Homeಮುಖಪುಟ‘ನಿಮ್ಮ ವಿಷವನ್ನು ಕೇರಳ ದೂರವಿಟ್ಟಿದೆ; ಒಬ್ಬ ಗೆದ್ದಿದ್ದಾರೆ, ಆದರೆ ಅದನ್ನು ಮುಚ್ಚುತ್ತೇವೆ’: ಬಿಜೆಪಿಗೆ ಸಿಪಿಐ(ಎಂ) ಸಂಸದ...

‘ನಿಮ್ಮ ವಿಷವನ್ನು ಕೇರಳ ದೂರವಿಟ್ಟಿದೆ; ಒಬ್ಬ ಗೆದ್ದಿದ್ದಾರೆ, ಆದರೆ ಅದನ್ನು ಮುಚ್ಚುತ್ತೇವೆ’: ಬಿಜೆಪಿಗೆ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್

- Advertisement -
- Advertisement -

ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್, ಸರ್ಕಾರವು ಉದ್ದೇಶಪೂರ್ವಕವಾಗಿ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರವು ನಿಜವಾಗಿಯೂ ಸಂವಿಧಾನವನ್ನು ನಂಬಿದರೆ, ಅದು ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ತಮ್ಮ ಭಾಷಣದ ಸಮಯದಲ್ಲಿ, ಇತ್ತಿಚೆಗೆ ಬಿಡುಗಡೆಯಾದ ಮಲಯಾಳಂ ಸಿನಿಮಾ ಎಂಪುರಾನ್ ಅನ್ನು ಉಲ್ಲೇಖಿಸಿದ ಬ್ರಿಟ್ಟಾಸ್, ಬಿಜೆಪಿ ಸಂಸದ ಸುರೇಶ್ ಗೋಪಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ನಿಮ್ಮ ವಿಷವನ್ನು ಕೇರಳ

ಸದನದಲ್ಲಿರುವ ಬಿಜೆಪಿ ಸದಸ್ಯರಲ್ಲಿ ಎಂಪೂರನ್‌ ಸಿನಿಮಾದ ‘ಮುನ್ನಾ’ ಎಂಬ ಪಾತ್ರಧಾರಿಯಂತ ವ್ಯಕ್ತಿಯಿದ್ದಾರೆ ಎಂದು ಬ್ರಿಟ್ಟಾಸ್ ಪರೋಕ್ಷವಾಗಿ ಬಿಜೆಪಿ ಸಂಸದ ಸುರೇಶ್ ಗೋಪಿಯನ್ನು ಉಲ್ಲೇಖಿಸಿದ್ದಾರೆ. ನಂತರ ಅವರು,“ನಾವು ನಿಮ್ಮ ವಿಷವನ್ನು ಕೇರಳದಿಂದ ದೂರವಿಟ್ಟಿದ್ದೇವೆ. ಆದಾಗ್ಯೂ, ಒಬ್ಬ ವ್ಯಕ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶೀಘ್ರದಲ್ಲೇ ಆ ಖಾತೆಯನ್ನು ಸಹ ಮುಚ್ಚಲಾಗುವುದು.” ಎಂದು ಹೇಳಿದ್ದಾರೆ. ನಿಮ್ಮ ವಿಷವನ್ನು ಕೇರಳ

ಜಾನ್ ಬ್ರಿಟ್ಟಾಸ್ ಅವರ ಭಾಷಣದ ಆಯ್ದ ಭಾಗಗಳು:

“ಕಳೆದ ವರ್ಷವೊಂದರಲ್ಲೇ, ಕ್ರಿಶ್ಚಿಯನ್ನರ ಮೇಲೆ ಸುಮಾರು 700 ದಾಳಿಗಳು ನಡೆದಿವೆ. ಮಣಿಪುರದಲ್ಲಿ, ಅವರು 200 ಕ್ಕೂ ಹೆಚ್ಚು ಚರ್ಚ್‌ಗಳನ್ನು ಸುಟ್ಟುಹಾಕಿದರು. ಕಳೆದ ಎರಡು ಅಥವಾ ಮೂರು ದಿನಗಳಿಂದ ಬಿಜೆಪಿ ಇದ್ದಕ್ಕಿದ್ದಂತೆ ಕ್ರಿಶ್ಚಿಯನ್ನರು ಮತ್ತು ಮುನಂಬಮ್ ಪ್ರದೇಶದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ನಾವು ಸ್ಟಾನ್ ಸ್ವಾಮಿಯನ್ನು ಮರೆಯಲು ಸಾಧ್ಯವೆ? ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ, ಸಹಾಯವಿಲ್ಲದೆ ಒಂದು ಹನಿ ನೀರು ಕುಡಿಯಲು ಸಾಧ್ಯವಾಗದ ಅವರಿಗೆ ಒಂದು ಸ್ಟ್ರಾ ಕೂಡಾ ನೀಡದೆ ಜೈಲಿನಲ್ಲಿ ಸಾಯಲು ಬಿಡಲಿಲ್ಲವೇ? ನಾವು ಗ್ರಹಾಂ ಸ್ಟೇನ್ಸ್ ಅವರನ್ನು ಮರೆಯಲು ಸಾಧ್ಯವೇ? ಅವರನ್ನು ಅವರ ಮಕ್ಕಳೊಂದಿಗೆ ಜೀವಂತವಾಗಿ ಸುಟ್ಟುಹಾಕಲಿಲ್ಲವೇ? ಇಂದಿಗೂ ದಾಳಿಗಳು ಮುಂದುವರೆದಿವೆ.”

“ಕೇವಲ ಮೂವತ್ತು ಬೆಳ್ಳಿಯ ತುಂಡುಗಳಿಗಾಗಿ ಯೇಸು ಕ್ರಿಸ್ತನಿಗೆ ದ್ರೋಹ ಮಾಡಿದ ಪಾತ್ರವೊಂದು ಬೈಬಲ್‌ನಲ್ಲಿದೆ. ಇಲ್ಲಿ ಕೆಲವರು ಹಾಗೆ ಇದ್ದಾರೆ. ಕೆಲವು ದಿನಗಳ ಹಿಂದೆ, ಕೆಲವು ವ್ಯಕ್ತಿಗಳು ಶಿಲುಬೆ ಮತ್ತು ಕ್ರಿಶ್ಚಿಯನ್ನರ ಬಗ್ಗೆ ಮಾತನಾಡಿದರು, ಆದರೆ ವಾಸ್ತವದಲ್ಲಿ, ಅವರು ಕ್ರಿಸ್ತನಿಗೆ ದ್ರೋಹ ಮಾಡಿದ ಯೂದನಂತಿದ್ದಾರೆ.”

“ಇತ್ತೀಚೆಗೆ, ನಾವು ಎಂಪುರಾನ್ ಚಿತ್ರದ ಬಗ್ಗೆ ಮಾತನಾಡಿದ್ದೆವು. ಆ ಚಿತ್ರದಲ್ಲಿ ಮುನ್ನಾ ಎಂಬ ಪಾತ್ರವಿದೆ. ಮುನ್ನಾ ಯಾರೆಂದು ನಿಮಗೆ ತಿಳಿದಿದೆಯೇ? ಆ ಪಾತ್ರವನ್ನು ನೀವು ಇಲ್ಲಿಯೇ(ಬಿಜೆಪಿ ಪೀಢಗಳ ಮೇಲೆ) ನೋಡಬಹುದು. ಕೇರಳದ ಜನರು ಈ ಮುನ್ನಾ ಪಾತ್ರಧಾರಿಯನ್ನು ಗುರುತಿಸುತ್ತಾರೆ. ಅದು ಕೇರಳದ ಇತಿಹಾಸ. ನಾವು ನಿಮ್ಮ ವಿಷವನ್ನು ನಮ್ಮ ರಾಜ್ಯದಿಂದ ದೂರವಿಟ್ಟಿದ್ದೇವೆ. ಹೌದು, ಒಬ್ಬ ವ್ಯಕ್ತಿ ಗೆದ್ದಿದ್ದಾನೆ, ವಿಧಾನಸಭೆಯಲ್ಲಿ ಕೂಡಾ ಒಂದು ಖಾತೆ ಇತ್ತು, ಅದನ್ನು ನಾವು ಮುಚ್ಚಿದ್ದೇವೆ. ಅದನ್ನು ಮುಚ್ಚಿದಂತೆ, ಶೀಘ್ರದಲ್ಲೇ ಲೋಕಸಭೆಯ ಈ ಖಾತೆಯನ್ನು ಸಹ ಮುಚ್ಚುತ್ತೇವೆ. ಕೇರಳದಲ್ಲಿ ಒಂದು ತಪ್ಪು ಸಂಭವಿಸಿದೆ, ಆದರೆ ನಾವು ಅದನ್ನು ಶೀಘ್ರದಲ್ಲೇ ಸರಿಪಡಿಸುತ್ತೇವೆ – ಚಿಂತಿಸುವ ಅಗತ್ಯವಿಲ್ಲ.”

ಬ್ರಿಟ್ಟಾಸ್ ಅವರ ಈ ಹೇಳಿಕೆ ಸಂಸದ ಸುರೇಶ್ ಗೋಪಿ ಅವರ ತ್ರಿಶೂರ್‌ ಕ್ಷೇತ್ರದ ಬಗ್ಗೆಯಾಗಿದೆ. ಅವರು ಕೇರಳದ ಮೊದಲ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.

ಮುನಂಬಮ್ ಬಗ್ಗೆ ಭರವಸೆ:

ಬ್ರಿಟಸ್ ಮುನಂಬಮ್ ಪ್ರದೇಶದ ಜನರಿಗೆ ಇದೇ ವೇಳೆ ಭರವಸೆ ನೀಡಿದ್ದಾರೆ. “ಮುನಂಬಮ್‌ನಲ್ಲಿ ಯಾರೂ ತಮ್ಮ ಮನೆಯನ್ನು ಕಳೆದುಕೊಳ್ಳುವುದಿಲ್ಲ. ಇದು ಎಡಪಂಥೀಯ ಸರ್ಕಾರದ ಬದ್ಧತೆಯಾಗಿದೆ. ಐದು ಲಕ್ಷ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸುವ ಶಕ್ತಿ ಮತ್ತು ಪ್ರಾಮಾಣಿಕತೆ ನಮಗಿದ್ದರೆ, ಮುನಂಬಮ್‌ನ ಜನರನ್ನು ರಕ್ಷಿಸುವ ಜವಾಬ್ದಾರಿಯೂ ನಮಗಿದೆ.” ಎಂದು ಘೋಷಿಸಿದ್ದಾರೆ.

“ನಾವು ಅದನ್ನು ಮಾಡಲಿದ್ದು, ನಮಗೆ ಯಾರ ಸಹಾನುಭೂತಿಯೂ ಅಗತ್ಯವಿಲ್ಲ. ಕೇರಳದಲ್ಲಿ ಯಾವುದೇ ಮಸೀದಿಯನ್ನು ಬಲವಂತವಾಗಿ ಮುಚ್ಚಲಾಗುವುದಿಲ್ಲ. ಯಾವುದೇ ಪೂಜಾ ಸ್ಥಳವನ್ನು ಮರೆಮಾಡಲಾಗುವುದಿಲ್ಲ. ಯಾರೂ ಭಯದಿಂದ ಬದುಕಬೇಕಾಗಿಲ್ಲ. ಕೇರಳದಲ್ಲಿ ಸಹೋದರತ್ವದ ವಾತಾವರಣವನ್ನು ನಾವು ಖಚಿತಪಡಿಸುತ್ತೇವೆ. ಅದು ಅಲ್ಲಿ ಅಸ್ತಿತ್ವದಲ್ಲಿದ್ದು, ಅದನ್ನು ಹೇಗೆ ನಿರ್ವಹಿಸಬೇಕೆಂದು ನಮಗೆ ತಿಳಿದಿದೆ. ನೀವು ಈಗ ಕ್ರಿಶ್ಚಿಯನ್ನರಿಗಾಗಿ ಮೊಸಳೆ ಕಣ್ಣೀರು ಸುರಿಸಿರಬಹುದು, ಆದರೆ ಕೇರಳದ ಜನರು ನಿಮ್ಮ ವಂಚನೆಯನ್ನು ನೋಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ.”

ಬಿಜೆಪಿಯ ಕೋಮು ರಾಜಕೀಯದ ಟೀಕೆ:

ದೇಶದಲ್ಲಿ ನಿರಾಶ್ರಿತರಾಗಿರುವ ಜನರ ದುಃಸ್ಥಿತಿಯನ್ನು ಎತ್ತಿ ತೋರಿಸಿದ ಜಾನ್ ಬ್ರಿಟ್ಟಾಸ್, “ನೀವು ಈ ಮಸೂದೆಯನ್ನು ಮಂಡಿಸುವಾಗ ‘ಮುನಂಬಂ, ಮುನಂಬಂ’ ಎಂದು ಪುನರಾವರ್ತಿಸುತ್ತಿದ್ದೀರಿ. ಆದರೆ ಉತ್ತರ ಭಾರತದಲ್ಲಿ, ನೀವು ಹತ್ತಾರು ಸಾವಿರ ಜನರನ್ನು ಸ್ಥಳಾಂತರಗೊಳಿಸಿ, ನಿರಾಶ್ರಿತರನ್ನಾಗಿ ಮಾಡಿದ್ದೀರಿ. ಮಣಿಪುರದಲ್ಲಿ 50,000 ಕ್ಕೂ ಹೆಚ್ಚು ಜನರು ಈಗ ನಿರಾಶ್ರಿತರಾಗಿದ್ದಾರೆ. ಅನೇಕರು ದೇಶವನ್ನು ಬಿಟ್ಟು ಓಡಿಹೋಗಿದ್ದಾರೆ. ಅವರ ಬಗ್ಗೆ ನೀವು ಏನೂ ಹೇಳುತ್ತಿಲ್ಲ. ನೀವು ಹಲವಾರು ಚರ್ಚುಗಳನ್ನು ನಾಶಪಡಿಸಿದ್ದೀರಿ. ನೀವು ಎಂಪುರಾನ್‌ನ ಮುನ್ನಾ ಪಾತ್ರಧಾರಿಯಾಗಿದ್ದೀರಿ. ಆದರೆ ಕೇರಳದ ಜನರು ನಿಮ್ಮಲ್ಲಿರುವ ಈ ಮುನ್ನಾಗಳನ್ನು ಗುರುತಿಸುವ ಶಕ್ತಿಯನ್ನು ಹೊಂದಿದ್ದಾರೆ.”

“ನಿಜವಾಗಿಯೂ ಭಾರತೀಯ ಸಂವಿಧಾನವನ್ನು ನೀವು ನಂಬಿದರೆ, ಈ ಮಸೂದೆಯನ್ನು ಹಿಂತೆಗೆದುಕೊಳ್ಳಿ. ನೀವು ಕೋಮು ಸಾಮರಸ್ಯವನ್ನು ಬಯಸಿದರೆ, ಎಲ್ಲಾ ಜನರನ್ನು ಮತ್ತು ಎಲ್ಲಾ ನಂಬಿಕೆಗಳನ್ನು ಸಮಾನವಾಗಿ ಪರಿಗಣಿಸುವಲ್ಲಿ ನಂಬಿಕೆಯಿದ್ದರೆ, ಈ ಮಸೂದೆಯನ್ನು ಹಿಂತೆಗೆದುಕೊಳ್ಳಿ” ಎಂದು ಬ್ರಿಟ್ಟಾಸ್ ನೇರ ಮನವಿಯೊಂದಿಗೆ ತನ್ನ ಭಾಷಣವನ್ನು ಮುಕ್ತಾಯಗೊಳಿಸಿದರು.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ವಕ್ಫ್ ಮಸೂದೆಗೆ ಬೆಂಬಲ | ನಿತೀಶ್‌ ನೇತೃತ್ವದ ಜೆಡಿಯುನಲ್ಲಿ ಸರಣಿ ರಾಜೀನಾಮೆ

ವಕ್ಫ್ ಮಸೂದೆಗೆ ಬೆಂಬಲ | ನಿತೀಶ್‌ ನೇತೃತ್ವದ ಜೆಡಿಯುನಲ್ಲಿ ಸರಣಿ ರಾಜೀನಾಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...