Homeಮುಖಪುಟಮೋದಿಯ ಕೊರೋನ "ಪ್ಯಾಕೇಜ್" : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ - ಪಿ. ಸಾಯಿನಾಥ್

ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್

- Advertisement -
- Advertisement -

ಭಾಗ-1

…..
ಕೋವಿಡ್-19 ಉಂಟುಮಾಡಿರುವ ಮಹಾಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿ ಸರಕಾರ ಘೋಷಿಸಿರುವ “ಪ್ಯಾಕೇಜ್” ಎಂಬುದು ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ ಎನ್ನುತ್ತಾರೆ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, ಜಗತ್ಪ್ರಸಿದ್ಧ ಗ್ರಾಮೀಣ ಪತ್ರಕರ್ತ ಪಿ. ಸಾಯಿನಾಥ್. ಅವರು, ಈ ಪ್ಯಾಕೇಜ್ ಕಣ್ಕಟ್ಟನ್ನು ಉದಾಹರಣೆ ಸಹಿತ ಬಯಲಿಗೆಳೆದಿದ್ದಾರೆ.
…..

ಅನುವಾದ: ನಿಖಿಲ್ ಕೋಲ್ಪೆ

ಕೊರೋನ ವೈರಸ್ ಕುರಿತ ತನ್ನ ಮೊದಲ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜನರು ತಮ್ಮ ಬಟ್ಟಲು, ಜಾಗಟೆ ಬಾರಿಸಿ, ದುಷ್ಟ ಶಕ್ತಿಗಳನ್ನು ಬೆದರಿ ತತ್ತರಿಸುವಂತೆ ಮಾಡಿದರು. ತನ್ನ ಎರಡನೇ ಭಾಷಣದಲ್ಲಿ ನಾವೆಲ್ಲರೂ ಬೆದರಿ ತತ್ತರಿಸುವಂತೆ ಮಾಡಿದ್ದಾರೆ.

ಮುಂಬರುವ ವಾರಗಳಲ್ಲಿ ಜನರು, ಅದರಲ್ಲೂ ಮುಖ್ಯವಾಗಿ ಬಡವರು, ಆಹಾರ ಮತ್ತು ಇತರ ಅತ್ಯಗತ್ಯ ವಸ್ತುಗಳನ್ನು ಹೇಗೆ ಪಡೆಯಬೇಕು ಎಂಬ ಕುರಿತು ಒಂದೇ ಒಂದು ಶಬ್ದವನ್ನು ಆಡದೇ ಇರುವ ಮೂಲಕ, ಆಗಲೇ ಸ್ಫೋಟಿಸಲು ಕಾಯುತ್ತಿದ್ದ ದಿಗಿಲಿಗೆ ಕಿಡಿಹಚ್ಚಿದರು. ಮಧ್ಯಮ ವರ್ಗದವರು ಖರೀದಿಗಾಗಿ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಗುಂಪುಗುಂಪಾಗಿ ನುಗ್ಗಿದರು- ಇದು ಬಡವರಿಗೆ ಸುಲಭವಲ್ಲ. ದೊಡ್ಡ ವ್ಯಾಪಾರಿಗಳಿಂದ ಖರೀದಿಸಿ ಮಾರುವ ಸಣ್ಣಪುಟ್ಟ ವ್ಯಾಪಾರಿಗಳು, ಮನೆಗೆಲಸದವರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಇದು ಸುಲಭವಲ್ಲ. ರಾಬಿ ಫಸಲಿನ ಕೊಯ್ಲಿಗೆ ಕಾಯುತ್ತಿರುವ ಅಥವಾ ಕೊಯ್ಲು ಮುಗಿಸಿದರೂ ಫಸಲನ್ನು ಮಾರಲಾಗದ ರೈತರಿಗೂ ಇದು ಸುಲಭವಲ್ಲ. ಕಡೆಗಣಿಸಲ್ಪಟ್ಟ ಕೋಟ್ಯಂತರ ಭಾರತೀಯರಿಗಂತೂ ಇದು ಸಾಧ್ಯವೇ ಇಲ್ಲ.

ಹಣಕಾಸು ಮಂತ್ರಿ ಘೋಷಿಸಿದ ಪ್ಯಾಕೇಜ್‌ನಲ್ಲಿ ಒಂದೇ ಒಂದು ಒಳ್ಳೆಯ ಅಂಶವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕೊಡಲಾಗುತ್ತಿರುವ ಪ್ರತೀ ವ್ಯಕ್ತಿಗೆ ಐದು ಕೆಜಿ ಅಕ್ಕಿ ಅಥವಾ ಗೋಧಿಗೆ ಹೆಚ್ಚುವರಿಯಾಗಿ, ಮೂರು ತಿಂಗಳುಗಳ ಕಾಲ ಐದು ಕೆಜಿ ಉಚಿತ. ಅಲ್ಲಿಯೂ, ಹಿಂದೆ ಇದ್ದ ಐದು ಕೆಜಿ ಕೂಡಾ ಉಚಿತವೇ ಅಥವಾ ಅದಕ್ಕೆ ಪಾವತಿ ಮಾಡಬೇಕೇ ಎಂಬುದು ಸ್ಪಷ್ಟವೇ ಆಗಿಲ್ಲ. ಅದಕ್ಕೂ ಪಾವತಿ ಮಾಡಬೇಕೆಂದಾದರೆ, ಅದು ಪ್ರಯೋಜನವಿಲ್ಲ.

ಈ ಪ್ಯಾಕೇಜ್‌ನಲ್ಲಿರುವ ಅಂಶಗಳಿಗೆ ಒದಗಿಸಲಾಗಿರುವ ಮೊತ್ತವು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ನಿಗದಿಪಡಿಸಿದ್ದಾಗಿದೆ. ಉದ್ಯೋಗ ಖಾತರಿ ಯೋಜನೆ (ಮಹಾತ್ಮಾ ಗಾಂಧಿ ಎನ್‌ಆರ್‌ಇಜಿಎ)ಯ ಕೂಲಿಯನ್ನು 20 ರೂ. ಹೆಚ್ಚು ಮಾಡಲಾಗಿದ್ದು, ಅದು ಇಲ್ಲದಿದ್ದರೂ ವಾರ್ಷಿಕವಾಗಿ ಆಗಲೇಬೇಕಾದುದು. ಕೆಲಸಗಳ ದಿನಗಳನ್ನೇನಾದರೂ ಹೆಚ್ಚು ಮಾಡಲಾಗಿದೆಯೇ? (ಇಲ್ಲ!). ತಕ್ಷಣಕ್ಕೆ ಅವರು ಯಾವ ಕೆಲಸ ಮಾಡಿಸುತ್ತಾರೆ? ಯಾವ ರೀತಿಯ ಕೆಲಸ ಮಾಡಿಸುತ್ತಾರೆ? ಸಾಮಾಜಿಕ ಅಂತರ ಕಾಯ್ದುಕೊಳ್ಳುವ (social distancing) ನಿಯಮಗಳನ್ನು ಹೇಗೆ ಪಾಲಿಸುತ್ತಾರೆ? (ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ). ಇದಕ್ಕಾಗಿ ಬೇಕಾದ ಪ್ರಮಾಣದಲ್ಲಿ ಕೆಲಸಗಳನ್ನು ರೂಪಿಸಲು ಬೇಕಾಗಿರುವ ಹಲವಾರು ವಾರಗಳ ತನಕ ಜನರು ಏನು ಮಾಡಬೇಕು? ಹೇಗೆ ಬದುಕಬೇಕು? ಅವರ ಆರೋಗ್ಯ ಕೆಲಸಕ್ಕೆ ತಕ್ಕುದಾಗಿ ಇರುವುದೆ? ಕೆಲಸವಿರಲಿ, ಇಲ್ಲದೆಯೇ ಇರಲಿ, ನಾವು ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು ಪ್ರತಿಯೊಬ್ಬ ಕಾರ್ಮಿಕ ಮತ್ತು ರೈತರಿಗೆ ಈ ಬಿಕ್ಕಟ್ಟು ಮುಂದುವರಿಯುವ ವರೆಗೆ ಕೊಡಬೇಕಾಗಿದೆ.

ಪ್ಯಾಕೇಜಿನಲ್ಲಿ ಪ್ರಸ್ತಾಪಿಸಲಾಗಿರುವ ಪ್ರಧಾನಮಂತ್ರಿ-ಕಿಸಾನ್ ಯೋಜನೆಯ ಅಡಿಯಲ್ಲಿ 2,000 ರೂ. ಈಗಾಗಲೇ ಇದ್ದು, ವಿತರಿಸುವ ಸಮಯ ಬಂದಿದೆ- ಹೀಗಿರುವಾಗ ಹೆಚ್ಚುವರಿಯಾಗಿರುವುದು ಏನು? ಪ್ರತೀ ನಾಲ್ಕನೇ ತಿಂಗಳಲ್ಲಿ ಕೊಡಬೇಕಾದನ್ನು ಸ್ವಲ್ಪ ಬೇಗ- ಮೊದಲ ತಿಂಗಳಿಗೆ ಹಿಂದೂಡಲಾಗಿದೆ ಅಷ್ಟೇ. ಹಣಕಾಸು ಸಚಿವರು ಎಲ್ಲಿಯೂ ಈ 1.7 ಲಕ್ಷ ಕೋಟಿ ರೂ. ಪ್ಯಾಕೇಜಿನ ವಿಷಯವಾರು ವಿವರಗಳನ್ನು ಈ ಪಿಡುಗು ಮತ್ತು ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ನೀಡಿಲ್ಲ. ಹೀಗಿರುವಾಗ ಇದರಲ್ಲಿರುವ ಹೊಸ ಅಂಶಗಳೇನು? ಪ್ಯಾಕೇಜ್ ಮೊತ್ತದ ಎಷ್ಟು ಮೊತ್ತವನ್ನು ಹಳೆಯ ಮತ್ತು ಈಗಿರುವ ಯೋಜನೆಗಳನ್ನು ಹೊಲಿಗೆ ಹಾಕುವ ಮೂಲಕ ಅಂಕಿಅಂಶಗಳ ಕಸರತ್ತು ಮಾಡಲಾಗಿದೆ? ಇವು ಖಂಡಿತವಾಗಿಯೂ ತುರ್ತು ಪರಿಹಾರ ಕ್ರಮಗಳೆಂದು ಕರೆಸಿಕೊಳ್ಳಲು ಅರ್ಹವಲ್ಲ!

ಅದಲ್ಲದೇ ಪಿಂಚಣಿದಾರರು, ವಿಧವೆಯರು, ಅಂಗವಿಕಲರು ಒಂದು ಸಲ ಮಾತ್ರ ನೀಡಲಾಗುವ 1,000 ರೂ.ಗಳನ್ನು ಮುಂದಿನ ಮೂರು ತಿಂಗಳುಗಳಲ್ಲಿ ಎರಡು ಕಂತುಗಳಲ್ಲಿ ಪಡೆಯಲಿದ್ದಾರೆ. ಜನ ಧನ ಯೋಜನೆಯಲ್ಲಿ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಮೂರು ತಿಂಗಳುಗಳಲ್ಲಿ ತಲಾ ಕೇವಲ 500 ರೂ. ಸಿಗಲಿದೆ. ಇದು ನೌಟಂಕಿಗಿಂತಲೂ ಕೆಳಮಟ್ಟದ್ದು ಮತ್ತು ನಾಚಿಕೆಗೇಡಿನದ್ದು.

ಈಗ ನಿಗದಿಪಡಿಸಲಾಗಿರುವ ಸಾಲವನ್ನು ಪಡೆಯುವುದೇ ಒಂದು ದುಃಸ್ವಪ್ನವಾಗಿರುವಾಗ, ಸಾಲದ ಮಿತಿಯನ್ನು ಬರೇ ಏರಿಸುವುದರಿಂದ ಸ್ವಸಹಾಯ ಗುಂಪುಗಳಿಗೆ ಹೇಗೆ ನೆರವಾಗುತ್ತದೆ? ದೂರದೂರದ ಊರುಗಳಲ್ಲಿ ಸಿಕ್ಕಿಬಿದ್ದು, ತಮ್ಮ ಗ್ರಾಮಗಳಿಗೆ ಮರಳಲು ಯತ್ನಿಸುತ್ತಿರುವ ಲೆಕ್ಕವಿಲ್ಲದಷ್ಟು ವಲಸೆ ಕಾರ್ಮಿಕರಿಗೆ ಈ ಪ್ಯಾಕೇಜ್ ನಿರ್ದಿಷ್ಟವಾಗಿ ಹೇಗೆ ನೆರವಾಗಲಿದೆ? ಇದು ವಲಸೆ ಕಾರ್ಮಿಕರಿಗೆ ನೆರವಾಗಲಿದೆ ಎಂಬ ಬಾಯ್ಮಾತಿನ ದಾವೆಗೆ ಆಧಾರಗಳೇ ಇಲ್ಲ. ಒಂದು ಗಂಭೀರವಾದ ತುರ್ತು ಕ್ರಮಗಳ ಸರಣಿಯನ್ನು ನೀಡಲು ಈ ಪ್ಯಾಕೇಜಿನ ವೈಫಲ್ಯವು ದಿಗಿಲು ಹುಟ್ಟಿಸುವಂತಿದ್ದರೆ, ಈ ಪ್ಯಾಕೇಜನ್ನು ನೀಡಿದವರ ಮನೋಸ್ಥಿತಿ ಭಯಂಕರವಾಗಿದೆ. ನೆಲಮಟ್ಟದ ಪರಿಸ್ಥಿತಿಯ ಕುರಿತು ಅವರಿಗೆ ಯಾವುದೇ ತಿಳುವಳಿಕೆ ಇದ್ದಂತೆ ಕಾಣುವುದಿಲ್ಲ.

ಯಾವುದೇ ಗಂಭೀರವಾದ ಸಾಮಾಜಿಕ ಬೆಂಬಲ ಅಥವಾ ಯೋಜನೆ ಇಲ್ಲದಿರುವಾಗ- ನಾವು ಅನುಭವಿಸುತ್ತಿರುವ ಲಾಕ್‌ಡೌನ್‌ಗಳು ಹಿಮ್ಮುಖ ವಲಸೆ (reverse migrations, ಅಂದರೆ, ನಗರದಿಂದ ಹಳ್ಳಿಗೆ)ಗಳಿಗೆ ಕಾರಣವಾಗಬಹುದು ಅಥವಾ ಈಗಾಗಲೇ ಕಾರಣವಾಗಿದೆ. ನಿರ್ದಿಷ್ಟವಾಗಿ ಈ ವಲಸೆಗಳ ಪ್ರಮಾಣ ಮತ್ತು ತೀವ್ರತೆಗಳ ಸ್ಪಷ್ಟ ಚಿತ್ರಣವನ್ನು ಪಡೆಯುವುದು ಅಸಾಧ್ಯ. ತಾವು ಕೆಲಸಮಾಡುವ ನಗರ ಪಟ್ಟಣಗಳು ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗುತ್ತಿರುವಂತೆ, ದೊಡ್ಡ ಸಂಖ್ಯೆಯ ಜನರು ತಮ್ಮತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ ಎಂದು ಹಲವಾರು ರಾಜ್ಯಗಳಿಂದ ಬರುತ್ತಿರುವ ವರದಿಗಳು ಸೂಚಿಸುತ್ತಿವೆ.

ಸಾವಿರಾರು ಜನರು ಈಗ ತಮಗೆ ಲಭ್ಯವಿರುವ ಏಕೈಕ ಸಾರಿಗೆಯನ್ನು ಬಳಸುತ್ತಿದ್ದಾರೆ- ಅದೆಂದರೆ, ತಮ್ಮ ಸ್ವಂತ ಕಾಲುಗಳು. ಕೆಲವರು ಸೈಕಲ್‌ಗಳಲ್ಲಿ ಮನೆಗೆ ಹೊರಟಿದ್ದಾರೆ. ರೈಲು, ಬಸ್ಸು, ವ್ಯಾನ್‌ಗಳು ಏಕಾಏಕಿ ನಿಂತುದರಿಂದ ಸಾವಿರಾರು ಜನರು ಅರ್ಧ ದಾರಿಯಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಇದು ಭಯ ಹುಟ್ಟಿಸುವಂತದ್ದು. ಈ ಬಿಕ್ಕಟ್ಟು ತೀವ್ರಗೊಂಡರೆ, ನರಕವೇ ತಲೆಯ ಮೇಲೆ ಕಳಚಿ ಬೀಳಬಹುದು.

ಗುಜರಾತಿನ ನಗರಗಳಿಂದ ರಾಜಸ್ತಾನದ ಗ್ರಾಮಗಳಿಗೆ; ಹೈದರಾಬಾದಿನಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ದೂರದೂರದ ಹಳ್ಳಿಗಳಿಗೆ; ದಿಲ್ಲಿಯಿಂದ ಉತ್ತರ ಪ್ರದೇಶ ಮಾತ್ರವಲ್ಲ, ಬಿಹಾರಕ್ಕೂ; ಮುಂಬಯಿಯಿಂದ… ಯಾರಿಗೂ ಗೊತ್ತಿಲ್ಲ ಎಲ್ಲೆಲ್ಲಿಗೆಂದು- ದೊಡ್ಡದೊಡ್ಡ ಗುಂಪುಗಳು ನಡೆದು ಹೋಗುತ್ತಿರುವುದನ್ನು ಊಹಿಸಿ ನೋಡಿ. ಅವರಿಗೆ ನೆರವು, ಆಹಾರ, ನೀರು ಸಿಗದೇ ಹೋದಲ್ಲಿ ಮಹಾದುರಂತವೇ ಸಂಭವಿಸಬಹುದು. ಅವರ ಶೌಚದ ಮಹಾಸಮಸ್ಯೆಯನ್ನೂ ಊಹಿಸಿನೋಡಿ. ಅವರು ಅತಿಸಾರ (diarrhoea), ಕಾಲರಾ (cholera) ಮುಂತಾದ ಹಳೆಕಾಲದ ರೋಗಗಳಿಗೇ ಬಲಿಯಾಗಬಹುದು; ಕೊರೋನವೇ ಆಗಬೇಕೆಂದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...