Homeಮುಖಪುಟಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ...

ಬಸವ ತತ್ವ-ಸಂವಿಧಾನದ ಆಶಯ | ಕತ್ತಲು ಕವಿಯುವಾಗ ಮಿಣುಕು ದೀಪ : ಲಿಂಗಾಯತ ಮಠದ ಪೀಠವೇರಿದ ದಿವಾನ್ ಶರೀಫ್

- Advertisement -
- Advertisement -

ಮೇಲಿನ ತಲೆಬರಹವನ್ನು ‘ಲಿಂಗಾಯತ ಮಠದ ಪೀಠದಲ್ಲಿ ಮುಲ್ಲಾ’ ಎಂದು ಒಂದು ವ್ಯಾಟ್ಸಾಪ್ ಸಂದೇಶ ಅಥವಾ ಫೇಸ್‌ಬುಕ್ ಪೋಸ್ಟ್ ಹಾಕಿ ನೋಡಿ, ಈ ದೇಶದ ಸಂವಿಧಾನ, ಸರ್ವಧರ್ಮ ಗೌರವಿಸುವವರು ಕುತೂಹಲದಿಂದ, ‘ಒಳ್ಳೆ ಬೆಳವಣಿಗೆ. ವಿವರ ಕೊಡಿ’ ಎನ್ನುತ್ತಾರೆ. ಆದರೆ, ಹಿಂದೆ ಮುಂದೆ ನೋಡದ, ಹುಸಿ ದೇಶಭಕ್ತಿಯ ಅಮಲಿನಲ್ಲಿ ತೇಲುತ್ತಿರುವವರು ಟ್ರೋಲ್ ಮಾಡಲು ಆರಂಭಿಸುತ್ತಾರೆ.

ಇಂತಹ ಒಂದು ಬಿಕ್ಕಟ್ಟಿನ ಕಾಲದಲ್ಲೂ ಬೆಳ್ಳಿಗೆರೆಗಳು ಮೂಡುತ್ತಿವೆ. ಇವತ್ತಿನ ಸಾಮಾಜಿಕ-ಧಾರ್ಮಿಕ ತಲ್ಲಣಗಳನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಎಂಬ ಪುಟ್ಟ ಗ್ರಾಮದಲ್ಲಿ ಒಂದು ದೊಡ್ಡ ಕ್ರಾಂತಿ ನಡೆದಿದೆ. ಮುಸ್ಲಿಂ ಯುವಕನೊಬ್ಬ ಇಷ್ಟಲಿಂಗ ದೀಕ್ಷೆ ಪಡೆದು, ಬಸವ ತತ್ವದ ಮುರುಘರಾಜೇಂದ್ರ ಕೋರಣೇಶ್ವರ ಮಠದ (ಶಾಂತಿಧಾಮ) ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅನೇಕ ದಲಿತ, ಹಿಂದುಳಿದವರನ್ನು ತಮ್ಮ ಶಾಖಾಮಠಗಳಿಗೆ ನೇಮಿಸಿದ ಚಿತ್ರದುರ್ಗದ ಮುರುಘಾಮಠದ ಶಾಖಾ ಮಠಗಳಲ್ಲಿ ಈ ಅಸೂಟಿ ಮಠವೂ ಒಂದು.

ಈ ಹೊತ್ತಿನಲ್ಲಿ ಇದು ಏಕೆ ಮುಖ್ಯವೆಂದರೆ, ಧರ್ಮಾಧಾರಿತ ಪೌರತ್ವ ಪ್ರತಿಪಾದಿಸಲು ಹೊರಟ ಪಟ್ಟಭದ್ರ ಶಕ್ತಿಗಳಿಗೆ ಇಂತಹ ಸಣ್ಣ, ಆದರೆ ಧಾರ್ಮಿಕವಾಗಿ ಅತಿ ಮಹತ್ವದ್ದಾದ ಘಟನೆಗಳೇ ಉತ್ತರ ಕೊಡಬಲ್ಲವು. ಧರ್ಮದ ಆಧಾರದಲ್ಲಿ ವಿಭಜನೆ ನಿರೀಕ್ಷಿಸಿದ್ದವರು ಬೆಚ್ಚಿ ಬೀಳುವಂತೆ ದೇಶದ ಜನರು ಸಿಎಎ-ಎನ್‌ಆರ್‌ಸಿ ವಿರುದ್ಧ ಧರ್ಮಾತೀತರಾಗಿ ಬೀದಿಗಿಳಿದ ಈ ಹೊತ್ತಲ್ಲೇ, ಮುನ್ನಾ ಎಂಬ ಯುವಕ ಬಸವ ತತ್ವದ ಲಿಂಗಾಯತ ಮಠದ ಪೀಠಾಧಿಪತಿಯಾಗುತ್ತಿರುವುದು ಏಕತೆ, ಸೌಹಾರ್ದತೆಯ ಸಂದೇಶವನ್ನು ಗಾಢವಾಗಿ ಹರಡಲಿದೆ.

ಬಸವ ಪರಂಪರೆಯ ವಾರಸುದಾರರು
ಅಸೂಟಿಯ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳು ಅಪ್ಪಟ ಬಸವಪ್ರಿಯರು. ಆಚರಣೆಯಲ್ಲೂ ಅವರು ಅದನ್ನು ಪಾಲಿಸುತ್ತ ಬಂದಿದ್ದಾರೆ. ಅವರ ಪುಟ್ಟ ಮಠಕ್ಕೆ ಎಲ್ಲ ಜಾತಿ ಜನಾಂಗಗಳ ಭಕ್ತರಿದ್ದು, ಇಸ್ಲಾಂ ಧರ್ಮದವರೂ ಅನುಯಾಯಿಗಳಾಗಿದ್ದಾರೆ.

ಧರ್ಮ ನಿರಪೇಕ್ಷತೆ, ಜಾತ್ಯಾತೀತೆಗಳಲ್ಲಿ ನಂಬಿಕೆಯಿಟ್ಟ ಅಸೂಟಿಯ ಮುನ್ನಾ ಮತ್ತು ಆತನ ತಂದೆ-ತಾಯಿ ಕೋರಣೇಶ್ವರ ಮಠದ ಭಕ್ತರು. ಬಸವ ತತ್ವದಲ್ಲಿ ಮುನ್ನಾ ತೋರಿದ ಆಸಕ್ತಿ, ಆತನ ಕಲಿಕೆ, ನಿರ್ಮಲ ಮನಸ್ಸನ್ನು ಗಮನಿಸಿದ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿ, ಮುನ್ನಾಗೆ ಲಿಂಗದೀಕ್ಷೆ ನೀಡಿದ್ದಾರೆ. ಮುನ್ನಾ ಈಗ ದಿವಾನ್ ಶರೀಫ್ ಮುಲ್ಲಾ ಆಗಿದ್ದಾರೆ. ಫೆಬ್ರುವರಿ 20ರ ನಂತರ ನಡೆಯಲಿರುವ ಬಸವ ತತ್ವ ಉತ್ಸವದಲ್ಲಿ ದಿವಾನ್ ಶರೀಫರು ಅಧಿಕೃತವಾಗಿ ಮಠದ ಪೀಠವೇರಲಿದ್ದಾರೆ.

ಸೂಫಿ ಪರಂಪರೆಯ ನೆಲವಿದು
ಗೋವಿಂದ ಭಟ್ಟರು ಶಿಶುನಾಳ ಶರೀಫರಿಗೆ ಜನಿವಾರ ಹಾಕಿ ಜಾತಿ ಕಟ್ಟಳೆ ಮುರಿದಿದ್ದರು. ಈಗ ಅದೇ ಹಾದಿಯಲ್ಲಿ ಕೋರಣೇಶ್ವರ ಶ್ರೀಗಳು ಸಂವಿಧಾನ ಮತ್ತು ಬಸವ ತತ್ವಗಳ ಆಶಯಕ್ಕೆ ಅನುಗುಣವಾಗಿ ಇಸ್ಲಾಂ ಧರ್ಮದ ಯುವಕನಿಗೆ ಮನ್ನಣೆ ನೀಡಿದ್ದಾರೆ.

ಈ ದೇಶದ ಮಣ್ಣಲ್ಲಿ ಧರ್ಮಗಳು ಒಂದರಲ್ಲೊಂದಾಗಿ ಬೆರೆತು ಬದುಕಿದ ಭಾವಸೆಲೆಗಳಿವೆ. ಅಷ್ಟು ಸುಲಭವಾಗಿ ಕಾನೂನು, ಬಲಪ್ರಯೋಗ ಮೂಲಕ ಆ ಭಾವತಂತುವನ್ನು ಹರಿಯುವುದು ಸುಲಭವಲ್ಲ. ಈ ನೆಲದ ಸೂಫಿ ಪರಂಪರೆಯ ಗುಣಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಶಹೀನ್ ಬಾಗ್‌ನಲ್ಲಿ ಹಿಂದೂ-ಮುಸ್ಲಿಂ-ಸಿಖ್-ಜೈನ್ ಧರ್ಮದ ಹೆರ್ಣಮಕ್ಕಳೆಲ್ಲ ಸತತ 60ಕ್ಕೂ ಹೆಚ್ಚು ದಿನದಿಂದ ಒಡ್ಡುತ್ತಿರುವ ಪ್ರತಿರೋಧವೇ ಸಾಕ್ಷಿ. ಹಾಗೆಯೇ ಅಸೂಟಿಯಂತಹ ಪುಟ್ಟ ಹಳ್ಳಿಗಳಲ್ಲಿ ಮತ್ತೆ ಮತ್ತೆ ಬಸವ, ಕುವೆಂಪು ಹುಟ್ಟಿ ಬರುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಲಿಂಗದೀಕ್ಷೆಯೇ ಸಾಕ್ಷಿ.

32 ವರ್ಷದ ದಿವಾನ್ ಶರೀಫ ಮುಲ್ಲಾ ಕುಟುಂಬಕ್ಕೆ ಅಸೂಟಿ ಗ್ರಾಮದ ಹೊರವಲಯದಲ್ಲಿ ಎರಡು ಎಕರೆ ಜಮೀನಿತ್ತು. ಅದನ್ನೀಗ ಅವರು ಮಗನ ಜೊತೆ ಮಠಕ್ಕೆ ಧಾರೆ ಎರದಿದ್ದಾರೆ. ಅಲ್ಲೀಗ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದು, ಅದೇ ಮಠಕ್ಕೆ ಶರೀಫ ಪೀಠಾಧಿಪತಿ ಅಗಲಿದ್ದಾರೆ. ಶರೀಫ ಅವರಿಗೆ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಜನ ಮಕ್ಕಳೂ ಸಹ ಇದ್ದಾರೆ. ತಂದೆ ರಹೀಮ ಸಾಬ್ ಹಾಗೂ ತಾಯಿ ಫಾತೀಮ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಎನ್ನುತ್ತಾರೆ ಮುಲ್ಲಾ ಶರೀಫ್ ಸ್ವಾಮಿ.

ಕಾರ್ಮೋಡಗಳ ಅಂಚಿನಲ್ಲಿ ಬೆಳ್ಳಿಗೆರೆ ಹುಟ್ಟವುದು ಹೀಗೆಯೇ ಅಲ್ಲವೇ? ಬಂದೇ ಬರುತಾವ ಕಾಲ ಎಂದು ಆಶಾವಾದಿಯಾದವರಿಗೆ ಯಾವ ಕೋಮುಶಕ್ತಿಯೂ ಅಲ್ಲಾಡಿಸಲು ಸಾಧ್ಯವಿಲ್ಲ. ಅಸೂಟಿ ಮಠದ ಈ ಪರಂಪರೆ ಉಳಿದ ಬಸವ ಮಠಗಳಿಗೂ ಹಬ್ಬಲಿ, ಮಾನವ ಧರ್ಮ ಎಲ್ಲೆಡೆ ಹರಡಲಿ. ಎಂದಿನಂತೆ ರಾಮ-ಭೀಮರು ಅಲಾಯಿ-ಕುಲಾಯಿ ಎಂದು ಕುಣಿಯಲಿ, ರಹೀಮರು ದೀಪಾವಳಿಯ ಚುರ್‌ಚುರ್ ಕಡ್ಡಿ ಬೆಳಗಲಿ.


ನಮ್ಮದು ಬಸವ ಪರಂಪರೆಯ ಮಠ. ಇಲ್ಲಿ ಎಲ್ಲ ಜಾತಿ-ಧರ್ಮಗಳಿಗೂ ಅವಕಾಶವಿದೆ. ಈ ನೆಲ ಸರ್ವ ಜನಾಂಗದ ಶಾಂತಿಯ ತೋಟ. ಈ ದೇಶದ ಎಲ್ಲರಿಗೂ ಅವರಿಗಿಷ್ಟವಾದ ಧರ್ಮವನ್ನು ಆಚರಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನೀಡಿದೆ. ಹನ್ನೆರಡನೇ ಶತಮಾನದಲ್ಲೇ ನಮ್ಮ ಶರಣರು ಇದನ್ನು ಪ್ರತಿಪಾದಿಸಿದ್ದಾರೆ. ವಚನಕಾರ ಮರುಳ ಶಂಕರ ಅಫಘಾನಿಸ್ತಾನ ಮೂಲದ ಸೂಫಿ ಸಂತರು. ಇಲ್ಲಿ ಮುನ್ನಾ ದಿವಾನ್ ಶರೀಫರಾಗಿ ಪೀಠ ಏರುತ್ತಿರುವ ಘಟನೆ ಆಸ್ತಿಗಾಗಿ ಅಲ್ಲ, ಅಸ್ತಿತ್ವಕ್ಕಾಗಿ. ಮಾನವ ಧರ್ಮದ ಅಸ್ತಿತ್ವಕ್ಕಾಗಿ. ಈಗಂತೂ ಇದನ್ನು ಯಾರೂ ವಿರೋಧಿಸಿಲ್ಲ. ವಿರೋಧಿಸುವವರು ಬಂದರೆ, ಅವರಿಗೆ ಸೌಹಾರ್ದಯುತ ರೀತಿಯಲ್ಲಿ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ. ನಮ್ಮ ಚಿತ್ರದುರ್ಗ ಮುರುಘರಾಜೇಂದ್ರ ಸ್ವಾಮೀಜಿ ಈ ನಡೆಯನ್ನು ಬೆಂಬಲಿಸಿದ್ದಾರೆ.
-ಮುರುಘರಾಜೇಂದ್ರ ಕೋರಣೇಶ್ವರ ಶ್ರೀ, ಅಸೂಟಿ


ನನ್ನ ತಂದೆ, ತಾಯಿ ಮೊದಲಿನಿಂದಲೂ ಕೋರಣೇಶ್ವರ ಮಠದ ಭಕ್ತರು. ನಾನು ಓದಿದ್ದು ಮೂರನೇ ತರಗತಿ. ಆದರೆ ಬಸವ ತತ್ವಕ್ಕೆ ಆಕರ್ಷಿತನಾಗಿ ಮಾನವತೆಯೇ ದೊಡ್ಡ ಧರ್ಮ ಎಂದು ಅರಿತುಕೊಂಡಿದ್ದೇನೆ. ತಮ್ಮ ಇಷ್ಟದ ಧರ್ಮ ಆಚರಿಸಲು ಎಲ್ಲರಿಗೂ ಸ್ವಾತಂತ್ರ್ಯ ವಿದೆ. ಬಸವಧರ್ಮ ಯಾವ ತಾರತಮ್ಯವೂ ಇಲ್ಲದೇ ಎಲ್ಲರನ್ನೂ ಮನುಷ್ಯರೆಂದೇ ಪರಿಗಣಿಸುತ್ತದೆ.
-ದಿವಾನ್ ಶರೀಫ ಮುಲ್ಲಾ


ಕಳೆದ ವಾರವೇ ಈ ಸುದ್ದಿ ಕಿವಿಗೆ ಬಿದ್ದಾಗ ಖುಷಿಯಾಗಿತ್ತು. ಇವತ್ತಿನ ಈ ದುರಿತ ಕಾಲದಲ್ಲಿ ಇಂತಹ ಪುಟ್ಟ ಪುಟ್ಟ ದೀಪಗಳೇ ನಮಗೆ ಬೆಳಕು. ಸೂಫಿ ಮತ್ತು ಬಸವ ಪರಂಪರೆಯ ನೆರಳನ್ನು ಅಸೂಟಿ ಕ್ರಾಂತಿಯಲ್ಲಿ ಕಾಣುತ್ತಿದ್ದೇನೆ.
ಡಾ. ಅರುಣ್ ಜೋಳದಕೂಡ್ಲಿಗಿ, ಸಂಶೋಧಕ
ಕನ್ನಡ ವಿವಿ, ಹಂಪಿ


ಯಾರು ಯಾವ ಧರ್ಮ ಇಷ್ಟಪಡುತ್ತಾರೋ ಅದನ್ನು ಸ್ವೀಕರಿಸಲು ಸ್ವತಂತ್ರರು. ಮುನ್ನಾ ಎಂಬ ಯುವಕನ ಇಚ್ಛೆಯನ್ನು ಗೌರವಿಸಿ, ಆತನನ್ನು ಮಠವೊಂದಕ್ಕೆ ಪೀಠಾಧಿಪತಿ ಮಾಡುತ್ತಿರುವ ಸ್ವಾಮೀಜಿಯ ವೈಶಾಲ್ಯತೆ ದೊಡ್ಡದು. ಕುತೂಹಲದ ವಿಷಯ ನೋಡಿ: ಶರಣರ ಲಿಂಗಾಯತ ಮತ್ತು ಪ್ರವಾದಿಗಳ ಇಸ್ಲಾಂ ಧರ್ಮಗಳಲ್ಲಿ ಮೂರ್ತಿ ಪೂಜೆಯಿಲ್ಲ, ಏಕದೇವೋಪಾಸನೆಯೇ ಎರಡರಲ್ಲೂ ಆಚರಣೆಯಲ್ಲಿದೆ.
-ರಂಜಾನ ದರ್ಗಾ, ಚಿಂತಕ-ಲೇಖಕ, ಧಾರವಾಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...