Homeಕರ್ನಾಟಕಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

"ನಾವು ಮನಸ್ಸು, ಹೃದಯಗಳನ್ನು ನೇಯೋಣ, ಹರಿಯೋದು ಬೇಡ" ಎಂದು ಹಂಸಲೇಖ ಅವರು ಮನವಿ ಮಾಡಿದರು.

- Advertisement -
- Advertisement -

ಜೇನುಕುರುಬ ಸಮುದಾಯದ ಸಂಗೀತ ಕಲೆಯನ್ನು ಝೀ ಕನ್ನಡ ವಾಹಿನಿಯಲ್ಲಿ ಪ್ರದರ್ಶಿಸೋಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಆಯೋಜಿಸಿದ್ದ ‘ನೆಲದ ಪದ’ ಸಾಂಸ್ಕೃತಿಕ ಯುವಜನ ಉತ್ಸವವನ್ನು ಉದ್ಘಾಟಿಸಿದ ಅವರು, ಜೇನುಕುರುಬ ಯುವಜನರ ಕಲಾ ಪ್ರದರ್ಶನವನ್ನು ನೋಡಿ, ‘ಜೇನುಕುರುಬ ಯುವಕರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ’ ಎಂದರು.

ಝೀ ಕನ್ನಡ ವಾಹಿನಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜಾನಪದ ವಿಚಾರವಾಗಿ ಚರ್ಚಿಸುವಾಗಲೆಲ್ಲ ಯಾವುದಾದರೂ ವಿಶೇಷ ಕಾರ್ಯಕ್ರಮ ರೂಪಿಸಲು ಸಾಧ್ಯವಿದ್ದರೆ ತಿಳಿಸಿ ಸರ್ ಎಂದು ನನಗೆ ಕೇಳಿಕೊಳ್ಳುತ್ತಾರೆ. ನಾನು ಯಾವಾಗಲೂ ಗೊಂದಲದಲ್ಲೇ ಇರುತ್ತಿದ್ದೆ. ಇವತ್ತು ಒಂದು ಸರಿಯಾದ ಚಿತ್ರಣ ಸಿಕ್ಕಿದೆ. ಆ ಜೇನುಕುರುಬ ತಂಡಕ್ಕೆ ಇನ್ನೊಂದಿಷ್ಟು ಅಭ್ಯಾಸ ಕೊಡಿಸಿ, ಅದಕ್ಕೊಂದು ಅಲಂಕಾರಿಕ ರೂಪವನ್ನು ನೀಡಿ, ಝೀ ವಾಹಿನಿಯಲ್ಲಿ ಪ್ರದರ್ಶನ ಪಡಿಸೋಣ ಎಂದರು.

25,000 ರೂ.ಗಳನ್ನು ತಂಡಕ್ಕೆ ಬಹುಮಾನವಾಗಿ ಘೋಷಿಸಿದ ಅವರು, “ಜೇನುಕುರುಬರ ತಂಡ ವೇದಿಕೆಗೆ ಬಂದಾಗ ನನ್ನ ಕಣ್ಣಂಚಿನಲ್ಲಿ ನೀರು ಬಂದವು. ಎಷ್ಟು ಉತ್ಸಾಹ, ಎಷ್ಟು ಅದಮ್ಯವಾದ ಚೈತನ್ಯ ಅವರದ್ದು. ಲಯಬದ್ಧತೆಯೊಂದಿಗೆ ಸಭೆಗೆ ಬಂದು ಸಭಾ ಗೌರವವನ್ನು ಪಡೆದು, ಅವರು ಹಾಡಿದ ನಾಲ್ಕು ರಾಗಗಳೂ ಬಹಳ ಅದ್ಭುತವಾಗಿದ್ದವು” ಎಂದು ಬಣ್ಣಿಸಿದರು.

ಎಲ್ಲ ಸಂಗೀತ ಪ್ರಕಾರಗಳು ಇಂದು ಶ್ರುತಿ ಬದ್ಧತೆಗೆ ಹಾಗೂ ಶಿಸ್ತಿಗೆ ಒಳಪಟ್ಟಿವೆ. ನಾವು ಒಂಚೂರು ಶ್ರುತಿ ಹಾಗೂ ಶಿಸ್ತಿಗೆ ಒಳಪಟ್ಟರೆ ನಾವು ಮೇಲೇರುವ ಸ್ಥಿತಿ ಹೆಚ್ಚಾಗುತ್ತದೆ. ನಮ್ಮ ಮೆದುಳೇ ನಮ್ಮ ಹೆಡ್‌ ಮಾಸ್ಟರ್‌. ಈ ಮೆದುಳಿಗೆ ಯಾರು ಹೆಡ್ ಮಾಸ್ಟರ್‌ ಎಂಬುದು ನಮಗೆ ಗೊತ್ತಿಲ್ಲ. ಈ ಮೆದುಳು ನಮ್ಮನ್ನು ನಿಯಂತ್ರಿಸುತ್ತದೆ. ಈ ಮೆದುಳಿಗೆ ನೀವು ಆಜ್ಞೆ ಮಾಡಿ. ನೀವು ಅಂದುಕೊಂಡಂತೆ ಆಗುತ್ತೀರಿ. ಅಂದುಕೋ, ನೀ ಆಗುತ್ತೀಯ ಎಂದು ಪ್ರೋತ್ಸಾಹಿಸಿದರು.

ಜಗತ್ತಿನಲ್ಲಿ ಜನಪದದ ಕುರಿತು ಅನುಕಂಪದ ಅಲೆ ಎದ್ದಿದೆ. ಜನಪದರು ಶ್ರುತಿಬದ್ಧತೆಗೆ ಮರಳಿದ್ದಾರೆ. ಉತ್ಸಾಹ, ಹುಮ್ಮಸ್ಸು ಹುಟ್ಟಿನಿಂದಲೇ ಜನಪದರಿಗೆ ಇದೆ. ಆದರೆ ಕೊಂಚ ಶ್ರುತಿ, ಲಯಬದ್ಧತೆ, ಕೊಂಚ ಸಭಾ ಮರ್ಯಾದೆ ನಡೆಸಿಕೊಟ್ಟರೆ ಜಗತ್ತು ಜನಪದರನ್ನು ಆಲಂಗಿಸಲು ಸಿದ್ಧವಾಗಿದೆ ಎಂದು ಹೇಳಿದರು.

ತಮ್ಮ ದೇಸಿ ಸಂಸ್ಥೆ ಕುರಿತು ಮಾತನಾಡಿದ ಅವರು, “ಈ ಸಂಸ್ಥೆಯಲ್ಲಿ ಈ ನೆಲದ ಜಾನಪದೀಯ ಸೊಗಡನ್ನು ಕಟ್ಟಲು, ಪಠ್ಯವನ್ನು ರೂಪಿಸಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಬಹಳ ದಿಕ್ಕು ತೋಚದೆ ಈಗಲೂ ಒದ್ದಾಡುತ್ತಿದ್ದೇವೆ. ಜಾನಪದೀಯ ಸೊಗಡನ್ನು ಪಠ್ಯದ ಮೂಲಕ ಹೇಳಲು ಸಾಧ್ಯವೇ? ಅದು ಸ್ವಾ- ಅನುಭವದಿಂದ ಬರಬೇಕು. ಜನಪದ ಎಂಬುದು ಸಂಭ್ರಮ, ಸೊಗಡು. ಆ ಸೊಗಡಿಗೆ ಪಠ್ಯವನ್ನು ರೂಪಿಸುವುದು ಬಹಳ ಕಷ್ಟ. ಆದರೂ ನಾವು ಒಂದು ತಾಳ ಶಾಸ್ತ್ರವನ್ನು ರಚಿಸಿದ್ದೇವೆ. ಜನಪದ ಸಂಗೀತವನ್ನು ಕಲಿಯುವುದಕ್ಕಾಗಿ ಶಿಸ್ತುಬದ್ಧ ಸಂಗೀತ ಲಿಪಿ ಹಾಗೂ ಪಠ್ಯಕ್ರಮವನ್ನು ರೂಪಿಸಿದ್ದೇವೆ. ಜೊತೆಗೆ ಪ್ರದರ್ಶನ ಕಲೆಗಳಿಗೆ ಬೇಕಾಗಿರುವ ಎಲ್ಲ ಸುಧಾರಣೆ ಕುರಿತು ಪಠ್ಯದಲ್ಲಿ ಸೇರಿಸಿದ್ದೇವೆ. ನಮಗೆ ಈಗ ವಿದ್ಯಾರ್ಥಿಗಳು ಅಥವಾ ಪ್ರತಿಭೆಗಳು ಬೇಕಿದ್ದಾರೆ. ಹಂಸಲೇಖ ದೇಸಿ ವಿದ್ಯಾ ಸಂಸ್ಥೆ ನಿಮ್ಮ ಸೇವೆಗೆ ಕಂಕಣ ಕಟ್ಟಿ ನಿಂತಿದೆ” ಎಂದು ಆಹ್ವಾನಿಸಿದರು.

ನೀವು ನುಡಿಸುವ ಡೊಳ್ಳು ವಾದ್ಯವನ್ನು ಶ್ರುತಿ ಮಾಡಲು ಯೋಗ್ಯವಾಗಿ ತಯಾರು ಮಾಡಿದ್ದೇವೆ. ಅದನ್ನು ಇನ್ನೂ ನಾಡಿಗೆ ಅರ್ಪಣೆ ಮಾಡಿಲ್ಲ ಎಂದ ಅವರು, ಯಾರಾದರೂ 25 ಜನರ ತಂಡಗಳಾಗಿ ಬಂದರೆ ಅಥವಾ ನಾನಾಗಿಯೇ ಬಂದು ತಯಾರು ಮಾಡುವ ಕೆಲಸವನ್ನು ಮಾಡಬಲ್ಲೆ. ಲಯಬದ್ಧತೆ ರೂಪಿಸಿಕೊಂಡರೆ ಜನಪದಕ್ಕೆ ಕೊಂಬು, ಕೋಡುಗಳು ಹೆಚ್ಚಾಗುತ್ತವೆ. ನಾನು ನಿಮ್ಮ ಜೊತೆಯಲ್ಲಿ ಮುಂದೆ ಕೆಲಸ ಮಾಡುತ್ತೇನೆ ಎಂದರು.

“ನಾವು ನೇಯೋಣ, ಹರಿಯದಿರೋಣ. ಬಟ್ಟೆಯನ್ನು, ಸಂಭ್ರಮವನ್ನು, ಅಕ್ಷರವನ್ನು, ಮನಸ್ಸು, ಹೃದಯಗಳನ್ನು ನೇಯೋಣ. ಆದರೆ ಹರಿಯೋದು ಬೇಡ” ಎಂದು ಅವರು ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು.

ಹಂಸಲೇಖ ಅವರು ಮಾರ್ಮಿಕವಾಗಿ ಹೇಳಿದ ‘ನೇಯುವ ಕಾರ್ಯ’ವನ್ನು ಉಲ್ಲೇಖಿಸಿ ಮಾತನಾಡಿದ ಸ್ಫೂರ್ತಿಧಾಮದ ಅಧ್ಯಕ್ಷರು, ಐಪಿಎಸ್‌ ನಿವೃತ್ತ ಅಧಿಕಾರಿಯಾಗಿರುವ ಮರಿಸ್ವಾಮಿಯವರು, “ಉತ್ತರಖಾಂಡ್‌ನಲ್ಲಿ ನಡೆದ ಧರ್ಮ ಸಂಸತ್‌ ಇಡೀ ಒಂದು ಜನಾಂಗವನ್ನೇ ನಾಶ ಮಾಡುವ ಮಾತನಾಡುತ್ತದೆ. ಹೀಗಾಗಿ ಹರಿದು ಹಾಕುವ ಕೆಲಸ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆ ಕಾಣುತ್ತದೆ. ನೇಯುವಲ್ಲಿ ನಾವು ಎಲ್ಲಿ ಸೋತುಬಿಡುತ್ತೇವೆ ಎಂಬ ಭಯ ಕಾಡುತ್ತಿದೆ. ಹೀಗೆ ಹರಿಯೋರನ್ನು ಅಧಿಕಾರಕ್ಕೆ ಕೂರಿಸಿದವರು ಯಾರು? ಹಾಲನ್ನು ಹಾಕಿ ಸಾಕಿ, ಗಟ್ಟಿ ಮಾಡಿ ಕೂರಿಸಿದವರು ನಾವು. ಈಗ ಅವರು ಇಡೀ ದೇಶವನ್ನೇ ಹರಿದುಹಾಕುವ ಮಾತನಾಡುತ್ತಿದ್ದಾರೆ. ಇಡೀ ದೇಶ ಯೋಚಿಸಬೇಕಾದ ವಿಚಾರವಿದು” ಎಂದು ಎಚ್ಚರಿಸಿದರು.

“ಸಮಾತೆಯ ಹೆಸರಲ್ಲಿ ಅಸಮಾನತೆಯನ್ನು ಹೇಳುವವರು ಬಯಲಾಗುತ್ತಿದ್ದಾರೆ. ನಾವು ಪ್ರೊಗೆಸಿವ್ ಎಂದುಕೊಂಡ ಅನೇಕರು ಆಂತರಿಕವಾಗಿ ರಿಗ್ರೆಸಿವ್ ಆಗಿದ್ದಾರೆ. ತಮ್ಮ ಆತ್ಮವನ್ನು ತೆರೆದಿಟ್ಟು ತಾವು ಎಲ್ಲಿದ್ದೇವೆ ಎಂಬುದನ್ನು ತೋರಿಸುತ್ತಿದ್ದಾರೆ” ಎಂದರು.

ಪ್ರಗತಿಪರ ಆಗುವುದು ಹೆಣ್ಣುಮಕ್ಕಳಿಗೆ ಅನಿವಾರ್ಯ: ಎಂ.ಡಿ.ಪಲ್ಲವಿ

ಗಾಯಕಿ ಎಂ.ಡಿ.ಪಲ್ಲವಿ ಅವರು ಮಾತನಾಡಿ, “ನಾವು ನಮ್ಮ ಬದುಕನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಬೇಕು. ನನ್ನ ಹೋರಾಟ- ನಾನು ಪ್ರಗತಿಪರ ಆಗಿರಬೇಕು ಎಂಬುದಕ್ಕಾಗಿರುತ್ತದೆ. ನಾನು ಪ್ರಗತಿಪರ ಆಗಿದ್ದೇನೆ, ಆಗಿರುತ್ತೇನೆ. ಪ್ರಗತಿಪರ ಆಗುವುದು ಹೆಣ್ಣು ಮಕ್ಕಳಿಗೆ ಅನಿವಾರ್ಯ. ಇಲ್ಲವಾದರೆ ವಿದ್ಯಾಭ್ಯಾಸವೂ ಸಿಗುವುದಿಲ್ಲ. ಸಮಾಜ ಪ್ರಗತಿಗಪರ ಆಗಬೇಕೆಂದರೆ ವಿದ್ಯಾಭ್ಯಾಸದ ಜೊತೆಗೆ ಸಮಾನತೆಯೂ ಮುಖ್ಯ. ಆ ಸಮಾನತೆಯನ್ನು ಡಾ.ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಕೊಟ್ಟಿದ್ದಾರೆ. ಸಮಾನತೆಯನ್ನು ಸಂಪೂರ್ಣವಾಗಿ ತರಲು ಸಾಧ್ಯವಾಗಿಲ್ಲ. ಅದರತ್ತ ನಾವು ಹೆಜ್ಜೆ ಹಾಕಬೇಕು. ನಮ್ಮ ದಾರಿಯನ್ನು ನಾವೇ ಕಲ್ಪಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಹೋರಾಟ- ಪ್ರೀತಿಯಿಂದಲೂ ಸಾಧ್ಯವಿದೆ. ಕಿರುಚದೆ, ರೇಗದ ಮೆಲುದನಿಯಲ್ಲಿ ಲಯಬದ್ಧವಾಗಿ, ಶ್ರುತಿಬದ್ಧವಾಗಿಯೂ ಹೋರಾಟ ಮಾಡಬಹುದು ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತರಾದ ವಿಜಯಮ್ಮ ಮಾತನಾಡಿ, “ಇಂದು ಮಾತನಾಡಿದರೆ ದೇಶದ್ರೋಹ ಎಂಬ ಪರಿಸ್ಥಿತಿ ಬಂದಿರುವುದರಿಂದ ನಾವು ಮಾತನಾಡುವುದಿಲ್ಲ. ನಿಮ್ಮ ಧರ್ಮ, ನಿಮ್ಮ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳು ನಿಮಗಿರಲಿ; ನಮ್ಮ ಅಭಿಪ್ರಾಯಗಳನ್ನು ಹೇಳುವುದಕ್ಕೆ ನಾವು ಇನ್ನೊಂದು ದಾರಿಯನ್ನು ಹುಡುಕುತ್ತೇವೆ. ನಮ್ಮ ಸಾಂಸ್ಕೃತಿಕ ದಾರಿಯನ್ನು ಪ್ರತಿರೋಧದ ದನಿಯಾಗಿ ಬಳಸಿಕೊಳ್ಳಲು ಪ್ರಯತ್ನಪಡುತ್ತಿದ್ದೇವೆ” ಎಂದರು.

ಚಲನಚಿತ್ರ ನಿರ್ದೇಶಕ ಮಂಸೋರೆ ಮಾತನಾಡಿ ಕೆವಿಎಸ್‌ ಸಂಘಟನೆಯ ಕೆಲಸಗಳನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, “ನಿನ್ನೆ ಫೇಸ್‌ಬುಕ್‌ನಲ್ಲಿ ಒಂದು ಘಟನೆ ಓದಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂದು ನಾಚಿಕೆಯಾಗುತ್ತದೆ. ನಾವು ಜಾತಿ, ಧರ್ಮದಿಂದ ಹೊರಬರಬೇಕಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ಇವುಗಳಿಂದ ಹೊರಬೇಕಾಗಿದೆ. ನಾವು ವೈಯಕ್ತಿಕವಾಗಿಯೂ ಹೋರಾಡಿ ಜಾತಿ, ಧರ್ಮದ ಸಂಕೋಲೆಗಳಿಂದ ಬಿಡುಗಡೆ ಹೊಂದಿ ಮನುಷ್ಯರಾಗಲು ಪ್ರಯತ್ನಪಡಬೇಕು” ಎಂದು ಆಶಿಸಿದರು.

ಬಿ.ಎಂ.ಗಿರಿರಾಜ್ ಮಾತನಾಡಿ, “ಕುವೆಂಪು ಅವರು ಹೇಳಿದಂತೆ ಮನುಷ್ಯನಿಗೆ ಮೂರು ಹಸಿವುಗಳು ಇರಬೇಕಾಗುತ್ತದೆ. ಅಧ್ಯಾತ್ಮದ ಹಸಿವು, ಆಧುನಿಕತೆಯ ಹಸಿವು, ಸಮಾನತೆ ಹಸಿವು. ಈ ಹಸಿವುಗಳು ತುಂಬಿದರೆ ನಾವು ತಪ್ಪು ಮಾಡುವುದು ಕಡಿಮೆಯಾಗುತ್ತದೆ. ಕುವೆಂಪು ಅವರು ಅಧ್ಯಾತ್ಮದ ಕಡೆಗೂ, ಆಧುನಿಕತೆಯ ಕಡೆಗೂ ಒಮ್ಮೆಲೇ ಯೋಚಿಸುತ್ತಿದ್ದರು” ಎಂದು ವಿವರಿಸಿದರು.

ನೆಲದ ಪದ ಕಾರ್ಯಕ್ರಮ ಬಹುತ್ವವನ್ನು ಪ್ರತಿಪಾದಿಸಿತು. (ಹೆಚ್ಚಿನ ವರದಿಯನ್ನು ‘ಇಲ್ಲಿ’ ಓದಬಹುದು.)


ಇದನ್ನೂ ಓದಿರಿ: ಬಹುತ್ವ ಬದುಕಿನ ಸಂದೇಶ ಸಾರಿದ ‘ನೆಲದ ಪದ’ ಸಾಂಸ್ಕೃತಿಕ ಉತ್ಸವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The present needed culture movement

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...