Homeಅಂಕಣಗಳುಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ - ಎಚ್. ಎಸ್ ದೊರೆಸ್ವಾಮಿ

ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ.

- Advertisement -
- Advertisement -

ಆರ್ಥಿಕ ಶೋಷಣೆಯನ್ನ ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಸರ್ಕಾರಗಳ ಮತ್ತು ಸಂಸತ್ತಿನ ಗುರಿಯಾಗಬೇಕು. ಸ್ವಾತಂತ್ರ್ಯವೆಂದರೆ ದುರ್ಬಲವರ್ಗಗಳನ್ನು ನಿರಂತರವಾಗಿ ವಂಚಿಸುತ್ತಾ ಹೋಗುವುದಲ್ಲ. ಶೋಷಣೆಯನ್ನು ತಡೆಗಟ್ಟುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ, ಸಂಪನ್ಮೂಲಗಳ ಸ್ವಾಮ್ಯ ಒಡೆತನ ಸರ್ಕಾರದ ಕೈಯಲ್ಲಿ ಉಳಿಸಿಕೊಳ್ಳುವುದು. ಪ್ರಮುಖ ಉದ್ಯೋಗಗಳು ರಾಜ್ಯಾಡಳಿತದ ವ್ಯಾಪ್ತಿಯಲ್ಲಿರಬೇಕು. ಕೃಷಿಭೂಮಿ ಸರ್ಕಾರದ ಸ್ವಾಮ್ಯದಲ್ಲಿರಬೇಕು. ಹಾಗೆಂದರೆ ಸರ್ಕಾರ ಜಮೀನನ್ನು ಯಾರಿಗೆ ಅಂದರೆ ಅವರಿಗೆ, ಪಟ್ಟಭದ್ರ ಹಿತಾಸಕ್ತಿಗಳಿಗೆ, ಸಿಕ್ಕಿದಂತೆ ಹಂಚುವ ಅಧಿಕಾರ ಅದಕ್ಕಿರಬೇಕೆಂಬ ಅರ್ಥವಲ್ಲ. ಪ್ರಮುಖ ಉದ್ಯಮಗಳು ಸರ್ಕಾರದ ವ್ಯಾಪ್ತಿಯಲ್ಲಿ ನಿರ್ವಹಣೆಯಾಗಬೇಕು. ವಿಮಾ ಸಂಸ್ಥೆಗಳ, ಲೇವಾದೇವಿ ಸಂಸ್ಥೆಗಳ ರಾಷ್ಟ್ರೀಕರಣ ಆಗಬೇಕು. ಜಮೀನ್ದಾರ, ಜೀತಗಾರ, ಕೃಷಿಕಾರ್ಮೀಕ ಮುಂತಾದ ಬರ್ಬರ ವ್ಯವಸ್ಥೆಗಳು ಕೊನೆಗೊಳ್ಳಬೇಕು. ದುರ್ಬಲವರ್ಗದವರಿಗೆ ಒದಗಿಸುವ ವಿಶೇಷ ರಕ್ಷಣಾ ನಿಬಂಧನೆಗಳನ್ನು ಸಂವಿಧಾನದ ಮೂಲಭೂತಹಕ್ಕುಗಳ ಪಟ್ಟಿಗೆ ಸೇರಿಸಬೇಕು. ಇದನ್ನು ಈಗ ಸಂವಿಧಾನದ ನಿರ್ದೇಶಕ ತತ್ವಗಳನ್ನಾಗಿ ಸೇರಿಸಲಾಗಿದೆ.

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ವ್ಯಾಪಕ ತಳಹದಿಯ ಮೇಲೆ ರಚಿತವಾಗಿದೆ. ಸಮಗ್ರ ದೇಶದ ಹಿತದೃಷ್ಟಿಯಿಂದ ರಚಿತವಾಗಿದೆ.

ವ್ಯಕ್ತಿ ಸ್ವಾತಂತ್ರ್ಯವೆಂಬುದು ಬಂಡವಾಳಶಾಹಿಗಳಿಗೆ ಮಾತ್ರ ಅನ್ವಯವಾಗುವ ಮಹಾಮಂತ್ರ ಎಂದು ಪಟ್ಟಭದ್ರರು ಭಾವಿಸುತ್ತಾರೆ. ಅದರಿಂದಾಗಿ ಇದು ಶ್ರಮಜೀವಿಗಳ ದಾಸ್ಯಕ್ಕೆ ದಾರಿಮಾಡುತ್ತದೆ. ಹಿಂದೆ ದಲಿತರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ತಮ್ಮ ಶ್ರಮಶಕ್ತಿಗೆ ಸರಿಯಾದ ಪರಿಹಾರ ಪಡೆಯುವ ಅಧಿಕಾರ ಇರಲಿಲ್ಲ. ಶ್ರೀಮಂತ ರೈತರಿಗೆ ಅವರು ಖಾಯಂ ಜೀತದಾಳುಗಳಾಗಿದ್ದರು. ಅವರಿಗೆ ವ್ಯಕ್ತಿ ಸ್ವಾತಂತ್ರ್ಯ ಇರಲಿಲ್ಲ. ಅದು ಏನಿದ್ದರೂ ಶ್ರೀಮಂತರ ಸ್ವತ್ತಾಗಿತ್ತು.

ಅಸ್ಪೃಶ್ಯತೆ ಸಮಾಜದಿಂದ ತೊಲಗದ ಹೊರತು ರೈತ ಮತ್ತು ಕಾರ್ಮಿಕ ಹೋರಾಟಕ್ಕೆ ಸಂಘಟಿತ ಸ್ವರೂಪ ಬರುವುದಿಲ್ಲ. ಭಾರತದಲ್ಲಿ ಶ್ರಮಜೀವಿಗಳಿಗೆ ಮುಕ್ತಿ ದೊರೆಯಬೇಕಾಗಿದ್ದರೆ, ಅವರು ಸಾಮಾಜಿಕ ಆರ್ಥಿಕ, ಧಾರ್ಮಿಕ ದಾಸ್ಯದಿಂದ ಮುಕ್ತರಾಗುವುದೊಂದೇ ಅವರಿಗಿರುವ ರಾಜಮಾರ್ಗ. ಆ ಸಂಕೋಲೆಗಳನ್ನು ಕಳಚಿಕೊಳ್ಳುವುದೊಂದೇ ಇರುವ ಪರಿಹಾರ ಮಾರ್ಗ.

ಒಕ್ಕಲಿಗ ಸಣ್ಣ ರೈತರು ಮತ್ತು ಕಾರ್ಮಿಕರು, ಒಕ್ಕಲಿಗ White Collar ಗಿಂತ ತಾವು ಕೀಳು ಎಂದು ಭಾವಿಸುವರಾದರೂ ತಾವು ಅಸ್ಪೃಶ್ಯ ವರ್ಗದವರಿಗಿಂತ ಮೇಲ್ವರ್ಗದವರು ಎಂದು ಗರ್ವಪಡುತ್ತಾರೆ. ತಮ್ಮಂತೆಯೇ ಆರ್ಥಿಕವಾಗಿ ಹಿಂದುಳಿದ ಅಸ್ಪೃಶ್ಯರನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ. ವೈರಿಗಳಂತೆ ನೋಡುತ್ತಾರೆ.

ಅಸ್ಪೃಶ್ಯರಿಗೆ ಸಮಾಜದಲ್ಲಿ ಗೌರವ ದೊರೆಯಬೇಕಾದರೆ ಅವರು ಮೊದಲು ಮಾಡಬೇಕಾದ ಕೆಲಸ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು. ಹಣದಿಂದಲೇ ಸಮಾಜ ಜನರನ್ನು ಅಳೆಯುವ ಈ ಕಾಲದಲ್ಲಿ ಅಸ್ಪೃಶ್ಯರು ಆರ್ಥಿಕವಾಗಿ ಚೇತರಿಸಿಕೊಳ್ಳದಿದ್ದರೆ ಸಮಾಜ ಅವರನ್ನು ತಿರಸ್ಕಾರ ಬುದ್ಧಿಯಿಂದ ನೋಡುತ್ತದೆ, ಕೀಳಾಗಿ ಕಾಣುತ್ತದೆ. ವೈರಿಗಳಂತೆ ಕಾಣುತ್ತದೆ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಅಸ್ಪೃಶ್ಯರು ನಡೆದುಕೊಳ್ಳಬೇಕು.

ಆದರೆ ಒಂದು ಎಚ್ಚರಿಕೆ. ಭೌತಿಕ ಸುಖವೊಂದೇ ಸಾರಸರ್ವಸ್ವ ಎಂದು ಅಸ್ಪೃಶ್ಯರು ಭಾವಿಸಬಾರದು. ಅಸ್ಪೃಶ್ಯಯರಿಗೂ ಉಳಿದ ಎಲ್ಲರಂತೆ ಮನಸ್ಸು, ಹೃದಯಗಳಿವೆ. ಆ ಮನಸ್ಸಿಗೆ, ಹೃದಯಕ್ಕೆ ವಿಚಾರದ ಆಹಾರ ಅತ್ಯಗತ್ಯ. ವೈಚಾರಿಕತೆ ಮಾನವನ ಮನಸ್ಸಿನಲ್ಲಿ ಆಸೆಗಳನ್ನು ಹುಟ್ಟು ಹಾಕುತ್ತದೆ. ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅಸ್ಪೃಶ್ಯ ಸಂಘಟನೆಗಳು ವಿಚಾರಕ್ರಾಂತಿಯ ಬೀಜವನ್ನು ಅಸ್ಪೃಶ್ಯರ ಮನಸ್ಸಿನಲ್ಲಿ ಬಿತ್ತಬೇಕು.

ಆರ್ಥಿಕ ಬೆಳವಣಿಗೆ ಅಸ್ಪೃಶ್ಯರ ಸರ್ವತೋಮುಖ ಬೆಳವಣಿಗೆಗೆ ಒಂದು ಸಾಧನ. ಆರ್ಥಿಕ ಅಭಿವೃದ್ಧಿ ಆಯಿತು ಎಂದರೆ ಅಸ್ಪೃಶ್ಯನಿಗೆ ಸಮಾಜ ತನ್ನತಾನಾಗೇ ಗೌರವ ನೀಡಲು ಆರಂಭ ಮಾಡುತ್ತದೆ.

ಪರಂಪರಾಗತ ಉದ್ಯೋಗಗಳನ್ನು ದಲಿತರು ಬಿಡಬೇಕು. ಸತ್ತ ಪ್ರಾಣಿಗಳನ್ನು ಹೊತ್ತು ಹೂಳುವುದು ಮತ್ತು ತಿನ್ನುವುದು, ತೋಟಿ ತಳವಾರ ಹುದ್ದೆಗಳನ್ನು ವಂಶಪಾರಂಪರ್ಯದ ಕಸುಬು ಎಂದು ಊರು ಕೇರಿಯಲ್ಲಿ ಭಾವಿಸುವುದು, ಮೇಲ್ಜಾತಿಯವರ ಆಣತಿಯಂತೆ ತಮಟೆ ಹೊಡೆದು ಸಾರುವುದು ಎಲ್ಲ ನಿಲ್ಲಬೇಕು. ವಿದ್ಯಾಭ್ಯಾಸ ಪಡೆಯಲು ಎರಡು ವಿಧದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವೆಂದರೆ ಬ್ರಾಹ್ಮಣವಾದ ಮತ್ತು ಬಂಡವಾಳವಾದ. ಬ್ರಾಹ್ಮಣವಾದ ಎಂಬುದನ್ನು ತಪ್ಪಾಗಿ ಅರ್ಥೈಸಬಾರದು. ಬ್ರಾಹ್ಮಣವಾದವೆಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ವಿರೋಧಿಸುವ ಪ್ರವೃತ್ತಿ. ಈ ಪ್ರವೃತ್ತಿ ಬ್ರಾಹ್ಮಣರ ಗುತ್ತಿಯಾಗಿ ಏನೂ ಉಳಿದಿಲ್ಲ. ಎಲ್ಲ ಜಾತಿಗಳಲ್ಲೂ ಇಂತಹ ಜನ ಇದ್ದಾರೆ. ಈಗ ಇದು ಎಲ್ಲ ವರ್ಗದವರ ಸಿದ್ಧಾಂತವಾಗಿದೆ. ಈ ಪ್ರವೃತ್ತಿಯನ್ನು ದಲಿತರು ಹೋರಾಟದ ಮೂಲಕ ಬದಲಿಸಬೇಕು.

ಇನ್ನೊಂದು ಬಂಡವಾಳಶಾಹಿ ನೀತಿ. ಅದು ಲಾಭಕೋರರ ಸಂತೆ. ಬಂಡವಾಳಶಾಹಿಗಳ ಆರ್ಥಿಕನೀತಿ, ಧರ್ಮವೋ ಅಧರ್ಮವೋ ಯಾವುದೇ ಮಾರ್ಗವಾಗಲಿ ಲಾಭಗಳಿಸುವುದು. ಆಳುವ ಸರ್ಕಾರವನ್ನು ತನ್ನ ವಶ ಮಾಡಿಕೊಂಡು ಕೂಡಿಕೊಳ್ಳುವುದು. ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿಸುವುದು. ಅವರಿಗೆ ಸರ್ಕಾರ ಸಕಲ ಸವಲತ್ತುಗಳನ್ನು ನೀಡಲು ತುದಿಗಾಲ ಮೇಲೆ ನಿಲ್ಲುತ್ತದೆ. ಅದಕ್ಕೆ ಕಾರಣ ಅವರು ಪಕ್ಷಕ್ಕೆ ನೀಡುವ ಎಂಜಲು ಹಣ. ಸರ್ಕಾರ ಸಮಾಜವಾದದಿಂದ ಬಂಡವಾಳಶಾಹಿ ನೀತಿಗೆ ತಿರುಗುವಂತೆ ಮಾಡುವುದು ಬಂಡವಾಳಶಾಹಿಯ ಪ್ರಥಮ ಆದ್ಯತೆ. ಮಾಲಿಕರು, ಕಾರ್ಮಿಕರು ಸರ್ಕಾರ ಮೂವರೂ ಸೇರಿ ಕಾರ್ಮಿಕ ನೀತಿ ರೂಪಿಸಬೇಕು, ಶ್ರಮಿಕರ ಕೈಗೆ ಸರ್ಕಾರ ಹೋಗಬೇಕು, ಶ್ರಮಿಕರಲ್ಲಿ ಬೇರುಬಿಟ್ಟಿರುವ ಜಾತಿ,ಭಾವನೆ, ಉಚ್ಚ ನೀಚಭಾವನೆ, ಮೇಲುಕೀಳು ಭಾವನೆ ಹೋಗದೆ ಇದ್ದರೆ ಶ್ರಮಿಕರು ಒಂದಾಗುವುದು ಹೇಗೆ ಸಾಧ್ಯವಾದೀತು? ಸಮಾಜದಲ್ಲಿ ಕ್ರಾಂತಿತರಲು ಹೇಗೆ ಸಾಧ್ಯವಾದೀತು?

ಅಂಬೇಡ್ಕರರ ಆರ್ಥಿಕನೀತಿ ಯಾವುದೇ ಜಾತಿ, ಪಕ್ಷ, ಕಾಲ, ದೇಶಗಳಿಗೆ ಸೀಮಿತವಾಗಿರದೆ ಇಡೀ ಮಾನವಕುಲದಲ್ಲಿ ಸಮಾನತೆಯನ್ನು ಸಾಧಿಸಲು ಮತ್ತು ನೆಮ್ಮದಿ ಬದುಕನ್ನು ಬದುಕಲು ನೆರವಾಗುವುದಾಗಿದೆ. ಇಡೀ ಮಾನವಸಮೂಹದಲ್ಲಿ ಸಮಾನತೆಯನ್ನು ತರುವುದೇ ಅಂಬೇಡ್ಕರರ ಆರ್ಥಿಕ ಗುರಿ.


ಇದನ್ನೂ ಓದಿ: ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...