Homeಕರ್ನಾಟಕಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

ಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

- Advertisement -
- Advertisement -

ಮೊದಲು ಈ ಕೆಳಗಿನ ಕೋಷ್ಟಕ ನೋಡಿ.

ಕ್ಷೇತ್ರ

ಟಿಕೆಟ್‌ ಕೇಳಿದ್ದ ಕಾಂಗ್ರೆಸ್ಸಿನ ಮಹಿಳಾ ನಾಯಕಿ

ಟಿಕೆಟ್‌ ಕೊಡಲಾಯಿತೇ?

ಅಂತಿಮ ಫಲಿತಾಂಶ

ಮತಗಳ ಅಂತರ

ಬೊಮ್ಮನಹಳ್ಳಿ

ಕವಿತಾ ರೆಡ್ಡಿ

ಇಲ್ಲ

ಕಾಂಗ್ರೆಸ್‌ ಸೋತಿತು

24215

ದಾಸರಹಳ್ಳಿ

ಡಾ.ನಾಗಲಕ್ಷ್ಮಿ

ಇಲ್ಲ

ಕಾಂಗ್ರೆಸ್‌ ಸೋತಿತು

47770

ಜೆಡಿಎಸ್ ಎರಡನೇ ಸ್ಥಾನ

ಬೆಂಗಳೂರು ದಕ್ಷಿಣ

ಸುಷ್ಮಾ ರಾಮಗೋಪಾಲ್

ಇಲ್ಲ

ಕಾಂಗ್ರೆಸ್‌ ಸೋತಿತು

49699

ರಾಜಾಜಿನಗರ

ಭವ್ಯ ನರಸಿಂಹಮೂರ್ತಿ/ ಪದ್ಮಾವತಿ

ಇಲ್ಲ

ಕಾಂಗ್ರೆಸ್‌ ಸೋತಿತು

8060

(ಕಡಿಮೆ ಅಂತರವೇ, ಆದರೆ ಇಲ್ಲಿ ಮತದಾನವೇ ಬಹಳ ಕಡಿಮೆ)

ಮಹದೇವಪುರ

ಕಮಲಾಕ್ಷಿ ರಾಜಣ್ಣ

ಇಲ್ಲ

ಕಾಂಗ್ರೆಸ್‌ ಸೋತಿತು

44501

ಬಸವಕಲ್ಯಾಣ

ಮಾಲಾ

ಇಲ್ಲ

ಕಾಂಗ್ರೆಸ್‌ ಸೋತಿತು

14415

ಹರಪನಹಳ್ಳಿ

ವೀಣಾ ಎಂ/ಲತಾ ಎಂ

ಇಲ್ಲ

ಕಾಂಗ್ರೆಸ್‌ ಸೋತಿತು

ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ. ಟಿಕೆಟ್‌ ಕೇಳಿದ್ದ ಲತಾ ಸ್ವತಂತ್ರ ಅಭ್ಯರ್ಥಿಯಾಗಿ 13845 ಮತಗಳಿಂದ ಗೆದ್ದರು

ತೇರದಾಳ

ಉಮಾಶ್ರೀ

ಇಲ್ಲ

ಕಾಂಗ್ರೆಸ್‌ ಸೋತಿತು

10745

ಚಿಕ್ಕಪೇಟೆ

ಗಂಗಾಂಬಿಕೆ

ಇಲ್ಲ

ಕಾಂಗ್ರೆಸ್‌ ಸೋತಿತು

ಈ ಕೆಳಗಿನ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ/ಪ.ಜಾತಿಗೆ ಸೇರಿದ ಹೆಸರು ಮಾಡಿದ್ದ ಪುರುಷರಿಗೆ ಕೊಡಲಾಯಿತು. ಅದೂ ಸರಿಯೇ ಆಗಿತ್ತು. ಇಲ್ಲೂ ಮಹಿಳಾ ಆಕಾಂಕ್ಷಿಗಳಿದ್ದರು ಎಂಬುದನ್ನು ದಾಖಲಿಸುವ ಸಲುವಾಗಿ ಸೇರಿಸಲಾಗಿದೆ.

ಮಂಗಳೂರು ದಕ್ಷಿಣ

ಶಾಲೆಟ್‌ ಪಿಂಟೋ

ಇಲ್ಲ

ಕಾಂಗ್ರೆಸ್‌ ಸೋತಿತು

23962

ಶಿಗ್ಗಾಂವ್‌

ರಾಜೇಶ್ವರಿ ಪಟೇಲ್

ಇಲ್ಲ

ಕಾಂಗ್ರೆಸ್‌ ಸೋತಿತು

35978

ಹೊಳಲ್ಕೆರೆ

ಸವಿತಾ ರಘು

ಇಲ್ಲ

ಕಾಂಗ್ರೆಸ್‌ ಸೋತಿತು

5682

ರಾಜ್ಯದ ಇನ್ನೂ ಎಷ್ಟೋ ಕ್ಷೇತ್ರಗಳಲ್ಲಿ ಮಹಿಳೆಯರು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಕೇಳಿದ್ದಿರಬಹುದು. ಈ ಬರಹ ಬರೆಯುವ ಹೊತ್ತಿಗೆ, ನನ್ನಲ್ಲಿ ಅದರ ವಿವರಗಳು ಲಭ್ಯವಿಲ್ಲ ಅಷ್ಟೇ.

ಈಗ ವಿಚಾರಕ್ಕೆ ಬರೋಣ. ಚುನಾವಣೆಗಳು ಬಲಾಢ್ಯ ಜಾತಿಗಳ, ಹಣವಂತರ, ಗಂಡಸರ, ಬಹುಸಂಖ್ಯಾತ ಧರ್ಮದವರ ಅಖಾಡವಾಗುತ್ತಿದೆ. ಆದರೆ, ಚುನಾವಣೆಗಳಲ್ಲಿ ಮತ ಹಾಕುವವರಲ್ಲಿ ಹೆಚ್ಚಿನವರು ದುರ್ಬಲ ಜಾತಿಗಳವರು, ಬಡವರು. ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಚುನಾವಣೆಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂಬುದಕ್ಕೆ ಇತ್ತೀಚಿನ 2023ರ ವಿಧಾನಸಭಾ ಚುನಾವಣೆಯ ಅಂಕಿ-ಅಂಶ ಸಾಕಷ್ಟು ಸಾಕ್ಷಿ ಒದಗಿಸುತ್ತದೆ. ಆದರೆ, ಟಿಕೆಟ್‌ ಪಡೆದುಕೊಳ್ಳುವ ವಿಚಾರದಲ್ಲಿ ಮಾತ್ರ ಅವರಿಗೆ ಅವಕಾಶವಿರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇರುವುದರಿಂದ ಬಚಾವ್‌ ಆಗಿದ್ದಾರೆಯೇ ಹೊರತು, ಇಲ್ಲವಾಗಿದ್ದರೆ ಅವರ ಪರಿಸ್ಥಿತಿಯೂ ಹೀಗೇ ಇರುತ್ತಿತ್ತು. ಕರ್ನಾಟಕದಲ್ಲಿ 3-4% ಇರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶಾಸಕರು 10 ಜನರಿದ್ದರೆ, 13%ಗೂ ಹೆಚ್ಚಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದವರು 9 ಶಾಸಕರಿದ್ದಾರೆ. ಈ ವಿಚಾರ ಇನ್ನೊಮ್ಮೆ ಚರ್ಚಿಸೋಣ.

ಏಕೆಂದರೆ, ಅಧಿಕಾರದ ಸ್ಥಾನ ಪಡೆಯುವಲ್ಲಿ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ವಿಚಾರ ಚಿಂತಾಜನಕವಾಗಿದೆ. ಇದಕ್ಕೆ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಕೊಡುವ ಕಾರಣ, ʼಅವರು ಗೆಲ್ಲುವುದಿಲ್ಲʼ ಎಂಬುದಾಗಿದೆ. ಇದೇ ಮಾನದಂಡವನ್ನು ಮುಸ್ಲಿಮರಿಗೂ, ಹಿಂದುಳಿದ ಸಮುದಾಯಗಳಿಗೂ ಅನ್ವಯಿಸಲಾಗುತ್ತದೆ. ಮೀಸಲೇತರ ಕ್ಷೇತ್ರಗಳಲ್ಲಿ ಪ.ಜಾತಿ/ಪ.ಪಂಗಡಗಳಿಗೂ ಅನ್ವಯಿಸಲಾಗುತ್ತದೆ. ಆದರೆ, ಬಲಾಢ್ಯ ಜಾತಿಗಳಿಗೆ ಸೇರಿದವರು ಅಥವಾ ಗಂಡಸರೂ ಸಹಾ ಗೆಲ್ಲದೇ ಇರುವ ಕ್ಷೇತ್ರಗಳಲ್ಲಿ ಎಷ್ಟೇ ಚುನಾವಣೆಗಳು ನಡೆದರೂ ಅವರವರಿಗೇ ಟಿಕೆಟ್‌ ನೀಡಲಾಗುತ್ತದೆ. ಉದಾಹರಣೆಗೆ ಬೆಂಗಳೂರು ನಗರದ ಬಸವನಗುಡಿ ಕ್ಷೇತ್ರವನ್ನೇ ತೆಗೆದುಕೊಳ್ಳಿ. 2004ರಲ್ಲಿ ಅಲ್ಲಿ ಕೆ.ಚಂದ್ರಶೇಖರ್‌ ಅವರು ಒಮ್ಮೆ ಕಾಂಗ್ರೆಸ್ಸಿನಿಂದ ಗೆದ್ದುದನ್ನು ಬಿಟ್ಟರೆ, 1972ರ ನಂತರ ಅಲ್ಲಿ ಕಾಂಗ್ರೆಸ್‌ ಗೆದ್ದೇ ಇಲ್ಲ. 1972ರಲ್ಲಿ ಗೆದ್ದಿದ್ದು ಅಮೀರ್‌ ರಹಮತುಲ್ಲಾ ಖಾನ್‌ ಎಂಬ ಮುಸ್ಲಿಂ ಅಭ್ಯರ್ಥಿ. ಅದು ದೇವರಾಜ ಅರಸರ ವಿಶಿಷ್ಟ ಸಾಮಾಜಿಕ ಸಮೀಕರಣದ ಚುನಾವಣೆ ಎಂಬುದನ್ನೂ ನೆನಪಿನಲ್ಲಿಡಬೇಕು.

ಈ ಕ್ಷೇತ್ರವನ್ನು ಬ್ರಾಹ್ಮಣರ ಕ್ಷೇತ್ರ ಎಂದು ತಾವೇ ತೀರ್ಮಾನಿಸಿಕೊಂಡು (ಅದಕ್ಕೆ ಯಾವ ಸಮೀಕ್ಷೆಯ ಆಧಾರ ಇಲ್ಲದಿದ್ದರೂ), ಬಿಜೆಪಿಯಿಂದ ಸತತವಾಗಿ ಬ್ರಾಹ್ಮಣರು ಗೆಲ್ಲುತ್ತಿರುವುದರಿಂದ ತಾವೂ ಬ್ರಾಹ್ಮಣರಿಗೇ ಟಿಕೆಟ್‌ ಕೊಡಬೇಕೆಂದು ಕಾಂಗ್ರೆಸ್‌ ಪಕ್ಷ ತೀರ್ಮಾನಿಸುತ್ತದೆ. ಮುಸ್ಲಿಮರಷ್ಟೇ ಧ್ರುವೀಕರಣಗೊಂಡ ಇನ್ನೊಂದು ಸಮುದಾಯವಿದ್ದರೆ ಅದು ಬ್ರಾಹ್ಮಣರದ್ದು; ಮತ್ತು ಅದು ಬಿಜೆಪಿಯೆಡೆಗೆ ಧ್ರುವೀಕರಣಗೊಂಡಿದೆ. ಆದರೂ ಈ ಸಾರಿ ಅದೇ ಮಾನದಂಡದ ಮೇಲೆ ಟಿಕೆಟ್‌ ನೀಡಲಾಯಿತು.

ಇಂತಹ ಮಾನದಂಡಗಳಿಂದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾಗುವ ಸಮುದಾಯ ಮಹಿಳೆಯರದ್ದು. ಮೇಲಿನ ಕೋಷ್ಟಕದಲ್ಲಿ ಕಾಣಿಸಿರುವ ಹೆಸರುಗಳಲ್ಲಿ ಕೆಲವರು ಕುಟುಂಬದ ಹಿನ್ನೆಲೆಯ ಕಾರಣಕ್ಕೆ ರಾಜಕಾರಣದಲ್ಲಿರಬಹುದು. ಆದರೆ, ಎಲ್ಲರೂ ಹಾಗೆ ಅಲ್ಲ. ಉದಾಹರಣೆಗೆ ಕವಿತಾ ರೆಡ್ಡಿಯವರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಮಾಡುತ್ತಾರೆ. ಆ ಕ್ಷೇತ್ರದಲ್ಲಿ- ಮತ್ತು ಮಹಿಳೆಯರಿಗೆ ಟಿಕೆಟ್‌ ನಿರಾಕರಿಸಿ ʼಹೊರಗಿನಿಂದ ಬಂದʼ ಪುರುಷರಿಗೆ ಟಿಕೆಟ್‌ ನೀಡಲಾದ ವಿವಿಧ ಕ್ಷೇತ್ರಗಳಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತೆ ಅಲ್ಲೇ ನಿಂತು ಪಕ್ಷ ಕಟ್ಟುತ್ತಾರೆ ಎನ್ನುವುದರ ಬಗ್ಗೆ ಯಾರಿಗೂ ಖಾತರಿಯಿಲ್ಲ. ಬಹುಶಃ ಅವರು ಇನ್ನೆಲ್ಲೋ ಅಧಿಕಾರದ ಸ್ಥಾನಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇದೇ ಪಕ್ಷದಲ್ಲಿ ಅಥವಾ ಇನ್ನೊಂದು ಪಕ್ಷದಲ್ಲಿ. ಹೀಗಿದ್ದೂ, ಪಕ್ಷಕ್ಕಾಗಿ ನಿರಂತರ ಕೆಲಸ ಮಾಡಿದ ಮಹಿಳೆಯರಿಗೆ ಯಾವ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಗುತ್ತದೆ? ಸಾಮಾನ್ಯವಾಗಿ ಕೊಡುವ ಕಾರಣ, ಈಗಾಗಲೇ ಹೇಳಿದಂತೆ, ಅವರು ಗೆಲ್ಲುವುದಿಲ್ಲ ಎಂಬುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಒಂದು, ಹಾಗಾದರೆ ಆ ಜಾಗಗಳಲ್ಲಿ ನೀವು ಟಿಕೆಟ್‌ ನೀಡಿದ ಪುರುಷರೂ ಗೆದ್ದಿಲ್ಲವಲ್ಲಾ? ಕೆಲವರಂತೂ ಭೀಕರವಾಗಿ ಸೋತಿದ್ದಾರೆ! ಎರಡನೆಯದು, ಮಹಿಳೆಯರು, ಮುಸ್ಲಿಮರು, ಶೋಷಿತ ಸಮುದಾಯಗಳವರು ಸ್ಪರ್ಧಿಸಿದರೆ ಅವರಿಗೆ ಉಳಿದವರು ಮತ ಹಾಕುವುದಿಲ್ಲ ಎನ್ನುವುದಾದರೆ, ಆ ಪಕ್ಷದ್ದೇ ಆದ ಒಂದು ವೋಟ್‌ ಬ್ಯಾಂಕ್‌ ಇಲ್ಲ ಎಂದಾಯಿತು! ಹಾಗಾದರೆ ಇಂತಹ ಪಕ್ಷಗಳು ಇಷ್ಟು ಸುದೀರ್ಘ ಕಾಲ ರಾಜಕಾರಣ ಮಾಡಿಕೊಂಡು ಬಂದು ಏನನ್ನು ಸಾಧಿಸಿದರು? ಇದು ಗಂಭೀರವಾಗಿ ಯೋಚಿಸಬೇಕಾದ ಸಂಗತಿ. ಇದೇ ಕಾರಣಕ್ಕೆ ಬಾಬಾ ಸಾಹೇಬರು ದಲಿತ ಸಮುದಾಯಕ್ಕೆ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳಿದ್ದರು. ಅದು ಸಾಧ್ಯವಾಗಿದ್ದರೆ ನಂತರ ಉಳಿದೆಲ್ಲಾ ಸಮುದಾಯಗಳೂ, ಮಹಿಳೆಯರೂ ಸಹಾ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳುತ್ತಿದ್ದರು ಎನಿಸುತ್ತದೆ. ಅದು ಮಾತ್ರವೇ ನ್ಯಾಯ ಒದಗಿಸಿಕೊಡುತ್ತಿತ್ತು!!

ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿದ್ದರಿಂದಲೂ ಕಾಂಗ್ರೆಸ್‌ ಗೆದ್ದು ಬಂದಿದೆ. ಇದ್ದುದರಲ್ಲಿ ವೈಜ್ಞಾನಿಕವಾಗಿ ನಡೆದ ಚುನಾವಣೋತ್ತರ ಸಮೀಕ್ಷೆಯಲ್ಲೂ ಇದು ಸ್ಪಷ್ಟವಾಗಿದೆ. ಮಹಿಳೆಯರು ಶೇ.11ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಪುರುಷರು ಕೇವಲ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ (ಬಿಜೆಪಿಗೆ ಹಾಕಿದ್ದಕ್ಕಿಂತ) ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಇದರ ಋಣವನ್ನು ತೀರಿಸಲು ಗ್ಯಾರಂಟಿಗಳನ್ನು, ಭಾಗ್ಯಗಳನ್ನು ನೀಡುತ್ತೇವೆಂದು ಕಾಂಗ್ರೆಸ್‌ ಪಕ್ಷ ಹೇಳಬಹುದು; ಹೌದು ಅದನ್ನು ನೀಡಲೇಬೇಕು. ಹಾಗೆಯೇ ಅಧಿಕಾರದಲ್ಲೂ ಪಾಲು ಕೊಡಬೇಕು. ಈಗೇನು ಮಾಡಬಹುದು?

ಈ ವಿಧಾನ ಪರಿಷತ್ತಿನ ಚುನಾವಣೆಯ ಸಂದರ್ಭ ಅವರಿಗೆ ನೆರವಾಗಬಹುದು. ಆರರಲ್ಲಿ ಮೂರು ಸ್ಥಾನಗಳನ್ನಾದರೂ ಮಹಿಳೆಯರಿಗೆ ನೀಡಿದರೆ, ಕಾಂಗ್ರೆಸ್ಸು ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೃಢ ಹೆಜ್ಜೆಗಳನ್ನಿಡುತ್ತಿದೆ ಎಂದುಕೊಳ್ಳಬಹುದು.

ಇಂತಹ ಎಲ್ಲಾ ಪ್ರಶ್ನೆಗಳನ್ನು ನಮಗೇ ಏಕೆ ಕೇಳುತ್ತಾರೆ ಎಂದು ಕಾಂಗ್ರೆಸ್ಸಿನವರು ಕೇಳಬಹುದು. ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಿಗಬೇಕಾದ ಹಕ್ಕುಗಳಿಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲವಾದ್ದರಿಂದ ಕಾಂಗ್ರೆಸ್ಸನ್ನು ಕೇಳಲಾಗುತ್ತದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವುದು ಕಾಂಗ್ರೆಸ್ʼನಲ್ಲಿ ಸಾಧ್ಯವಿಲ್ಲವಾದರೆ, ಆಗ ಆಯ್ಕೆ ಬಿಜೆಪಿ ಅಥವಾ ಜೆಡಿಎಸ್‌ ಅಲ್ಲ. ಅದಕ್ಕೆ ಈ ಮೂರು ಪಕ್ಷಗಳನ್ನು ಹೊರತುಪಡಿಸಿದ ಬೇರೆ ಆಯ್ಕೆ ಮಾಡಿಕೊಳ್ಳುವುದೇ ಅನಿವಾರ್ಯ.

– ಡಾ. ಎಚ್. ವಿ. ವಾಸು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...