Homeಮುಖಪುಟಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

ಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

- Advertisement -
- Advertisement -

ಗೃಹ ಸಚಿವ ಅಮಿತ್ ಶಾ 370ನೇ ವಿಧಿಯ ರದ್ದು ಮಾಡಿ ಎಂಟ್ಹತ್ತು ದಿನಗಳು ಕಳೆದಿವೆ. ‘ಇದೊಂದು ಐತಿಹಾಸಿಕ ನಿರ್ಧಾರ’ ಎಂದು ದೇಶಾದ್ಯಂತ ಸಂಭ್ರಮವಿದೆ ಎಂದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದವಷ್ಟೇ. ಆದರೆ ಕಾಶ್ಮೀರದ ನಿವಾಸಿಗಳು ಮತ್ತು ಹೊರಗಡೆ ಇರುವ ಕಾಶ್ಮೀರಿಗಳ ಧ್ವನಿ, ಅಭಿಪ್ರಾಯಗಳ ಸುದ್ದಿ ಕಾಣಲೇ ಇಲ್ಲ, ಕೇಳಿಸಲೇ ಇಲ್ಲ. ಕಾಶ್ಮೀರದಲ್ಲಿನ ಸಂಪರ್ಕ ವ್ಯವಸ್ಥೆಯನ್ನೇ ಬರಖಾಸ್ತು ಮಾಡಲಾಗಿತ್ತು. ಮೊಬೈಲ್, ಲ್ಯಾಂಡ್‍ಲೈನ್, ಇಂಟರ್‍ನೆಟ್ ಸಂಪರ್ಕಗಳನ್ನೆಲ್ಲ ಕಡಿತಗೊಳಿಸಲಾಗಿತ್ತು. ಮೊದಲೇ ವಿಶ್ವದ ಅತಿದೊಡ್ಡ ಮಿಲಿಟರಿ ಪ್ರದೇಶವೆಂದು ಗುರುತಿಸಲ್ಪಟ್ಟ ಕಾಶ್ಮೀರದೊಳಕ್ಕೆ, 370 ವಿಧಿ ರದ್ದು ಘೋಷಿಸುವ ಪೂರ್ವದಲ್ಲಿ ಮತ್ತೆ 46 ಸಾವಿರ ಸೈನಿಕರನ್ನು ನುಗ್ಗಿಸಿ ಪಹರೆಗೆ ಬಿಡಲಾಯಿತು.

ಇವತ್ತಿಗೆ (ಮಂಗಳವಾರ) ಅಲ್ಲಿ ಸ್ಥಳಿಯ ಸುದ್ದಿ ಪತ್ರಿಕೆಗಳು ಬಿಡುಗಡೆ ಆಗದೇ 10 ದಿನ ಕಳೆದವು. ಕೊನೆಯ ಬಾರಿ ಅಲ್ಲಿ ಸ್ಥಳೀಯ ಪತ್ರಿಕೆ ಪ್ರಕಟವಾಗಿದ್ದು ಆಗಸ್ಟ್ 4ರಂದು. ಸರ್ಕಾರ ನೀಡಿದ ಪ್ರಕಟಣೆಗಳಷ್ಟೇ ಕಾಶ್ಮೀರದಲ್ಲಿ ಎಲ್ಲ ಸರಿಯಾಗಿದೆ ಎಂಬ ವಿವರ ನೀಡುತ್ತಿದ್ದವು. ಆ ಪ್ರದೇಶದಲ್ಲಿರುವ ಭಾರತೀಯ ಪತ್ರಕರ್ತರಿಗೂ ಫೋಟೋ ತೆಗೆಯಲೂ ಅವಕಾಶ ನೀಡಿರಲಿಲ್ಲ. ಆದರೆ ಪರಿಸ್ಥಿತಿಯ ಚರ್ಚೆ ಕಡಿಮೆ ಆಗತೊಡಗಿದಂತೆ ಹಲವು ಮಾಧ್ಯಮ ಧ್ವನಿಗಳು ಸತ್ಯ ಹೇಳತೊಡಗಿದವು. ಆಗ ಗೊತ್ತಾಗಿದ್ದು ಕೇಂದ್ರ ಸರ್ಕಾರ ಮಾತ್ತು ಭಾರತದ ಮುಖ್ಯವಾಹಿನಿಗಳು ಹೇಳಿದಂತೆ ಪರಿಸ್ಥಿತಿ ನಾರ್ಮಲ್ ಆಗಿರಲೇ ಇಲ್ಲ! ಸತ್ಯ ಏನಾಗಿತ್ತೆಂದರೆ, ಜನರಲ್ಲಿ ಆಕ್ರೋಶ ತುಂಬಿತ್ತು, ಆಹಾರ ಮತ್ತು ಔಷಧಿಗಳ ಕೊರತೆಯಾಗಿತ್ತು, ತುರ್ತು ಚಿಕಿತ್ಸೆಯ ನೆರವೂ ಸಿಗದೇ ಜನ ಪ್ರಾಣಾಪಾಯ ಎದುರಿಸಿದರು, ಕೆಲವು ಕಿಲೋಮೀಟರ್ ಪ್ರಯಾಣಿಸಲೂ ಸಾರಿಗೆ ವ್ಯವಸ್ಥೆ ಇಲ್ಲದೇ ಜನ ಗಂಟೆಗಟ್ಟಲೇ ಕಾದಿದ್ದರು….ಆದರೆ, ಸರ್ಕಾರಿ ವಾಹನಗಳು ಸಂಚರಿಸುತ್ತಿದ್ದ ಕೆಲವೇ ಕೆಲವು ರಸ್ತೆಗಳನ್ನು ತೋರಿಸಿದ ಮುಖ್ಯ ವಾಹಿನಿ ಮಾಧ್ಯಮಗಳು ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂಬಂತೆ ತೋರಿಸುವ ಮೂಲಕ ಆತ್ಮವಂಚನೆ ಮಾಡಿಕೊಂಡು , ವೃತ್ತಿದ್ರೋಹವನ್ನೂ ಎಸಗಿದ್ದವು.

370ನೇ ವಿಧಿ ರದ್ದಾದ ಎರಡು ದಿನಗಳ ನಂತರ ರಕ್ಷಣಾ ಸಲಹೆಗಾರ ಅಜಿತ್ ದೋವಲಲ್ ಕಾಶ್ಮೀರಕ್ಕೆ ಹೋಗಿ ಕೆಲವು ಜನರ ಜೊತೆ ಬಿರ್ಯಾನಿ ತಿನ್ನುವ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ ಮಾಧ್ಯಮಗಳು, ‘ನೋಡಿ ಕಾಶ್ಮೀರದಲ್ಲಿ ಎಲ್ಲವೂ ಶಾಂತವಾಗಿದೆ. 370ನೇ ವಿಧಿ ರದ್ಧತಿಯ ನಂತರವೂ ಜನತೆ ಯಾವ ಪ್ರತಿರೋಧ ಮಾಡದೇ ಸಮ್ಮತಿಸಿದ್ದಾರೆ’ ಎಂಬ ಚಿತ್ರಣ ಕೊಡಲು ನಮ್ಮ ಮಾಧ್ಯಮಗಳು ಯತ್ನಿಸಿದವು.

ಕಾಶ್ಮೀರದ ಈ ‘ಸಹಜ’ ಪರಿಸ್ಥಿತಿಯನ್ನು ಮತ್ತು ‘ಸಂತೋಷ’ವಾಗಿರುವ ಕಾಶ್ಮೀರಿಗಳನ್ನು ಖುದ್ದಾಗಿ ನೋಡಿ ಅನುಭವಿಸಉ ಹೊರಟ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಯನ್ನು ಶ್ರೀನಗರದ ವಿಮಾನ ನಿಲ್ದಾಣದಲ್ಲೇ ತಡೆದು ದಹಲಿಗೆ ವಾಪಸ್ ಕಳಿಸಲಾಯಿತು. ಮರುದಿನ ಸಿಪಿಎಂನ ಸೀತಾರಾಂ ಯೆಚೂರಿ ಮತ್ತು ಡಿ. ರಾಜಾ ಇಂಥದ್ದೇ ಪ್ರಯತ್ನ ಮಾಡಿದಾಗ ಅವರನ್ನು ಶ್ರೀನಗರ ಪ್ರವೇಶಿಸದಂತೆ ತಡೆದು ದೆಹಲಿಗೆ ವಾಪಸ್ ಕಳಿಸಲಾಯಿತು.

ಪ್ರತಿದಿನವೂ ದೆಹಲಿಯಿಂದ ಬಿಡುಗಡೆಗೊಳ್ಳುತ್ತಿದ್ದ ಜನರಿರುವ ಮಾರ್ಕೆಟ್‍ಗಳು, ಜನ ತುಂಬಿರುವ ರಸ್ತೆಗಳು, ಹಬ್ಬಕ್ಕೂ ಮೊದಲೇ ತೆರೆದ ಮಸೀದಿಗಳ ಚಿತ್ರ ಮತ್ತು ವಿಡಿಯೋಗಳನ್ನೇ ಸತ್ಯ ಎಂಬಂತೆ ಚಾನೆಲ್‍ಗಳು ಪ್ರಸಾರ ಮಾಡಿದವು. ಕೆಲವು ಮಾಧ್ಯಮಗಳಂತೂ ಅಲ್ಲಿ 144ನೇ ಸೆಕ್ಷನ್ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸುಳ್ಳು ವರದಿ ಮಾಡಿಬಿಟ್ಟವೂ ಕೂಡ.

ಕಾಶ್ಮೀರದಲ್ಲಿ ‘ಎಲ್ಲವೂ ಸರಿಯಿದೆ’; ಆದರೆ ನಿಜವಾಗಿಯೂ ಅಲ್ಲ….

ಆಗಸ್ಟ್ 8ರಂದು ದಿ ವೈರ್ ಸುದ್ದಿ ಪೋರ್ಟಲ್‍ನ ಸಂಪಾದಕ ಸಿದ್ದಾರ್ಥ ವರದರಾಜನ್ ಕಾಶ್ಮೀರದ ಕೆಲವು ಫೂಟೇಜ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸತ್ಯದ ದರ್ಶನ ಮಾಡಿಸಿದರು. ಪೆಲೆಟ್ ಗುಂಡುಗಳಿಂದ ಕಣ್ಣುಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಹಲವರೊಂದಿಗೆ ಸಿದ್ದಾರ್ಥರು ಮಾತಾಡಿದ್ದರು. ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಈ ಗತಿ ಎಂದು ಕೆಲವರು ಹೇಳಿದರೆ, ಸುಮ್ಮನೇ ಇದ್ದ ನಮ್ಮ ಮೇಲೂ ಮಿಲಿಟರಿಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಿದ್ದರು. ಮರುದಿನ ಆಗಸ್ಟ್ 8ರಂದು ಎನ್‍ಡಿಟಿವಿ ಪ್ರಸಾರ ಮಾಡಿದ ಪ್ರತ್ಯಕ್ಷ ವರದಿಯ ಪ್ರಕಾರ, ಕಾರ್ಗಿಲ್ ಪ್ರದೇಶದಲ್ಲಿ 370 ವಿಧಿ ರದ್ದತಿ ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು ಮತ್ತು ಬಹುಪಾಲು ಪ್ರದೇಶದಲ್ಲಿ ಕಫ್ರ್ಯೂ ಇನ್ನೂ ಜಾರಿಯಲ್ಲಿತ್ತು.

 

 

 

 

 

ಮೊನ್ನೆ ಶುಕ್ರವಾರದ ಪ್ರಾರ್ಥನೆಯ ನಂತರ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಶ್ರೀನಗರದ ರಸ್ತೆಗಳಲ್ಲಿ ಕಾಶ್ಮೀರದ ಧ್ವಜಗಳನ್ನು ಹಿಡಿದು, ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತ ಶಾಂತಿಯುತ ಪ್ರತಿಭಟನೆಯಲ್ಲಿ ಸಾಗುವಾಗ ಭಾರತೀಯ ಸೇನೆ ಅವರತ್ತ ಗುಂಡು ಹಾರಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

 

ಶುಕ್ರವಾರದ ಪ್ರಾರ್ಥನೆಯ ನಂತರ ಶ್ರೀನಗರ ಸೇರಿ ಹಲವು ಕಡೆ ವಿಧಿ ರದ್ದತಿ ವಿರೋಧಿಸಿ ಬೃಹತ್ ಪ್ತಿಭಟನೆಗಳು ಜರುಗಿದ ಫೂಟೇಜ್‍ಗಳನ್ನು ಮರುದಿನ ಬಿಬಿಸಿ ಪ್ರಸಾರ ಮಾಡಿತು. ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆಗಳು ನಡೆದಿದ್ದನ್ನು, ಪ್ರತಿಭಟನಾಕಾರರನ್ನು ಚದುರಿಸಲು ಟಿಯರ್ ಗ್ಯಾಸ್ ಸಿಡಿಸಿದ್ದನ್ನು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಫೋಟೊ ಮತ್ತು ವಿಡಿಯೋಗಳ ಮೂಲಕ ಅಲ್ ಜಝೀರಾ, ವಾಶಿಂಗ್ಟನ್ ಪೋಸ್ಟ್, ರ್ಯೂಟರ್ಸ್ ಸುದ್ದಿಸಂಸ್ಥೆಗಳು ಮಾಡಿದವು. ಬಿಬಿಸಿ, ಅಲ್ ಜಝೀರಾ, ರ್ಯೂಟರ್ಸ್‍ಗಳ ಸುದ್ದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ ನಂತರದಲ್ಲಿ, ಕೆಲವು ಕಲ್ಲು ತೂರುವ ಘಟನೆಗಳು ಸಂಭವಿಸಿವೆ , ಆದರೆ ಅವರ ಮೇಲೆ ಬಲ ಪ್ರಯೋಗಿಸಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಕಾಶ್ಮೀರ ಕಣಿವೆಯ ಮೂಲೆಮೂಲೆಯಲ್ಲೂ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ, ಪುಟ್ಟ ಹಳ್ಳಿಗಳ ಪ್ರತಿ ಮನೆಯ ಮುಂದೆಯೂ ಒಬ್ಬೊಬ್ಬ ಸೈನಿಕನನ್ನು ಪಹರೆಗೆ ನಿಲ್ಲಿಸಲಾಗಿದೆ ಎಂದು ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಬಹಳಷ್ಟು ಕಡೆ ಕಲ್ಲು ತೂರಾಟದ ಮೂಲಕ ಆಕ್ರೋಶ ವ್ಯಕ್ತವಾಗುತ್ತಲೇ ಇದೆ ಮತ್ತು ಕಾಶ್ಮೀರದ ಜನರಲ್ಲಿ ಈಗ ದೊಡ್ಡ ಅಸಹನೆ ತುಂಬಿದೆ ಎಂಬುದನ್ನು ಹಲವು ಸೈನಿಕರೇ ಒಪ್ಪಿಕೊಂಡಿರುವುದನ್ನು ನಿರೂಪಿಸಿದೆ.

ಆದರೆ, ಇದೇ ಹೊತ್ತಲ್ಲಿ ಭಾರತೀಯ ಮಾಧ್ಯಮಗಳು ವಿಷಯಾಂತರ ಮಾಡಿ, ಪಾಕಿಸ್ತಾನದ ಕೋಪಿತ ನಡವಳಿಕೆಯ ಕುರಿತು ಸುದ್ದಿ ಮಾಡುತ್ತ, ಭಾರತ ತಕ್ಷಣದ ಸಂಭಾವ್ಯ ಯುದ್ಧಕ್ಕೆ ಸಿದ್ಧವಾಗಿರಬೇಕು ಎಂದು ಸುದ್ದಿ ಮಾಡುತ್ತಿದ್ದವು. ‘ಸೇನೆ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸನ್ನದ್ಧವಾಗಿದೆ ಎಂದು ಮೇಜರ್ ಜನರಲ್ ಬಿಪಿನ್ ರಾವತ್ ಹೇಳುವ ವಿಡಿಯೋವನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತು. ಜೀ ನ್ಯೂಸ್, ಆಜ್‍ತಕ್ ಮತ್ತು ರಿಪಬ್ಲಿಕ್ ಟಿವಿಗಳು ಸೈನಿಕರನ್ನು ಮಾತಾಡಿಸಿ, ‘ನೋಡಿ ಜೋಶ್ ಹೇಗಿದೆ’ ಎಂದೆಲ್ಲ ಅಪ್ರಬುದ್ಧ ವರದಿಗಳನ್ನು ಮಾಡುತ್ತಿವೆ. ಇದೊಂದು ಭಾರತೀಯ ಮೀಡಿಯಾದ ಸಹಜ ಹುಚ್ಚಾಟದ ಪ್ರದರ್ಶನದಂತಿದೆ: ಸರ್ಕಾರದ ವಕ್ತಾರರಂತೆ ಕೆಲಸ ಮಾಡಲು ಸುಳ್ಳನ್ನು ಹರಡುವುದು, ಅದು ಬಯಲಾದಾಗ ವಿಷಯಾಂತರ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುವುದು….

ಮೊದಲೇ ಸಮಸ್ಯಾತ್ಮಕವಾಗಿದ್ದ ಪ್ರದೇಶದಲ್ಲಿ ಭಾರತ ಸರ್ಕಾರವು ಈಗ ಬೆಂಕಿಯನ್ನು ಹಾಕಿದೆ. ಕಾಲವಷ್ಟೇ ಉತ್ತರ ಹೇಳಲಿದೆ: ಇದು ಐತಿಹಾಸಿಕ ಜಯವೋ ಅಥವಾ ಐತಿಹಾಸಿಕ ಪ್ರಮಾದವೋ ಎಂಬುದನ್ನು. ಆದರೆ ಸದ್ಯದ ಪ್ರತಿಭಟನೆ, ಪ್ರತಿರೋಧಗಳನ್ನು ನೋಡಿದರೆ, ಕಾಶ್ಮೀರ ನನ್ನ ಪ್ರದೇಶ, ಆದರೆ ಅಲ್ಲಿನ ಜನ ನಮ್ಮವರಲ್ಲ ಎಂಬ ಭಾವ ಪ್ರದರ್ಶಿಸುತ್ತಿರುವ ದೇಶವು ಕಾಶ್ಮೀರದಲ್ಲಿ ಮುಳ್ಳಿನ ಹಾದಿಯನ್ನು ಸವೆಸಬೇಕಾಗಲಿದೆ. ಈಗ ಮಾತುಕತೆ ಮತ್ತು ಸಹನೆಯ ಅಗತ್ಯತೆಯ ಕಾಲ, ‘ಜೋಶ್’ನ ಕಾಲವಲ್ಲ. ಏಕೆಂದರೆ, ಜೋಶ್‍ನಲ್ಲಿ ಜೀವಗಳು ಮತ್ತು ಹಕ್ಕುಗಳು ಮರಣಕ್ಕೀಡಾಗುತ್ತವೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...