Homeಅಂಕಣಗಳುನೂರರ ನೋಟ: ಎಗ್ಗಿಲ್ಲದೆ ಮುಂದುವರೆದಿರುವ ದೇಶದ್ರೋಹ ಆಪಾದನೆಯ ದುರ್ಬಳಕೆ

ನೂರರ ನೋಟ: ಎಗ್ಗಿಲ್ಲದೆ ಮುಂದುವರೆದಿರುವ ದೇಶದ್ರೋಹ ಆಪಾದನೆಯ ದುರ್ಬಳಕೆ

- Advertisement -
- Advertisement -

ಮೋದಿ ಸರ್ಕಾರ ತನ್ನ ಪ್ರಜೆಗಳ ಮೇಲೆ ಸಮರ ಸಾರಿದೆ. ಸರ್ಕಾರದ ಧೋರಣೆಯನ್ನು ಒಪ್ಪದ ನಾಗರಿಕರು ಸರ್ಕಾರವನ್ನು ಟೀಕೆ ಮಾಡಿದರೆ ಅವರ ಮೇಲೆ ದೇಶದ್ರೋಹದ ಆಪಾದನೆ ಹೊರಿಸಿ ಬಂಧನದಲ್ಲಿಡಲಾಗುತ್ತಿದೆ. ತನ್ನ ಧೋರಣೆಯನ್ನು ಒಪ್ಪದವರ ಮೇಲೆ, ರಾಜಕೀಯ ವಿರೋಧಿಗಳ ಮೇಲೆ, ಸ್ವತಂತ್ರ ಧೋರಣೆಯ ಪತ್ರಕರ್ತರು, ಬರಹಗಾರರು, ಕಾಲೇಜು ಅಧ್ಯಾಪಕರುಗಳ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸುವುದರಿಂದ ಹಿಡಿದು, ದಸ್ತಗಿರಿ ಮಾಡುವುದು ಅವರ ವಿರುದ್ಧ ಖಟ್ಳೆ ಹೂಡುವುದು ಇವನ್ನೆಲ್ಲಾ ಸರ್ಕಾರ ಮಾಡುತ್ತಿದ್ದು ತನ್ನ ಧೋರಣೆಯನ್ನು ಎತ್ತಿ ಹಿಡಿಯುವ, ಹಾಡಿಹೊಗಳುವವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ರಾಜದ್ರೋಹದ ಕಾನೂನು ಬ್ರಿಟಿಷರು ಸ್ವಾತಂತ್ರ್ಯ ಬಯಸುವವರನ್ನು ಬಗ್ಗುಬಡಿಯಲು ಬಳಸುತ್ತಿದ್ದ ದುರ್ಬಳಕೆಯ ಆಯುಧ. ಈ ಕಾನೂನನ್ನು ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಮನಸೋಇಚ್ಛೆ ಬಳಸುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ಈ ಉಗ್ರ ಕಾಯಿದೆಯನ್ನು ತೆಗೆದುಹಾಕಿದ್ದರೂ ಭಾರತದಲ್ಲಿ ಈ ಅನ್ಯಾಯದ ಕಾಯ್ದೆಯನ್ನು ಜೀವಂತ ಇಟ್ಟು, ಮೋದಿ ಸರ್ಕಾರದಂತಹ ಸರ್ಕಾರಗಳು ಅದನ್ನು ದುರ್ಬಳಕೆ ಮಾಡುತ್ತಿವೆ.

ಗಾಂಧೀಜಿಯವರ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಲಾಗಿತ್ತು. “ನೀವು ರಾಜದ್ರೋಹ ಮಾಡಿದ್ದೀರಿ ಎಂದು ಸರ್ಕಾರ ಖಟ್ಳೆ ಹಾಕಿದೆ, ಇದನ್ನು ನೀವು ಅಲ್ಲೆಗಳೆಯುತ್ತೀರಾ” ಎಂದು ಕೇಳಿದಾಗ, ಗಾಂಧೀಜಿ ಹೌದು ನಾನು ರಾಜದ್ರೋಹ ಕೆಲಸ ಮಾಡಿದ್ದೇನೆ, ಬ್ರಿಟಿಷರು ಭಾರತ ಬಿಟ್ಟು ತೊಲಗುವವರೆಗೆ ರಾಜದ್ರೋಹ ಭಾಷಣ ಮಾಡುತ್ತಲೇ ಇರುತ್ತೇನೆ ಎಂದು ಉತ್ತರಿಸಿದರು. ನ್ಯಾಯಾಧೀಶರು ಇದು ನಿಮ್ಮ ನಿಲುವಾಗಿದ್ದರೆ, ಪ್ರಚಲಿತ ರಾಜದ್ರೋಹ ಕಾನೂನಿಗನುಸಾರ ನಿಮಗೆ 6 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದೇನೆ ಎಂದರು. ಈ ಮೊದಲೇ ರಾಜದ್ರೋಹ ಆರೋಪದ ಮೇಲೆ 6 ವರ್ಷಗಳ ಕಠಿಣ ಶಿಕ್ಷೆಗೆ ಒಳಗಾಗಿರುವ ಗೌರವಾನ್ವಿತ ಬಾಲಗಂಗಾಧರ ತಿಲಕ್‌ರವರಿಗೆ ಕೊಟ್ಟಿರುವಷ್ಟು ಶಿಕ್ಷೆಯನ್ನು ನನಗೂ ವಿಧಿಸಿ ನನ್ನನ್ನು ಅವರ ಮಟ್ಟಕ್ಕೆ ಏರಿಸಿದ್ದೀರಿ ಅದಕ್ಕಾಗಿ ನಿಮಗೆ ವಂದನೆಗಳು ಎಂದರು ಗಾಂಧೀಜಿ.

ದೇಶದ್ರೋಹ

ಅಂದಿನ ಬ್ರಿಟಿಷ್ ಸರ್ಕಾರ ತನ್ನ ಮೇಲೆ ಯಾವುದೇ ಭಿನ್ನಾಭಿಪ್ರಾಯ ಸೂಚಿಸಿದರೂ ಅದನ್ನು ರಾಜದ್ರೋಹ ಎಂದು ಭಾವಿಸುತ್ತಿತ್ತು. ಪ್ರತಿರೋಧ ತೋರಿಸುವ ಯಾವುದೇ ಕಾರ್ಯಕ್ರಮವನ್ನು ರಾಜದ್ರೋಹ ಎಂದು ಭಾವಿಸುತ್ತಿತ್ತು. ಸರ್ಕಾರದ ನೀತಿಯನ್ನು ಖಂಡಿಸಿ ಸಭೆ ನಡೆಸುವುದು ಅಥವಾ ಮೆರವಣಿಗೆ ತೆರಳುವುದು ರಾಜದ್ರೋಹದ ಕೆಲಸ ಎಂದು ಬ್ರಿಟಿಷ್ ಸರ್ಕಾರ ಭಾವಿಸುತ್ತಿತ್ತು. ಸರ್ಕಾರದ ಬಗೆಗೆ ಕೋಪ-ದ್ವೇಷ ಮೂಡಿಸುವುದೂ ರಾಜದ್ರೋಹವೆನಿಸಿತ್ತು. ಈ ಕಾನೂನನ್ನೇ ಬ್ರಿಟಿಷರು ಬಾಲಗಂಗಾಧರ ತಿಲಕ್, ಅನಿಬೆಸೆಂಟ್, ಮೌಲಾನ ಅಬ್ದುಲ್ ಕಲಾಂ ಅಜಾದ್, ಅಲಿ ಸಹೋದರರು ಈ ಎಲ್ಲರ ಮೇಲೆ ಹೇರಿತ್ತು. ಮುಕ್ತ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಸಿಯಲು ಸರ್ಕಾರ ತೊಡಗುವುದು ಪ್ರಜೆಯ ಮೂಲಭೂತ ಹಕ್ಕನ್ನು ಕಸಿದಂತೆ. ಈ ಬರ್ಬರ ರಾಜದ್ರೋಹ ಕಾನೂನು ನಮ್ಮ ರಾಜ್ಯಾಂಗದ ಆಶಯಗಳಿಗೆ ಕಂಟಕಪ್ರಾಯ.

ರಾಜ್ಯಾಂಗ ಸಭೆಯಲ್ಲಿ ಕೆ.ಎಂ ಮುನ್ಷಿಯವರು, ರಾಜ್ಯಾಂಗದಲ್ಲಿ ನುಸುಳಿದ ರಾಜದ್ರ್ರೋಹದ ಕಲಂ ಅನ್ನು ಕೈಬಿಡಬೇಕೆಂದು ತಿದ್ದುಪಡಿ ಸೂಚಿಸಿದರು. ಈ ತಿದ್ದುಪಡಿಗೆ ಅನುಮೋದನೆ ದೊರೆಯಿತಾದರೂ, ದೇಶದ ಭದ್ರತೆ ಮತ್ತು ಅಖಂಡತೆಯನ್ನು ಕಾಪಾಡುವ ದೃಷ್ಟಿಯಿಂದ ಕೆಲವು ಕ್ಲಾಸ್‌ಗಳನ್ನು ಉಳಿಸಿಕೊಳ್ಳಲಾಯಿತು. ಹೀಗಾಗಿ ರಾಜದ್ರೋಹದ ಕಾನೂನು ಕೆಲವು ಬದಲಾವಣೆಗಳೊಂದಿಗೆ ಹಾಗೇ ಉಳಿದುಹೋಯಿತು.

ರಾಜದ್ರೋಹ ಕಾನೂನಿನ ದುರ್ಬಳಕೆಯಿಂದ ಅನೇಕರ ಜೀವನ ಹಾಳಾಯಿತು. ರಾಜದ್ರೋಹ ಆಪಾದನೆಯಲ್ಲಿ ವಿಚಾರಣೆಯಾಗುತ್ತಿದ್ದು, 2019ನೆ ಇಸವಿಯಲ್ಲಿ ಬಾಕಿ ಇದ್ದ ಕೇಸುಗಳ ಶೇ 9ರಷ್ಟರಲ್ಲಿ ಖಟ್ಳೆಗಳನ್ನು ಕೈಬಿಡಲಾಯಿತು. ಕಾರಣ: ಸಾಕ್ಷ್ಯಾಧಾರಗಳ ಕೊರತೆ ಅಥವಾ ತಪ್ಪಿತಸ್ಥರ ಪರಾರಿಯಾಗಿದ್ದರಿಂದ! 2014ರ ನಂತರ ಸರ್ಕಾರ ನಡೆಸುವವರನ್ನು ಟೀಕೆ ಮಾಡಿದ್ದಕ್ಕಾಗಿ, ಮೋದಿ ಮುಂತಾದ ನಾಯಕರನ್ನು ಟೀಕೆ ಮಾಡಿದ್ದಕ್ಕಾಗಿ ನೂರಾರು ಜನರ ಮೇಲೆ ಕೇಸು ದಾಖಲಾಗಿವೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ರಾಜದ್ರೋಹ ಆಪಾದನೆ ಹೊರೆಸುವುದರಲ್ಲಿ ಬಹಳ ಮುಂದಿದ್ದಾರೆ. ಕಳೆದ 4 ವರ್ಷಗಳಲ್ಲಿ ನಾಗರಿಕ (ತಿದ್ದುಪಡಿಯಾದ 2019) ಮಸೂದೆ ವಿರುದ್ಧ ಸೊಲ್ಲೆತ್ತಿದ 90 ಜನರ ಮೇಲೆ ರಾಜದ್ರೋಹ ಆಪಾದನೆ ಖಟ್ಳೆ ಹಾಕಿದ್ದಾರೆ. ಕಾರಣವಿಲ್ಲದೆ ಅವರ ಬಾಯಿ ಮುಚ್ಚಿಸಲು ರಾಜದ್ರೋಹ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗಿದೆ.

ಸರ್ಕಾರಗಳು ಅನೇಕರ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ಸೆರೆಮನೆಗೆ ಕಳುಹಿಸುತ್ತಿರುವುದನ್ನು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ. ದೇಶದ ಇತರ ಭಾಗಗಳಲ್ಲಿರುವ ಅಧೀನ ನ್ಯಾಯಾಲಯಗಳು ರಾಜದ್ರೋಹ ಹೇರುತ್ತಿರುವ ಸರ್ಕಾರದ ಆತುರದ ಕ್ರಮಗಳನ್ನು ಪ್ರಶ್ನಿಸಲು ತೊಡಗಿವೆ. ಅಪಾಯಕಾರಿ ಐಡಿಯಾಲಜಿಗಳು ಭಾರತದ ಐಕ್ಯತೆ ಮತ್ತು ಸಾರ್ವಭೌಮತ್ವವನ್ನು ಅಲ್ಲಗಳೆಯುತ್ತಿವೆ ಎಂದು ಮೋದಿ ಹರಿಹಾಯ್ದಿದ್ದಾರೆ. ಈ ಬಗೆಯ ಹೇಳಿಕೆ ಕೊಡುವ ಬದಲು ಮೋದಿಯವರು ತಮ್ಮ ಗೆಯ್ಮೆ ಸರಿಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.


ಇದನ್ನೂ ಓದಿ: ಸರ್ಕಾರದಿಂದ ದೇಶದ್ರೋಹ ಕಾನೂನು ದುರುಪಯೋಗ, ಅದನ್ನು ರದ್ದುಗೊಳಿಸಬೇಕು : ನಿವೃತ್ತ ಸುಪ್ರೀಂ ನ್ಯಾಯಾಧೀಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...