Homeಕರ್ನಾಟಕಮಂಗಳೂರಿನಲ್ಲಿ ಮತ್ತೆ ಮರುಕಳಿಸುತ್ತಿದೆ ಧರ್ಮಾಧಾರಿ ಪೊಲೀಸ್‌ಗಿರಿ!

ಮಂಗಳೂರಿನಲ್ಲಿ ಮತ್ತೆ ಮರುಕಳಿಸುತ್ತಿದೆ ಧರ್ಮಾಧಾರಿ ಪೊಲೀಸ್‌ಗಿರಿ!

- Advertisement -
- Advertisement -

ಅವಿಭಜಿತ ದಕ್ಷಿಣ ಕನ್ನಡ ಹೇಳಿಕೇಳಿ ಸಂಘಪರಿವಾರದ ಪುಂಡ-ಪೋಕರಿಗಳ ಆಡಂಬೋಲ. ಹಿಂದುತ್ವದ ಪ್ರಯೋಗ ಶಾಲೆಯೆಂಬ ಭೀಭತ್ಸ ’ಅಡ್ಡ’ ಹೆಸರು ದಕ್ಷಿಣ ಕನ್ನಡಕ್ಕೆ ಬಿದ್ದು ಅದ್ಯಾವುದೋ ಕಾಲವಾಗಿ ಹೋಗಿದೆ! ಕೊರೊನಾದ ಆತಂಕದಿಂದ ಒಂಚೂರು ಹಿಮ್ಮೆಟ್ಟಿದ್ದ ಸಂಘಪರಿವಾರದ ಅನೈತಿಕ ಪೊಲೀಸ್‌ಗಿರಿ ಈಗ ಮತ್ತೆ ಬಾಲ ಬಿಚ್ಚಿದೆ. ಸಂಘ ಪರಿವಾರದ ಸರದಾರರು ರೋಡ್ ರೌಡಿಗಳು, ಭೂಗತ ಪಾತಕಿಗಳು, ಬೀದಿ ಕಾಮಣ್ಣರು ಮತ್ತು ಕ್ರಿಮಿನಲ್ ಪುಂಡರಿಗೆ ಹಿಂದುತ್ವ ದೀಕ್ಷೆಕೊಟ್ಟು ಧರ್ಮಕಾರಣದ ಹಿಡನ್ ಅಜೆಂಡಾ ಈಡೇರಿಸಿಕೊಳ್ಳಲು ಹವಣಿಸುತ್ತಿದ್ದಾರೆಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಮಡುಗಟ್ಟಿದೆ.

ಈ ಹಿಂದುತ್ವದ ಯಜ್ಞಕ್ಕೆ ಗೋಪ್ರಾಣ ಮತ್ತು ಹಿಂದೂ ಹೆಣ್ಣಿನ ಮಾನವೇ ಹವಿಸ್ಸು! ಮುಸ್ಲಿಮ್ ಹುಡುಗ ಮತ್ತು ಹಿಂದೂ ಹುಡುಗಿ ಸಹಪಾಠಿಗಳೆಂಬ ನೈತಿಕ ನೆಲೆಯಲ್ಲಿ ಒಡನಾಡಿದರೂ ಸಾಕು, ಧರ್ಮ “ದಂಡ” ಎತ್ತಿಕೊಂಡು ಅಟ್ಟಾಡಿಸಿ-ಅವಮಾನಿಸಿ ದಾಳಿ ಮಾಡುವ ಸಂಘಪರಿವಾರದ ತರಹೇವಾರಿ ತಂಡಗಳ ಹಾವಳಿ ಈಗಿತ್ತಲಾಗಿ ಮಿತಿಮೀರುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಕೇಸರಿ ಸರ್ಕಾರವೇ ಇರುವುದು ಪರಿವಾರದ ಹಲ್ಲೆಕೋರರ ಹಾರಾಟವನ್ನು ಹೆಚ್ಚಿಸಿಬಿಟ್ಟಿದೆ. ಕಳೆದ ಕೆಲವು ದಿನಗಳಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಲವೆಡೆ ಹಿಂದೂ ರಕ್ಷಕ ಮುಖವಾಡದಲ್ಲಿ ಪಕ್ಕ ರೌಡಿಗಳು ಅನೈತಿಕ ಪೊಲೀಸ್‌ಗಿರಿಯನ್ನು ನಿರಂತಕವಾಗಿ ಪ್ರದರ್ಶಿಸುತ್ತಿದ್ದಾರೆ.

ಲವ್ ಜಿಹಾದ್‌ನಿಂದ ಹಿಂದೂ ಹೆಣ್ಣುಮಕ್ಕಳನ್ನು ಸಂರಕ್ಷಿಸುವ ಹುಸಿ ಪೋಸು ಕೊಡುತ್ತ ಪೂರ್ವಾಪರ ಯೋಚಿಸಿದೆ ಅಮಾಯಕ ಹಿಂದೂ ಹುಡುಗಿಯರನ್ನು ಸಾರ್ವಜನಿಕವಾಗಿ ಅಡ್ಡಹಾಕಿ ಅಶ್ಲೀಲವಾಗಿ ನಿಂದಿಸಿ, ದೈಹಿಕ ಕುಚೇಷ್ಟೆ ಮತ್ತು ಹಲ್ಲೆ ಮಾಡಿ ಮಾನ ಹರಾಜು ಹಾಕುವ ’ಧರ್ಮಕಾರ್ಯ ದಕ್ಷಿಣ ಕನ್ನಡದಲ್ಲಿ ಜೋರಾಗಿದೆ. ಕಳೆದೆರಡು ತಿಂಗಳಲ್ಲಿ ಮಂಗಳೂರಿನ ಬೀಚು, ಪಾರ್ಕುಗಳಲ್ಲಿ ಅನ್ಯಧರ್ಮೀಯ ಹುಡುಗ-ಹುಡುಗಿಯರ ಚಾರಿತ್ರ್ಯವಧೆ-ಹಲ್ಲೆ ನಡೆದುಹೋಗಿದೆ. ನೈತಿಕತೆ ಹೆಸರಲ್ಲಿ ಈ ಪಡೆಗಳು ಕಾನೂನು ಕೈಗೆತ್ತಿಕೊಂಡ ಪ್ರಕರಣ ಕಳೆದ ವಾರ ಸುರತ್ಕಲ್ ಮತ್ತು ಬೆಳ್ತಂಗಡಿಯಲ್ಲಾಗಿದೆ. ದೇಶವನ್ನು ಕಾಡುತ್ತಿರುವ ಆರ್ಥಿಕ ಹಿಂಜರಿತ ಮತ್ತು ಕೊರೊನಾ ಆರ್ಭಟದಿಂದ ಮಂಗಳೂರಿನ ವ್ಯಾಪಾರ-ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಿರುವ ಈ ಕಾಲಘಟ್ಟದಲ್ಲಿ ಅನೈತಿಕ ಪೊಲೀಸ್‌ಗಿರಿ ಭುಗಿಲೇಳುತ್ತಿರುವುದು ಜನರನ್ನು ಕಂಗಾಲಾಗಿಸಿಬಿಟ್ಟಿದೆ.

ಈ ಹಿಂದೆಯೂ ಸಂಘಪರಿವಾರದ ಅನೈತಿಕ ಪೊಲೀಸ್‌ಗಿರಿಯಿಂದ ದಕ್ಷಿಣ ಕನ್ನಡದ ಆರ್ಥಿಕ ವಲಯ ಘಾಸಿಗೊಂಡಿತ್ತು; ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಮಂಗಳೂರು ಮತ್ತು ದಕ್ಷಿಣ ಕನ್ನಡದ ಇನ್ನಿತರ ಪಟ್ಟಣಗಳಿಗೆ ಬರಲು ಉದ್ಯಮಿಗಳು ಬಂಡವಾಳಗಾರರು, ವರ್ತಕರು ಹಾಗೂ ಗ್ರಾಹಕರು ಹೆದರುತ್ತಿದ್ದರು. ಆ ಕಳಂಕದಿಂದ ಹೊರಬರುತ್ತಿರುವ ಹೊತ್ತಲ್ಲೇ ಮಂಗಳೂರು ಮತ್ತದರ ಸುತ್ತಮುತ್ತ ಅನೈತಿಕ ಪೊಲೀಸ್‌ಗಿರಿ ಪ್ರವರ ಪ್ರಾರಂಭವಾಗಿರುವುದು ಸ್ಥಳೀಯ ಆರ್ಥಿಕತೆಯನ್ನೂ ಬುಡಮೇಲಾಗಿಸುತ್ತಿದೆ. ಕಳೆದ ಗುರುವಾರ (ಏಪ್ರಿಲ್ 1, 2021) ರಾತ್ರಿ ಅಸ್ವಿದ್ ಅನ್ವರ್ ಮುಹಮ್ಮದ್ ಎಂಬ 24 ವರ್ಷದ ಸಾಬರ ಪೋರ ಮತ್ತಾತನ ಹಿಂದೂ ಸಹಪಾಠಿಯಾದ ಕೊಂಕಣಿ ಹುಡುಗಿಯ ಮೇಲೆ ಭಜರಂಗಿಗಳು ಮಾರಣಾಂತಿಕ ದಾಳಿ ಮಾಡಿ ಸುಖಾಸುಮ್ಮನೆ ಅವರ ಮಾನ ಬೀದಿಪಾಲು ಮಾಡಲು ಹವಣಿಸಿದ್ದಾರೆ.

ಅಸ್ವಿದ್ ಮತ್ತು ಆ ಕೊಂಕಣಿ ಹುಡುಗಿ ಕ್ಲಾಸ್‌ಮೇಟ್‌ಗಳು. ಇತ್ತೀಚೆಗಷ್ಟೆ ಡಿಗ್ರಿ ಮುಗಿಸಿದ್ದ ಈ ಸಹಪಾಠಿಗಳು ಉದ್ಯೋಗ ಹುಡುಕುತ್ತಿದ್ದರು. ಹುಡುಗಿಗೆ ಬೆಂಗಳೂರಿನ ಕಂಪನಿಯೊಂದು ಸಂದರ್ಶನಕ್ಕೆ ಕರೆದಿತ್ತು. ಬೆಂಗಳೂರು ಅಷ್ಟಾಗಿ ಪರಿಚಯವಿಲ್ಲದ ಆಕೆ ಆ ಮಾಯಾನಗರಿಯ ಬಗ್ಗೆ ಗೊತ್ತಿದ್ದ ಅಸ್ವಿದ್‌ನನ್ನು ತನ್ನೊಂದಿಗೆ ಬರುವಂತೆ ಹೇಳಿದ್ದಳು. ಗುರುವಾರ ರಾತ್ರಿ ಬೆಂಗಳೂರಿಗೆ ಹೋಗಲೆಂದು ಖಾಸಗಿ ಬಸ್ ಹತ್ತಿದ್ದರು. ಬಸ್ಸು ಪಂಪ್‌ವೆಲ್ ಬಳಿ ಬರುತ್ತಿದ್ದಂತೆ ಹಲವು ಕ್ರಿಮಿನಲ್ ಕೇಸ್‌ಗಳಲ್ಲಿ ಆರೋಪಿಗಳಾದ ಆರೆಂಟು ಮಂದಿ ಅಡ್ಡಗಟ್ಟಿದ್ದಾರೆ. ತಮ್ಮ ಸಂಬಂಧಿ ಪ್ರಯಾಣಿಕರೊಬ್ಬರಿಗೆ ಹುಷಾರಿಲ್ಲ; ಅವರನ್ನು ಉಪಚರಿಸಬೇಕಿದೆ ಎಂದು ಹೇಳಿ ಬಸ್ಸಿಗೆ ನುಗ್ಗಿದ್ದಾರೆ.

ಬಸ್‌ನಲ್ಲಿ ಅಸ್ವಿದ್ ಮತ್ತಾತನ ಕ್ಲಾಸ್‌ಮೇಟ್ ಹುಡುಗಿಯನ್ನು ದರದರನೆ ಎಳೆದು ಕೆಳಗೆ ಇಳಿಸಿದ್ದಾರೆ. ಹಿಂದೆ ಮುಂದೆ ನೋಡದೆ ಧರ್ಮೋನ್ಮಾದದ ವಿಚಾರಣೆ ನಡೆಸಿದ್ದಾರೆ. ಹೀಗೆ ಸಾಬರ ಹುಡುಗನ ಜತೆ ಹೋಗುವುದು ಧರ್ಮ ವಿರೋಧಿ ಎಂದೆನ್ನುತ್ತ ಹಿಂದೂ ಹುಡುಗಿಗೆ ಹೊಡೆಯತೊಡಗಿದ್ದಾರೆ. ಹುಡುಗನಿಗೂ ರೌಡಿಗಳು ಹಿಗ್ಗಾಮುಗ್ಗಾ ಹೊಡೆಯಲಾರಂಭಿಸಿದ್ದಾರೆ. ಆಗ ಆಕೆ ಈ ಹಲ್ಲೆಯನ್ನು ವಿರೋಧಿಸಿದ್ದಾಳೆ. ತಾನೇ ಆತನನ್ನು ಬರುವಂತೆ ಕರೆದಿದ್ದೇನೆ. ಇದು ಅನೈತಿಕ ಪ್ರಯಾಣವಲ್ಲ; ಬೆಂಗಳೂರಿನ ಪರಿಚಯ ಆತನಿಗಿರುವುದರಿಂದ ಜತೆಯಾಗಿ ಹೊರಟಿದ್ದೇನೆಂದು ಪರಿಪರಿಯಾಗಿ ಹೇಳಿದ್ದಾರೆ. ಆದರೆ “ದೆವ್ವ” ಮೈಮೇಲೆ ಬಂದಂತಿದ್ದ ಭಜರಂಗಿಗಳು ಇದ್ಯಾವುದನ್ನೂ ಕೇಳಿಲ್ಲ! ಹಿಂದೂ ಹೆಣ್ಣಿನ ರಕ್ಷಣೆಯ ಹೆಸರಲ್ಲಿ ಹಿಂದೂ ಹುಡುಗಿ ಮೈಮೇಲೆ ಕೈ ಮಾಡಿದ್ದಾರೆ. ಸಹಪಾಠಿಯ ಸಹಾಯಕ್ಕೆಂದು ಬೆಂಗಳೂರಿಗೆ ಹೊರಟ್ಟಿದ್ದ “ತಪ್ಪಿಗೆ” ಅಸ್ವಿದ್‌ಗೆ ಭಜರಂಗಿಗಳು ಚೂರಿಯಿಂದ ಕಂಡಕಂಡಲ್ಲಿ ಇರಿದಿದ್ದಾರೆ.

ಅಸ್ವಿದ್ ಹಲ್ಲೆಯಿಂದ ಜರ್ಜರಿತನಾಗಿ ಆಸ್ಪತ್ರೆ ಪಾಲಾಗಿದ್ದಾನೆ. ಹುಡುಗಿ ಇದ್ದದ್ದು ಇದ್ದಂತೆ ಪೊಲೀಸ್ ಕಂಪ್ಲೇಟು ಕೊಟಿದ್ದಾಳೆ. ಹಲ್ಲೆಕೋರ ಭಜರಂಗಿಗಳಲು “ಹಿಂದೂ ಹೀರೊ” ಇಮೇಜಿಗಾಗಿ ತಾವು ಹಿಂದೂ ಹುಡುಗಿ-ಸಾಬರ ಹುಡುಗನ ಮಾನ-ಪ್ರಾಣಕ್ಕೆ ಹಿಂಸೆ ಕೊಡುವುದನ್ನು, ಬೈದು ಕೇಕೆ ಹಾಕುವುದನ್ನು ವೀಡಿಯೋ ಮಾಡಿ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅಲ್ಲಿಗೆ ಅಮಾಯಕ ಹಿಂದೂ ಹುಡುಗಿಯ ಮಾನ ಹರಾಜು ಹಾಕಿದ ಕಿರಾತಕರ ಅಸಲಿ ಉದ್ದೇಶವೂ ಜಗಜ್ಜಾಹೀರಾಗಿದೆ! ಹಿಂದೂ ಹೆಣ್ಣಿನ ರಕ್ಷಣೆ-ಧರ್ಮ ರಕ್ಷಣೆ ಹೆಸರಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡುವ ಮತ್ತು ಅವರ ಚಾರಿತ್ರ್ಯವಧೆ ಮಾಡುವ ಪುಂಡರ ಉದ್ದೇಶ, ಸಂಘ ಪರಿವಾರದ ದೊರೆಗಳನ್ನು ಸಂಪ್ರೀತಗೊಳಿಸಿ ರಾಜಕೀಯ ಸ್ಥಾನಮಾನ ಅಥವಾ ಆರ್ಥಿಕ ಲಾಭ ಗಿಟ್ಟಿಸುವುದೇ ಹೊರತು ಹಿಂದೂ ಹುಡುಗಿಯರನ್ನು ಅಥವಾ ಧರ್ಮವನ್ನು ಕಾಪಾಡುವುದಲ್ಲ ಎಂಬುದು ಜನರಿಗೀಗ ಖಾತ್ರಿಯಾಗಿ ಹೋಗಿದೆ.

ಈ ಅನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ಬಂಧಿಸಿರುವ ನಾಲ್ವರ “ಮಹಿಮೆ” ನೋಡಿದರೆ ಸಂಘ ಪರಿವಾರದ ರಿಂಗ್‌ಮಾಸ್ಟರ್‌ಗಳು ಹಿಂದುತ್ವ ಪ್ರಚಾರಕ್ಕೆ ಕ್ರಿಮಿನಲ್ ಪಾತಕಿಗಳನ್ನು ಬಳಸುತ್ತಿರುವುದು ನಿಸ್ಸಂಶಯವಾಗಿ ಸಾಬೀತಾಗುತ್ತದೆ. ಬಂಧಿಸಲಾಗಿರುವ ಅತ್ತಾವರ ಬಾಬುಗುಡ್ಡೆಯ ಬಾಲಚಂದ್ರ(28) ಕಂದಕದ ಧನುಷ್ ಭಂಡಾರಿ(25), ಶಕ್ತಿನಗರದ ಜಯಪ್ರಕಾಶ್(27) ಮತ್ತು ಉರ್ವದ ಅನಿಲ್‌ಕುಮಾರ್(38) ನಾಲ್ವರೂ ಕ್ರಿಮಿನಲ್ ಹಿನ್ನೆಲೆಯವರು. ಹಲವು ಪಾತಕದಲ್ಲಿ ಭಾಗಿಯಾಗಿರುವ ಈ ನಾಲ್ವರ ಮೇಲೆ ಒಂದಲ್ಲ; ಎರಡೆರಡು ಮತ್ತು ಮೂರುಮೂರು ಕೇಸುಗಳಿವೆ! ಇವರೆಲ್ಲರ ಮೇಲೆ ಕೊಲೆ ಯತ್ನ ಮತ್ತು ಹಲ್ಲೆ ಕೇಸು ಜಡಿಯಲಾಗಿದೆಯಾದರೂ, ಆಳುವ ಪಕ್ಷದ ಸಂಸದ, ಶಾಸಕ, ಮಂತ್ರಿಗಳ ಕೃಪಾಕಟಾಕ್ಷ ಭಜರಂಗಿಗಳಿಗೆ ಇರುವುದರಿಂದ ಕೇಸು ಹಳ್ಳ ಹಿಡಿಯುವುದು ಖಂಡಿತ ಎಂದು ಮಂಗಳೂರಿನಲ್ಲೀಗ ಚರ್ಚೆಯೂ ನಡೆದಿದೆ!

ಮಂಗಳೂರಿಗೆ ಮುಂದೆ ಇನ್ನೂ ಅದೆಂಥ ಕೇಡು ಕಾದಿದೆಯೋ?!


ಇದನ್ನೂ ಓದಿ: ಗೌರಿ ಕಾರ್ನರ್: ಕೋಮುವಾದಿಗಳ ನಡುವೆ ಇಂಥವರೂ ಉಂಟು; ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉದಾಹರಣೆಗಳು ಅಸಂಖ್ಯಾತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...