Homeಕರ್ನಾಟಕಮೇ ಸಾಹಿತ್ಯ ಮೇಳದಲ್ಲಿ ಬೆಜವಾಡ ವಿಲ್ಸನ್, ದಿನೇಶ್ ಅಮೀನ್ ಮಟ್ಟು ಮತ್ತು ರಾವ್ ಸಾಹೇಬ್ ಕಸಬೆಯವರ...

ಮೇ ಸಾಹಿತ್ಯ ಮೇಳದಲ್ಲಿ ಬೆಜವಾಡ ವಿಲ್ಸನ್, ದಿನೇಶ್ ಅಮೀನ್ ಮಟ್ಟು ಮತ್ತು ರಾವ್ ಸಾಹೇಬ್ ಕಸಬೆಯವರ ಭಾಷಣಗಳು

- Advertisement -
ಪ್ರಗತಿಪರ ಚಿಂತಕರು ಹಾಗೂ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರಾದ  ವಿಲ್ಸನ್ ಬೆಜವಾಡರವರ ಮಾತುಗಳು.
ನಾನು ಮೂಲತಃ ಕನ್ನಡದವನು. ನಮ್ಮ ರಾಜ್ಯದಲ್ಲಿ ರಾಜಕೀಯ ಏನು ನಡಿತೀದೆ, ಹೇಗೆ ನಡಿತಿದೆ ಅನ್ನೋದು ಸಹಜವಾಗಿ ನನಗೂ ಕುತೂಹಲವಿರುತ್ತೆ. ನಾವು ಮಾತಾಡಬೇಕಾದಾಗ ಯಾವುದೇ ಪಕ್ಷಕ್ಕೆ ಸೀಮಿತವಾಗಿ ಅಥವಾ ವಿಚಾರಧಾರೆಗೆ ಸೀಮಿತವಾಗಿ ಮಾತಾಡಬಾರದು. ನಾವು ಮಾತಾಡಬೇಕಾದರೆ ತುಂಬಾ ಯೋಚನೆ ಮಾಡಿ ಮಾತಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ಭಯದ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತಿದೆ. ದೇಶಪ್ರೇಮದ ಸರ್ಟಿಫಿಕೇಟ್ ಗಳನ್ನು ಕೊಡಲಾಗುತ್ತದೆ. ನ್ಯಾಯಮೂರ್ತಿಯೊಬ್ಬರು ಮಹಿಳೆಯರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ. ನೇಮಕವಾದಲ್ಲಿ ಇವರು ನಮ್ಮ ಮೇಲೆಯೇ ಮಹಿಳಾ ಪರ ಆರೋಪಗಳನ್ನು ಮಾಡುತ್ತಾರೆ ಎಂಬ ಕಾರಣ ಕೊಡಲಾಗುತ್ತಿದೆ. ದೇಶದ ನ್ಯಾಯಾಧಾನ ವ್ಯವಸ್ಥೆಯಲ್ಲಿ  ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಬಡವರಿಗೆ ದೀನ ದಲಿತರಿಗೆ  ಹಿಂದುಳಿದವರಿಗೆ ನ್ಯಾಯ ಮರಿಚಿಕೆಯಾಗಿದೆ.
ರೈತರನ್ನು ನೀವು ಇಂದೇ ಪ್ರಶ್ನೆ ಮಾಡಿ, ಐದು ವರ್ಷಗಳಲ್ಲಿ ನಿಮಗೇನಾದರೂ ಕೆಲಸಗಳಾಗಿವೆಯೇ ಎಂದು. ಇಲ್ಲ ಎಂಬ ಉತ್ತರ ದೊರೆಯುತ್ತದೆ. ಬೇರೆ ಬೇರೆ ವೃತ್ತಿಯವರನ್ನು  ಕೇಳಿ ಇಲ್ಲವೆನ್ನುತ್ತಾರೆ. ಆದರೆ ಇದೇ ಪ್ರಶ್ನೆಗೆ ಉತ್ತರವನ್ನು ರಾಜಕಾರಣಿಗಳಿಂದ ಪಡೆದಾಗ ದೇಶಕ್ಕಾಗಿ ಏನಾದರೂ ಮಾಡೋಣ. ದೇಶದ ಹಿತಕ್ಕಾಗಿ ಓಟು ಮಾಡಬೇಕು ಅಂತ ಹೇಳ್ತಾರೆ. ಈ ರೀತಿ ಮನಸ್ಥಿತಿಗಳನ್ನು ಸೃಷ್ಟಿ ಮಾಡಲಾಗಿದೆ. ಅವರು ಅಂದುಕೊಂಡ ದೇಶಕ್ಕಾಗಿ ಓಟು ಕೇಳುತ್ತಿದ್ದಾರೆಯೇ ಹೊರತು ಭಾರತದ ಜನಕ್ಕಾಗಲ್ಲ. ಪ್ರತಿ ವರ್ಷ 2000 ರೈತರು ರೈತಾಪಿ ಜೀವನ ಬಿಟ್ಟು ಕಾರ್ಮಿಕರಾಗುತ್ತಿದ್ದಾರೆ. ಮಲ ಹೊರುವ ಪದ್ದತಿಯಲ್ಲಿ ಆಧ್ಯಾತ್ಮಿಕ ಸಂತೃಪ್ತಿ ಇದೆ ಅಂತ ಆಗಿನ ಗುಜರಾತ್ ಮುಖ್ಯಮಂತ್ರಿಗಳು ಹೇಳುತ್ತಾರೆ. ಆಗ ನಾನು ಹೇಳಿದ್ದೆ ಹಾಗಾದರೆ ನೀವು‌ ಮಲ ಹೊತ್ತು ಸಂತೃಪ್ತಿ ಪಡೆಯಿರಿ ಎಂದು. ಸಫಾಯಿ ಕರ್ಮಚಾರಿ ಆಂದೋಲನ್ ನಾವು ಪ್ರಾರಂಭ ಮಾಡಿದ್ದು ಈ ಸಮಸ್ಯಗಳಿಂದ ಹೊರಬರಲು. ನೀವು ಬಡವರಾಗಿ ಹುಟ್ಟಿದ್ದು ಯಾಕೆ ಎಂದು ಕೇಳಿದಾಗ ಬಾಬಾ ಉತ್ತರ ಹೀಗಿರುತ್ತದೆ, ನೀನು ಹುಟ್ಟಿದ ಜಾತಿ ಎಂದು. ಏನಾದರೂ ಪ್ರಶ್ನೆ ಮಾಡಿದಾರೆ ನಿಮ್ಮ ಹಣೆಬರಹವೆಂಬ ಹಣೆಪಟ್ಟಿ ಕಟ್ಟುತ್ತಾರೆ. ಅಂಧಶ್ರದ್ಧೆಗಳನ್ನು  ನಮ್ಮ ಮೆದುಳಿನಲ್ಲಿ ತುರುಕುತ್ತಾರೆ. ನಿರಂತರ ಹೋರಾಟಗಳ ನಂತರ ಮ್ಯಾನ್ ಹೋಲ್ ಕ್ಲೀನ್ ಮಾಡಲು ಸೇಪ್ಟಿಕ್ ಟ್ಯಾಂಕ್ ಗಳನ್ನು ಸರಕಾರಗಳು ಜಾರಿ ಮಾಡಿವೆ, ಹಾಗೂ ಖಾಸಗಿಯಲ್ಲೂ ಅದು ನಡಿತಿವೆ. ಕೊನೆಯಲ್ಲಿ ನನ್ನದೊಂದು ಪ್ರಶ್ನೆ ಇಲ್ಲಿ ಯಾರಾದರೂ ಸತ್ತರೆ ದೇಶವೆಲ್ಲಾ ತುಂಬಾ ಭಾವುಕವಾಗುತ್ತೆ. ದಿನೆ ದಿನೇ ಸಫಾಯಿ ಕರ್ಮಚಾರಿಗಳು ಗಟಾರದಲ್ಲಿಳಿದು ಸ್ವಚ್ಛಗೊಳಿಸುತ್ತಾ ಸಾಯುತ್ತಿದ್ದಾರೆ ದೇಶದ ಜನಕ್ಕೆ ಆಕ್ರೋಶ ಬರುತ್ತಿಲ್ಲ ಯಾಕೆ?
ಒಬ್ಬ ನಿರೋದ್ಯೋಗಿ ಉದ್ಯೋಗದ ಬಗ್ಗೆ ಮಾತಾನಾಡುವುದು ಬಿಟ್ಟು ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ
– ದಿನೇಶ್ ಅಮೀನ್ ಮಟ್ಟು
ಈ ಮೇ‌ ಸಾಹಿತ್ಯ  ಕಾರ್ಯಕ್ರಮದಲ್ಲಿ ತಿಳಿದುಕೊಂಡದ್ದನ್ನು ನಿಮ್ಮೂರುಗಳಲ್ಲಿ ನಡೆಸುವ ಹಾಗೆ ಆಗಬೇಕು. ಚುನಾವಣೆಗೆ ಮಾತ್ರ ನಮ್ಮ ಕೆಲಸಗಳು ಸೀಮಿತವಾಗಬಾರದು, ಬೆಂಗಳೂರಿನಲ್ಲಿ ಕಾಣುವ ಭಾರತ ಬೇರೆ, ಗದಗದಲ್ಲಿ ಕಾಣುವ ಭಾರತ ಬೇರೆ.  ವೈದ್ಯರಿಲ್ಲದ ,ನೀರು ಬಾರದ ಭಾರತ ಗದಗಿನಲ್ಲಿ ಕಂಡರೆ ಬೆಂಗಳೂರಿನಲ್ಲಿ ವಿಶ್ವಭಾರತ ಮಾಡುವವರನ್ನು ನಾವು ಕಾಣಬಹುದು. ಅಂಕಿ ಅಂಶಗಳನ್ನು ನೋಡಿಯೇ ಯಾವುದೇ ತೀರ್ಮಾನಗಳನ್ನು ಮಾಡಬೇಕು, ಸಮಿಕ್ಷೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ರೈತರ ಸಂಖ್ಯೆ ಏಳೂ ವರ್ಷಗಳಲ್ಲಿ ಶೇ7% ಕಡಿಮೆಯಾಗಿದೆ. ಕೆಲ ಮುಕ್ಕಾಲು ರೈತರು ರೈತನಾಗಲು ಬಯಸುವುದಿಲ್ಲ.
ಒಬ್ಬ ನಿರೋದ್ಯೋಗಿ ಉದ್ಯೋಗದ ಬಗ್ಗೆ ಮಾತಾನಾಡುವುದಿಲ್ಲ ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ. ಅಷ್ಟರ ಮಟ್ಟಿಗೆ ಧರ್ಮವನ್ನು ತಲೆ ಹೊಕ್ಕಿಸಲಾಗುತ್ತಿದೆ. ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ನಾವು ಅರ್ಥ ಮಾಡಿಕೊಂಡ ಸಂವಿಧಾನವೇನೆಂಬುದು ನಮಗೆ ಗೊತ್ತಿರಬೇಕು, ಇವತ್ತಿನ ಚುನಾವಣೆ ವ್ಯವಸ್ಥೇಯಲ್ಲೂ ಪ್ರಾಮಾಣಿಕವಾಗಿ ಏನಾದರೂ ಕೆಲಸ ಮಾಡಬೇಕೆಂದರೂ ಕೂಡ ಮಾಡಲಾರದ ವ್ಯವಸ್ಥ ಇದೆ. ಅಂಬೇಡ್ಕರ್ ಬಯಸಿದ ಸಂವಿಧಾನವನ್ನು ಚಿಂತನೆಗಳನ್ನು ಸೇರಿಸಿದರೆ ಅಭಿವೃದ್ಧಿ ಭಾರತ ಮಾಡಲು ಸಾಧ್ಯ. ಮೇ ಸಾಹಿತ್ಯ ಮೇಳದಂತಹ ಕಾರ್ಯಕ್ರಮಗಳು  ಚುನಾವಣೆಗಿಂತ ಮುಂಚೆ ನಡೆಯಬೇಕಿತ್ತು, ಇಲ್ಲಿ ಸೇರಿದ ಯುವಜನರು ಇಲ್ಲಿನ ಮಾತುಗಳು ಕೇಳಿ ವೈಚಾರಿಕ ತಿಳುವಳಿಕೆ ಪಡೆಯಬೇಕು
ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಂಬೆಯ ಪ್ರಗತಿಪರ ಚಿಂತಕರಾದ ರಾವ್ ಸಾಹೇಬ್ ಕಸಬೆಯವರ ಮಾತುಗಳು 
ಕನ್ನಡ ಭಾಷೆ ನನಗೆ ಬರುವುದಿಲ್ಲ. ಇದು ಒಂದು ರಿದಮ್ ಇರೋ ಭಾಷೆ. ನಾನು ಮೊದಲ ಸಲ ಕರ್ನಾಟಕಕ್ಕೆ ಬಂದಾಗ ಬಹಳ ಖುಷಿಯಾಗಿತ್ತು. ಯಾಕೆಂದರೆ ನಾನು ಬಸವಣ್ಣನ ನೆಲಕ್ಕೆ ಬಂದಿದ್ದೆ. ಇಲ್ಲಿ ಬಂದ ನಾವೆಲ್ಲಾ ಹೊಸ ಭಾರತ ಕಟ್ಟುವ ಕನಸು ಕಾಣುತ್ತಿದ್ದೇವೆ , ಕನಸಾದ್ರೂ ಕಾಣುತ್ತಿದ್ದೇವಲ್ಲಾ ಎಂಬುದು ಖುಷಿಯ  ವಿಚಾರ. ಇಲ್ಲಿ ಬೇರೆ ಬೇರೆ ಜನಾಂಗಗಳಿವೆ, ಧರ್ಮಗಳಿವೆ, ವರ್ಣಗಳಿವೆ, ಭಾಷೆಗಳಿವೆ ಇದೆಯಲ್ಲವೇ ಭಾರತದೇಶದ ಸೌಂದರ್ಯ?. ಈಗೀಗ ಭಾರತದಲ್ಲಿ ಭಾರತ ಮಾತಾ ಕಿ ಜೈ ಅನ್ನುವ ಸದ್ದು ಕೇಳಿ ಬರುತ್ತಿದೆ, ಇಲ್ಲದ ರಾಷ್ಟ್ರವನ್ನು ಜೈಕಾರ ಹಾಕುವುದೇನು ? ಮೊದಲ ರಾಷ್ಟ್ರ ನಿರ್ಮಿಸೋಣ, ಯಾರ್ಯಾರೋ ರಾಜರುಗಳು, ಮೊಗಲರು, ಸುಲ್ತಾನರು ರಾಜರು ಬಂದರೂ ರಾಷ್ಟ್ರವನ್ನು ಮಾಡಲಾಗಲಿಲ್ಲ. ಸಮಾಜವಾದ, ಸಮಾನತೆ, ನಾಡು ಕಟ್ಟುವ ಕನಸು ನನಸಾಗಿದ್ದೆ ಬಾಬಾಸಾಹೇಬರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಭಾರತ ನನ್ನ ದೇಶವೆಂದು ಹೇಳುವಂತೆ ಮಾಡಿದರು.
ಸ್ವಾತಂತ್ರ್ಯ ಬಂದ ಮೇಲೆ ಗಾಂಧೀಜಿಯೂ ಚರಕ ಬಳಸುತ್ತಿದ್ದರು. ಮೋದಿಯೂ ಬಳಸುತ್ತಿದ್ದಾರೆ ಪ್ರಚಾರಕ್ಕಾಗಿ. ಆದರೆ ಗಾಂಧೀಜಿಯ ಪಕ್ಕಕ್ಕೆ ಕಸ್ತೂರಬಾ ಇದ್ದರು ಆದರೆ ಇವರು ಒಬ್ಬರೇ ಇದ್ದದ್ದು ಇದನ್ನು ನಾವು ಗಮನಿಸಬೇಕು. ನಾವು ಏಕೆ ಬದುಕುತ್ತಿದ್ದೇವೆ ಎಂದು ನನ್ನನ್ನೂ ಪ್ರಶ್ನೆ ಕಾಡುತ್ತಿತ್ತು ಅದಕ್ಕೆ ಬಾಲಕನೊಬ್ಬ ಉತ್ತರಿಸಿದ್ದ ನಮಗೆ ಸಾಯಲು ಆಗುವುದಿಲ್ಲ ಹಾಗಾಗಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದ್ದ. ಮನುಷ್ಯ ಮತ್ತು ಪ್ರಾಣಿಗಳ ಜೀವನಕ್ಕೆ ವ್ಯತ್ಯಾಸವನ್ನು ತಿಳಿದವನ ಮಾತುಗಳಾಗಿದ್ದವು. ನಮ್ಮ ಜೀವನಕ್ಕ ಅರ್ಥ ಕೊಡಲು ನಾವು ಬದುಕಬೇಕಿದೆ ನಮ್ಮ ಜೀವನವನ್ನು ತುಂಬಾ ಅದ್ಭುತವಾಗಿ ಜೀವಿಸಿ ಮುಂದಿನ ಭವಿಷ್ಯವನ್ನು ಸುಂದರಗೊಳಿಸುವುದಾಗಿರಬೇಕು. ಎಂತಹ ದುರಂತವೆಂದರೆ ಭಾರತದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗುತ್ತದೆ. ಮನಸ್ಸಿನಿಂದ ಯಾವುದೇ ಹುಡುಗಿಗೆ ನೀವು ಪ್ರೀತಿಸಿದ್ದರೆ ನೀವು ಹೆಣ್ಣನ್ನು ಗೌರವಿಸುತ್ತಿದ್ದಿರಿ. ಅರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಗದಿದ್ದರೆ ಮುಂದೆ ದೊಡ್ಡ ಆಘಾತ ಕಾದಿದೆ ಹಾಗಾಗಿ ಸಂವಿಧಾನವನ್ನು ಉಳಿಸುವ ಅಗತ್ಯವಿದೆ. ಇದರಲ್ಲಿ ನಾವು ಎಡವಿದರೆ ಪ್ರಜಾಪ್ರಭುತ್ವಕ್ಕೆ ಕುತ್ತು ಬರಲಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ, ಸೃಷ್ಟಿಯಾದರೆ ಮಹಿಳೆಯರ ಮೇಲೆ ಅದು ಕೆಟ್ಟ ಪರಿಣಾಮ ಬೀರಲಿದೆ, ದೇಶ ಫ್ಯಾಸಿಸಂ ಕಡೆ ವಾಲುವುದು ಕಟ್ಟಿಟ್ಟ ಬುತ್ತಿ. ಮುಂದೆ ಯೋಚಿಸಿ ಹೆಜ್ಜೆಗಳನ್ನಿಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...