Homeಕರ್ನಾಟಕಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

"ನಾವು ಮನಸ್ಸು, ಹೃದಯಗಳನ್ನು ನೇಯೋಣ, ಹರಿಯೋದು ಬೇಡ" ಎಂದು ಹಂಸಲೇಖ ಅವರು ಮನವಿ ಮಾಡಿದರು.

- Advertisement -
- Advertisement -

ಜೇನುಕುರುಬ ಸಮುದಾಯದ ಸಂಗೀತ ಕಲೆಯನ್ನು ಝೀ ಕನ್ನಡ ವಾಹಿನಿಯಲ್ಲಿ ಪ್ರದರ್ಶಿಸೋಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಆಯೋಜಿಸಿದ್ದ ‘ನೆಲದ ಪದ’ ಸಾಂಸ್ಕೃತಿಕ ಯುವಜನ ಉತ್ಸವವನ್ನು ಉದ್ಘಾಟಿಸಿದ ಅವರು, ಜೇನುಕುರುಬ ಯುವಜನರ ಕಲಾ ಪ್ರದರ್ಶನವನ್ನು ನೋಡಿ, ‘ಜೇನುಕುರುಬ ಯುವಕರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ’ ಎಂದರು.

ಝೀ ಕನ್ನಡ ವಾಹಿನಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜಾನಪದ ವಿಚಾರವಾಗಿ ಚರ್ಚಿಸುವಾಗಲೆಲ್ಲ ಯಾವುದಾದರೂ ವಿಶೇಷ ಕಾರ್ಯಕ್ರಮ ರೂಪಿಸಲು ಸಾಧ್ಯವಿದ್ದರೆ ತಿಳಿಸಿ ಸರ್ ಎಂದು ನನಗೆ ಕೇಳಿಕೊಳ್ಳುತ್ತಾರೆ. ನಾನು ಯಾವಾಗಲೂ ಗೊಂದಲದಲ್ಲೇ ಇರುತ್ತಿದ್ದೆ. ಇವತ್ತು ಒಂದು ಸರಿಯಾದ ಚಿತ್ರಣ ಸಿಕ್ಕಿದೆ. ಆ ಜೇನುಕುರುಬ ತಂಡಕ್ಕೆ ಇನ್ನೊಂದಿಷ್ಟು ಅಭ್ಯಾಸ ಕೊಡಿಸಿ, ಅದಕ್ಕೊಂದು ಅಲಂಕಾರಿಕ ರೂಪವನ್ನು ನೀಡಿ, ಝೀ ವಾಹಿನಿಯಲ್ಲಿ ಪ್ರದರ್ಶನ ಪಡಿಸೋಣ ಎಂದರು.

25,000 ರೂ.ಗಳನ್ನು ತಂಡಕ್ಕೆ ಬಹುಮಾನವಾಗಿ ಘೋಷಿಸಿದ ಅವರು, “ಜೇನುಕುರುಬರ ತಂಡ ವೇದಿಕೆಗೆ ಬಂದಾಗ ನನ್ನ ಕಣ್ಣಂಚಿನಲ್ಲಿ ನೀರು ಬಂದವು. ಎಷ್ಟು ಉತ್ಸಾಹ, ಎಷ್ಟು ಅದಮ್ಯವಾದ ಚೈತನ್ಯ ಅವರದ್ದು. ಲಯಬದ್ಧತೆಯೊಂದಿಗೆ ಸಭೆಗೆ ಬಂದು ಸಭಾ ಗೌರವವನ್ನು ಪಡೆದು, ಅವರು ಹಾಡಿದ ನಾಲ್ಕು ರಾಗಗಳೂ ಬಹಳ ಅದ್ಭುತವಾಗಿದ್ದವು” ಎಂದು ಬಣ್ಣಿಸಿದರು.

ಎಲ್ಲ ಸಂಗೀತ ಪ್ರಕಾರಗಳು ಇಂದು ಶ್ರುತಿ ಬದ್ಧತೆಗೆ ಹಾಗೂ ಶಿಸ್ತಿಗೆ ಒಳಪಟ್ಟಿವೆ. ನಾವು ಒಂಚೂರು ಶ್ರುತಿ ಹಾಗೂ ಶಿಸ್ತಿಗೆ ಒಳಪಟ್ಟರೆ ನಾವು ಮೇಲೇರುವ ಸ್ಥಿತಿ ಹೆಚ್ಚಾಗುತ್ತದೆ. ನಮ್ಮ ಮೆದುಳೇ ನಮ್ಮ ಹೆಡ್‌ ಮಾಸ್ಟರ್‌. ಈ ಮೆದುಳಿಗೆ ಯಾರು ಹೆಡ್ ಮಾಸ್ಟರ್‌ ಎಂಬುದು ನಮಗೆ ಗೊತ್ತಿಲ್ಲ. ಈ ಮೆದುಳು ನಮ್ಮನ್ನು ನಿಯಂತ್ರಿಸುತ್ತದೆ. ಈ ಮೆದುಳಿಗೆ ನೀವು ಆಜ್ಞೆ ಮಾಡಿ. ನೀವು ಅಂದುಕೊಂಡಂತೆ ಆಗುತ್ತೀರಿ. ಅಂದುಕೋ, ನೀ ಆಗುತ್ತೀಯ ಎಂದು ಪ್ರೋತ್ಸಾಹಿಸಿದರು.

ಜಗತ್ತಿನಲ್ಲಿ ಜನಪದದ ಕುರಿತು ಅನುಕಂಪದ ಅಲೆ ಎದ್ದಿದೆ. ಜನಪದರು ಶ್ರುತಿಬದ್ಧತೆಗೆ ಮರಳಿದ್ದಾರೆ. ಉತ್ಸಾಹ, ಹುಮ್ಮಸ್ಸು ಹುಟ್ಟಿನಿಂದಲೇ ಜನಪದರಿಗೆ ಇದೆ. ಆದರೆ ಕೊಂಚ ಶ್ರುತಿ, ಲಯಬದ್ಧತೆ, ಕೊಂಚ ಸಭಾ ಮರ್ಯಾದೆ ನಡೆಸಿಕೊಟ್ಟರೆ ಜಗತ್ತು ಜನಪದರನ್ನು ಆಲಂಗಿಸಲು ಸಿದ್ಧವಾಗಿದೆ ಎಂದು ಹೇಳಿದರು.

ತಮ್ಮ ದೇಸಿ ಸಂಸ್ಥೆ ಕುರಿತು ಮಾತನಾಡಿದ ಅವರು, “ಈ ಸಂಸ್ಥೆಯಲ್ಲಿ ಈ ನೆಲದ ಜಾನಪದೀಯ ಸೊಗಡನ್ನು ಕಟ್ಟಲು, ಪಠ್ಯವನ್ನು ರೂಪಿಸಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಬಹಳ ದಿಕ್ಕು ತೋಚದೆ ಈಗಲೂ ಒದ್ದಾಡುತ್ತಿದ್ದೇವೆ. ಜಾನಪದೀಯ ಸೊಗಡನ್ನು ಪಠ್ಯದ ಮೂಲಕ ಹೇಳಲು ಸಾಧ್ಯವೇ? ಅದು ಸ್ವಾ- ಅನುಭವದಿಂದ ಬರಬೇಕು. ಜನಪದ ಎಂಬುದು ಸಂಭ್ರಮ, ಸೊಗಡು. ಆ ಸೊಗಡಿಗೆ ಪಠ್ಯವನ್ನು ರೂಪಿಸುವುದು ಬಹಳ ಕಷ್ಟ. ಆದರೂ ನಾವು ಒಂದು ತಾಳ ಶಾಸ್ತ್ರವನ್ನು ರಚಿಸಿದ್ದೇವೆ. ಜನಪದ ಸಂಗೀತವನ್ನು ಕಲಿಯುವುದಕ್ಕಾಗಿ ಶಿಸ್ತುಬದ್ಧ ಸಂಗೀತ ಲಿಪಿ ಹಾಗೂ ಪಠ್ಯಕ್ರಮವನ್ನು ರೂಪಿಸಿದ್ದೇವೆ. ಜೊತೆಗೆ ಪ್ರದರ್ಶನ ಕಲೆಗಳಿಗೆ ಬೇಕಾಗಿರುವ ಎಲ್ಲ ಸುಧಾರಣೆ ಕುರಿತು ಪಠ್ಯದಲ್ಲಿ ಸೇರಿಸಿದ್ದೇವೆ. ನಮಗೆ ಈಗ ವಿದ್ಯಾರ್ಥಿಗಳು ಅಥವಾ ಪ್ರತಿಭೆಗಳು ಬೇಕಿದ್ದಾರೆ. ಹಂಸಲೇಖ ದೇಸಿ ವಿದ್ಯಾ ಸಂಸ್ಥೆ ನಿಮ್ಮ ಸೇವೆಗೆ ಕಂಕಣ ಕಟ್ಟಿ ನಿಂತಿದೆ” ಎಂದು ಆಹ್ವಾನಿಸಿದರು.

ನೀವು ನುಡಿಸುವ ಡೊಳ್ಳು ವಾದ್ಯವನ್ನು ಶ್ರುತಿ ಮಾಡಲು ಯೋಗ್ಯವಾಗಿ ತಯಾರು ಮಾಡಿದ್ದೇವೆ. ಅದನ್ನು ಇನ್ನೂ ನಾಡಿಗೆ ಅರ್ಪಣೆ ಮಾಡಿಲ್ಲ ಎಂದ ಅವರು, ಯಾರಾದರೂ 25 ಜನರ ತಂಡಗಳಾಗಿ ಬಂದರೆ ಅಥವಾ ನಾನಾಗಿಯೇ ಬಂದು ತಯಾರು ಮಾಡುವ ಕೆಲಸವನ್ನು ಮಾಡಬಲ್ಲೆ. ಲಯಬದ್ಧತೆ ರೂಪಿಸಿಕೊಂಡರೆ ಜನಪದಕ್ಕೆ ಕೊಂಬು, ಕೋಡುಗಳು ಹೆಚ್ಚಾಗುತ್ತವೆ. ನಾನು ನಿಮ್ಮ ಜೊತೆಯಲ್ಲಿ ಮುಂದೆ ಕೆಲಸ ಮಾಡುತ್ತೇನೆ ಎಂದರು.

“ನಾವು ನೇಯೋಣ, ಹರಿಯದಿರೋಣ. ಬಟ್ಟೆಯನ್ನು, ಸಂಭ್ರಮವನ್ನು, ಅಕ್ಷರವನ್ನು, ಮನಸ್ಸು, ಹೃದಯಗಳನ್ನು ನೇಯೋಣ. ಆದರೆ ಹರಿಯೋದು ಬೇಡ” ಎಂದು ಅವರು ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು.

ಹಂಸಲೇಖ ಅವರು ಮಾರ್ಮಿಕವಾಗಿ ಹೇಳಿದ ‘ನೇಯುವ ಕಾರ್ಯ’ವನ್ನು ಉಲ್ಲೇಖಿಸಿ ಮಾತನಾಡಿದ ಸ್ಫೂರ್ತಿಧಾಮದ ಅಧ್ಯಕ್ಷರು, ಐಪಿಎಸ್‌ ನಿವೃತ್ತ ಅಧಿಕಾರಿಯಾಗಿರುವ ಮರಿಸ್ವಾಮಿಯವರು, “ಉತ್ತರಖಾಂಡ್‌ನಲ್ಲಿ ನಡೆದ ಧರ್ಮ ಸಂಸತ್‌ ಇಡೀ ಒಂದು ಜನಾಂಗವನ್ನೇ ನಾಶ ಮಾಡುವ ಮಾತನಾಡುತ್ತದೆ. ಹೀಗಾಗಿ ಹರಿದು ಹಾಕುವ ಕೆಲಸ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆ ಕಾಣುತ್ತದೆ. ನೇಯುವಲ್ಲಿ ನಾವು ಎಲ್ಲಿ ಸೋತುಬಿಡುತ್ತೇವೆ ಎಂಬ ಭಯ ಕಾಡುತ್ತಿದೆ. ಹೀಗೆ ಹರಿಯೋರನ್ನು ಅಧಿಕಾರಕ್ಕೆ ಕೂರಿಸಿದವರು ಯಾರು? ಹಾಲನ್ನು ಹಾಕಿ ಸಾಕಿ, ಗಟ್ಟಿ ಮಾಡಿ ಕೂರಿಸಿದವರು ನಾವು. ಈಗ ಅವರು ಇಡೀ ದೇಶವನ್ನೇ ಹರಿದುಹಾಕುವ ಮಾತನಾಡುತ್ತಿದ್ದಾರೆ. ಇಡೀ ದೇಶ ಯೋಚಿಸಬೇಕಾದ ವಿಚಾರವಿದು” ಎಂದು ಎಚ್ಚರಿಸಿದರು.

“ಸಮಾತೆಯ ಹೆಸರಲ್ಲಿ ಅಸಮಾನತೆಯನ್ನು ಹೇಳುವವರು ಬಯಲಾಗುತ್ತಿದ್ದಾರೆ. ನಾವು ಪ್ರೊಗೆಸಿವ್ ಎಂದುಕೊಂಡ ಅನೇಕರು ಆಂತರಿಕವಾಗಿ ರಿಗ್ರೆಸಿವ್ ಆಗಿದ್ದಾರೆ. ತಮ್ಮ ಆತ್ಮವನ್ನು ತೆರೆದಿಟ್ಟು ತಾವು ಎಲ್ಲಿದ್ದೇವೆ ಎಂಬುದನ್ನು ತೋರಿಸುತ್ತಿದ್ದಾರೆ” ಎಂದರು.

ಪ್ರಗತಿಪರ ಆಗುವುದು ಹೆಣ್ಣುಮಕ್ಕಳಿಗೆ ಅನಿವಾರ್ಯ: ಎಂ.ಡಿ.ಪಲ್ಲವಿ

ಗಾಯಕಿ ಎಂ.ಡಿ.ಪಲ್ಲವಿ ಅವರು ಮಾತನಾಡಿ, “ನಾವು ನಮ್ಮ ಬದುಕನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಬೇಕು. ನನ್ನ ಹೋರಾಟ- ನಾನು ಪ್ರಗತಿಪರ ಆಗಿರಬೇಕು ಎಂಬುದಕ್ಕಾಗಿರುತ್ತದೆ. ನಾನು ಪ್ರಗತಿಪರ ಆಗಿದ್ದೇನೆ, ಆಗಿರುತ್ತೇನೆ. ಪ್ರಗತಿಪರ ಆಗುವುದು ಹೆಣ್ಣು ಮಕ್ಕಳಿಗೆ ಅನಿವಾರ್ಯ. ಇಲ್ಲವಾದರೆ ವಿದ್ಯಾಭ್ಯಾಸವೂ ಸಿಗುವುದಿಲ್ಲ. ಸಮಾಜ ಪ್ರಗತಿಗಪರ ಆಗಬೇಕೆಂದರೆ ವಿದ್ಯಾಭ್ಯಾಸದ ಜೊತೆಗೆ ಸಮಾನತೆಯೂ ಮುಖ್ಯ. ಆ ಸಮಾನತೆಯನ್ನು ಡಾ.ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಕೊಟ್ಟಿದ್ದಾರೆ. ಸಮಾನತೆಯನ್ನು ಸಂಪೂರ್ಣವಾಗಿ ತರಲು ಸಾಧ್ಯವಾಗಿಲ್ಲ. ಅದರತ್ತ ನಾವು ಹೆಜ್ಜೆ ಹಾಕಬೇಕು. ನಮ್ಮ ದಾರಿಯನ್ನು ನಾವೇ ಕಲ್ಪಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

ಹೋರಾಟ- ಪ್ರೀತಿಯಿಂದಲೂ ಸಾಧ್ಯವಿದೆ. ಕಿರುಚದೆ, ರೇಗದ ಮೆಲುದನಿಯಲ್ಲಿ ಲಯಬದ್ಧವಾಗಿ, ಶ್ರುತಿಬದ್ಧವಾಗಿಯೂ ಹೋರಾಟ ಮಾಡಬಹುದು ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತರಾದ ವಿಜಯಮ್ಮ ಮಾತನಾಡಿ, “ಇಂದು ಮಾತನಾಡಿದರೆ ದೇಶದ್ರೋಹ ಎಂಬ ಪರಿಸ್ಥಿತಿ ಬಂದಿರುವುದರಿಂದ ನಾವು ಮಾತನಾಡುವುದಿಲ್ಲ. ನಿಮ್ಮ ಧರ್ಮ, ನಿಮ್ಮ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳು ನಿಮಗಿರಲಿ; ನಮ್ಮ ಅಭಿಪ್ರಾಯಗಳನ್ನು ಹೇಳುವುದಕ್ಕೆ ನಾವು ಇನ್ನೊಂದು ದಾರಿಯನ್ನು ಹುಡುಕುತ್ತೇವೆ. ನಮ್ಮ ಸಾಂಸ್ಕೃತಿಕ ದಾರಿಯನ್ನು ಪ್ರತಿರೋಧದ ದನಿಯಾಗಿ ಬಳಸಿಕೊಳ್ಳಲು ಪ್ರಯತ್ನಪಡುತ್ತಿದ್ದೇವೆ” ಎಂದರು.

ಚಲನಚಿತ್ರ ನಿರ್ದೇಶಕ ಮಂಸೋರೆ ಮಾತನಾಡಿ ಕೆವಿಎಸ್‌ ಸಂಘಟನೆಯ ಕೆಲಸಗಳನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, “ನಿನ್ನೆ ಫೇಸ್‌ಬುಕ್‌ನಲ್ಲಿ ಒಂದು ಘಟನೆ ಓದಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎಂದು ನಾಚಿಕೆಯಾಗುತ್ತದೆ. ನಾವು ಜಾತಿ, ಧರ್ಮದಿಂದ ಹೊರಬರಬೇಕಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು ಇವುಗಳಿಂದ ಹೊರಬೇಕಾಗಿದೆ. ನಾವು ವೈಯಕ್ತಿಕವಾಗಿಯೂ ಹೋರಾಡಿ ಜಾತಿ, ಧರ್ಮದ ಸಂಕೋಲೆಗಳಿಂದ ಬಿಡುಗಡೆ ಹೊಂದಿ ಮನುಷ್ಯರಾಗಲು ಪ್ರಯತ್ನಪಡಬೇಕು” ಎಂದು ಆಶಿಸಿದರು.

ಬಿ.ಎಂ.ಗಿರಿರಾಜ್ ಮಾತನಾಡಿ, “ಕುವೆಂಪು ಅವರು ಹೇಳಿದಂತೆ ಮನುಷ್ಯನಿಗೆ ಮೂರು ಹಸಿವುಗಳು ಇರಬೇಕಾಗುತ್ತದೆ. ಅಧ್ಯಾತ್ಮದ ಹಸಿವು, ಆಧುನಿಕತೆಯ ಹಸಿವು, ಸಮಾನತೆ ಹಸಿವು. ಈ ಹಸಿವುಗಳು ತುಂಬಿದರೆ ನಾವು ತಪ್ಪು ಮಾಡುವುದು ಕಡಿಮೆಯಾಗುತ್ತದೆ. ಕುವೆಂಪು ಅವರು ಅಧ್ಯಾತ್ಮದ ಕಡೆಗೂ, ಆಧುನಿಕತೆಯ ಕಡೆಗೂ ಒಮ್ಮೆಲೇ ಯೋಚಿಸುತ್ತಿದ್ದರು” ಎಂದು ವಿವರಿಸಿದರು.

ನೆಲದ ಪದ ಕಾರ್ಯಕ್ರಮ ಬಹುತ್ವವನ್ನು ಪ್ರತಿಪಾದಿಸಿತು. (ಹೆಚ್ಚಿನ ವರದಿಯನ್ನು ‘ಇಲ್ಲಿ’ ಓದಬಹುದು.)


ಇದನ್ನೂ ಓದಿರಿ: ಬಹುತ್ವ ಬದುಕಿನ ಸಂದೇಶ ಸಾರಿದ ‘ನೆಲದ ಪದ’ ಸಾಂಸ್ಕೃತಿಕ ಉತ್ಸವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The present needed culture movement

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...