Homeಆರೋಗ್ಯಉರಿವ ಮನೆಯಲ್ಲಿ ಗಳ ಹಿರಿಯುವವರು, ಸಾವಿನ ಮನೆಯಲ್ಲಿ ಟಿಆರ್‍ಪಿ ವರದಿಗಾರರು

ಉರಿವ ಮನೆಯಲ್ಲಿ ಗಳ ಹಿರಿಯುವವರು, ಸಾವಿನ ಮನೆಯಲ್ಲಿ ಟಿಆರ್‍ಪಿ ವರದಿಗಾರರು

- Advertisement -
- Advertisement -

| ಮಲ್ಲನಗೌಡರ್ |

ಬಿಹಾರದಲ್ಲಿ ಸರ್ಕಾರದ ನಿರ್ಲಕ್ಷ್ಯತನದಿಂದ, ಬೇಜವಾಬ್ದಾರಿಯಿಂದ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿ, ಸಾವಿರಕ್ಕೂ ಹೆಚ್ಚು ಮಕ್ಕಳು ಜೀವನ್ಮರಣದ ನಡುವೆ ಹೋರಾಡುತ್ತಿವೆ. ಈ ಸಮಯದಲ್ಲಿ ಪ್ರಭುತ್ವವನ್ನು ಗುರಿಯಾಗಿಸಿ ವರದಿಗಾರಿಕೆ ಮಾಡಬೇಕಿದ್ದ ಬಹುಪಾಲು ಮಾಧ್ಯಮಗಳ ವರದಿಗಾರರು, ಆಸ್ಪತ್ರೆಗಳ ಐಸಿಯುಗಳಿಗೆ ಅನಾಗರಿಕರಂತೆ ನುಗ್ಗಿ ವೈದ್ಯರು ಮತ್ತು ದಾದಿಯರ ಮೇಲೆ ಮುಗಿಬಿದ್ದು ಕರ್ತವ್ಯಕ್ಕೆ ಅಡ್ಡಿ ಮಾಡಿರುವ ವಿದ್ಯಮಾನಗಳು ಜರುಗಿವೆ. ಟಿಆರ್‍ಪಿಗಾಗಿ ಸಾವಿನ ಮನೆಯಲ್ಲೂ ಸಂತೆ ಮಾಡುತ್ತಿರುವ ಚಾನೆಲ್‍ಗಳು ‘ಜರ್ನಲಿಸಂ ಇನ್ ಐಸಿಯು’ ಎಂಬ ಟೀಕೆಗೆ ಗುರಿಯಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಟಿವಿ ವರದಿಗಾರರು, ಆ್ಯಂಕರ್‍ಗಳು ಮತ್ತು ಕ್ಯಾಮೆರಾಮನ್‍ಗಳ ಈ ಹುಚ್ಚಾಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಆರೋಗ್ಯ ಮಂತ್ರಿ, ಬಿಹಾರದ ಆರೋಗ್ಯ ಸಚಿವ ಮತ್ತು ಅಲ್ಲಿನ ಮುಖ್ಯಮಂತ್ರಿಗಳನ್ನ ತರಾಟೆಗೆ ತೆಗೆದುಕೊಳ್ಳುವುದುನ್ನು ಬಿಟ್ಟ ಹಲವು ಟಿವಿ ವರದಿಗಾರರು, ಅಸ್ವಸ್ಥ ಮಕ್ಕಳಿರುವ ವಾರ್ಡುಗಳಿಗೆ ನುಗ್ಗಿ ಸೇವೆಯಲ್ಲಿ ನಿರತರಾಗಿದ್ದ ವೈದ್ಯರು, ಅಟೆಂಡರುಗಳು ಮತ್ತು ನರ್ಸ್‍ಗಳ ಮೇಲೆ ಮುಗಿಬಿದ್ದು ಜಬರದಸ್ತಿನಲ್ಲಿ ಬೈದು ವರದಿ ಮಾಡಿದ್ದಾರೆ. ಇದರಿಂದ ಮಕ್ಕಳ ಔಷೋಧಪಚಾರಕ್ಕೆ ಅಡ್ಡಿಯುಂಟಾಗಿದೆ. ಅದರ ವಿಡಿಯೋ ನೋಡಿ

ಚಾನೆಲ್‍ಗಳು ಹೀಗೆ ಮಾಡಿದ್ದು ಮಕ್ಕಳ ಬಗ್ಗೆ ಕಾಳಜಿಯಿಂದಲ್ಲ, ಬದಲು ಇಂತಹ ಸಾಹಸಗಳಿಂದ ತಮ್ಮ ಟಿಆರ್‍ಪಿ ಏರಿಸಿಕೊಳ್ಳುವ ಹುನ್ನಾರ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಆಜ್‍ತಕ್ (ಅಲ್ಲಿ ಬಿಹಾರ್ ತಕ್)ನ ನಿರೂಪಕಿ/ ವರದಿಗಾರ್ತಿ ಅಂಜನಾ ಓಂ ಕಶ್ಯಪ್ ಮೊದಲು 3ನೇ ವಾರ್ಡಿಗೆ ನುಗ್ಗಿ ಮಕ್ಕಳ ಪೋಷಕರನ್ನು ಮಾತಾಡಿಸಿದ್ದಾರೆ. ಈ ಎಲ್ಲದರ ಕುರಿತು ತಮಗೆ ಹೇಗೆ ಅನಿಸುತ್ತಿದೆ ಎಂಬ ಮೂರ್ಖ, ಅಸಂಬದ್ಧ ಪ್ರಶ್ನೆಯನ್ನು ಎತ್ತಿದ್ದಾರೆ.

ಟ್ರೀಟ್‍ಮೆಂಟ್‍ ಮಾಡುತ್ತಿದ್ದ ವೈದ್ಯರೊಬ್ಬರ ಮೇಲೆ ನೇರ ಆಕ್ರಮಣ ಮಾಡಿ, ಎಲ್ಲಿದ್ದೀರಾ ನೀವೆಲ್ಲ? ವಾರ್ಡಿನಲ್ಲಿ ತಾಸಿನಿಂದ ನೋಡ್ತಾನೇ ಇದ್ದೇನೆ. ನಿಮಗೆ ಮಕ್ಕಳ ಮೇಲೆ ಕಾಳಜಿನೇ ಇಲ್ಲ’ ಎಂದು ಅರಚಾಡಿದ್ದಾರೆ. ಮೂಲಭೂತ ಸೌಕರ್ಯ ಕಡಿಮೆಯಿದೆ, ಸ್ಟಾಫ್ ಕೊರತೆಯಿದೆ, ನಾವೀಗ ಮಕ್ಕಳ ಟ್ರೀಟ್‍ಮೆಂಟಿನಲ್ಲೇ ತೊಡಗಿದ್ದೇವಲ್ಲ’ ಎಂದು ಹೇಳುವ ವೈದ್ಯರ ಮಾತನ್ನು ಪರಿಗಣಿಸದೇ ಅರ್ಭಟಿಸಿದ್ದಾರೆ. ಈ ಸಾಹಸಿ ಜರ್ನಲಿಸ್ಟ್ ನಂತರ ಶೂ ಹಾಕಿಕೊಂಡು, ಕ್ಯಾಮೆರಾಮನ್ ಕರೆದುಕೊಂಡು ಐಸಿಯುಗೇ ನುಗ್ಗಿ ರಾದ್ದಾಂತ ಮಾಡಿದ್ದಾರೆ. ಆ ಮೂಲಕ ನಿಯಮ ಉಲ್ಲಂಘನೆ ಮಾಡಿ, ಐಸಿಯುನ ವಾತಾವರಣವನ್ನೂ ಹಾಳು ಮಾಡಿದ್ದಾರೆ. ಒಂದಿಷ್ಟು ಸೂಕ್ಷ್ಮತೆಯಿಲ್ಲದ ಅಂಜನಾರ ಈ ಹುಚ್ಚಾಟವನ್ನು ಇತರ ಸ್ಥಳೀಯ ವರದಿಗಾರರೂ ಅನುಕರಿಸಿದ್ದಾರೆ.

ನಿಜಕ್ಕೂ ದುರಂತದ ಬಗ್ಗೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ ಸರ್ಕಾರದ ವಿರುದ್ಧ ಧ್ವನಿ ಎತ್ತಿ ವರದಿಗಾರಿಕೆ ಮಾಡಬೇಕಿತ್ತು. ದೆಹಲಿಯ ಆಸ್ಪತ್ರೆಗಳಲ್ಲಿ ಸಮಸ್ಯೆಯಾದಾಗ ಅಲ್ಲಿನ ಮುಖ್ಯಮಂತ್ರಿಗಳನ್ನು ಚಾನೆಲ್‍ಗಳನ್ನು ತರಾಟೆಗೆ ತೆಗೆದುಕೊಂಡಿದ್ದವು. ಇದು ಸರಿ, ಆದರೆ ಬಿಹಾರದಲ್ಲಿ, ಉತ್ತರಪ್ರದೇಶದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂತಹ ದುರಂತ ಸಂಭವಿಸಿದಾಗ ಈ ಚಾನೆಲ್ ಗಳು ಸರ್ಕಾರದ ವಿರುದ್ಧ ಧ್ವನಿ ಎತ್ತದೇ ಅಲ್ಲಿನ ಅಸಹಾಯಕ ಡಾಕ್ಟರು, ನರ್ಸ್‍ಗಳ ಮೇಲಷ್ಟೇ ಎಗರಾಡುವುದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಲಾಗಿದೆ.

ಆಸ್ಪತ್ರೆಯ ಹೊರಗೆ ಮಕ್ಕಳ ಸಂಬಂಧಿಕರು ಮತ್ತು ಪೋಷಕರು ಮುಖ್ಯಮಂತ್ರಿ ನಿತೀಶ್ ಮತ್ತು ಕೇಂದ್ರರ ಆರೋಗ್ಯ ಸಚಿವ ಹರ್ಷವರ್ಧನ್ ರವರ ವಿರುದ್ದ ಪ್ರತಿಭಟನೆ ನಡೆಸಿದ ಮೇಲಾದರೂ ಮಾಧ್ಯಮಗಳಿಗೆ ಅರಿವಾಗಿ ಸರ್ಕಾರಗಳನ್ನು ಪ್ರಶ್ನಿಸಬೇಕಿತ್ತಲ್ಲವೇ? ಊಹು ಆಗಲೇ ಇಲ್ಲ.

ಈ ಕುರಿತು ಟ್ವೀಟ್ ಮಾಡಿರುವ ಅಲ್ಟ್ ನ್ಯೂಸ್‍ನ ಸಂಸ್ಥಾಪಕ ಪ್ರತೀಕ್ ಸಿನ್ಹಾ, ‘ಇದು ಆಜ್‍ತಕ್‍ನ ಸಾಹಸಿ ಪತ್ರಿಕೋದ್ಯಮ! ಅಸ್ವಸ್ಥ ಮಕ್ಕಳನ್ನು ಉಪಚರಿಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿಗೆ ಕಿರುಕುಳ ನೀಡುವುದು! ಈ ಆಕ್ರೋಶದ ಶೇ.10ರಷ್ಟನ್ನಾದರೂ ರಾಜಕಾರಣಿಗಳ ಮೇಲೆ ತೋರಿಸಿದ್ದರೆ ಒಂದಿಷ್ಟಾದರೂ ಪ್ರಯೋಜನವಾಗುತ್ತಿತ್ತು’ ಎಂದಿದ್ದಾರೆ.

“ಕೊನೆಗೂ ಭಾರತದ ಆರೋಗ್ಯ ಸಂಕಷ್ಟದ ಬಗ್ಗೆ ಟ್ವೀಟ್ ಮಾಡಲು ನರೇಂದ್ರ ಮೋದಿಯವರಿಗೆ ಸಮಯ ಸಿಕ್ಕಿದೆ. ಅವರು ಶಿಖರ್ ಧವನ್ ಬೇಗ ಗುಣಮುಖವಾಗಲೆಂದು ಹಾರೈಸಿದ್ದಾರೆ” ಎಂದು ಖ್ಯಾತ ಯುವ ಚಿಂತಕ ಧೃವ್ ರಾಠೀ ವ್ಯಂಗ್ಯದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಗಾಯದ ಕಾರಣದಿಂದಾಗಿ ವಿಶ್ವಕಪ್ ಕ್ರಿಕೆಟ್‍ನಿಂದ ಹೊರಗುಳಿದ ಶಿಖರ್ ಧವನ್‍ರ ಬಗ್ಗೆ ಕಾಳಜಿ ವಹಿಸುವ ಪ್ರಧಾನಿಗೆ, ಈ ಮಕ್ಕಳ ನೆನಪೂ ಕಾಡಲಿಲ್ಲವೇ ಎಂಬಂತಹ ಪ್ರಶ್ನೆಗಳನ್ನಿಟ್ಟು ಚರ್ಚೆ ಮಾಡದೇ ಪಲಾಯನ ಮಾಡುತ್ತಿರುವ ಮಾಧ್ಯಮಗಳಿಗೆ, ಕಳೆದ ಚುನಾವಣೆಗೆ ಮೊದಲು ಬಜೆಟ್‍ನಲ್ಲಿ ಪ್ರಸ್ತಾಪಿಸಿದ ಆಯುಷ್ಮಾನ್ ಯೋಜನೆ ಸಾಧಿಸಿದ್ದೇನು? ಎಂಬ ಪ್ರಶ್ನೆಯೂ ಕಾಡುತ್ತಿಲ್ಲ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಜುಜುಬಿ ಅನುದಾನ ನೀಡುತ್ತಿರುವ ಸರ್ಕಾರಗಳ ನೀತಿಗಳು, ಈ ಎರಡೂ ಕ್ಷೇತ್ರಗಳನ್ನೂ ಹಂತಹಂತವಾಗಿ ಖಾಸಗೀಕರಣ ಮಾಡುತ್ತ ಬಂದಿರುವುದೇ ಇಂತಹ ದುರಂತಗಳ ಮೂಲ ಅಲ್ಲವೇ? ವಿಪರೀತ ನಿಯಮಗಳ ಆಯುಷ್ಮಾನ್ ಯೋಜನೆಯ ಅಂತಿಮ ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ವಿಮಾ ಕಂಪನಿಗಳಷ್ಟೇ…ಈ ಕುರಿತಾಗಿ ಚರ್ಚೆ ಹುಟ್ಟು ಹಾಕಬೇಕಿದ್ದ ಮಾಧ್ಯಮಗಳು ಟಿ.ಆರ್.ಪಿ ಯ ಸುತ್ತ ಗಿರಕಿ ಹೊಡೆಯುತ್ತ ಬಿದ್ದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...