Homeಕರ್ನಾಟಕಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

ಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

- Advertisement -
- Advertisement -

ಮೊದಲು ಈ ಕೆಳಗಿನ ಕೋಷ್ಟಕ ನೋಡಿ.

ಕ್ಷೇತ್ರ

ಟಿಕೆಟ್‌ ಕೇಳಿದ್ದ ಕಾಂಗ್ರೆಸ್ಸಿನ ಮಹಿಳಾ ನಾಯಕಿ

ಟಿಕೆಟ್‌ ಕೊಡಲಾಯಿತೇ?

ಅಂತಿಮ ಫಲಿತಾಂಶ

ಮತಗಳ ಅಂತರ

ಬೊಮ್ಮನಹಳ್ಳಿ

ಕವಿತಾ ರೆಡ್ಡಿ

ಇಲ್ಲ

ಕಾಂಗ್ರೆಸ್‌ ಸೋತಿತು

24215

ದಾಸರಹಳ್ಳಿ

ಡಾ.ನಾಗಲಕ್ಷ್ಮಿ

ಇಲ್ಲ

ಕಾಂಗ್ರೆಸ್‌ ಸೋತಿತು

47770

ಜೆಡಿಎಸ್ ಎರಡನೇ ಸ್ಥಾನ

ಬೆಂಗಳೂರು ದಕ್ಷಿಣ

ಸುಷ್ಮಾ ರಾಮಗೋಪಾಲ್

ಇಲ್ಲ

ಕಾಂಗ್ರೆಸ್‌ ಸೋತಿತು

49699

ರಾಜಾಜಿನಗರ

ಭವ್ಯ ನರಸಿಂಹಮೂರ್ತಿ/ ಪದ್ಮಾವತಿ

ಇಲ್ಲ

ಕಾಂಗ್ರೆಸ್‌ ಸೋತಿತು

8060

(ಕಡಿಮೆ ಅಂತರವೇ, ಆದರೆ ಇಲ್ಲಿ ಮತದಾನವೇ ಬಹಳ ಕಡಿಮೆ)

ಮಹದೇವಪುರ

ಕಮಲಾಕ್ಷಿ ರಾಜಣ್ಣ

ಇಲ್ಲ

ಕಾಂಗ್ರೆಸ್‌ ಸೋತಿತು

44501

ಬಸವಕಲ್ಯಾಣ

ಮಾಲಾ

ಇಲ್ಲ

ಕಾಂಗ್ರೆಸ್‌ ಸೋತಿತು

14415

ಹರಪನಹಳ್ಳಿ

ವೀಣಾ ಎಂ/ಲತಾ ಎಂ

ಇಲ್ಲ

ಕಾಂಗ್ರೆಸ್‌ ಸೋತಿತು

ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ. ಟಿಕೆಟ್‌ ಕೇಳಿದ್ದ ಲತಾ ಸ್ವತಂತ್ರ ಅಭ್ಯರ್ಥಿಯಾಗಿ 13845 ಮತಗಳಿಂದ ಗೆದ್ದರು

ತೇರದಾಳ

ಉಮಾಶ್ರೀ

ಇಲ್ಲ

ಕಾಂಗ್ರೆಸ್‌ ಸೋತಿತು

10745

ಚಿಕ್ಕಪೇಟೆ

ಗಂಗಾಂಬಿಕೆ

ಇಲ್ಲ

ಕಾಂಗ್ರೆಸ್‌ ಸೋತಿತು

ಈ ಕೆಳಗಿನ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ/ಪ.ಜಾತಿಗೆ ಸೇರಿದ ಹೆಸರು ಮಾಡಿದ್ದ ಪುರುಷರಿಗೆ ಕೊಡಲಾಯಿತು. ಅದೂ ಸರಿಯೇ ಆಗಿತ್ತು. ಇಲ್ಲೂ ಮಹಿಳಾ ಆಕಾಂಕ್ಷಿಗಳಿದ್ದರು ಎಂಬುದನ್ನು ದಾಖಲಿಸುವ ಸಲುವಾಗಿ ಸೇರಿಸಲಾಗಿದೆ.

ಮಂಗಳೂರು ದಕ್ಷಿಣ

ಶಾಲೆಟ್‌ ಪಿಂಟೋ

ಇಲ್ಲ

ಕಾಂಗ್ರೆಸ್‌ ಸೋತಿತು

23962

ಶಿಗ್ಗಾಂವ್‌

ರಾಜೇಶ್ವರಿ ಪಟೇಲ್

ಇಲ್ಲ

ಕಾಂಗ್ರೆಸ್‌ ಸೋತಿತು

35978

ಹೊಳಲ್ಕೆರೆ

ಸವಿತಾ ರಘು

ಇಲ್ಲ

ಕಾಂಗ್ರೆಸ್‌ ಸೋತಿತು

5682

ರಾಜ್ಯದ ಇನ್ನೂ ಎಷ್ಟೋ ಕ್ಷೇತ್ರಗಳಲ್ಲಿ ಮಹಿಳೆಯರು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಕೇಳಿದ್ದಿರಬಹುದು. ಈ ಬರಹ ಬರೆಯುವ ಹೊತ್ತಿಗೆ, ನನ್ನಲ್ಲಿ ಅದರ ವಿವರಗಳು ಲಭ್ಯವಿಲ್ಲ ಅಷ್ಟೇ.

ಈಗ ವಿಚಾರಕ್ಕೆ ಬರೋಣ. ಚುನಾವಣೆಗಳು ಬಲಾಢ್ಯ ಜಾತಿಗಳ, ಹಣವಂತರ, ಗಂಡಸರ, ಬಹುಸಂಖ್ಯಾತ ಧರ್ಮದವರ ಅಖಾಡವಾಗುತ್ತಿದೆ. ಆದರೆ, ಚುನಾವಣೆಗಳಲ್ಲಿ ಮತ ಹಾಕುವವರಲ್ಲಿ ಹೆಚ್ಚಿನವರು ದುರ್ಬಲ ಜಾತಿಗಳವರು, ಬಡವರು. ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಚುನಾವಣೆಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂಬುದಕ್ಕೆ ಇತ್ತೀಚಿನ 2023ರ ವಿಧಾನಸಭಾ ಚುನಾವಣೆಯ ಅಂಕಿ-ಅಂಶ ಸಾಕಷ್ಟು ಸಾಕ್ಷಿ ಒದಗಿಸುತ್ತದೆ. ಆದರೆ, ಟಿಕೆಟ್‌ ಪಡೆದುಕೊಳ್ಳುವ ವಿಚಾರದಲ್ಲಿ ಮಾತ್ರ ಅವರಿಗೆ ಅವಕಾಶವಿರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇರುವುದರಿಂದ ಬಚಾವ್‌ ಆಗಿದ್ದಾರೆಯೇ ಹೊರತು, ಇಲ್ಲವಾಗಿದ್ದರೆ ಅವರ ಪರಿಸ್ಥಿತಿಯೂ ಹೀಗೇ ಇರುತ್ತಿತ್ತು. ಕರ್ನಾಟಕದಲ್ಲಿ 3-4% ಇರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶಾಸಕರು 10 ಜನರಿದ್ದರೆ, 13%ಗೂ ಹೆಚ್ಚಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದವರು 9 ಶಾಸಕರಿದ್ದಾರೆ. ಈ ವಿಚಾರ ಇನ್ನೊಮ್ಮೆ ಚರ್ಚಿಸೋಣ.

ಏಕೆಂದರೆ, ಅಧಿಕಾರದ ಸ್ಥಾನ ಪಡೆಯುವಲ್ಲಿ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ವಿಚಾರ ಚಿಂತಾಜನಕವಾಗಿದೆ. ಇದಕ್ಕೆ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಕೊಡುವ ಕಾರಣ, ʼಅವರು ಗೆಲ್ಲುವುದಿಲ್ಲʼ ಎಂಬುದಾಗಿದೆ. ಇದೇ ಮಾನದಂಡವನ್ನು ಮುಸ್ಲಿಮರಿಗೂ, ಹಿಂದುಳಿದ ಸಮುದಾಯಗಳಿಗೂ ಅನ್ವಯಿಸಲಾಗುತ್ತದೆ. ಮೀಸಲೇತರ ಕ್ಷೇತ್ರಗಳಲ್ಲಿ ಪ.ಜಾತಿ/ಪ.ಪಂಗಡಗಳಿಗೂ ಅನ್ವಯಿಸಲಾಗುತ್ತದೆ. ಆದರೆ, ಬಲಾಢ್ಯ ಜಾತಿಗಳಿಗೆ ಸೇರಿದವರು ಅಥವಾ ಗಂಡಸರೂ ಸಹಾ ಗೆಲ್ಲದೇ ಇರುವ ಕ್ಷೇತ್ರಗಳಲ್ಲಿ ಎಷ್ಟೇ ಚುನಾವಣೆಗಳು ನಡೆದರೂ ಅವರವರಿಗೇ ಟಿಕೆಟ್‌ ನೀಡಲಾಗುತ್ತದೆ. ಉದಾಹರಣೆಗೆ ಬೆಂಗಳೂರು ನಗರದ ಬಸವನಗುಡಿ ಕ್ಷೇತ್ರವನ್ನೇ ತೆಗೆದುಕೊಳ್ಳಿ. 2004ರಲ್ಲಿ ಅಲ್ಲಿ ಕೆ.ಚಂದ್ರಶೇಖರ್‌ ಅವರು ಒಮ್ಮೆ ಕಾಂಗ್ರೆಸ್ಸಿನಿಂದ ಗೆದ್ದುದನ್ನು ಬಿಟ್ಟರೆ, 1972ರ ನಂತರ ಅಲ್ಲಿ ಕಾಂಗ್ರೆಸ್‌ ಗೆದ್ದೇ ಇಲ್ಲ. 1972ರಲ್ಲಿ ಗೆದ್ದಿದ್ದು ಅಮೀರ್‌ ರಹಮತುಲ್ಲಾ ಖಾನ್‌ ಎಂಬ ಮುಸ್ಲಿಂ ಅಭ್ಯರ್ಥಿ. ಅದು ದೇವರಾಜ ಅರಸರ ವಿಶಿಷ್ಟ ಸಾಮಾಜಿಕ ಸಮೀಕರಣದ ಚುನಾವಣೆ ಎಂಬುದನ್ನೂ ನೆನಪಿನಲ್ಲಿಡಬೇಕು.

ಈ ಕ್ಷೇತ್ರವನ್ನು ಬ್ರಾಹ್ಮಣರ ಕ್ಷೇತ್ರ ಎಂದು ತಾವೇ ತೀರ್ಮಾನಿಸಿಕೊಂಡು (ಅದಕ್ಕೆ ಯಾವ ಸಮೀಕ್ಷೆಯ ಆಧಾರ ಇಲ್ಲದಿದ್ದರೂ), ಬಿಜೆಪಿಯಿಂದ ಸತತವಾಗಿ ಬ್ರಾಹ್ಮಣರು ಗೆಲ್ಲುತ್ತಿರುವುದರಿಂದ ತಾವೂ ಬ್ರಾಹ್ಮಣರಿಗೇ ಟಿಕೆಟ್‌ ಕೊಡಬೇಕೆಂದು ಕಾಂಗ್ರೆಸ್‌ ಪಕ್ಷ ತೀರ್ಮಾನಿಸುತ್ತದೆ. ಮುಸ್ಲಿಮರಷ್ಟೇ ಧ್ರುವೀಕರಣಗೊಂಡ ಇನ್ನೊಂದು ಸಮುದಾಯವಿದ್ದರೆ ಅದು ಬ್ರಾಹ್ಮಣರದ್ದು; ಮತ್ತು ಅದು ಬಿಜೆಪಿಯೆಡೆಗೆ ಧ್ರುವೀಕರಣಗೊಂಡಿದೆ. ಆದರೂ ಈ ಸಾರಿ ಅದೇ ಮಾನದಂಡದ ಮೇಲೆ ಟಿಕೆಟ್‌ ನೀಡಲಾಯಿತು.

ಇಂತಹ ಮಾನದಂಡಗಳಿಂದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾಗುವ ಸಮುದಾಯ ಮಹಿಳೆಯರದ್ದು. ಮೇಲಿನ ಕೋಷ್ಟಕದಲ್ಲಿ ಕಾಣಿಸಿರುವ ಹೆಸರುಗಳಲ್ಲಿ ಕೆಲವರು ಕುಟುಂಬದ ಹಿನ್ನೆಲೆಯ ಕಾರಣಕ್ಕೆ ರಾಜಕಾರಣದಲ್ಲಿರಬಹುದು. ಆದರೆ, ಎಲ್ಲರೂ ಹಾಗೆ ಅಲ್ಲ. ಉದಾಹರಣೆಗೆ ಕವಿತಾ ರೆಡ್ಡಿಯವರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಮಾಡುತ್ತಾರೆ. ಆ ಕ್ಷೇತ್ರದಲ್ಲಿ- ಮತ್ತು ಮಹಿಳೆಯರಿಗೆ ಟಿಕೆಟ್‌ ನಿರಾಕರಿಸಿ ʼಹೊರಗಿನಿಂದ ಬಂದʼ ಪುರುಷರಿಗೆ ಟಿಕೆಟ್‌ ನೀಡಲಾದ ವಿವಿಧ ಕ್ಷೇತ್ರಗಳಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತೆ ಅಲ್ಲೇ ನಿಂತು ಪಕ್ಷ ಕಟ್ಟುತ್ತಾರೆ ಎನ್ನುವುದರ ಬಗ್ಗೆ ಯಾರಿಗೂ ಖಾತರಿಯಿಲ್ಲ. ಬಹುಶಃ ಅವರು ಇನ್ನೆಲ್ಲೋ ಅಧಿಕಾರದ ಸ್ಥಾನಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇದೇ ಪಕ್ಷದಲ್ಲಿ ಅಥವಾ ಇನ್ನೊಂದು ಪಕ್ಷದಲ್ಲಿ. ಹೀಗಿದ್ದೂ, ಪಕ್ಷಕ್ಕಾಗಿ ನಿರಂತರ ಕೆಲಸ ಮಾಡಿದ ಮಹಿಳೆಯರಿಗೆ ಯಾವ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಗುತ್ತದೆ? ಸಾಮಾನ್ಯವಾಗಿ ಕೊಡುವ ಕಾರಣ, ಈಗಾಗಲೇ ಹೇಳಿದಂತೆ, ಅವರು ಗೆಲ್ಲುವುದಿಲ್ಲ ಎಂಬುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಒಂದು, ಹಾಗಾದರೆ ಆ ಜಾಗಗಳಲ್ಲಿ ನೀವು ಟಿಕೆಟ್‌ ನೀಡಿದ ಪುರುಷರೂ ಗೆದ್ದಿಲ್ಲವಲ್ಲಾ? ಕೆಲವರಂತೂ ಭೀಕರವಾಗಿ ಸೋತಿದ್ದಾರೆ! ಎರಡನೆಯದು, ಮಹಿಳೆಯರು, ಮುಸ್ಲಿಮರು, ಶೋಷಿತ ಸಮುದಾಯಗಳವರು ಸ್ಪರ್ಧಿಸಿದರೆ ಅವರಿಗೆ ಉಳಿದವರು ಮತ ಹಾಕುವುದಿಲ್ಲ ಎನ್ನುವುದಾದರೆ, ಆ ಪಕ್ಷದ್ದೇ ಆದ ಒಂದು ವೋಟ್‌ ಬ್ಯಾಂಕ್‌ ಇಲ್ಲ ಎಂದಾಯಿತು! ಹಾಗಾದರೆ ಇಂತಹ ಪಕ್ಷಗಳು ಇಷ್ಟು ಸುದೀರ್ಘ ಕಾಲ ರಾಜಕಾರಣ ಮಾಡಿಕೊಂಡು ಬಂದು ಏನನ್ನು ಸಾಧಿಸಿದರು? ಇದು ಗಂಭೀರವಾಗಿ ಯೋಚಿಸಬೇಕಾದ ಸಂಗತಿ. ಇದೇ ಕಾರಣಕ್ಕೆ ಬಾಬಾ ಸಾಹೇಬರು ದಲಿತ ಸಮುದಾಯಕ್ಕೆ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳಿದ್ದರು. ಅದು ಸಾಧ್ಯವಾಗಿದ್ದರೆ ನಂತರ ಉಳಿದೆಲ್ಲಾ ಸಮುದಾಯಗಳೂ, ಮಹಿಳೆಯರೂ ಸಹಾ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳುತ್ತಿದ್ದರು ಎನಿಸುತ್ತದೆ. ಅದು ಮಾತ್ರವೇ ನ್ಯಾಯ ಒದಗಿಸಿಕೊಡುತ್ತಿತ್ತು!!

ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿದ್ದರಿಂದಲೂ ಕಾಂಗ್ರೆಸ್‌ ಗೆದ್ದು ಬಂದಿದೆ. ಇದ್ದುದರಲ್ಲಿ ವೈಜ್ಞಾನಿಕವಾಗಿ ನಡೆದ ಚುನಾವಣೋತ್ತರ ಸಮೀಕ್ಷೆಯಲ್ಲೂ ಇದು ಸ್ಪಷ್ಟವಾಗಿದೆ. ಮಹಿಳೆಯರು ಶೇ.11ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಪುರುಷರು ಕೇವಲ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ (ಬಿಜೆಪಿಗೆ ಹಾಕಿದ್ದಕ್ಕಿಂತ) ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಇದರ ಋಣವನ್ನು ತೀರಿಸಲು ಗ್ಯಾರಂಟಿಗಳನ್ನು, ಭಾಗ್ಯಗಳನ್ನು ನೀಡುತ್ತೇವೆಂದು ಕಾಂಗ್ರೆಸ್‌ ಪಕ್ಷ ಹೇಳಬಹುದು; ಹೌದು ಅದನ್ನು ನೀಡಲೇಬೇಕು. ಹಾಗೆಯೇ ಅಧಿಕಾರದಲ್ಲೂ ಪಾಲು ಕೊಡಬೇಕು. ಈಗೇನು ಮಾಡಬಹುದು?

ಈ ವಿಧಾನ ಪರಿಷತ್ತಿನ ಚುನಾವಣೆಯ ಸಂದರ್ಭ ಅವರಿಗೆ ನೆರವಾಗಬಹುದು. ಆರರಲ್ಲಿ ಮೂರು ಸ್ಥಾನಗಳನ್ನಾದರೂ ಮಹಿಳೆಯರಿಗೆ ನೀಡಿದರೆ, ಕಾಂಗ್ರೆಸ್ಸು ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೃಢ ಹೆಜ್ಜೆಗಳನ್ನಿಡುತ್ತಿದೆ ಎಂದುಕೊಳ್ಳಬಹುದು.

ಇಂತಹ ಎಲ್ಲಾ ಪ್ರಶ್ನೆಗಳನ್ನು ನಮಗೇ ಏಕೆ ಕೇಳುತ್ತಾರೆ ಎಂದು ಕಾಂಗ್ರೆಸ್ಸಿನವರು ಕೇಳಬಹುದು. ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಿಗಬೇಕಾದ ಹಕ್ಕುಗಳಿಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲವಾದ್ದರಿಂದ ಕಾಂಗ್ರೆಸ್ಸನ್ನು ಕೇಳಲಾಗುತ್ತದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವುದು ಕಾಂಗ್ರೆಸ್ʼನಲ್ಲಿ ಸಾಧ್ಯವಿಲ್ಲವಾದರೆ, ಆಗ ಆಯ್ಕೆ ಬಿಜೆಪಿ ಅಥವಾ ಜೆಡಿಎಸ್‌ ಅಲ್ಲ. ಅದಕ್ಕೆ ಈ ಮೂರು ಪಕ್ಷಗಳನ್ನು ಹೊರತುಪಡಿಸಿದ ಬೇರೆ ಆಯ್ಕೆ ಮಾಡಿಕೊಳ್ಳುವುದೇ ಅನಿವಾರ್ಯ.

– ಡಾ. ಎಚ್. ವಿ. ವಾಸು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...