Homeಕರ್ನಾಟಕಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

ಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

- Advertisement -
- Advertisement -

ಒಂದು ಕೆ.ಜಿ. ಟೊಮಟೊ ಬೆಲೆ 110 ರೂಪಾಯಿ ದಾಟಿದೆ. ಕೆಲವು ಕಡೆ 130 ದಾಟಿದೆ. ಸಾಮಾನ್ಯವಾಗಿ ಯಾವುದೇ ಬೆಲೆ ಏರಿಕೆಯಾದಾಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ‘ಟ್ರಾಲ್‌’ಗಳಾಗುತ್ತವೆ. ಈಗ ಟೊಮಟೊ ಟ್ರಾಲ್‌‌ಗೆ ಗುರಿಯಾಗಿದ್ದು, ಜನರು ತರಹೇವಾರಿ ಮೀಮ್ಸ್‌‌ ಮಾಡಿದ್ದಾರೆ.

ಟೊಮಟೊ ಬೆಲೆಯು ಪೆಟ್ರೋಲ್‌, ಡೀಸೆಲ್‌‌ ಬೆಲೆಯನ್ನು ಹಿಂದಿಕ್ಕಿದೆ ಎಂಬ ಟ್ರೋಲ್‌ನಿಂದ ಹಿಡಿದು, ನಿತ್ಯದ ಬದುಕಿನಿಂದ ಟೊಮಟೊ ದೂರವಾಗುತ್ತಿದೆ ಎಂಬುವವರೆಗೂ ಟ್ರಾಲ್‌‌ಗಳು ಹಬ್ಬಿವೆ.

ಇಂಡಿಯಾ ಟುಡೇ ವಾಹಿನಿಯು ‘ಟೊಮಟೊ ಲೋನ್‌’ ಎಂಬ ಕಾಮಿಕ್‌ ಸೃಷ್ಟಿಸಿದ್ದು, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಪೆಟ್ರೋಲ್‌, ಡೀಸೆಲ್‌ಗಿಂತ ಟೊಮಟೊ ಬೆಲೆ ಹೆಚ್ಚಾಗಿದೆ ಎಂಬುದನ್ನು ಬಿಂಬಿಸುವ ಹಲವು ಮೀಮ್‌‌ಗಳು ಹರಿದಾಡಿವೆ. ಅದರಲ್ಲಿ ಕೆಲವು ಹೀಗಿವೆ:

ಈ ಹಿಂದೆ ಈರುಳ್ಳಿ ಬೆಲೆ ಏರಿಕೆಯಾದಾಗ ಅರ್ಥಸಚಿವೆ ನಿರ್ಮಲಾ ಸೀತರಾಮನ್‌ ಅವರು, ‘ನಾನು ಈರುಳ್ಳಿ ಬಳಸುವುದಿಲ್ಲ’ ಎಂದಿದ್ದನ್ನು ಈಗ ಮೀಮ್‌ಗೆ ಬಳಸಲಾಗಿದೆ. “ನಾನು ಬಳಸುವುದಿಲ್ಲ ಟೊಮಟೊ, ನನ್ನ ಊಟವನ್ನು ಆರ್ಡರ್‌ ಮಾಡಲಿಕ್ಕಿದೆ ಝೊಮೊಟೊ’ ಎಂದು ಟ್ರಾಲ್‌ ಮಾಡಲಾಗಿದೆ.

ಟೊಮಟೊ ಬೆಲೆ ಗಗನಕ್ಕೇರಿದೆ ಎಂಬುದನ್ನು, ‘ಜ್ಯುವೆಲರಿ’ಗಳಿಗೆ ಹೋಲಿಕೆ ಮಾಡಲಾಗಿದೆ. ‘ಬೆಸ್ಟ್‌ ಪ್ರಪೊಸಲ್‌ ರಿಂಗ್‌’, ‘ಅತ್ಯಂತ ಬೆಲೆಬಾಳುವ ವೆಡ್ಡಿಂಗ್ ರಿಂಗ್‌’ ಎಂದೆಲ್ಲ ಬಿಂಬಿಸಲಾಗಿದೆ.

‘ಧೂಮ್’ ಚಿತ್ರದಲ್ಲಿ ರಿತ್ವಿಕ್‌ ರೋಷನ್‌ ಡೈಮಂಡ್ ಕದಿಯುವುದನ್ನು, ಟೊಮೊಟೊ ಕದಿಯುತ್ತಿರುವಂತೆ ಮೀಮ್‌ ಮಾಡಲಾಗಿದೆ.

ಫೇಸ್‌ಬುಕ್‌ ಬಳಕೆದಾರ, ಸಿನಿಮಾ ವಿಮರ್ಶಕ ಎಲ್‌.ಎಂ.ಸಂತೋಷ್‌ಕುಮಾರ್‌‌ ಅವರು ಸರಣಿಯಾಗಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

“ಪ್ರತಿಷ್ಟಿತ ಬಡಾವಣೆಯಮನೆಯೊಂದರ ಮೇಲೆ ಐಟಿ ಇಲಾಖೆ ದಾಳಿ, ಅಕ್ರಮವಾಗಿಕುಂಡಗಳಲ್ಲಿ ಟೊಮೆಟೋ ಬೆಳೆದುಮಾರುತ್ತಿದ್ದವರ ಬಂಧನ….(ಈ ಥರಾನೂ ಇನ್ನು ಮುಂದೆ ಸುದ್ದಿ ಬರಬಹುದು)”

“ಇಷ್ಟು ದಿನ… ಮನೆಯಲ್ಲೇ ಕುಂಡಗಳಲ್ಲಿ ಟೊಮೆಟೋ ಬೆಳೆಯುವುದು ಹೇಗೆ? ಅಂತ ವೀಡಿಯೋ ಕಾಣಿಸ್ತಿದ್ವು. ಇನ್ನು ಮೇಲೆ.. ಕುಂಡಗಳಲ್ಲಿ ಬಿಟ್ಟಿರುವ ಟೊಮೆಟೋ ಅನ್ನುಕಳುವಾಗದಿರುವಂತೆ ನೋಡಿಕೊಳ್ಳುವುದು ಹೇಗೆ? ಅಂತಲೂ ವೀಡಿಯೋಗಳು ಬರಬಹುದು”

“ಏನು ಅಡುಗೆ ಹಬ್ಬಕ್ಕೆ? ಏನಿಲ್ಲಪ್ಪ…. ಒಬ್ಬಟ್ಟು, ಕೋಸಂಬರಿ, ಅನ್ನ, ಸಾರು, ಹಪ್ಪಳ ಇನ್ನೇನು ಸ್ಪೆಷಲ್ಲು? !ಟೊಮ್ಯಾಟೊ ಗೊಜ್ಜು!! ಟೊಮ್ಯಾಟೊ ಗೊಜ್ಜಾ?”

“ಎಲ್ಲ ಅಂಗಡಿಗಳಲ್ಲಿ ಮಾಮೂಲಿ ತಗೊತಾ ಬರ್ತಿರ್ತಾನೆ ಒಬ್ಬ ಪೊಲೀಸು….ತರಕಾರಿ ಅಂಗಡಿ ಬಂದಾಗ ಎಂದಿನಂತೆ….. “ಟೊಮೆಟೋ ಹಾಕ್ಬಿಡಮ್ಮ” ಅಂತಾನೆ. ತರಕಾರಿ ಅಂಗಡಿಯವಳು: ಸ್ವಾಮಿ….. ಬೇಕಿದ್ರೆ ದುಡ್ಡು ಕೇಳಿ… ಕೊಟ್ಬಿಡ್ತೀನಿ.. ಟೊಮೆಟೋ ಕೇಳಿ ನಮ್ಮ‌ಹೊಟ್ಟೆ ಮೇಲೆ ಹೊಡೀಬೇಡಿ!!

– ಹೀಗೆ ಸಂತೋಷ್‌ ಕುಮಾರ್‌ ಎಲ್.ಎಂ. ಜೋಕ್‌ಗಳನ್ನು ಬರೆದಿದ್ದಾರೆ.

ಮೂರು ವರ್ಷಗಳ ಹಿಂದೆ ಬೆಲೆ ಏರಿಕೆಯಾದಾಗ ಮಾಡಿದ ಮೀಮ್‌ಅನ್ನು ‘ಇತಿಹಾಸ ಮರುಕಳಿಸಿತು’ ಎಂದು ಪ್ರಶಾಂತ್‌ ಸಾಗರ ಎಂಬವರು ಹಂಚಿಕೊಂಡಿದ್ದಾರೆ.

ಲಕ್ಷ್ಮಣ್‌ ಎಂಬವರು ಹೀಗೆ ಪೋಸ್ಟ್‌ ಮಾಡಿದ್ದಾರೆ: “ಲೋ ಬ್ಯಾಚುಲರ್ಗಳಾ, ಮನೆಗೆ ಪ್ರತಿದಿನ ಎರಡೆರೆಡು ಕೇಜಿ ಟೊಮ್ಯಾಟೋ ತಗಂಡೋಗ್ರಿ, ನಮ್ಮ ಹುಡುಗನಿಗೆ ಜವಾಬ್ದಾರಿ ಬಂದೈತೆ ಅಂತಾ ತಿಳ್ಕಂಡ್ ನಿಮ್ಗೆ ಮದುವೆ ಮಾಡ್ಬೋದ್”


ಇದನ್ನೂ ಓದಿರಿ: ಗದಗ: ಜಂಟಿ ಕೃಷಿ ನಿರ್ದೇಶಕರ ಮನೆ ಮೇಲೆ ಎಸಿಬಿ ದಾಳಿ, 3.5 ಕೋಟಿ ಮೌಲ್ಯದ ಚಿನ್ನ ವಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...