ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಶುಕ್ರವಾರ ಬೆಳಗಿನ ಜಾವ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿ 20 ಜನರು ಸಾವನ್ನಪ್ಪಿದ ಭೀಕರ ರಸ್ತೆ ಅಪಘಾತಕ್ಕೆ ಚಾಲಕನೇ ನಿರ್ಲಕ್ಷ್ಯವೇ ಕಾರಣ ಎಂದು ಮೋಲ್ನೋಟಕ್ಕೆ ಕಂಡುಬಂದಿದೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಿ ಕಾವೇರಿ ಟ್ರಾವೆಲ್ಸ್ಗೆ ಸೇರಿದ 44 ಪ್ರಯಾಣಿಕರಿದ್ದ ಬಸ್, ತೆಲಂಗಾಣದ ಹೈದರಾಬಾದ್ನಿಂದ ಕರ್ನಾಟಕದ ಬೆಂಗಳೂರಿಗೆ ಹೋಗುತ್ತಿದ್ದಾಗ ಕರ್ನೂಲ್ ನಗರದ ಹೊರವಲಯದ ಬಳಿ ರಾಷ್ಟ್ರೀಯ ಹೆದ್ದಾರಿ (ಎನ್ಎಚ್) 44 ರಲ್ಲಿ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಮಲ್ಟಿ ಆಕ್ಸಲ್ ಸ್ಲೀಪರ್ ಎಸಿ ವೋಲ್ವೋ ಬಸ್ 42 ಆಸನ ಸಾಮರ್ಥ್ಯವನ್ನು ಹೊಂದಿತ್ತು ಎಂದು ವರದಿಯಾಗಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ, ಚಾಲಕನ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ಪ್ರಕರಣ ದಾಖಲಿಸಿದ್ದಾರೆ. ಬಸ್ನ ಇಬ್ಬರು ಚಾಲಕರ ವಿರುದ್ಧ ಅತಿವೇಗದ ಪ್ರಕರಣ ದಾಖಲಿಸಲಾಗಿದೆ, ಅವರಲ್ಲಿ ಒಬ್ಬರು ತಮ್ಮ ಹೇಳಿಕೆ ಬದಲಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಪ್ರಮುಖ ಅಂಶಗಳು
ಪೊಲೀಸರು ಮತ್ತು ಬದುಕುಳಿದ ಪ್ರಯಾಣಿಕರ ಪ್ರಕಾರ, ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡಿತು. “ದ್ವಿಚಕ್ರ ವಾಹನವು ಬಸ್ಸಿನ ಕೆಳಗೆ ಸಿಲುಕಿಕೊಂಡು ಇಂಧನ ಟ್ಯಾಂಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತಕ್ಷಣ ಸ್ಫೋಟಗೊಂಡು ವಾಹನದಾದ್ಯಂತ ಬೆಂಕಿ ವೇಗವಾಗಿ ಹರಡಿತು” ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕಲ್ಲೂರ್ ಮಂಡಲದ ಚಿನ್ನೇಕೂರ್ ಗ್ರಾಮದ ಬಳಿ ಸಂಭವಿಸಿದ ಬಸ್ ಬೆಂಕಿಯಲ್ಲಿ ಬೈಕ್ ಸವಾರ ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಘಟನೆಯ ನಡುವೆ ಇನ್ನೂ 12 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆ ಬೆಳಗಿನ ಜಾವ ನಡೆದಾಗ, ಹೆಚ್ಚಿನ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಕೆಲವು ಪ್ರಯಾಣಿಕರು ಹಠಾತ್ ಬೆಂಕಿಯಿಂದ ಎಚ್ಚರಗೊಂಡು ಕಿಟಕಿಗಳನ್ನು ಮುರಿದು ಹೊರಗೆ ಹಾರುವಲ್ಲಿ ಯಶಸ್ವಿಯಾದರು, ಇತರರು ಒಳಗೆ ಸಿಲುಕಿಕೊಂಡರು ಮತ್ತು ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಅನ್ನು ಆವರಿಸಿದ್ದರಿಂದ ಗುರುತಿಸಲಾಗದಷ್ಟು ಸುಟ್ಟುಹೋದರು.
ಬದುಕುಳಿದವರಲ್ಲಿ ಒಬ್ಬರಾದ ಎನ್ ರಮೇಶ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಬಸ್ನ ಇಬ್ಬರು ಚಾಲಕರ ವಿರುದ್ಧ ನಿರ್ಲಕ್ಷ್ಯ ಮತ್ತು ಅತಿವೇಗದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಾಲಕರು ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಗೆ ಕಾರಣ ಎಂದು ಆರೋಪಿಸಿದ್ದಾರೆ. ವಾಹನವು ಅತಿವೇಗದಲ್ಲಿ ಬೈಕ್ಗೆ ಡಿಕ್ಕಿ ಹೊಡೆದು ಸುಮಾರು 200 ಮೀಟರ್ಗಳಷ್ಟು ಎಳೆದುಕೊಂಡು ಹೋಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ರಮೇಶ್ಗೆ ತಿಳಿಸಿದ್ದಾರೆ.
ಓರ್ವ ಚಾಲಕ ಪೊಲೀಸ್ ವಶಕ್ಕೆ; ಮತ್ತೊಬ್ಬ ಪರಾರಿ
ಹಲವಾರು ಪ್ರಯಾಣಿಕರನ್ನು ರಕ್ಷಿಸಿದ್ದಕ್ಕಾಗಿ ಕೆಲವರು ವೀರ ಎಂದು ಬಿಂಬಿಸಲ್ಪಟ್ಟ ಇಬ್ಬರು ಬಸ್ ಚಾಲಕರಲ್ಲಿ ಒಬ್ಬರು ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಘಟನೆಯ ಸಮಯದಲ್ಲಿ ಬಸ್ನ ಎರಡನೇ ಚಾಲಕ ಶಿವ ನಾರಾಯಣ (30) ಸ್ಟೇರಿಂಗ್ ಹಿಂದೆ ಇರಲಿಲ್ಲ. ಆದರೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆಯ ನಂತರ, ಬಸ್ ಚಲಾಯಿಸುತ್ತಿದ್ದ ಲಕ್ಷ್ಮಯ್ಯ ಎಂಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಶಿವ ನಾರಾಯಣ ಈ ಹಿಂದೆ ಭಾರೀ ಮಳೆಯ ನಡುವೆ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ರಸ್ತೆಯ ಗೋಚರತೆ ಕಡಿಮೆಯಾಗಿತ್ತು ಎಂದು ಹೇಳಿದ್ದರು. ಆದರೆ, ನಂತರ ಹೇಳಿಕೆಯನ್ನು ಬದಲಾಯಿಸಿ ಮೋಟಾರ್ ಬೈಕ್ ಸವಾರ ಹಿಂದಿನ ಬಂದು ಅಪಘಾತ ಮಾಡಿದ್ದರಿಂದ ರಸ್ತೆಯಲ್ಲಿ ಬಿದ್ದಿದ್ದರು, ಚಾಲಕ ಲಕ್ಷ್ಮಯ್ಯ ಅರಿವಿಲ್ಲದೆ ಅವರ ಮೇಲೆ ಬಸ್ ಚಲಾಯಿಸಿದ್ದರಿಂದ ಬೆಂಕಿ ಹಚ್ಚಿಕೊಂಡಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಅಪಾಯಕಾರಿ ಚಾಲನೆ ಮತ್ತು ಅನಧಿಕೃತ ಪಾರ್ಕಿಂಗ್ ಸೇರಿದಂತೆ ಸಂಚಾರ ಉಲ್ಲಂಘನೆ ಆರೋಪದ ಮೇಲೆ ತೆಲಂಗಾಣ ಪೊಲೀಸರು ಐಷಾರಾಮಿ ಬಸ್ಗೆ ಹಲವಾರು ಚಲನ್ಗಳನ್ನು ವಿಧಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ. ವಾಹನವು ಅಖಿಲ ಭಾರತ ಪರವಾನಗಿ ಮತ್ತು ಮಾನ್ಯ ಫಿಟ್ನೆಸ್ ಪ್ರಮಾಣಪತ್ರವನ್ನು ಹೊಂದಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಬೆಂಕಿಗಾಹುತಿ : 20ಕ್ಕಿಂತ ಹೆಚ್ಚು ಜನರು ಸಜೀವ ದಹನ


