Homeಕರ್ನಾಟಕಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

ಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

- Advertisement -
- Advertisement -

ಮೊದಲು ಈ ಕೆಳಗಿನ ಕೋಷ್ಟಕ ನೋಡಿ.

ಕ್ಷೇತ್ರ

ಟಿಕೆಟ್‌ ಕೇಳಿದ್ದ ಕಾಂಗ್ರೆಸ್ಸಿನ ಮಹಿಳಾ ನಾಯಕಿ

ಟಿಕೆಟ್‌ ಕೊಡಲಾಯಿತೇ?

ಅಂತಿಮ ಫಲಿತಾಂಶ

ಮತಗಳ ಅಂತರ

ಬೊಮ್ಮನಹಳ್ಳಿ

ಕವಿತಾ ರೆಡ್ಡಿ

ಇಲ್ಲ

ಕಾಂಗ್ರೆಸ್‌ ಸೋತಿತು

24215

ದಾಸರಹಳ್ಳಿ

ಡಾ.ನಾಗಲಕ್ಷ್ಮಿ

ಇಲ್ಲ

ಕಾಂಗ್ರೆಸ್‌ ಸೋತಿತು

47770

ಜೆಡಿಎಸ್ ಎರಡನೇ ಸ್ಥಾನ

ಬೆಂಗಳೂರು ದಕ್ಷಿಣ

ಸುಷ್ಮಾ ರಾಮಗೋಪಾಲ್

ಇಲ್ಲ

ಕಾಂಗ್ರೆಸ್‌ ಸೋತಿತು

49699

ರಾಜಾಜಿನಗರ

ಭವ್ಯ ನರಸಿಂಹಮೂರ್ತಿ/ ಪದ್ಮಾವತಿ

ಇಲ್ಲ

ಕಾಂಗ್ರೆಸ್‌ ಸೋತಿತು

8060

(ಕಡಿಮೆ ಅಂತರವೇ, ಆದರೆ ಇಲ್ಲಿ ಮತದಾನವೇ ಬಹಳ ಕಡಿಮೆ)

ಮಹದೇವಪುರ

ಕಮಲಾಕ್ಷಿ ರಾಜಣ್ಣ

ಇಲ್ಲ

ಕಾಂಗ್ರೆಸ್‌ ಸೋತಿತು

44501

ಬಸವಕಲ್ಯಾಣ

ಮಾಲಾ

ಇಲ್ಲ

ಕಾಂಗ್ರೆಸ್‌ ಸೋತಿತು

14415

ಹರಪನಹಳ್ಳಿ

ವೀಣಾ ಎಂ/ಲತಾ ಎಂ

ಇಲ್ಲ

ಕಾಂಗ್ರೆಸ್‌ ಸೋತಿತು

ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ. ಟಿಕೆಟ್‌ ಕೇಳಿದ್ದ ಲತಾ ಸ್ವತಂತ್ರ ಅಭ್ಯರ್ಥಿಯಾಗಿ 13845 ಮತಗಳಿಂದ ಗೆದ್ದರು

ತೇರದಾಳ

ಉಮಾಶ್ರೀ

ಇಲ್ಲ

ಕಾಂಗ್ರೆಸ್‌ ಸೋತಿತು

10745

ಚಿಕ್ಕಪೇಟೆ

ಗಂಗಾಂಬಿಕೆ

ಇಲ್ಲ

ಕಾಂಗ್ರೆಸ್‌ ಸೋತಿತು

ಈ ಕೆಳಗಿನ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ/ಪ.ಜಾತಿಗೆ ಸೇರಿದ ಹೆಸರು ಮಾಡಿದ್ದ ಪುರುಷರಿಗೆ ಕೊಡಲಾಯಿತು. ಅದೂ ಸರಿಯೇ ಆಗಿತ್ತು. ಇಲ್ಲೂ ಮಹಿಳಾ ಆಕಾಂಕ್ಷಿಗಳಿದ್ದರು ಎಂಬುದನ್ನು ದಾಖಲಿಸುವ ಸಲುವಾಗಿ ಸೇರಿಸಲಾಗಿದೆ.

ಮಂಗಳೂರು ದಕ್ಷಿಣ

ಶಾಲೆಟ್‌ ಪಿಂಟೋ

ಇಲ್ಲ

ಕಾಂಗ್ರೆಸ್‌ ಸೋತಿತು

23962

ಶಿಗ್ಗಾಂವ್‌

ರಾಜೇಶ್ವರಿ ಪಟೇಲ್

ಇಲ್ಲ

ಕಾಂಗ್ರೆಸ್‌ ಸೋತಿತು

35978

ಹೊಳಲ್ಕೆರೆ

ಸವಿತಾ ರಘು

ಇಲ್ಲ

ಕಾಂಗ್ರೆಸ್‌ ಸೋತಿತು

5682

ರಾಜ್ಯದ ಇನ್ನೂ ಎಷ್ಟೋ ಕ್ಷೇತ್ರಗಳಲ್ಲಿ ಮಹಿಳೆಯರು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಕೇಳಿದ್ದಿರಬಹುದು. ಈ ಬರಹ ಬರೆಯುವ ಹೊತ್ತಿಗೆ, ನನ್ನಲ್ಲಿ ಅದರ ವಿವರಗಳು ಲಭ್ಯವಿಲ್ಲ ಅಷ್ಟೇ.

ಈಗ ವಿಚಾರಕ್ಕೆ ಬರೋಣ. ಚುನಾವಣೆಗಳು ಬಲಾಢ್ಯ ಜಾತಿಗಳ, ಹಣವಂತರ, ಗಂಡಸರ, ಬಹುಸಂಖ್ಯಾತ ಧರ್ಮದವರ ಅಖಾಡವಾಗುತ್ತಿದೆ. ಆದರೆ, ಚುನಾವಣೆಗಳಲ್ಲಿ ಮತ ಹಾಕುವವರಲ್ಲಿ ಹೆಚ್ಚಿನವರು ದುರ್ಬಲ ಜಾತಿಗಳವರು, ಬಡವರು. ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಚುನಾವಣೆಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂಬುದಕ್ಕೆ ಇತ್ತೀಚಿನ 2023ರ ವಿಧಾನಸಭಾ ಚುನಾವಣೆಯ ಅಂಕಿ-ಅಂಶ ಸಾಕಷ್ಟು ಸಾಕ್ಷಿ ಒದಗಿಸುತ್ತದೆ. ಆದರೆ, ಟಿಕೆಟ್‌ ಪಡೆದುಕೊಳ್ಳುವ ವಿಚಾರದಲ್ಲಿ ಮಾತ್ರ ಅವರಿಗೆ ಅವಕಾಶವಿರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇರುವುದರಿಂದ ಬಚಾವ್‌ ಆಗಿದ್ದಾರೆಯೇ ಹೊರತು, ಇಲ್ಲವಾಗಿದ್ದರೆ ಅವರ ಪರಿಸ್ಥಿತಿಯೂ ಹೀಗೇ ಇರುತ್ತಿತ್ತು. ಕರ್ನಾಟಕದಲ್ಲಿ 3-4% ಇರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶಾಸಕರು 10 ಜನರಿದ್ದರೆ, 13%ಗೂ ಹೆಚ್ಚಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದವರು 9 ಶಾಸಕರಿದ್ದಾರೆ. ಈ ವಿಚಾರ ಇನ್ನೊಮ್ಮೆ ಚರ್ಚಿಸೋಣ.

ಏಕೆಂದರೆ, ಅಧಿಕಾರದ ಸ್ಥಾನ ಪಡೆಯುವಲ್ಲಿ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ವಿಚಾರ ಚಿಂತಾಜನಕವಾಗಿದೆ. ಇದಕ್ಕೆ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಕೊಡುವ ಕಾರಣ, ʼಅವರು ಗೆಲ್ಲುವುದಿಲ್ಲʼ ಎಂಬುದಾಗಿದೆ. ಇದೇ ಮಾನದಂಡವನ್ನು ಮುಸ್ಲಿಮರಿಗೂ, ಹಿಂದುಳಿದ ಸಮುದಾಯಗಳಿಗೂ ಅನ್ವಯಿಸಲಾಗುತ್ತದೆ. ಮೀಸಲೇತರ ಕ್ಷೇತ್ರಗಳಲ್ಲಿ ಪ.ಜಾತಿ/ಪ.ಪಂಗಡಗಳಿಗೂ ಅನ್ವಯಿಸಲಾಗುತ್ತದೆ. ಆದರೆ, ಬಲಾಢ್ಯ ಜಾತಿಗಳಿಗೆ ಸೇರಿದವರು ಅಥವಾ ಗಂಡಸರೂ ಸಹಾ ಗೆಲ್ಲದೇ ಇರುವ ಕ್ಷೇತ್ರಗಳಲ್ಲಿ ಎಷ್ಟೇ ಚುನಾವಣೆಗಳು ನಡೆದರೂ ಅವರವರಿಗೇ ಟಿಕೆಟ್‌ ನೀಡಲಾಗುತ್ತದೆ. ಉದಾಹರಣೆಗೆ ಬೆಂಗಳೂರು ನಗರದ ಬಸವನಗುಡಿ ಕ್ಷೇತ್ರವನ್ನೇ ತೆಗೆದುಕೊಳ್ಳಿ. 2004ರಲ್ಲಿ ಅಲ್ಲಿ ಕೆ.ಚಂದ್ರಶೇಖರ್‌ ಅವರು ಒಮ್ಮೆ ಕಾಂಗ್ರೆಸ್ಸಿನಿಂದ ಗೆದ್ದುದನ್ನು ಬಿಟ್ಟರೆ, 1972ರ ನಂತರ ಅಲ್ಲಿ ಕಾಂಗ್ರೆಸ್‌ ಗೆದ್ದೇ ಇಲ್ಲ. 1972ರಲ್ಲಿ ಗೆದ್ದಿದ್ದು ಅಮೀರ್‌ ರಹಮತುಲ್ಲಾ ಖಾನ್‌ ಎಂಬ ಮುಸ್ಲಿಂ ಅಭ್ಯರ್ಥಿ. ಅದು ದೇವರಾಜ ಅರಸರ ವಿಶಿಷ್ಟ ಸಾಮಾಜಿಕ ಸಮೀಕರಣದ ಚುನಾವಣೆ ಎಂಬುದನ್ನೂ ನೆನಪಿನಲ್ಲಿಡಬೇಕು.

ಈ ಕ್ಷೇತ್ರವನ್ನು ಬ್ರಾಹ್ಮಣರ ಕ್ಷೇತ್ರ ಎಂದು ತಾವೇ ತೀರ್ಮಾನಿಸಿಕೊಂಡು (ಅದಕ್ಕೆ ಯಾವ ಸಮೀಕ್ಷೆಯ ಆಧಾರ ಇಲ್ಲದಿದ್ದರೂ), ಬಿಜೆಪಿಯಿಂದ ಸತತವಾಗಿ ಬ್ರಾಹ್ಮಣರು ಗೆಲ್ಲುತ್ತಿರುವುದರಿಂದ ತಾವೂ ಬ್ರಾಹ್ಮಣರಿಗೇ ಟಿಕೆಟ್‌ ಕೊಡಬೇಕೆಂದು ಕಾಂಗ್ರೆಸ್‌ ಪಕ್ಷ ತೀರ್ಮಾನಿಸುತ್ತದೆ. ಮುಸ್ಲಿಮರಷ್ಟೇ ಧ್ರುವೀಕರಣಗೊಂಡ ಇನ್ನೊಂದು ಸಮುದಾಯವಿದ್ದರೆ ಅದು ಬ್ರಾಹ್ಮಣರದ್ದು; ಮತ್ತು ಅದು ಬಿಜೆಪಿಯೆಡೆಗೆ ಧ್ರುವೀಕರಣಗೊಂಡಿದೆ. ಆದರೂ ಈ ಸಾರಿ ಅದೇ ಮಾನದಂಡದ ಮೇಲೆ ಟಿಕೆಟ್‌ ನೀಡಲಾಯಿತು.

ಇಂತಹ ಮಾನದಂಡಗಳಿಂದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾಗುವ ಸಮುದಾಯ ಮಹಿಳೆಯರದ್ದು. ಮೇಲಿನ ಕೋಷ್ಟಕದಲ್ಲಿ ಕಾಣಿಸಿರುವ ಹೆಸರುಗಳಲ್ಲಿ ಕೆಲವರು ಕುಟುಂಬದ ಹಿನ್ನೆಲೆಯ ಕಾರಣಕ್ಕೆ ರಾಜಕಾರಣದಲ್ಲಿರಬಹುದು. ಆದರೆ, ಎಲ್ಲರೂ ಹಾಗೆ ಅಲ್ಲ. ಉದಾಹರಣೆಗೆ ಕವಿತಾ ರೆಡ್ಡಿಯವರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಮಾಡುತ್ತಾರೆ. ಆ ಕ್ಷೇತ್ರದಲ್ಲಿ- ಮತ್ತು ಮಹಿಳೆಯರಿಗೆ ಟಿಕೆಟ್‌ ನಿರಾಕರಿಸಿ ʼಹೊರಗಿನಿಂದ ಬಂದʼ ಪುರುಷರಿಗೆ ಟಿಕೆಟ್‌ ನೀಡಲಾದ ವಿವಿಧ ಕ್ಷೇತ್ರಗಳಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತೆ ಅಲ್ಲೇ ನಿಂತು ಪಕ್ಷ ಕಟ್ಟುತ್ತಾರೆ ಎನ್ನುವುದರ ಬಗ್ಗೆ ಯಾರಿಗೂ ಖಾತರಿಯಿಲ್ಲ. ಬಹುಶಃ ಅವರು ಇನ್ನೆಲ್ಲೋ ಅಧಿಕಾರದ ಸ್ಥಾನಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇದೇ ಪಕ್ಷದಲ್ಲಿ ಅಥವಾ ಇನ್ನೊಂದು ಪಕ್ಷದಲ್ಲಿ. ಹೀಗಿದ್ದೂ, ಪಕ್ಷಕ್ಕಾಗಿ ನಿರಂತರ ಕೆಲಸ ಮಾಡಿದ ಮಹಿಳೆಯರಿಗೆ ಯಾವ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಗುತ್ತದೆ? ಸಾಮಾನ್ಯವಾಗಿ ಕೊಡುವ ಕಾರಣ, ಈಗಾಗಲೇ ಹೇಳಿದಂತೆ, ಅವರು ಗೆಲ್ಲುವುದಿಲ್ಲ ಎಂಬುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಒಂದು, ಹಾಗಾದರೆ ಆ ಜಾಗಗಳಲ್ಲಿ ನೀವು ಟಿಕೆಟ್‌ ನೀಡಿದ ಪುರುಷರೂ ಗೆದ್ದಿಲ್ಲವಲ್ಲಾ? ಕೆಲವರಂತೂ ಭೀಕರವಾಗಿ ಸೋತಿದ್ದಾರೆ! ಎರಡನೆಯದು, ಮಹಿಳೆಯರು, ಮುಸ್ಲಿಮರು, ಶೋಷಿತ ಸಮುದಾಯಗಳವರು ಸ್ಪರ್ಧಿಸಿದರೆ ಅವರಿಗೆ ಉಳಿದವರು ಮತ ಹಾಕುವುದಿಲ್ಲ ಎನ್ನುವುದಾದರೆ, ಆ ಪಕ್ಷದ್ದೇ ಆದ ಒಂದು ವೋಟ್‌ ಬ್ಯಾಂಕ್‌ ಇಲ್ಲ ಎಂದಾಯಿತು! ಹಾಗಾದರೆ ಇಂತಹ ಪಕ್ಷಗಳು ಇಷ್ಟು ಸುದೀರ್ಘ ಕಾಲ ರಾಜಕಾರಣ ಮಾಡಿಕೊಂಡು ಬಂದು ಏನನ್ನು ಸಾಧಿಸಿದರು? ಇದು ಗಂಭೀರವಾಗಿ ಯೋಚಿಸಬೇಕಾದ ಸಂಗತಿ. ಇದೇ ಕಾರಣಕ್ಕೆ ಬಾಬಾ ಸಾಹೇಬರು ದಲಿತ ಸಮುದಾಯಕ್ಕೆ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳಿದ್ದರು. ಅದು ಸಾಧ್ಯವಾಗಿದ್ದರೆ ನಂತರ ಉಳಿದೆಲ್ಲಾ ಸಮುದಾಯಗಳೂ, ಮಹಿಳೆಯರೂ ಸಹಾ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳುತ್ತಿದ್ದರು ಎನಿಸುತ್ತದೆ. ಅದು ಮಾತ್ರವೇ ನ್ಯಾಯ ಒದಗಿಸಿಕೊಡುತ್ತಿತ್ತು!!

ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿದ್ದರಿಂದಲೂ ಕಾಂಗ್ರೆಸ್‌ ಗೆದ್ದು ಬಂದಿದೆ. ಇದ್ದುದರಲ್ಲಿ ವೈಜ್ಞಾನಿಕವಾಗಿ ನಡೆದ ಚುನಾವಣೋತ್ತರ ಸಮೀಕ್ಷೆಯಲ್ಲೂ ಇದು ಸ್ಪಷ್ಟವಾಗಿದೆ. ಮಹಿಳೆಯರು ಶೇ.11ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಪುರುಷರು ಕೇವಲ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ (ಬಿಜೆಪಿಗೆ ಹಾಕಿದ್ದಕ್ಕಿಂತ) ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಇದರ ಋಣವನ್ನು ತೀರಿಸಲು ಗ್ಯಾರಂಟಿಗಳನ್ನು, ಭಾಗ್ಯಗಳನ್ನು ನೀಡುತ್ತೇವೆಂದು ಕಾಂಗ್ರೆಸ್‌ ಪಕ್ಷ ಹೇಳಬಹುದು; ಹೌದು ಅದನ್ನು ನೀಡಲೇಬೇಕು. ಹಾಗೆಯೇ ಅಧಿಕಾರದಲ್ಲೂ ಪಾಲು ಕೊಡಬೇಕು. ಈಗೇನು ಮಾಡಬಹುದು?

ಈ ವಿಧಾನ ಪರಿಷತ್ತಿನ ಚುನಾವಣೆಯ ಸಂದರ್ಭ ಅವರಿಗೆ ನೆರವಾಗಬಹುದು. ಆರರಲ್ಲಿ ಮೂರು ಸ್ಥಾನಗಳನ್ನಾದರೂ ಮಹಿಳೆಯರಿಗೆ ನೀಡಿದರೆ, ಕಾಂಗ್ರೆಸ್ಸು ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೃಢ ಹೆಜ್ಜೆಗಳನ್ನಿಡುತ್ತಿದೆ ಎಂದುಕೊಳ್ಳಬಹುದು.

ಇಂತಹ ಎಲ್ಲಾ ಪ್ರಶ್ನೆಗಳನ್ನು ನಮಗೇ ಏಕೆ ಕೇಳುತ್ತಾರೆ ಎಂದು ಕಾಂಗ್ರೆಸ್ಸಿನವರು ಕೇಳಬಹುದು. ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಿಗಬೇಕಾದ ಹಕ್ಕುಗಳಿಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲವಾದ್ದರಿಂದ ಕಾಂಗ್ರೆಸ್ಸನ್ನು ಕೇಳಲಾಗುತ್ತದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವುದು ಕಾಂಗ್ರೆಸ್ʼನಲ್ಲಿ ಸಾಧ್ಯವಿಲ್ಲವಾದರೆ, ಆಗ ಆಯ್ಕೆ ಬಿಜೆಪಿ ಅಥವಾ ಜೆಡಿಎಸ್‌ ಅಲ್ಲ. ಅದಕ್ಕೆ ಈ ಮೂರು ಪಕ್ಷಗಳನ್ನು ಹೊರತುಪಡಿಸಿದ ಬೇರೆ ಆಯ್ಕೆ ಮಾಡಿಕೊಳ್ಳುವುದೇ ಅನಿವಾರ್ಯ.

– ಡಾ. ಎಚ್. ವಿ. ವಾಸು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...