Homeಕರ್ನಾಟಕಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

ಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

- Advertisement -
- Advertisement -

ಒಂದು ಕೆ.ಜಿ. ಟೊಮಟೊ ಬೆಲೆ 110 ರೂಪಾಯಿ ದಾಟಿದೆ. ಕೆಲವು ಕಡೆ 130 ದಾಟಿದೆ. ಸಾಮಾನ್ಯವಾಗಿ ಯಾವುದೇ ಬೆಲೆ ಏರಿಕೆಯಾದಾಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ‘ಟ್ರಾಲ್‌’ಗಳಾಗುತ್ತವೆ. ಈಗ ಟೊಮಟೊ ಟ್ರಾಲ್‌‌ಗೆ ಗುರಿಯಾಗಿದ್ದು, ಜನರು ತರಹೇವಾರಿ ಮೀಮ್ಸ್‌‌ ಮಾಡಿದ್ದಾರೆ.

ಟೊಮಟೊ ಬೆಲೆಯು ಪೆಟ್ರೋಲ್‌, ಡೀಸೆಲ್‌‌ ಬೆಲೆಯನ್ನು ಹಿಂದಿಕ್ಕಿದೆ ಎಂಬ ಟ್ರೋಲ್‌ನಿಂದ ಹಿಡಿದು, ನಿತ್ಯದ ಬದುಕಿನಿಂದ ಟೊಮಟೊ ದೂರವಾಗುತ್ತಿದೆ ಎಂಬುವವರೆಗೂ ಟ್ರಾಲ್‌‌ಗಳು ಹಬ್ಬಿವೆ.

ಇಂಡಿಯಾ ಟುಡೇ ವಾಹಿನಿಯು ‘ಟೊಮಟೊ ಲೋನ್‌’ ಎಂಬ ಕಾಮಿಕ್‌ ಸೃಷ್ಟಿಸಿದ್ದು, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಪೆಟ್ರೋಲ್‌, ಡೀಸೆಲ್‌ಗಿಂತ ಟೊಮಟೊ ಬೆಲೆ ಹೆಚ್ಚಾಗಿದೆ ಎಂಬುದನ್ನು ಬಿಂಬಿಸುವ ಹಲವು ಮೀಮ್‌‌ಗಳು ಹರಿದಾಡಿವೆ. ಅದರಲ್ಲಿ ಕೆಲವು ಹೀಗಿವೆ:

ಈ ಹಿಂದೆ ಈರುಳ್ಳಿ ಬೆಲೆ ಏರಿಕೆಯಾದಾಗ ಅರ್ಥಸಚಿವೆ ನಿರ್ಮಲಾ ಸೀತರಾಮನ್‌ ಅವರು, ‘ನಾನು ಈರುಳ್ಳಿ ಬಳಸುವುದಿಲ್ಲ’ ಎಂದಿದ್ದನ್ನು ಈಗ ಮೀಮ್‌ಗೆ ಬಳಸಲಾಗಿದೆ. “ನಾನು ಬಳಸುವುದಿಲ್ಲ ಟೊಮಟೊ, ನನ್ನ ಊಟವನ್ನು ಆರ್ಡರ್‌ ಮಾಡಲಿಕ್ಕಿದೆ ಝೊಮೊಟೊ’ ಎಂದು ಟ್ರಾಲ್‌ ಮಾಡಲಾಗಿದೆ.

ಟೊಮಟೊ ಬೆಲೆ ಗಗನಕ್ಕೇರಿದೆ ಎಂಬುದನ್ನು, ‘ಜ್ಯುವೆಲರಿ’ಗಳಿಗೆ ಹೋಲಿಕೆ ಮಾಡಲಾಗಿದೆ. ‘ಬೆಸ್ಟ್‌ ಪ್ರಪೊಸಲ್‌ ರಿಂಗ್‌’, ‘ಅತ್ಯಂತ ಬೆಲೆಬಾಳುವ ವೆಡ್ಡಿಂಗ್ ರಿಂಗ್‌’ ಎಂದೆಲ್ಲ ಬಿಂಬಿಸಲಾಗಿದೆ.

‘ಧೂಮ್’ ಚಿತ್ರದಲ್ಲಿ ರಿತ್ವಿಕ್‌ ರೋಷನ್‌ ಡೈಮಂಡ್ ಕದಿಯುವುದನ್ನು, ಟೊಮೊಟೊ ಕದಿಯುತ್ತಿರುವಂತೆ ಮೀಮ್‌ ಮಾಡಲಾಗಿದೆ.

ಫೇಸ್‌ಬುಕ್‌ ಬಳಕೆದಾರ, ಸಿನಿಮಾ ವಿಮರ್ಶಕ ಎಲ್‌.ಎಂ.ಸಂತೋಷ್‌ಕುಮಾರ್‌‌ ಅವರು ಸರಣಿಯಾಗಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

“ಪ್ರತಿಷ್ಟಿತ ಬಡಾವಣೆಯಮನೆಯೊಂದರ ಮೇಲೆ ಐಟಿ ಇಲಾಖೆ ದಾಳಿ, ಅಕ್ರಮವಾಗಿಕುಂಡಗಳಲ್ಲಿ ಟೊಮೆಟೋ ಬೆಳೆದುಮಾರುತ್ತಿದ್ದವರ ಬಂಧನ….(ಈ ಥರಾನೂ ಇನ್ನು ಮುಂದೆ ಸುದ್ದಿ ಬರಬಹುದು)”

“ಇಷ್ಟು ದಿನ… ಮನೆಯಲ್ಲೇ ಕುಂಡಗಳಲ್ಲಿ ಟೊಮೆಟೋ ಬೆಳೆಯುವುದು ಹೇಗೆ? ಅಂತ ವೀಡಿಯೋ ಕಾಣಿಸ್ತಿದ್ವು. ಇನ್ನು ಮೇಲೆ.. ಕುಂಡಗಳಲ್ಲಿ ಬಿಟ್ಟಿರುವ ಟೊಮೆಟೋ ಅನ್ನುಕಳುವಾಗದಿರುವಂತೆ ನೋಡಿಕೊಳ್ಳುವುದು ಹೇಗೆ? ಅಂತಲೂ ವೀಡಿಯೋಗಳು ಬರಬಹುದು”

“ಏನು ಅಡುಗೆ ಹಬ್ಬಕ್ಕೆ? ಏನಿಲ್ಲಪ್ಪ…. ಒಬ್ಬಟ್ಟು, ಕೋಸಂಬರಿ, ಅನ್ನ, ಸಾರು, ಹಪ್ಪಳ ಇನ್ನೇನು ಸ್ಪೆಷಲ್ಲು? !ಟೊಮ್ಯಾಟೊ ಗೊಜ್ಜು!! ಟೊಮ್ಯಾಟೊ ಗೊಜ್ಜಾ?”

“ಎಲ್ಲ ಅಂಗಡಿಗಳಲ್ಲಿ ಮಾಮೂಲಿ ತಗೊತಾ ಬರ್ತಿರ್ತಾನೆ ಒಬ್ಬ ಪೊಲೀಸು….ತರಕಾರಿ ಅಂಗಡಿ ಬಂದಾಗ ಎಂದಿನಂತೆ….. “ಟೊಮೆಟೋ ಹಾಕ್ಬಿಡಮ್ಮ” ಅಂತಾನೆ. ತರಕಾರಿ ಅಂಗಡಿಯವಳು: ಸ್ವಾಮಿ….. ಬೇಕಿದ್ರೆ ದುಡ್ಡು ಕೇಳಿ… ಕೊಟ್ಬಿಡ್ತೀನಿ.. ಟೊಮೆಟೋ ಕೇಳಿ ನಮ್ಮ‌ಹೊಟ್ಟೆ ಮೇಲೆ ಹೊಡೀಬೇಡಿ!!

– ಹೀಗೆ ಸಂತೋಷ್‌ ಕುಮಾರ್‌ ಎಲ್.ಎಂ. ಜೋಕ್‌ಗಳನ್ನು ಬರೆದಿದ್ದಾರೆ.

ಮೂರು ವರ್ಷಗಳ ಹಿಂದೆ ಬೆಲೆ ಏರಿಕೆಯಾದಾಗ ಮಾಡಿದ ಮೀಮ್‌ಅನ್ನು ‘ಇತಿಹಾಸ ಮರುಕಳಿಸಿತು’ ಎಂದು ಪ್ರಶಾಂತ್‌ ಸಾಗರ ಎಂಬವರು ಹಂಚಿಕೊಂಡಿದ್ದಾರೆ.

ಲಕ್ಷ್ಮಣ್‌ ಎಂಬವರು ಹೀಗೆ ಪೋಸ್ಟ್‌ ಮಾಡಿದ್ದಾರೆ: “ಲೋ ಬ್ಯಾಚುಲರ್ಗಳಾ, ಮನೆಗೆ ಪ್ರತಿದಿನ ಎರಡೆರೆಡು ಕೇಜಿ ಟೊಮ್ಯಾಟೋ ತಗಂಡೋಗ್ರಿ, ನಮ್ಮ ಹುಡುಗನಿಗೆ ಜವಾಬ್ದಾರಿ ಬಂದೈತೆ ಅಂತಾ ತಿಳ್ಕಂಡ್ ನಿಮ್ಗೆ ಮದುವೆ ಮಾಡ್ಬೋದ್”


ಇದನ್ನೂ ಓದಿರಿ: ಗದಗ: ಜಂಟಿ ಕೃಷಿ ನಿರ್ದೇಶಕರ ಮನೆ ಮೇಲೆ ಎಸಿಬಿ ದಾಳಿ, 3.5 ಕೋಟಿ ಮೌಲ್ಯದ ಚಿನ್ನ ವಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪುನರ್ವಸತಿ ಕೇಂದ್ರದಲ್ಲಿ ದಲಿತ ಯುವಕ ಸಾವು ಪ್ರಕರಣ; ನಾಲ್ವರು ಪೊಲೀಸರು ಅಮಾನತು

ಬೆಂಗಳೂರು ಪೊಲೀಸರ ಕಸ್ಟಡಿಯಲ್ಲಿ 22 ವರ್ಷದ ದಲಿತ ಯುವಕನಿಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಮಂಗಳವಾರ ಇನ್ಸ್‌ಪೆಕ್ಟರ್ ಮತ್ತು ಇತರ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ನಂತರ, ಪುನರ್ವಸತಿ ಕೇಂದ್ರದಲ್ಲಿ ಅವರ...

ಉತ್ತರ ಪ್ರದೇಶ| ಮುಜಫರ್‌ನಗರದ ಮಸೀದಿ-ದೇವಸ್ಥಾನಗಳ 55 ಕ್ಕೂ ಹೆಚ್ಚು ಧ್ವನಿವರ್ಧಕ ತೆರವು

ಉತ್ತರ ಪ್ರದೇಶದ ಮುಜಫರ್‌ನಗರದ ಪೊಲೀಸರು, ನಗರದಲ್ಲಿ ಹೆಚ್ಚಿನ ಶಬ್ದ ಮಾಡುತ್ತಿದ್ದ ಧ್ವನಿವರ್ಧಕಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಧ್ವನಿ ಮಿತಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿವಿಧ ಮಸೀದಿಗಳಿಂದ 55 ಕ್ಕೂ...

ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಡಿ.6ರಂದು ಮೈಸೂರಿನಲ್ಲಿ ಕಾಲ್ನಡಿಗೆ ಜಾಥಾ: ಬಸವರಾಜ ಕೌತಾಳ್

ಇದೇ ಡಿಸೆಂಬರ್ 6ರಂದು ಸಿಎಂ ಸಿದ್ದರಾಮಯ್ಯನವರ ಸ್ವಗ್ರಾಮ ಸಿದ್ದರಾಮನಹುಂಡಿಯಿಂದ ಮೈಸೂರಿನವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಬಸವರಾಜ ಕೌತಾಳ್ ಮಾಹಿತಿ...

ಮೊಬೈಲ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ಸ್ಮಾರ್ಟ್‌ ಫೋನ್ ತಯಾರಕರು ಹೊಸ ಮೊಬೈಲ್‌ ಫೋನ್‌ಗಳಲ್ಲಿ 'ಸಂಚಾರ್ ಸಾಥಿ' ಅಪ್ಲಿಕೇಶನ್ ಪ್ರಿ-ಇನ್‌ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರ ಬುಧವಾರ (ಡಿ.3) ಹಿಂಪಡೆದಿದೆ. ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ...

ಛತ್ತೀಸ್‌ಗಢ| ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಸಾವು, ಇಬ್ಬರು ಯೋಧರು ಹುತಾತ್ಮ

ಛತ್ತೀಸ್‌ಗಢದ ಬಿಜಾಪುರದಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಆರು ಜನ ನಕ್ಸಲರು ಸಾವನ್ನಪ್ಪಿದ್ದು, ದುರದೃಷ್ಟವಶಾತ್, ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಯ ಇಬ್ಬರು ಜವಾನರು ಹುತಾತ್ಮರಾಗಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ,...

ಏಪ್ರಿಲ್ 2026 ರಿಂದ 2 ಹಂತದ ಡಿಜಿಟಲ್ ಜನಗಣತಿ: ಕೇಂದ್ರ ಸರ್ಕಾರ

2027 ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಮೊದಲ ಹಂತವು ಏಪ್ರಿಲ್ ಮತ್ತು ಸೆಪ್ಟೆಂಬರ್ 2026 ರ ನಡುವೆ ನಿಗದಿಯಾಗಿದೆ. ಎರಡನೇ ಹಂತವು ಫೆಬ್ರವರಿ...

ಬಂಗಾಳಿ ಕಾರ್ಮಿಕರನ್ನು ಒಡಿಶಾ ಪೊಲೀಸರು ಬಲವಂತವಾಗಿ ಹೊರಹಾಕಿದ್ದಾರೆ

ಒಡಿಶಾದ ನಯಾಗಢ ಜಿಲ್ಲೆಯ ಪೊಲೀಸರು ನಾಲ್ಕು ಜನ ಬಂಗಾಳಿ ಮಾತನಾಡುವ ಮುಸ್ಲಿಂ ವ್ಯಾಪಾರಿಗಳನ್ನು ಭಾರತೀಯ ನಾಗರಿಕರು ಎಂದು ಸಾಬೀತುಪಡಿಸುವ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳ ಹೊರತಾಗಿಯೂ ಬಲವಂತವಾಗಿ ಹೊರಹಾಕಿದ್ದಾರೆ ಎಂದು ತೃಣಮೂಲ...

‘ಸಂಚಾರ್ ಸಾಥಿ ಆ್ಯಪ್‌’ನಿಂದ ಗೂಢಚರ್ಯೆ ಸಾಧ್ಯವಿಲ್ಲ, ಆದೇಶದಲ್ಲಿ ಬದಲಾವಣೆಗೆ ಸಿದ್ದ : ಸಚಿವ ಸಿಂಧಿಯಾ

ಕೇಂದ್ರ ಸರ್ಕಾರ ಎಲ್ಲಾ ಸ್ಮಾರ್ಟ್‌ ಫೋನ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್ ಕಡ್ಡಾಯಗೊಳಿಸಿರುವುದರಿಂದ ಜನರು ಗೌಪ್ಯತೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಕುರಿತು ಬುಧವಾರ (ಡಿ.3) ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ದೂರ ಸಂಪರ್ಕ ಸಚಿವ ಜೋತಿರಾಧಿತ್ಯ...

ಮಹಾರಾಷ್ಟ್ರ| ವರದಕ್ಷಿಣೆಯಾಗಿ ಬೈಕ್‌ ಕೊಡಲಿಲ್ಲವೆಂದು ಪತ್ನಿಗೆ ‘ತಲಾಖ್’ ನೀಡಿದ ಪತಿ

ಭಾರತೀಯ ಕಾನೂನಿನಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದ್ದರೂ, ವರದಕ್ಷಿಣೆಯಾಗಿ ಮೋಟಾರ್ ಸೈಕಲ್ (ಬೈಕ್‌) ಕೊಡದ ಕಾರಣ ತನ್ನ ಪತ್ನಿಗೆ 'ತ್ರಿವಳಿ ತಲಾಖ್' ನೀಡಿದ ಆರೋಪದ ಮೇಲೆ ಮಹಾರಾಷ್ಟ್ರದ ಭಿವಂಡಿಯ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಥಾಣೆ...

ದೆಹಲಿ ಮಹಾನಗರ ಪಾಲಿಕೆ ಉಪಚುನಾವಣೆ: 7 ವಾರ್ಡ್‌ಗಳಲ್ಲಿ ಬಿಜೆಪಿ, ಮೂರರಲ್ಲಿ ಆಪ್‌ಗೆ ಗೆಲುವು

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಉಪಚುನಾವಣೆಯ ಮತಗಳ ಎಣಿಕೆ ಬುಧವಾರ (ಡಿಸೆಂಬರ್ 1) ನಡೆಯಿತು. ಭಾರತೀಯ ಜನತಾ ಪಕ್ಷ (ಬಿಜೆಪಿ) 12 ವಾರ್ಡ್‌ಗಳಲ್ಲಿ ಏಳು ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ....