Homeಕರ್ನಾಟಕಹಲವಾರು ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧವೇ 'ಮಹಾಡ್ ಸತ್ಯಾಗ್ರಹ': ಬರಗೂರು ರಾಮಚಂದ್ರಪ್ಪ

ಹಲವಾರು ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧವೇ ‘ಮಹಾಡ್ ಸತ್ಯಾಗ್ರಹ’: ಬರಗೂರು ರಾಮಚಂದ್ರಪ್ಪ

- Advertisement -
- Advertisement -

“ಮಹಾಡ್ ಕೆರೆಯ ನೀರನ್ನ ಮುಟ್ಟಿದ್ದಕ್ಕಾಗಿ ಪ್ರತಿವರ್ಷ ಮಾರ್ಚ್‌ 20 ಅನ್ನು ‘ಸಾಮಾಜಿಕ ಸಬಲೀಕರಣ ದಿನ’ವನ್ನಾಗಿ ಆಚರಣೆ ಮಾಡಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಮಹಾಡ್ ಸತ್ಯಾಗ್ರಹ ಕೇವಲ ನೀರನ್ನ ಮುಟ್ಟಿದ್ದಕ್ಕಲ್ಲ, ಹಲವು ರೂಪದ ಅಸ್ಪ್ರಶ್ಯ ಆಚರಣೆಗಳಿಗೆ ಒಡ್ಡಿದ್ದ ಪ್ರತಿರೋಧವಾಗಿದೆ” ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

“ಭಾರತದಲ್ಲಿ ನಡೆದ ಅಸ್ಪ್ರಶ್ಯರ ಪರವಾದ ಮೊಟ್ಟ ಮೊದಲ ಚಳವಳಿ ಅಂದರೆ ಅದು ಮಹಾಡ್ ಸತ್ಯಾಗ್ರಹ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿರುವ ಮಹಾಡ್‌ನಲ್ಲಿ 1927 ಮಾರ್ಚ್‌ 20ರಂದು ಸಾರ್ವಜನಿಕವಾಗಿ ಕೆರೆ ನೀರನ್ನ ಮುಟ್ಟಿ ಕುಡಿಯುವುದರ ಮೂಲಕ ಇದು ಎಲ್ಲರಿಗೂ ಸೇರಿದ್ದು ಎನ್ನುವುದನ್ನ ಅಂಬೇಡ್ಕರ್ ಅವರು ಹೇಳಿದ್ದರು. ಮಾನವ ಹಕ್ಕುಗಳನ್ನ ಎತ್ತಿ ಹಿಡಿಯುವ ಈ ಮೂಲಕ ಅಂಬೇಡ್ಕರ್ ಅವರು ಬೌದ್ಧಿಕ ಬದ್ಧತೆಯನ್ನ ತೋರಿಸಿದ್ದರು” ಎಂದು ಬಣ್ಣಿಸಿದರು.

ಭಾರತದ ಅಸ್ಪ್ರಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗುರುವಾರ ಆಯೋಜಿಸಿದ್ದ ‘ಶೋಷಿತರ ಸಂಘರ್ಷ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಭಾಷಣ ಆರಂಭಕ್ಕೂ ಮುನ್ನ ಸಣ್ಣ ಕತೆಯೊಂದನ್ನು ಹೇಳಿದ ಅವರು, “ಒಂದು ಊರಿನಲ್ಲಿ ಒಬ್ಬ ಗುರು ಶಿಷ್ಯರಿಗೆ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ವಿರುದ್ಧ ಭೋಧನೆ ಮಾಡುತ್ತಾರೆ. ಅಸ್ಪಶ್ಯತೆ ಮಾಡಬಾರದು; ಅಸ್ಪ್ರಶ್ಯರನ್ನ ಕೀಳಾಗಿ ಕಾಣುವುದು ತಪ್ಪು ಎಂದೆಲ್ಲಾ ಭಾಷಣ ಮಾಡಿ ಮುಂದಿನ ಊರಿಗೆ ತೆರಳುತ್ತಾರೆ. ಇನ್ನೊಂದು ಊರಿಗೆ ಹೋಗುವಾಗ ಅಲ್ಲಿನ ಬಾವಿಯಲ್ಲಿ ಕೈಕಾಲು ತೊಳೆದು ನೀರು ಕುಡಿಯುತ್ತಾರೆ. ನೀರು ಕುಡಿದ ಮೇಲೆ ಬರುವಾಗ ಯಾರೋ ಒಬ್ಬರು, ಇದು ಅಸ್ಪೃಶ್ಯರ ಬಾವಿ ಎಂದು ಹೇಳುತ್ತಾರೆ. ಆ ಬಳಿಕ ಗುರುವಿಗೆ ತಳಮಳ ಶುರುವಾಗಿ ಎಂತಹ ಪಾಪ ತಟ್ಟಿತ್ತು ನನಗೆ ಎಂದು ಹೇಳಿ ಒಬ್ಬ ಬುದ್ಧಿವಂತನ ಹತ್ತಿರ ಹೋಗಿ ಹೀಗೆ ಮಾಡಿದೆ, ಈ ಪಾಪ ಕಳೆದುಕೊಳ್ಳುವುದಕ್ಕೆ ಏನು ಮಾಡಲಿ ಹೇಳಿ ಎಂದು ಕೇಳುತ್ತಾನೆ. ಆ ಬುದ್ಧಿವಂತ ಬಾವಿ ನೀರು ಕುಡಿಯುವ ಸಂದರ್ಭದಲ್ಲಿ ಏನೇನೂ ಮಾಡಿದೆ ಕ್ರಮವಾಗಿ ಹೇಳು ಎಂದಾಗ; ಮೊದಲಿಗೆ ಬಾವಿ ಮೆಟ್ಟಿಲು ಇಳಿದು ಹೋಗಿ ಕೈಕಾಲು ತೊಳೆದು ಆಮೇಲೆ ನೀರು ಕುಡಿದೆ ಎಂದು ಗುರು ಹೇಳುತ್ತಾನೆ. ಆ ಬಳಿಕ ಬುದ್ದಿವಂತ, ನಿನಗೇನು ಆಗಲ್ಲ; ಏಕೆಂದರೆ, ಮೊದಲಿಗೆ ನೀನು ಕೈ-ಕಾಲು ತೊಳೆದಿದ್ದೀಯ. ನಿನ್ನ ಪಾದ ಸ್ಪರ್ಶದಿಂದ ಆ ಬಾವಿಯ ನೀರು ಪವಿತ್ರವಾಯಿತು. ಹಾಗಾಗಿ, ನಿನಗೆ ಏನು ಆಗಲ್ಲ ಎಂದು ಹೇಳಿದ್ನಂತೆ. ಇದು ಕಲ್ಪಿತ ಪ್ರಸಂಗ, ಆದರೂ ಇದರೊಳಗಡೆ ವಾಸ್ತವ ಇದೆ. ಅಂದರೆ, ಗುರು ಪತನಗೊಂಡ ಪ್ರಾಮಾಣಿಕತೆಯ ಸಂಕೇತ. ಈ ಬುದ್ಧಿವಂತ ಭ್ರಷ್ಟಗೊಂಡ ಬೌದ್ಧಿಕತೆಯ ಸಂಕೇತ. ಇವು ಯಾವತ್ತಿಗೂ ಕೂಡ ಒಂದೇ. ಇವು ದೇಶವನ್ನ ಉದ್ಧಾರ ಮಾಡುವುದಿಲ್ಲ. ದೊಡ್ಡ ದೊಡ್ಡ ಹೆಸರು ಇಟ್ಟುಕೊಂಡಿರುವವರಿಗೆ ಪ್ರಾಮಾಣಿಕತೆ ಇರೋದಿಲ್ಲ. ಆ ಗುರು ಪ್ರಾಮಾಣಿಕನಾಗಿದ್ದರೇ ಅಸ್ಪ್ರಶ್ಯರ ಬಾವಿ ನೀರು ಕುಡಿದೆ ಎಂದು ಸಂಭ್ರಮಿಸಬೇಕಿತ್ತು. ಇನ್ನು ಆತ ನಿಜವಾದ ಬುದ್ಧಿವಂತನೇ ಆಗಿದ್ದರೇ, ಆ ಗುರುವನ್ನ ಬೈದು ಕಳಿಸಬೇಕಿತ್ತು” ಎಂದು ವಿವರಿಸಿದರು.

“ಇಂದು ನಾವು ಸಹ ಪತನಗೊಂಡಿರುವ ಪ್ರಾಮಾಣಿಕತೆಯ, ಭ್ರಷ್ಟಗೊಂಡಿರುವ ಬೌದ್ಧಿಕ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನೈತಿಕ ಶಕ್ತಿ, ಸಂಘಟನಾ ಶಕ್ತಿ, ವಿಚಾರ ಶಕ್ತಿ ಸೇರಿ ಒಂದು ಬೌದ್ದಿಕ ಬದ್ದತೆ ಬೇಕು. ಇವತ್ತು ಸಹ ಅಸ್ಪಶ್ಯರಿಗೆ ಹಿಂಸೆ ನೀಡುವ ಘಟನೆ ನಡೆಯುತ್ತಿವೆ. ಆಗ ಅಂಬೇಡ್ಕರ್ ಅವರು ಅದಕ್ಕೊಂದು ದೊಡ್ಡ ಪ್ರತಿರೋಧ ಒಡ್ಡಿದ್ದರು. ಅಂಬೇಡ್ಕರ್ ಅವರು ಒಡ್ಡಿದ ಈ ಪ್ರತಿರೋಧದ ಚಳವಳಿಯಲ್ಲಿ ಅನೇಕ ಸವರ್ಣೀಯರು ಭಾಗವಹಿಸುತ್ತಾರೆ. ಸವರ್ಣೀಯರಲ್ಲಿನ ಪ್ರಗತಿಪರರು ಎಲ್ಲರೂ ಭಾಗವಹಿಸಿದ್ದರು. ಕೆರೆಯ ನೀರನ್ನ ಮುಟ್ಟಿದ್ದಕ್ಕಾಗಿ ಪ್ರತಿವರ್ಷ ಮಾರ್ಚ್‌ 20 ಅನ್ನು ಸಾಮಾಜಿಕ ಸಬಲೀಕರಣ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ಮಹಾಡ್ ಸತ್ಯಾಗ್ರಹ ಕೇವಲ ನೀರನ್ನ ಮುಟ್ಟಿದ್ದಲ್ಲ, ಹಲವು ರೂಪದ ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧ ಆಗಿದೆ” ಎಂದು ತಿಳಿಸಿದರು.

“ಶೋಷಿತ ಸಮುದಾಯಗಳು ಪಂಚಭೂತ ವಂಚಿತ ಸಮುದಾಯಗಳು ಈ ಸಮುದಾಯಗಳು ಗಾಳಿಯಿಂದ ವಂಚಿತರಾಗುತ್ತಾರೆ. ಭೂಮಿಯಿಂದ ವಂಚಿತರಾಗಿದ್ದಾರೆ. ಆಕಾಶ ಕನಸಿನ ಸಂಕೇತ ಅವರಿಗೆ ಕನಸು ಕಾಣೋದಕ್ಕೆ ಆಗುವುದಿಲ್ಲ. ನೀರು ಮುಟ್ಟೋದಕ್ಕೆ ಬಿಡೋದಿಲ್ಲ. ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ಒಟ್ಟಿನಲ್ಲಿ ಈ ಶೋಷಿತ ಸಮುದಾಯಗಳು ಈ ಪಂಚಭೂತಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಸರಿಯಾದ ನೀರು, ಗಾಳಿ, ಬೆಂಕಿ, ಭೂಮಿ ಇವ್ಯಾವುದನ್ನೂ ಕೊಡಲಿಲ್ಲ ಅಂದರೆ, ಇವು ಪಂಚಭೂತ ವಂಚಿತ ಸಮುದಾಯಗಳು” ಎಂದು ಹೇಳಿದರು.

“1949ರಲ್ಲಿ ಪ್ರಜಾಪ್ರಭುತ್ವವನ್ನ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಜಾಪ್ರಭುತ್ವ ಎಂದು ಅಂಬೇಡ್ಕರ್ ವಿವರಿಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಇದ್ದರೆ ಇದು ಸಾಮಾಜಿಕ ಪ್ರಜಾಪ್ರಭುತ್ವ ಆಗುತ್ತದೆ. ಆದರೆ, ಈಗ ದ್ವೇಷದ ರಾಜಕಾರಣ ನಡೆಯುತ್ತದೆ. ಪ್ರಜಾಪ್ರಭುತ್ವ ಸಮಾನತೆ ಸಹೋದರತೆ ಜತೆಗೆ ಎಲ್ಲರೂ ತಾರತಮ್ಯ ಮೀರಿ ಸಮಾಜವನ್ನ ಕಟ್ಟಬೇಕು. ಅರ್ಧಕ್ಕೂ ಹೆಚ್ಚು ಸಂಪತ್ತು ಕೆಲವೇ ಜನರ ಬಳಿ‌ ಇದೆ. ಸ್ವಾತಂತ್ರ್ಯ ಕೊಟ್ಟಿರುವ ಹಕ್ಕಿನಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅನೇಕ ಚಳುವಳಿಗಳ ಕಾರಣಕ್ಕಾಗಿ ಅನೇಕ ಮುನ್ನಡೆಗಳು ನಡೆಯುತ್ತಿವೆ. ಈ ಮುನ್ನಡೆಗಳ ನಡುವೆ ಹಲವು ಸಮಸ್ಯೆಗಳು ಇದೆ. ಇನ್ನೂ ಅಸ್ಪ್ರಶ್ಯತೆ ಇದೆ. ಸಾಮಾಜಿಕ ಪ್ರಜಾಪ್ರಭುತ್ವ ನೆಲೆಯೂರಿದರೆ ಆಗ ಸ್ವಾತಂತ್ರ್ಯ ಸಮಾನತೆ‌ ಬರುತ್ತದೆ” ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಇಂದಿರಾ ಕೃಷ್ಣಪ್ಪ ಮಾತನಾಡಿ, “ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಈ ದಿನಾಚರಣೆಯನ್ನ ನಡೆಸುತ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಮಹಾಡ್ ಸತ್ಯಾಗ್ರಹದ ಅರಿವು ಮೂಡಲಿ ಎಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಏಕಕಾಲದಲ್ಲಿ ಆಚರಣೆ ಮಾಡಲಾಗುತ್ತಿದೆ” ಎಂದರು.

“ಪ್ರಯಾಗರಾಜ್‌ಗೆ ಹೋಗಿ ಕುಂಭಮೇಳದಲ್ಲಿ ಜನರು ಮುಳುಗಿ ಪವಿತ್ರರಾಗಿದ್ದೀವಿ ಎಂದು ಹೇಳಿಕೊಂಡರು. ಅಲ್ಲಿನ ಜೀವಜಲವನ್ನ ಕೊಳಕು ಮಾಡಿದ್ದಾರೆ; ಇದು ಸಾಮಾನ್ಯ ಜ್ಞಾನ ಎಲ್ಲರಿಗೂ ಗೊತ್ತಾಗುವ ವಿಚಾರ. ನೀರನ್ನು ಹಾಳು ಮಾಡಿ, ಮಲಿನ ಮಾಡಿದ್ದಾರೆ. ಸರ್ಕಾರ ಆ ಪ್ರದೇಶ, ನೀರನ್ನ ಸ್ವಚ್ಛ ಮಾಡಲು ನಮ್ಮ ತೆರಿಗೆ ಹಣದಲ್ಲಿ ನೂರಾರು ಕೋಟಿ ಹಣ ಖರ್ಚು ಮಾಡಿದೆ. ಎಷ್ಟು ಹಣ ವೆಚ್ಚ ಆಗಿದೆ ಎಂದು ಯಾರಾದರೂ ಯೋಚನೆ ಮಾಡಿದ್ದೀರಾ? ಅಂಬೇಡ್ಕರ್ ಮಾಡಿದ್ದ ಸತ್ಯಾಗ್ರಹಕ್ಕೂ ಈಗ ಸರ್ಕಾರವೇ ಏರ್ಪಡಿಸುವ ಇಂತಹ ಕಾರ್ಯಕ್ರಮಗಳಿಗೂ ಎಲ್ಲಿಯ ಸಾಮ್ಯತೆ? ಮೌಢ್ಯದ ವಿರೋಧದ ಬಗ್ಗೆ ಮಾತನಾಡಬೇಕಾದ ಕರ್ನಾಟಕ ಸರ್ಕಾರ ಇಲ್ಲಿಯೂ ಕೂಡ ಹಾಗೆಯೇ ಮಾಡಿತ್ತು. ಈ ಬಗ್ಗೆ ಎಲ್ಲರೂ ಪ್ರಶ್ನೆಗಳನ್ನ ಎತ್ತಿ ಹಿಡಿಯಬೇಕು” ಎಂದು ಹೇಳಿದರು.

“ಈ ಚಳವಳಿ ನಡೆದು ಇಂದಿಗೆ 98 ವರ್ಷಗಳು ಕಳೆದರು ಕೂಡ ನೀರಿನ ವಿಷಯದಲ್ಲಿ, ಬಟ್ಟೆಯ ವಿಷಯದಲ್ಲಿ, ದಲಿತರ ಅಭಿರುಚಿಯ ವಿಷಯದಲ್ಲಿ ದಿನನಿತ್ಯ ಕೊಲೆ, ಸುಲಿಗೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚಿಗೆ ರಾಜಸ್ತಾನದ ಶಾಲೆಯೊಂದರಲ್ಲಿ ಏಳನೇ ತರಗತಿಯ ಬಾಲಕನೊಬ್ಬ ನೀರು ಕುಡಿದನೆಂದು ಹೊಡೆದು ಸಾಯಿಸಿದರು. ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಸಾರ್ವಜನಿಕ ಬಾವಿಯೊಂದರ ನೀರನ್ನು ಮುಟ್ಟಿದ ಕಾರಣಕ್ಕೆ ಕೊಲೆಮಾಡಲಾಯಿತು. ಹೀಗೆ, ಪ್ರತಿದಿನ ಸವರ್ಣಿಯರು ತಮ್ಮ ಬಾವಿಯಲ್ಲಿ ನೀರು ಸೇದಿದರು ಎಂದು. ಕೆರೆಯ ನೀರನ್ನು ಬಳಸಿದರು ಎಂದು ನಿರಂತರವಾಗಿ ಹಲ್ಲೆಗಳನ್ನು ದೇಶಾದ್ಯಂತ ನಡೆಸುತ್ತಲೇ ಇದ್ದಾರೆ. ಇದು ದೇಶ ಸಮಾನತೆಯ ಕಡೆಗೆ ನಡೆಯದೆ ಅಮಾನುಷ ದ್ವೇಷ ಮತ್ತು ವಿಕೃತಿಯ ಕಡೆಗೆ ನಡೆಯುತ್ತಿರುವುದನ್ನು ಮತ್ತೆ ಮತ್ತೆ ಖಚಿತಪಡಿಸುತ್ತಿದೆ” ಎಂದು ತಿಳಿಸಿದರು.

ದಲಿತ ಚಳವಳಿ ಘನತೆಯ ಬದುಕು ಕೊಟ್ಟಿದೆ, ಹಂಚಿಕೊಂಡು ತಿನ್ನೋಣ: ಮಾವಳ್ಳಿ ಶಂಕರ್ ಅಭಿಮತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...