Homeಮುಖಪುಟಮೇ 8ಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು: ನ್ಯಾಯಕ್ಕಾಗಿ  ಸುದೀರ್ಘ 17 ವರ್ಷ; ಈ ಕುರಿತು...

ಮೇ 8ಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು: ನ್ಯಾಯಕ್ಕಾಗಿ  ಸುದೀರ್ಘ 17 ವರ್ಷ; ಈ ಕುರಿತು ಒಂದು ಸಂಕ್ಷಿಪ್ತ ವರದಿ

- Advertisement -
- Advertisement -

ನವದೆಹಲಿ: ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 8ರಂದು ತೀರ್ಪು ಹೊರಬೀಳಲಿದೆ.  ಇದು 2008ರ ಮಾಲೆಗಾಂವ್ ಬಾಂಬ್ ಸ್ಫೋಟದ ಬಲಿಪಶುಗಳ ಕುಟುಂಬಗಳಿಗೆ ಸುದೀರ್ಘ 17 ವರ್ಷಗಳ ನೋವಿನ ಮತ್ತು ನಿರಾಶಾದಾಯಕ ಕಾಯುವಿಕೆಯಾಗಿದೆ.

ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಮೇ 8ರಂದು ನೀಡುವ ತೀರ್ಪಿನ ಮೇಲೆ ಅವರ ನ್ಯಾಯದ ಭರವಸೆ ನಿಂತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ತಿರುವುಗಳು, ರಾಜಕೀಯ ಹಸ್ತಕ್ಷೇಪ ಮತ್ತು ನಿಧಾನಗತಿಯ ಕಾನೂನು ಪ್ರಕ್ರಿಯೆಯಿಂದ ತುಂಬಿದ ಈ ಪ್ರಕರಣವು ಮುಸ್ಲಿಂ ಬಲಿಪಶುಗಳ ಚಿಕಿತ್ಸೆ ಮತ್ತು ಹಿಂದುತ್ವ ಸಂಬಂಧಿತ ಆರೋಪಿಗಳಿಗೆ ನೀಡಲಾದ ರಕ್ಷಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2008ರ ಸೆ.29ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮುಸ್ಲಿಂ ಬಹುಸಂಖ್ಯಾತ ಪಟ್ಟಣವಾದ ಮಾಲೆಗಾಂವ್‌ನಲ್ಲಿ ಮಸೀದಿಯ ಬಳಿ ಪ್ರಬಲ ಸ್ಫೋಟ ಸಂಭವಿಸಿತ್ತು. ಪವಿತ್ರ ರಂಜಾನ್ ತಿಂಗಳಲ್ಲಿ ಸಂಜೆ ಪ್ರಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದ ಭಕ್ತರನ್ನು ಗುರಿಯಾಗಿಸಲು ಸ್ಫೋಟಕಗಳಿಂದ ತುಂಬಿದ ಮೋಟಾರ್‌ಸೈಕಲ್ ಅನ್ನು ಬಳಸಲಾಗಿತ್ತು. ಆರು ಮುಸ್ಲಿಮರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

“ನನ್ನ ತಂದೆ ಮಸೀದಿಗೆ ಹೋಗಿದ್ದರು ಮತ್ತು ಕೇವಲ 9 ವರ್ಷದವನಾಗಿದ್ದಾಗ ನಾನು ನನ್ನ  ತಂದೆಯನ್ನು ಕಳೆದುಕೊಂಡೆ. ಇದೊಂದು ಅಂದು ನಡೆದ ಅಪಘಾತವಲ್ಲ. ಅಪರಾಧ ಎಂದು ನ್ಯಾಯಾಲಯ ಹೇಳುವುದನ್ನು ಕೇಳಲು ನಾವು ಇಷ್ಟು ವರ್ಷಗಳಿಂದ ಕಾಯುತ್ತಿದ್ದೇವೆ. ನಮಗೆ ನ್ಯಾಯ ಬೇಕು, ಸಹಾನುಭೂತಿ ಅಲ್ಲ” ಎಂದು ಬಲಿಪಶುವಿನ ಮಗ 26 ವರ್ಷದ ಆಮಿರ್ ಖುರೇಷಿ ಹೇಳುತ್ತಾರೆ.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ಆರಂಭಿಕ ತನಿಖೆಯು ಆಮೂಲಾಗ್ರ ಹಿಂದುತ್ವದ ದೃಷ್ಟಿಕೋನವನ್ನು ತೋರಿಸಿದೆ. ಆ ಸಮಯದಲ್ಲಿ ಅನೇಕರು ನೀಡಿದ್ದ ಹೇಳಿಕೆಗಳು ಹಲವರನ್ನು ಆಘಾತಗೊಳಿಸಿದ್ದವು. ಅಲ್ಲಿಯವರೆಗೆ ದೇಶದಲ್ಲಿ ಸಂಭವಿಸಿದ್ದ ಹೆಚ್ಚಿನ ಬಾಂಬ್ ಸ್ಫೋಟಗಗಳಿಗೆ ಕಾರಣೀಭೂತರನ್ನಾಗಿ ಮುಸ್ಲಿಂ ಗುಂಪುಗಳನ್ನು ಗುರಿಯಾಗಿಸಲಾಗುತ್ತಿತ್ತು. ಆದರೆ ಈ ಪ್ರಕರಣವು ವಿಭಿನ್ನ ವಾಸ್ತವವನ್ನು ಬಹಿರಂಗಪಡಿಸಿತು, ಅದನ್ನು ಒಪ್ಪಲು ಅನೇಕರು ನಿರಾಕರಿಸಿದರು.

2011ರಲ್ಲಿ ತನಿಖೆಯನ್ನು NIAಗೆ ಹಸ್ತಾಂತರಿಸಲಾಯಿತು. ಕೆಲ ವರ್ಷಗಳಲ್ಲಿ ಸಂಸ್ಥೆಯು 323 ಸಾಕ್ಷಿಗಳನ್ನು ಪರಿಶೀಲಿಸಿತು. ಅವರಲ್ಲಿ 34 ಮಂದಿ ಪ್ರತಿಕೂಲವಾಗಿ ತಿರುಗಿದರು, ಹಲವರು ರಾಜಕೀಯ ಒತ್ತಡಕ್ಕೆ ಒಳಗಾಗಿದ್ದರು ಎಂದು ಆರೋಪಿಸಲಾಗಿದೆ. “ಸಾಕ್ಷಿಗಳು ಏಕೆ ದೂರ ಸರಿದರು? ಅವರನ್ನು ಯಾರು ಹೆದರಿಸಿದರು? ಈ ವಿಳಂಬವು ಕೇವಲ ಕಾನೂನುಬದ್ಧವಲ್ಲ – ಇದು ರಾಜಕೀಯ” ಎಂದು ಸ್ಥಳೀಯ ಕಾರ್ಯಕರ್ತ ಅಸ್ಲಾಂ ಶೇಖ್ ಹೇಳುತ್ತಾರೆ. ಇವರು ಸಂತ್ರಸ್ತ ಕುಟುಂಬಗಳಿಗೆ ಕಾನೂನು ಬೆಂಬಲದೊಂದಿಗೆ ಸಹಾಯ ಮಾಡುತ್ತಿದ್ದಾರೆ.

NIA ವಹಿಸಿಕೊಂಡ ನಂತರ ಪ್ರಕರಣವು ಗಂಭೀರ ಬದಲಾವಣೆಗಳನ್ನು ಕಂಡಿದೆ. 2016ರಲ್ಲಿ ಏಜೆನ್ಸಿಯು ಹಲವಾರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಚಾರ್ಜ್‌ಶೀಟ್ ಸಲ್ಲಿಸಿದೆ. ಅದರಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ನಂತರದಲ್ಲಿ ಬಿಜೆಪಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಶ್ಯಾಮ್ ಸಾಹು, ಪ್ರವೀಣ್ ಟಕಲ್ಕಿ ಮತ್ತು ಶಿವನಾರಾಯಣ್ ಕಲ್ಸಂಗ್ರ ಸೇರಿದಂತೆ ಇತರ ಮೂವರು ಆರೋಪಿಗಳನ್ನು ಸಹ ಖುಲಾಸೆಗೊಳಿಸಲಾಗಿದೆ. ಆದಾಗ್ಯೂ, ಅದೇ NIA ಪ್ರಜ್ಞಾ ಠಾಕೂರ್ ವಿಚಾರಣೆಯನ್ನು ಎದುರಿಸಲೇಬೇಕು ಎಂದು ವಾದಿಸಿದ್ದು, ಗೊಂದಲ ಮತ್ತು ಟೀಕೆಗಳನ್ನು ಸೃಷ್ಟಿಸಿತು.

ಜನರು ಮತ್ತು ಕಾನೂನು ತಜ್ಞರು ರಾಜಕೀಯ ಹಸ್ತಕ್ಷೇಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಆರೋಪಿಗಳು ಆಡಳಿತ ಪಕ್ಷಗಳೇ ತಮ್ಮ ಸಿದ್ಧಾಂತವನ್ನು ಹಂಚಿಕೊಳ್ಳುವ ಗುಂಪುಗಳೊಂದಿಗೆ ಸಂಬಂಧ ಹೊಂದಿರುವಾಗ, ತನಿಖೆಗಳು ನಿಧಾನವಾಗಿ ನಡೆಯುವುದು ಅಥವಾ ದಿಕ್ಕನ್ನು ಬದಲಾಯಿಸುವುದು ಆಶ್ಚರ್ಯವೇನಿಲ್ಲ” ಎಂದು ಪ್ರಕರಣವನ್ನು ನಿಕಟವಾಗಿ ಅನುಸರಿಸುತ್ತಿರುವ ವಕೀಲ ಅಬ್ದುಲ್ ಖಯ್ಯೂಮ್ ಅನ್ಸಾರಿ ಹೇಳಿದರು.

ಇನ್ನೂ ವಿಚಾರಣೆ ಎದುರಿಸುತ್ತಿರುವ ಆರೋಪಿಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಪ್ರಜ್ಞಾ ಸಿಂಗ್ ಠಾಕೂರ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಸೇರಿದ್ದಾರೆ. ಇವರೆಲ್ಲರೂ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿಭಾಗಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ನ್ಯಾಯ ವಿಳಂಬವು ನ್ಯಾಯ ನಿರಾಕರಿಸಲ್ಪಟ್ಟಂತೆ ಎಂದು ಬಲಿಪಶುಗಳ ಕುಟುಂಬಗಳು ಹೇಳುತ್ತವೆ. “ನಾವು ನಮ್ಮ ಮಕ್ಕಳನ್ನು ಸಮಾಧಿ ಮಾಡಿದ್ದೇವೆ. ಈಗ ನಮಗೆ ನ್ಯಾಯ ಬೇಕು, ರಾಜಕೀಯವಲ್ಲ” ಎಂದು ಸ್ಫೋಟದಲ್ಲಿ 12 ವರ್ಷದ ಸೋದರಳಿಯನನ್ನು ಕಳೆದುಕೊಂಡಿರುವ ಶಬಾನಾ ಬಾನೋ ಹೇಳುತ್ತಾರೆ. “ಈ ಸ್ಫೋಟದ ವಿಚಾರಣೆಯು 17 ವರ್ಷಗಳನ್ನು ಏಕೆ ತೆಗೆದುಕೊಂಡಿತು? ಬಹುಸಂಖ್ಯಾತ ಸಮುದಾಯದ ಯಾರಾದರೂ ಆಗಿದ್ದರೆ, ಅದು ಇಷ್ಟು ಸಮಯ ತೆಗೆದುಕೊಳ್ಳುತ್ತಿತ್ತೇ?” ಎಂದು ಪ್ರಶ್ನಿಸಿದ್ದಾರೆ.

ಮಾಲೇಗಾಂವ್‌ನ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಮತ್ತು ಅದಕ್ಕೂ ಮೀರಿ ಈ ಪ್ರಕರಣವನ್ನು ನಿರ್ಲಕ್ಷ್ಯ ಮತ್ತು ಅನುಮಾನದಿಂದ ನಡೆಸಿಕೊಳ್ಳಲಾಗಿದೆ ಎಂದು ಬಹಳ ಹಿಂದಿನಿಂದಲೂ ಅಭಿಪ್ರಾಯಿಸಲಾಗಿದೆ. ಆರೋಪಿಗಳು ಮುಸ್ಲಿಂ ಹಿನ್ನೆಲೆಯಿಂದ ಬಂದವರಾಗಿದ್ದರೆ, ಅವರನ್ನು ತಕ್ಷಣವೇ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಿ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು ಎಂದು ಹಲವರು ಹೇಳುತ್ತಾರೆ. ಆರೋಪಿಗಳು ಮುಸ್ಲಿಮರು ಅಲ್ಲದ ಕಾರಣ ಮಾಲೇಗಾಂವ್ ಸ್ಫೋಟದ ಆರೋಪಿಗಳನ್ನು ಮಾಧ್ಯಮಗಳು ಮತ್ತು ಅಧಿಕಾರಿಗಳು ಸಮಾನವಾಗಿ ಸೌಮ್ಯವಾಗಿ ನಡೆಸಿಕೊಳ್ಳುತ್ತಿದ್ದಾರೆ.

ಶನಿವಾರ (ಏಪ್ರಿಲ್ 19) ವಿಶೇಷ NIA ನ್ಯಾಯಾಲಯವು ಅಂತಿಮ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳು ಇಬ್ಬರೂ ತಮ್ಮ ವಾದಗಳನ್ನು ಮುಕ್ತಾಯಗೊಳಿಸಿದರು. ಪ್ರಾಸಿಕ್ಯೂಷನ್ ಲಿಖಿತ ವಾದಗಳನ್ನು ಸಲ್ಲಿಸಿದ ನಂತರ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ. ಮೇ 8ರಂದು ತೀರ್ಪು ನೀಡುವುದಾಗಿ ವಿಶೇಷ ನ್ಯಾಯಾಧೀಶ ಎ.ಕೆ.ಲಹೋಟಿ ಘೋಷಿಸಿದರು.

“ಇದು ದೀರ್ಘ ಹೋರಾಟವಾಗಿದೆ, ಮತ್ತು ನ್ಯಾಯಾಲಯವು ನೋವು, ಆಘಾತ ಮತ್ತು ಸತ್ಯವನ್ನು ಗುರುತಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ನ್ಯಾಯಾಲಯದ ಹೊರಗೆ ಸಾರ್ವಜನಿಕ ಅಭಿಯೋಜಕ ಅವಿನಾಶ್ ರಸಾಲ್ ಹೇಳಿದರು.

ಮಾಲೆಗಾಂವ್ ಪ್ರಕರಣದಲ್ಲಿ ಹಿಂದೂತ್ವ ಗುಂಪುಗಳನ್ನು ಒಳಗೊಂಡ ಈ ಅಪರಾಧ ವ್ಯವಸ್ಥೆಯನ್ನು ಈ ಸಮಾಜ ಹೇಗೆ ಪರಿಗಣಿಸುತ್ತದೆ ಎಂಬುದನ್ನು ಇಲ್ಲಿಯವರೆಗೆ ಇದರ ಕುರಿತು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯೇ ಬಹಿರಂಗಪಡಿಸಿದೆ. ಪ್ರಸ್ತುತ ಮಂತ್ರಿಗಳು ಸೇರಿದಂತೆ ಹಲವಾರು ಬಿಜೆಪಿ ನಾಯಕರು  ಆರೋಪಿಗಳನ್ನು ಬಹಿರಂಗವಾಗಿ ಬೆಂಬಲಿಸಿದರು. ಪ್ರಜ್ಞಾ ಠಾಕೂರ್ ಅವರಿಗೆ ಆರಂಭದಲ್ಲಿ ಕ್ಲೀನ್ ಚಿಟ್ ನೀಡುವುದಲ್ಲದೆ, ಸಂಸದೀಯ ಸ್ಥಾನವನ್ನು ಸಹ ನೀಡಲಾಯಿತು. “‘ಕೇಸರಿ ಭಯೋತ್ಪಾದನೆ’ ಎಂದು ಕರೆಯಲ್ಪಡುವ ಪ್ರಕರಣವು ಸಾರ್ವಜನಿಕರ ಗಮನಕ್ಕೆ ಬಂದ ಮೊದಲ ಪ್ರಕರಣ ಇದಾಗಿದೆ ಎಂದು ಪ್ರಕರಣವನ್ನು ವ್ಯಾಪಕವಾಗಿ ವರದಿ ಮಾಡಿದ ಪತ್ರಕರ್ತ ರೆಹನ್ ಮುಜ್ತಾಬಾ ಹೇಳಿದರು. “ಆದರೆ ಅವಮಾನವನ್ನು ಎದುರಿಸುವ ಬದಲು, ಆರೋಪಿಗಳು ಹಿಂದುತ್ವ ಶಕ್ತಿಗಳ ದೃಷ್ಟಿಯಲ್ಲಿ ವೀರರಾಗಿದ್ದಾರೆ” ಎಂದು ಅವರು ವಿವರಿಸಿದರು.

ಸ್ವತಂತ್ರ ಭಯೋತ್ಪಾದನಾ ವಿರೋಧಿ ಸಂಸ್ಥೆಯಾಗಿರುವ NIA ಪ್ರಕರಣವನ್ನು ಮೃದುಗೊಳಿಸಿದೆ ಎಂದು ಆರೋಪಿಸಲಾಗಿದೆ. “ತನಿಖೆಗಳನ್ನು ಹೇಗೆ ತಿರುಚಲಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಆರೋಪಗಳನ್ನು ಬದಲಾಯಿಸಲು, ತನಿಖಾ ಪ್ರಗತಿಯನ್ನು ನಿಧಾನಗೊಳಿಸಲು ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಕೈಬಿಡುವ ಪ್ರಯತ್ನಗಳು ನಡೆದಿವೆ” ಎಂದು ಹೆಸರಿಸಲಿಚ್ಛಿಸದ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದರು.

ಎಲ್ಲದರ ಹೊರತಾಗಿಯೂ, ಬಲಿಪಶುಗಳು ಮತ್ತು ಅವರ ಕುಟುಂಬಗಳು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ, ಸತ್ಯವು ಒತ್ತಡ ಮತ್ತು ರಾಜಕೀಯದಲ್ಲಿ ಹೂತುಹೋಗುವುದಿಲ್ಲ ಎಂದು ಆಶಿಸುತ್ತಿದ್ದಾರೆ. “17 ವರ್ಷಗಳು ತುಂಬಾ ಸುದೀರ್ಘವಾಗಿದೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾದರೆ, ನಮ್ಮ ಗಾಯಗಳು ವಾಸಿಯಾಗಲು ಪ್ರಾರಂಭಿಸುತ್ತವೆ” ಎಂದು 65 ವರ್ಷದ ಅಬ್ದುಲ್ ಸಲಾಮ್ ಹೇಳುತ್ತಾರೆ. ಇವರ ಮಗ ಆ ಸ್ಫೋಟ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ಇನ್ನೂ ಸರಿಯಾಗಿ ನಡೆಯಲು ಸಾಧ್ಯವಿಲ್ಲವಾಗಿದೆ.

ಮೇ 8ರಂದು ನಡೆಯುವ ಅಂತಿಮ ತೀರ್ಪು ಕಾನೂನು ನಿರ್ಧಾರಕ್ಕಿಂತ ಹೆಚ್ಚಿನದಾಗಿರುತ್ತದೆ. ಇದು ಸಂತ್ರಸ್ತರಿಗೆ ನ್ಯಾಯ ನೀಡುವ ಭಾರತೀಯ ನ್ಯಾಯಾಂಗದ ಬದ್ಧತೆಯ ಪರೀಕ್ಷೆಯಾಗಿರುತ್ತದೆ.

ನ್ಯಾಯಾಂಗದ ಬಗ್ಗೆ ನಿಶಿಕಾಂತ್ ದುಬೆ ಹೇಳಿಕೆ: ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ನಮ್ಮ ಒಪ್ಪಿಗೆ ಅಗತ್ಯವಿಲ್ಲ; ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....