ಮಹಾರಾಷ್ಟ್ರದ ಆಢಳಿತರೂಡ ‘ಮಹಾಯುತಿ’ ಮೈತ್ರಿಕೂಟ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಪ್ರತಿಪಕ್ಷಗಳ ಒಕ್ಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ಕೂಡ ಇಂದು (ನ.7) ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿದೆ.
ಎನ್ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಬಿಕೆಸಿಯಲ್ಲಿ ನಡೆದ ಎಂವಿಎ ಸಮಾವೇಶದಲ್ಲಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಿಳೆಯರಿಗೆ ಮಾಸಿಕ 3 ಸಾವಿರ ರೂ. ಧನ ಸಹಾಯ, ‘ಮಹಾಲಕ್ಷಿ’ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಎಂವಿಎ ಅಧಿಕಾರಕ್ಕೆ ಬಂದರೆ ನೀಡಲಿದೆ ಎಂದು ಭರವಸೆ ನೀಡಿದರು.
INDIA की 5 गारंटी हर वर्ग के लिए न्याय और तरक्की सुनिश्चित करेंगी – ये प्रगतिशील और समावेशी कदम गरीब, मध्यम वर्ग, बहुजनों, महिलाओं, युवाओं और छोटे व्यापारों की समृद्धि तय करेंगे।
भाजपा ने महाराष्ट्र के लोगों से उनकी चुनी सरकार, उनके हक़ के रोज़गार, रोज़गार बनाने वाले व्यापार,… pic.twitter.com/hwmFponuwm
— Rahul Gandhi (@RahulGandhi) November 6, 2024
ಉಚಿತ ಔಷಧಿಯೊಂದಿಗೆ 25 ಲಕ್ಷದ ರೂಪಾಯಿ ಉಚಿತ ಕುಟುಂಬ ವಿಮಾ ಯೋಜನೆ, ರೂ. 3 ಲಕ್ಷದವರೆಗಿನ ರೈತರ ಸಾಲ ಮನ್ನಾ ಜೊತೆಗೆ ಸಾಲ ಮರುಪಾವತಿ ಮಾಡದವರಿಗೆ ರೂ. 50,000 ಪ್ರೋತ್ಸಾಹ ಧನ, ಜಾತಿಗಣತಿ ನಡೆಸುವುದು, ಮೀಸಲಾತಿ ಮೇಲಿನ 50 ಶೇ. ಮಿತಿ ತೆಗೆದು ಹಾಕುವುದು, ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಮಾಸಿಕ 4 ಸಾವಿರ ರೂ. ಧನ ಸಹಾಯ ನೀಡುವುದು ಸೇರಿದಂತೆ ಇನ್ನೂ ಅನೇಕ ಭರವೆಸಗಳನ್ನು ಎಂವಿಎ ಜನರಿಗೆ ನೀಡಿದೆ.
ಸಮಾವೇಶದಲ್ಲಿ ಭಾಗವಹಿಸಿದ್ದ ನಾಯಕರು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಸರ್ಕಾರವು ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು. ಮಹಾಯುತಿ ಸರ್ಕಾರವನ್ನು ಬಿಜೆಪಿಯು ಏಕನಾಥ್ ಶಿಂಧೆಯವರ ಜೊತೆಗೂಡಿ ರಹಸ್ಯವಾಗಿ ರಚಿಸಿದೆ ಎಂದು ಆರೋಪಿಸಿದ್ದಾರೆ.
ಸಂವಿಧಾನವನ್ನು ಆದಷ್ಟು ಬೇಗ ತೆಗೆದು ಹಾಕಲು ಎನ್ಡಿಎ ಮತ್ತು ಆರ್ಎಸ್ಎಸ್ ಸಿದ್ದತೆ ನಡೆಸುತ್ತಿದೆ. ಹಾಗಾಗಿ, ಸಂವಿಧಾನ ರಕ್ಷಣೆಗೆ ರಾಷ್ಟ್ರವ್ಯಾಪಿ ಚಳವಳಿಯ ಅಗತ್ಯವಿದೆ ಎಂದು ಎಂವಿಎ ನಾಯಕರು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಅವರು ಯುವಕರಿಗೆ ಆರ್ಥಿಕ ನೆರವು ನೀಡುವ ಕುರಿತು ಸುದೀರ್ಘವಾಗಿ ಮಾತನಾಡಿದರು. ಧಾರಾವಿ ಯೋಜನೆ ಸೇರಿದಂತೆ ಅದಾನಿ ಜೊತೆಗಿನ ಎಲ್ಲಾ ಟೆಂಡರ್ಗಳನ್ನು ರದ್ದುಗೊಳಿಸುತ್ತೇವೆ ಎಂದು ಪುನರುಚ್ಚರಿಸಿದರು. ಶರದ್ ಪವಾರ್ ಸಾಲ ಮನ್ನಾ ಯೋಜನೆ ಕುರಿತು ಸುದೀರ್ಘವಾಗಿ ಮಾತನಾಡಿದರು.
ಇದನ್ನೂ ಓದಿ : ಮಹಾರಾಷ್ಟ್ರ ಬದಲಾವಣೆ ಬಯಸುತ್ತಿದೆ, ನಮ್ಮ ಮೈತ್ರಿ ಅದಕ್ಕಾಗಿ ಕೆಲಸ ಮಾಡುತ್ತಿದೆ: ಶರದ್ ಪವಾರ್


