Homeಮುಖಪುಟಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ: ಉದಾಹರಣೆಗಳು ಬೇಕೆ? - ಇಸ್ಮತ್‌ ಪಜೀರ್‌

ಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ: ಉದಾಹರಣೆಗಳು ಬೇಕೆ? – ಇಸ್ಮತ್‌ ಪಜೀರ್‌

ಬ್ಯಾರಿ ಭಾಷೆಗೆ ಅಕಾಡೆಮಿಕ್ ಮನ್ನಣೆಯೊದಗಿಸಿದ ಮೊಟ್ಟ ಮೊದಲ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಎಂಬ ಬ್ರಾಹ್ಮಣ ಮಹಿಳೆ.

- Advertisement -
- Advertisement -

ಡಾ.ಫಿರೋಝ್ ಖಾನ್ ಎಂಬ ಸಂಸ್ಕೃತ ವಿದ್ವಾಂಸ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರೊಫೆಸರ್ ಆದದ್ದನ್ನು ಸಹಿಸದ ಮನುವಾದಿಗಳು ಅವರ ವಿರುದ್ಧ ದೊಡ್ಡ ಮಟ್ಟದ ಗಲಾಟೆಯೆಬ್ಬಿಸಿದ್ದಾರೆ. ಬನಾರಸ್ ವಿವಿಯ ವಿದ್ಯಾರ್ಥಿಗಳಲ್ಲಿ ಒಂದು ವಿಭಾಗವು ಡಾ.ಫಿರೋಝ್ ಖಾನ್ ಪರವಾಗಿದ್ದರೆ ಮನುವಾದಿ ಸಂಘಪರಿವಾರದ ಪರವಿರುವ ವಿದ್ಯಾರ್ಥಿ ಗುಂಪು ಖಾನರ ವಿರುದ್ಧವಿದ್ದಾರೆ. ಈ ಹೆಸರಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಮಾಡುತ್ತಿರುವ ರಾಜಕೀಯ ಅತ್ಯಂತ ನಾಚಿಕೆಗೇಡಿನದ್ದು ಎಂದು ನಾವು ಹೇಳಿದರೆ ಅದೇನೂ ಅವರಿಗೆ ನಾಟದು..‌ ಉಡಲು ಉಡುಪಿದ್ದೂ ಅದನ್ನು ಕಳಚಿ ಬಿಟ್ಟು ಪ್ರಜ್ಞಾಪೂರ್ವಕವಾಗಿ
ಬೆತ್ತಲಾದವರಲ್ಲಿ ಈ ರೀತಿಯ ವಾದವೇ ವ್ಯರ್ಥ…

ಅದಾಗ್ಯೂ ಭಾಷೆ ಇತಿಹಾಸದಲ್ಲಿ ಯಾವತ್ತೂ ಧರ್ಮ ಸೂಚಕವಾಗಿರಲಿಲ್ಲ. ಇಂದು ಜಗತ್ತು ಮುಸ್ಲಿಮರ ಭಾಷೆ ಎನ್ನುವ ಖುರ್‌ಆನಿನ ಭಾಷೆ ಅರಬಿಕ್. ಅಂದ ಮಾತ್ರಕ್ಕೆ ಅದನ್ನು ಯಾವತ್ತೂ ಮುಸ್ಲಿಮರ ಭಾಷೆ ಎನ್ನಲಾಗದು. ಮಧ್ಯ ಪ್ರಾಚ್ಯದ ಹೆಚ್ಚಿನೆಲ್ಲಾ ದೇಶಗಳ ಕ್ರೈಸ್ತರು ಮತ್ತು ಯಹೂದಿಯರ ಮಾತೃ ಭಾಷೆಯೇ ಅರಬಿಕ್. ಅರಬಿ ಮಾತೃ ಭಾಷೆಯವರು ಎಂಬ ಕಾರಣಕ್ಕೆ ಅವರನ್ನು ಮುಸ್ಲಿಮರೆನ್ನಲಾದೀತೆ..?

ಇದನ್ನೂ ಓದಿ: ಸಂಸ್ಕೃತ ಪ್ರೊಫೆಸರ್‌ ಫಿರೋಜ್‌ ಖಾನ್‌ರನ್ನು ಬೆಂಬಲಿಸಿ ವಿದ್ಯಾರ್ಥಿಗಳ ರ್‍ಯಾಲಿ: ಧರ್ಮ ತಾರತಮ್ಯಕ್ಕೆ ಖಂಡನೆ

ಇಸ್ಲಾಮಿಕ್ ಕರ್ಮಶಾಸ್ತ್ರ ಮತ್ತು ಚರಿತ್ರೆಗಳು ಅರಬಿಕ್‌ನ ಬಳಿಕ ಅತೀ ಹೆಚ್ಚು ಬರೆದಿಡಲ್ಪಟ್ಟ ಭಾಷೆ ಪರ್ಶ್ಯನ್ ಭಾಷೆ. ಅಂತೆಯೇ ಅರೆಬಿಕ್ ಬಿಟ್ಟರೆ ಅತೀ ಹೆಚ್ಚು ಇಸ್ಲಾಮೀ ಸಾಹಿತ್ಯವಿರುವುದೂ ಪರ್ಷ್ಯನ್ ಭಾಷೆಯಲ್ಲಾಗಿದೆ. ಆದರೆ ಪರ್ಷ್ಯನ್ ಆ ಭಾಗದ ಅಥವಾ ಜಗತ್ತಿನ ಯಾವುದೇ ಭಾಗದ ಮುಸ್ಲಿಮರು ಮಾತ್ರ ಮಾತನಾಡುವ ಭಾಷೆಯಲ್ಲ. ಹಾಗೆಯೇ ಪಾರ್ಸಿ ಎಂದು ಅರಿಯಲ್ಪಡುವ ಜನಾಂಗವೇ ಇಸ್ಲಾಮ್ ಧರ್ಮಾನುಯಾಯಿಗಳಲ್ಲ.

ಜಗತ್ತಿನ ಅತ್ಯಂತ ಸುಂದರ ಮತ್ತು ಮಧುರ ಭಾಷೆಗಳಲ್ಲೊಂದೆಂದು ಗುರುತಿಸಲ್ಪಟ್ಟ ಉರ್ದುವಿನ ಮೇಲೆ ಸಂಘಪರಿವಾರದ ಉರಿನಂಜು ಇಂದು ನಿನ್ನೆಯದಲ್ಲ. ಅದಾಗ್ಯೂ ಉರ್ದು ಸಾಹಿತ್ಯದ ಮೇರು‌ ಸಾಹಿತಿಗಳಲ್ಲಿ ಅಸಂಖ್ಯ ಹಿಂದೂಗಳಿದ್ದಾರೆ. ಪಾಕಿಸ್ತಾನದ ಹಿಂದೂಗಳು ಮತ್ತು ಸಿಖ್ಖರಲ್ಲಿ ಬಹು ಸಂಖ್ಯಾತರ ಮಾತೃ ಭಾಷೆಯೂ ಉರ್ದು. ಅಷ್ಟು ದೂರವೇಕೆ ನಮ್ಮದೇ ದೇಶದ ಲಕ್ನೋ ಮತ್ತು ಹೈದರಾಬಾದಿನಲ್ಲಿ ಉರ್ದು ಮಾತೃ ಭಾಷಿಕರಾದ ಹಿಂದೂಗಳು ಧಾರಾಳವಾಗಿ ಕಾಣಸಿಗುತ್ತಾರೆ.

ಕಾಶ್ಮೀರಿಗರ ಅಧಿಕೃತ ಭಾಷೆ ಕಾಶ್ಮೀರಿ ಎಂದು ಎಲ್ಲಾ ಕಾಶ್ಮೀರಿಗರೂ ಒಪ್ಪುತ್ತಾರೆ. ಕಾಶ್ಮೀರದಲ್ಲಿ ಮುಸ್ಲಿಮರೇ ಬಹು ಸಂಖ್ಯಾತರು. ಅವರಲ್ಲಿ ಬಹುತೇಕರು ಕಾಶ್ಮೀರಿ ಮನೆ ಭಾಷೆಯವರು. (ಉರ್ದು ಮ‌ನೆ ಭಾಷಿಕರೂ ಇದ್ದಾರೆ) ಅಂತೆಯೇ ಅಲ್ಲಿನ ಹಿಂದೂಗಳ ಮನೆಭಾಷೆಯೂ ಕಾಶ್ಮೀರಿ.

ನನ್ನದೇ ಮಾತೃಭಾಷೆ ಬ್ಯಾರಿಯನ್ನು ತೆಗೆದುಕೊಳ್ಳೋಣ. ಬ್ಯಾರಿ ಭಾಷೆ ಕೇವಲ ಮುಸ್ಲಿಮರ ಭಾಷೆ ಎಂಬ ನಂಬಿಕೆ ಬಹುತೇಕರಲ್ಲಿದೆ. ಈ ಭಾಷೆಯಲ್ಲಿ ಎರಡು ಪ್ರಬೇಧಗಳಿವೆ. ಒಂದು ಬ್ಯಾರಿ ,ಇನ್ನೊಂದು ಮಲಾಮೆ. ಇವೆರಡರಲ್ಲಿರುವ ಶಬ್ಧಗಳು 98% ಒಂದೇ ಆಗಿವೆ. ಲಯದಲ್ಲಿ ಬ್ಯಾರಿ ಎಂಬ ಪ್ರಬೇಧ ತುಳುವನ್ನು ಹೋಲುತ್ತದಾದರೆ, ಮಲಾಮೆ ಮಲಯಾಳವನ್ನು ಹೋಲುತ್ತದೆ. ಆದರೆ ಮಲಾಮೆ ಮಲಯಾಳಂಗೆ ಬಹಳ ವ್ಯತ್ಯಾಸವಿದೆ. ಮಲಾಮೆ ಎಂಬ ಪ್ರಬೇಧದಲ್ಲಿ ಬ್ಯಾರಿಗಳಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತೀಯ ಸಮುದಾಯ, ಮೋಯ ಸಮುದಾಯ,ಮಣಿಯಾಣಿ ಸಮುದಾಯ ಮತ್ತು ಆಶಾರಿ ಸಮುದಾಯದವರ ಮನೆಭಾಷೆಯೂ ಹೌದು. ಹಾಗಾದರೆ ಇದು ಯಾರ ಭಾಷೆ?

ಇದನ್ನೂ ಓದಿ: ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಬ್ಯಾರಿ ಭಾಷೆಗೆ ಅಕಾಡೆಮಿಕ್ ಮನ್ನಣೆಯೊದಗಿಸಿದ ಮೊಟ್ಟ ಮೊದಲ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಎಂಬ ಬ್ರಾಹ್ಮಣ ಮಹಿಳೆ. ಆ ಭಾಷೆಯ ಕುರಿತಂತೆ ಅವರು ಪೂನಾ ವಿಶ್ವವಿದ್ಯಾನಿಲಯಕ್ಕೆ ಸಂಶೋಧನಾ ಪ್ರಬಂಧ ಮಂಡಿಸಿ ೧೯೬೮ರಲ್ಲಿ ಪಿ.ಎಚ್.ಡಿ.ಪಡೆದಿರುತ್ತಾರೆ. ಅಂದಿನಿಂದ ಇಂದಿನವರೆಗೆ ಬ್ಯಾರಿ ಭಾಷೆಯ ಕುರಿತಂತೆ ಇನ್ನೊಂದು ಪಿ.ಎಚ್.ಡಿ. ಅಧ್ಯಯನ ನಡೆದಿಲ್ಲ.

ತುಳು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹಿಂದೂ ಧರ್ಮೀಯರ ಭಾಷೆ. ಆದರೆ ತುಳು ಭಾಷೆಯಲ್ಲಿ ಗ್ರಾಂಥಿಕ ಸಾಹಿತ್ಯಕ್ಕೆ ನಾಂದಿ ಹಾಡಿದವರು ಮತ್ತು ತುಳು ಭಾಷೆಗೆ ಅಕಾಡೆಮಿಕ್ ಮನ್ನಣೆ ಒದಗಿಸಿದವರು ದೂರದ ಜರ್ಮನಿಯ ಬಾಸೆಲ್ ಮಿಶನ್‌‌ನ ಪ್ರವರ್ತಕರು. ಆಧುನಿಕ ತುಳು ರಂಗ ಭೂಮಿಯ ಭೀಷ್ಮ ಮೊಯ್ದಿನಬ್ಬ ಎಂಬ ಬ್ಯಾರಿ ಮುಸ್ಲಿಂ ನಾಟಕಕಾರ. (ಆದರೆ ದುರದೃಷ್ಟವಶಾತ್ ಇಂದು ತುಳು ನಾಟಕರಂಗ ಅವರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ.)

ಕನ್ನಡದ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ ಕೂಡಿಟ್ಟ ಜಾನಪದ ದಿಗ್ಗಜ ಎಸ್.ಕೆ.ಕರೀಂ ಖಾನ್ ಅಫ್ಘಾನ್ ಮೂಲದವರು. ಅವರ ಮನೆ ಭಾಷೆ ಕನ್ನಡವಲ್ಲ.

ಕನ್ನಡದ ಮೇರು ಸಾಹಿತಿಗಳಾದ ಬೇಂದ್ರೆ ಮರಾಠಿ ಮನೆ ಭಾಷಿಕರಾದರೆ, ಮಾಸ್ತಿ ತಮಿಳು ಮನೆ ಭಾಷಿಕರು, ಗಿರೀಶ್ ಕಾರ್ನಾಡ್ ಕೊಂಕಣಿ ಮನೆ ಭಾಷಿಕರು, ಅಮೃತ ಸೋಮೇಶ್ವರ ಮಲಾಮೆ ಮನೆ ಭಾಷಿಕರು.

ಹೀಗೆ ಜಗತ್ತಿನ ಎಲ್ಲಾ ಭಾಷೆಗಳಿಗೂ ಆಯಾ ಭಾಷಿಕಲ್ಲದವರ ಕೊಡುಗೆ ಧಾರಾಳವಾಗಿ ಕಾಣಸಿಗುತ್ತವೆ.

ಹೀಗಿರುವಾಗ ಭಾಷೆಯೊಂದನ್ನು ನಿರ್ಧಿಷ್ಟ ಜಾತಿ, ಧರ್ಮ, ಜನಾಂಗ ಮತ್ತು ಭಾಷಿಕರಿಗೆ ಮಾತ್ರ ಸೀಮಿತಗೊಳಿಸಲು ಮನುವಾದಿಗಳಿಗೆ ಮಾತ್ರ ಸಾಧ್ಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...