Homeರಾಜಕೀಯಕರಾವಳಿ ರಾಜಕಾರಣದಲ್ಲಿ ಎಂಪಿಗಿರಿ ಟಿಕೆಟ್ ತಂತ್ರಗಾರಿಕೆ ಶುರು!!

ಕರಾವಳಿ ರಾಜಕಾರಣದಲ್ಲಿ ಎಂಪಿಗಿರಿ ಟಿಕೆಟ್ ತಂತ್ರಗಾರಿಕೆ ಶುರು!!

- Advertisement -
- Advertisement -

ಕರಾವಳಿಯಲ್ಲಿ ಎಂಪಿಗಿರಿ ಗುಂಗು-ರಂಗು ನಿಧಾನಕ್ಕೆ ಏರತೊಡಗಿದೆ! ದಿಲ್ಲಿ ಕನಸು ಕಟ್ಟಿಕೊಂಡಿರುವ ಲಾಟ್-ಪುಟ್ ಪುಢಾರಿಗಳು ಲಾಬಿ ಶುರುಹಚ್ಚಿಕೊಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದಲ್ಲೀಗ ಒಂಥರಾ ಆತುರ-ಕಾತುರ, ಗಡಿಬಿಡಿ, ಗಂಡಾಗುಂಡಿ ಒಟ್ಟೊಟ್ಟಿಗೇ ಭುಗಿಲೆದ್ದುಹೋಗಿದೆ. ಕರಾವಳಿಯ ಮೂರೂ ಕ್ಷೇತ್ರದಲ್ಲಿರುವ ಹಿಂದೂತ್ವದ ಅಮಲೇರಿ ಪಾರ್ಲಿಮೆಂಟಿಗೆ ತೂರಿಕೊಳ್ಳುವ ಆಸೆಯಲ್ಲಿ ಸಂಘಪರಿವಾರದ ಸರದಾರರು ಓಡಾಡುತ್ತಿದ್ದಾರೆ. ಅತ್ತ ಹೈರಾಣಾಗಿರುವ ಕಾಂಗ್ರೆಸ್‍ನಲ್ಲೂ ಸಂಸದನಾಗುವ ಚಟದಾರರಿಗೇನೂ ಕಡಿಮೆಯಿಲ್ಲ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡದ ಕೇಸರಿ ಶಾಲಿನ ಹಾಲಿ ಸಂಸದರ ಬಗ್ಗೆ ಕ್ಷೇತ್ರದಲ್ಲಿರುವ ನಕಾರಾತ್ಮಕ ಭಾವನೆ ಮತ್ತು ಮೋದಿ ಮಾಮನ ಮೋಸಗಾರಿಕೆಯಿಂದ ಬೇಸತ್ತ ಮಂದಿ ಬದಲಾವಣೆ ಬಯಸಿದ್ದಾರೆಂಬ ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್‍ನ ಒಂದಿಷ್ಡು ದಂಡ-ಪಿಂಡಗಳು ಸಂಸದನಾಗುವ ತೆವಲಿಗೆ ಬಿದ್ದಿವೆ.
ದಕ್ಷಿಣ ಕನ್ನಡದ ಹೊಡಿ-ಬಡಿ-ಕಡಿ ಕುಖ್ಯಾತಿಯ ಬೆಂಕಿ ನವಾಬ ನಳಿನ್‍ಕುಮಾರ್ ಕಟೀಲ್‍ಗೆ ಸಂಸದಗಿರಿ ಟಿಕೆಟ್ ತಪ್ಪಿಸಲು ಕಳೆದ ಸಲವೇ ಆರೆಸ್ಸೆಸ್ ಡಾನ್ ಕಲ್ಲಡ್ಕಭಟ್ಟ ಪ್ರಯತ್ನ ನಡೆಸಿದ್ದರು. ಆದರದು ವಿಫಲವಾಗಿ ಆತನಿಗೆ ಉಲ್ಟಾ ಹೊಡೆದಿತ್ತು. ಈ ಬಾರಿಯೂ ಅಂಥದೊಂದು ಸಣ್ಣ ಕರಾಮತ್ತು ಕಲ್ಲಡ್ಕಭಟ್ರು ಚಾಲು ಮಾಡಿದ್ದಾರೆಂಬ ವರ್ತಮಾನ ಚೆಡ್ಡಿ ಬಿಡಾರದಲ್ಲಿದೆ. ಆದರೆ ಗುರುವಿಗೆ ತಿರುಮಂತ್ರ ಹಾಕಿ ಸೆಟೆದುನಿಂತಿರುವ ‘ಕಟೀಲು’ ಸಾಹೇಬರು ಕಳೆದ ಅಸೆಂಬ್ಲಿ ಇಲೆಕ್ಷನ್ ನಂತರ ಮತ್ತೊಂದಿಷ್ಟು ಮಜಬೂತಾಗಿದ್ದಾರೆ. ತಮಗೆ ಬೇಕಾದ ಸ್ವಜಾತಿ ಬಂಟರ ಶಾಸಕನಾಗಿ ಮಾಡಿಕೊಂಡಿರುವ ಕಟೀಲ್‍ನನ್ನು ಕದಲಿಸುವುದು ಅಷ್ಟು ಸುಲಭವಲ್ಲ. ಎಂಬ ಮಾತು ಬಿಜೆಪಿಯಲ್ಲಿ ಅನುರನಿಸುತ್ತಿದೆ. ಆದರೆ ಕಟೀಲು ಬಗ್ಗೆ ಕ್ಷೇತ್ರದ ಜನರಿಗೆ ಸದಭಿಪ್ರಾಯವಿಲ್ಲ. ತನ್ನ ಹಿಂದೂತ್ವದ ಅಸ್ತಿತ್ವ ಕಾಪಾಡಿಕೊಳ್ಳಲು ಇಡೀ ಜಿಲ್ಲೆಗೆ ಬೇಕಿದ್ದರೂ ಬೆಂಕಿ ಹಾಕುವ ವಿದ್ರ್ರೋಹಿ ಮನಸ್ಥಿತಿಯ ಈ ಸ್ವಯಂ ಘೋಷಿತ ದೇಶಭಕ್ತನ ಎದುರು ಕಾಂಗ್ರೆಸ್ ಹೊಸ ಮುಖ ಒಂದಕ್ಕೆ ಅವಕಾಶ ಕೊಟ್ಟರೆ ಬದಲಾವಣೆ ಅಸಾಧ್ಯವೇನಲ್ಲ.
ಎಂಪಿಗಿರಿ ಅಭ್ಯರ್ಥಿ ಆಗಲು ಕಾಂಗ್ರೆಸ್‍ನಲ್ಲಿ ಮಾಜಿಮಂತ್ರಿ ರಮಾನಾಥ ರೈ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್‍ರೈ, ಮಾಜಿ ಮಂತ್ರಿ ವಿನಯ್‍ಕುಮಾರ್‍ಸೊರಕೆ, ಮೊಯ್ಲಿ ಮಹಾತ್ಮನ ಮಗ ಹರ್ಷಮೊಯ್ಲಿ, ಕೆಪಿಸಿಸಿ ಜನರಲ್ ಸೆಕ್ರೆಟರಿ ಪಿ.ವಿ ಮೋಹನ್ ಸಾಲುಗಟ್ಟಿ ನಿಂತಿದ್ದಾರೆ. ಬಂಟ್ವಾಳದಲ್ಲೇ ಗೆಲ್ಲಲಾಗÀದ ಬಡಾಯಿ ಭೂಪ ಬೇಬಿಯಣ್ಣ ಯಾನÉ ರಮಾನಾÀಥ್‍ರೈಗೆ ಜಿಲ್ಲಾ ಮಟ್ಟದ ಇಮೇಜು ಇಲ್ಲ. ಅಧಿಕಾರ ಇಲ್ಲದೇ ಬದುಕಲಾಗದ ರೈ ಬಂಟ್ವಾಳದಲ್ಲಿ ಸೋತ ಮರುದಿನವೇ ತನಗೆ ಎಮ್ಮೆಲ್ಸಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಮಾಡಿಯೆಂದು ಗೋಳಾಡಿದ್ದರು. ತಿಕ್ಕತಿಕ್ಕಲಾಗಿ ಮಾತಾಡಿ ಹಿಂದೂ ವಿರೋಧಾ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರೈ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಬಿಜೆಪಿ ನಿರಾಯಾಸವಾಗಿ ಗೆಲ್ಲುತ್ತದೆ! ಕಾಪು ಕ್ಷೇತ್ರದಲ್ಲಿ ಸೋತು ಸುಣ್ಣವಾಗಿರುವ ವಿನಯ್‍ಕುಮಾರ್‍ಸೊರಕೆ ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣಕನ್ನಡ ಎರಡೂ ಕ್ಷೇತ್ರದ ಮೇಲೆ ಒಂದೊಂದು ಕಣ್ಣು ಹಾಕಿ ಕುಂತಿದ್ದಾರೆ, ಪಾಪ! ಈ ಸೊರಕೆಯ ಬೇರುಗಳು ಎರಡೂ ಜಿಲ್ಲೆಯಲ್ಲಿ ಒಣಗಿಹೋಗಿ ಅದ್ಯಾವುದೋ ಕಾಲವಾಗಿದೆ. ಕನಿಷ್ಟ ಸ್ವಜಾತಿ ಬಿಲ್ಲವರ ಹುಡುಗರು ಕೇಸರಿ ಖೆಡ್ಡಾಕ್ಕೆ ಹೋಗಿಬೀಳೋದೂ ತಪ್ಪಿಸಲಾಗದ ಈ ಸೊರಕೆ ಗೆಲ್ಲೋದು ಕಷ್ಟ. ಬಿಲ್ಲವರ ಕುಲ ಕಂಠೀರವ ಜನಾರ್ದನ ಪೂಜಾರಿ ವಯೋಸಹಜ ಅರಳು-ಮರಳಿಂದ ಪ್ರಸ್ತುತರಾಗಿರುವುದರಿಂದ ತಾನೇ ಕಾಂಗ್ರೆಸ್‍ನ ಬಿಲ್ಲವ ಮುಖಂಡ ಎಂದು ಭಾವಿಸಿರುವ ಸೊರಕೆ ಬಗ್ಗೆ ಹೈಕಮಾಂಡ್ ಮಾಂಡಲೀಕ ಆಸ್ಕರ್ ಫರ್ನಾಂಡಿಸ್‍ಗೂ ಒಳ್ಳೆಯ ಅಭಿಪ್ರಾಯವಿಲ್ಲ. ಮಂಗಳೂರಿನ ಮಾಜಿ ಮೇಯರಮ್ಮ ಕರಾಟೆರಾಣಿ ಕವಿತಾ ಸನಿಲ್ ತಾನೂ ಬಿಲ್ಲವರ ಕುಡಿಯೆಂದು ಕೂಗು ಹಾಕುತ್ತಿದ್ದಾರೆ. ಈಕೆಗೆ ಟಿಕೆಟ್ ಕೊಟ್ಟರೆ ಮ್ಯಾಜಿಕ್ ಆಗಬಹುದೆಂದು ಹೇಳೋರೂ ಇದ್ದಾರೆ.
ಹರ್ಷ ಮೊಯ್ಲಿ ಅದೆಷ್ಟೇ ತಿಪ್ಪರಲಾಗ ಹಾಕಿದರೂ ಆತನಿಗೆ ಟಿಕೆಟ್ ಸಿಗಲಾರದು. ಕಾರ್ಕಳ ಅಸೆಂಬ್ಲಿ ಟಿಕೆಟ್ ಸಿಗಲಾರದೆಂಬ ಹತಾಶೆಯಲ್ಲಿ ಆತ ಪಕ್ಷದ ವಿರುದ್ಧವೇ ಟ್ವೀಟಾಯಿಸಿ ಕಿಮ್ಮತ್ತು ಕಳೆದುಕೊಂಡಿದ್ದಾನೆ. ಅಲ್ಲದೆ ಅವನಪ್ಪ ವೀರಪ್ಪ ಮೊಯ್ಲಿಗೆ ಚಿಕ್ಕಬಳ್ಳಾಪುರದಲ್ಲಿ ಆಭ್ಯರ್ಥಿ ಮಾಡಬೇಕಾಗಿರುವುದರಿಂದ ಹರ್ಷನಿಗೆ ಛಾನ್ಸ್ ಇಲ್ಲ. ಕಾಂಗ್ರೆಸ್‍ನಲ್ಲಿ ಒಂಚೂರು ಗಟ್ಟಿ ಕಾಳೆಂದು ಕಾಣಿಸಿಕೊಂಡಿರುವುದು ಹಿಂದುಳಿದ ವರ್ಗದ ಪಿ.ವಿ ಮೋಹನ್ ಮತ್ತು ಬಂಟರ ಬಹಾದ್ದೂರ ಮಿಥುನ್‍ರೈ ಇಬ್ಬರೇ. ಮಿಥುನ್ ಕ್ಯಾಂಡಿಡೇಟಾದರೆ ಸ್ವಜಾತಿಯ ನಳಿನ್‍ಕಟೀಲ್‍ಗೆ ಸೆಡ್ಡು ಹೊಡೆಯಬಹುದೆಂದು ಜನ ಹೇಳುತ್ತಾರೆ. ಜತೆಗೆ ದುಡ್ಡು ಮಿಥುನ್‍ನಲ್ಲಿ ಸಾಕಷ್ಟಿದೆ. ಕಳೆದ ಅಸೆಂಬ್ಲಿ ಇಲೆಕ್ಷನ್ ಕೊನೆಹಂತದಲ್ಲಿ ಮಾಜಿ ಮಂತ್ರಿ ಅಭಯಚಂದ್ರ ಜೈನ್‍ನ ಹಿಕಮತ್ತಿಗೆ ಬಲಿಯಾಗಿದ್ದರು. ಆ ಅನ್ಯಾಯಕ್ಕೆ ಪರಿಹಾರವಾಗಿ ಮಿಥುನ್‍ಗೆ ಕಾಂಗ್ರೆಸ್ ಟಿಕೆಟೇನಾದರೂ ಸಿಕ್ಕರೆ ನಳಿನ್‍ಗೆ ಟಕ್ಕರ್ ಖಂಡಿತ!
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೂಗುಮಾರಿ ಖ್ಯಾತಿಯ ಸಂಸದೆ ಬೇಬಿಯಕ್ಕ ಯಾನೆ ಶೋಭ ಕರಂದ್ಲಾಜೆಗೆ ಮತ್ತೆ ಸ್ಪರ್ದಿಸುವ ಧೈರ್ಯವಿಲ್ಲ. ಸ್ಥಳೀಯ ನಿಷ್ಠಾವಂತ ಕೇಸರಿ ಕಾರ್ಯಕರ್ತರನ್ನೆಲ್ಲಾ ಕಡೆಗಣಿಸಿ ದಿಲ್ಲಿ ಲೆವೆಲ್ ಪುಢಾರಿಯಾಗಿ ತಾನೆಂದು ಹಾರಾಡುತ್ತ ನಾಲ್ಕು ವರ್ಷ ಕಳೆದಿರುವ ಈ ಕರ್ಮಗೇಡಿ ಎಂಪಿಣಿ ಉಡುಪಿ ಅಥವಾ ಚಿಕ್ಕಮಗಳೂರು ಭಾಗದಲ್ಲಿ ಮೂರು ಬಿಲ್ಲೂ ಕೆಲಸ ಮಾಡಿಲ್ಲ. ಆಕೆಗೆ ಕ್ಷೇತ್ರದ ಭೌಗೋಳಿಕ, ಉದ್ದಗಲ, ಜನರ ಕಷ್ಟ-ಸುಖ, ಬೇಕು-ಬೇಡ ಏನೂ ಗೊತ್ತಿಲ್ಲ. “ಯಜಮಾನ” ಯಡ್ಡಿಯನ್ನು ಸಿಎಂ ಮಾಡುವ ಏಕೈಕ ಧ್ಯೇಯೋದ್ದೇಶದ ಬೇಬಿಯಕ್ಕ ಈ ಬಾರಿ ಸ್ಪರ್ಧಿಸಿದರೂ ಗೆಲ್ಲೋದು ಅನುಮಾನ ಎಂದು ಬಿಜೆಪಿಯ ಜನರೇ ಹೇಳುತ್ತಿದ್ದಾರೆ. ಪಾರ್ಟಿಯಲ್ಲಿ ಶಾಸಕ ರಘುಪತಿಭಟ್ಟ, ಸಿ.ಟಿ ರವಿಯಂಥವರಿಗೆ ಆಕೆಯ ಮುಸುಡಿ ಕಂಡರಾಗುವುದಿಲ್ಲ. ಶೋಭಾ ದುರಹಂಕಾರಿ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.
ಇದೆಲ್ಲ ಅಪಶಕುನ ಅರ್ಥಮಾಡಿಕೊಂಡಿರುವ ಯಡ್ಡಿ ಆಕೆಗೆ ರಾಜ್ಯಸಭೆ ಅಥವಾ ವಿಧಾನಪರಿಷತ್‍ಗೆ “ಪ್ಯಾಕ್” ಮಾಡುವ ಯೋಚನೆಯಲ್ಲಿದ್ದಾರೆ. ಕೇಂದ್ರಮಂತ್ರಿ ಡಿ.ವಿ ಸದಾನಂದಗೌಡ ಅಥವಾ ಮಾಜಿ ಸಂಸದ ಜಯಪ್ರಕಾಶ್‍ಹೆಗ್ಡೆಗೆ ಅಭ್ಯರ್ಥಿ ಮಾಡಿದರೆ ಮಾತ್ರ ಕ್ಷೇತ್ರ ಉಳಿಸಿಕೊಳ್ಳಲು ಸಾಧ್ಯವೆಂಬುದು ಸಂಘಿ ಸರದಾರರಿಗೂ ಖಾತ್ರಿಯಾಗಿದೆ. ಆದರೆ ಸದಾನಂದ ಗೌಡರಿಗೆ ತಾನು ಉಡುಪಿ-ಚಿಕ್ಕಮಗಳೂರಲ್ಲಿ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿಲ್ಲ. ಹಾಗಾಗಿ ಜಯಪ್ರಕಾಶ್‍ಹೆಗ್ಡೆ ಟಿಕೆಟ್‍ಗೆ ಬಾಯಿ ತೆರೆದು ಕುಂತಿದ್ದಾರೆ. ಮೊದಲಿನ ಖದರು ಕಳೆದುಕೊಂಡಿರುವ ವಲಸಿಗ ಜೆಪಿ ಹೆಗ್ಡೆಗೆ ಸಂಘಪರಿವಾರ ಅಷ್ಟು ಸುಲಭಕ್ಕೆ ಛಾನ್ಸ್ ಕೊಡುವುದಿಲ್ಲ! ಹಿಂದುತ್ವ ಪ್ರಣೀತ ನಾಟಕದ ಸುಳ್ಳುಬುರುಡೆ ಪಾತ್ರ ಪ್ರವೀಣೆ ಬೇಬಿಯಕ್ಕನಿಗೆ ಅದ್ಯಾಕೊ ಬಿಜೆಪಿ ಅಡ್ಡಗಾಲು ಹಾಕಿ ಕುಂತಿದೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎದ್ದಿದ್ದ ಹಿಂದೂತ್ವದ ತೂಫಾನ್ ಎದುರಿಸಲಾಗದೆ ಮುಳುಗಿದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‍ನಿಂದ ಎಂಪಿ ಆಗುವ ಹಗಲುಗನಸು ಕಾಣುತಿದ್ದಾರೆ. ಮಂತ್ರಿಯಾಗಿದ್ದಾಗ ಪಕ್ಷಕ್ಕೆ ನಿಷ್ಠವಾಗದೆ ಎಡಬಿಡಂಗಿ ದರ್ಬಾರು ನಡೆಸಿದ್ದ ಪ್ರಮೋದ್‍ಗೆ ಪಾರ್ಟಿ ಮತ್ತು ಕ್ಷೇತ್ರದಾದ್ಯಂತ ಪ್ರಭಾವಿಗಳೇ ಇಲ್ಲ. ಒಂಥರಾ ಒಣದೌಲತ್ತಿನ ಪ್ರಮೋದ್ ಮಂತ್ರಿಯಾಗಿದ್ದಾಗ ಬರೀ ಉಡುಪಿ ವಿಧಾನಸಭಾ ಕ್ಷೇತ್ರಕ್ಕಷ್ಟೇ ಸೀಮಿತರಾಗಿ “ಕಬ್ಜು” ಎನಿಸಿಕೊಂಡಿದ್ದರು. ಈ ಪ್ರಮೋದ್‍ಗಿಂತ ಬಿಲ್ಲವರ ಬಾಹುಳ್ಯದ ಸÀದ್ರಿ ಕ್ಷೇತ್ರದಲ್ಲಿ ತಾನೇ “ಸ್ಟ್ರಾಂಗ್‍ಗುರು” ಎನ್ನುತ್ತಿದ್ದಾರೆ ವಿನಯ್‍ಕುಮಾರ್ ಸೊರಕೆ.
ಇವರಿಬ್ಬರಿಗಿಂತ ಸದ್ಯಕ್ಕೆ ಜಾಸ್ತಿ ಚಾಲ್ತಿಯಲ್ಲಿರೋದು ಅಮೃತಶಣೈ ಎಂಬ ರಿಯಲ್ ಎಸ್ಟೇಟ್‍ಕುಳ. ಬಿಜೆಪಿಯಿಂದ ವಲಸೆ ಬಂದಿರುವ ಈ ಕೊಂಕಣಿಗ ಆಸ್ಕರ್‍ಫರ್ನಾಂಡಿಸ್ ಆಶೀರ್ವಾದದಿಂದ ಎಐಸಿಸಿಯಲ್ಲಿ ಕೆಲಸಕ್ಕೆ ಬಾರದ ಹುದ್ದೆಗೇರಿದ್ದಾರೆ. ಜನಪರ ಸಂಸದ ಎನಿಸಿದ್ದ ರಂಗನಾಥಶಣೈ ವಂಶಸ್ಥನಾದ ತಾನು ಉಡುಪಿ ಎಂಪಿಯಾಗಲು ಅರ್ಹನೆಂದು ತಿಳಿದಂತಿದೆÀ ಅಮೃತ ಶಣೈ. ಅತ್ತ ಚಿಕ್ಕಮಗಳೂರು ಕಡೆಯಿಂದ ಮಾಜಿ ಸಂಸದರಾದ ಡಿ.ಕೆ ತಾರಾದೇವಿ, ಬಿ.ಎಲ್ ಶಂಕರ್ ಹೆಸರುಕೇಳಿ ಬರುತ್ತಿದೆ. ತುಳು ಸುಲಲಿತವಾಗಿ ಮಾತಾಡುವ ಬಿ.ಎಲ್ ಶಂಕರ್ ಈಗ ಟಿಕೆಟ್‍ಗೆ ಕ್ಯೂನÀಲ್ಲಿರುವವರಿಗಿಂತ ಬೇಟರ್. ಎಂಪಿನಿಧಿ ಸರಿಯಾಗಿ ಬಳಸದೆ ಪ್ಲಾಪ್ ಮಾಡುತ್ತಿರುವ ನಾಲಾಯಕ್ ಸಂಸದೆ ಶೋಭ ಕರಂದ್ಲಾಜೆ ಬಿಜೆಪಿಯಿಂದ ಎಕ್ಕುಟ್ಟಿಹೋಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ದೂರದೃಷ್ಟಿಯ ಶಂಕರ್ ಆಶಾಕಿರಣ ಆಗಬಲ್ಲರು. ದುರಂತವೆಂದರೆ ಹಿಂದೂತ್ವದಿಂದ ತಲೆ ತೊಳೆದುಕೊಳ್ಳುತ್ತಿರುವ ಕ್ಷೇತ್ರಕ್ಕಿದು ಅರ್ಥವಾಗೋದು ಅನುಮಾನ!
ಉತ್ತರ ಕನ್ನಡ ಕ್ಷೇತ್ರ ಸತತವಾಗಿ ಶನಿಯಂತೆ ಗಂಟುಬಿದ್ದಿರುವ ಡೋಂಗಿ ಹಿಂದುತ್ವವಾದಿ ಅನಂತ್ಮಾಣಿ ಯಾನೆ ಅನಂತಕುಮಾರ್ ಹೆಗ್ಡೆ ಬಿಜೆಪಿ ಟಿಕೆಟ್ ತರುವಷ್ಟೇ ಸುಲಭವಾಗಿ ಈ ಸಲ ಮತ್ತೇ ಸಂಸದರಾಗಿ ಆಯ್ಕೆಯಾಗಲಾರನೆಂಬ ಅಂದಾಜು ಕಟ್ಟರ್ ಚೆಡ್ಡಿಗಳೇ ಹಾಡುತ್ತಿದ್ದಾರೆ. ಒಂದು ಕಾಲದಲ್ಲಿ ಮಂತ್ರಿ ಅಭ್ಯರ್ಥಿಯಾಗಿ ಭಟ್ಕಳದ ಹಳ್ಳಿಗಳಲ್ಲಿ ಅಂಡಲೆಯುತ್ತಾ ಹಿಂದುತ್ವದ ಹಿಂಸಾ ಪ್ರಚಾರ ಮಾಡುತ್ತಿದ್ದ ಈ ಹಿಂಜಾವೇ ಪುಂಡ ಭಾರತದ ಸಂವಿಧಾನದ ಪವಾಡದಿಂದ ಕೇಂದ್ರ ಮಂತ್ರಿಯಾಗಿದ್ದಾನೆ!
ಅಧಿಕಾರದ ಪಿತ್ಥ ನೆತ್ತಿಗೇರಿರುವ ಮಾಣಿಯ ಬುರ್ನಾಸ್ ಭಾಷೆ, ಭಾವನೆ, ಭಂಗಿಗೆ ಬಿಜೆಪಿ ಕಾರ್ಯಕರ್ತರೇ ಹೇಸಿ ಹೋಗಿದ್ದಾರೆ. ಈತನಿಗೆ ಗುದುಮುರಿಗೆ ಮಾಡಲು ಸಾಬರೇ ಬೇಕೆಂದೇನಿಲ್ಲ ಸ್ವ-ಪಕ್ಷದ ಹಿಂದೂಹಿರಿಯರು, ವೈದ್ಯರು, ಕಾಗೇರಿ, ವಿಎಸ್ ಪಾಟೀಲ್‍ರಂಥ ಶಾಸಕರು, ಅಧಿಕಾರಿಗಳು ಯಾರಾದರೂ ಸರಿ. ರೌಡಿಯಂತೆ ಹೊಡೆದು ಹಲ್ಲೆ ಮಾಡಿ ರಕ್ತ ಹರಿಸಿ ತೀಟೆ ತೀರಿಸಿಕೊಳ್ಳಬಲ್ಲ. ಈ ಪಾತಕ ಹಿನೆÀ್ನಲೆ ನೋಡಿಯೆ ಮಾಣಿಗೆ ಮೋದಿ ಮಂತ್ರಿ ಮಾಡಿದ್ದಾರೆಂದು ಆತನ ಅಭಿಮಾನಿಗಳು ಹೊಗಳೋದು ಮಜಾ ಆಗಿದೆ.
ಆರೆಸ್ಸೆಸ್ ವಲಯದಲ್ಲಿ ಚಿರಪರಿಚಿತನಾಗಿರುವ ಅನಂತ್ಮಾಣಿ ಟಿಕೆಟ್ ತರುವುದು ಕಷ್ಟವಾಗದು. ಆದರೂ ಈತ ನಾಲಾಯಕ್ ಸಂಸದ. ಕ್ಷೇತ್ರ ಬರಡಾಗಿ ತಾನು ಸಮೃದ್ಧನಾಗಿರುವ ಅಯೋಗ್ಯನೆಂದು ಬಿಂಬಿಸಿ ತಾನೇ ಅಭ್ಯರ್ಥಿಯಾಗಲೂ “ಹಿಂದೂತ್ವವಾಗ್ಮಿ” ಸೂಲಿಬೆಲೆ ಚಕ್ರವರ್ತಿಯಾನೆ, ಮಿಥುನ್ ಚಕ್ರವರ್ತಿ, ಡಿ.ಶೇಟ್ ನಾಜೂಕಾಗಿ ಆಟ ಆಡುತ್ತಿದ್ದಾನೆ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಉತ್ತರ ಕನ್ನಡ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಹಿಂದುತ್ವದ ಹುಚ್ಚಿರುವುದು ಖರೆ. ಆದರೆ ಕುಮಟಾ, ಭಟ್ಳಳದಂತ ಕಡೆ ಭಜರಂಗಿ ಪಡೆಯು ಅನಂತ್ಮಾಣಿ ವಿರುದ್ದ ತಿರುಗಿ ಬಿದ್ದಿದೆ. ಇದನ್ನು ಸರಿಯಾಗಿ ಬಳಸಿಕೂಳ್ಳುವ ತಂತ್ರಗಾರಿಕೆ ಸದಕ್ಕಂತೂ ಕಾಂಗ್ರೆಸ್‍ನಲ್ಲಿ ಕಾಣಿಸುತ್ತಿಲ್ಲ.
ಎಐಸಿಸಿ ಫ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಉತ್ತರ ಕನ್ನಡ ಅಥÀವಾ ದಕ್ಷಿಣ ಕನ್ನಡದಿಂದ ಪಾರ್ಲಿಮೆಂಟ್ ಪ್ರವೇಶಕ್ಕೆ ಪ್ಲಾನು ಹಾಕಿದ್ದಾರೆ. ಉತ್ತರ ಕನ್ನಡವೇ ಹೆಚ್ಚು ಅನುಕೂಲಕರ ಎಂಬ ಯೋಚನೆ ಅವರದು. ಕ್ಷೇತ್ರದಲ್ಲಿ ದೀನರು(ಈಡಿಗರು) ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇತರ ಹಿಂದುಳಿದವರು ಹಳಿಯಾಳ, ಜೋಯಿಡ, ಕಾರವಾರ, ಮುಂಡಗೋಡದಲ್ಲಿ ಗಣನೀಯವಾಗಿದ್ದಾರೆ. ಈ ಏರಿಯಾದಲ್ಲಿ “ಆ್ಯಂಟಿ ದೀವರು” ಭಾವನೆಯಿಲ್ಲ ಮುಸ್ಲಿಂ ಮತ್ತು ಹಾಲಕ್ಕಿ ಒಕ್ಕಲಿಗರ ಒಲಿಸಿಕೊಂಡರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಹಿಂದುತ್ವದ ಎದುರು ಅಷ್ಟು ಸರಳವೇನಲ್ಲ. ಆದರೂ ಮಂತ್ರಿ ದೇಶಪಾಂಡೆ ಮಗ ಪ್ರಶಾಂತ್ ದೇಶಪಾಂಡೆಗಿಂತ ಹರಿಪ್ರಸಾದ್ ಬಲಾಢ್ಯ ಕ್ಯಾಂಡಿಡೇಟ್ ಎಂಬುದರಲ್ಲಿ ಅನುಮಾನವಿಲ್ಲ. ದೇಶಪಾಂಡೆಯ ಪಾಳೆಗಾರ ರಾಜಕಾರಣ ವಿರೋಧಪಕ್ಷದ ಜೊತೆಗಿನ ಹೊಂದಾಣಿಕೆ ಹಿಕಮತ್ತು ಮತ್ತಾತನ ಹಿಂಬಾಲಕರ ದಾದಾಗಿರಿಯಿಂದ ಕ್ಷೇತ್ರದಲ್ಲಿನ ಎರಡೂ ದೊಡ್ಡ ಜಾತಿಗಳಾದ ಹವ್ಯಕರು ಮತ್ತು ದೀನರು ದೇಶಪಾಂಡೆ ಸಂತಾನಕ್ಕೆ ವಿರುದ್ಧವಾಗಿವೆ.
ಮ್ಯಾಗಿ ಪುತ್ರರತ್ನ ನಿವೇದಿತಾಆಳ್ವಗೆ ಪಾರ್ಲಿಮೆಂಟ್‍ಗೆ ಸ್ಪರ್ಧಿಸುವ ದಮ್ ಇಲ್ಲ. ದೇಶಪಾಂಡೆ ಪಡೆ ಕಾಲೆಳೆಯುತ್ತದೆ ಮತ್ತು ಅಲ್ಪಸಂಖ್ಯಾತನೆಂಬ ಕಾರ್ಡ್ ಬಿಜೆಪಿ ಹಾಕುತ್ತದೆಂಬ ಆತಂಕ ಅತನದು. ಹಾಗಾಗಿ ಆತ ಎಮ್ಮೆಲ್ಸಿ ಆಗಲು ಕಟಿಪಿಟಿ ನಡೆಸಿದ್ದಾನೆ. ಮ್ಯಾಗಿ-ದೇಶಪಾಂಡೆ ವೈಮನಸ್ಸು ಬಿಟ್ಟು ಬಿಜೆಪಿ ಸೋಲಿಸಬೇಕೆಂಬ ದೃಢನಿರ್ಧಾರ ಮಾಡಿ ತಂತ್ರ ಹೆಣೆದರೆ ಅನಂತ್ಮಾಣಿಯಿಂದ ನತದೃಷ್ಟ ಉತ್ತರ ಕನ್ನಡಕ್ಕೆ ಮೋಕ್ಷ ಕೊಡಿಸುವುದೇನು ಕಷ್ಟವಲ್ಲ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಗಳು ಮಮತಾ ನಿಚ್ಚಾನಿ ಅಥವಾ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯನ್ನು ಕಾಂಗ್ರೆಸ್ ಹುರಿಯಾಳಾಗಿ ಅಖಾಡಕ್ಕೆ ಇಳಿಸಿದರೆ ಗೆಲುವು ಸುಲಭವಾಗುತ್ತದೆ. ಆದರೆ ಇಂಥ ಸ್ಟ್ರೇಟಜ್ರಿಗಳೆಲ್ಲ ಸ್ವಾರ್ಥಲಾಲಸೆಯ ಮ್ಯಾಗಿ-ದೇಶಪಾಂಡೆಗೆ ಅರ್ಥವಾಗೋದು ಕಷ್ಟವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಕಾರವಾರದ ಖಾಲಿಬರಡು ಪುಢಾರಿ ಆನಂದ ಅಸ್ನೋಟಿಕರ್ ತಾನೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂಬ ಭ್ರಮೆಯಲ್ಲಿ ಅನಂತ್ಮಾಣಿ ಮೇಲೆ ಡೆಡ್ಲಿಯಾಗಿ ಮುಗಿಬಿದ್ದಿದ್ದಾನೆ. ಅನಂತನ ಅನಾಹುತ, ಅಸಹ್ಯ, ಅಧಿಕ ಪ್ರಸಂಗದ ಹೇಳಿಕೆ, ಆನಂದ ಅಸ್ನೋಟಿಕರ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಇದೇ ಸದ್ಯಕ್ಕೆ ಕರಾವಳಿಯ ಪೊಲಿಟಿಕಲ್ ಫನ್!!

– ನಹುಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...