Homeಮುಖಪುಟಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ: ಉದಾಹರಣೆಗಳು ಬೇಕೆ? - ಇಸ್ಮತ್‌ ಪಜೀರ್‌

ಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ: ಉದಾಹರಣೆಗಳು ಬೇಕೆ? – ಇಸ್ಮತ್‌ ಪಜೀರ್‌

ಬ್ಯಾರಿ ಭಾಷೆಗೆ ಅಕಾಡೆಮಿಕ್ ಮನ್ನಣೆಯೊದಗಿಸಿದ ಮೊಟ್ಟ ಮೊದಲ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಎಂಬ ಬ್ರಾಹ್ಮಣ ಮಹಿಳೆ.

- Advertisement -
- Advertisement -

ಡಾ.ಫಿರೋಝ್ ಖಾನ್ ಎಂಬ ಸಂಸ್ಕೃತ ವಿದ್ವಾಂಸ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರೊಫೆಸರ್ ಆದದ್ದನ್ನು ಸಹಿಸದ ಮನುವಾದಿಗಳು ಅವರ ವಿರುದ್ಧ ದೊಡ್ಡ ಮಟ್ಟದ ಗಲಾಟೆಯೆಬ್ಬಿಸಿದ್ದಾರೆ. ಬನಾರಸ್ ವಿವಿಯ ವಿದ್ಯಾರ್ಥಿಗಳಲ್ಲಿ ಒಂದು ವಿಭಾಗವು ಡಾ.ಫಿರೋಝ್ ಖಾನ್ ಪರವಾಗಿದ್ದರೆ ಮನುವಾದಿ ಸಂಘಪರಿವಾರದ ಪರವಿರುವ ವಿದ್ಯಾರ್ಥಿ ಗುಂಪು ಖಾನರ ವಿರುದ್ಧವಿದ್ದಾರೆ. ಈ ಹೆಸರಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಮಾಡುತ್ತಿರುವ ರಾಜಕೀಯ ಅತ್ಯಂತ ನಾಚಿಕೆಗೇಡಿನದ್ದು ಎಂದು ನಾವು ಹೇಳಿದರೆ ಅದೇನೂ ಅವರಿಗೆ ನಾಟದು..‌ ಉಡಲು ಉಡುಪಿದ್ದೂ ಅದನ್ನು ಕಳಚಿ ಬಿಟ್ಟು ಪ್ರಜ್ಞಾಪೂರ್ವಕವಾಗಿ
ಬೆತ್ತಲಾದವರಲ್ಲಿ ಈ ರೀತಿಯ ವಾದವೇ ವ್ಯರ್ಥ…

ಅದಾಗ್ಯೂ ಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ. ಇಂದು ಜಗತ್ತು ಮುಸ್ಲಿಮರ ಭಾಷೆ ಎನ್ನುವ ಖುರ್‌ಆನಿನ ಭಾಷೆ ಅರಬಿಕ್. ಅಂದ ಮಾತ್ರಕ್ಕೆ ಅದನ್ನು ಯಾವತ್ತೂ ಮುಸ್ಲಿಮರ ಭಾಷೆ ಎನ್ನಲಾಗದು. ಮಧ್ಯ ಪ್ರಾಚ್ಯದ ಹೆಚ್ಚಿನೆಲ್ಲಾ ದೇಶಗಳ ಕ್ರೈಸ್ತರು ಮತ್ತು ಯಹೂದಿಯರ ಮಾತೃ ಭಾಷೆಯೇ ಅರಬಿಕ್. ಅರಬಿ ಮಾತೃ ಭಾಷೆಯವರು ಎಂಬ ಕಾರಣಕ್ಕೆ ಅವರನ್ನು ಮುಸ್ಲಿಮರೆನ್ನಲಾದೀತೆ..?

ಇದನ್ನೂ ಓದಿ: ಸಂಸ್ಕೃತ ಪ್ರೊಫೆಸರ್‌ ಫಿರೋಜ್‌ ಖಾನ್‌ರನ್ನು ಬೆಂಬಲಿಸಿ ವಿದ್ಯಾರ್ಥಿಗಳ ರ್‍ಯಾಲಿ: ಧರ್ಮ ತಾರತಮ್ಯಕ್ಕೆ ಖಂಡನೆ

ಇಸ್ಲಾಮಿಕ್ ಕರ್ಮಶಾಸ್ತ್ರ ಮತ್ತು ಚರಿತ್ರೆಗಳು ಅರಬಿಕ್‌ನ ಬಳಿಕ ಅತೀ ಹೆಚ್ಚು ಬರೆದಿಡಲ್ಪಟ್ಟ ಭಾಷೆ ಪರ್ಶ್ಯನ್ ಭಾಷೆ. ಅಂತೆಯೇ ಅರೆಬಿಕ್ ಬಿಟ್ಟರೆ ಅತೀ ಹೆಚ್ಚು ಇಸ್ಲಾಮೀ ಸಾಹಿತ್ಯವಿರುವುದೂ ಪರ್ಷ್ಯನ್ ಭಾಷೆಯಲ್ಲಾಗಿದೆ. ಆದರೆ ಪರ್ಷ್ಯನ್ ಆ ಭಾಗದ ಅಥವಾ ಜಗತ್ತಿನ ಯಾವುದೇ ಭಾಗದ ಮುಸ್ಲಿಮರು ಮಾತ್ರ ಮಾತನಾಡುವ ಭಾಷೆಯಲ್ಲ. ಹಾಗೆಯೇ ಪಾರ್ಸಿ ಎಂದು ಅರಿಯಲ್ಪಡುವ ಜನಾಂಗವೇ ಇಸ್ಲಾಮ್ ಧರ್ಮಾನುಯಾಯಿಗಳಲ್ಲ.

ಜಗತ್ತಿನ ಅತ್ಯಂತ ಸುಂದರ ಮತ್ತು ಮಧುರ ಭಾಷೆಗಳಲ್ಲೊಂದೆಂದು ಗುರುತಿಸಲ್ಪಟ್ಟ ಉರ್ದುವಿನ ಮೇಲೆ ಸಂಘಪರಿವಾರದ ಉರಿನಂಜು ಇಂದು ನಿನ್ನೆಯದಲ್ಲ. ಅದಾಗ್ಯೂ ಉರ್ದು ಸಾಹಿತ್ಯದ ಮೇರು‌ ಸಾಹಿತಿಗಳಲ್ಲಿ ಅಸಂಖ್ಯ ಹಿಂದೂಗಳಿದ್ದಾರೆ. ಪಾಕಿಸ್ತಾನದ ಹಿಂದೂಗಳು ಮತ್ತು ಸಿಖ್ಖರಲ್ಲಿ ಬಹು ಸಂಖ್ಯಾತರ ಮಾತೃ ಭಾಷೆಯೂ ಉರ್ದು. ಅಷ್ಟು ದೂರವೇಕೆ ನಮ್ಮದೇ ದೇಶದ ಲಕ್ನೋ ಮತ್ತು ಹೈದರಾಬಾದಿನಲ್ಲಿ ಉರ್ದು ಮಾತೃ ಭಾಷಿಕರಾದ ಹಿಂದೂಗಳು ಧಾರಾಳವಾಗಿ ಕಾಣಸಿಗುತ್ತಾರೆ.

ಕಾಶ್ಮೀರಿಗರ ಅಧಿಕೃತ ಭಾಷೆ ಕಾಶ್ಮೀರಿ ಎಂದು ಎಲ್ಲಾ ಕಾಶ್ಮೀರಿಗರೂ ಒಪ್ಪುತ್ತಾರೆ. ಕಾಶ್ಮೀರದಲ್ಲಿ ಮುಸ್ಲಿಮರೇ ಬಹು ಸಂಖ್ಯಾತರು. ಅವರಲ್ಲಿ ಬಹುತೇಕರು ಕಾಶ್ಮೀರಿ ಮನೆ ಭಾಷೆಯವರು. (ಉರ್ದು ಮ‌ನೆ ಭಾಷಿಕರೂ ಇದ್ದಾರೆ) ಅಂತೆಯೇ ಅಲ್ಲಿನ ಹಿಂದೂಗಳ ಮನೆಭಾಷೆಯೂ ಕಾಶ್ಮೀರಿ.

ನನ್ನದೇ ಮಾತೃಭಾಷೆ ಬ್ಯಾರಿಯನ್ನು ತೆಗೆದುಕೊಳ್ಳೋಣ. ಬ್ಯಾರಿ ಭಾಷೆ ಕೇವಲ ಮುಸ್ಲಿಮರ ಭಾಷೆ ಎಂಬ ನಂಬಿಕೆ ಬಹುತೇಕರಲ್ಲಿದೆ. ಈ ಭಾಷೆಯಲ್ಲಿ ಎರಡು ಪ್ರಬೇಧಗಳಿವೆ. ಒಂದು ಬ್ಯಾರಿ ,ಇನ್ನೊಂದು ಮಲಾಮೆ. ಇವೆರಡರಲ್ಲಿರುವ ಶಬ್ಧಗಳು 98% ಒಂದೇ ಆಗಿವೆ. ಲಯದಲ್ಲಿ ಬ್ಯಾರಿ ಎಂಬ ಪ್ರಬೇಧ ತುಳುವನ್ನು ಹೋಲುತ್ತದಾದರೆ, ಮಲಾಮೆ ಮಲಯಾಳವನ್ನು ಹೋಲುತ್ತದೆ. ಆದರೆ ಮಲಾಮೆ ಮಲಯಾಳಂಗೆ ಬಹಳ ವ್ಯತ್ಯಾಸವಿದೆ. ಮಲಾಮೆ ಎಂಬ ಪ್ರಬೇಧದಲ್ಲಿ ಬ್ಯಾರಿಗಳಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತೀಯ ಸಮುದಾಯ, ಮೋಯ ಸಮುದಾಯ,ಮಣಿಯಾಣಿ ಸಮುದಾಯ ಮತ್ತು ಆಶಾರಿ ಸಮುದಾಯದವರ ಮನೆಭಾಷೆಯೂ ಹೌದು. ಹಾಗಾದರೆ ಇದು ಯಾರ ಭಾಷೆ?

ಇದನ್ನೂ ಓದಿ: ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಬ್ಯಾರಿ ಭಾಷೆಗೆ ಅಕಾಡೆಮಿಕ್ ಮನ್ನಣೆಯೊದಗಿಸಿದ ಮೊಟ್ಟ ಮೊದಲ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಎಂಬ ಬ್ರಾಹ್ಮಣ ಮಹಿಳೆ. ಆ ಭಾಷೆಯ ಕುರಿತಂತೆ ಅವರು ಪೂನಾ ವಿಶ್ವವಿದ್ಯಾನಿಲಯಕ್ಕೆ ಸಂಶೋಧನಾ ಪ್ರಬಂಧ ಮಂಡಿಸಿ ೧೯೬೮ರಲ್ಲಿ ಪಿ.ಎಚ್.ಡಿ.ಪಡೆದಿರುತ್ತಾರೆ. ಅಂದಿನಿಂದ ಇಂದಿನವರೆಗೆ ಬ್ಯಾರಿ ಭಾಷೆಯ ಕುರಿತಂತೆ ಇನ್ನೊಂದು ಪಿ.ಎಚ್.ಡಿ. ಅಧ್ಯಯನ ನಡೆದಿಲ್ಲ.

ತುಳು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹಿಂದೂ ಧರ್ಮೀಯರ ಭಾಷೆ. ಆದರೆ ತುಳು ಭಾಷೆಯಲ್ಲಿ ಗ್ರಾಂಥಿಕ ಸಾಹಿತ್ಯಕ್ಕೆ ನಾಂದಿ ಹಾಡಿದವರು ಮತ್ತು ತುಳು ಭಾಷೆಗೆ ಅಕಾಡೆಮಿಕ್ ಮನ್ನಣೆ ಒದಗಿಸಿದವರು ದೂರದ ಜರ್ಮನಿಯ ಬಾಸೆಲ್ ಮಿಶನ್‌‌ನ ಪ್ರವರ್ತಕರು. ಆಧುನಿಕ ತುಳು ರಂಗ ಭೂಮಿಯ ಭೀಷ್ಮ ಮೊಯ್ದಿನಬ್ಬ ಎಂಬ ಬ್ಯಾರಿ ಮುಸ್ಲಿಂ ನಾಟಕಕಾರ. (ಆದರೆ ದುರದೃಷ್ಟವಶಾತ್ ಇಂದು ತುಳು ನಾಟಕರಂಗ ಅವರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ.)

ಕನ್ನಡದ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ ಕೂಡಿಟ್ಟ ಜಾನಪದ ದಿಗ್ಗಜ ಎಸ್.ಕೆ.ಕರೀಂ ಖಾನ್ ಅಫ್ಘಾನ್ ಮೂಲದವರು. ಅವರ ಮನೆ ಭಾಷೆ ಕನ್ನಡವಲ್ಲ.

ಕನ್ನಡದ ಮೇರು ಸಾಹಿತಿಗಳಾದ ಬೇಂದ್ರೆ ಮರಾಠಿ ಮನೆ ಭಾಷಿಕರಾದರೆ, ಮಾಸ್ತಿ ತಮಿಳು ಮನೆ ಭಾಷಿಕರು, ಗಿರೀಶ್ ಕಾರ್ನಾಡ್ ಕೊಂಕಣಿ ಮನೆ ಭಾಷಿಕರು, ಅಮೃತ ಸೋಮೇಶ್ವರ ಮಲಾಮೆ ಮನೆ ಭಾಷಿಕರು.

ಹೀಗೆ ಜಗತ್ತಿನ ಎಲ್ಲಾ ಭಾಷೆಗಳಿಗೂ ಆಯಾ ಭಾಷಿಕಲ್ಲದವರ ಕೊಡುಗೆ ಧಾರಾಳವಾಗಿ ಕಾಣಸಿಗುತ್ತವೆ.

ಹೀಗಿರುವಾಗ ಭಾಷೆಯೊಂದನ್ನು ನಿರ್ಧಿಷ್ಟ ಜಾತಿ, ಧರ್ಮ, ಜನಾಂಗ ಮತ್ತು ಭಾಷಿಕರಿಗೆ ಮಾತ್ರ ಸೀಮಿತಗೊಳಿಸಲು ಮನುವಾದಿಗಳಿಗೆ ಮಾತ್ರ ಸಾಧ್ಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...