Homeರಾಜಕೀಯನೆಹರು ಎಲ್ಲೀ, ಮೋದಿ ಎಲ್ಲೀ, ರಂಗನ ಮುಂದೆ ಸಿಂಗನೆ?

ನೆಹರು ಎಲ್ಲೀ, ಮೋದಿ ಎಲ್ಲೀ, ರಂಗನ ಮುಂದೆ ಸಿಂಗನೆ?

- Advertisement -
- Advertisement -

ನಮ್ಮ ಭಾರತ ದೇಶ ಈವರೆಗೆ ಕಂಡ ಅಪರೂಪದ ಗುಣಸಂಪನ್ನ ಮೋದಿ ಮಹಾತ್ಮನಿಗೆ ಉಳಿದವರಿರಲಿ, ಬಿಜೆಪಿಗಳೇ ಹೆದರುತ್ತವೆಯಂತಲ್ಲಾ. ಮೂಲತಃ ಬಿಜೆಪಿಗಳೇ ಹುಟ್ಟು ಪುಕ್ಕಲುಗಳು, ಅದಕ್ಕೇ ಅವುಗಳ ಬಳಿ ಲಾಠಿ ಇರುವುದು! ಇರಲಿ ನಮ್ಮ ಮೋದಿ ಮಹಾತ್ಮನನ್ನು ಮುಗಿಸಲು ವಯಸ್ಸಾದ ವಿದ್ವಾಂಸರು ಅದರಲ್ಲೂ ಮಾಜಿ ನಕ್ಸಲರು ನೀಲನಕ್ಷೆ ತಯಾರಿಸುತ್ತಿದ್ದರೆಂದು ಇಂಕಿನ ವಾಸನೆಯನ್ನೆ ಹಿಡಿದುಹೋಗಿ ಪತ್ತೆಹಚ್ಚಿ ಗೃಹಬಂಧನಕ್ಕಾಗಿರುವ ಪೂನಾ ಪೊಲೀಸರು ದಾಬೊಲ್ಕರ್, ಪನ್ಸಾರೆ ಕತೆ ಮುಗಿದು ನಾಲ್ಕು ವರ್ಷಗಳಾದರೂ ಸುಮ್ಮನಿದ್ದದ್ದು ಅಷ್ಟೇನು ಸೋಜಿಗವಲ್ಲವಂತಲ್ಲಾ. ಇಂತಹ ಪೊಲೀಸರು ಕರ್ನಾಟಕದಲ್ಲೇನಾದರೂ ಇದ್ದರೆ ಇಷ್ಟರಲ್ಲಿ ಗೌರಿ ಕೇಸಿನ ಕತೆ ಮುಗಿಸಿ ಬಿ-ರಿಪೋರ್ಟಾಕುತ್ತಿದ್ದರಂತಲ್ಲಾ. ಇದನ್ನೆಲ್ಲಾ ಗಮನಿಸಿದರೆ ಕೊಲೆಗಡುಕ ಬಿಜೆಪಿಗಳು ಮತ್ತೆ ಈ ನಾಡಿನಲ್ಲಿ ವಕ್ಕರಿಸದಂತೆ ಡಿ.ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಬ್ರದರ್ಸ್‍ಗಳಾದಿಯಾಗಿ ಎಲ್ಲಾ ಮನುಷ್ಯರು ಮನುಷ್ಯರಲ್ಲದವರು ವಕ್ಕರಿಸದಂತೆ ಎಚ್ಚರ ವಹಿಸಬೇಕೆಂಬುದು ಕರ್ನಾಟಕದ ಮಾನವಂತರ ಇಂಗಿತವಾಗಿದೆಯಂತಲ್ಲಾ. ಥೂತ್ತೇರಿ

*******

ಮೋದಿ ತಮ್ಮ 68ನೇ ಹುಟ್ಟುಹಬ್ಬವನ್ನು ಶಾಲಾಮಕ್ಕಳ ಜೊತೆ ಆಚರಿಸಿದರಂತೆ. ಅಚರಿಸಿದ್ದು ಹಾಳುಬಿದ್ದೋಗಲಿ ಮೋದಿ ಮಕ್ಕಳಿಗೆ ಪ್ರಶ್ನೆ ಕೇಳಲು ಭಯಪಡಬೇಡಿ ಎಂಬ ಬುದ್ಧಿ ಮಾತನ್ನ ಹೇಳಿದರಂತೆ. ಏಕೆಂದರೆ ಈಚೆಗೆ ಬಿಜೆಪಿಗಳು ಮೋದಿ ಆಡಳಿತವೈಖರಿ ಬಗ್ಗೆ ಪ್ರಶ್ನೆ ಕೇಳಲು ಹೆದರುತ್ತಿವೆಯಂತೆ. ಇದನ್ನು ಮನಗಂಡ ಮೋದಿ ಪ್ರಶ್ನೆ ಕೇಳುವ ಭಯವನ್ನು ಬಾಲ್ಯದಲ್ಲೇ ನಿವಾರಿಸಲು ಪಣ ತೊಟ್ಟಿದ್ದಾರಂತಲ್ಲಾ. ಸಾಮಾನ್ಯವಾಗಿ ಬಿಜೆಪಿಗಳು ಅಂದರೆ ಆರೆಸ್ಸೆಸ್ಸಿಗರು ಬಲಿತ ಜನರ ಸನಿಹಕ್ಕೆ ಹೋಗುವುದಿಲ್ಲ. ಬದಲಿಗೆ ಎಳೆ ಮಕ್ಕಳನ್ನ ಎತ್ತಿಕೊಂಡು ಚೆಡ್ಡಿಹಾಕಿ ಲಾಠಿಕೊಟ್ಟುಬಿಡುತ್ತವೆ. ಆದ್ದರಿಂದ ಮೋದಿ ಹದಿನೇಳು ವರ್ಷ ಭಾರತದ ಪ್ರಧಾನಿಯಾಗಿದ್ದ ನೆಹರು ತಮ್ಮ ಹುಟ್ಟುಹಬ್ಬದಂದು ಪಾರ್ಕಿನಲ್ಲಿ ಮಕ್ಕಳ ಜೊತೆ ಮಗುವಾಗಿ ಆಟವಾಡಿ ಕತೆ ಹೇಳಿ-ಕೇಳಿ ಖುಷಿ ಪಡುತ್ತಿದ್ದರು. ಎಲ್ಲದರಲ್ಲೂ ನೆಹರು ಮೀರಿಸಲು ಹೋರಾಡುವ ಈ ಮೋದಿ ಎಲ್ಲೀ ಆ ನೆಹರು ಎಲ್ಲೀ ಹಳ್ಳಿ ಗಾದೆಯಂತೆ ರಂಗನ ಮುಂದೆ ಸಿಂಗನೆ ಎಂಬಂತಾಯ್ತಲ್ಲಾ ಥೂತ್ತೇರಿ.

*******

ಕುಮಾರಣ್ಣನ ಸರಕಾರ ಬುಡಭದ್ರವಿಲ್ಲದೆ ಅಲ್ಲಾಡುತ್ತಿರುವುದನ್ನ ನೋಡಿದ ಒಕ್ಕಲಿಗ ಜಗತ್ತಿನ ಗುರುವಾದ ನಿರ್ಮಲಾನಂದ ಸ್ವಾಮಿ ಈ ಸರಕಾರ ಬಿದ್ದರೆ ಅದು ದೈವಕೃಪೆಗೆ ವಿರುದ್ಧ ಎಂದರಂತಲ್ಲಾ. ಈ ನಿರ್ಮಲಾನಂದ ಚಿನ್ನದಂತಹ ಸ್ವಾಮಿ. ಏಕೆಂದರೆ ಎಂ.ಟೆಕ್‍ನಲ್ಲಿ ಇವರು ಹೊನ್ನ ಶಿಖರವೇರಿದ್ದರಂತೆ. ಆ ವಿದ್ವತ್ತಿಗೂ ಈಗ ಇವರು ಸರಕಾರದ ವಿಷಯದಲ್ಲಾಡುತ್ತಿರುವ ಮಾತಿಗೂ ಯಾವ ಸಂಬಂಧವೂ ಇಲ್ಲವಂತ¯್ಲ. ಸಂವಿಧಾನದಲ್ಲಿನ ಚುನಾವಣಾ ನಿಯಮದಂತೆ ಚುನಾವಣೆ ನಡೆದಿದ್ದೆ ಜಾತ್ಯತೀತ ಮನಸ್ಸುಗಳು 78 ಸೀಟು ಗೆಲ್ಲಿಸಿವೆ. ಧರ್ಮಾಂಧರು 104 ಸೀಟು ಗೆದ್ದಿದ್ದಾರೆ ಹಾಗೆ ಜಾತ್ಯಂಧರು 38 ಸೀಟು ಗೆಲ್ಲಿಸಿಕೊಂಡಿದ್ದಾರೆ. ಧರ್ಮಾಂಧರನ್ನ ದೂರವಿಡುವ ಸಲುವಾಗಿ ಜಾತ್ಯತೀತರು ಮತ್ತು ಜಾತಿವಾದಿಗಳು ಸೇರಿ ಸರಕಾರ ಮಾಡಿದ್ದಾರೆ. ಕುಪಿತಗೊಂಡ ಧರ್ಮಾಂಧರು ಸರಕಾರ ಕೆಡವಲು ಹಗಲುರಾತ್ರಿ ಹಾರೆಗುದ್ದಲಿಯೊಂದಿಗೆ ಡೈನಮೆಟ್‍ಗಳನ್ನ ಉಪಯೋಗಿಸುವ ಬೆದರಿಕೆಯೊಂದಿಗೆ ಕೆಲಸ ಮಾಡುತ್ತಿವೆ. ಇದು ಸಂವಿಧಾನಕ್ಕೆ ಮುಖ್ಯವಾಗಿ ಕೋರ್ಟಿಗೆ ಬಗೆಯುವ ದ್ರೋಹವಾಗಿದೆ. ಇಂತಲ್ಲಿ ಸರಕಾರ ಉರುಳಿದರೆ ಅದು ದೈವಕೃಪೆಗೆ ವಿರುದ್ಧ ಹೇಗಾಗುತ್ತದೆಂದು ಕೇಳಿದರೆ ನಿವರ್iಲಾನಂದರು ನಿರುತ್ತರ ಕುಮಾರನಂತಾದರಂತಲ್ಲಾ. ಥೂತ್ತೇರಿ

*******

ಕೇವಲ 37 ಸೀಟುಗಳನ್ನ ಹೊಂದಿದ ಜೆಡಿಎಸ್ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದು ಸರಕಾರ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಯಜ್ಞ, ಯಾಗ, ಹೋಮ ಮತ್ತು ನೂರಾರು ಕ್ಷೇತ್ರ ದರ್ಶನದ ಪ್ರಭಾವವೇ ಸರಕಾರವನ್ನು ಮುನ್ನಡೆಸುತ್ತಿದೆ ಎಂದು ಖಚಿತವಾಗಿ ನಂಬಿರುವ ದೇವೇಗೌಡರಿಗೆ ಪ್ರಜಾಪ್ರಭುತ್ವದಲ್ಲಿನ ಚಮತ್ಕಾರವೇ ಹೊಳೆಯದಿರುವುದು ಆಶ್ಚರ್ಯ ತಂದಿದೆಯಂತ¯್ಲ. ಆದರೇನು ಅಪ್ಪನ ಮೂಢನಂಬಿಕೆ ಮಾತುಗಳನ್ನೆ ನಂಬಿದ್ದ ಕುಮಾರಣ್ಣ ಈಚೆಗೆ ಜ್ಞಾನೋದಯವಾದಂತೆ ಸಿದ್ದರಾಮಯ್ಯನ ಕೃಪೆಯಿದ್ದರೆ ಐದು ವರ್ಷ ಮುಗಿಸಿ ಮನೆಗೆ ಹೋಗುತ್ತೇವೆ ಎಂದಿದ್ದಾರಲ್ಲಾ. ಇದರಿಂದ ಸಿದ್ದುಗೆ ಬಿದ್ದ ಹೊಡೆತವೆಂದರೆ ಈವರೆಗೆ ಸರಕಾರವನ್ನು ಅಲ್ಲಾಡಿಸುತ್ತಿದ್ದ ಕೀರ್ತಿ ಸಿದ್ದುಗೆ ಸಲ್ಲುತ್ತದೆ. ಅದಷ್ಟೇ ಅಲ್ಲ ಮುಂದಿನ ಎಲ್ಲಾ ತಾರಾತಿಗಡಿಯ ರಗಳೆ ಸಿದ್ದು ಬೆನ್ನ ಬೀಳುವುದರಲ್ಲಿ ಸಂಶಯವಿಲ್ಲ. ಇದಾವುದನ್ನ ಯೋಚಿಸದ ಸಿದ್ದು ಅಂತೂ ಕುಮಾರನಿಗೆ ನನ್ನ ಕೃಪೆ ಮುಖ್ಯ ಎಂಬುದು ಈಗಲಾದರೂ ಹೊಳೆಯಿತಲ್ಲ ಎಂದು ಆಕಳಿಕೆ ತೆಗೆದು ಸೋಫಾಕ್ಕೆ ಒರಗಿದರಂತಲ್ಲಾ, ಥೂತ್ತೇರಿ.

*******

ಹಟ ಸಂಭೋಗದ ಮುದುಕನಂತೆ ಹಗಲೂರಾತ್ರಿ ಅಧಿಕಾರಕ್ಕಾಗಿ ಹೋರಾಡುತ್ತಿರುವ ಎಡೂರಪ್ಪನನ್ನು ಗಮನಿಸಿದ ಚೆಡ್ಡಿಗಳು ಎಡೂರಪ್ಪನ ಇಂತಹ ಕಾರ್ಯಾಚರಣೆಗೆ ನಮ್ಮ ವಿರೋಧವಿದೆ ಎಂಬ ಸುದ್ದಿ ಬಿತ್ತರಿಸಿವೆಯಲ್ಲಾ. ಅಂದರೆ ಆರೆಸ್ಸೆಸ್ಸಿಗರು ಶ್ರೇಷ್ಠವಾದ ಜನತಂತ್ರ ರಾಜಕಾರಣ. ಎಡೂರಪ್ಪನದಲ್ಲ ಎಂದು ಅತ್ತ ಎಡೂರಪ್ಪನನ್ನ ದೂರಿ ಇತ್ತ ತಾವು ಮಾತ್ರ ಧರ್ಮವಂತರೆಂದು ಬಿಂಬಿಸಲು ಹೊರಟಿರುವುದು ಸ್ವತಃ ಎಡೂರಪ್ಪನಿಗೇ ಸಿಟ್ಟು ತರಿಸಿದೆಯಂತಲ್ಲಾ. ಕಂಠಪೂರ್ತಿ ಭ್ರಷ್ಟ ಎಂಬುದನ್ನ ಬಿಟ್ಟರೆ, ಎಡೂರಪ್ಪ ಎಂದು ಮುಸ್ಲಿಮರನ್ನ ದೂಷಿಸಿದವರಲ್ಲಾ ಇದಕ್ಕೆ ಕಾರಣ ಅವರ ಕ್ಷೇತ್ರದ ಮುಸ್ಲಿಮರ ಬೆಂಬಲ. ಜೊತೆಗೆ ಈ ಅನಂತ, ಈಶ್ವರ, ಜೋಷಿ, ಯತ್ನಾಳ ಇಂತ ಮತಾಂಧರಾಡುವ ಮಾತನ್ನ ಯಡ್ಡಿ ಎಂದೂ ಆಡಿದವರಲ್ಲ. ಆದ್ದರಿಂದ ಚಿಡ್ಡಿಗಳು ಬಿಟ್ಟುಹೋದ ಮನೆಗೆ ಬಂದ ಯಡ್ಡಿ ಬಗ್ಗೆ ಎಚ್ಚರಿಕೆಯಿಂದಲೇ ವರ್ತಿಸುತ್ತಿವೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...