Homeಮುಖಪುಟಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ...

ಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ ದಿವಾನ್ ಶರೀಫ್

- Advertisement -
- Advertisement -

ಮೇಲಿನ ತಲೆಬರಹವನ್ನು ‘ಲಿಂಗಾಯತ ಮಠದ ಪೀಠದಲ್ಲಿ ಮುಲ್ಲಾ’ ಎಂದು ಒಂದು ವ್ಯಾಟ್ಸಾಪ್ ಸಂದೇಶ ಅಥವಾ ಫೇಸ್‌ಬುಕ್ ಪೋಸ್ಟ್ ಹಾಕಿ ನೋಡಿ, ಈ ದೇಶದ ಸಂವಿಧಾನ, ಸರ್ವಧರ್ಮ ಗೌರವಿಸುವವರು ಕುತೂಹಲದಿಂದ, ‘ಒಳ್ಳೆ ಬೆಳವಣಿಗೆ. ವಿವರ ಕೊಡಿ’ ಎನ್ನುತ್ತಾರೆ. ಆದರೆ, ಹಿಂದೆ ಮುಂದೆ ನೋಡದ, ಹುಸಿ ದೇಶಭಕ್ತಿಯ ಅಮಲಿನಲ್ಲಿ ತೇಲುತ್ತಿರುವವರು ಟ್ರೋಲ್ ಮಾಡಲು ಆರಂಭಿಸುತ್ತಾರೆ.

ಇಂತಹ ಒಂದು ಬಿಕ್ಕಟ್ಟಿನ ಕಾಲದಲ್ಲೂ ಬೆಳ್ಳಿಗೆರೆಗಳು ಮೂಡುತ್ತಿವೆ. ಇವತ್ತಿನ ಸಾಮಾಜಿಕ-ಧಾರ್ಮಿಕ ತಲ್ಲಣಗಳನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಎಂಬ ಪುಟ್ಟ ಗ್ರಾಮದಲ್ಲಿ ಒಂದು ದೊಡ್ಡ ಕ್ರಾಂತಿ ನಡೆದಿದೆ. ಮುಸ್ಲಿಂ ಯುವಕನೊಬ್ಬ ಇಷ್ಟಲಿಂಗ ದೀಕ್ಷೆ ಪಡೆದು, ಬಸವ ತತ್ವದ ಮುರುಘರಾಜೇಂದ್ರ ಕೋರಣೇಶ್ವರ ಮಠದ (ಶಾಂತಿಧಾಮ) ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅನೇಕ ದಲಿತ, ಹಿಂದುಳಿದವರನ್ನು ತಮ್ಮ ಶಾಖಾಮಠಗಳಿಗೆ ನೇಮಿಸಿದ ಚಿತ್ರದುರ್ಗದ ಮುರುಘಾಮಠದ ಶಾಖಾ ಮಠಗಳಲ್ಲಿ ಈ ಅಸೂಟಿ ಮಠವೂ ಒಂದು.

ಈ ಹೊತ್ತಿನಲ್ಲಿ ಇದು ಏಕೆ ಮುಖ್ಯವೆಂದರೆ, ಧರ್ಮಾಧಾರಿತ ಪೌರತ್ವ ಪ್ರತಿಪಾದಿಸಲು ಹೊರಟ ಪಟ್ಟಭದ್ರ ಶಕ್ತಿಗಳಿಗೆ ಇಂತಹ ಸಣ್ಣ, ಆದರೆ ಧಾರ್ಮಿಕವಾಗಿ ಅತಿ ಮಹತ್ವದ್ದಾದ ಘಟನೆಗಳೇ ಉತ್ತರ ಕೊಡಬಲ್ಲವು. ಧರ್ಮದ ಆಧಾರದಲ್ಲಿ ವಿಭಜನೆ ನಿರೀಕ್ಷಿಸಿದ್ದವರು ಬೆಚ್ಚಿ ಬೀಳುವಂತೆ ದೇಶದ ಜನರು ಸಿಎಎ-ಎನ್‌ಆರ್‌ಸಿ ವಿರುದ್ಧ ಧರ್ಮಾತೀತರಾಗಿ ಬೀದಿಗಿಳಿದ ಈ ಹೊತ್ತಲ್ಲೇ, ಮುನ್ನಾ ಎಂಬ ಯುವಕ ಬಸವ ತತ್ವದ ಲಿಂಗಾಯತ ಮಠದ ಪೀಠಾಧಿಪತಿಯಾಗುತ್ತಿರುವುದು ಏಕತೆ, ಸೌಹಾರ್ದತೆಯ ಸಂದೇಶವನ್ನು ಗಾಢವಾಗಿ ಹರಡಲಿದೆ.

ಬಸವ ಪರಂಪರೆಯ ವಾರಸುದಾರರು
ಅಸೂಟಿಯ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳು ಅಪ್ಪಟ ಬಸವಪ್ರಿಯರು. ಆಚರಣೆಯಲ್ಲೂ ಅವರು ಅದನ್ನು ಪಾಲಿಸುತ್ತ ಬಂದಿದ್ದಾರೆ. ಅವರ ಪುಟ್ಟ ಮಠಕ್ಕೆ ಎಲ್ಲ ಜಾತಿ ಜನಾಂಗಗಳ ಭಕ್ತರಿದ್ದು, ಇಸ್ಲಾಂ ಧರ್ಮದವರೂ ಅನುಯಾಯಿಗಳಾಗಿದ್ದಾರೆ.

ಧರ್ಮ ನಿರಪೇಕ್ಷತೆ, ಜಾತ್ಯಾತೀತೆಗಳಲ್ಲಿ ನಂಬಿಕೆಯಿಟ್ಟ ಅಸೂಟಿಯ ಮುನ್ನಾ ಮತ್ತು ಆತನ ತಂದೆ-ತಾಯಿ ಕೋರಣೇಶ್ವರ ಮಠದ ಭಕ್ತರು. ಬಸವ ತತ್ವದಲ್ಲಿ ಮುನ್ನಾ ತೋರಿದ ಆಸಕ್ತಿ, ಆತನ ಕಲಿಕೆ, ನಿರ್ಮಲ ಮನಸ್ಸನ್ನು ಗಮನಿಸಿದ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿ, ಮುನ್ನಾಗೆ ಲಿಂಗದೀಕ್ಷೆ ನೀಡಿದ್ದಾರೆ. ಮುನ್ನಾ ಈಗ ದಿವಾನ್ ಶರೀಫ್ ಮುಲ್ಲಾ ಆಗಿದ್ದಾರೆ. ಫೆಬ್ರುವರಿ 20ರ ನಂತರ ನಡೆಯಲಿರುವ ಬಸವ ತತ್ವ ಉತ್ಸವದಲ್ಲಿ ದಿವಾನ್ ಶರೀಫರು ಅಧಿಕೃತವಾಗಿ ಮಠದ ಪೀಠವೇರಲಿದ್ದಾರೆ.

ಸೂಫಿ ಪರಂಪರೆಯ ನೆಲವಿದು
ಗೋವಿಂದ ಭಟ್ಟರು ಶಿಶುನಾಳ ಶರೀಫರಿಗೆ ಜನಿವಾರ ಹಾಕಿ ಜಾತಿ ಕಟ್ಟಳೆ ಮುರಿದಿದ್ದರು. ಈಗ ಅದೇ ಹಾದಿಯಲ್ಲಿ ಕೋರಣೇಶ್ವರ ಶ್ರೀಗಳು ಸಂವಿಧಾನ ಮತ್ತು ಬಸವ ತತ್ವಗಳ ಆಶಯಕ್ಕೆ ಅನುಗುಣವಾಗಿ ಇಸ್ಲಾಂ ಧರ್ಮದ ಯುವಕನಿಗೆ ಮನ್ನಣೆ ನೀಡಿದ್ದಾರೆ.

ಈ ದೇಶದ ಮಣ್ಣಲ್ಲಿ ಧರ್ಮಗಳು ಒಂದರಲ್ಲೊಂದಾಗಿ ಬೆರೆತು ಬದುಕಿದ ಭಾವಸೆಲೆಗಳಿವೆ. ಅಷ್ಟು ಸುಲಭವಾಗಿ ಕಾನೂನು, ಬಲಪ್ರಯೋಗ ಮೂಲಕ ಆ ಭಾವತಂತುವನ್ನು ಹರಿಯುವುದು ಸುಲಭವಲ್ಲ. ಈ ನೆಲದ ಸೂಫಿ ಪರಂಪರೆಯ ಗುಣಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಶಹೀನ್ ಬಾಗ್‌ನಲ್ಲಿ ಹಿಂದೂ-ಮುಸ್ಲಿಂ-ಸಿಖ್-ಜೈನ್ ಧರ್ಮದ ಹೆರ್ಣಮಕ್ಕಳೆಲ್ಲ ಸತತ 60ಕ್ಕೂ ಹೆಚ್ಚು ದಿನದಿಂದ ಒಡ್ಡುತ್ತಿರುವ ಪ್ರತಿರೋಧವೇ ಸಾಕ್ಷಿ. ಹಾಗೆಯೇ ಅಸೂಟಿಯಂತಹ ಪುಟ್ಟ ಹಳ್ಳಿಗಳಲ್ಲಿ ಮತ್ತೆ ಮತ್ತೆ ಬಸವ, ಕುವೆಂಪು ಹುಟ್ಟಿ ಬರುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಲಿಂಗದೀಕ್ಷೆಯೇ ಸಾಕ್ಷಿ.

32 ವರ್ಷದ ದಿವಾನ್ ಶರೀಫ ಮುಲ್ಲಾ ಕುಟುಂಬಕ್ಕೆ ಅಸೂಟಿ ಗ್ರಾಮದ ಹೊರವಲಯದಲ್ಲಿ ಎರಡು ಎಕರೆ ಜಮೀನಿತ್ತು. ಅದನ್ನೀಗ ಅವರು ಮಗನ ಜೊತೆ ಮಠಕ್ಕೆ ಧಾರೆ ಎರದಿದ್ದಾರೆ. ಅಲ್ಲೀಗ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದು, ಅದೇ ಮಠಕ್ಕೆ ಶರೀಫ ಪೀಠಾಧಿಪತಿ ಅಗಲಿದ್ದಾರೆ. ಶರೀಫ ಅವರಿಗೆ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಜನ ಮಕ್ಕಳೂ ಸಹ ಇದ್ದಾರೆ. ತಂದೆ ರಹೀಮ ಸಾಬ್ ಹಾಗೂ ತಾಯಿ ಫಾತೀಮ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎನ್ನುತ್ತಾರೆ ಮುಲ್ಲಾ ಶರೀಫ್ ಸ್ವಾಮಿ.

ಕಾರ್ಮೋಡಗಳ ಅಂಚಿನಲ್ಲಿ ಬೆಳ್ಳಿಗೆರೆ ಹುಟ್ಟವುದು ಹೀಗೆಯೇ ಅಲ್ಲವೇ? ಬಂದೇ ಬರುತಾವ ಕಾಲ ಎಂದು ಆಶಾವಾದಿಯಾದವರಿಗೆ ಯಾವ ಕೋಮುಶಕ್ತಿಯೂ ಅಲ್ಲಾಡಿಸಲು ಸಾಧ್ಯವಿಲ್ಲ. ಅಸೂಟಿ ಮಠದ ಈ ಪರಂಪರೆ ಉಳಿದ ಬಸವ ಮಠಗಳಿಗೂ ಹಬ್ಬಲಿ, ಮಾನವ ಧರ್ಮ ಎಲ್ಲೆಡೆ ಹರಡಲಿ. ಎಂದಿನಂತೆ ರಾಮ-ಭೀಮರು ಅಲಾಯಿ-ಕುಲಾಯಿ ಎಂದು ಕುಣಿಯಲಿ, ರಹೀಮರು ದೀಪಾವಳಿಯ ಚುರ್‌ಚುರ್ ಕಡ್ಡಿ ಬೆಳಗಲಿ.


ನಮ್ಮದು ಬಸವ ಪರಂಪರೆಯ ಮಠ. ಇಲ್ಲಿ ಎಲ್ಲ ಜಾತಿ-ಧರ್ಮಗಳಿಗೂ ಅವಕಾಶವಿದೆ. ಈ ನೆಲ ಸರ್ವ ಜನಾಂಗದ ಶಾಂತಿಯ ತೋಟ. ಈ ದೇಶದ ಎಲ್ಲರಿಗೂ ಅವರಿಗಿಷ್ಟವಾದ ಧರ್ಮವನ್ನು ಆಚರಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನೀಡಿದೆ. ಹನ್ನೆರಡನೇ ಶತಮಾನದಲ್ಲೇ ನಮ್ಮ ಶರಣರು ಇದನ್ನು ಪ್ರತಿಪಾದಿಸಿದ್ದಾರೆ. ವಚನಕಾರ ಮರುಳ ಶಂಕರ ಅಫಘಾನಿಸ್ತಾನ ಮೂಲದ ಸೂಫಿ ಸಂತರು. ಇಲ್ಲಿ ಮುನ್ನಾ ದಿವಾನ್ ಶರೀಫರಾಗಿ ಪೀಠ ಏರುತ್ತಿರುವ ಘಟನೆ ಆಸ್ತಿಗಾಗಿ ಅಲ್ಲ, ಅಸ್ತಿತ್ವಕ್ಕಾಗಿ. ಮಾನವ ಧರ್ಮದ ಅಸ್ತಿತ್ವಕ್ಕಾಗಿ. ಈಗಂತೂ ಇದನ್ನು ಯಾರೂ ವಿರೋಧಿಸಿಲ್ಲ. ವಿರೋಧಿಸುವವರು ಬಂದರೆ, ಅವರಿಗೆ ಸೌಹಾರ್ದಯುತ ರೀತಿಯಲ್ಲಿ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ. ನಮ್ಮ ಚಿತ್ರದುರ್ಗ ಮುರುಘರಾಜೇಂದ್ರ ಸ್ವಾಮೀಜಿ ಈ ನಡೆಯನ್ನು ಬೆಂಬಲಿಸಿದ್ದಾರೆ.
-ಮುರುಘರಾಜೇಂದ್ರ ಕೋರಣೇಶ್ವರ ಶ್ರೀ, ಅಸೂಟಿ


ನನ್ನ ತಂದೆ, ತಾಯಿ ಮೊದಲಿನಿಂದಲೂ ಕೋರಣೇಶ್ವರ ಮಠದ ಭಕ್ತರು. ನಾನು ಓದಿದ್ದು ಮೂರನೇ ತರಗತಿ. ಆದರೆ ಬಸವ ತತ್ವಕ್ಕೆ ಆಕರ್ಷಿತನಾಗಿ ಮಾನವತೆಯೇ ದೊಡ್ಡ ಧರ್ಮ ಎಂದು ಅರಿತುಕೊಂಡಿದ್ದೇನೆ. ತಮ್ಮ ಇಷ್ಟದ ಧರ್ಮ ಆಚರಿಸಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ. ಬಸವಧರ್ಮ ಯಾವ ತಾರತಮ್ಯವೂ ಇಲ್ಲದೇ ಎಲ್ಲರನ್ನೂ ಮನುಷ್ಯರೆಂದೇ ಪರಿಗಣಿಸುತ್ತದೆ.
-ದಿವಾನ್ ಶರೀಫ ಮುಲ್ಲಾ


ಕಳೆದ ವಾರವೇ ಈ ಸುದ್ದಿ ಕಿವಿಗೆ ಬಿದ್ದಾಗ ಖುಷಿಯಾಗಿತ್ತು. ಇವತ್ತಿನ ಈ ದುರಿತ ಕಾಲದಲ್ಲಿ ಇಂತಹ ಪುಟ್ಟ ಪುಟ್ಟ ದೀಪಗಳೇ ನಮಗೆ ಬೆಳಕು. ಸೂಫಿ ಮತ್ತು ಬಸವ ಪರಂಪರೆಯ ನೆರಳನ್ನು ಅಸೂಟಿ ಕ್ರಾಂತಿಯಲ್ಲಿ ಕಾಣುತ್ತಿದ್ದೇನೆ.
ಡಾ. ಅರುಣ್ ಜೋಳದಕೂಡ್ಲಿಗಿ, ಸಂಶೋಧಕ
ಕನ್ನಡ ವಿವಿ, ಹಂಪಿ


ಯಾರು ಯಾವ ಧರ್ಮ ಇಷ್ಟಪಡುತ್ತಾರೋ ಅದನ್ನು ಸ್ವೀಕರಿಸಲು ಸ್ವತಂತ್ರರು. ಮುನ್ನಾ ಎಂಬ ಯುವಕನ ಇಚ್ಛೆಯನ್ನು ಗೌರವಿಸಿ, ಆತನನ್ನು ಮಠವೊಂದಕ್ಕೆ ಪೀಠಾಧಿಪತಿ ಮಾಡುತ್ತಿರುವ ಸ್ವಾಮೀಜಿಯ ವೈಶಾಲ್ಯತೆ ದೊಡ್ಡದು. ಕುತೂಹಲದ ವಿಷಯ ನೋಡಿ: ಶರಣರ ಲಿಂಗಾಯತ ಮತ್ತು ಪ್ರವಾದಿಗಳ ಇಸ್ಲಾಂ ಧರ್ಮಗಳಲ್ಲಿ ಮೂರ್ತಿ ಪೂಜೆಯಿಲ್ಲ, ಏಕದೇವೋಪಾಸನೆಯೇ ಎರಡರಲ್ಲೂ ಆಚರಣೆಯಲ್ಲಿದೆ.
-ರಂಜಾನ ದರ್ಗಾ, ಚಿಂತಕ-ಲೇಖಕ, ಧಾರವಾಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...