Homeಚಳವಳಿಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಇನ್ನೂ ಪಾಠ ಆರಂಭಿಸದ ಮುಸ್ಲಿಂ ಸಂಸ್ಕೃತ ಪ್ರೊಫೆಸರ್ ವಿರುದ್ಧ ಬನಾರಸ್ ಹಿಂದೂ ವಿ.ವಿ.ಯಲ್ಲಿ ಪ್ರತಿಭಟನೆ!!!! ಇದು ಎಬಿವಿಪಿ-ಆರೆಸ್ಸೆಸ್‌ನ ಕೋಮುವಾದಿ ಪ್ರಹಸನ!

- Advertisement -
- Advertisement -

ಕೃಪೆ: ದಿ ಕ್ವಿಂಟ್‌

ಐಶ್ವರ್ಯ ಎಸ್. ಅಯ್ಯರ್

ಅನುವಾದ: ನಿಖಿಲ್ ಕೋಲ್ಪೆ

ಇದನ್ನು ಪಕ್ಕಾ ರಾಜಕೀಯ ಪ್ರೇರಿತ ಕೋಮುವಾದ ಎನ್ನದೇ ಬೇರೆ ದಾರಿಯೇ ಇಲ್ಲ. ಇನ್ನೂ ಪಾಠವನ್ನೇ ಮಾಡದ, ಪರಿಚಯವೇ ಆಗದ ಹೊಸ ಸಂಸ್ಕೃತ ಪ್ರಾಧ್ಯಾಪಕರೊಬ್ಬರ ವಿರುದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರಣ ಅವರು ಮುಸ್ಲಿಂ ಎಂಬುದು ಮಾತ್ರ!

“ನೀವು ನನಗೊಂದು ಅವಕಾಶ ಕೊಡಿ. ಆಗ ನಿಮ್ಮ ಪ್ರತಿಭಟನೆಗೆ ಅಗತ್ಯವೇ ಇಲ್ಲವೆಂದು ನಿಮಗೆ ತಿಳಿಯಲೂ ಬಹುದು” ಹೀಗೆಂದು ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದ ವಿದ್ಯಾರ್ಥಿಗಳಿಗೆ ಮನವಿ ಮಾಡಿದವರು ರಾಜಸ್ಥಾನದ ಜೈಪುರ ಜಿಲ್ಲೆಯವರಾದ 28ರ ಹರೆಯದ ಫಿರೋಜ್ ಖಾನ್.

ಅವರು ನವೆಂಬರ್ 7ರಂದು ಇಲ್ಲಿ ಬಂದಿಳಿದಿದ್ದರು. ಆದರೆ, ಹಿಂದಿನ ದಿನವೇ ಅವರ ಇಮೇಲ್ ಬಾಕ್ಸಿಗೆ ಅವರನ್ನು ಬಿಎಚ್‌ಯುವಿನ ಸಹಾಯಕ ಸಂಸ್ಕೃತ ಪ್ರಾಧ್ಯಾಪಕರಾಗಿ ನಿಯುಕ್ತಿಗೊಳಿಸಿದ ಪತ್ರ ತಲಪಿತ್ತು. ಆಗಲೇ ಬಿಜೆಪಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಆದುದರಿಂದ, ದೇಶದ ಪ್ರತಿಷ್ಟಿತ ಮತ್ತು ಹಳೆಯ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುವ ಅವರ ಕಾತರವು ತಕ್ಷಣವೇ ಆತಂಕವಾಗಿ ಬದಲಾಯಿತು.

ಈ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು ಗೊತ್ತೆ? “ಹಿಂದೂವೊಬ್ಬ ಹೇಗೆ ಮದರಸದಲ್ಲಿ ಪಾಠ ಮಾಡಲು ಸಾಧ್ಯವಿಲ್ಲವೋ, ಹಾಗೆಯೇ ಮುಸ್ಲಿಮನೊಬ್ಬ ‘ಗುರುಕುಲ’ದಲ್ಲಿ ಪಾಠಮಾಡಲು ಸಾಧ್ಯವಿಲ್ಲ ಎಂಬುದು!(ವಿಶ್ವವಿದ್ಯಾಲಯವೊಂದು ‘ಗುರುಕುಲ’ವಾದದ್ದು ಯಾವಾಗ ಎಂದು ಅವರೇ ಬಲ್ಲರು!). ಈಗ, ಸಂಸ್ಕೃತ ವಿಭಾಗಕ್ಕೇ ಬೀಗ ಜಡಿಯಲಾಗಿದ್ದು, ಖಾನ್ ಅವರು ಒಂದೇ ಒಂದು ಪಾಠವನ್ನೂ ಮಾಡಿಲ್ಲ. ಆದರೂ, ಅವರು ಪರಿಸ್ಥಿತಿ ಸುಧಾರಿಸಿ, ತಿಳಿಯಾಗುವ ಬಗ್ಗೆ ವಿಶ್ವಾಸ ಕಳೆದುಕೊಂಡಿಲ್ಲ.

ಅವರು ಬಹಿರಂಗಪಡಿಸಲು ಇಚ್ಚಿಸದ ಸ್ಥಳವೊಂದರಲ್ಲಿ ‘ದಿ ಕ್ವಿಂಟ್’ ಜೊತೆ ಮುಕ್ತವಾಗಿ ಮಾತನಾಡಿ, “ಬಹುಶಃ ನಾನು ಬಿಎಚ್‌ಯು ವಿದ್ಯಾರ್ಥಿಗಳ ಯೋಚನಾ ರೀತಿಯನ್ನು ಬದಲಿಸಲೂ ಸಾಧ್ಯವಾಗಬಹುದು. ಇದನ್ನು ಹೇಗೆ ಮಾಡುವುದು ಎಂದು ನನಗೆ ಗೊತ್ತಿಲ್ಲ. ಅವರು ನನ್ನನ್ನು ಸರಿಯಾಗಿ ತಿಳಿದುಕೊಂಡರೆ, ನನ್ನನ್ನು ಮೆಚ್ಚಿಕೊಳ್ಳಬಹುದು” ಎಂದರು.

ಫಿರೋಜ್ ಜೈಪುರ ಜಿಲ್ಲೆಯ ಬಗ್ರು ಎಂಬ ಪಟ್ಟಣದಲ್ಲಿ ಜನಿಸಿದವರು. ನಾಲ್ವರು ಗಂಡುಮಕ್ಕಳಲ್ಲಿ ಮೂರನೆಯವರು. ಅವರು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್‌ನಿಂಧ ಸಂಸ್ಕೃತ ಸಾಹಿತ್ಯದಲ್ಲಿ ಬಿ.ಎಡ್. ಮತ್ತು ಸ್ನಾತಕೊತ್ತರ ಪದವಿ ಪಡೆದಿದ್ದಾರೆ. ಅಲ್ಲಿ ಅವರು ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ಬಾಲ್ಯದಲ್ಲಿಯೇ ಅವರನ್ನು ಸಂಸ್ಕೃತ ಶಾಲೆಗೆ ಸೇರಿಸಲಾಗಿತ್ತು.

ತನ್ನ ಅಜ್ಜ ಮತ್ತು ತಂದೆಯ ಬಗ್ಗೆ ಮಾತನಾಡುತ್ತಾ, ಪಿರೋಜ್ ಹೇಳುತ್ತಾರೆ: “ನನ್ನ ಅಜ್ಜ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಅವರೀಗ ಇಲ್ಲ. ಆದರೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ, ಅಜ್ಜನನ್ನು ಹಾಡಲು ಕರೆಯುತ್ತಿದ್ದರು. ತಂದೆಯವರು ಅವರಿಂದ ಕಲಿತರು. ನಮ್ಮ ಮನೆಯಿಂದ 2-3 ಕಿ.ಮೀ. ದೂದದಲ್ಲಿ ಒಂದು ಹಸುಗಳ ಹಟ್ಟಿಯಿದೆ. ಅದನ್ನು ರಾಮದೇವ್ ಗೋಶಾಲೆ ಎಂದು ಕರೆಯುತ್ತಾರೆ. ನನ್ನ ತಂದೆಯವರು ಪ್ರತೀ ದಿನ ಅಲ್ಲಿಗೆ ಹೋಗಿ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಾರೆ”.

ಫಿರೋಜ್ ಅವರ ತಂದೆ ಸಂಸ್ಕೃತದಲ್ಲಿ ಪರಿಣಿತರಾಗಿದ್ದು, ಶಾಲೆ ಕಲಿಯುವ ಸಮಯದಲ್ಲಿ ಮಗನಿಗೆ ನೆರವಾಗುತ್ತಿದ್ದರಃ. ಫಿರೋಜ್, ಸಂಸ್ಕೃತದಲ್ಲಿ ಪಂಡಿತನಾಗಬೇಕು ಎಂದು ಬಯಸಿದ್ದರು. ಆದರೆ ಈಗ, ತನ್ನ ಮಗ ಒಮ್ಮೆ ಮನೆಗೆ ಹಿಂತಿರುಗಿ ಬರಲಿ ಎಂದು ಕಾತರರಾಗಿದ್ದಾರೆ.

“ನಮ್ಮ ತಂದೆಗೆ ಚಿಂತೆಯಿಂದ ನಿದ್ದೆ ಬರುತ್ತಿಲ್ಲ. ನೀನು ಮರಳಿ ಬಾ. ನಮಗೆ ಇರುವ ಸ್ವಲ್ಪದರಲ್ಲೇ ಬದುಕಬಹುದು. ಮನೆಯಿಂದ ದೂರ ಇರುವ ಅಗತ್ಯ ಇಲ್ಲ ಎಂದು ಅಣ್ಣ ಪಾಪಾಸು ಕರೆಯುತ್ತಾರೆ. ನಾನು ಏನನ್ನೂ ಹೇಳುವುದಿಲ್ಲ. ಆದರೆ, ನಾನಿಲ್ಲಿ ಉಳಿಯಬೇಕೆಂದು ನನ್ನ ನಂಬಿಕೆ” ಎನ್ನುತ್ತಾರೆ ಫಿರೋಜ್.

ಅವರ ನೇಮಕಾತಿ ವಿರುದ್ದ ನೇರವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸುವ ಉದ್ದೇಶ ಇದೆಯೇ ಎಂದು ಕೇಳಿದಾಗ, ತಾನು ಮಾತುಕತೆಗೆ ಮುಕ್ತವಾಗಿದ್ದು, ಆಡಳಿತವು ಬಯಸಿದರೆ ಮಾತುಕತೆಗೆ ಸಿದ್ಧ ಎನ್ನುತ್ತಾರೆ. ಸದ್ಯಕ್ಕೆ ತಾನು ಯಾವಾಗ ಪಾಠ ಮಾಡಲು ಆರಂಭಿಸಬಹುದು ಎಂಬ ಬಗ್ಗೆ ತನಗೇ ಗೊತ್ತಿಲ್ಲ ಎನ್ನುತ್ತಾರೆ.

ಬಿಎಚ್‌ಯುವಿನ ಅವಕಾಶವನ್ನು ಬಿಟ್ಟುಕೊಡಲು ಸಿದ್ಧವಿಲ್ಲದಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದೆಂದರೆ, ಬಿಎಚ್‌ಯುವಿಗೆ ಅವರು ನೀಡಿದ ಮೊದಲ ಭೇಟಿಯ ನೆನಪುಗಳು. ಹಿಂದಕ್ಕೆ ಹೋಗುತ್ತಾ ಅವರು ಹೇಳುತ್ತಾರೆ: “2017ರಲ್ಲಿ ಬಿಎಚ್‌ಯು ತನ್ನ ಸಂಸ್ಕೃತ ಉತ್ಸವಕ್ಕೆ ನನ್ನನ್ನು ಆಹ್ವಾನಿಸಿತ್ತು. ನಾನು ಓಂಕಾರನಾಥ ಠಾಕೂರ್ ಅಪೇಕ್ಷಾ ಸದನದಲ್ಲಿ ಹಾಡಿದ್ದೆ. ಪ್ರತಿಯೊಂದೂ ಸ್ಮರಣೀಯವಾಗಿತ್ತು. ಅವರು ನನ್ನನ್ನು ತಮ್ಮ ಅತಿಥಿಗೃಹದಲ್ಲಿ ಇರಿಸಿಕೊಂಡು ನನ್ನ ಬೇಕು ಬೇಡಗಳನ್ನೆಲ್ಲಾ ಪೂರೈಸಿ ಸತ್ಕರಿಸಿದ್ದರು. ನನಗೆ ಬಹಳ ಗೌರವ ಕೊಟ್ಟಿದ್ದರು.”

ತಾನು ಸಂಸ್ಕೃತ ಕಲಿಯುವುದಕ್ಕಾಗಿ ವಿನಿಯೋಗಿಸಿದ ಇಷ್ಟು ವರ್ಷಗಳನ್ನು ನೆನಪಿಸಿಕೊಂಡ ಅವರು, ಇವತ್ತಿನ ತನಕ ಯಾರೂ ಸಂಸ್ಕೃತ ತನ್ನ ಸ್ವಂತ ಭಾಷೆಯಲ್ಲ ಎಂಬ ಭಾವನೆ ಬರುವಂತೆ ಮಾಡಿರಲಿಲ್ಲ ಎನ್ನುತ್ತಾರೆ. “ನನಗೆ ಯಾವುದೇ ತೊಂದರೆ ಉಂಟಾದಾಗ ಹಿಂದೂಗಳಾಗಿದ್ದ ಗುರುಗಳ ಬಳಿಗೆ ಹೋಗುತ್ತಿದ್ದೆ. ಅವರು ನನಗೆ ತಮ್ಮ ಶಕ್ತಿ ಮೀರಿ ನೆರವಾಗುತ್ತಿದ್ದರು. ನಾನು ಬೇರೆಯವನು ಎಂಬ ಭಾವನೆ ಬರುವಂತೆ ನನ್ನ ಗುರುಗಳು, ನನ್ನ ಮಿತ್ರರು, ನನ್ನ ಶಿಷ್ಯರಾದಿಯಾಗಿ ಯಾರೂ, ಎಂದೂ ಮಾಡಲಿಲ್ಲ. ಆದರೆ, ಈಗೇಕೆ ಹಾಗಾಗುತ್ತಿದೆ?” ಎಂದು ಅವರು ಕೇಳುತ್ತಾರೆ.

ಅವರ ಸಂಸ್ಕೃತ ಎಷ್ಟು ನಿರರ್ಗಳವಾಗಿದೆ ಎಂದು ಕೇಳಿದಾಗ, ತಾನು ನಿಯಮಿತವಾಗಿ ದೂರದರ್ಶನದಲ್ಲಿ ಸುದ್ದಿ ಓದುತ್ತಿದ್ದೆ ಎನ್ನುತ್ತಾರವರು. “ದೂರದರ್ಶನಲ್ಲಿ ಸಂಸ್ಕೃತ ವಾರ್ತಾವಳಿ ಎಂಬ ಕಾರ್ಯಕ್ರಮವಿದೆ. ಅದರಲ್ಲಿ ಬಾಲಿವುಡ್ ಹಾಡುಗಳನ್ನು ಸಂಸ್ಕೃತಕ್ಕೆ ಅನುವಾದಿಸಬೇಕಾಗುತ್ತದೆ. ಅವರು ಹಾಡುಗಳನ್ನು ಅನುವಾದಕ್ಕಾಗಿ ನನಗೆ ಕಳುಹಿಸುತ್ತಿದ್ದರು. ನಾನು ಹಾಡಿದ ಹಾಡುಗಳನ್ನು ಅವರು ಪ್ರಸಾರ ಮಾಡುತ್ತಿದ್ದರು” ಎಂದು ಹೇಳುತ್ತಾರೆ. ಅದಲ್ಲದೇ, 2019ರ ಆಗಸ್ಟ್‌ನಲ್ಲಿ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ಸಂಸ್ಕೃತ ಯುವ ಪ್ರತಿಭಾ ಪುರಸ್ಕಾರ್ ಎಂಬ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

ಬಿಎಚ್‌ಯು ಆಡಳಿತವು ಮತ್ತೆ ಮತ್ತೆ ಸ್ಪಷ್ಟನೆ ನೀಡಿದ್ದು, ತಾನು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದಿದೆಯಲ್ಲದೆ, ಈ ತನಕ ಫಿರೋಜ್ ಅವರ ಬೆಂಬಲಕ್ಕೆ ನಿಂತಿದೆ. ಅದಲ್ಲದೇ ಹಿಂದೂ, ಮುಸ್ಲಿಮರೆನ್ನದೇ ಬಹುತೇಕ ವಿದ್ಯಾರ್ಥಿಗಳೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬೇರೆ ಧರ್ಮದವರಿಂದ ಪಾಠ ಕಲಿಯುವುದಿಲ್ಲ ಎಂಬ ಸಂಕುಚಿತ ನಿಲುವಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರು, ಪ್ರತಿಭಟನೆ ನಡೆಸುತ್ತಿರುವವರು ಕೇವಲ ಎಬಿವಿಪಿ ಮತ್ತು ಆರೆಸ್ಸೆಸ್‌ಗೆ ಸೇರಿದವರು ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...