Homeಮುಖಪುಟವೆಬ್‌ಸೀರೀಸ್‌: ಕರ್ನಾಟಕ ಪೊಲೀಸರಿಂದ ಖಾಸಗಿತನದ ಉಲ್ಲಂಘನೆ; ಮೊದಲ ಸಂಚಿಕೆಗೆ ಹೈಕೋರ್ಟ್‌ ತಡೆ

ವೆಬ್‌ಸೀರೀಸ್‌: ಕರ್ನಾಟಕ ಪೊಲೀಸರಿಂದ ಖಾಸಗಿತನದ ಉಲ್ಲಂಘನೆ; ಮೊದಲ ಸಂಚಿಕೆಗೆ ಹೈಕೋರ್ಟ್‌ ತಡೆ

ಈ ರೀತಿಯ ಘಟನೆ ಅಮೆರಿಕ ಅಥವಾ ಯೂರೋಪ್‌‌ನಲ್ಲಿ ಆಗಿದ್ದರೆ ಕೋಟ್ಯಂತರ ರೂಪಾಯಿ ದಂಡವನ್ನು ಆರೋಪಿಗಳಿಗೆ ಪೊಲೀಸ್‌ ಇಲಾಖೆ ಕಟ್ಟಬೇಕಾಗಿತ್ತು ಎಂದು ವೆಬ್‌ಸೀರೀಸ್‌ ನೋಡಿದವರು ಟೀಕಿಸಿದ್ದಾರೆ.

- Advertisement -
- Advertisement -

ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ‘ಕ್ರೈಮ್‌ ಸ್ಟೋರೀಸ್‌: ಇಂಡಿಯಾ ಡೆಟೆಕ್ಟೀವ್ಸ್‌’ ಸಾಕ್ಷ್ಯಚಿತ್ರ ಸರಣಿಯ ಮೊದಲ ಸಂಚಿಕೆಯ ಪ್ರಸಾರವನ್ನು ತಡೆ ಹಿಡಿಯಲು ಕರ್ನಾಟಕ ಹೈಕೋರ್ಟ್‌ ಸೂಚಿಸಿದೆ.

ನೆಟ್‌ಪ್ಲಿಕ್‌ ಇಂಟರ್‌ಟೈನ್‌ಮೆಂಟ್‌ ಸರ್ವೀಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಓಟಿಟಿಯಲ್ಲಿ ಈ ಸಾಕ್ಷ್ಯಚಿತ್ರ ಸರಣಿ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಚಿತ್ರೀಕರಿಸಲಾಗಿದೆ. ಒಟ್ಟು ನಾಲ್ಕು ಸಂಚಿಕೆಗಳನ್ನು ಬಿಡುಗಡೆ ಮಾಡಲಾಗಿದ್ದು, ಒಂದೊಂದು ಸಂಚಿಕೆಯೂ ಒಂದೊಂದು ನೈಜ ಘಟನೆಯನ್ನು ಆಧರಿಸಿವೆ.

ಮೊದಲ ಸಂಚಿಕೆಯು ‘ಎ ಮರ್ಡರ್‌ ಮದರ್‌’ ಎಂದಿದ್ದು, ಅದಕ್ಕೆ ಜಸ್ಟೀಸ್‌ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅಕ್ಟೋಬರ್‌ 1ರಂದು ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಿದ್ದಾರೆ.

ಕೆ.ಆರ್‌.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020ರ ಫೆಬ್ರುವರಿಯಲ್ಲಿ ನಡೆದ 54 ವರ್ಷದ ನಿರ್ಮಲಾ ಚಂದ್ರಶೇಖರ್‌ ಕೊಲೆ ಪ್ರಕರಣದ ಸಹ ಆರೋಪಿ, ಬೆಂಗಳೂರಿನ ನಿವಾಸಿ ಶ್ರೀಧರ್‌ ರಾವ್ ಎಸ್‌ (28) ಅವರು ‘ಎ ಮರ್ಡರ್‌ ಮದರ್‌’ ಸಂಚಿಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿದಾರರು (ಸಹ ಆರೋಪಿ ಶ್ರೀಧರ್‌ ರಾವ್‌) ಮತ್ತು ಪ್ರಮುಖ ಆರೋಪಿ ಅಮೃತ ಚಂದ್ರಶೇಖರ್ ವಿರುದ್ಧದ ತನಿಖೆಯ ದೃಶ್ಯಗಳನ್ನು ಈ ಸರಣಿ ಒಳಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆರೋಪಿ ಅಮೃತಾ ತನ್ನ ತಾಯಿಯನ್ನು ಕೊಂದು, ಸಹೋದರನನ್ನೂ ಕೊಲ್ಲಲು ಯತ್ನಿಸಿ ಬಳಿಕ ಸಹಆರೋಪಿ (ಅರ್ಜಿದಾರ) ಜೊತೆ ಅಂಡಮಾನ್‌ ನಿಕೋಬಾರ್‌ಗೆ ಫೆಬ್ರುವರಿ 2ರಂದು ವಿಮಾನ ಹತ್ತಿದ್ದರು ಎಂದು ಸಂಚಿಕೆಯಲ್ಲಿ ನಿರೂಪಿಸಲಾಗಿದೆ.

ಇದನ್ನೂ ಓದಿರಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ

“ಅರ್ಜಿದಾರನು ಕಳೆದ ವರ್ಷದ ಫೆಬ್ರುವರಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾಗ ಆತನ ಎಲ್ಲ ಚಲನವಲನಗಳನ್ನು ರೆಕಾರ್ಡ್‌ ಮಾಡಿಕೊಳ್ಳಲು, ವಿವಿಧ ಅಧಿಕಾರಿಗಳ ಸಂದರ್ಶನ ನಡೆಸಲು ಮಿನ್‌ನೌ ಫಿಲ್ಮ್ಸ್‌‌ನ ಕ್ಲೈರೇ ಗುಡ್‌ಲಾಸ್‌ ಮತ್ತು ಆಕೆಯ ತಂಡಕ್ಕೆ ಪೊಲೀಸರು ಅಧಿಕಾರ ನೀಡಿದ್ದಾರೆ” ಎಂದು ಅರ್ಜಿದಾರರು ಆರೋಪಿಸಿದ್ದಾರೆ.

“ಯಾವುದೇ ಅಧಿಕೃತ ಅನುಮತಿ ಇಲ್ಲದೇ ವಿಡಿಯೋ ಚಿತ್ರೀಕರಣ ಮಾಡಲಾಯಿತು, ಹೇಳಿಕೆಯನ್ನು ಪಡೆಯಲಾಯಿತು. ಮಿನ್‌ನೌ ಫಿಲ್ಮ್ಸ್‌ನವರ ಪತ್ರದ ಮೇಲೆ ಪೊಲೀಸರು ಬಲವಂತವಾಗಿ ಸಹಿ ಪಡೆದಿದ್ದಾರೆ” ಎಂದು ಅರ್ಜಿದಾರರು ಕೋರ್ಟ್‌‌ಗೆ ತಿಳಿಸಿದ್ದಾರೆ.

ವೆಬ್‌ ಸೀರೀಸ್‌ಗೆ ಆಕ್ಷೇಪ: ಕೀಲಾರ ನಾಗೇಗೌಡರ ಆಕ್ಷೇಪ

ಸದರಿ ವೆಬ್‌ ಸೀರೀಸ್‌ ಕುರಿತು, ನೆಟ್‌ಪ್ಲಿಕ್ಸ್‌ನ ಹಲವು ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಇಂತಹ ವೆಬ್‌ ಸೀರೀಸ್‌ಗಳನ್ನು ನೋಡಿ ಹೊಗಳುವಾಗ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಪ್ರಜ್ಞಾವಂತರು ಅಭಿಪ್ರಾಯ ತಾಳಿದ್ದಾರೆ.

ಬರಹಗಾರ ನಾಗೇಗೌಡ ಕೀಲಾರ ಶಿವಲಿಂಗಯ್ಯ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಆಕ್ಷೇಪ ಎತ್ತಿದ್ದಾರೆ. “ಕರ್ನಾಟಕ ಪೊಲೀಸ್‌ನವರದು ಒಂದು detective web series Netflixನಲ್ಲಿ ಬಂದಿದೆ ಅಂತ ಕುತೂಹಲದಿಂದ ಮೊದಲ ಎಪಿಸೋಡ್ ನೋಡಿದೆ. ಇದರಲ್ಲಿ ಯಾವುದೇ detective ಅಂಶಗಳು ಇರಲಿಲ್ಲ. ಇದೊಂದು open and shut case ಆಗಿತ್ತು” ಎಂದಿದ್ದಾರೆ.

ಮುಂದುವರಿದು, “ಬಡವರ ಮನೆ ಮಕ್ಕಳು ಈ ಮರ್ಡರ್‌‌ನಲ್ಲಿ ಆರೋಪಿಗಳು ಆಗಿರುವುದರಿಂದ ಪೊಲೀಸ್‌ನವರು ಆ ಆರೋಪಿಗಳ ಘನತೆಗೆ ಯಾವುದೇ ಬೆಲೆ ಕೊಡದೇ ಅವರನ್ನು ಈ ವೆಬ್‌ ಸೀರೀಸ್‌ನಲ್ಲಿ ತೋರಿಸಲು ಅವಕಾಶ ಕಲ್ಪಿಸಿದ್ದಾರೆ. ಆರೋಪಿಗಳ privacy ಹಕ್ಕುಗಳನ್ನು ಉಲ್ಲಂಘಿಸಿ ಅವರ ಮೆಸೇಜ್, ಬ್ಯಾಂಕ್ ಖಾತೆಯ ವಿವರಗಳು, ವೈಯಕ್ತಿಕ ವಿಚಾರಗಳು ಎಲ್ಲವನ್ನೂ web seriesನಲ್ಲಿ ತೋರಿಸಿದ್ದಾರೆ. ಇದಕ್ಕೆ ನಮ್ಮ ಕರ್ನಾಟಕ ಪೊಲೀಸ್‌‌ನವರು ಅವಕಾಶ ಕೊಟ್ಟಿದ್ದಾರೆ” ಎಂದಿದ್ದಾರೆ.

“ಈ ಮರ್ಡರ್‌‌ನಲ್ಲಿ ಬರುವ ಒಬ್ಬ ಆರೋಪಿ ಇವರ ಪ್ರಕಾರವೇ ನಿರಪರಾಧಿಯಾದರೂ ಇವನ ಮೇಲೆ ಕರ್ನಾಟಕ ಪೋಲಿಸ್‌‌ನವರು ಮರ್ಡರ್ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ರೀತಿಯದ್ದು ಅಮೆರಿಕ ಅಥವಾ ಯೂರೋಪ್‌‌ನಲ್ಲಿ ಆಗಿದ್ದರೆ ಕೋಟ್ಯಂತರ ರೂಪಾಯಿ ದಂಡವನ್ನು ಆರೋಪಿಗಳಿಗೆ ಪೊಲೀಸ್‌ ಇಲಾಖೆ ಕಟ್ಟಬೇಕಾಗಿತ್ತು. ಜೊತೆಗೆ ಈ ಪೊಲೀಸ್‌‌ ಅಧಿಕಾರಿಗಳು ಕೆಲಸ ಕಳೆದುಕೊಳ್ಳುತ್ತಿದ್ದರು. ಇವರಿಗೆ ಅವರ PF, pension ಕೂಡ ಸಿಗುತ್ತಿರಲಿಲ್ಲ. ಆದರೆ ಭಾರತದಲ್ಲಿ ಬಡವರ ಮನೆ ಮಕ್ಕಳು ಅಂದರೆ ಯಾವುದೇ ಗೌರವ ಇಲ್ಲ. ನನ್ನ ಅಭಿಪ್ರಾಯದಲ್ಲಿ ಕರ್ನಾಟಕ ಪೊಲೀಸ್‌ನವರು ಆರೋಪಿಗಳಿಗೆ ಸಾರ್ವಜನಿಕ ಕ್ಷಮೆ ಕೇಳಿ ಒಂದು ದೊಡ್ಡ ಮೊತ್ತದ ದಂಡ ಕಟ್ಟಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

“ದುರಂತ ಏನು ಅಂದರೆ ಕರ್ನಾಟಕದ ಒಂದಷ್ಟು ಸಿನಿಮಾ ಪ್ರಿಯರು ಇದೊಂದು ಅದ್ಭುತ ವೆಬ್ series ಅಂತ ಒಂದು ಕ್ಲಬ್ ಹೌಸ್ ಚರ್ಚೆ ಕೂಡ ನಡೆಸಿದರು. ಆ ಚರ್ಚೆಯಲ್ಲಿ ತಮ್ಮನ್ನು ತಾವೇ ಸಿನಿಮಾ ವಿಮರ್ಶಕರು ಅಂತ ಕರೆಸಿಕೊಳ್ಳುವವರು ಒಂದು ಘನವಾದ ಚರ್ಚೆ ಕೂಡ ಮಾಡಿದ್ದು ಅಲ್ಲದೇ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಆ ಪೊಲೀಸ್‌ ಅಧಿಕಾರಿಗಳನ್ನು ಆ ಚರ್ಚೆಗೆ ಕರೆಸಿ ಹೊಗಳಿದ್ದೇ ಹೊಗಳಿದ್ದು. ಇಂತಹ ಮೂರ್ಖ ಸಿನಿಮಾ ವಿಮರ್ಶಕರಿಗೆ ವ್ಯಕ್ತಿ ಘನತೆ, ಮಾನವ ಹಕ್ಕುಗಳು, ನಮ್ಮ ನೆಲದ ಕಾನೂನಿನ ಬಗ್ಗೆ ಕಿಂಚಿತ್ತೂ ತಿಳಿವಳಿಕೆ ಇಲ್ಲ” ಎಂದು ವಿಷಾದಿಸಿದ್ದಾರೆ.

ದಯಾ ಗಂಗನಘಟ್ಟ ಅವರು ಪ್ರತಿಕ್ರಿಯಿಸಿ, “ಜಾಳು ಜಾಳು ಡೈಲಾಗ್ಸ್, ಆದರೆ ವಾಸ್ತವವಾಗಿಯೂ ಪೊಲೀಸ್ ವ್ಯವಸ್ಥೆ ಇದಕ್ಕಿಂತ ಹದಗೆಟ್ಟಿರೋದು ವಿಷಾದ” ಎಂದಿದ್ದಾರೆ.

ರಿಯಾಜ್‌ ಎಂಬುವವರು ಪ್ರತಿಕ್ರಿಯಿಸಿ, “ಸಾರ್ವಜನಿಕ ಸೇವಕರಾಗಿ ಇರಬೇಕಾದ ಪೊಲೀಸರನ್ನು ಹುಲಿ ಸಿಂಹ ಅಂತಾ ಮಿತಿಗಿಂತ ಹೆಚ್ಚು ಹೊಗಳಿ ಅಟ್ಟಕೇರಿಸಿ ಅವರ ಕಾನೂನು ಬಾಹಿರ (ಕಸ್ಟಡಿ ಸಾವು, ಎನ್ ಕೌಂಟರ್, ಸುಳ್ಳು ಕೇಸುಗಳು) ಕೃತ್ಯಗಳನ್ನು ಈ ಪರಿ ಸರ್ಮಥಿಸುವ ಮನಸ್ಥಿತಿ ಭಾರತದಲ್ಲಿ ಮಾತ್ರ ಇರಬಹುದೇನೋ, ಅನುಮಾನ” ಎಂದಿದ್ದಾರೆ.

ಇದನ್ನೂ ಓದಿ: ಚಲನಚಿತ್ರ 2020: ಸ್ಟ್ರೀಮ್ ಸಿನಿಮಾ ಕುಗ್ಗಿದ ಪರದೆ, ಹಿಗ್ಗಿದ ಮಾರುಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....