Homeಕರ್ನಾಟಕಹಲವಾರು ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧವೇ 'ಮಹಾಡ್ ಸತ್ಯಾಗ್ರಹ': ಬರಗೂರು ರಾಮಚಂದ್ರಪ್ಪ

ಹಲವಾರು ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧವೇ ‘ಮಹಾಡ್ ಸತ್ಯಾಗ್ರಹ’: ಬರಗೂರು ರಾಮಚಂದ್ರಪ್ಪ

- Advertisement -
- Advertisement -

“ಮಹಾಡ್ ಕೆರೆಯ ನೀರನ್ನ ಮುಟ್ಟಿದ್ದಕ್ಕಾಗಿ ಪ್ರತಿವರ್ಷ ಮಾರ್ಚ್‌ 20 ಅನ್ನು ‘ಸಾಮಾಜಿಕ ಸಬಲೀಕರಣ ದಿನ’ವನ್ನಾಗಿ ಆಚರಣೆ ಮಾಡಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಮಹಾಡ್ ಸತ್ಯಾಗ್ರಹ ಕೇವಲ ನೀರನ್ನ ಮುಟ್ಟಿದ್ದಕ್ಕಲ್ಲ, ಹಲವು ರೂಪದ ಅಸ್ಪ್ರಶ್ಯ ಆಚರಣೆಗಳಿಗೆ ಒಡ್ಡಿದ್ದ ಪ್ರತಿರೋಧವಾಗಿದೆ” ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

“ಭಾರತದಲ್ಲಿ ನಡೆದ ಅಸ್ಪ್ರಶ್ಯರ ಪರವಾದ ಮೊಟ್ಟ ಮೊದಲ ಚಳವಳಿ ಅಂದರೆ ಅದು ಮಹಾಡ್ ಸತ್ಯಾಗ್ರಹ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿರುವ ಮಹಾಡ್‌ನಲ್ಲಿ 1927 ಮಾರ್ಚ್‌ 20ರಂದು ಸಾರ್ವಜನಿಕವಾಗಿ ಕೆರೆ ನೀರನ್ನ ಮುಟ್ಟಿ ಕುಡಿಯುವುದರ ಮೂಲಕ ಇದು ಎಲ್ಲರಿಗೂ ಸೇರಿದ್ದು ಎನ್ನುವುದನ್ನ ಅಂಬೇಡ್ಕರ್ ಅವರು ಹೇಳಿದ್ದರು. ಮಾನವ ಹಕ್ಕುಗಳನ್ನ ಎತ್ತಿ ಹಿಡಿಯುವ ಈ ಮೂಲಕ ಅಂಬೇಡ್ಕರ್ ಅವರು ಬೌದ್ಧಿಕ ಬದ್ಧತೆಯನ್ನ ತೋರಿಸಿದ್ದರು” ಎಂದು ಬಣ್ಣಿಸಿದರು.

ಭಾರತದ ಅಸ್ಪ್ರಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗುರುವಾರ ಆಯೋಜಿಸಿದ್ದ ‘ಶೋಷಿತರ ಸಂಘರ್ಷ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಭಾಷಣ ಆರಂಭಕ್ಕೂ ಮುನ್ನ ಸಣ್ಣ ಕತೆಯೊಂದನ್ನು ಹೇಳಿದ ಅವರು, “ಒಂದು ಊರಿನಲ್ಲಿ ಒಬ್ಬ ಗುರು ಶಿಷ್ಯರಿಗೆ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ವಿರುದ್ಧ ಭೋಧನೆ ಮಾಡುತ್ತಾರೆ. ಅಸ್ಪಶ್ಯತೆ ಮಾಡಬಾರದು; ಅಸ್ಪ್ರಶ್ಯರನ್ನ ಕೀಳಾಗಿ ಕಾಣುವುದು ತಪ್ಪು ಎಂದೆಲ್ಲಾ ಭಾಷಣ ಮಾಡಿ ಮುಂದಿನ ಊರಿಗೆ ತೆರಳುತ್ತಾರೆ. ಇನ್ನೊಂದು ಊರಿಗೆ ಹೋಗುವಾಗ ಅಲ್ಲಿನ ಬಾವಿಯಲ್ಲಿ ಕೈಕಾಲು ತೊಳೆದು ನೀರು ಕುಡಿಯುತ್ತಾರೆ. ನೀರು ಕುಡಿದ ಮೇಲೆ ಬರುವಾಗ ಯಾರೋ ಒಬ್ಬರು, ಇದು ಅಸ್ಪೃಶ್ಯರ ಬಾವಿ ಎಂದು ಹೇಳುತ್ತಾರೆ. ಆ ಬಳಿಕ ಗುರುವಿಗೆ ತಳಮಳ ಶುರುವಾಗಿ ಎಂತಹ ಪಾಪ ತಟ್ಟಿತ್ತು ನನಗೆ ಎಂದು ಹೇಳಿ ಒಬ್ಬ ಬುದ್ಧಿವಂತನ ಹತ್ತಿರ ಹೋಗಿ ಹೀಗೆ ಮಾಡಿದೆ, ಈ ಪಾಪ ಕಳೆದುಕೊಳ್ಳುವುದಕ್ಕೆ ಏನು ಮಾಡಲಿ ಹೇಳಿ ಎಂದು ಕೇಳುತ್ತಾನೆ. ಆ ಬುದ್ಧಿವಂತ ಬಾವಿ ನೀರು ಕುಡಿಯುವ ಸಂದರ್ಭದಲ್ಲಿ ಏನೇನೂ ಮಾಡಿದೆ ಕ್ರಮವಾಗಿ ಹೇಳು ಎಂದಾಗ; ಮೊದಲಿಗೆ ಬಾವಿ ಮೆಟ್ಟಿಲು ಇಳಿದು ಹೋಗಿ ಕೈಕಾಲು ತೊಳೆದು ಆಮೇಲೆ ನೀರು ಕುಡಿದೆ ಎಂದು ಗುರು ಹೇಳುತ್ತಾನೆ. ಆ ಬಳಿಕ ಬುದ್ದಿವಂತ, ನಿನಗೇನು ಆಗಲ್ಲ; ಏಕೆಂದರೆ, ಮೊದಲಿಗೆ ನೀನು ಕೈ-ಕಾಲು ತೊಳೆದಿದ್ದೀಯ. ನಿನ್ನ ಪಾದ ಸ್ಪರ್ಶದಿಂದ ಆ ಬಾವಿಯ ನೀರು ಪವಿತ್ರವಾಯಿತು. ಹಾಗಾಗಿ, ನಿನಗೆ ಏನು ಆಗಲ್ಲ ಎಂದು ಹೇಳಿದ್ನಂತೆ. ಇದು ಕಲ್ಪಿತ ಪ್ರಸಂಗ, ಆದರೂ ಇದರೊಳಗಡೆ ವಾಸ್ತವ ಇದೆ. ಅಂದರೆ, ಗುರು ಪತನಗೊಂಡ ಪ್ರಾಮಾಣಿಕತೆಯ ಸಂಕೇತ. ಈ ಬುದ್ಧಿವಂತ ಭ್ರಷ್ಟಗೊಂಡ ಬೌದ್ಧಿಕತೆಯ ಸಂಕೇತ. ಇವು ಯಾವತ್ತಿಗೂ ಕೂಡ ಒಂದೇ. ಇವು ದೇಶವನ್ನ ಉದ್ಧಾರ ಮಾಡುವುದಿಲ್ಲ. ದೊಡ್ಡ ದೊಡ್ಡ ಹೆಸರು ಇಟ್ಟುಕೊಂಡಿರುವವರಿಗೆ ಪ್ರಾಮಾಣಿಕತೆ ಇರೋದಿಲ್ಲ. ಆ ಗುರು ಪ್ರಾಮಾಣಿಕನಾಗಿದ್ದರೇ ಅಸ್ಪ್ರಶ್ಯರ ಬಾವಿ ನೀರು ಕುಡಿದೆ ಎಂದು ಸಂಭ್ರಮಿಸಬೇಕಿತ್ತು. ಇನ್ನು ಆತ ನಿಜವಾದ ಬುದ್ಧಿವಂತನೇ ಆಗಿದ್ದರೇ, ಆ ಗುರುವನ್ನ ಬೈದು ಕಳಿಸಬೇಕಿತ್ತು” ಎಂದು ವಿವರಿಸಿದರು.

“ಇಂದು ನಾವು ಸಹ ಪತನಗೊಂಡಿರುವ ಪ್ರಾಮಾಣಿಕತೆಯ, ಭ್ರಷ್ಟಗೊಂಡಿರುವ ಬೌದ್ಧಿಕ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನೈತಿಕ ಶಕ್ತಿ, ಸಂಘಟನಾ ಶಕ್ತಿ, ವಿಚಾರ ಶಕ್ತಿ ಸೇರಿ ಒಂದು ಬೌದ್ದಿಕ ಬದ್ದತೆ ಬೇಕು. ಇವತ್ತು ಸಹ ಅಸ್ಪಶ್ಯರಿಗೆ ಹಿಂಸೆ ನೀಡುವ ಘಟನೆ ನಡೆಯುತ್ತಿವೆ. ಆಗ ಅಂಬೇಡ್ಕರ್ ಅವರು ಅದಕ್ಕೊಂದು ದೊಡ್ಡ ಪ್ರತಿರೋಧ ಒಡ್ಡಿದ್ದರು. ಅಂಬೇಡ್ಕರ್ ಅವರು ಒಡ್ಡಿದ ಈ ಪ್ರತಿರೋಧದ ಚಳವಳಿಯಲ್ಲಿ ಅನೇಕ ಸವರ್ಣೀಯರು ಭಾಗವಹಿಸುತ್ತಾರೆ. ಸವರ್ಣೀಯರಲ್ಲಿನ ಪ್ರಗತಿಪರರು ಎಲ್ಲರೂ ಭಾಗವಹಿಸಿದ್ದರು. ಕೆರೆಯ ನೀರನ್ನ ಮುಟ್ಟಿದ್ದಕ್ಕಾಗಿ ಪ್ರತಿವರ್ಷ ಮಾರ್ಚ್‌ 20 ಅನ್ನು ಸಾಮಾಜಿಕ ಸಬಲೀಕರಣ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ಮಹಾಡ್ ಸತ್ಯಾಗ್ರಹ ಕೇವಲ ನೀರನ್ನ ಮುಟ್ಟಿದ್ದಲ್ಲ, ಹಲವು ರೂಪದ ಅಸ್ಪ್ರಶ್ಯ ಆಚರಣೆಗೆ ಒಡ್ಡಿದ್ದ ಪ್ರತಿರೋಧ ಆಗಿದೆ” ಎಂದು ತಿಳಿಸಿದರು.

“ಶೋಷಿತ ಸಮುದಾಯಗಳು ಪಂಚಭೂತ ವಂಚಿತ ಸಮುದಾಯಗಳು ಈ ಸಮುದಾಯಗಳು ಗಾಳಿಯಿಂದ ವಂಚಿತರಾಗುತ್ತಾರೆ. ಭೂಮಿಯಿಂದ ವಂಚಿತರಾಗಿದ್ದಾರೆ. ಆಕಾಶ ಕನಸಿನ ಸಂಕೇತ ಅವರಿಗೆ ಕನಸು ಕಾಣೋದಕ್ಕೆ ಆಗುವುದಿಲ್ಲ. ನೀರು ಮುಟ್ಟೋದಕ್ಕೆ ಬಿಡೋದಿಲ್ಲ. ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ಒಟ್ಟಿನಲ್ಲಿ ಈ ಶೋಷಿತ ಸಮುದಾಯಗಳು ಈ ಪಂಚಭೂತಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಸರಿಯಾದ ನೀರು, ಗಾಳಿ, ಬೆಂಕಿ, ಭೂಮಿ ಇವ್ಯಾವುದನ್ನೂ ಕೊಡಲಿಲ್ಲ ಅಂದರೆ, ಇವು ಪಂಚಭೂತ ವಂಚಿತ ಸಮುದಾಯಗಳು” ಎಂದು ಹೇಳಿದರು.

“1949ರಲ್ಲಿ ಪ್ರಜಾಪ್ರಭುತ್ವವನ್ನ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಜಾಪ್ರಭುತ್ವ ಎಂದು ಅಂಬೇಡ್ಕರ್ ವಿವರಿಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಇದ್ದರೆ ಇದು ಸಾಮಾಜಿಕ ಪ್ರಜಾಪ್ರಭುತ್ವ ಆಗುತ್ತದೆ. ಆದರೆ, ಈಗ ದ್ವೇಷದ ರಾಜಕಾರಣ ನಡೆಯುತ್ತದೆ. ಪ್ರಜಾಪ್ರಭುತ್ವ ಸಮಾನತೆ ಸಹೋದರತೆ ಜತೆಗೆ ಎಲ್ಲರೂ ತಾರತಮ್ಯ ಮೀರಿ ಸಮಾಜವನ್ನ ಕಟ್ಟಬೇಕು. ಅರ್ಧಕ್ಕೂ ಹೆಚ್ಚು ಸಂಪತ್ತು ಕೆಲವೇ ಜನರ ಬಳಿ‌ ಇದೆ. ಸ್ವಾತಂತ್ರ್ಯ ಕೊಟ್ಟಿರುವ ಹಕ್ಕಿನಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅನೇಕ ಚಳುವಳಿಗಳ ಕಾರಣಕ್ಕಾಗಿ ಅನೇಕ ಮುನ್ನಡೆಗಳು ನಡೆಯುತ್ತಿವೆ. ಈ ಮುನ್ನಡೆಗಳ ನಡುವೆ ಹಲವು ಸಮಸ್ಯೆಗಳು ಇದೆ. ಇನ್ನೂ ಅಸ್ಪ್ರಶ್ಯತೆ ಇದೆ. ಸಾಮಾಜಿಕ ಪ್ರಜಾಪ್ರಭುತ್ವ ನೆಲೆಯೂರಿದರೆ ಆಗ ಸ್ವಾತಂತ್ರ್ಯ ಸಮಾನತೆ‌ ಬರುತ್ತದೆ” ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಇಂದಿರಾ ಕೃಷ್ಣಪ್ಪ ಮಾತನಾಡಿ, “ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಈ ದಿನಾಚರಣೆಯನ್ನ ನಡೆಸುತ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಮಹಾಡ್ ಸತ್ಯಾಗ್ರಹದ ಅರಿವು ಮೂಡಲಿ ಎಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಏಕಕಾಲದಲ್ಲಿ ಆಚರಣೆ ಮಾಡಲಾಗುತ್ತಿದೆ” ಎಂದರು.

“ಪ್ರಯಾಗರಾಜ್‌ಗೆ ಹೋಗಿ ಕುಂಭಮೇಳದಲ್ಲಿ ಜನರು ಮುಳುಗಿ ಪವಿತ್ರರಾಗಿದ್ದೀವಿ ಎಂದು ಹೇಳಿಕೊಂಡರು. ಅಲ್ಲಿನ ಜೀವಜಲವನ್ನ ಕೊಳಕು ಮಾಡಿದ್ದಾರೆ; ಇದು ಸಾಮಾನ್ಯ ಜ್ಞಾನ ಎಲ್ಲರಿಗೂ ಗೊತ್ತಾಗುವ ವಿಚಾರ. ನೀರನ್ನು ಹಾಳು ಮಾಡಿ, ಮಲಿನ ಮಾಡಿದ್ದಾರೆ. ಸರ್ಕಾರ ಆ ಪ್ರದೇಶ, ನೀರನ್ನ ಸ್ವಚ್ಛ ಮಾಡಲು ನಮ್ಮ ತೆರಿಗೆ ಹಣದಲ್ಲಿ ನೂರಾರು ಕೋಟಿ ಹಣ ಖರ್ಚು ಮಾಡಿದೆ. ಎಷ್ಟು ಹಣ ವೆಚ್ಚ ಆಗಿದೆ ಎಂದು ಯಾರಾದರೂ ಯೋಚನೆ ಮಾಡಿದ್ದೀರಾ? ಅಂಬೇಡ್ಕರ್ ಮಾಡಿದ್ದ ಸತ್ಯಾಗ್ರಹಕ್ಕೂ ಈಗ ಸರ್ಕಾರವೇ ಏರ್ಪಡಿಸುವ ಇಂತಹ ಕಾರ್ಯಕ್ರಮಗಳಿಗೂ ಎಲ್ಲಿಯ ಸಾಮ್ಯತೆ? ಮೌಢ್ಯದ ವಿರೋಧದ ಬಗ್ಗೆ ಮಾತನಾಡಬೇಕಾದ ಕರ್ನಾಟಕ ಸರ್ಕಾರ ಇಲ್ಲಿಯೂ ಕೂಡ ಹಾಗೆಯೇ ಮಾಡಿತ್ತು. ಈ ಬಗ್ಗೆ ಎಲ್ಲರೂ ಪ್ರಶ್ನೆಗಳನ್ನ ಎತ್ತಿ ಹಿಡಿಯಬೇಕು” ಎಂದು ಹೇಳಿದರು.

“ಈ ಚಳವಳಿ ನಡೆದು ಇಂದಿಗೆ 98 ವರ್ಷಗಳು ಕಳೆದರು ಕೂಡ ನೀರಿನ ವಿಷಯದಲ್ಲಿ, ಬಟ್ಟೆಯ ವಿಷಯದಲ್ಲಿ, ದಲಿತರ ಅಭಿರುಚಿಯ ವಿಷಯದಲ್ಲಿ ದಿನನಿತ್ಯ ಕೊಲೆ, ಸುಲಿಗೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚಿಗೆ ರಾಜಸ್ತಾನದ ಶಾಲೆಯೊಂದರಲ್ಲಿ ಏಳನೇ ತರಗತಿಯ ಬಾಲಕನೊಬ್ಬ ನೀರು ಕುಡಿದನೆಂದು ಹೊಡೆದು ಸಾಯಿಸಿದರು. ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಸಾರ್ವಜನಿಕ ಬಾವಿಯೊಂದರ ನೀರನ್ನು ಮುಟ್ಟಿದ ಕಾರಣಕ್ಕೆ ಕೊಲೆಮಾಡಲಾಯಿತು. ಹೀಗೆ, ಪ್ರತಿದಿನ ಸವರ್ಣಿಯರು ತಮ್ಮ ಬಾವಿಯಲ್ಲಿ ನೀರು ಸೇದಿದರು ಎಂದು. ಕೆರೆಯ ನೀರನ್ನು ಬಳಸಿದರು ಎಂದು ನಿರಂತರವಾಗಿ ಹಲ್ಲೆಗಳನ್ನು ದೇಶಾದ್ಯಂತ ನಡೆಸುತ್ತಲೇ ಇದ್ದಾರೆ. ಇದು ದೇಶ ಸಮಾನತೆಯ ಕಡೆಗೆ ನಡೆಯದೆ ಅಮಾನುಷ ದ್ವೇಷ ಮತ್ತು ವಿಕೃತಿಯ ಕಡೆಗೆ ನಡೆಯುತ್ತಿರುವುದನ್ನು ಮತ್ತೆ ಮತ್ತೆ ಖಚಿತಪಡಿಸುತ್ತಿದೆ” ಎಂದು ತಿಳಿಸಿದರು.

ದಲಿತ ಚಳವಳಿ ಘನತೆಯ ಬದುಕು ಕೊಟ್ಟಿದೆ, ಹಂಚಿಕೊಂಡು ತಿನ್ನೋಣ: ಮಾವಳ್ಳಿ ಶಂಕರ್ ಅಭಿಮತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...