆಲಸವಾಗಿತ್ತು.

ಇನ್ನೊಂದು ದೊಡ್ಡ ಕೆಲಸವೆಂದರೆ ಬೇರೆ ಬೇರೆ ಆವೃತ್ತಿಗಳನ್ನು ಯೋಜಿಸುವುದು! ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಉಡುಪಿಗೆ ಒಂದು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ ಒಂದು, ಮಂಗಳೂರಿಗೆ ಒಂದು ಮತ್ತು ಅಂತಿಮವಾಗಿ ಲೇಟ್ ಸಿಟಿ ಎಡಿಷನ್! ಜೊತೆಗೆ ಉತ್ತರ ಕನ್ನಡ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಿಗೆ ಪ್ರತ್ಯೇಕ- ಹೀಗೆ ಹಲವು ಆವೃತ್ತಿಗಳು! ಇವುಗಳು ಎಷ್ಟು ದೂರ ಇವೆ, ಎಷ್ಟು ಗಂಟೆಗೆ ತಲುಪಬೇಕು, ಪುಟ ಎಷ್ಟು ಗಂಟೆಗೆ ಮುಗಿಯಬೇಕು, ಅದಕ್ಕೆ ತಕ್ಕಂತೆ ಸಿಬ್ಬಂದಿಗಳಿಗೆ ಶಿಫ್ಟ್ ಮತ್ತು ಕೆಲಸಕ್ಕೆ ಹಾಜರಾಗುವ ಸಮಯ ನಿಗದಿ ಪಡಿಸುವುದು ಇತ್ಯಾದಿಯಾಗಿ ಹಲವಾರು ತಲೆನೋವಿನ ಕೆಲಸಗಳು ನಮಗಿದ್ದವು!

ಇವೆಲ್ಲವನ್ನು ಅನುಷ್ಠಾನಕ್ಕೆ ತರಲು ಬೇರೆಬೇರೆ ವಿಭಾಗಗಳನ್ನು ರಚಿಸಲಾಯಿತು. ಆ ಕುರಿತು ಮತ್ತು ಅವುಗಳಲ್ಲಿ ನನಗೆ ನೆನಪಿರುವಂತೆ ಇದ್ದವರು ಯಾರು ಇತ್ಯಾದಿಗಳ ಕುರಿತು ಮುಂದೆ ಬರೆಯುತ್ತೇನೆ.
***

ಕಚೇರಿಯೇ ಮನೆಯಾಯಿತು!

ಪತ್ರಿಕೆಗಾಗಿ ಯೋಜನೆ, ತರಬೇತಿ ನಡೆಯುತ್ತಿದ್ದಾಗ ಮತ್ತು ನಂತರ ಪತ್ರಿಕೆ ಆರಂಭಗೊಂಡ ಬಳಿಕವೂ ನಾವು ಕೆಲವರು ಕಚೇರಿಯಲ್ಲಿಯೇ ಮಲಗುತ್ತಿದ್ದೆವು. ಕೆಲಸ ಅಷ್ಟಿತ್ತು! ಮುಖಪುಟ ನೋಡಿಕೊಳ್ಳಬೇಕಾಗಿದ್ದ ನನಗಂತೂ ನಿತ್ಯ ರಾತ್ರಿ ಪಾಳಿ ಖಾಯಂ! ರಾತ್ರಿ ಎಡಿಷನ್ ಮುಗಿಸಿ ಪತ್ರಿಕೆ ಪ್ರಕಟವಾಗಿ ಬಂಟ್ವಾಳ ಎಡಿಷನ್ ಸಾಗಿಸುವ ಕಾರಿನಲ್ಲಿ ಹೋಗಿ ಪಾಣೆಮಂಗಳೂರಿನಲ್ಲಿ ಇಳಿದು ಎರಡು ಕಿ.ಮೀ. ನಿಶಾಚರ ಪಿಶಾಚಿಯಂತೆ ನಡೆದು ಮನೆ ಸೇರಬೇಕು. ಮತ್ತೆ ನಿದ್ದೆಯ ಶಾಸ್ತ್ರ ಮಾಡಿ ಮರುದಿನ ಹಾಜರಾಗಬೇಕು. ಪ್ರಯಾಣದ ಸಮಯವೂ ವ್ಯರ್ಥ! ವಿಲ್ಫ್ರೆಡ್ ಡಿ’ಸೋಜಾ ಅವರಿಗೆ ಇನ್ನೂ ದೂರ- ಉಪ್ಪಿನಂಗಡಿ ದಾಟಿ ಹೋಗಬೇಕು. ಅಲ್ಲದೆ ಉಳಿದವರೂ ಬೈಕಂಪಾಡಿಯಿಂದ ರಾತ್ರಿ ಹೊತ್ತು ಸ್ವಂತ ವಾಹನವಿಲ್ಲದೇ ಹೊರಡುವುದು ಕಷ್ಟ. ನಗರದೊಳಗಿನ ಸಿಬ್ಬಂದಿಗೆ ವಾಹನ ವ್ಯವಸ್ಥೆ ಇತ್ತು.

ಒಂದು ದಿನ ಬೆಳ್ಳಂಬೆಳಗೆ ಆಡಳಿತ ನಿರ್ದೇಶಕ ಸ್ಯಾಮುಯೆಲ್ ಸಿಕ್ವೇರಾ ಕಚೇರಿಗೆ ಬಂದವರೇ ದಂಗು ಬಡಿದುಹೋದರು! ನಾವು ಕೆಲವರು ಕಚೇರಿಯಲ್ಲಿಯೇ ಸಿಕ್ಕಸಿಕ್ಕಲ್ಲಿ ಪೇಪರ್ ಹಾಸಿ ಮಲಗಿದ್ದೆವು. “ಹಾಂ! ನೀವು ಇಲ್ಲಿಯೇ ಮಲಗುತ್ತಿದ್ದೀರಾ!?” ಎಂದವರೇ, ಆಗ ಅವರ ಬಳಿ ಮಾತ್ರವಿದ್ದ ವಾಕಿಟಾಕಿ ಗಾತ್ರದ ಮೊಬೈಲ್ ಫೋನಿನಲ್ಲಿ ಮಾತನಾಡಲಾರಂಭಿಸಿದರು.

ಮಧ್ಯಾಹ್ನದ ಹೊತ್ತಿಗೆ ನಮ್ಮ ದೊಡ್ಡ ಹಾಲ್‍ನಲ್ಲಿ ಪಾರ್ಟಿಷನ್ ಆಯಿತು. ಫ್ಯಾನ್‍ಗಳು ಫಿಕ್ಸ್ ಆದವು. ಐದು ಮಂಚಗಳು, ಹಾಸಿಗೆ, ದಿಂಬು, ಹೊದಿಕೆ, ಬಟ್ಟೆಬರೆ ಇಡಲು ಲಾಕರ್ ಎಲ್ಲವೂ ಬಂದವು. ಅದೇ ರಾತ್ರಿಯಿಂದ ನಮ್ಮ ಪೇಪರ್ ಹಾಸಿಗೆಗೆ ವಿದಾಯ ಹೇಳಿದೆವು. ಇದಕ್ಕಾಗಿಯೇ ನಾನವರನ್ನು ಇಂದೂ ನೆನಪಿಸಿಕೊಳ್ಳುತ್ತೇನೆ. ನಾವೂ ಕೂಡಾ ಇಮ್ಮಡಿ ಪ್ರೀತಿಯಿಂದ ದುಡಿಯಲಾರಂಭಿಸಿದೆವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Thanks for this great write up on Janawahini by Nikhil Kolpe sir.. it manifests their struggle to get the newspaper published in time with perfection must be applauded.. Waiting for further episodes.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...