Homeಅಂಕಣಗಳುನೂರರ ನೋಟ: ಸಾಗುವಳಿ ಭೂಮಿಯ ಅಕ್ರಮ ಸಕ್ರಮ ಅರ್ಜಿಗಳು ಶೀಘ್ರ ಇತ್ಯರ್ಥವಾಗಲಿ..

ನೂರರ ನೋಟ: ಸಾಗುವಳಿ ಭೂಮಿಯ ಅಕ್ರಮ ಸಕ್ರಮ ಅರ್ಜಿಗಳು ಶೀಘ್ರ ಇತ್ಯರ್ಥವಾಗಲಿ..

- Advertisement -
- Advertisement -

ಅಕ್ರಮವಾಗಿ ಸರ್ಕಾರಿ ಭೂಮಿ ಸಾಗುವಳಿಯನ್ನು ಮಾಡುತ್ತಿದ್ದ ಒಬ್ಬ ರೈತ ಅಕ್ರಮ ಸಕ್ರಮ ಅರ್ಜಿ ಸಲ್ಲಿಸಿ, ತಹಶೀಲ್ದಾರರ ಕಚೇರಿಗೆ ತಿರುಗಿ ತಿರುಗಿ ಬೇಸತ್ತು ಹತಾಶನಾಗಿ ತಹಶೀಲ್ದಾರರನ್ನೇ ಗುಂಡಿಕ್ಕಿ ಕೊಂದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದರಲ್ಲಿ ತಹಶೀಲ್ದಾರನ ತಪ್ಪೇನೂ ಇಲ್ಲ. ಅಕ್ರಮ ಸಕ್ರಮ ಜಮೀನನ್ನು ರೈತನ ಹೆಸರಿಗೆ ಪಟ್ಟ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಪತ್ರ ಬರೆಯದ ಹೊರತು ಜಿಲ್ಲಾಧಿಕಾರಿಯಾಗಲಿ, ತಹಶೀಲ್ದಾರರಾಗಲಿ ಆ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಅಕ್ರಮ ಸಕ್ರಮದ ಅರ್ಜಿಗಳನ್ನು ಕರೆಯಲು ತೀರ್ಮಾನ ತೆಗೆದುಕೊಂಡು 3-4 ವರ್ಷ ಆಗಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದೊಡನೆ ಅರ್ಜಿ ಸ್ವೀಕರಿಸಲು ಕೊನೆಯ ದಿನವನ್ನು 1-2 ವರ್ಷ ಕಾಲ ವಿಸ್ತರಿಸುತ್ತಾ ಹೋಗುತ್ತದೆ.

ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಅಕ್ರಮವಾಗಿರುವುದನ್ನು ತಿರಸ್ಕರಿಸಲು, ಸಕ್ರಮವಾಗಿರುವುದನ್ನು ಅಂಗೀಕರಿಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ. ಇದಕ್ಕಾಗಿ ಪ್ರತಿ ತಾಲ್ಲೂಕಿನಲ್ಲೂ ಒಂದು ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯ ಸಂಚಾಲಕರ ಸದಸ್ಯರು ಆಯಾ ತಾಲ್ಲೂಕಿನ ತಹಶೀಲ್ದಾರರು. ಮೂರು ಸದಸ್ಯರ ಈ ಸಮಿತಿಗೆ ಅಲ್ಲಿಯ ಶಾಸಕರು ಮತ್ತು ಒಬ್ಬ ಖಾಸಗಿ ವ್ಯಕ್ತಿ ಸದಸ್ಯರು. ಈ ಸಮಿತಿ ಪ್ರತಿ ಶನಿವಾರ ಸಭೆ ನಡೆಸಿ ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನಕ್ಕೆ ಬರುವ ಅಧಿಕಾರ ಹೊಂದಿದೆ. ಆದರೆ ಅನೇಕ ತಾಲ್ಲೂಕುಗಳಲ್ಲಿ ಅಲ್ಲಿಯ ಶಾಸಕರ ಆಲಕ್ಷ್ಯದಿಂದ ಸಮಿತಿಯ ಸಭೆಗಳೇ ನಡೆದಿಲ್ಲ. ಇದನ್ನು ಗಮನಿಸಿದ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪನವರು ರೋಸಿ ಹೋಗಿ ಶನಿವಾರದ ಸಭೆಗಳಿಗೆ ಇಬ್ಬರು ಸದಸ್ಯರು ಹಾಜರಾದರೂ ಸಾಕು, ಸಭೆ ನಡೆಸಿ ಎಂದು ತಹಶೀಲ್ದಾರರಿಗೆ ಪತ್ರಗಳನ್ನು ಬರೆದರು. ಅದೂ ಕಾರ್ಯಗತವಾಗಲಿಲ್ಲ. ಈ ಜಮೀನನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಬಡ ರೈತರ ಕೆಲಸವನ್ನು ಆದ್ಯತೆಯಿಂದ ಮಾಡಿಕೊಡಬೇಕು ಎಂದು ಈ ಶಾಸಕರಿಗೆ ಅನ್ನಿಸಲೇ ಇಲ್ಲ, ಇಂದಿಗೂ ಈ ಪರಿಸ್ಥಿತಿ ಮುಂದುವರೆಯುತ್ತಿದೆ. ಬಡ ರೈತರು ತಾವು ಹಿಡಿದಿರುವ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಪಟ್ಟ ಮಾಡಿಕೊಡುತ್ತಾರೆಂದು ತಾಲ್ಲೂಕು ಆಫೀಸಿಗೆ ಅಲೆದಾಡಿ ಹತಾಶರಾಗಿದ್ದಾರೆ. ಹೊಟ್ಟೆ ತುಂಬಿದ ಶಾಸಕರಿಗೆ ಈ ಬಡ ಜನರ ಬವಣೆ ಗೊತ್ತಿದ್ದರೂ ಅವರನ್ನು ಆಲಕ್ಷ್ಯ ಮಾಡಿದ್ದಾರೆ. ಇದು ಬಡವರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ತಾಲ್ಲೂಕುಗಳಲ್ಲಿ ಶಾಸಕರು ಮುತುವರ್ಜಿವಹಿಸಿ ಸಭೆಗಳನ್ನು ನಡೆಸಿ ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಅನರ್ಹವಾದದ್ದು ಯಾವುದು, ಅರ್ಹವಾದದ್ದು ಯಾವುದು ಎಂದು ಪರಿಶೀಲಿಸಿ ಪಟ್ಟ ಮಾಡಿದ್ದಾರೆ. ನನಗೆ ತಿಳಿದಂತೆ ಗೌರಿಬಿದನೂರಿನ ಶಾಸಕರು ಅರ್ಹರಾದವರಿಗೆ ಪಟ್ಟ ಕೊಡಿಸಿದ್ದಾರೆ ಅಲೆಮಾರಿ ಹಕ್ಕಿಪಿಕ್ಕರಿಗೆ ಪಟ್ಟ ಹಂಚುವ ಸಮಾರಂಭಕ್ಕೆ ಶಾಸಕರು ನನ್ನನ್ನು ಆಹ್ವಾನಿಸಿದ್ದರು. ನಾನು ಹೋಗಿದ್ದೆ.

PC : Patrika

ಈಗ ನನಗೆ ತಿಳಿದುಬಂದಿರುವಂತೆ ಕೆಲವು ತಾಲ್ಲೂಕುಗಳಲ್ಲಿ ಒಟ್ಟು 4 ಲಕ್ಷ ಅರ್ಜಿಗಳು ಬಂದಿದ್ದರೂ ಅವುಗಳ ಪೈಕಿ ಸಮಿತಿ ಎರಡೂವರೆ ಲಕ್ಷ ಅರ್ಜಿಗಳನ್ನು ತಿರಸ್ಕರಿಸಿ ಒಂದೂವರೆ ಲಕ್ಷ ಅರ್ಜಿದಾರರಿಗೆ ಪಟ್ಟ ಮಾಡಿ ಕೊಡಬಹುದೆಂದು ಶಿಫಾರಸು ಮಾಡಿದೆ.

ಜಾತಕ ಪಕ್ಷಿಗಳಂತೆ ಪಟ್ಟಕ್ಕಾಗಿ ಕಾಯುತ್ತಿರುವ ಈ ಬಡ ರೈತರಿಗೆ, ತೀರ್ಮಾನಗೊಂಡ ಈ ಒಂದೂವರೆ ಲಕ್ಷ ಅರ್ಹ ಅರ್ಜಿದಾರರಿಗೆ ಪಟ್ಟವನ್ನು ಕೂಡಲೇ ಹಂಚಲು ಸರ್ಕಾರ ಸುತ್ತೋಲೆ ಹೊರಡಿಸಬೇಕು. ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಈ ಅರ್ಹ ಅರ್ಜಿದಾರರಿಗೆ ಪಟ್ಟ ಮಾಡಿಕೊಡಲು ಅನುಮತಿ ನೀಡಬೇಕು. ಈ ಪ್ರಕ್ರಿಯೆ ಕೂಡಲೇ ಕಾರ್ಯಗತಗೊಳ್ಳಲು ಸೂಚಿಸಿ, 6 ತಿಂಗಳೊಳಗೆ ಈ ಒಂದೂವರೆ ಲಕ್ಷ ಅರ್ಹ ಅರ್ಜಿದಾರರಿಗೆ ಪಟ್ಟ ದೊರೆಯುವಂತೆ ಸುಗ್ರೀವಾಜ್ಞೆ ಹೊರಡಿಸಬೇಕು.

ಸರ್ಕಾರ ಬಡ ರೈತರ ಕಾತರವನ್ನು ಅರ್ಥಮಾಡಿಕೊಳ್ಳಬೇಕು. ಈ ರೈತರು ತಹಶೀಲ್ದಾರರ ಕಚೇರಿಗೆ ನೂರಾರು ಸಲ ಹೋಗಿ ಹತಾಶರಾಗಿ ಹಿಂದಿರುಗಿರುವುದನ್ನು ಗಮನಿಸಬೇಕು. ಬಡ ರೈತರ ತಾಳ್ಮೆಯನ್ನು ಪರೀಕ್ಷಿಸುವುದಕ್ಕಲ್ಲ ಸರ್ಕಾರ ಇರುವುದು. ಅವರ ಕಣ್ಣೀರನ್ನು ಒರೆಸುವುದಕ್ಕೆ. ಸಾಂತ್ವನ ಹೇಳುವುದಕ್ಕೆ. ಹತಾಶನಾದ ರೈತ ತಾಲ್ಲೂಕು ಕಚೇರಿಗೆ ತಿರುಗಿ ತಿರುಗಿ ಬೇಸತ್ತು ಅಸಹಾಯಕರಾದ ತಹಶೀಲ್ದಾರರನ್ನೂ ಗುಂಡಿಟ್ಟು ಕೊಂದಿರುವುದನ್ನು ಸರ್ಕಾರ ಒಂದು ಎಚ್ಚರಿಕೆಯ ಗಂಟೆ ಎಂದು ಪರಿಭಾವಿಸಬೇಕು. ತ್ವರಿತಗತಿಯಿಂದ ಅವರ ಬವಣೆಯನ್ನು ನೀಗುವುದು ಸರ್ಕಾರದ ಆದ್ಯತೆಯಾಗಬೇಕು.

ಹಿಂದೆ ಎರಡನೇ ಮಹಾಯುದ್ಧದ ಸಮಯದಲ್ಲಿ ಮತ್ತು ಸ್ವಾತಂತ್ರ ಪ್ರಾಪ್ತವಾದ ಹೊಸದರಲ್ಲಿ ಆಹಾರ ಧಾನ್ಯಗಳ ಕೊರೆತೆಯಿಂದ ಬಡಜನರು ತೊಳಲಾಡುವುದನ್ನು ಗಮನಿಸಿದ ಅಂದಿನ ಸರ್ಕಾರ ಭೂಹೀನ ಬಡರೈತರಿಗೆ ಸರ್ಕಾರಿ ಜಮೀನಿನಲ್ಲಿ ಬೆಳೆ ಬೆಳೆದುಕೊಳ್ಳಲು ಅನುಮತಿ ನೀಡಿತು. ಇದಕ್ಕಾಗಿ ಸರ್ಕಾರ Grow more food campaign ಆರಂಭ ಮಾಡಿತು. ಸಹಸ್ರಾರು ಬಡರೈತರು ಒಂದು ಎಕರೆ, ಎರಡು ಎಕರೆ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡಲು ಆರಂಭಿಸಿದರು. ಈ ಮೂಲಕ ಈ ಬಡರೈತರು ತಮ್ಮ ಮನೆಗೆ ಬೇಕಾದಷ್ಟನ್ನು ಬೆಳೆದುಕೊಂಡು ಸ್ವಾವಲಂಬಿಗಳಾದರು. ಆಹಾರ ಧಾನ್ಯವನ್ನು ಜನರಿಗೆ ಒದಗಿಸುವ ಹೊಣೆಗಾರಿಕೆಯಿಂದ ಸ್ವಲ್ಪಮಟ್ಟಿಗೆ ಪಾರಾಗಲು ಈ Grow more food campaign ಯೋಜನೆ ಸಹಕಾರಿಯಾಯಿತು.

ಈ ರೈತರು ಕೂಡ ತಮ್ಮ ಜಮೀನಿಗೆ ಸರ್ಕಾರ ಪಟ್ಟ ಕೊಡುವುದೆಂದು ಅಂದಿನಿಂದ ಕಾಯುತ್ತಿದ್ದಾರೆ. ಸರ್ಕಾರವೇ ಸರ್ಕಾರಿ ಜಮೀನನ್ನು ಆಹಾರಧಾನ್ಯ ಬೆಳೆದುಕೊಳ್ಳುವುದಕ್ಕಾಗಿ ರೈತರಿಗೆ ಕೊಟ್ಟಿರುವುದರಿಂದ ಈ ಜಮೀನು ಅಕ್ರಮ ಸಕ್ರಮದಡಿಯಲ್ಲಿ ಪರಿಶೀಲಿಸಲು ಬರುವುದಿಲ್ಲ.

ಆದ್ದರಿಂದ ಈ ರೈತರು ಬೇರೆ ಜಮೀನನ್ನು ಹೊಂದಿರದಿದ್ದರೆ ಅಂಥವರಿಗೆ ನೇರವಾಗಿ ಪಟ್ಟ ನೀಡಲು ತಹಶೀಲ್ದಾರುಗಳಿಗೆ ಅಧಿಕಾರ ನೀಡಬೇಕು. ಇಂತಹವರು ಸಕ್ರಮ ಅಕ್ರಮದಡಿ ಅರ್ಜಿ ಸಲ್ಲಿಸಿದ್ದರೆ ಅದನ್ನು ಬೇರ್ಪಡಿಸಿ ಈ ರೈತರಿಗೆ ಕೂಡಲೇ ಪಟ್ಟ ಮಾಡಿಕೊಡಬೇಕು.


ಇದನ್ನೂ ಓದಿ: ನೂರರ ನೋಟ: ಪ್ರಜಾಪ್ರಭುತ್ವದ ಕಗ್ಗೊಲೆಯ ಮೂರು ಪ್ರಕರಣಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...