Homeಕರ್ನಾಟಕಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

"ನಾವು ಮನಸ್ಸು, ಹೃದಯಗಳನ್ನು ನೇಯೋಣ, ಹರಿಯೋದು ಬೇಡ" ಎಂದು ಹಂಸಲೇಖ ಅವರು ಮನವಿ ಮಾಡಿದರು.

- Advertisement -
- Advertisement -

ಜೇನುಕುರುಬ ಸಮುದಾಯದ ಸಂಗೀತ ಕಲೆಯನ್ನು ಝೀ ಕನ್ನಡ ವಾಹಿನಿಯಲ್ಲಿ ಪ್ರದರ್ಶಿಸೋಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಆಯೋಜಿಸಿದ್ದ ‘ನೆಲದ ಪದ’ ಸಾಂಸ್ಕೃತಿಕ ಯುವಜನ ಉತ್ಸವವನ್ನು ಉದ್ಘಾಟಿಸಿದ ಅವರು, ಜೇನುಕುರುಬ ಯುವಜನರ ಕಲಾ ಪ್ರದರ್ಶನವನ್ನು ನೋಡಿ, ‘ಜೇನುಕುರುಬ ಯುವಕರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ’ ಎಂದರು.

ಝೀ ಕನ್ನಡ ವಾಹಿನಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜಾನಪದ ವಿಚಾರವಾಗಿ ಚರ್ಚಿಸುವಾಗಲೆಲ್ಲ ಯಾವುದಾದರೂ ವಿಶೇಷ ಕಾರ್ಯಕ್ರಮ ರೂಪಿಸಲು ಸಾಧ್ಯವಿದ್ದರೆ ತಿಳಿಸಿ ಸರ್ ಎಂದು ನನಗೆ ಕೇಳಿಕೊಳ್ಳುತ್ತಾರೆ. ನಾನು ಯಾವಾಗಲೂ ಗೊಂದಲದಲ್ಲೇ ಇರುತ್ತಿದ್ದೆ. ಇವತ್ತು ಒಂದು ಸರಿಯಾದ ಚಿತ್ರಣ ಸಿಕ್ಕಿದೆ. ಆ ಜೇನುಕುರುಬ ತಂಡಕ್ಕೆ ಇನ್ನೊಂದಿಷ್ಟು ಅಭ್ಯಾಸ ಕೊಡಿಸಿ, ಅದಕ್ಕೊಂದು ಅಲಂಕಾರಿಕ ರೂಪವನ್ನು ನೀಡಿ, ಝೀ ವಾಹಿನಿಯಲ್ಲಿ ಪ್ರದರ್ಶನ ಪಡಿಸೋಣ ಎಂದರು.

25,000 ರೂ.ಗಳನ್ನು ತಂಡಕ್ಕೆ ಬಹುಮಾನವಾಗಿ ಘೋಷಿಸಿದ ಅವರು, “ಜೇನುಕುರುಬರ ತಂಡ ವೇದಿಕೆಗೆ ಬಂದಾಗ ನನ್ನ ಕಣ್ಣಂಚಿನಲ್ಲಿ ನೀರು ಬಂದವು. ಎಷ್ಟು ಉತ್ಸಾಹ, ಎಷ್ಟು ಅದಮ್ಯವಾದ ಚೈತನ್ಯ ಅವರದ್ದು. ಲಯಬದ್ಧತೆಯೊಂದಿಗೆ ಸಭೆಗೆ ಬಂದು ಸಭಾ ಗೌರವವನ್ನು ಪಡೆದು, ಅವರು ಹಾಡಿದ ನಾಲ್ಕು ರಾಗಗಳೂ ಬಹಳ ಅದ್ಭುತವಾಗಿದ್ದವು” ಎಂದು ಬಣ್ಣಿಸಿದರು.

ಎಲ್ಲ ಸಂಗೀತ ಪ್ರಕಾರಗಳು ಇಂದು ಶ್ರುತಿ ಬದ್ಧತೆಗೆ ಹಾಗೂ ಶಿಸ್ತಿಗೆ ಒಳಪಟ್ಟಿವೆ. ನಾವು ಒಂಚೂರು ಶ್ರುತಿ ಹಾಗೂ ಶಿಸ್ತಿಗೆ ಒಳಪಟ್ಟರೆ ನಾವು ಮೇಲೇರುವ ಸ್ಥಿತಿ ಹೆಚ್ಚಾಗುತ್ತದೆ. ನಮ್ಮ ಮೆದುಳೇ ನಮ್ಮ ಹೆಡ್‌ ಮಾಸ್ಟರ್‌. ಈ ಮೆದುಳಿಗೆ ಯಾರು ಹೆಡ್ ಮಾಸ್ಟರ್‌ ಎಂಬುದು ನಮಗೆ ಗೊತ್ತಿಲ್ಲ. ಈ ಮೆದುಳು ನಮ್ಮನ್ನು ನಿಯಂತ್ರಿಸುತ್ತದೆ. ಈ ಮೆದುಳಿಗೆ ನೀವು ಆಜ್ಞೆ ಮಾಡಿ. ನೀವು ಅಂದುಕೊಂಡಂತೆ ಆಗುತ್ತೀರಿ. ಅಂದುಕೋ, ನೀ ಆಗುತ್ತೀಯ ಎಂದು ಪ್ರೋತ್ಸಾಹಿಸಿದರು.

ಜಗತ್ತಿನಲ್ಲಿ ಜನಪದದ ಕುರಿತು ಅನುಕಂಪದ ಅಲೆ ಎದ್ದಿದೆ. ಜನಪದರು ಶ್ರುತಿಬದ್ಧತೆಗೆ ಮರಳಿದ್ದಾರೆ. ಉತ್ಸಾಹ, ಹುಮ್ಮಸ್ಸು ಹುಟ್ಟಿನಿಂದಲೇ ಜನಪದರಿಗೆ ಇದೆ. ಆದರೆ ಕೊಂಚ ಶ್ರುತಿ, ಲಯಬದ್ಧತೆ, ಕೊಂಚ ಸಭಾ ಮರ್ಯಾದೆ ನಡೆಸಿಕೊಟ್ಟರೆ ಜಗತ್ತು ಜನಪದರನ್ನು ಆಲಂಗಿಸಲು ಸಿದ್ಧವಾಗಿದೆ ಎಂದು ಹೇಳಿದರು.

ತಮ್ಮ ದೇಸಿ ಸಂಸ್ಥೆ ಕುರಿತು ಮಾತನಾಡಿದ ಅವರು, “ಈ ಸಂಸ್ಥೆಯಲ್ಲಿ ಈ ನೆಲದ ಜಾನಪದೀಯ ಸೊಗಡನ್ನು ಕಟ್ಟಲು, ಪಠ್ಯವನ್ನು ರೂಪಿಸಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಬಹಳ ದಿಕ್ಕು ತೋಚದೆ ಈಗಲೂ ಒದ್ದಾಡುತ್ತಿದ್ದೇವೆ. ಜಾನಪದೀಯ ಸೊಗಡನ್ನು ಪಠ್ಯದ ಮೂಲಕ ಹೇಳಲು ಸಾಧ್ಯವೇ? ಅದು ಸ್ವಾ- ಅನುಭವದಿಂದ ಬರಬೇಕು. ಜನಪದ ಎಂಬುದು ಸಂಭ್ರಮ, ಸೊಗಡು. ಆ ಸೊಗಡಿಗೆ ಪಠ್ಯವನ್ನು ರೂಪಿಸುವುದು ಬಹಳ ಕಷ್ಟ. ಆದರೂ ನಾವು ಒಂದು ತಾಳ ಶಾಸ್ತ್ರವನ್ನು ರಚಿಸಿದ್ದೇವೆ. ಜನಪದ ಸಂಗೀತವನ್ನು ಕಲಿಯುವುದಕ್ಕಾಗಿ ಶಿಸ್ತುಬದ್ಧ ಸಂಗೀತ ಲಿಪಿ ಹಾಗೂ ಪಠ್ಯಕ್ರಮವನ್ನು ರೂಪಿಸಿದ್ದೇವೆ. ಜೊತೆಗೆ ಪ್ರದರ್ಶನ ಕಲೆಗಳಿಗೆ ಬೇಕಾಗಿರುವ ಎಲ್ಲ ಸುಧಾರಣೆ ಕುರಿತು ಪಠ್ಯದಲ್ಲಿ ಸೇರಿಸಿದ್ದೇವೆ. ನಮಗೆ ಈಗ ವಿದ್ಯಾರ್ಥಿಗಳು ಅಥವಾ ಪ್ರತಿಭೆಗಳು ಬೇಕಿದ್ದಾರೆ. ಹಂಸಲೇಖ ದೇಸಿ ವಿದ್ಯಾ ಸಂಸ್ಥೆ ನಿಮ್ಮ ಸೇವೆಗೆ ಕಂಕಣ ಕಟ್ಟಿ ನಿಂತಿದೆ” ಎಂದು ಆಹ್ವಾನಿಸಿದರು.

ನೀವು ನುಡಿಸುವ ಡೊಳ್ಳು ವಾದ್ಯವನ್ನು ಶ್ರುತಿ ಮಾಡಲು ಯೋಗ್ಯವಾಗಿ ತಯಾರು ಮಾಡಿದ್ದೇವೆ. ಅದನ್ನು ಇನ್ನೂ ನಾಡಿಗೆ ಅರ್ಪಣೆ ಮಾಡಿಲ್ಲ ಎಂದ ಅವರು, ಯಾರಾದರೂ 25 ಜನರ ತಂಡಗಳಾಗಿ ಬಂದರೆ ಅಥವಾ ನಾನಾಗಿಯೇ ಬಂದು ತಯಾರು ಮಾಡುವ ಕೆಲಸವನ್ನು ಮಾಡಬಲ್ಲೆ. ಲಯಬದ್ಧತೆ ರೂಪಿಸಿಕೊಂಡರೆ ಜನಪದಕ್ಕೆ ಕೊಂಬು, ಕೋಡುಗಳು ಹೆಚ್ಚಾಗುತ್ತವೆ. ನಾನು ನಿಮ್ಮ ಜೊತೆಯಲ್ಲಿ ಮುಂದೆ ಕೆಲಸ ಮಾಡುತ್ತೇನೆ ಎಂದರು.

“ನಾವು ನೇಯೋಣ, ಹರಿಯದಿರೋಣ. ಬಟ್ಟೆಯನ್ನು, ಸಂಭ್ರಮವನ್ನು, ಅಕ್ಷರವನ್ನು, ಮನಸ್ಸು, ಹೃದಯಗಳನ್ನು ನೇಯೋಣ. ಆದರೆ ಹರಿಯೋದು ಬೇಡ” ಎಂದು ಅವರು ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು.

ಹಂಸಲೇಖ ಅವರು ಮಾರ್ಮಿಕವಾಗಿ ಹೇಳಿದ ‘ನೇಯುವ ಕಾರ್ಯ’ವನ್ನು ಉಲ್ಲೇಖಿಸಿ ಮಾತನಾಡಿದ ಸ್ಫೂರ್ತಿಧಾಮದ ಅಧ್ಯಕ್ಷರು, ಐಪಿಎಸ್‌ ನಿವೃತ್ತ ಅಧಿಕಾರಿಯಾಗಿರುವ ಮರಿಸ್ವಾಮಿಯವರು, “ಉತ್ತರಖಾಂಡ್‌ನಲ್ಲಿ ನಡೆದ ಧರ್ಮ ಸಂಸತ್‌ ಇಡೀ ಒಂದು ಜನಾಂಗವನ್ನೇ ನಾಶ ಮಾಡುವ ಮಾತನಾಡುತ್ತದೆ. ಹೀಗಾಗಿ ಹರಿದು ಹಾಕುವ ಕೆಲಸ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆ ಕಾಣುತ್ತದೆ. ನೇಯುವಲ್ಲಿ ನಾವು ಎಲ್ಲಿ ಸೋತುಬಿಡುತ್ತೇವೆ ಎಂಬ ಭಯ ಕಾಡುತ್ತಿದೆ. ಹೀಗೆ ಹರಿಯೋರನ್ನು ಅಧಿಕಾರಕ್ಕೆ ಕೂರಿಸಿದವರು ಯಾರು? ಹಾಲನ್ನು ಹಾಕಿ ಸಾಕಿ, ಗಟ್ಟಿ ಮಾಡಿ ಕೂರಿಸಿದವರು ನಾವು. ಈಗ ಅವರು ಇಡೀ ದೇಶವನ್ನೇ ಹರಿದುಹಾಕುವ ಮಾತನಾಡುತ್ತಿದ್ದಾರೆ. ಇಡೀ ದೇಶ ಯೋಚಿಸಬೇಕಾದ ವಿಚಾರವಿದು” ಎಂದು ಎಚ್ಚರಿಸಿದರು.

“ಸಮಾತೆಯ ಹೆಸರಲ್ಲಿ ಅಸಮಾನತೆಯನ್ನು ಹೇಳುವವರು ಬಯಲಾಗುತ್ತಿದ್ದಾರೆ. ನಾವು ಪ್ರೊಗೆಸಿವ್ ಎಂದುಕೊಂಡ ಅನೇಕರು ಆಂತರಿಕವಾಗಿ ರಿಗ್ರೆಸಿವ್ ಆಗಿದ್ದಾರೆ. ತಮ್ಮ ಆತ್ಮವನ್ನು ತೆರೆದಿಟ್ಟು ತಾವು ಎಲ್ಲಿದ್ದೇವೆ ಎಂಬುದನ್ನು ತೋರಿಸುತ್ತಿದ್ದಾರೆ” ಎಂದರು.

ಪ್ರಗತಿಪರ ಆಗುವುದು ಹೆಣ್ಣುಮಕ್ಕಳಿಗೆ ಅನಿವಾರ್ಯ: ಎಂ.ಡಿ.ಪಲ್ಲವಿ

ಗಾಯಕಿ ಎಂ.ಡಿ.ಪಲ್ಲವಿ ಅವರು ಮಾತನಾಡಿ, “ನಾವು ನಮ್ಮ ಬದುಕನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಬೇಕು. ನನ್ನ ಹೋರಾಟ- ನಾನು ಪ್ರಗತಿಪರ ಆಗಿರಬೇಕು ಎಂಬುದಕ್ಕಾಗಿರುತ್ತದೆ. ನಾನು ಪ್ರಗತಿಪರ ಆಗಿದ್ದೇನೆ, ಆಗಿರುತ್ತೇನೆ. ಪ್ರಗತಿಪರ ಆಗುವುದು ಹೆಣ್ಣು ಮಕ್ಕಳಿಗೆ ಅನಿವಾರ್ಯ. ಇಲ್ಲವಾದರೆ ವಿದ್ಯಾಭ್ಯಾಸವೂ ಸಿಗುವುದಿಲ್ಲ. ಸಮಾಜ ಪ್ರಗತಿಗಪರ ಆಗಬೇಕೆಂದರೆ ವಿದ್ಯಾಭ್ಯಾಸದ ಜೊತೆಗೆ ಸಮಾನತೆಯೂ ಮುಖ್ಯ. ಆ ಸಮಾನತೆಯನ್ನು ಡಾ.ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಕೊಟ್ಟಿದ್ದಾರೆ. ಸಮಾನತೆಯನ್ನು ಸಂಪೂರ್ಣವಾಗಿ ತರಲು ಸಾಧ್ಯವಾಗಿಲ್ಲ. ಅದರತ್ತ ನಾವು ಹೆಜ್ಜೆ ಹಾಕಬೇಕು. ನಮ್ಮ ದಾರಿಯನ್ನು ನಾವೇ ಕಲ್ಪಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಹೋರಾಟ- ಪ್ರೀತಿಯಿಂದಲೂ ಸಾಧ್ಯವಿದೆ. ಕಿರುಚದೆ, ರೇಗದ ಮೆಲುದನಿಯಲ್ಲಿ ಲಯಬದ್ಧವಾಗಿ, ಶ್ರುತಿಬದ್ಧವಾಗಿಯೂ ಹೋರಾಟ ಮಾಡಬಹುದು ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತರಾದ ವಿಜಯಮ್ಮ ಮಾತನಾಡಿ, “ಇಂದು ಮಾತನಾಡಿದರೆ ದೇಶದ್ರೋಹ ಎಂಬ ಪರಿಸ್ಥಿತಿ ಬಂದಿರುವುದರಿಂದ ನಾವು ಮಾತನಾಡುವುದಿಲ್ಲ. ನಿಮ್ಮ ಧರ್ಮ, ನಿಮ್ಮ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳು ನಿಮಗಿರಲಿ; ನಮ್ಮ ಅಭಿಪ್ರಾಯಗಳನ್ನು ಹೇಳುವುದಕ್ಕೆ ನಾವು ಇನ್ನೊಂದು ದಾರಿಯನ್ನು ಹುಡುಕುತ್ತೇವೆ. ನಮ್ಮ ಸಾಂಸ್ಕೃತಿಕ ದಾರಿಯನ್ನು ಪ್ರತಿರೋಧದ ದನಿಯಾಗಿ ಬಳಸಿಕೊಳ್ಳಲು ಪ್ರಯತ್ನಪಡುತ್ತಿದ್ದೇವೆ” ಎಂದರು.

ಚಲನಚಿತ್ರ ನಿರ್ದೇಶಕ ಮಂಸೋರೆ ಮಾತನಾಡಿ ಕೆವಿಎಸ್‌ ಸಂಘಟನೆಯ ಕೆಲಸಗಳನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, “ನಿನ್ನೆ ಫೇಸ್‌ಬುಕ್‌ನಲ್ಲಿ ಒಂದು ಘಟನೆ ಓದಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂದು ನಾಚಿಕೆಯಾಗುತ್ತದೆ. ನಾವು ಜಾತಿ, ಧರ್ಮದಿಂದ ಹೊರಬರಬೇಕಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ಇವುಗಳಿಂದ ಹೊರಬೇಕಾಗಿದೆ. ನಾವು ವೈಯಕ್ತಿಕವಾಗಿಯೂ ಹೋರಾಡಿ ಜಾತಿ, ಧರ್ಮದ ಸಂಕೋಲೆಗಳಿಂದ ಬಿಡುಗಡೆ ಹೊಂದಿ ಮನುಷ್ಯರಾಗಲು ಪ್ರಯತ್ನಪಡಬೇಕು” ಎಂದು ಆಶಿಸಿದರು.

ಬಿ.ಎಂ.ಗಿರಿರಾಜ್ ಮಾತನಾಡಿ, “ಕುವೆಂಪು ಅವರು ಹೇಳಿದಂತೆ ಮನುಷ್ಯನಿಗೆ ಮೂರು ಹಸಿವುಗಳು ಇರಬೇಕಾಗುತ್ತದೆ. ಅಧ್ಯಾತ್ಮದ ಹಸಿವು, ಆಧುನಿಕತೆಯ ಹಸಿವು, ಸಮಾನತೆ ಹಸಿವು. ಈ ಹಸಿವುಗಳು ತುಂಬಿದರೆ ನಾವು ತಪ್ಪು ಮಾಡುವುದು ಕಡಿಮೆಯಾಗುತ್ತದೆ. ಕುವೆಂಪು ಅವರು ಅಧ್ಯಾತ್ಮದ ಕಡೆಗೂ, ಆಧುನಿಕತೆಯ ಕಡೆಗೂ ಒಮ್ಮೆಲೇ ಯೋಚಿಸುತ್ತಿದ್ದರು” ಎಂದು ವಿವರಿಸಿದರು.

ನೆಲದ ಪದ ಕಾರ್ಯಕ್ರಮ ಬಹುತ್ವವನ್ನು ಪ್ರತಿಪಾದಿಸಿತು. (ಹೆಚ್ಚಿನ ವರದಿಯನ್ನು ‘ಇಲ್ಲಿ’ ಓದಬಹುದು.)


ಇದನ್ನೂ ಓದಿರಿ: ಬಹುತ್ವ ಬದುಕಿನ ಸಂದೇಶ ಸಾರಿದ ‘ನೆಲದ ಪದ’ ಸಾಂಸ್ಕೃತಿಕ ಉತ್ಸವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The present needed culture movement

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....