Homeಕರ್ನಾಟಕಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

ಟೊಮಟೊ ಟ್ರಾಲ್‌: ‘ಬೆಲೆ ಏರಿಕೆ’ ಕಂಡು ತರಹೇವಾರಿ ಮೀಮ್ಸ್‌ ಸೃಷ್ಟಿ; ನೋಡಿ ನಕ್ಕುಬಿಡಿ

- Advertisement -
- Advertisement -

ಒಂದು ಕೆ.ಜಿ. ಟೊಮಟೊ ಬೆಲೆ 110 ರೂಪಾಯಿ ದಾಟಿದೆ. ಕೆಲವು ಕಡೆ 130 ದಾಟಿದೆ. ಸಾಮಾನ್ಯವಾಗಿ ಯಾವುದೇ ಬೆಲೆ ಏರಿಕೆಯಾದಾಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ‘ಟ್ರಾಲ್‌’ಗಳಾಗುತ್ತವೆ. ಈಗ ಟೊಮಟೊ ಟ್ರಾಲ್‌‌ಗೆ ಗುರಿಯಾಗಿದ್ದು, ಜನರು ತರಹೇವಾರಿ ಮೀಮ್ಸ್‌‌ ಮಾಡಿದ್ದಾರೆ.

ಟೊಮಟೊ ಬೆಲೆಯು ಪೆಟ್ರೋಲ್‌, ಡೀಸೆಲ್‌‌ ಬೆಲೆಯನ್ನು ಹಿಂದಿಕ್ಕಿದೆ ಎಂಬ ಟ್ರೋಲ್‌ನಿಂದ ಹಿಡಿದು, ನಿತ್ಯದ ಬದುಕಿನಿಂದ ಟೊಮಟೊ ದೂರವಾಗುತ್ತಿದೆ ಎಂಬುವವರೆಗೂ ಟ್ರಾಲ್‌‌ಗಳು ಹಬ್ಬಿವೆ.

ಇಂಡಿಯಾ ಟುಡೇ ವಾಹಿನಿಯು ‘ಟೊಮಟೊ ಲೋನ್‌’ ಎಂಬ ಕಾಮಿಕ್‌ ಸೃಷ್ಟಿಸಿದ್ದು, ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಪೆಟ್ರೋಲ್‌, ಡೀಸೆಲ್‌ಗಿಂತ ಟೊಮಟೊ ಬೆಲೆ ಹೆಚ್ಚಾಗಿದೆ ಎಂಬುದನ್ನು ಬಿಂಬಿಸುವ ಹಲವು ಮೀಮ್‌‌ಗಳು ಹರಿದಾಡಿವೆ. ಅದರಲ್ಲಿ ಕೆಲವು ಹೀಗಿವೆ:

ಈ ಹಿಂದೆ ಈರುಳ್ಳಿ ಬೆಲೆ ಏರಿಕೆಯಾದಾಗ ಅರ್ಥಸಚಿವೆ ನಿರ್ಮಲಾ ಸೀತರಾಮನ್‌ ಅವರು, ‘ನಾನು ಈರುಳ್ಳಿ ಬಳಸುವುದಿಲ್ಲ’ ಎಂದಿದ್ದನ್ನು ಈಗ ಮೀಮ್‌ಗೆ ಬಳಸಲಾಗಿದೆ. “ನಾನು ಬಳಸುವುದಿಲ್ಲ ಟೊಮಟೊ, ನನ್ನ ಊಟವನ್ನು ಆರ್ಡರ್‌ ಮಾಡಲಿಕ್ಕಿದೆ ಝೊಮೊಟೊ’ ಎಂದು ಟ್ರಾಲ್‌ ಮಾಡಲಾಗಿದೆ.

ಟೊಮಟೊ ಬೆಲೆ ಗಗನಕ್ಕೇರಿದೆ ಎಂಬುದನ್ನು, ‘ಜ್ಯುವೆಲರಿ’ಗಳಿಗೆ ಹೋಲಿಕೆ ಮಾಡಲಾಗಿದೆ. ‘ಬೆಸ್ಟ್‌ ಪ್ರಪೊಸಲ್‌ ರಿಂಗ್‌’, ‘ಅತ್ಯಂತ ಬೆಲೆಬಾಳುವ ವೆಡ್ಡಿಂಗ್ ರಿಂಗ್‌’ ಎಂದೆಲ್ಲ ಬಿಂಬಿಸಲಾಗಿದೆ.

‘ಧೂಮ್’ ಚಿತ್ರದಲ್ಲಿ ರಿತ್ವಿಕ್‌ ರೋಷನ್‌ ಡೈಮಂಡ್ ಕದಿಯುವುದನ್ನು, ಟೊಮೊಟೊ ಕದಿಯುತ್ತಿರುವಂತೆ ಮೀಮ್‌ ಮಾಡಲಾಗಿದೆ.

ಫೇಸ್‌ಬುಕ್‌ ಬಳಕೆದಾರ, ಸಿನಿಮಾ ವಿಮರ್ಶಕ ಎಲ್‌.ಎಂ.ಸಂತೋಷ್‌ಕುಮಾರ್‌‌ ಅವರು ಸರಣಿಯಾಗಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

“ಪ್ರತಿಷ್ಟಿತ ಬಡಾವಣೆಯಮನೆಯೊಂದರ ಮೇಲೆ ಐಟಿ ಇಲಾಖೆ ದಾಳಿ, ಅಕ್ರಮವಾಗಿಕುಂಡಗಳಲ್ಲಿ ಟೊಮೆಟೋ ಬೆಳೆದುಮಾರುತ್ತಿದ್ದವರ ಬಂಧನ….(ಈ ಥರಾನೂ ಇನ್ನು ಮುಂದೆ ಸುದ್ದಿ ಬರಬಹುದು)”

“ಇಷ್ಟು ದಿನ… ಮನೆಯಲ್ಲೇ ಕುಂಡಗಳಲ್ಲಿ ಟೊಮೆಟೋ ಬೆಳೆಯುವುದು ಹೇಗೆ? ಅಂತ ವೀಡಿಯೋ ಕಾಣಿಸ್ತಿದ್ವು. ಇನ್ನು ಮೇಲೆ.. ಕುಂಡಗಳಲ್ಲಿ ಬಿಟ್ಟಿರುವ ಟೊಮೆಟೋ ಅನ್ನುಕಳುವಾಗದಿರುವಂತೆ ನೋಡಿಕೊಳ್ಳುವುದು ಹೇಗೆ? ಅಂತಲೂ ವೀಡಿಯೋಗಳು ಬರಬಹುದು”

“ಏನು ಅಡುಗೆ ಹಬ್ಬಕ್ಕೆ? ಏನಿಲ್ಲಪ್ಪ…. ಒಬ್ಬಟ್ಟು, ಕೋಸಂಬರಿ, ಅನ್ನ, ಸಾರು, ಹಪ್ಪಳ ಇನ್ನೇನು ಸ್ಪೆಷಲ್ಲು? !ಟೊಮ್ಯಾಟೊ ಗೊಜ್ಜು!! ಟೊಮ್ಯಾಟೊ ಗೊಜ್ಜಾ?”

“ಎಲ್ಲ ಅಂಗಡಿಗಳಲ್ಲಿ ಮಾಮೂಲಿ ತಗೊತಾ ಬರ್ತಿರ್ತಾನೆ ಒಬ್ಬ ಪೊಲೀಸು….ತರಕಾರಿ ಅಂಗಡಿ ಬಂದಾಗ ಎಂದಿನಂತೆ….. “ಟೊಮೆಟೋ ಹಾಕ್ಬಿಡಮ್ಮ” ಅಂತಾನೆ. ತರಕಾರಿ ಅಂಗಡಿಯವಳು: ಸ್ವಾಮಿ….. ಬೇಕಿದ್ರೆ ದುಡ್ಡು ಕೇಳಿ… ಕೊಟ್ಬಿಡ್ತೀನಿ.. ಟೊಮೆಟೋ ಕೇಳಿ ನಮ್ಮ‌ಹೊಟ್ಟೆ ಮೇಲೆ ಹೊಡೀಬೇಡಿ!!

– ಹೀಗೆ ಸಂತೋಷ್‌ ಕುಮಾರ್‌ ಎಲ್.ಎಂ. ಜೋಕ್‌ಗಳನ್ನು ಬರೆದಿದ್ದಾರೆ.

ಮೂರು ವರ್ಷಗಳ ಹಿಂದೆ ಬೆಲೆ ಏರಿಕೆಯಾದಾಗ ಮಾಡಿದ ಮೀಮ್‌ಅನ್ನು ‘ಇತಿಹಾಸ ಮರುಕಳಿಸಿತು’ ಎಂದು ಪ್ರಶಾಂತ್‌ ಸಾಗರ ಎಂಬವರು ಹಂಚಿಕೊಂಡಿದ್ದಾರೆ.

ಲಕ್ಷ್ಮಣ್‌ ಎಂಬವರು ಹೀಗೆ ಪೋಸ್ಟ್‌ ಮಾಡಿದ್ದಾರೆ: “ಲೋ ಬ್ಯಾಚುಲರ್ಗಳಾ, ಮನೆಗೆ ಪ್ರತಿದಿನ ಎರಡೆರೆಡು ಕೇಜಿ ಟೊಮ್ಯಾಟೋ ತಗಂಡೋಗ್ರಿ, ನಮ್ಮ ಹುಡುಗನಿಗೆ ಜವಾಬ್ದಾರಿ ಬಂದೈತೆ ಅಂತಾ ತಿಳ್ಕಂಡ್ ನಿಮ್ಗೆ ಮದುವೆ ಮಾಡ್ಬೋದ್”


ಇದನ್ನೂ ಓದಿರಿ: ಗದಗ: ಜಂಟಿ ಕೃಷಿ ನಿರ್ದೇಶಕರ ಮನೆ ಮೇಲೆ ಎಸಿಬಿ ದಾಳಿ, 3.5 ಕೋಟಿ ಮೌಲ್ಯದ ಚಿನ್ನ ವಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...