Homeಅಂಕಣಗಳುನೂರರ ನೋಟ: ಸಾಗುವಳಿ ಭೂಮಿಯ ಅಕ್ರಮ ಸಕ್ರಮ ಅರ್ಜಿಗಳು ಶೀಘ್ರ ಇತ್ಯರ್ಥವಾಗಲಿ..

ನೂರರ ನೋಟ: ಸಾಗುವಳಿ ಭೂಮಿಯ ಅಕ್ರಮ ಸಕ್ರಮ ಅರ್ಜಿಗಳು ಶೀಘ್ರ ಇತ್ಯರ್ಥವಾಗಲಿ..

- Advertisement -
- Advertisement -

ಅಕ್ರಮವಾಗಿ ಸರ್ಕಾರಿ ಭೂಮಿ ಸಾಗುವಳಿಯನ್ನು ಮಾಡುತ್ತಿದ್ದ ಒಬ್ಬ ರೈತ ಅಕ್ರಮ ಸಕ್ರಮ ಅರ್ಜಿ ಸಲ್ಲಿಸಿ, ತಹಶೀಲ್ದಾರರ ಕಚೇರಿಗೆ ತಿರುಗಿ ತಿರುಗಿ ಬೇಸತ್ತು ಹತಾಶನಾಗಿ ತಹಶೀಲ್ದಾರರನ್ನೇ ಗುಂಡಿಕ್ಕಿ ಕೊಂದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದರಲ್ಲಿ ತಹಶೀಲ್ದಾರನ ತಪ್ಪೇನೂ ಇಲ್ಲ. ಅಕ್ರಮ ಸಕ್ರಮ ಜಮೀನನ್ನು ರೈತನ ಹೆಸರಿಗೆ ಪಟ್ಟ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಪತ್ರ ಬರೆಯದ ಹೊರತು ಜಿಲ್ಲಾಧಿಕಾರಿಯಾಗಲಿ, ತಹಶೀಲ್ದಾರರಾಗಲಿ ಆ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಅಕ್ರಮ ಸಕ್ರಮದ ಅರ್ಜಿಗಳನ್ನು ಕರೆಯಲು ತೀರ್ಮಾನ ತೆಗೆದುಕೊಂಡು 3-4 ವರ್ಷ ಆಗಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದೊಡನೆ ಅರ್ಜಿ ಸ್ವೀಕರಿಸಲು ಕೊನೆಯ ದಿನವನ್ನು 1-2 ವರ್ಷ ಕಾಲ ವಿಸ್ತರಿಸುತ್ತಾ ಹೋಗುತ್ತದೆ.

ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಅಕ್ರಮವಾಗಿರುವುದನ್ನು ತಿರಸ್ಕರಿಸಲು, ಸಕ್ರಮವಾಗಿರುವುದನ್ನು ಅಂಗೀಕರಿಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿದೆ. ಇದಕ್ಕಾಗಿ ಪ್ರತಿ ತಾಲ್ಲೂಕಿನಲ್ಲೂ ಒಂದು ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯ ಸಂಚಾಲಕರ ಸದಸ್ಯರು ಆಯಾ ತಾಲ್ಲೂಕಿನ ತಹಶೀಲ್ದಾರರು. ಮೂರು ಸದಸ್ಯರ ಈ ಸಮಿತಿಗೆ ಅಲ್ಲಿಯ ಶಾಸಕರು ಮತ್ತು ಒಬ್ಬ ಖಾಸಗಿ ವ್ಯಕ್ತಿ ಸದಸ್ಯರು. ಈ ಸಮಿತಿ ಪ್ರತಿ ಶನಿವಾರ ಸಭೆ ನಡೆಸಿ ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನಕ್ಕೆ ಬರುವ ಅಧಿಕಾರ ಹೊಂದಿದೆ. ಆದರೆ ಅನೇಕ ತಾಲ್ಲೂಕುಗಳಲ್ಲಿ ಅಲ್ಲಿಯ ಶಾಸಕರ ಆಲಕ್ಷ್ಯದಿಂದ ಸಮಿತಿಯ ಸಭೆಗಳೇ ನಡೆದಿಲ್ಲ. ಇದನ್ನು ಗಮನಿಸಿದ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪನವರು ರೋಸಿ ಹೋಗಿ ಶನಿವಾರದ ಸಭೆಗಳಿಗೆ ಇಬ್ಬರು ಸದಸ್ಯರು ಹಾಜರಾದರೂ ಸಾಕು, ಸಭೆ ನಡೆಸಿ ಎಂದು ತಹಶೀಲ್ದಾರರಿಗೆ ಪತ್ರಗಳನ್ನು ಬರೆದರು. ಅದೂ ಕಾರ್ಯಗತವಾಗಲಿಲ್ಲ. ಈ ಜಮೀನನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಬಡ ರೈತರ ಕೆಲಸವನ್ನು ಆದ್ಯತೆಯಿಂದ ಮಾಡಿಕೊಡಬೇಕು ಎಂದು ಈ ಶಾಸಕರಿಗೆ ಅನ್ನಿಸಲೇ ಇಲ್ಲ, ಇಂದಿಗೂ ಈ ಪರಿಸ್ಥಿತಿ ಮುಂದುವರೆಯುತ್ತಿದೆ. ಬಡ ರೈತರು ತಾವು ಹಿಡಿದಿರುವ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ಪಟ್ಟ ಮಾಡಿಕೊಡುತ್ತಾರೆಂದು ತಾಲ್ಲೂಕು ಆಫೀಸಿಗೆ ಅಲೆದಾಡಿ ಹತಾಶರಾಗಿದ್ದಾರೆ. ಹೊಟ್ಟೆ ತುಂಬಿದ ಶಾಸಕರಿಗೆ ಈ ಬಡ ಜನರ ಬವಣೆ ಗೊತ್ತಿದ್ದರೂ ಅವರನ್ನು ಆಲಕ್ಷ್ಯ ಮಾಡಿದ್ದಾರೆ. ಇದು ಬಡವರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ತಾಲ್ಲೂಕುಗಳಲ್ಲಿ ಶಾಸಕರು ಮುತುವರ್ಜಿವಹಿಸಿ ಸಭೆಗಳನ್ನು ನಡೆಸಿ ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಅನರ್ಹವಾದದ್ದು ಯಾವುದು, ಅರ್ಹವಾದದ್ದು ಯಾವುದು ಎಂದು ಪರಿಶೀಲಿಸಿ ಪಟ್ಟ ಮಾಡಿದ್ದಾರೆ. ನನಗೆ ತಿಳಿದಂತೆ ಗೌರಿಬಿದನೂರಿನ ಶಾಸಕರು ಅರ್ಹರಾದವರಿಗೆ ಪಟ್ಟ ಕೊಡಿಸಿದ್ದಾರೆ ಅಲೆಮಾರಿ ಹಕ್ಕಿಪಿಕ್ಕರಿಗೆ ಪಟ್ಟ ಹಂಚುವ ಸಮಾರಂಭಕ್ಕೆ ಶಾಸಕರು ನನ್ನನ್ನು ಆಹ್ವಾನಿಸಿದ್ದರು. ನಾನು ಹೋಗಿದ್ದೆ.

PC : Patrika

ಈಗ ನನಗೆ ತಿಳಿದುಬಂದಿರುವಂತೆ ಕೆಲವು ತಾಲ್ಲೂಕುಗಳಲ್ಲಿ ಒಟ್ಟು 4 ಲಕ್ಷ ಅರ್ಜಿಗಳು ಬಂದಿದ್ದರೂ ಅವುಗಳ ಪೈಕಿ ಸಮಿತಿ ಎರಡೂವರೆ ಲಕ್ಷ ಅರ್ಜಿಗಳನ್ನು ತಿರಸ್ಕರಿಸಿ ಒಂದೂವರೆ ಲಕ್ಷ ಅರ್ಜಿದಾರರಿಗೆ ಪಟ್ಟ ಮಾಡಿ ಕೊಡಬಹುದೆಂದು ಶಿಫಾರಸು ಮಾಡಿದೆ.

ಜಾತಕ ಪಕ್ಷಿಗಳಂತೆ ಪಟ್ಟಕ್ಕಾಗಿ ಕಾಯುತ್ತಿರುವ ಈ ಬಡ ರೈತರಿಗೆ, ತೀರ್ಮಾನಗೊಂಡ ಈ ಒಂದೂವರೆ ಲಕ್ಷ ಅರ್ಹ ಅರ್ಜಿದಾರರಿಗೆ ಪಟ್ಟವನ್ನು ಕೂಡಲೇ ಹಂಚಲು ಸರ್ಕಾರ ಸುತ್ತೋಲೆ ಹೊರಡಿಸಬೇಕು. ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಈ ಅರ್ಹ ಅರ್ಜಿದಾರರಿಗೆ ಪಟ್ಟ ಮಾಡಿಕೊಡಲು ಅನುಮತಿ ನೀಡಬೇಕು. ಈ ಪ್ರಕ್ರಿಯೆ ಕೂಡಲೇ ಕಾರ್ಯಗತಗೊಳ್ಳಲು ಸೂಚಿಸಿ, 6 ತಿಂಗಳೊಳಗೆ ಈ ಒಂದೂವರೆ ಲಕ್ಷ ಅರ್ಹ ಅರ್ಜಿದಾರರಿಗೆ ಪಟ್ಟ ದೊರೆಯುವಂತೆ ಸುಗ್ರೀವಾಜ್ಞೆ ಹೊರಡಿಸಬೇಕು.

ಸರ್ಕಾರ ಬಡ ರೈತರ ಕಾತರವನ್ನು ಅರ್ಥಮಾಡಿಕೊಳ್ಳಬೇಕು. ಈ ರೈತರು ತಹಶೀಲ್ದಾರರ ಕಚೇರಿಗೆ ನೂರಾರು ಸಲ ಹೋಗಿ ಹತಾಶರಾಗಿ ಹಿಂದಿರುಗಿರುವುದನ್ನು ಗಮನಿಸಬೇಕು. ಬಡ ರೈತರ ತಾಳ್ಮೆಯನ್ನು ಪರೀಕ್ಷಿಸುವುದಕ್ಕಲ್ಲ ಸರ್ಕಾರ ಇರುವುದು. ಅವರ ಕಣ್ಣೀರನ್ನು ಒರೆಸುವುದಕ್ಕೆ. ಸಾಂತ್ವನ ಹೇಳುವುದಕ್ಕೆ. ಹತಾಶನಾದ ರೈತ ತಾಲ್ಲೂಕು ಕಚೇರಿಗೆ ತಿರುಗಿ ತಿರುಗಿ ಬೇಸತ್ತು ಅಸಹಾಯಕರಾದ ತಹಶೀಲ್ದಾರರನ್ನೂ ಗುಂಡಿಟ್ಟು ಕೊಂದಿರುವುದನ್ನು ಸರ್ಕಾರ ಒಂದು ಎಚ್ಚರಿಕೆಯ ಗಂಟೆ ಎಂದು ಪರಿಭಾವಿಸಬೇಕು. ತ್ವರಿತಗತಿಯಿಂದ ಅವರ ಬವಣೆಯನ್ನು ನೀಗುವುದು ಸರ್ಕಾರದ ಆದ್ಯತೆಯಾಗಬೇಕು.

ಹಿಂದೆ ಎರಡನೇ ಮಹಾಯುದ್ಧದ ಸಮಯದಲ್ಲಿ ಮತ್ತು ಸ್ವಾತಂತ್ರ ಪ್ರಾಪ್ತವಾದ ಹೊಸದರಲ್ಲಿ ಆಹಾರ ಧಾನ್ಯಗಳ ಕೊರೆತೆಯಿಂದ ಬಡಜನರು ತೊಳಲಾಡುವುದನ್ನು ಗಮನಿಸಿದ ಅಂದಿನ ಸರ್ಕಾರ ಭೂಹೀನ ಬಡರೈತರಿಗೆ ಸರ್ಕಾರಿ ಜಮೀನಿನಲ್ಲಿ ಬೆಳೆ ಬೆಳೆದುಕೊಳ್ಳಲು ಅನುಮತಿ ನೀಡಿತು. ಇದಕ್ಕಾಗಿ ಸರ್ಕಾರ Grow more food campaign ಆರಂಭ ಮಾಡಿತು. ಸಹಸ್ರಾರು ಬಡರೈತರು ಒಂದು ಎಕರೆ, ಎರಡು ಎಕರೆ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡಲು ಆರಂಭಿಸಿದರು. ಈ ಮೂಲಕ ಈ ಬಡರೈತರು ತಮ್ಮ ಮನೆಗೆ ಬೇಕಾದಷ್ಟನ್ನು ಬೆಳೆದುಕೊಂಡು ಸ್ವಾವಲಂಬಿಗಳಾದರು. ಆಹಾರ ಧಾನ್ಯವನ್ನು ಜನರಿಗೆ ಒದಗಿಸುವ ಹೊಣೆಗಾರಿಕೆಯಿಂದ ಸ್ವಲ್ಪಮಟ್ಟಿಗೆ ಪಾರಾಗಲು ಈ Grow more food campaign ಯೋಜನೆ ಸಹಕಾರಿಯಾಯಿತು.

ಈ ರೈತರು ಕೂಡ ತಮ್ಮ ಜಮೀನಿಗೆ ಸರ್ಕಾರ ಪಟ್ಟ ಕೊಡುವುದೆಂದು ಅಂದಿನಿಂದ ಕಾಯುತ್ತಿದ್ದಾರೆ. ಸರ್ಕಾರವೇ ಸರ್ಕಾರಿ ಜಮೀನನ್ನು ಆಹಾರಧಾನ್ಯ ಬೆಳೆದುಕೊಳ್ಳುವುದಕ್ಕಾಗಿ ರೈತರಿಗೆ ಕೊಟ್ಟಿರುವುದರಿಂದ ಈ ಜಮೀನು ಅಕ್ರಮ ಸಕ್ರಮದಡಿಯಲ್ಲಿ ಪರಿಶೀಲಿಸಲು ಬರುವುದಿಲ್ಲ.

ಆದ್ದರಿಂದ ಈ ರೈತರು ಬೇರೆ ಜಮೀನನ್ನು ಹೊಂದಿರದಿದ್ದರೆ ಅಂಥವರಿಗೆ ನೇರವಾಗಿ ಪಟ್ಟ ನೀಡಲು ತಹಶೀಲ್ದಾರುಗಳಿಗೆ ಅಧಿಕಾರ ನೀಡಬೇಕು. ಇಂತಹವರು ಸಕ್ರಮ ಅಕ್ರಮದಡಿ ಅರ್ಜಿ ಸಲ್ಲಿಸಿದ್ದರೆ ಅದನ್ನು ಬೇರ್ಪಡಿಸಿ ಈ ರೈತರಿಗೆ ಕೂಡಲೇ ಪಟ್ಟ ಮಾಡಿಕೊಡಬೇಕು.


ಇದನ್ನೂ ಓದಿ: ನೂರರ ನೋಟ: ಪ್ರಜಾಪ್ರಭುತ್ವದ ಕಗ್ಗೊಲೆಯ ಮೂರು ಪ್ರಕರಣಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...