Homeಮುಖಪುಟಮೋದಿಯ ಕೊರೋನ "ಪ್ಯಾಕೇಜ್" : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ - ಪಿ. ಸಾಯಿನಾಥ್

ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್

- Advertisement -
- Advertisement -

ಭಾಗ-1

…..
ಕೋವಿಡ್-19 ಉಂಟುಮಾಡಿರುವ ಮಹಾಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿ ಸರಕಾರ ಘೋಷಿಸಿರುವ “ಪ್ಯಾಕೇಜ್” ಎಂಬುದು ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ ಎನ್ನುತ್ತಾರೆ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಜಗತ್ಪ್ರಸಿದ್ಧ ಗ್ರಾಮೀಣ ಪತ್ರಕರ್ತ ಪಿ. ಸಾಯಿನಾಥ್. ಅವರು, ಈ ಪ್ಯಾಕೇಜ್ ಕಣ್ಕಟ್ಟನ್ನು ಉದಾಹರಣೆ ಸಹಿತ ಬಯಲಿಗೆಳೆದಿದ್ದಾರೆ.
…..

ಅನುವಾದ: ನಿಖಿಲ್ ಕೋಲ್ಪೆ

ಕೊರೋನ ವೈರಸ್ ಕುರಿತ ತನ್ನ ಮೊದಲ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜನರು ತಮ್ಮ ಬಟ್ಟಲು, ಜಾಗಟೆ ಬಾರಿಸಿ, ದುಷ್ಟ ಶಕ್ತಿಗಳನ್ನು ಬೆದರಿ ತತ್ತರಿಸುವಂತೆ ಮಾಡಿದರು. ತನ್ನ ಎರಡನೇ ಭಾಷಣದಲ್ಲಿ ನಾವೆಲ್ಲರೂ ಬೆದರಿ ತತ್ತರಿಸುವಂತೆ ಮಾಡಿದ್ದಾರೆ.

ಮುಂಬರುವ ವಾರಗಳಲ್ಲಿ ಜನರು, ಅದರಲ್ಲೂ ಮುಖ್ಯವಾಗಿ ಬಡವರು, ಆಹಾರ ಮತ್ತು ಇತರ ಅತ್ಯಗತ್ಯ ವಸ್ತುಗಳನ್ನು ಹೇಗೆ ಪಡೆಯಬೇಕು ಎಂಬ ಕುರಿತು ಒಂದೇ ಒಂದು ಶಬ್ದವನ್ನು ಆಡದೇ ಇರುವ ಮೂಲಕ, ಆಗಲೇ ಸ್ಫೋಟಿಸಲು ಕಾಯುತ್ತಿದ್ದ ದಿಗಿಲಿಗೆ ಕಿಡಿಹಚ್ಚಿದರು. ಮಧ್ಯಮ ವರ್ಗದವರು ಖರೀದಿಗಾಗಿ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಗುಂಪುಗುಂಪಾಗಿ ನುಗ್ಗಿದರು- ಇದು ಬಡವರಿಗೆ ಸುಲಭವಲ್ಲ. ದೊಡ್ಡ ವ್ಯಾಪಾರಿಗಳಿಂದ ಖರೀದಿಸಿ ಮಾರುವ ಸಣ್ಣಪುಟ್ಟ ವ್ಯಾಪಾರಿಗಳು, ಮನೆಗೆಲಸದವರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಇದು ಸುಲಭವಲ್ಲ. ರಾಬಿ ಫಸಲಿನ ಕೊಯ್ಲಿಗೆ ಕಾಯುತ್ತಿರುವ ಅಥವಾ ಕೊಯ್ಲು ಮುಗಿಸಿದರೂ ಫಸಲನ್ನು ಮಾರಲಾಗದ ರೈತರಿಗೂ ಇದು ಸುಲಭವಲ್ಲ. ಕಡೆಗಣಿಸಲ್ಪಟ್ಟ ಕೋಟ್ಯಂತರ ಭಾರತೀಯರಿಗಂತೂ ಇದು ಸಾಧ್ಯವೇ ಇಲ್ಲ.

ಹಣಕಾಸು ಮಂತ್ರಿ ಘೋಷಿಸಿದ ಪ್ಯಾಕೇಜ್‌ನಲ್ಲಿ ಒಂದೇ ಒಂದು ಒಳ್ಳೆಯ ಅಂಶವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕೊಡಲಾಗುತ್ತಿರುವ ಪ್ರತೀ ವ್ಯಕ್ತಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿಗೆ ಹೆಚ್ಚುವರಿಯಾಗಿ, ಮೂರು ತಿಂಗಳುಗಳ ಕಾಲ ಐದು ಕೆಜಿ ಉಚಿತ. ಅಲ್ಲಿಯೂ, ಹಿಂದೆ ಇದ್ದ ಐದು ಕೆಜಿ ಕೂಡಾ ಉಚಿತವೇ ಅಥವಾ ಅದಕ್ಕೆ ಪಾವತಿ ಮಾಡಬೇಕೇ ಎಂಬುದು ಸ್ಪಷ್ಟವೇ ಆಗಿಲ್ಲ. ಅದಕ್ಕೂ ಪಾವತಿ ಮಾಡಬೇಕೆಂದಾದರೆ, ಅದು ಪ್ರಯೋಜನವಿಲ್ಲ.

ಈ ಪ್ಯಾಕೇಜ್‌ನಲ್ಲಿರುವ ಅಂಶಗಳಿಗೆ ಒದಗಿಸಲಾಗಿರುವ ಮೊತ್ತವು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ನಿಗದಿಪಡಿಸಿದ್ದಾಗಿದೆ. ಉದ್ಯೋಗ ಖಾತರಿ ಯೋಜನೆ (ಮಹಾತ್ಮಾ ಗಾಂಧಿ ಎನ್‌ಆರ್‌ಇಜಿಎ)ಯ ಕೂಲಿಯನ್ನು 20 ರೂ. ಹೆಚ್ಚು ಮಾಡಲಾಗಿದ್ದು, ಅದು ಇಲ್ಲದಿದ್ದರೂ ವಾರ್ಷಿಕವಾಗಿ ಆಗಲೇಬೇಕಾದುದು. ಕೆಲಸಗಳ ದಿನಗಳನ್ನೇನಾದರೂ ಹೆಚ್ಚು ಮಾಡಲಾಗಿದೆಯೇ? (ಇಲ್ಲ!). ತಕ್ಷಣಕ್ಕೆ ಅವರು ಯಾವ ಕೆಲಸ ಮಾಡಿಸುತ್ತಾರೆ? ಯಾವ ರೀತಿಯ ಕೆಲಸ ಮಾಡಿಸುತ್ತಾರೆ? ಸಾಮಾಜಿಕ ಅಂತರ ಕಾಯ್ದುಕೊಳ್ಳುವ (social distancing) ನಿಯಮಗಳನ್ನು ಹೇಗೆ ಪಾಲಿಸುತ್ತಾರೆ? (ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ). ಇದಕ್ಕಾಗಿ ಬೇಕಾದ ಪ್ರಮಾಣದಲ್ಲಿ ಕೆಲಸಗಳನ್ನು ರೂಪಿಸಲು ಬೇಕಾಗಿರುವ ಹಲವಾರು ವಾರಗಳ ತನಕ ಜನರು ಏನು ಮಾಡಬೇಕು? ಹೇಗೆ ಬದುಕಬೇಕು? ಅವರ ಆರೋಗ್ಯ ಕೆಲಸಕ್ಕೆ ತಕ್ಕುದಾಗಿ ಇರುವುದೆ? ಕೆಲಸವಿರಲಿ, ಇಲ್ಲದೆಯೇ ಇರಲಿ, ನಾವು ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು ಪ್ರತಿಯೊಬ್ಬ ಕಾರ್ಮಿಕ ಮತ್ತು ರೈತರಿಗೆ ಈ ಬಿಕ್ಕಟ್ಟು ಮುಂದುವರಿಯುವ ವರೆಗೆ ಕೊಡಬೇಕಾಗಿದೆ.

ಪ್ಯಾಕೇಜಿನಲ್ಲಿ ಪ್ರಸ್ತಾಪಿಸಲಾಗಿರುವ ಪ್ರಧಾನಮಂತ್ರಿ-ಕಿಸಾನ್ ಯೋಜನೆಯ ಅಡಿಯಲ್ಲಿ 2,000 ರೂ. ಈಗಾಗಲೇ ಇದ್ದು, ವಿತರಿಸುವ ಸಮಯ ಬಂದಿದೆ- ಹೀಗಿರುವಾಗ ಹೆಚ್ಚುವರಿಯಾಗಿರುವುದು ಏನು? ಪ್ರತೀ ನಾಲ್ಕನೇ ತಿಂಗಳಲ್ಲಿ ಕೊಡಬೇಕಾದನ್ನು ಸ್ವಲ್ಪ ಬೇಗ- ಮೊದಲ ತಿಂಗಳಿಗೆ ಹಿಂದೂಡಲಾಗಿದೆ ಅಷ್ಟೇ. ಹಣಕಾಸು ಸಚಿವರು ಎಲ್ಲಿಯೂ ಈ 1.7 ಲಕ್ಷ ಕೋಟಿ ರೂ. ಪ್ಯಾಕೇಜಿನ ವಿಷಯವಾರು ವಿವರಗಳನ್ನು ಈ ಪಿಡುಗು ಮತ್ತು ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ನೀಡಿಲ್ಲ. ಹೀಗಿರುವಾಗ ಇದರಲ್ಲಿರುವ ಹೊಸ ಅಂಶಗಳೇನು? ಪ್ಯಾಕೇಜ್ ಮೊತ್ತದ ಎಷ್ಟು ಮೊತ್ತವನ್ನು ಹಳೆಯ ಮತ್ತು ಈಗಿರುವ ಯೋಜನೆಗಳನ್ನು ಹೊಲಿಗೆ ಹಾಕುವ ಮೂಲಕ ಅಂಕಿಅಂಶಗಳ ಕಸರತ್ತು ಮಾಡಲಾಗಿದೆ? ಇವು ಖಂಡಿತವಾಗಿಯೂ ತುರ್ತು ಪರಿಹಾರ ಕ್ರಮಗಳೆಂದು ಕರೆಸಿಕೊಳ್ಳಲು ಅರ್ಹವಲ್ಲ!

ಅದಲ್ಲದೇ ಪಿಂಚಣಿದಾರರು, ವಿಧವೆಯರು, ಅಂಗವಿಕಲರು ಒಂದು ಸಲ ಮಾತ್ರ ನೀಡಲಾಗುವ 1,000 ರೂ.ಗಳನ್ನು ಮುಂದಿನ ಮೂರು ತಿಂಗಳುಗಳಲ್ಲಿ ಎರಡು ಕಂತುಗಳಲ್ಲಿ ಪಡೆಯಲಿದ್ದಾರೆ. ಜನ ಧನ ಯೋಜನೆಯಲ್ಲಿ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮೂರು ತಿಂಗಳುಗಳಲ್ಲಿ ತಲಾ ಕೇವಲ 500 ರೂ. ಸಿಗಲಿದೆ. ಇದು ನೌಟಂಕಿಗಿಂತಲೂ ಕೆಳಮಟ್ಟದ್ದು ಮತ್ತು ನಾಚಿಕೆಗೇಡಿನದ್ದು.

ಈಗ ನಿಗದಿಪಡಿಸಲಾಗಿರುವ ಸಾಲವನ್ನು ಪಡೆಯುವುದೇ ಒಂದು ದುಃಸ್ವಪ್ನವಾಗಿರುವಾಗ, ಸಾಲದ ಮಿತಿಯನ್ನು ಬರೇ ಏರಿಸುವುದರಿಂದ ಸ್ವಸಹಾಯ ಗುಂಪುಗಳಿಗೆ ಹೇಗೆ ನೆರವಾಗುತ್ತದೆ? ದೂರದೂರದ ಊರುಗಳಲ್ಲಿ ಸಿಕ್ಕಿಬಿದ್ದು, ತಮ್ಮ ಗ್ರಾಮಗಳಿಗೆ ಮರಳಲು ಯತ್ನಿಸುತ್ತಿರುವ ಲೆಕ್ಕವಿಲ್ಲದಷ್ಟು ವಲಸೆ ಕಾರ್ಮಿಕರಿಗೆ ಈ ಪ್ಯಾಕೇಜ್ ನಿರ್ದಿಷ್ಟವಾಗಿ ಹೇಗೆ ನೆರವಾಗಲಿದೆ? ಇದು ವಲಸೆ ಕಾರ್ಮಿಕರಿಗೆ ನೆರವಾಗಲಿದೆ ಎಂಬ ಬಾಯ್ಮಾತಿನ ದಾವೆಗೆ ಆಧಾರಗಳೇ ಇಲ್ಲ. ಒಂದು ಗಂಭೀರವಾದ ತುರ್ತು ಕ್ರಮಗಳ ಸರಣಿಯನ್ನು ನೀಡಲು ಈ ಪ್ಯಾಕೇಜಿನ ವೈಫಲ್ಯವು ದಿಗಿಲು ಹುಟ್ಟಿಸುವಂತಿದ್ದರೆ, ಈ ಪ್ಯಾಕೇಜನ್ನು ನೀಡಿದವರ ಮನೋಸ್ಥಿತಿ ಭಯಂಕರವಾಗಿದೆ. ನೆಲಮಟ್ಟದ ಪರಿಸ್ಥಿತಿಯ ಕುರಿತು ಅವರಿಗೆ ಯಾವುದೇ ತಿಳುವಳಿಕೆ ಇದ್ದಂತೆ ಕಾಣುವುದಿಲ್ಲ.

ಯಾವುದೇ ಗಂಭೀರವಾದ ಸಾಮಾಜಿಕ ಬೆಂಬಲ ಅಥವಾ ಯೋಜನೆ ಇಲ್ಲದಿರುವಾಗ- ನಾವು ಅನುಭವಿಸುತ್ತಿರುವ ಲಾಕ್‌ಡೌನ್‌ಗಳು ಹಿಮ್ಮುಖ ವಲಸೆ (reverse migrations, ಅಂದರೆ, ನಗರದಿಂದ ಹಳ್ಳಿಗೆ)ಗಳಿಗೆ ಕಾರಣವಾಗಬಹುದು ಅಥವಾ ಈಗಾಗಲೇ ಕಾರಣವಾಗಿದೆ. ನಿರ್ದಿಷ್ಟವಾಗಿ ಈ ವಲಸೆಗಳ ಪ್ರಮಾಣ ಮತ್ತು ತೀವ್ರತೆಗಳ ಸ್ಪಷ್ಟ ಚಿತ್ರಣವನ್ನು ಪಡೆಯುವುದು ಅಸಾಧ್ಯ. ತಾವು ಕೆಲಸಮಾಡುವ ನಗರ ಪಟ್ಟಣಗಳು ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗುತ್ತಿರುವಂತೆ, ದೊಡ್ಡ ಸಂಖ್ಯೆಯ ಜನರು ತಮ್ಮತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ ಎಂದು ಹಲವಾರು ರಾಜ್ಯಗಳಿಂದ ಬರುತ್ತಿರುವ ವರದಿಗಳು ಸೂಚಿಸುತ್ತಿವೆ.

ಸಾವಿರಾರು ಜನರು ಈಗ ತಮಗೆ ಲಭ್ಯವಿರುವ ಏಕೈಕ ಸಾರಿಗೆಯನ್ನು ಬಳಸುತ್ತಿದ್ದಾರೆ- ಅದೆಂದರೆ, ತಮ್ಮ ಸ್ವಂತ ಕಾಲುಗಳು. ಕೆಲವರು ಸೈಕಲ್‌ಗಳಲ್ಲಿ ಮನೆಗೆ ಹೊರಟಿದ್ದಾರೆ. ರೈಲು, ಬಸ್ಸು, ವ್ಯಾನ್‌ಗಳು ಏಕಾಏಕಿ ನಿಂತುದರಿಂದ ಸಾವಿರಾರು ಜನರು ಅರ್ಧ ದಾರಿಯಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಇದು ಭಯ ಹುಟ್ಟಿಸುವಂತದ್ದು. ಈ ಬಿಕ್ಕಟ್ಟು ತೀವ್ರಗೊಂಡರೆ, ನರಕವೇ ತಲೆಯ ಮೇಲೆ ಕಳಚಿ ಬೀಳಬಹುದು.

ಗುಜರಾತಿನ ನಗರಗಳಿಂದ ರಾಜಸ್ತಾನದ ಗ್ರಾಮಗಳಿಗೆ; ಹೈದರಾಬಾದಿನಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ದೂರದೂರದ ಹಳ್ಳಿಗಳಿಗೆ; ದಿಲ್ಲಿಯಿಂದ ಉತ್ತರ ಪ್ರದೇಶ ಮಾತ್ರವಲ್ಲ, ಬಿಹಾರಕ್ಕೂ; ಮುಂಬಯಿಯಿಂದ… ಯಾರಿಗೂ ಗೊತ್ತಿಲ್ಲ ಎಲ್ಲೆಲ್ಲಿಗೆಂದು- ದೊಡ್ಡದೊಡ್ಡ ಗುಂಪುಗಳು ನಡೆದು ಹೋಗುತ್ತಿರುವುದನ್ನು ಊಹಿಸಿ ನೋಡಿ. ಅವರಿಗೆ ನೆರವು, ಆಹಾರ, ನೀರು ಸಿಗದೇ ಹೋದಲ್ಲಿ ಮಹಾದುರಂತವೇ ಸಂಭವಿಸಬಹುದು. ಅವರ ಶೌಚದ ಮಹಾಸಮಸ್ಯೆಯನ್ನೂ ಊಹಿಸಿನೋಡಿ. ಅವರು ಅತಿಸಾರ (diarrhoea), ಕಾಲರಾ (cholera) ಮುಂತಾದ ಹಳೆಕಾಲದ ರೋಗಗಳಿಗೇ ಬಲಿಯಾಗಬಹುದು; ಕೊರೋನವೇ ಆಗಬೇಕೆಂದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...