Homeಕರ್ನಾಟಕಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

ಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

- Advertisement -
- Advertisement -

ಒಂದು ಕೆ.ಜಿ. ಟೊಮಟೊ ಬೆಲೆ 110 ರೂಪಾಯಿ ದಾಟಿದೆ. ಕೆಲವು ಕಡೆ 130 ದಾಟಿದೆ. ಸಾಮಾನ್ಯವಾಗಿ ಯಾವುದೇ ಬೆಲೆ ಏರಿಕೆಯಾದಾಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ‘ಟ್ರಾಲ್‌’ಗಳಾಗುತ್ತವೆ. ಈಗ ಟೊಮಟೊ ಟ್ರಾಲ್‌‌ಗೆ ಗುರಿಯಾಗಿದ್ದು, ಜನರು ತರಹೇವಾರಿ ಮೀಮ್ಸ್‌‌ ಮಾಡಿದ್ದಾರೆ.

ಟೊಮಟೊ ಬೆಲೆಯು ಪೆಟ್ರೋಲ್‌, ಡೀಸೆಲ್‌‌ ಬೆಲೆಯನ್ನು ಹಿಂದಿಕ್ಕಿದೆ ಎಂಬ ಟ್ರೋಲ್‌ನಿಂದ ಹಿಡಿದು, ನಿತ್ಯದ ಬದುಕಿನಿಂದ ಟೊಮಟೊ ದೂರವಾಗುತ್ತಿದೆ ಎಂಬುವವರೆಗೂ ಟ್ರಾಲ್‌‌ಗಳು ಹಬ್ಬಿವೆ.

ಇಂಡಿಯಾ ಟುಡೇ ವಾಹಿನಿಯು ‘ಟೊಮಟೊ ಲೋನ್‌’ ಎಂಬ ಕಾಮಿಕ್‌ ಸೃಷ್ಟಿಸಿದ್ದು, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಪೆಟ್ರೋಲ್‌, ಡೀಸೆಲ್‌ಗಿಂತ ಟೊಮಟೊ ಬೆಲೆ ಹೆಚ್ಚಾಗಿದೆ ಎಂಬುದನ್ನು ಬಿಂಬಿಸುವ ಹಲವು ಮೀಮ್‌‌ಗಳು ಹರಿದಾಡಿವೆ. ಅದರಲ್ಲಿ ಕೆಲವು ಹೀಗಿವೆ:

ಈ ಹಿಂದೆ ಈರುಳ್ಳಿ ಬೆಲೆ ಏರಿಕೆಯಾದಾಗ ಅರ್ಥಸಚಿವೆ ನಿರ್ಮಲಾ ಸೀತರಾಮನ್‌ ಅವರು, ‘ನಾನು ಈರುಳ್ಳಿ ಬಳಸುವುದಿಲ್ಲ’ ಎಂದಿದ್ದನ್ನು ಈಗ ಮೀಮ್‌ಗೆ ಬಳಸಲಾಗಿದೆ. “ನಾನು ಬಳಸುವುದಿಲ್ಲ ಟೊಮಟೊ, ನನ್ನ ಊಟವನ್ನು ಆರ್ಡರ್‌ ಮಾಡಲಿಕ್ಕಿದೆ ಝೊಮೊಟೊ’ ಎಂದು ಟ್ರಾಲ್‌ ಮಾಡಲಾಗಿದೆ.

ಟೊಮಟೊ ಬೆಲೆ ಗಗನಕ್ಕೇರಿದೆ ಎಂಬುದನ್ನು, ‘ಜ್ಯುವೆಲರಿ’ಗಳಿಗೆ ಹೋಲಿಕೆ ಮಾಡಲಾಗಿದೆ. ‘ಬೆಸ್ಟ್‌ ಪ್ರಪೊಸಲ್‌ ರಿಂಗ್‌’, ‘ಅತ್ಯಂತ ಬೆಲೆಬಾಳುವ ವೆಡ್ಡಿಂಗ್ ರಿಂಗ್‌’ ಎಂದೆಲ್ಲ ಬಿಂಬಿಸಲಾಗಿದೆ.

‘ಧೂಮ್’ ಚಿತ್ರದಲ್ಲಿ ರಿತ್ವಿಕ್‌ ರೋಷನ್‌ ಡೈಮಂಡ್ ಕದಿಯುವುದನ್ನು, ಟೊಮೊಟೊ ಕದಿಯುತ್ತಿರುವಂತೆ ಮೀಮ್‌ ಮಾಡಲಾಗಿದೆ.

ಫೇಸ್‌ಬುಕ್‌ ಬಳಕೆದಾರ, ಸಿನಿಮಾ ವಿಮರ್ಶಕ ಎಲ್‌.ಎಂ.ಸಂತೋಷ್‌ಕುಮಾರ್‌‌ ಅವರು ಸರಣಿಯಾಗಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

“ಪ್ರತಿಷ್ಟಿತ ಬಡಾವಣೆಯಮನೆಯೊಂದರ ಮೇಲೆ ಐಟಿ ಇಲಾಖೆ ದಾಳಿ, ಅಕ್ರಮವಾಗಿಕುಂಡಗಳಲ್ಲಿ ಟೊಮೆಟೋ ಬೆಳೆದುಮಾರುತ್ತಿದ್ದವರ ಬಂಧನ….(ಈ ಥರಾನೂ ಇನ್ನು ಮುಂದೆ ಸುದ್ದಿ ಬರಬಹುದು)”

“ಇಷ್ಟು ದಿನ… ಮನೆಯಲ್ಲೇ ಕುಂಡಗಳಲ್ಲಿ ಟೊಮೆಟೋ ಬೆಳೆಯುವುದು ಹೇಗೆ? ಅಂತ ವೀಡಿಯೋ ಕಾಣಿಸ್ತಿದ್ವು. ಇನ್ನು ಮೇಲೆ.. ಕುಂಡಗಳಲ್ಲಿ ಬಿಟ್ಟಿರುವ ಟೊಮೆಟೋ ಅನ್ನುಕಳುವಾಗದಿರುವಂತೆ ನೋಡಿಕೊಳ್ಳುವುದು ಹೇಗೆ? ಅಂತಲೂ ವೀಡಿಯೋಗಳು ಬರಬಹುದು”

“ಏನು ಅಡುಗೆ ಹಬ್ಬಕ್ಕೆ? ಏನಿಲ್ಲಪ್ಪ…. ಒಬ್ಬಟ್ಟು, ಕೋಸಂಬರಿ, ಅನ್ನ, ಸಾರು, ಹಪ್ಪಳ ಇನ್ನೇನು ಸ್ಪೆಷಲ್ಲು? !ಟೊಮ್ಯಾಟೊ ಗೊಜ್ಜು!! ಟೊಮ್ಯಾಟೊ ಗೊಜ್ಜಾ?”

“ಎಲ್ಲ ಅಂಗಡಿಗಳಲ್ಲಿ ಮಾಮೂಲಿ ತಗೊತಾ ಬರ್ತಿರ್ತಾನೆ ಒಬ್ಬ ಪೊಲೀಸು….ತರಕಾರಿ ಅಂಗಡಿ ಬಂದಾಗ ಎಂದಿನಂತೆ….. “ಟೊಮೆಟೋ ಹಾಕ್ಬಿಡಮ್ಮ” ಅಂತಾನೆ. ತರಕಾರಿ ಅಂಗಡಿಯವಳು: ಸ್ವಾಮಿ….. ಬೇಕಿದ್ರೆ ದುಡ್ಡು ಕೇಳಿ… ಕೊಟ್ಬಿಡ್ತೀನಿ.. ಟೊಮೆಟೋ ಕೇಳಿ ನಮ್ಮ‌ಹೊಟ್ಟೆ ಮೇಲೆ ಹೊಡೀಬೇಡಿ!!

– ಹೀಗೆ ಸಂತೋಷ್‌ ಕುಮಾರ್‌ ಎಲ್.ಎಂ. ಜೋಕ್‌ಗಳನ್ನು ಬರೆದಿದ್ದಾರೆ.

ಮೂರು ವರ್ಷಗಳ ಹಿಂದೆ ಬೆಲೆ ಏರಿಕೆಯಾದಾಗ ಮಾಡಿದ ಮೀಮ್‌ಅನ್ನು ‘ಇತಿಹಾಸ ಮರುಕಳಿಸಿತು’ ಎಂದು ಪ್ರಶಾಂತ್‌ ಸಾಗರ ಎಂಬವರು ಹಂಚಿಕೊಂಡಿದ್ದಾರೆ.

ಲಕ್ಷ್ಮಣ್‌ ಎಂಬವರು ಹೀಗೆ ಪೋಸ್ಟ್‌ ಮಾಡಿದ್ದಾರೆ: “ಲೋ ಬ್ಯಾಚುಲರ್ಗಳಾ, ಮನೆಗೆ ಪ್ರತಿದಿನ ಎರಡೆರೆಡು ಕೇಜಿ ಟೊಮ್ಯಾಟೋ ತಗಂಡೋಗ್ರಿ, ನಮ್ಮ ಹುಡುಗನಿಗೆ ಜವಾಬ್ದಾರಿ ಬಂದೈತೆ ಅಂತಾ ತಿಳ್ಕಂಡ್ ನಿಮ್ಗೆ ಮದುವೆ ಮಾಡ್ಬೋದ್”


ಇದನ್ನೂ ಓದಿರಿ: ಗದಗ: ಜಂಟಿ ಕೃಷಿ ನಿರ್ದೇಶಕರ ಮನೆ ಮೇಲೆ ಎಸಿಬಿ ದಾಳಿ, 3.5 ಕೋಟಿ ಮೌಲ್ಯದ ಚಿನ್ನ ವಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...