Homeಮುಖಪುಟಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

ಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

- Advertisement -
- Advertisement -

ಗೃಹ ಸಚಿವ ಅಮಿತ್ ಶಾ 370ನೇ ವಿಧಿಯ ರದ್ದು ಮಾಡಿ ಎಂಟ್ಹತ್ತು ದಿನಗಳು ಕಳೆದಿವೆ. ‘ಇದೊಂದು ಐತಿಹಾಸಿಕ ನಿರ್ಧಾರ’ ಎಂದು ದೇಶಾದ್ಯಂತ ಸಂಭ್ರಮವಿದೆ ಎಂದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದವಷ್ಟೇ. ಆದರೆ ಕಾಶ್ಮೀರದ ನಿವಾಸಿಗಳು ಮತ್ತು ಹೊರಗಡೆ ಇರುವ ಕಾಶ್ಮೀರಿಗಳ ಧ್ವನಿ, ಅಭಿಪ್ರಾಯಗಳ ಸುದ್ದಿ ಕಾಣಲೇ ಇಲ್ಲ, ಕೇಳಿಸಲೇ ಇಲ್ಲ. ಕಾಶ್ಮೀರದಲ್ಲಿನ ಸಂಪರ್ಕ ವ್ಯವಸ್ಥೆಯನ್ನೇ ಬರಖಾಸ್ತು ಮಾಡಲಾಗಿತ್ತು. ಮೊಬೈಲ್, ಲ್ಯಾಂಡ್‍ಲೈನ್, ಇಂಟರ್‍ನೆಟ್ ಸಂಪರ್ಕಗಳನ್ನೆಲ್ಲ ಕಡಿತಗೊಳಿಸಲಾಗಿತ್ತು. ಮೊದಲೇ ವಿಶ್ವದ ಅತಿದೊಡ್ಡ ಮಿಲಿಟರಿ ಪ್ರದೇಶವೆಂದು ಗುರುತಿಸಲ್ಪಟ್ಟ ಕಾಶ್ಮೀರದೊಳಕ್ಕೆ, 370 ವಿಧಿ ರದ್ದು ಘೋಷಿಸುವ ಪೂರ್ವದಲ್ಲಿ ಮತ್ತೆ 46 ಸಾವಿರ ಸೈನಿಕರನ್ನು ನುಗ್ಗಿಸಿ ಪಹರೆಗೆ ಬಿಡಲಾಯಿತು.

ಇವತ್ತಿಗೆ (ಮಂಗಳವಾರ) ಅಲ್ಲಿ ಸ್ಥಳಿಯ ಸುದ್ದಿ ಪತ್ರಿಕೆಗಳು ಬಿಡುಗಡೆ ಆಗದೇ 10 ದಿನ ಕಳೆದವು. ಕೊನೆಯ ಬಾರಿ ಅಲ್ಲಿ ಸ್ಥಳೀಯ ಪತ್ರಿಕೆ ಪ್ರಕಟವಾಗಿದ್ದು ಆಗಸ್ಟ್ 4ರಂದು. ಸರ್ಕಾರ ನೀಡಿದ ಪ್ರಕಟಣೆಗಳಷ್ಟೇ ಕಾಶ್ಮೀರದಲ್ಲಿ ಎಲ್ಲ ಸರಿಯಾಗಿದೆ ಎಂಬ ವಿವರ ನೀಡುತ್ತಿದ್ದವು. ಆ ಪ್ರದೇಶದಲ್ಲಿರುವ ಭಾರತೀಯ ಪತ್ರಕರ್ತರಿಗೂ ಫೋಟೋ ತೆಗೆಯಲೂ ಅವಕಾಶ ನೀಡಿರಲಿಲ್ಲ. ಆದರೆ ಪರಿಸ್ಥಿತಿಯ ಚರ್ಚೆ ಕಡಿಮೆ ಆಗತೊಡಗಿದಂತೆ ಹಲವು ಮಾಧ್ಯಮ ಧ್ವನಿಗಳು ಸತ್ಯ ಹೇಳತೊಡಗಿದವು. ಆಗ ಗೊತ್ತಾಗಿದ್ದು ಕೇಂದ್ರ ಸರ್ಕಾರ ಮಾತ್ತು ಭಾರತದ ಮುಖ್ಯವಾಹಿನಿಗಳು ಹೇಳಿದಂತೆ ಪರಿಸ್ಥಿತಿ ನಾರ್ಮಲ್ ಆಗಿರಲೇ ಇಲ್ಲ! ಸತ್ಯ ಏನಾಗಿತ್ತೆಂದರೆ, ಜನರಲ್ಲಿ ಆಕ್ರೋಶ ತುಂಬಿತ್ತು, ಆಹಾರ ಮತ್ತು ಔಷಧಿಗಳ ಕೊರತೆಯಾಗಿತ್ತು, ತುರ್ತು ಚಿಕಿತ್ಸೆಯ ನೆರವೂ ಸಿಗದೇ ಜನ ಪ್ರಾಣಾಪಾಯ ಎದುರಿಸಿದರು, ಕೆಲವು ಕಿಲೋಮೀಟರ್ ಪ್ರಯಾಣಿಸಲೂ ಸಾರಿಗೆ ವ್ಯವಸ್ಥೆ ಇಲ್ಲದೇ ಜನ ಗಂಟೆಗಟ್ಟಲೇ ಕಾದಿದ್ದರು….ಆದರೆ, ಸರ್ಕಾರಿ ವಾಹನಗಳು ಸಂಚರಿಸುತ್ತಿದ್ದ ಕೆಲವೇ ಕೆಲವು ರಸ್ತೆಗಳನ್ನು ತೋರಿಸಿದ ಮುಖ್ಯ ವಾಹಿನಿ ಮಾಧ್ಯಮಗಳು ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂಬಂತೆ ತೋರಿಸುವ ಮೂಲಕ ಆತ್ಮವಂಚನೆ ಮಾಡಿಕೊಂಡು , ವೃತ್ತಿದ್ರೋಹವನ್ನೂ ಎಸಗಿದ್ದವು.

370ನೇ ವಿಧಿ ರದ್ದಾದ ಎರಡು ದಿನಗಳ ನಂತರ ರಕ್ಷಣಾ ಸಲಹೆಗಾರ ಅಜಿತ್ ದೋವಲಲ್ ಕಾಶ್ಮೀರಕ್ಕೆ ಹೋಗಿ ಕೆಲವು ಜನರ ಜೊತೆ ಬಿರ್ಯಾನಿ ತಿನ್ನುವ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ ಮಾಧ್ಯಮಗಳು, ‘ನೋಡಿ ಕಾಶ್ಮೀರದಲ್ಲಿ ಎಲ್ಲವೂ ಶಾಂತವಾಗಿದೆ. 370ನೇ ವಿಧಿ ರದ್ಧತಿಯ ನಂತರವೂ ಜನತೆ ಯಾವ ಪ್ರತಿರೋಧ ಮಾಡದೇ ಸಮ್ಮತಿಸಿದ್ದಾರೆ’ ಎಂಬ ಚಿತ್ರಣ ಕೊಡಲು ನಮ್ಮ ಮಾಧ್ಯಮಗಳು ಯತ್ನಿಸಿದವು.

ಕಾಶ್ಮೀರದ ಈ ‘ಸಹಜ’ ಪರಿಸ್ಥಿತಿಯನ್ನು ಮತ್ತು ‘ಸಂತೋಷ’ವಾಗಿರುವ ಕಾಶ್ಮೀರಿಗಳನ್ನು ಖುದ್ದಾಗಿ ನೋಡಿ ಅನುಭವಿಸಉ ಹೊರಟ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಯನ್ನು ಶ್ರೀನಗರದ ವಿಮಾನ ನಿಲ್ದಾಣದಲ್ಲೇ ತಡೆದು ದಹಲಿಗೆ ವಾಪಸ್ ಕಳಿಸಲಾಯಿತು. ಮರುದಿನ ಸಿಪಿಎಂನ ಸೀತಾರಾಂ ಯೆಚೂರಿ ಮತ್ತು ಡಿ. ರಾಜಾ ಇಂಥದ್ದೇ ಪ್ರಯತ್ನ ಮಾಡಿದಾಗ ಅವರನ್ನು ಶ್ರೀನಗರ ಪ್ರವೇಶಿಸದಂತೆ ತಡೆದು ದೆಹಲಿಗೆ ವಾಪಸ್ ಕಳಿಸಲಾಯಿತು.

ಪ್ರತಿದಿನವೂ ದೆಹಲಿಯಿಂದ ಬಿಡುಗಡೆಗೊಳ್ಳುತ್ತಿದ್ದ ಜನರಿರುವ ಮಾರ್ಕೆಟ್‍ಗಳು, ಜನ ತುಂಬಿರುವ ರಸ್ತೆಗಳು, ಹಬ್ಬಕ್ಕೂ ಮೊದಲೇ ತೆರೆದ ಮಸೀದಿಗಳ ಚಿತ್ರ ಮತ್ತು ವಿಡಿಯೋಗಳನ್ನೇ ಸತ್ಯ ಎಂಬಂತೆ ಚಾನೆಲ್‍ಗಳು ಪ್ರಸಾರ ಮಾಡಿದವು. ಕೆಲವು ಮಾಧ್ಯಮಗಳಂತೂ ಅಲ್ಲಿ 144ನೇ ಸೆಕ್ಷನ್ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸುಳ್ಳು ವರದಿ ಮಾಡಿಬಿಟ್ಟವೂ ಕೂಡ.

ಕಾಶ್ಮೀರದಲ್ಲಿ ‘ಎಲ್ಲವೂ ಸರಿಯಿದೆ’; ಆದರೆ ನಿಜವಾಗಿಯೂ ಅಲ್ಲ….

ಆಗಸ್ಟ್ 8ರಂದು ದಿ ವೈರ್ ಸುದ್ದಿ ಪೋರ್ಟಲ್‍ನ ಸಂಪಾದಕ ಸಿದ್ದಾರ್ಥ ವರದರಾಜನ್ ಕಾಶ್ಮೀರದ ಕೆಲವು ಫೂಟೇಜ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸತ್ಯದ ದರ್ಶನ ಮಾಡಿಸಿದರು. ಪೆಲೆಟ್ ಗುಂಡುಗಳಿಂದ ಕಣ್ಣುಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಹಲವರೊಂದಿಗೆ ಸಿದ್ದಾರ್ಥರು ಮಾತಾಡಿದ್ದರು. ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಈ ಗತಿ ಎಂದು ಕೆಲವರು ಹೇಳಿದರೆ, ಸುಮ್ಮನೇ ಇದ್ದ ನಮ್ಮ ಮೇಲೂ ಮಿಲಿಟರಿಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಿದ್ದರು. ಮರುದಿನ ಆಗಸ್ಟ್ 8ರಂದು ಎನ್‍ಡಿಟಿವಿ ಪ್ರಸಾರ ಮಾಡಿದ ಪ್ರತ್ಯಕ್ಷ ವರದಿಯ ಪ್ರಕಾರ, ಕಾರ್ಗಿಲ್ ಪ್ರದೇಶದಲ್ಲಿ 370 ವಿಧಿ ರದ್ದತಿ ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು ಮತ್ತು ಬಹುಪಾಲು ಪ್ರದೇಶದಲ್ಲಿ ಕಫ್ರ್ಯೂ ಇನ್ನೂ ಜಾರಿಯಲ್ಲಿತ್ತು.

 

 

 

 

 

ಮೊನ್ನೆ ಶುಕ್ರವಾರದ ಪ್ರಾರ್ಥನೆಯ ನಂತರ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಶ್ರೀನಗರದ ರಸ್ತೆಗಳಲ್ಲಿ ಕಾಶ್ಮೀರದ ಧ್ವಜಗಳನ್ನು ಹಿಡಿದು, ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತ ಶಾಂತಿಯುತ ಪ್ರತಿಭಟನೆಯಲ್ಲಿ ಸಾಗುವಾಗ ಭಾರತೀಯ ಸೇನೆ ಅವರತ್ತ ಗುಂಡು ಹಾರಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

 

ಶುಕ್ರವಾರದ ಪ್ರಾರ್ಥನೆಯ ನಂತರ ಶ್ರೀನಗರ ಸೇರಿ ಹಲವು ಕಡೆ ವಿಧಿ ರದ್ದತಿ ವಿರೋಧಿಸಿ ಬೃಹತ್ ಪ್ತಿಭಟನೆಗಳು ಜರುಗಿದ ಫೂಟೇಜ್‍ಗಳನ್ನು ಮರುದಿನ ಬಿಬಿಸಿ ಪ್ರಸಾರ ಮಾಡಿತು. ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆಗಳು ನಡೆದಿದ್ದನ್ನು, ಪ್ರತಿಭಟನಾಕಾರರನ್ನು ಚದುರಿಸಲು ಟಿಯರ್ ಗ್ಯಾಸ್ ಸಿಡಿಸಿದ್ದನ್ನು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಫೋಟೊ ಮತ್ತು ವಿಡಿಯೋಗಳ ಮೂಲಕ ಅಲ್ ಜಝೀರಾ, ವಾಶಿಂಗ್ಟನ್ ಪೋಸ್ಟ್, ರ್ಯೂಟರ್ಸ್ ಸುದ್ದಿಸಂಸ್ಥೆಗಳು ಮಾಡಿದವು. ಬಿಬಿಸಿ, ಅಲ್ ಜಝೀರಾ, ರ್ಯೂಟರ್ಸ್‍ಗಳ ಸುದ್ದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ ನಂತರದಲ್ಲಿ, ಕೆಲವು ಕಲ್ಲು ತೂರುವ ಘಟನೆಗಳು ಸಂಭವಿಸಿವೆ , ಆದರೆ ಅವರ ಮೇಲೆ ಬಲ ಪ್ರಯೋಗಿಸಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಕಾಶ್ಮೀರ ಕಣಿವೆಯ ಮೂಲೆಮೂಲೆಯಲ್ಲೂ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ, ಪುಟ್ಟ ಹಳ್ಳಿಗಳ ಪ್ರತಿ ಮನೆಯ ಮುಂದೆಯೂ ಒಬ್ಬೊಬ್ಬ ಸೈನಿಕನನ್ನು ಪಹರೆಗೆ ನಿಲ್ಲಿಸಲಾಗಿದೆ ಎಂದು ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಬಹಳಷ್ಟು ಕಡೆ ಕಲ್ಲು ತೂರಾಟದ ಮೂಲಕ ಆಕ್ರೋಶ ವ್ಯಕ್ತವಾಗುತ್ತಲೇ ಇದೆ ಮತ್ತು ಕಾಶ್ಮೀರದ ಜನರಲ್ಲಿ ಈಗ ದೊಡ್ಡ ಅಸಹನೆ ತುಂಬಿದೆ ಎಂಬುದನ್ನು ಹಲವು ಸೈನಿಕರೇ ಒಪ್ಪಿಕೊಂಡಿರುವುದನ್ನು ನಿರೂಪಿಸಿದೆ.

ಆದರೆ, ಇದೇ ಹೊತ್ತಲ್ಲಿ ಭಾರತೀಯ ಮಾಧ್ಯಮಗಳು ವಿಷಯಾಂತರ ಮಾಡಿ, ಪಾಕಿಸ್ತಾನದ ಕೋಪಿತ ನಡವಳಿಕೆಯ ಕುರಿತು ಸುದ್ದಿ ಮಾಡುತ್ತ, ಭಾರತ ತಕ್ಷಣದ ಸಂಭಾವ್ಯ ಯುದ್ಧಕ್ಕೆ ಸಿದ್ಧವಾಗಿರಬೇಕು ಎಂದು ಸುದ್ದಿ ಮಾಡುತ್ತಿದ್ದವು. ‘ಸೇನೆ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸನ್ನದ್ಧವಾಗಿದೆ ಎಂದು ಮೇಜರ್ ಜನರಲ್ ಬಿಪಿನ್ ರಾವತ್ ಹೇಳುವ ವಿಡಿಯೋವನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತು. ಜೀ ನ್ಯೂಸ್, ಆಜ್‍ತಕ್ ಮತ್ತು ರಿಪಬ್ಲಿಕ್ ಟಿವಿಗಳು ಸೈನಿಕರನ್ನು ಮಾತಾಡಿಸಿ, ‘ನೋಡಿ ಜೋಶ್ ಹೇಗಿದೆ’ ಎಂದೆಲ್ಲ ಅಪ್ರಬುದ್ಧ ವರದಿಗಳನ್ನು ಮಾಡುತ್ತಿವೆ. ಇದೊಂದು ಭಾರತೀಯ ಮೀಡಿಯಾದ ಸಹಜ ಹುಚ್ಚಾಟದ ಪ್ರದರ್ಶನದಂತಿದೆ: ಸರ್ಕಾರದ ವಕ್ತಾರರಂತೆ ಕೆಲಸ ಮಾಡಲು ಸುಳ್ಳನ್ನು ಹರಡುವುದು, ಅದು ಬಯಲಾದಾಗ ವಿಷಯಾಂತರ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುವುದು….

ಮೊದಲೇ ಸಮಸ್ಯಾತ್ಮಕವಾಗಿದ್ದ ಪ್ರದೇಶದಲ್ಲಿ ಭಾರತ ಸರ್ಕಾರವು ಈಗ ಬೆಂಕಿಯನ್ನು ಹಾಕಿದೆ. ಕಾಲವಷ್ಟೇ ಉತ್ತರ ಹೇಳಲಿದೆ: ಇದು ಐತಿಹಾಸಿಕ ಜಯವೋ ಅಥವಾ ಐತಿಹಾಸಿಕ ಪ್ರಮಾದವೋ ಎಂಬುದನ್ನು. ಆದರೆ ಸದ್ಯದ ಪ್ರತಿಭಟನೆ, ಪ್ರತಿರೋಧಗಳನ್ನು ನೋಡಿದರೆ, ಕಾಶ್ಮೀರ ನನ್ನ ಪ್ರದೇಶ, ಆದರೆ ಅಲ್ಲಿನ ಜನ ನಮ್ಮವರಲ್ಲ ಎಂಬ ಭಾವ ಪ್ರದರ್ಶಿಸುತ್ತಿರುವ ದೇಶವು ಕಾಶ್ಮೀರದಲ್ಲಿ ಮುಳ್ಳಿನ ಹಾದಿಯನ್ನು ಸವೆಸಬೇಕಾಗಲಿದೆ. ಈಗ ಮಾತುಕತೆ ಮತ್ತು ಸಹನೆಯ ಅಗತ್ಯತೆಯ ಕಾಲ, ‘ಜೋಶ್’ನ ಕಾಲವಲ್ಲ. ಏಕೆಂದರೆ, ಜೋಶ್‍ನಲ್ಲಿ ಜೀವಗಳು ಮತ್ತು ಹಕ್ಕುಗಳು ಮರಣಕ್ಕೀಡಾಗುತ್ತವೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...