Homeಕರ್ನಾಟಕಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

"ನಾವು ಮನಸ್ಸು, ಹೃದಯಗಳನ್ನು ನೇಯೋಣ, ಹರಿಯೋದು ಬೇಡ" ಎಂದು ಹಂಸಲೇಖ ಅವರು ಮನವಿ ಮಾಡಿದರು.

- Advertisement -
- Advertisement -

ಜೇನುಕುರುಬ ಸಮುದಾಯದ ಸಂಗೀತ ಕಲೆಯನ್ನು ಝೀ ಕನ್ನಡ ವಾಹಿನಿಯಲ್ಲಿ ಪ್ರದರ್ಶಿಸೋಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಆಯೋಜಿಸಿದ್ದ ‘ನೆಲದ ಪದ’ ಸಾಂಸ್ಕೃತಿಕ ಯುವಜನ ಉತ್ಸವವನ್ನು ಉದ್ಘಾಟಿಸಿದ ಅವರು, ಜೇನುಕುರುಬ ಯುವಜನರ ಕಲಾ ಪ್ರದರ್ಶನವನ್ನು ನೋಡಿ, ‘ಜೇನುಕುರುಬ ಯುವಕರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ’ ಎಂದರು.

ಝೀ ಕನ್ನಡ ವಾಹಿನಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜಾನಪದ ವಿಚಾರವಾಗಿ ಚರ್ಚಿಸುವಾಗಲೆಲ್ಲ ಯಾವುದಾದರೂ ವಿಶೇಷ ಕಾರ್ಯಕ್ರಮ ರೂಪಿಸಲು ಸಾಧ್ಯವಿದ್ದರೆ ತಿಳಿಸಿ ಸರ್ ಎಂದು ನನಗೆ ಕೇಳಿಕೊಳ್ಳುತ್ತಾರೆ. ನಾನು ಯಾವಾಗಲೂ ಗೊಂದಲದಲ್ಲೇ ಇರುತ್ತಿದ್ದೆ. ಇವತ್ತು ಒಂದು ಸರಿಯಾದ ಚಿತ್ರಣ ಸಿಕ್ಕಿದೆ. ಆ ಜೇನುಕುರುಬ ತಂಡಕ್ಕೆ ಇನ್ನೊಂದಿಷ್ಟು ಅಭ್ಯಾಸ ಕೊಡಿಸಿ, ಅದಕ್ಕೊಂದು ಅಲಂಕಾರಿಕ ರೂಪವನ್ನು ನೀಡಿ, ಝೀ ವಾಹಿನಿಯಲ್ಲಿ ಪ್ರದರ್ಶನ ಪಡಿಸೋಣ ಎಂದರು.

25,000 ರೂ.ಗಳನ್ನು ತಂಡಕ್ಕೆ ಬಹುಮಾನವಾಗಿ ಘೋಷಿಸಿದ ಅವರು, “ಜೇನುಕುರುಬರ ತಂಡ ವೇದಿಕೆಗೆ ಬಂದಾಗ ನನ್ನ ಕಣ್ಣಂಚಿನಲ್ಲಿ ನೀರು ಬಂದವು. ಎಷ್ಟು ಉತ್ಸಾಹ, ಎಷ್ಟು ಅದಮ್ಯವಾದ ಚೈತನ್ಯ ಅವರದ್ದು. ಲಯಬದ್ಧತೆಯೊಂದಿಗೆ ಸಭೆಗೆ ಬಂದು ಸಭಾ ಗೌರವವನ್ನು ಪಡೆದು, ಅವರು ಹಾಡಿದ ನಾಲ್ಕು ರಾಗಗಳೂ ಬಹಳ ಅದ್ಭುತವಾಗಿದ್ದವು” ಎಂದು ಬಣ್ಣಿಸಿದರು.

ಎಲ್ಲ ಸಂಗೀತ ಪ್ರಕಾರಗಳು ಇಂದು ಶ್ರುತಿ ಬದ್ಧತೆಗೆ ಹಾಗೂ ಶಿಸ್ತಿಗೆ ಒಳಪಟ್ಟಿವೆ. ನಾವು ಒಂಚೂರು ಶ್ರುತಿ ಹಾಗೂ ಶಿಸ್ತಿಗೆ ಒಳಪಟ್ಟರೆ ನಾವು ಮೇಲೇರುವ ಸ್ಥಿತಿ ಹೆಚ್ಚಾಗುತ್ತದೆ. ನಮ್ಮ ಮೆದುಳೇ ನಮ್ಮ ಹೆಡ್‌ ಮಾಸ್ಟರ್‌. ಈ ಮೆದುಳಿಗೆ ಯಾರು ಹೆಡ್ ಮಾಸ್ಟರ್‌ ಎಂಬುದು ನಮಗೆ ಗೊತ್ತಿಲ್ಲ. ಈ ಮೆದುಳು ನಮ್ಮನ್ನು ನಿಯಂತ್ರಿಸುತ್ತದೆ. ಈ ಮೆದುಳಿಗೆ ನೀವು ಆಜ್ಞೆ ಮಾಡಿ. ನೀವು ಅಂದುಕೊಂಡಂತೆ ಆಗುತ್ತೀರಿ. ಅಂದುಕೋ, ನೀ ಆಗುತ್ತೀಯ ಎಂದು ಪ್ರೋತ್ಸಾಹಿಸಿದರು.

ಜಗತ್ತಿನಲ್ಲಿ ಜನಪದದ ಕುರಿತು ಅನುಕಂಪದ ಅಲೆ ಎದ್ದಿದೆ. ಜನಪದರು ಶ್ರುತಿಬದ್ಧತೆಗೆ ಮರಳಿದ್ದಾರೆ. ಉತ್ಸಾಹ, ಹುಮ್ಮಸ್ಸು ಹುಟ್ಟಿನಿಂದಲೇ ಜನಪದರಿಗೆ ಇದೆ. ಆದರೆ ಕೊಂಚ ಶ್ರುತಿ, ಲಯಬದ್ಧತೆ, ಕೊಂಚ ಸಭಾ ಮರ್ಯಾದೆ ನಡೆಸಿಕೊಟ್ಟರೆ ಜಗತ್ತು ಜನಪದರನ್ನು ಆಲಂಗಿಸಲು ಸಿದ್ಧವಾಗಿದೆ ಎಂದು ಹೇಳಿದರು.

ತಮ್ಮ ದೇಸಿ ಸಂಸ್ಥೆ ಕುರಿತು ಮಾತನಾಡಿದ ಅವರು, “ಈ ಸಂಸ್ಥೆಯಲ್ಲಿ ಈ ನೆಲದ ಜಾನಪದೀಯ ಸೊಗಡನ್ನು ಕಟ್ಟಲು, ಪಠ್ಯವನ್ನು ರೂಪಿಸಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಬಹಳ ದಿಕ್ಕು ತೋಚದೆ ಈಗಲೂ ಒದ್ದಾಡುತ್ತಿದ್ದೇವೆ. ಜಾನಪದೀಯ ಸೊಗಡನ್ನು ಪಠ್ಯದ ಮೂಲಕ ಹೇಳಲು ಸಾಧ್ಯವೇ? ಅದು ಸ್ವಾ- ಅನುಭವದಿಂದ ಬರಬೇಕು. ಜನಪದ ಎಂಬುದು ಸಂಭ್ರಮ, ಸೊಗಡು. ಆ ಸೊಗಡಿಗೆ ಪಠ್ಯವನ್ನು ರೂಪಿಸುವುದು ಬಹಳ ಕಷ್ಟ. ಆದರೂ ನಾವು ಒಂದು ತಾಳ ಶಾಸ್ತ್ರವನ್ನು ರಚಿಸಿದ್ದೇವೆ. ಜನಪದ ಸಂಗೀತವನ್ನು ಕಲಿಯುವುದಕ್ಕಾಗಿ ಶಿಸ್ತುಬದ್ಧ ಸಂಗೀತ ಲಿಪಿ ಹಾಗೂ ಪಠ್ಯಕ್ರಮವನ್ನು ರೂಪಿಸಿದ್ದೇವೆ. ಜೊತೆಗೆ ಪ್ರದರ್ಶನ ಕಲೆಗಳಿಗೆ ಬೇಕಾಗಿರುವ ಎಲ್ಲ ಸುಧಾರಣೆ ಕುರಿತು ಪಠ್ಯದಲ್ಲಿ ಸೇರಿಸಿದ್ದೇವೆ. ನಮಗೆ ಈಗ ವಿದ್ಯಾರ್ಥಿಗಳು ಅಥವಾ ಪ್ರತಿಭೆಗಳು ಬೇಕಿದ್ದಾರೆ. ಹಂಸಲೇಖ ದೇಸಿ ವಿದ್ಯಾ ಸಂಸ್ಥೆ ನಿಮ್ಮ ಸೇವೆಗೆ ಕಂಕಣ ಕಟ್ಟಿ ನಿಂತಿದೆ” ಎಂದು ಆಹ್ವಾನಿಸಿದರು.

ನೀವು ನುಡಿಸುವ ಡೊಳ್ಳು ವಾದ್ಯವನ್ನು ಶ್ರುತಿ ಮಾಡಲು ಯೋಗ್ಯವಾಗಿ ತಯಾರು ಮಾಡಿದ್ದೇವೆ. ಅದನ್ನು ಇನ್ನೂ ನಾಡಿಗೆ ಅರ್ಪಣೆ ಮಾಡಿಲ್ಲ ಎಂದ ಅವರು, ಯಾರಾದರೂ 25 ಜನರ ತಂಡಗಳಾಗಿ ಬಂದರೆ ಅಥವಾ ನಾನಾಗಿಯೇ ಬಂದು ತಯಾರು ಮಾಡುವ ಕೆಲಸವನ್ನು ಮಾಡಬಲ್ಲೆ. ಲಯಬದ್ಧತೆ ರೂಪಿಸಿಕೊಂಡರೆ ಜನಪದಕ್ಕೆ ಕೊಂಬು, ಕೋಡುಗಳು ಹೆಚ್ಚಾಗುತ್ತವೆ. ನಾನು ನಿಮ್ಮ ಜೊತೆಯಲ್ಲಿ ಮುಂದೆ ಕೆಲಸ ಮಾಡುತ್ತೇನೆ ಎಂದರು.

“ನಾವು ನೇಯೋಣ, ಹರಿಯದಿರೋಣ. ಬಟ್ಟೆಯನ್ನು, ಸಂಭ್ರಮವನ್ನು, ಅಕ್ಷರವನ್ನು, ಮನಸ್ಸು, ಹೃದಯಗಳನ್ನು ನೇಯೋಣ. ಆದರೆ ಹರಿಯೋದು ಬೇಡ” ಎಂದು ಅವರು ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು.

ಹಂಸಲೇಖ ಅವರು ಮಾರ್ಮಿಕವಾಗಿ ಹೇಳಿದ ‘ನೇಯುವ ಕಾರ್ಯ’ವನ್ನು ಉಲ್ಲೇಖಿಸಿ ಮಾತನಾಡಿದ ಸ್ಫೂರ್ತಿಧಾಮದ ಅಧ್ಯಕ್ಷರು, ಐಪಿಎಸ್‌ ನಿವೃತ್ತ ಅಧಿಕಾರಿಯಾಗಿರುವ ಮರಿಸ್ವಾಮಿಯವರು, “ಉತ್ತರಖಾಂಡ್‌ನಲ್ಲಿ ನಡೆದ ಧರ್ಮ ಸಂಸತ್‌ ಇಡೀ ಒಂದು ಜನಾಂಗವನ್ನೇ ನಾಶ ಮಾಡುವ ಮಾತನಾಡುತ್ತದೆ. ಹೀಗಾಗಿ ಹರಿದು ಹಾಕುವ ಕೆಲಸ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆ ಕಾಣುತ್ತದೆ. ನೇಯುವಲ್ಲಿ ನಾವು ಎಲ್ಲಿ ಸೋತುಬಿಡುತ್ತೇವೆ ಎಂಬ ಭಯ ಕಾಡುತ್ತಿದೆ. ಹೀಗೆ ಹರಿಯೋರನ್ನು ಅಧಿಕಾರಕ್ಕೆ ಕೂರಿಸಿದವರು ಯಾರು? ಹಾಲನ್ನು ಹಾಕಿ ಸಾಕಿ, ಗಟ್ಟಿ ಮಾಡಿ ಕೂರಿಸಿದವರು ನಾವು. ಈಗ ಅವರು ಇಡೀ ದೇಶವನ್ನೇ ಹರಿದುಹಾಕುವ ಮಾತನಾಡುತ್ತಿದ್ದಾರೆ. ಇಡೀ ದೇಶ ಯೋಚಿಸಬೇಕಾದ ವಿಚಾರವಿದು” ಎಂದು ಎಚ್ಚರಿಸಿದರು.

“ಸಮಾತೆಯ ಹೆಸರಲ್ಲಿ ಅಸಮಾನತೆಯನ್ನು ಹೇಳುವವರು ಬಯಲಾಗುತ್ತಿದ್ದಾರೆ. ನಾವು ಪ್ರೊಗೆಸಿವ್ ಎಂದುಕೊಂಡ ಅನೇಕರು ಆಂತರಿಕವಾಗಿ ರಿಗ್ರೆಸಿವ್ ಆಗಿದ್ದಾರೆ. ತಮ್ಮ ಆತ್ಮವನ್ನು ತೆರೆದಿಟ್ಟು ತಾವು ಎಲ್ಲಿದ್ದೇವೆ ಎಂಬುದನ್ನು ತೋರಿಸುತ್ತಿದ್ದಾರೆ” ಎಂದರು.

ಪ್ರಗತಿಪರ ಆಗುವುದು ಹೆಣ್ಣುಮಕ್ಕಳಿಗೆ ಅನಿವಾರ್ಯ: ಎಂ.ಡಿ.ಪಲ್ಲವಿ

ಗಾಯಕಿ ಎಂ.ಡಿ.ಪಲ್ಲವಿ ಅವರು ಮಾತನಾಡಿ, “ನಾವು ನಮ್ಮ ಬದುಕನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಬೇಕು. ನನ್ನ ಹೋರಾಟ- ನಾನು ಪ್ರಗತಿಪರ ಆಗಿರಬೇಕು ಎಂಬುದಕ್ಕಾಗಿರುತ್ತದೆ. ನಾನು ಪ್ರಗತಿಪರ ಆಗಿದ್ದೇನೆ, ಆಗಿರುತ್ತೇನೆ. ಪ್ರಗತಿಪರ ಆಗುವುದು ಹೆಣ್ಣು ಮಕ್ಕಳಿಗೆ ಅನಿವಾರ್ಯ. ಇಲ್ಲವಾದರೆ ವಿದ್ಯಾಭ್ಯಾಸವೂ ಸಿಗುವುದಿಲ್ಲ. ಸಮಾಜ ಪ್ರಗತಿಗಪರ ಆಗಬೇಕೆಂದರೆ ವಿದ್ಯಾಭ್ಯಾಸದ ಜೊತೆಗೆ ಸಮಾನತೆಯೂ ಮುಖ್ಯ. ಆ ಸಮಾನತೆಯನ್ನು ಡಾ.ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಕೊಟ್ಟಿದ್ದಾರೆ. ಸಮಾನತೆಯನ್ನು ಸಂಪೂರ್ಣವಾಗಿ ತರಲು ಸಾಧ್ಯವಾಗಿಲ್ಲ. ಅದರತ್ತ ನಾವು ಹೆಜ್ಜೆ ಹಾಕಬೇಕು. ನಮ್ಮ ದಾರಿಯನ್ನು ನಾವೇ ಕಲ್ಪಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಹೋರಾಟ- ಪ್ರೀತಿಯಿಂದಲೂ ಸಾಧ್ಯವಿದೆ. ಕಿರುಚದೆ, ರೇಗದ ಮೆಲುದನಿಯಲ್ಲಿ ಲಯಬದ್ಧವಾಗಿ, ಶ್ರುತಿಬದ್ಧವಾಗಿಯೂ ಹೋರಾಟ ಮಾಡಬಹುದು ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತರಾದ ವಿಜಯಮ್ಮ ಮಾತನಾಡಿ, “ಇಂದು ಮಾತನಾಡಿದರೆ ದೇಶದ್ರೋಹ ಎಂಬ ಪರಿಸ್ಥಿತಿ ಬಂದಿರುವುದರಿಂದ ನಾವು ಮಾತನಾಡುವುದಿಲ್ಲ. ನಿಮ್ಮ ಧರ್ಮ, ನಿಮ್ಮ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳು ನಿಮಗಿರಲಿ; ನಮ್ಮ ಅಭಿಪ್ರಾಯಗಳನ್ನು ಹೇಳುವುದಕ್ಕೆ ನಾವು ಇನ್ನೊಂದು ದಾರಿಯನ್ನು ಹುಡುಕುತ್ತೇವೆ. ನಮ್ಮ ಸಾಂಸ್ಕೃತಿಕ ದಾರಿಯನ್ನು ಪ್ರತಿರೋಧದ ದನಿಯಾಗಿ ಬಳಸಿಕೊಳ್ಳಲು ಪ್ರಯತ್ನಪಡುತ್ತಿದ್ದೇವೆ” ಎಂದರು.

ಚಲನಚಿತ್ರ ನಿರ್ದೇಶಕ ಮಂಸೋರೆ ಮಾತನಾಡಿ ಕೆವಿಎಸ್‌ ಸಂಘಟನೆಯ ಕೆಲಸಗಳನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, “ನಿನ್ನೆ ಫೇಸ್‌ಬುಕ್‌ನಲ್ಲಿ ಒಂದು ಘಟನೆ ಓದಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂದು ನಾಚಿಕೆಯಾಗುತ್ತದೆ. ನಾವು ಜಾತಿ, ಧರ್ಮದಿಂದ ಹೊರಬರಬೇಕಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ಇವುಗಳಿಂದ ಹೊರಬೇಕಾಗಿದೆ. ನಾವು ವೈಯಕ್ತಿಕವಾಗಿಯೂ ಹೋರಾಡಿ ಜಾತಿ, ಧರ್ಮದ ಸಂಕೋಲೆಗಳಿಂದ ಬಿಡುಗಡೆ ಹೊಂದಿ ಮನುಷ್ಯರಾಗಲು ಪ್ರಯತ್ನಪಡಬೇಕು” ಎಂದು ಆಶಿಸಿದರು.

ಬಿ.ಎಂ.ಗಿರಿರಾಜ್ ಮಾತನಾಡಿ, “ಕುವೆಂಪು ಅವರು ಹೇಳಿದಂತೆ ಮನುಷ್ಯನಿಗೆ ಮೂರು ಹಸಿವುಗಳು ಇರಬೇಕಾಗುತ್ತದೆ. ಅಧ್ಯಾತ್ಮದ ಹಸಿವು, ಆಧುನಿಕತೆಯ ಹಸಿವು, ಸಮಾನತೆ ಹಸಿವು. ಈ ಹಸಿವುಗಳು ತುಂಬಿದರೆ ನಾವು ತಪ್ಪು ಮಾಡುವುದು ಕಡಿಮೆಯಾಗುತ್ತದೆ. ಕುವೆಂಪು ಅವರು ಅಧ್ಯಾತ್ಮದ ಕಡೆಗೂ, ಆಧುನಿಕತೆಯ ಕಡೆಗೂ ಒಮ್ಮೆಲೇ ಯೋಚಿಸುತ್ತಿದ್ದರು” ಎಂದು ವಿವರಿಸಿದರು.

ನೆಲದ ಪದ ಕಾರ್ಯಕ್ರಮ ಬಹುತ್ವವನ್ನು ಪ್ರತಿಪಾದಿಸಿತು. (ಹೆಚ್ಚಿನ ವರದಿಯನ್ನು ‘ಇಲ್ಲಿ’ ಓದಬಹುದು.)


ಇದನ್ನೂ ಓದಿರಿ: ಬಹುತ್ವ ಬದುಕಿನ ಸಂದೇಶ ಸಾರಿದ ‘ನೆಲದ ಪದ’ ಸಾಂಸ್ಕೃತಿಕ ಉತ್ಸವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The present needed culture movement

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...