ಕೆ.ಆರ್.ಪೇಟೆ ಚಲೋ: ಸರಕಾರಕ್ಕೆ ದಲಿತ ಜಯಕುಮಾರ್‌ ಹತ್ಯೆಯ ಕುರಿತು ಕೆಲ ಬೇಡಿಕೆ ಸಲ್ಲಿಸಿದ ಪ್ರತಿಭಟನಾ ಸಭೆ

ಕೆ.ಆರ್.ಪೇಟೆ: ತಾಲ್ಲೂಕಿನ ಕತ್ತರಘಟ್ಟದ ದಲಿತ ಯುವಕ ಜಯಕುಮಾರ್ ಹತ್ಯೆಯನ್ನು ವಿರೋಧಿಸಿ ದಲಿತ ಸಂಘಟನೆಗಳ ಒಕ್ಕೂಟ ಮತ್ತು ನಾಡಿನ ಪ್ರಗತಿಪರ ಸಂಘಟನೆಗಳಿಂದ ಮೇ 27ರಂದು ಕೆ.ಆರ್.ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯನ್ನು ನಡೆಸಲಾಯಿತು. ಸಭೆಯ ಪರವಾಗಿ ದಲಿತ ಸಂಘಟನೆಗಳ ನಾಯಕ ಗುರುಪ್ರಸಾದ್ ಅವರು ರಾಜ್ಯದ ಮುಖ್ಯಮಂತ್ರಿಗೆ ತಾಲ್ಲೂಕಿನ ತಹಶೀಲ್ದಾರ್ ಮೂಲಕ ಸಲ್ಲಿಸಿದ ಬೇಡಿಕೆಗಳನ್ನು ಓದಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಮುಖ್ಯ ಕಾರಣ ನಾಡಿನ ದಲಿತರು ಬಹುಸಂಖ್ಯೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾಗಿದೆ. … Continue reading ಕೆ.ಆರ್.ಪೇಟೆ ಚಲೋ: ಸರಕಾರಕ್ಕೆ ದಲಿತ ಜಯಕುಮಾರ್‌ ಹತ್ಯೆಯ ಕುರಿತು ಕೆಲ ಬೇಡಿಕೆ ಸಲ್ಲಿಸಿದ ಪ್ರತಿಭಟನಾ ಸಭೆ