Homeಫ್ಯಾಕ್ಟ್‌ಚೆಕ್ಮಹಾರಾಷ್ಟ್ರ ಬಿಟ್ ಕಾಯಿನ್ ಅಕ್ರಮ ಆರೋಪ : ಬಿಜೆಪಿ ಹಂಚಿಕೊಂಡ ಆಡಿಯೋ ನಕಲಿ ಎಂದ ಫ್ಯಾಕ್ಟ್‌ಚೆಕ್

ಮಹಾರಾಷ್ಟ್ರ ಬಿಟ್ ಕಾಯಿನ್ ಅಕ್ರಮ ಆರೋಪ : ಬಿಜೆಪಿ ಹಂಚಿಕೊಂಡ ಆಡಿಯೋ ನಕಲಿ ಎಂದ ಫ್ಯಾಕ್ಟ್‌ಚೆಕ್

- Advertisement -
- Advertisement -

ಮಹಾರಾಷ್ಟ್ರದ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕರಾದ ನಾನಾ ಪಟೋಲೆ ಮತ್ತು ಸುಪ್ರಿಯಾ ಸುಳೆ ಬಿಟ್ ಕಾಯಿನ್ ಹಣವನ್ನು ಚುನಾವಣೆಗೆ ಬಳಸಿಕೊಂಡು ಅಕ್ರಮವೆಸಗಿದ್ದಾರೆ ಎಂದು ಬಿಜೆಪಿ ಮಂಗಳವಾರ (ನ.19) ಆರೋಪಿಸಿತ್ತು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ನಿನ್ನೆ(ನ.20) ನಡೆದಿದೆ. ಅದರ ಮುನ್ನಾದಿನ ಮಂಗಳವಾರ (ನ.19) ರಾತ್ರಿ 10.58, 11.00, 11.02 ಮತ್ತು 11.04ಕ್ಕೆ ಬಿಜೆಪಿ ರಾಷ್ಟ್ರೀಯ ಸಮಿತಿಯ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ 4 ಆಡಿಯೋ ರೆಕಾರ್ಡಿಂಗ್ ಕ್ಲಿಪ್‌ಗಳನ್ನು ಅಪ್ಲೋಡ್ ಮಾಡಿತ್ತು.

ಈ ನಾಲ್ಕು ಆಡಿಯೋ ರೆಕಾರ್ಡಿಂಗ್‌ಗಳು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಕಾಂಗ್ರೆಸ್ ನಾಯಕ ನಾನಾ ಪಟೋಲೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ತಂಡದ ಇನ್‌ಸ್ಪೆಕ್ಟರ್ ಜನರಲ್ ಹಾಗೂ ಐಪಿಎಸ್‌ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಸಾರಥಿ ಎಂಬ ಆಡಿಟ್ ಸಂಸ್ಥೆಯ ಉದ್ಯೋಗಿ ಗೌರವ್ ಮೆಹ್ತಾ ನಡುವಿನ ಸಂಭಾಷಣೆಯದ್ದು ಎಂದು ಬಿಜೆಪಿ ಆರೋಪಿಸಿತ್ತು.

ಇದಕ್ಕೂ ಮುನ್ನ ಮಂಗಳವಾರ ಪುಣೆಯ ಮಾಜಿ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಪಾಟೀಲ್ ಅವರು, ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಅವರು 2018ರ ಕ್ರಿಪ್ಟೋ ಕರೆನ್ಸಿ ಹಗರಣ ಪ್ರಕರಣದ ಬಿಟ್‌ ಕಾಯಿನ್‌ಗಳನ್ನು ದುರುಪಯೋಗಪಡಿಸಿಕೊಂಡು, ಅದರ ಹಣವನ್ನು ರಾಜ್ಯ ಚುನಾವಣೆಗೆ ಬಳಸಿದ್ದಾರೆ ಎಂದು ಆರೋಪಿಸಿದ್ದರು.

ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ, ಸಾರಥಿ ಆಡಿಟ್ ಸಂಸ್ಥೆಯ ಉದ್ಯೋಗಿ ಗೌರವ್ ಮೆಹ್ತಾ, ಪ್ರಸ್ತುತ ಚಂದ್ರಾಪುರದಲ್ಲಿ ಮಹಾರಾಷ್ಟ್ರ ಮೀಸಲು ಪೊಲೀಸ್ ಪಡೆಯ ಎಸ್ಪಿಯಾಗಿರುವ ಐಪಿಎಸ್ ಅಧಿಕಾರಿ ಭಾಗ್ಯಶ್ರೀ ನವತಾಕೆ ವಿರುದ್ದ ಕೂಡ ರವೀಂದ್ರನಾಥ್ ಪಾಟೀಲ್ ಆರೋಪ ಹೊರಿಸಿದ್ದರು. ಇವರ ನಡುವಿನ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ರವೀಂದ್ರನಾಥ್ ಪಾಟೀಲ್ ಆರೋಪ ಮಾಡಿದ ಬೆನ್ನಲ್ಲೇ, ಬಿಜೆಪಿ ನಾಲ್ಕು ಆಡಿಯೋ ಕ್ಲಿಪ್‌ಗಳನ್ನು ತನ್ನ ಎಕ್ಸ್‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿತ್ತು.

ಬಿಜೆಪಿ ಹಂಚಿಕೊಂಡ ಆಡಿಯೋದಲ್ಲಿ ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಎನ್ನಲಾದ ವ್ಯಕ್ತಿಗಳು ನಾಲ್ಕು ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಸಂಗ್ರಹವಾಗಿರುವ ಬಿಟ್‌ಕಾಯಿನ್‌ಗಳಿಗೆ ಬದಲಾಗಿ ಹಣ ಕೇಳುವುದು ಮತ್ತು ಈ ವಿಷಯದಲ್ಲಿ ಯಾವುದೇ ತನಿಖೆ ನಡೆಯುವುದಿಲ್ಲ ಎಂದು ಭರವಸೆ ಕೊಡುವುದು ಇದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಬುಧವಾರ (ನ.20) ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ವಿರುದ್ದ ಗಂಭೀರ ಆರೋಪ ಮಾಡಿದ್ದರು. “ತನಿಖೆ ನಡೆದರೆ ಎಲ್ಲಾ ಹಗರಣ ಹೊರ ಬರಲಿದೆ. ಪ್ರತಿಪಕ್ಷಗಳ ಮೈತ್ರಿಕೂಟ ‘ಎಂವಿಎ ಗೋಡೆ ಮೇಲೆ ಬರೆದ ಬರಹದಂತೆ ತಮ್ಮ ಸೋಲನ್ನು ಎದುರು ನೋಡುತ್ತಿದೆ” ಎಂದಿದ್ದರು.

ಫ್ಯಾಕ್ಟ್‌ಚೆಕ್ : ಪ್ರಮುಖ ಫ್ಯಾಕ್ಟ್‌ಚೆಕ್ ಸುದ್ದಿ ಸಂಸ್ಥೆಯಾದ boomlive.in ಬಿಜೆಪಿ ಹಂಚಿಕೊಂಡಿರುವ ಆಡಿಯೋ ಕ್ಲಿಪ್‌ಗಳು ನಕಲಿ ಎಂದು ಹೇಳಿವೆ. ನಾನಾ ಪಟೋಲೆ, ಸುಪ್ರಿಯಾ ಸುಳೆ ಹಾಗೂ ಮತ್ತಿರರ ಹೆಸರಿನಲ್ಲಿ ಬಿಜೆಪಿ ಹಂಚಿಕೊಂಡಿರುವ ಆಡಿಯೋ ಕ್ಲಿಪ್‌ಗಳನ್ನು ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎಂದಿದೆ. ಪತ್ರಕರ್ತರು ಮತ್ತು ಸಂಶೋಧಕರಿಗೆ ಲಭ್ಯವಿರುವ TrueMedia.org ಡೀಪ್‌ಫೇಕ್ ಪತ್ತೆ ಸಾಧನ ಬಳಸಿಕೊಂಡು ನಾವು ಆಡಿಯೊ ಕ್ಲಿಪ್‌ಗಳನ್ನು ಪರೀಕ್ಷಿಸಿದ್ದೇವೆ ಎಂದು ತಿಳಿಸಿದೆ.

ಬಿಜೆಪಿ ಹಂಚಿಕೊಂಡಿರುವ ನಾಲ್ಕು ಆಡಿಯೋಗಳ ಪೈಕಿ ಮೂರು ಎಐ ಬಳಸಿ ಸೃಷ್ಟಿಸಿರುವುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ಒಂದು ಆಡಿಯೋ ಮಾತ್ರ ಎಐ ಎಂಬುವುದನ್ನು ಸಂಪೂರ್ಣವಾಗಿ ಖಚಿತಪಡಿಸಲು ಸಾಧ್ಯವಾಗಿಲ್ಲ. ಅದು ಕೇವಲ ಐದು ಸೆಕೆಂಡ್‌ಗಳಿವೆ. ಆ ಕ್ಲಿಪ್ ತುಂಬಾ ಚಿಕ್ಕದಾಗಿರುವುದರಿಂದ ಪರೀಕ್ಷಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ.

ನಾವು ಸುಪ್ರಿಯಾ ಸುಳೆ, ನಾನಾ ಪಟೋಲೆ ಮತ್ತು ಐಪಿಎಸ್‌ ಅಧಿಕಾರಿ ಅಮಿತಾಬ್ ಗುಪ್ತಾ ಅವರ ಅಸಲಿ ಧ್ವನಿಯನ್ನು ಯೂಟ್ಯೂಬ್‌ ಸಂದರ್ಶನಗಳಿಂದ ಆಲಿಸಿದ್ದೇವೆ. ಬಿಜೆಪಿ ಹಂಚಿಕೊಂಡಿರುವ ಆಡಿಯೋಗಳಿಗೂ ಈ ಮೂವರ ಅಸಲಿ ಧ್ವನಿಗೂ ಸಾಮ್ಯತೆ ಕಂಡು ಬಂದಿಲ್ಲ ಎಂದು ಬೂಮ್ ತಿಳಿಸಿದೆ.

ಆಡಿಯೋ-1  ಆಡಿಟ್ ಸಂಸ್ಥೆ ಉದ್ಯೋಗಿ ಗೌರವ್ ಮೆಹ್ತಾ ಮತ್ತು ಐಪಿಎಸ್ ಅಧಿಕಾರಿ ಅಮಿತಾಬ್ ಮೆಹ್ತಾ ನಡುವಿನ ಸಂಭಾಷಣೆ

ಈ ಆಡಿಯೋದಲ್ಲಿ ಆಡಿಟ್ ಸಂಸ್ಥೆ ಸಾರಥಿ ಅಸೋಸಿಯೇಟ್ಸ್‌ನ ಉದ್ಯೋಗಿ ಗೌರವ್ ಮೆಹ್ತಾ, ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರೊಂದಿಗೆ ಮಾತನಾಡುತ್ತಿರುವುದು ಎನ್ನಲಾಗಿದೆ.

ಬ್ಲೂಮ್ TrueMedia ದ AI ಡೀಪ್‌ಫೇಕ್ ಪತ್ತೆ ಸಾಧನವನ್ನು ಬಳಸಿಕೊಂಡು ಈ ಆಡಿಯೋ ಕ್ಲಿಪ್ ಅನ್ನು ಪರೀಕ್ಷಿಸಿದೆ. ಇದರಲ್ಲಿ ಆಡಿಯೋವನ್ನು ಎಐ ಮೂಲಕ ಸೃಷ್ಟಿಸಿದ್ದು ಎನ್ನುವುದಕ್ಕೆ ಹಲವು ಪುರಾವೆಗಳು ದೊರೆತಿವೆ..ಅದು ಇಲ್ಲಿದೆ.

ಆಡಿಯೋ-2 ಎನ್‌ಸಿಪಿ (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಳೆ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆ

ಈ ಆಡಿಯೋದಲ್ಲಿ ಸುಳೆ ಅವರು “ತನಿಖೆಯ ಬಗ್ಗೆ ಚಿಂತಿಸಬೇಡಿ, ಬಿಟ್‌ಕಾಯಿನ್‌ಗಳಿಗೆ ಬದಲಾಗಿ ಹಣ ಕೊಡಿ” ಎಂದು ಗೌರವ ಮೆಹ್ತಾ ಬಳಿ ಕೇಳುತ್ತಿರುವುದು ಎನ್ನಲಾಗಿದೆ.

ಬೂಮ್ ಸಂಸ್ಥೆ, 2023ರಲ್ಲಿ ಸಮ್ದೀಶ್ ಭಾಟಿಯಾ ಅವರ ವಿಡಿಯೋ ಪಾಡ್‌ಕಾಸ್ಟ್‌ ‘ಅನ್‌ಫಿಲ್ಟರ್ಡ್ ಬೈ ಸಮ್ದೀಶ್’ ಸಂದರ್ಶನಲ್ಲಿ ಸುಪ್ರಿಯಾ ಸುಳೆ ಮಾತನಾಡಿರುವ ಧ್ವನಿ ಜೊತೆ ಈ ಆಡಿಯೋವನ್ನು ಹೋಲಿಸಿ ನೋಡಿದೆ. ಈ ವೇಳೆ ಎರಡೂ ಧ್ವನಿಗಳು ಸಂಪೂರ್ಣ ಭಿನ್ನವಾಗಿ ಕಂಡು ಬಂದಿದೆ. ಸಮ್ದೀಶ್ ಭಾಟಿಯಾ ಪಾಡ್‌ಕಾಸ್ಟ್‌ನಲ್ಲಿ ಸುಪ್ರಿಯಾ ಸುಳೆ ಮಾತನಾಡಿರುವುದು ಇಲ್ಲಿದೆ.

TrueMedia AI ಡೀಪ್‌ಫೇಕ್ ಪತ್ತೆ ಸಾಧನವು ಈ ಆಡಿಯೋ ಕೃತವಾಗಿ ಸೃಷ್ಟಿಸಿದ್ದು ಎಂಬುವುದಕ್ಕೆ ಹಲವು ಪುರಾವೆಗಳನ್ನು ಕಂಡು ಹಿಡಿದಿದೆ. ಅದರ ಫಲಿತಾಂಶ ಇಲ್ಲಿದೆ 

ಆಡಿಯೋ-3  ಕಾಂಗ್ರೆಸ್ ನಾಯಕ ನಾನಾ ಪಟೋಲೆ ಮತ್ತು ಐಪಿಎಲ್ ಅಧಿಕಾರಿ ಅಮಿತಾಬ್ ಗುಪ್ತಾ ನಡುವಿನ ಸಂಭಾಷಣೆ

ಈ ಆಡಿಯೋ ಪಟೋಲೆ ಅವರು ಬಿಟ್‌ಕಾಯಿನ್ ಅನ್ನು ನಗದು ರೂಪದಲ್ಲಿ ಪರಿವರ್ತಿಸುವಂತೆ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರಿಗೆ ಬೆದರಿಕೆ ಹಾಕುತ್ತಿರುವುದು ಎಂದು ಆರೋಪಿಸಲಾಗಿದೆ.

TrueMedia.org ಈ ಆಡಿಯೋ ಎಐ ಎಂಬುವುದನ್ನು ನಿರ್ಧಿರಿಸಲು ಕೆಲವೊಂದು ಪುರಾವೆಗಳು ಇವೆ ಎಂದಿವೆ. ಅದರ ಫಲಿತಾಂಶ ಇಲ್ಲಿದೆ. ಆದರೆ, ಈ ಆಡಿಯೋ ಕೇವಲ 5 ಸೆಕೆಂಡ್‌ ಇರುವುದರಿಂದ ಈಗ ಲಭ್ಯವಿರುವ ಸಾಧನಗಳನ್ನು ಬಳಸಿಕೊಂಡು ಇದರ ಸತ್ಯಾಸತ್ಯತೆ ಕಂಡು ಖಚಿತಪಡಿಸುವುದು ಸಾಧ್ಯವಿಲ್ಲ ಎಂದು ಬೂಮ್ ಹೇಳಿದೆ.

ನಾವು ಆಡಿಯೋ ರೆಕಾರ್ಡಿಂಗ್‌ನಲ್ಲಿರುವ ಪಟೋಲೆ ಅವರ ಧ್ವನಿಯನ್ನು ನವೆಂಬರ್ 19,2024 ರಂದು ಯುಟ್ಯೂಬ್ ಚಾನೆಲ್ ಜಿಸ್ಟ್‌ನ್ಯೂಸ್‌ನಲ್ಲಿ ಪ್ರಕಟಿಸಿದ ಪಟೋಲೆ ಅವರ ಸಂದರ್ಶನದ ಧ್ವನಿಯೊಂದಿಗೆ ಹೋಲಿಕೆ ಮಾಡಿದ್ದೇವೆ. ಈ ವೇಳೆ ಎರಡು ಧ್ವನಿಗಳು ಹೋಲಿಕೆಯಾಗಿಲ್ಲ ಎಂದು ಬ್ಲೂಮ್ ತಿಳಿಸಿದೆ. ಜಿಸ್ಟ್‌ನ್ಯೂಸ್‌ ಜೊತೆಗಿನ ನಾನಾ ಪಟೋಲೆ ಅವರ ಸಂದರ್ಶನದ ವಿಡಿಯೋ ಇಲ್ಲಿದೆ.

ಆಡಿಯೋ-4 ಐಪಿಎಸ್‌ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆ

ಇದು ಪುಣೆಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಮತ್ತು ಗೌರವ್ ಮೆಹ್ತಾ ನಡುವಿನ ಸಂಭಾಷಣೆಯ ಆಡಿಯೋ ಎನ್ನಲಾಗಿದೆ. ಇದರಲ್ಲಿ ನಾನಾ ಪಟೋಲೆ ಮತ್ತು ಸುಪ್ರಿಯಾ ಸುಳೆ ಹೇಳಿದಂತೆ ಬಿಟ್‌ ಕಾಯಿನ್ ಅನ್ನು ನಗದಾಗಿ ಪರಿವರ್ತಿಸುವ ಕುರಿತು ಇದೆ.

ಯೂಟ್ಯೂಬ್‌ನಲ್ಲಿ ಐಪಿಎಸ್ ಗುಪ್ತಾ ಅವರ ಹಲವಾರು ಸಂದರ್ಶನಗಳನ್ನು ನಾವು ಗಮನಿಸಿದ್ದೇವೆ. ಅವುಗಳಲ್ಲಿ ಯಾವುದೇ ಸಂದರ್ಶನದ ಧ್ವನಿ ಬಿಜೆಪಿ ಪೋಸ್ಟ್ ಮಾಡಿರುವ ಆಡಿಯೋ ರೆಕಾರ್ಡಿಂಗ್‌ಗೆ ಹೋಲಿಕೆಯಾಗಿಲ್ಲ ಎಂದು ಬೂಮ್ ತಿಳಿಸಿದೆ. ಮಾರ್ಚ್ 15, 2024 ರ ಸಂದರ್ಶನದಲ್ಲಿ ಗುಪ್ತಾ ಅವರು ಮಾತನಾಡಿರುವ ಮೂಲ ಧ್ವನಿಯನ್ನು ಇಲ್ಲಿ ಕೇಳಬಹುದು

ಬಿಜೆಪಿ ಹಂಚಿಕೊಂಡಿರುವ ಆಡಿಯೋ ಎಐ ಸೃಷ್ಟಿತ ಎಂಬುವುದಕ್ಕೆ ಪುರಾವೆಗಳು ದೊರೆತಿದೆ ಎಂದು TrueMedia AI ದೃಢಪಡಿಸಿದೆ ಎಂದು ಬೂಮ್ ಹೇಳಿದೆ. ಫಲಿತಾಂಶ ಇಲ್ಲಿ ನೋಡಬಹುದು.

ಇವಿಷ್ಟೆ ಅಲ್ಲದೆ ಇನ್ನೂ ಕೆಲ ಎಐ ಪತ್ತೆ ಸಾಧನಗಳ ಮೂಲಕ ಬೂಮ್ ಸಂಸ್ಥೆ ಬಿಜೆಪಿ ಹಂಚಿಕೊಂಡಿರುವ ಆಡಿಯೋ ನಕಲಿ ಎಂದು ಹೇಳಿದೆ.

ಇದನ್ನೂ ಓದಿ | FACT CHECK : ಮುಂಬೈ ಸಿದ್ದಿ ವಿನಾಯಕ ದೇವಸ್ಥಾನದ ಜಾಗ ತನ್ನದೆಂದ ವಕ್ಫ್‌ ಬೋರ್ಡ್..ವೈರಲ್ ಸುದ್ದಿಯ ಅಸಲಿಯತ್ತೇನು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮನೆ ಮೇಲೆ ದಾಳಿ ಮಾಡಿ… ಹೇಗೆ ಎದುರಿಸಬೇಕೆಂದು ಗೊತ್ತಿದೆ..’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

"ತಮ್ಮ ನಿವಾಸ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕರ ನಿವಾಸವನ್ನು ಗುರಿಯಾಗಿಸಿಕೊಳ್ಳುವಂತೆ" ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಿಜೆಪಿಗೆ ಸವಾಲು ಹಾಕಿದರು. ರಾಜ್ಯದಲ್ಲಿ, ಟಿಎಂಸಿ ನಾಯಕರ ಮೇಲಿನ ದಾಳಿಗೆ...

ಬೆಂಗಳೂರು: ವಿಶೇಷ ಪೂಜೆ ಹೆಸರಿನಲ್ಲಿ ಐಟಿ ಅಧಿಕಾರಿಗೆ 35 ಲಕ್ಷ ವಂಚನೆ: 59 ವರ್ಷದ ‘ಗಿಳಿ ಶಾಸ್ತ್ರ’ ಹೇಳುವ ವ್ಯಕ್ತಿ ಬಂಧನ

ಬೆಂಗಳೂರು: ವಿಶೇಷ ಪೂಜೆ ಮಾಡುವುದಾಗಿ ಹೇಳಿಕೊಂಡು ಆದಾಯ ತೆರಿಗೆ ಅಧಿಕಾರಿಗೆ 35 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥೇಣಿಯ ಶೇಖರ್...

ಬಿಹಾರ| ರಾಜ್ಯಸಭಾ ಚುನಾವಣೆ ಮತದಾನದಿಂದ ಹೊರಗುಳಿದ ನಾಲ್ವರು ಶಾಸಕರು; ಮಹಾಘಟಬಂಧನ್‌ಗೆ ಹಿನ್ನಡೆ

ಸೋಮವಾರ ಸಂಜೆ 4 ಗಂಟೆಗೆ ಮುಕ್ತಾಯಗೊಂಡ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರು ಶಾಸಕರು ಮತದಾನದಿಂದ ಹೊರಗುಳಿಯುವ ಮೂಲಕ ಬಿಹಾರದ ಮಹಾಘಟಬಂಧನ್‌ಗೆ ಭಾರಿ ಹಿನ್ನಡೆಯಾಗಿದೆ. ಐದನೇ ಸ್ಥಾನಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ವಿರೋಧ ಮೈತ್ರಿಕೂಟದ ನಿರೀಕ್ಷೆಗೆ ಭಾರಿ...

ರಾಜ್ಯಸಭೆಯಲ್ಲಿ LPG ಕೊರತೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ; ಪ್ರತಿಪಕ್ಷ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದ ಸರ್ಕಾರ !

ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್‌ಪಿಜಿ ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅಡುಗೆ ಅನಿಲದ ಬಿಕ್ಕಟ್ಟು ಮತ್ತು ಕಾಳಸಂತೆಕೋರತನವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು...

ಬೆಂಗಳೂರು| ಹಣ ನೀಡಲು ನಿರಾಕರಿಸಿದ ವ್ಯಕ್ತಿಯನ್ನು ಮಕ್ಕಳ ಮುಂದೆಯೇ ಥಳಿಸಿ ಕೊಂದ ಗುಂಪು

ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಕ್ಕಳ ಮುಂದೆಯೇ ಗುಂಪೊಂದು ಥಳಿಸಿ ಕೊಂದಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ವಿಲ್ಸನ್ ಗಾರ್ಡನ್‌ನ ಬಡಾ ಮಕನ್ ರಸ್ತೆ ಬಳಿ ರಶೀದ್ ಪಾಷಾ ಎಂದು...

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...

ಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಿಧಾನಸಭೆಯಲ್ಲಿ...

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...