Homeಕರ್ನಾಟಕಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

ಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

- Advertisement -
- Advertisement -

ಮೊದಲು ಈ ಕೆಳಗಿನ ಕೋಷ್ಟಕ ನೋಡಿ.

ಕ್ಷೇತ್ರ

ಟಿಕೆಟ್‌ ಕೇಳಿದ್ದ ಕಾಂಗ್ರೆಸ್ಸಿನ ಮಹಿಳಾ ನಾಯಕಿ

ಟಿಕೆಟ್‌ ಕೊಡಲಾಯಿತೇ?

ಅಂತಿಮ ಫಲಿತಾಂಶ

ಮತಗಳ ಅಂತರ

ಬೊಮ್ಮನಹಳ್ಳಿ

ಕವಿತಾ ರೆಡ್ಡಿ

ಇಲ್ಲ

ಕಾಂಗ್ರೆಸ್‌ ಸೋತಿತು

24215

ದಾಸರಹಳ್ಳಿ

ಡಾ.ನಾಗಲಕ್ಷ್ಮಿ

ಇಲ್ಲ

ಕಾಂಗ್ರೆಸ್‌ ಸೋತಿತು

47770

ಜೆಡಿಎಸ್ ಎರಡನೇ ಸ್ಥಾನ

ಬೆಂಗಳೂರು ದಕ್ಷಿಣ

ಸುಷ್ಮಾ ರಾಮಗೋಪಾಲ್

ಇಲ್ಲ

ಕಾಂಗ್ರೆಸ್‌ ಸೋತಿತು

49699

ರಾಜಾಜಿನಗರ

ಭವ್ಯ ನರಸಿಂಹಮೂರ್ತಿ/ ಪದ್ಮಾವತಿ

ಇಲ್ಲ

ಕಾಂಗ್ರೆಸ್‌ ಸೋತಿತು

8060

(ಕಡಿಮೆ ಅಂತರವೇ, ಆದರೆ ಇಲ್ಲಿ ಮತದಾನವೇ ಬಹಳ ಕಡಿಮೆ)

ಮಹದೇವಪುರ

ಕಮಲಾಕ್ಷಿ ರಾಜಣ್ಣ

ಇಲ್ಲ

ಕಾಂಗ್ರೆಸ್‌ ಸೋತಿತು

44501

ಬಸವಕಲ್ಯಾಣ

ಮಾಲಾ

ಇಲ್ಲ

ಕಾಂಗ್ರೆಸ್‌ ಸೋತಿತು

14415

ಹರಪನಹಳ್ಳಿ

ವೀಣಾ ಎಂ/ಲತಾ ಎಂ

ಇಲ್ಲ

ಕಾಂಗ್ರೆಸ್‌ ಸೋತಿತು

ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ. ಟಿಕೆಟ್‌ ಕೇಳಿದ್ದ ಲತಾ ಸ್ವತಂತ್ರ ಅಭ್ಯರ್ಥಿಯಾಗಿ 13845 ಮತಗಳಿಂದ ಗೆದ್ದರು

ತೇರದಾಳ

ಉಮಾಶ್ರೀ

ಇಲ್ಲ

ಕಾಂಗ್ರೆಸ್‌ ಸೋತಿತು

10745

ಚಿಕ್ಕಪೇಟೆ

ಗಂಗಾಂಬಿಕೆ

ಇಲ್ಲ

ಕಾಂಗ್ರೆಸ್‌ ಸೋತಿತು

ಈ ಕೆಳಗಿನ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ/ಪ.ಜಾತಿಗೆ ಸೇರಿದ ಹೆಸರು ಮಾಡಿದ್ದ ಪುರುಷರಿಗೆ ಕೊಡಲಾಯಿತು. ಅದೂ ಸರಿಯೇ ಆಗಿತ್ತು. ಇಲ್ಲೂ ಮಹಿಳಾ ಆಕಾಂಕ್ಷಿಗಳಿದ್ದರು ಎಂಬುದನ್ನು ದಾಖಲಿಸುವ ಸಲುವಾಗಿ ಸೇರಿಸಲಾಗಿದೆ.

ಮಂಗಳೂರು ದಕ್ಷಿಣ

ಶಾಲೆಟ್‌ ಪಿಂಟೋ

ಇಲ್ಲ

ಕಾಂಗ್ರೆಸ್‌ ಸೋತಿತು

23962

ಶಿಗ್ಗಾಂವ್‌

ರಾಜೇಶ್ವರಿ ಪಟೇಲ್

ಇಲ್ಲ

ಕಾಂಗ್ರೆಸ್‌ ಸೋತಿತು

35978

ಹೊಳಲ್ಕೆರೆ

ಸವಿತಾ ರಘು

ಇಲ್ಲ

ಕಾಂಗ್ರೆಸ್‌ ಸೋತಿತು

5682

ರಾಜ್ಯದ ಇನ್ನೂ ಎಷ್ಟೋ ಕ್ಷೇತ್ರಗಳಲ್ಲಿ ಮಹಿಳೆಯರು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಕೇಳಿದ್ದಿರಬಹುದು. ಈ ಬರಹ ಬರೆಯುವ ಹೊತ್ತಿಗೆ, ನನ್ನಲ್ಲಿ ಅದರ ವಿವರಗಳು ಲಭ್ಯವಿಲ್ಲ ಅಷ್ಟೇ.

ಈಗ ವಿಚಾರಕ್ಕೆ ಬರೋಣ. ಚುನಾವಣೆಗಳು ಬಲಾಢ್ಯ ಜಾತಿಗಳ, ಹಣವಂತರ, ಗಂಡಸರ, ಬಹುಸಂಖ್ಯಾತ ಧರ್ಮದವರ ಅಖಾಡವಾಗುತ್ತಿದೆ. ಆದರೆ, ಚುನಾವಣೆಗಳಲ್ಲಿ ಮತ ಹಾಕುವವರಲ್ಲಿ ಹೆಚ್ಚಿನವರು ದುರ್ಬಲ ಜಾತಿಗಳವರು, ಬಡವರು. ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಚುನಾವಣೆಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂಬುದಕ್ಕೆ ಇತ್ತೀಚಿನ 2023ರ ವಿಧಾನಸಭಾ ಚುನಾವಣೆಯ ಅಂಕಿ-ಅಂಶ ಸಾಕಷ್ಟು ಸಾಕ್ಷಿ ಒದಗಿಸುತ್ತದೆ. ಆದರೆ, ಟಿಕೆಟ್‌ ಪಡೆದುಕೊಳ್ಳುವ ವಿಚಾರದಲ್ಲಿ ಮಾತ್ರ ಅವರಿಗೆ ಅವಕಾಶವಿರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇರುವುದರಿಂದ ಬಚಾವ್‌ ಆಗಿದ್ದಾರೆಯೇ ಹೊರತು, ಇಲ್ಲವಾಗಿದ್ದರೆ ಅವರ ಪರಿಸ್ಥಿತಿಯೂ ಹೀಗೇ ಇರುತ್ತಿತ್ತು. ಕರ್ನಾಟಕದಲ್ಲಿ 3-4% ಇರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶಾಸಕರು 10 ಜನರಿದ್ದರೆ, 13%ಗೂ ಹೆಚ್ಚಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದವರು 9 ಶಾಸಕರಿದ್ದಾರೆ. ಈ ವಿಚಾರ ಇನ್ನೊಮ್ಮೆ ಚರ್ಚಿಸೋಣ.

ಏಕೆಂದರೆ, ಅಧಿಕಾರದ ಸ್ಥಾನ ಪಡೆಯುವಲ್ಲಿ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ವಿಚಾರ ಚಿಂತಾಜನಕವಾಗಿದೆ. ಇದಕ್ಕೆ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಕೊಡುವ ಕಾರಣ, ʼಅವರು ಗೆಲ್ಲುವುದಿಲ್ಲʼ ಎಂಬುದಾಗಿದೆ. ಇದೇ ಮಾನದಂಡವನ್ನು ಮುಸ್ಲಿಮರಿಗೂ, ಹಿಂದುಳಿದ ಸಮುದಾಯಗಳಿಗೂ ಅನ್ವಯಿಸಲಾಗುತ್ತದೆ. ಮೀಸಲೇತರ ಕ್ಷೇತ್ರಗಳಲ್ಲಿ ಪ.ಜಾತಿ/ಪ.ಪಂಗಡಗಳಿಗೂ ಅನ್ವಯಿಸಲಾಗುತ್ತದೆ. ಆದರೆ, ಬಲಾಢ್ಯ ಜಾತಿಗಳಿಗೆ ಸೇರಿದವರು ಅಥವಾ ಗಂಡಸರೂ ಸಹಾ ಗೆಲ್ಲದೇ ಇರುವ ಕ್ಷೇತ್ರಗಳಲ್ಲಿ ಎಷ್ಟೇ ಚುನಾವಣೆಗಳು ನಡೆದರೂ ಅವರವರಿಗೇ ಟಿಕೆಟ್‌ ನೀಡಲಾಗುತ್ತದೆ. ಉದಾಹರಣೆಗೆ ಬೆಂಗಳೂರು ನಗರದ ಬಸವನಗುಡಿ ಕ್ಷೇತ್ರವನ್ನೇ ತೆಗೆದುಕೊಳ್ಳಿ. 2004ರಲ್ಲಿ ಅಲ್ಲಿ ಕೆ.ಚಂದ್ರಶೇಖರ್‌ ಅವರು ಒಮ್ಮೆ ಕಾಂಗ್ರೆಸ್ಸಿನಿಂದ ಗೆದ್ದುದನ್ನು ಬಿಟ್ಟರೆ, 1972ರ ನಂತರ ಅಲ್ಲಿ ಕಾಂಗ್ರೆಸ್‌ ಗೆದ್ದೇ ಇಲ್ಲ. 1972ರಲ್ಲಿ ಗೆದ್ದಿದ್ದು ಅಮೀರ್‌ ರಹಮತುಲ್ಲಾ ಖಾನ್‌ ಎಂಬ ಮುಸ್ಲಿಂ ಅಭ್ಯರ್ಥಿ. ಅದು ದೇವರಾಜ ಅರಸರ ವಿಶಿಷ್ಟ ಸಾಮಾಜಿಕ ಸಮೀಕರಣದ ಚುನಾವಣೆ ಎಂಬುದನ್ನೂ ನೆನಪಿನಲ್ಲಿಡಬೇಕು.

ಈ ಕ್ಷೇತ್ರವನ್ನು ಬ್ರಾಹ್ಮಣರ ಕ್ಷೇತ್ರ ಎಂದು ತಾವೇ ತೀರ್ಮಾನಿಸಿಕೊಂಡು (ಅದಕ್ಕೆ ಯಾವ ಸಮೀಕ್ಷೆಯ ಆಧಾರ ಇಲ್ಲದಿದ್ದರೂ), ಬಿಜೆಪಿಯಿಂದ ಸತತವಾಗಿ ಬ್ರಾಹ್ಮಣರು ಗೆಲ್ಲುತ್ತಿರುವುದರಿಂದ ತಾವೂ ಬ್ರಾಹ್ಮಣರಿಗೇ ಟಿಕೆಟ್‌ ಕೊಡಬೇಕೆಂದು ಕಾಂಗ್ರೆಸ್‌ ಪಕ್ಷ ತೀರ್ಮಾನಿಸುತ್ತದೆ. ಮುಸ್ಲಿಮರಷ್ಟೇ ಧ್ರುವೀಕರಣಗೊಂಡ ಇನ್ನೊಂದು ಸಮುದಾಯವಿದ್ದರೆ ಅದು ಬ್ರಾಹ್ಮಣರದ್ದು; ಮತ್ತು ಅದು ಬಿಜೆಪಿಯೆಡೆಗೆ ಧ್ರುವೀಕರಣಗೊಂಡಿದೆ. ಆದರೂ ಈ ಸಾರಿ ಅದೇ ಮಾನದಂಡದ ಮೇಲೆ ಟಿಕೆಟ್‌ ನೀಡಲಾಯಿತು.

ಇಂತಹ ಮಾನದಂಡಗಳಿಂದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾಗುವ ಸಮುದಾಯ ಮಹಿಳೆಯರದ್ದು. ಮೇಲಿನ ಕೋಷ್ಟಕದಲ್ಲಿ ಕಾಣಿಸಿರುವ ಹೆಸರುಗಳಲ್ಲಿ ಕೆಲವರು ಕುಟುಂಬದ ಹಿನ್ನೆಲೆಯ ಕಾರಣಕ್ಕೆ ರಾಜಕಾರಣದಲ್ಲಿರಬಹುದು. ಆದರೆ, ಎಲ್ಲರೂ ಹಾಗೆ ಅಲ್ಲ. ಉದಾಹರಣೆಗೆ ಕವಿತಾ ರೆಡ್ಡಿಯವರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಮಾಡುತ್ತಾರೆ. ಆ ಕ್ಷೇತ್ರದಲ್ಲಿ- ಮತ್ತು ಮಹಿಳೆಯರಿಗೆ ಟಿಕೆಟ್‌ ನಿರಾಕರಿಸಿ ʼಹೊರಗಿನಿಂದ ಬಂದʼ ಪುರುಷರಿಗೆ ಟಿಕೆಟ್‌ ನೀಡಲಾದ ವಿವಿಧ ಕ್ಷೇತ್ರಗಳಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತೆ ಅಲ್ಲೇ ನಿಂತು ಪಕ್ಷ ಕಟ್ಟುತ್ತಾರೆ ಎನ್ನುವುದರ ಬಗ್ಗೆ ಯಾರಿಗೂ ಖಾತರಿಯಿಲ್ಲ. ಬಹುಶಃ ಅವರು ಇನ್ನೆಲ್ಲೋ ಅಧಿಕಾರದ ಸ್ಥಾನಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇದೇ ಪಕ್ಷದಲ್ಲಿ ಅಥವಾ ಇನ್ನೊಂದು ಪಕ್ಷದಲ್ಲಿ. ಹೀಗಿದ್ದೂ, ಪಕ್ಷಕ್ಕಾಗಿ ನಿರಂತರ ಕೆಲಸ ಮಾಡಿದ ಮಹಿಳೆಯರಿಗೆ ಯಾವ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಗುತ್ತದೆ? ಸಾಮಾನ್ಯವಾಗಿ ಕೊಡುವ ಕಾರಣ, ಈಗಾಗಲೇ ಹೇಳಿದಂತೆ, ಅವರು ಗೆಲ್ಲುವುದಿಲ್ಲ ಎಂಬುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಒಂದು, ಹಾಗಾದರೆ ಆ ಜಾಗಗಳಲ್ಲಿ ನೀವು ಟಿಕೆಟ್‌ ನೀಡಿದ ಪುರುಷರೂ ಗೆದ್ದಿಲ್ಲವಲ್ಲಾ? ಕೆಲವರಂತೂ ಭೀಕರವಾಗಿ ಸೋತಿದ್ದಾರೆ! ಎರಡನೆಯದು, ಮಹಿಳೆಯರು, ಮುಸ್ಲಿಮರು, ಶೋಷಿತ ಸಮುದಾಯಗಳವರು ಸ್ಪರ್ಧಿಸಿದರೆ ಅವರಿಗೆ ಉಳಿದವರು ಮತ ಹಾಕುವುದಿಲ್ಲ ಎನ್ನುವುದಾದರೆ, ಆ ಪಕ್ಷದ್ದೇ ಆದ ಒಂದು ವೋಟ್‌ ಬ್ಯಾಂಕ್‌ ಇಲ್ಲ ಎಂದಾಯಿತು! ಹಾಗಾದರೆ ಇಂತಹ ಪಕ್ಷಗಳು ಇಷ್ಟು ಸುದೀರ್ಘ ಕಾಲ ರಾಜಕಾರಣ ಮಾಡಿಕೊಂಡು ಬಂದು ಏನನ್ನು ಸಾಧಿಸಿದರು? ಇದು ಗಂಭೀರವಾಗಿ ಯೋಚಿಸಬೇಕಾದ ಸಂಗತಿ. ಇದೇ ಕಾರಣಕ್ಕೆ ಬಾಬಾ ಸಾಹೇಬರು ದಲಿತ ಸಮುದಾಯಕ್ಕೆ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳಿದ್ದರು. ಅದು ಸಾಧ್ಯವಾಗಿದ್ದರೆ ನಂತರ ಉಳಿದೆಲ್ಲಾ ಸಮುದಾಯಗಳೂ, ಮಹಿಳೆಯರೂ ಸಹಾ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳುತ್ತಿದ್ದರು ಎನಿಸುತ್ತದೆ. ಅದು ಮಾತ್ರವೇ ನ್ಯಾಯ ಒದಗಿಸಿಕೊಡುತ್ತಿತ್ತು!!

ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿದ್ದರಿಂದಲೂ ಕಾಂಗ್ರೆಸ್‌ ಗೆದ್ದು ಬಂದಿದೆ. ಇದ್ದುದರಲ್ಲಿ ವೈಜ್ಞಾನಿಕವಾಗಿ ನಡೆದ ಚುನಾವಣೋತ್ತರ ಸಮೀಕ್ಷೆಯಲ್ಲೂ ಇದು ಸ್ಪಷ್ಟವಾಗಿದೆ. ಮಹಿಳೆಯರು ಶೇ.11ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಪುರುಷರು ಕೇವಲ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ (ಬಿಜೆಪಿಗೆ ಹಾಕಿದ್ದಕ್ಕಿಂತ) ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಇದರ ಋಣವನ್ನು ತೀರಿಸಲು ಗ್ಯಾರಂಟಿಗಳನ್ನು, ಭಾಗ್ಯಗಳನ್ನು ನೀಡುತ್ತೇವೆಂದು ಕಾಂಗ್ರೆಸ್‌ ಪಕ್ಷ ಹೇಳಬಹುದು; ಹೌದು ಅದನ್ನು ನೀಡಲೇಬೇಕು. ಹಾಗೆಯೇ ಅಧಿಕಾರದಲ್ಲೂ ಪಾಲು ಕೊಡಬೇಕು. ಈಗೇನು ಮಾಡಬಹುದು?

ಈ ವಿಧಾನ ಪರಿಷತ್ತಿನ ಚುನಾವಣೆಯ ಸಂದರ್ಭ ಅವರಿಗೆ ನೆರವಾಗಬಹುದು. ಆರರಲ್ಲಿ ಮೂರು ಸ್ಥಾನಗಳನ್ನಾದರೂ ಮಹಿಳೆಯರಿಗೆ ನೀಡಿದರೆ, ಕಾಂಗ್ರೆಸ್ಸು ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೃಢ ಹೆಜ್ಜೆಗಳನ್ನಿಡುತ್ತಿದೆ ಎಂದುಕೊಳ್ಳಬಹುದು.

ಇಂತಹ ಎಲ್ಲಾ ಪ್ರಶ್ನೆಗಳನ್ನು ನಮಗೇ ಏಕೆ ಕೇಳುತ್ತಾರೆ ಎಂದು ಕಾಂಗ್ರೆಸ್ಸಿನವರು ಕೇಳಬಹುದು. ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಿಗಬೇಕಾದ ಹಕ್ಕುಗಳಿಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲವಾದ್ದರಿಂದ ಕಾಂಗ್ರೆಸ್ಸನ್ನು ಕೇಳಲಾಗುತ್ತದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವುದು ಕಾಂಗ್ರೆಸ್ʼನಲ್ಲಿ ಸಾಧ್ಯವಿಲ್ಲವಾದರೆ, ಆಗ ಆಯ್ಕೆ ಬಿಜೆಪಿ ಅಥವಾ ಜೆಡಿಎಸ್‌ ಅಲ್ಲ. ಅದಕ್ಕೆ ಈ ಮೂರು ಪಕ್ಷಗಳನ್ನು ಹೊರತುಪಡಿಸಿದ ಬೇರೆ ಆಯ್ಕೆ ಮಾಡಿಕೊಳ್ಳುವುದೇ ಅನಿವಾರ್ಯ.

– ಡಾ. ಎಚ್. ವಿ. ವಾಸು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...