Homeಕರ್ನಾಟಕಕೊನೆಗೂ 'ಪಾಶ್ ಸಮಿತಿ' ರಚಿಸಿದ ಕರ್ನಾಟಕ ಫಿಲಂ ಚೇಂಬರ್ : ಆದರೆ ಬಹುಪಾಲು ಸದಸ್ಯರು ಪುರುಷರು!

ಕೊನೆಗೂ ‘ಪಾಶ್ ಸಮಿತಿ’ ರಚಿಸಿದ ಕರ್ನಾಟಕ ಫಿಲಂ ಚೇಂಬರ್ : ಆದರೆ ಬಹುಪಾಲು ಸದಸ್ಯರು ಪುರುಷರು!

ಹೊಸ ಸಮಿತಿಗೆ ವಿರೋಧ ವ್ಯಕ್ತಪಡಿಸಿದ 'ಫೈರ್'

- Advertisement -
- Advertisement -

ಹಲವು ದಿನಗಳ ಹಗ್ಗ-ಜಗ್ಗಾಟದ ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಂತಿಮವಾಗಿ ಲೈಂಗಿಕ ಕಿರುಕುಳ ತಡೆ (ಪಿಒಎಸ್‌ಹೆಚ್-ಪಾಶ್) ಕಾಯ್ದೆಯಡಿ ಆಂತರಿಕ ಸಮಿತಿ (ಐಸಿ)ಯನ್ನು ರಚಿಸಿದೆ. ಆದರೆ, ಸಮಿತಿ ರಚನೆ ವೇಳೆ ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದೆ. ಪಾಶ್ ಕಾಯ್ದೆಯಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಹೊಸ ಸಮಿತಿಯಲ್ಲಿ ಬಹುಪಾಲು ಪುರುಷ ಸದಸ್ಯರಿದ್ದಾರೆ.

ಜನವರಿ 17ರಂದು ಪ್ರಕಟಿಸಿದ ಸಮಿತಿ ಸದಸ್ಯರ ಪಟ್ಟಿಯಲ್ಲಿ, ಕೆಎಫ್‌ಸಿಸಿ ಅಧ್ಯಕ್ಷ ಎಂ.ನರಸಿಂಹುಲು ಮತ್ತು ಕಾರ್ಯದರ್ಶಿ (ವಿತರಕರು) ಎಂ.ಎನ್ ಕುಮಾರ್, ಕೆಎಫ್‌ಸಿಸಿ ಮಾಜಿ ಪದಾಧಿಕಾರಿಗಳಾದ ಎನ್‌.ಎಂ ಸುರೇಶ್ ಮತ್ತು ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದು, ನಿರ್ದೇಶಕ ಬಿ.ಎಲ್ ನಾಗರಾಜ್ (ನಾಗಣ್ಣ), ನಟಿ ಅನಿತಾರಾಣಿ ಮತ್ತು ಅನ್ನಪೂರ್ಣ ಎಂಬ ಎನ್‌ಜಿಒ ಪ್ರತಿನಿಧಿ ಇದ್ದಾರೆ. ಸಮಿತಿಯು ತನ್ನ ಸದಸ್ಯರ ಮೇಲೆ ಮಾತ್ರ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಫಿಲಂ ಚೇಂಬರ್ ಒಂದು ಪತ್ರದಲ್ಲಿ ತಿಳಿಸಿದೆ.

ಪಾಶ್ ಕಾಯ್ದೆಯು ಆಂತರಿಕ ಸಮಿತಿಯ ಒಟ್ಟು ಸದಸ್ಯರಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರು ಇರಬೇಕು ಎಂದು ಹೇಳುತ್ತದೆ. ಆದರೆ, ಕೆಎಫ್‌ಸಿಸಿ ಹೊಸದಾಗಿ ರಚಿಸಿರುವ ಸಮಿತಿಯ ಏಳು ಸದಸ್ಯರ ಪೈಕಿ ಐವರು ಪುರುಷರಿದ್ದಾರೆ. ಕೆಎಫ್‌ಸಿಸಿ ಅನ್ನಪೂರ್ಣ ಎಂಬ ಎನ್‌ಜಿಒ ಪ್ರತಿನಿಧಿಯೊಬ್ಬರನ್ನು ಸದಸ್ಯರಾಗಿ ಘೋಷಿಸಿದೆ. ಆದರೆ, ಅವರು ಮಹಿಳೆಯೇ ಎಂಬುವುದನ್ನು ಖಚಿತಪಡಿಸಿಲ್ಲ. ಹಾಗಾಗಿ, ಸದ್ಯಕ್ಕೆ ಸಮಿತಿಯಲ್ಲಿ ಅನಿತಾರಾಣಿ ಒಬ್ಬರೇ ಮಹಿಳಾ ಸದಸ್ಯರಿದ್ದಂತಾಗಿದೆ.

ಪಾಶ್ ಕಾಯ್ದೆಯ ಪ್ರಕಾರ, ಒಂದು ಆಂತರಿಕ ಸಮಿತಿ ಉದ್ಯೋಗದಾತರಿಂದ ನಾಮನಿರ್ದೇಶಿತ ಸದಸ್ಯರನ್ನು (members nominated by the employer) ಒಳಗೊಂಡಿರಬೇಕು. ಇದರಲ್ಲಿ ಪ್ರಿಸೈಡಿಂಗ್ ಆಫೀಸರ್ ಸೇರಿದ್ದಾರೆ, ಅವರು ಕೆಲಸದ ಸ್ಥಳದಲ್ಲಿ ಹಿರಿಯ ಮಹಿಳಾ ಉದ್ಯೋಗಿಯಾಗಿರಬೇಕು.

ಯಾವುದೇ ಹಿರಿಯ ಮಹಿಳೆ ಲಭ್ಯವಿಲ್ಲದಿದ್ದರೆ, ಪ್ರಿಸೈಡಿಂಗ್ ಆಫೀಸರ್ ಅನ್ನು ಉದ್ಯೋಗದಾತರ ಇತರ ಕಚೇರಿಗಳಿಂದ ಅಥವಾ ಬಾಹ್ಯ ಸಂಸ್ಥೆಗಳಿಂದ ನಾಮನಿರ್ದೇಶನ ಮಾಡಬಹುದು. ಸಮಿತಿಯು ಮಹಿಳೆಯರ ಪರವಾಗಿ ಬದ್ಧರಾಗಿರುವ ಅಥವಾ ಸಾಮಾಜಿಕ ಕಾರ್ಯ ಅಥವಾ ಕಾನೂನು ವಿಷಯಗಳಲ್ಲಿ ಅನುಭವ ಹೊಂದಿರುವ ಕನಿಷ್ಠ ಇಬ್ಬರು ಉದ್ಯೋಗಿ ಸದಸ್ಯರನ್ನು ಒಳಗೊಂಡಿರಬೇಕು.

ಹೆಚ್ಚುವರಿಯಾಗಿ, ಒಬ್ಬ ಬಾಹ್ಯ ಸದಸ್ಯರು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪರಿಚಿತವಾಗಿರುವ ಎನ್‌ಜಿಒ ಅಥವಾ ಸಂಘದಿಂದ ಬಂದಿರಬೇಕು ಎಂದು ಕಾನೂನು ಷರತ್ತು ವಿಧಿಸುತ್ತದೆ.

ಮಹಿಳಾ ಆಯೋಗ ಸೇರಿದಂತೆ ವಿವಿದೆಡೆಗಳ ಒತ್ತಡಕ್ಕೆ ಮಣಿದು ಡಿಸೆಂಬರ್ 2024ರ ಆರಂಭದಲ್ಲಿ ಹಿರಿಯ ನಿರ್ದೇಶಕಿ ಕವಿತಾ ಲಂಕೇಶ್ ಅವರ ಅಧ್ಯಕ್ಷತೆಯಲ್ಲಿ ಫಿಲಂ ಚೇಂಬರ್ 11 ಸದಸ್ಯರ ಪಾಶ್ ಸಮಿತಿ ರಚಿಸಿತ್ತು. ಆದರೆ, ಫಿಲಂ ಚೇಂಬರ್ ಚುನಾವಣೆಯ ನೆಪವೊಡ್ಡಿ ಘೋಷಣೆ ಮಾಡಿದ ಘಂಟೆಗಳ ಒಳಗೆ ಆ ಸಮಿತಿಯನ್ನು ರದ್ದು ಮಾಡಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಜಸ್ಟೀಸ್ ಹೇಮಾ ಸಮಿತಿ ಮಲಯಾಳಂ ಚಿತ್ರೋದ್ಯಮದ ಒಳಗೆ ನಡೆದಿರುವ ಮತ್ತು ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕರಾಳ ಸತ್ಯವನ್ನು ಬಿಚ್ಚಿಟ್ಟ ಬಳಿಕ, ಕರ್ನಾಟಕದಲ್ಲೂ ಸಮಿತಿಯೊಂದನ್ನು ರಚಿಸಿ ಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸರ್ಕಾರವನ್ನು ಆಗ್ರಹಿಸಲಾಗಿದೆ.

ನಟ, ನಟಿಯರ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದೆ. ರಾಜ್ಯ ಮಹಿಳಾ ಆಯೋಗವೂ ಸಮಿತಿ ನೇಮಿಸುವಂತೆ ಸರ್ಕಾರವನ್ನು ಕೋರಿದೆ. ಆ ವಿಷಯ ಈಗ ಸಿಎಂ ನಿರ್ಧಾರದ ಮೇಲೆ ನಿಂತಿದೆ.

ಈ ನಡುವೆ, ಪಾಶ್ ಕಾಯ್ದೆಯ ಪ್ರಕಾರ ಫಿಲಂ ಚೇಂಬರ್ ಆಂತರಿಕ ಸಮಿತಿ ರಚಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ರಾಜ್ಯ ಮಹಿಳಾ ಆಯೋಗ ಈ ವಿಷಯದ ಬೆನ್ನು ಬಿದ್ದು ಫಿಲಂ ಚೇಂಬರ್‌ಗೆ ಒತ್ತಡ ಹೇರಿತ್ತು. ಆದರೂ, ಸಮಿತಿ ರಚಿಸಲು ವಿಳಂಬ ಮಾಡುತ್ತಿದ್ದ ಫಿಲಂ ಚೇಂಬರ್ ವಿರುದ್ದ 2024ರ ನವೆಂಬರ್ 28ರಂದು ಪಾಶ್ ಕಾಯ್ದೆಯ ನೋಡಲ್ ಅಧಿಕಾರಿಯಾಗಿರುವ ಬೆಂಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ದೂರು ನೀಡಿತ್ತು.

ಡಿಸೆಂಬರ್ 14, 2024ರಂದು ಫಿಲಂ ಚೇಂಬರ್‌ಗೆ ಹೊಸ ಆಡಳಿತ ಬಂದ ಬಳಿಕವೂ, ಆಂತರಿಕ ಸಮಿತಿ ರಚಿಸುವ ಆಗ್ರಹ ಹೆಚ್ಚಾಯಿತು. ಹಾಗಾಗಿ, ಕೊನೆಗೂ ಫಿಲಂ ಚೇಂಬರ್ ಸಮಿತಿ ರಚಿಸಿದೆ. ಆದರೆ, ನಿಯಮಗಳನ್ನು ಉಲ್ಲಂಘಿಸಿದೆ.

ವಿರೋಧ ವ್ಯಕ್ತಪಡಿಸಿದ ಫೈರ್

ಫಿಲಂ ಚೇಂಬರ್ ರಚಿಸಿರುವ ಹೊಸ ಆಂತರಿಕ ಸಮಿತಿ ಅಥವಾ ಪಾಶ್ ಸಮಿತಿಗೆ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ (ಫೈರ್)’ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಹೊಸ ಆಂತರಿಕ ಸಮಿತಿ ಅದರ ರಚನೆಯ ಉದ್ದೇಶಗಳನ್ನು ಪೂರೈಸುವ ನಂಬಿಕೆ ನಮಗಿಲ್ಲ. ಸಮಿತಿಯಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರು ಮತ್ತು ಕನಿಷ್ಠ ಇಬ್ಬರು ಲಿಂಗ ಹಕ್ಕುಗಳಿಗಾಗಿ ಕೆಲಸ ಮಾಡಿದವರು ಅಥವಾ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವ ಕಾನೂನು ಜ್ಞಾನ ಹೊಂದಿರುವವರು ಇರಬೇಕು ಎಂದು ಫೈರ್ ಹೇಳಿದೆ.

ನಿಯಮದ ಪ್ರಕಾರ, ಹೊಸ ಸಮಿತಿಯ 7 ಮಂದಿ ಸದಸ್ಯರಲ್ಲಿ ಕನಿಷ್ಠ 4 ಮಂದಿ ಮಹಿಳೆಯರು ಇರಬೇಕಿತ್ತು. ಆದರೆ ಇಲ್ಲಿ ಇಬ್ಬರು ಮಾತ್ರ ಇದ್ದಾರೆ. ಫಿಲಂ ಚೇಂಬರ್‌ನಲ್ಲಿ ಕಳೆದ 6 ತಿಂಗಳಿನಿಂದ ಲಿಂಗ ಸಮಾನತೆ ಅಥವಾ ಲಿಂಗ ನ್ಯಾಯವನ್ನು ವಿರೋಧಿಸುತ್ತಿದ್ದ ಒಬ್ಬರು ಸಮಿತಿಯ ಸದಸ್ಯರಾಗಿದ್ದಾರೆ. ಲೈಂಗಿಕ ಕಿರುಕುಳ ಅಪರಾಧಿಗಳು/ಪರಭಕ್ಷಕರನ್ನು ಬೆಂಬಲಿಸುವ ಮೂಲಕ ಲಿಂಗ ಘನತೆಯನ್ನು ವಿರೋಧಿಸುವ ಇಂತಹ ವ್ಯಕ್ತಿಗಳು ಆಂತರಿಕ ಸಮಿತಿಯಲ್ಲಿ ಮಾತ್ರವಲ್ಲದೆ, ಫಿಲಂ ಚೇಂಬರ್ ಅನ್ನು ಪ್ರತಿನಿಧಿಸಲೂ ಅನರ್ಹರು ಎಂದಿದೆ.

ಹೊಸದಾಗಿ ರಚಿಸಲಾದ ಸಮಿತಿಗೆ ಈಗ ಅಥವಾ ಭವಿಷ್ಯದಲ್ಲಿ ಬಲಿಪಶುಗಳಿಗೆ ನ್ಯಾಯ ಒದಗಿಸುವುದು ಬಿಡಿ, ಲೈಂಗಿಕ ಕಿರುಕುಳ ಮತ್ತು ‘ಕಾಸ್ಟಿಂಗ್ ಕೌಚ್’ ಪ್ರಕರಣಗಳನ್ನು ಚಿಂತನಶೀಲವಾಗಿ ನಿರ್ವಹಿಸಲು ಸಾಧ್ಯವಾಗದಿರಬಹುದು ಎಂದು ಫೈರ್ ಕಳವಳ ವ್ಯಕ್ತಪಡಿಸಿದೆ.

ಯಾವುದೇ ಸಂಸ್ಥೆಯು ಎಷ್ಟೇ ಸದುದ್ದೇಶವನ್ನು ಹೊಂದಿದ್ದರೂ, ಅದರ ಸದಸ್ಯರ ಅರ್ಹತೆಯ ಮೇಲೆ ನಿಂತಿರುತ್ತದೆ. ಪಾಶ್ ಮಾರ್ಗಸೂಚಿಗಳ ಅಡಿಯಲ್ಲಿ ಒದಗಿಸಲಾದ ಮಾನದಂಡಗಳನ್ನು ಪೂರೈಸುವ ಸದಸ್ಯರನ್ನು ಆಂತರಿಕ ಸಮಿತಿ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ. ರಾಜ್ಯ ಮಹಿಳಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದು ಫೈರ್ ಹೇಳಿದೆ.

ದಲಿತ ಚಳವಳಿಯ ಪ್ರಮುಖ ಹೋರಾಟಗಾರ ಕೆ.ಎಂ. ಕೊಮ್ಮಣ್ಣ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...