Homeರಾಜಕೀಯನೆಹರು ಎಲ್ಲೀ, ಮೋದಿ ಎಲ್ಲೀ, ರಂಗನ ಮುಂದೆ ಸಿಂಗನೆ?

ನೆಹರು ಎಲ್ಲೀ, ಮೋದಿ ಎಲ್ಲೀ, ರಂಗನ ಮುಂದೆ ಸಿಂಗನೆ?

- Advertisement -
- Advertisement -

ನಮ್ಮ ಭಾರತ ದೇಶ ಈವರೆಗೆ ಕಂಡ ಅಪರೂಪದ ಗುಣಸಂಪನ್ನ ಮೋದಿ ಮಹಾತ್ಮನಿಗೆ ಉಳಿದವರಿರಲಿ, ಬಿಜೆಪಿಗಳೇ ಹೆದರುತ್ತವೆಯಂತಲ್ಲಾ. ಮೂಲತಃ ಬಿಜೆಪಿಗಳೇ ಹುಟ್ಟು ಪುಕ್ಕಲುಗಳು, ಅದಕ್ಕೇ ಅವುಗಳ ಬಳಿ ಲಾಠಿ ಇರುವುದು! ಇರಲಿ ನಮ್ಮ ಮೋದಿ ಮಹಾತ್ಮನನ್ನು ಮುಗಿಸಲು ವಯಸ್ಸಾದ ವಿದ್ವಾಂಸರು ಅದರಲ್ಲೂ ಮಾಜಿ ನಕ್ಸಲರು ನೀಲನಕ್ಷೆ ತಯಾರಿಸುತ್ತಿದ್ದರೆಂದು ಇಂಕಿನ ವಾಸನೆಯನ್ನೆ ಹಿಡಿದುಹೋಗಿ ಪತ್ತೆಹಚ್ಚಿ ಗೃಹಬಂಧನಕ್ಕಾಗಿರುವ ಪೂನಾ ಪೊಲೀಸರು ದಾಬೊಲ್ಕರ್, ಪನ್ಸಾರೆ ಕತೆ ಮುಗಿದು ನಾಲ್ಕು ವರ್ಷಗಳಾದರೂ ಸುಮ್ಮನಿದ್ದದ್ದು ಅಷ್ಟೇನು ಸೋಜಿಗವಲ್ಲವಂತಲ್ಲಾ. ಇಂತಹ ಪೊಲೀಸರು ಕರ್ನಾಟಕದಲ್ಲೇನಾದರೂ ಇದ್ದರೆ ಇಷ್ಟರಲ್ಲಿ ಗೌರಿ ಕೇಸಿನ ಕತೆ ಮುಗಿಸಿ ಬಿ-ರಿಪೋರ್ಟಾಕುತ್ತಿದ್ದರಂತಲ್ಲಾ. ಇದನ್ನೆಲ್ಲಾ ಗಮನಿಸಿದರೆ ಕೊಲೆಗಡುಕ ಬಿಜೆಪಿಗಳು ಮತ್ತೆ ಈ ನಾಡಿನಲ್ಲಿ ವಕ್ಕರಿಸದಂತೆ ಡಿ.ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಬ್ರದರ್ಸ್‍ಗಳಾದಿಯಾಗಿ ಎಲ್ಲಾ ಮನುಷ್ಯರು ಮನುಷ್ಯರಲ್ಲದವರು ವಕ್ಕರಿಸದಂತೆ ಎಚ್ಚರ ವಹಿಸಬೇಕೆಂಬುದು ಕರ್ನಾಟಕದ ಮಾನವಂತರ ಇಂಗಿತವಾಗಿದೆಯಂತಲ್ಲಾ. ಥೂತ್ತೇರಿ

*******

ಮೋದಿ ತಮ್ಮ 68ನೇ ಹುಟ್ಟುಹಬ್ಬವನ್ನು ಶಾಲಾಮಕ್ಕಳ ಜೊತೆ ಆಚರಿಸಿದರಂತೆ. ಅಚರಿಸಿದ್ದು ಹಾಳುಬಿದ್ದೋಗಲಿ ಮೋದಿ ಮಕ್ಕಳಿಗೆ ಪ್ರಶ್ನೆ ಕೇಳಲು ಭಯಪಡಬೇಡಿ ಎಂಬ ಬುದ್ಧಿ ಮಾತನ್ನ ಹೇಳಿದರಂತೆ. ಏಕೆಂದರೆ ಈಚೆಗೆ ಬಿಜೆಪಿಗಳು ಮೋದಿ ಆಡಳಿತವೈಖರಿ ಬಗ್ಗೆ ಪ್ರಶ್ನೆ ಕೇಳಲು ಹೆದರುತ್ತಿವೆಯಂತೆ. ಇದನ್ನು ಮನಗಂಡ ಮೋದಿ ಪ್ರಶ್ನೆ ಕೇಳುವ ಭಯವನ್ನು ಬಾಲ್ಯದಲ್ಲೇ ನಿವಾರಿಸಲು ಪಣ ತೊಟ್ಟಿದ್ದಾರಂತಲ್ಲಾ. ಸಾಮಾನ್ಯವಾಗಿ ಬಿಜೆಪಿಗಳು ಅಂದರೆ ಆರೆಸ್ಸೆಸ್ಸಿಗರು ಬಲಿತ ಜನರ ಸನಿಹಕ್ಕೆ ಹೋಗುವುದಿಲ್ಲ. ಬದಲಿಗೆ ಎಳೆ ಮಕ್ಕಳನ್ನ ಎತ್ತಿಕೊಂಡು ಚೆಡ್ಡಿಹಾಕಿ ಲಾಠಿಕೊಟ್ಟುಬಿಡುತ್ತವೆ. ಆದ್ದರಿಂದ ಮೋದಿ ಹದಿನೇಳು ವರ್ಷ ಭಾರತದ ಪ್ರಧಾನಿಯಾಗಿದ್ದ ನೆಹರು ತಮ್ಮ ಹುಟ್ಟುಹಬ್ಬದಂದು ಪಾರ್ಕಿನಲ್ಲಿ ಮಕ್ಕಳ ಜೊತೆ ಮಗುವಾಗಿ ಆಟವಾಡಿ ಕತೆ ಹೇಳಿ-ಕೇಳಿ ಖುಷಿ ಪಡುತ್ತಿದ್ದರು. ಎಲ್ಲದರಲ್ಲೂ ನೆಹರು ಮೀರಿಸಲು ಹೋರಾಡುವ ಈ ಮೋದಿ ಎಲ್ಲೀ ಆ ನೆಹರು ಎಲ್ಲೀ ಹಳ್ಳಿ ಗಾದೆಯಂತೆ ರಂಗನ ಮುಂದೆ ಸಿಂಗನೆ ಎಂಬಂತಾಯ್ತಲ್ಲಾ ಥೂತ್ತೇರಿ.

*******

ಕುಮಾರಣ್ಣನ ಸರಕಾರ ಬುಡಭದ್ರವಿಲ್ಲದೆ ಅಲ್ಲಾಡುತ್ತಿರುವುದನ್ನ ನೋಡಿದ ಒಕ್ಕಲಿಗ ಜಗತ್ತಿನ ಗುರುವಾದ ನಿರ್ಮಲಾನಂದ ಸ್ವಾಮಿ ಈ ಸರಕಾರ ಬಿದ್ದರೆ ಅದು ದೈವಕೃಪೆಗೆ ವಿರುದ್ಧ ಎಂದರಂತಲ್ಲಾ. ಈ ನಿರ್ಮಲಾನಂದ ಚಿನ್ನದಂತಹ ಸ್ವಾಮಿ. ಏಕೆಂದರೆ ಎಂ.ಟೆಕ್‍ನಲ್ಲಿ ಇವರು ಹೊನ್ನ ಶಿಖರವೇರಿದ್ದರಂತೆ. ಆ ವಿದ್ವತ್ತಿಗೂ ಈಗ ಇವರು ಸರಕಾರದ ವಿಷಯದಲ್ಲಾಡುತ್ತಿರುವ ಮಾತಿಗೂ ಯಾವ ಸಂಬಂಧವೂ ಇಲ್ಲವಂತ¯್ಲ. ಸಂವಿಧಾನದಲ್ಲಿನ ಚುನಾವಣಾ ನಿಯಮದಂತೆ ಚುನಾವಣೆ ನಡೆದಿದ್ದೆ ಜಾತ್ಯತೀತ ಮನಸ್ಸುಗಳು 78 ಸೀಟು ಗೆಲ್ಲಿಸಿವೆ. ಧರ್ಮಾಂಧರು 104 ಸೀಟು ಗೆದ್ದಿದ್ದಾರೆ ಹಾಗೆ ಜಾತ್ಯಂಧರು 38 ಸೀಟು ಗೆಲ್ಲಿಸಿಕೊಂಡಿದ್ದಾರೆ. ಧರ್ಮಾಂಧರನ್ನ ದೂರವಿಡುವ ಸಲುವಾಗಿ ಜಾತ್ಯತೀತರು ಮತ್ತು ಜಾತಿವಾದಿಗಳು ಸೇರಿ ಸರಕಾರ ಮಾಡಿದ್ದಾರೆ. ಕುಪಿತಗೊಂಡ ಧರ್ಮಾಂಧರು ಸರಕಾರ ಕೆಡವಲು ಹಗಲುರಾತ್ರಿ ಹಾರೆಗುದ್ದಲಿಯೊಂದಿಗೆ ಡೈನಮೆಟ್‍ಗಳನ್ನ ಉಪಯೋಗಿಸುವ ಬೆದರಿಕೆಯೊಂದಿಗೆ ಕೆಲಸ ಮಾಡುತ್ತಿವೆ. ಇದು ಸಂವಿಧಾನಕ್ಕೆ ಮುಖ್ಯವಾಗಿ ಕೋರ್ಟಿಗೆ ಬಗೆಯುವ ದ್ರೋಹವಾಗಿದೆ. ಇಂತಲ್ಲಿ ಸರಕಾರ ಉರುಳಿದರೆ ಅದು ದೈವಕೃಪೆಗೆ ವಿರುದ್ಧ ಹೇಗಾಗುತ್ತದೆಂದು ಕೇಳಿದರೆ ನಿವರ್iಲಾನಂದರು ನಿರುತ್ತರ ಕುಮಾರನಂತಾದರಂತಲ್ಲಾ. ಥೂತ್ತೇರಿ

*******

ಕೇವಲ 37 ಸೀಟುಗಳನ್ನ ಹೊಂದಿದ ಜೆಡಿಎಸ್ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದು ಸರಕಾರ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಯಜ್ಞ, ಯಾಗ, ಹೋಮ ಮತ್ತು ನೂರಾರು ಕ್ಷೇತ್ರ ದರ್ಶನದ ಪ್ರಭಾವವೇ ಸರಕಾರವನ್ನು ಮುನ್ನಡೆಸುತ್ತಿದೆ ಎಂದು ಖಚಿತವಾಗಿ ನಂಬಿರುವ ದೇವೇಗೌಡರಿಗೆ ಪ್ರಜಾಪ್ರಭುತ್ವದಲ್ಲಿನ ಚಮತ್ಕಾರವೇ ಹೊಳೆಯದಿರುವುದು ಆಶ್ಚರ್ಯ ತಂದಿದೆಯಂತ¯್ಲ. ಆದರೇನು ಅಪ್ಪನ ಮೂಢನಂಬಿಕೆ ಮಾತುಗಳನ್ನೆ ನಂಬಿದ್ದ ಕುಮಾರಣ್ಣ ಈಚೆಗೆ ಜ್ಞಾನೋದಯವಾದಂತೆ ಸಿದ್ದರಾಮಯ್ಯನ ಕೃಪೆಯಿದ್ದರೆ ಐದು ವರ್ಷ ಮುಗಿಸಿ ಮನೆಗೆ ಹೋಗುತ್ತೇವೆ ಎಂದಿದ್ದಾರಲ್ಲಾ. ಇದರಿಂದ ಸಿದ್ದುಗೆ ಬಿದ್ದ ಹೊಡೆತವೆಂದರೆ ಈವರೆಗೆ ಸರಕಾರವನ್ನು ಅಲ್ಲಾಡಿಸುತ್ತಿದ್ದ ಕೀರ್ತಿ ಸಿದ್ದುಗೆ ಸಲ್ಲುತ್ತದೆ. ಅದಷ್ಟೇ ಅಲ್ಲ ಮುಂದಿನ ಎಲ್ಲಾ ತಾರಾತಿಗಡಿಯ ರಗಳೆ ಸಿದ್ದು ಬೆನ್ನ ಬೀಳುವುದರಲ್ಲಿ ಸಂಶಯವಿಲ್ಲ. ಇದಾವುದನ್ನ ಯೋಚಿಸದ ಸಿದ್ದು ಅಂತೂ ಕುಮಾರನಿಗೆ ನನ್ನ ಕೃಪೆ ಮುಖ್ಯ ಎಂಬುದು ಈಗಲಾದರೂ ಹೊಳೆಯಿತಲ್ಲ ಎಂದು ಆಕಳಿಕೆ ತೆಗೆದು ಸೋಫಾಕ್ಕೆ ಒರಗಿದರಂತಲ್ಲಾ, ಥೂತ್ತೇರಿ.

*******

ಹಟ ಸಂಭೋಗದ ಮುದುಕನಂತೆ ಹಗಲೂರಾತ್ರಿ ಅಧಿಕಾರಕ್ಕಾಗಿ ಹೋರಾಡುತ್ತಿರುವ ಎಡೂರಪ್ಪನನ್ನು ಗಮನಿಸಿದ ಚೆಡ್ಡಿಗಳು ಎಡೂರಪ್ಪನ ಇಂತಹ ಕಾರ್ಯಾಚರಣೆಗೆ ನಮ್ಮ ವಿರೋಧವಿದೆ ಎಂಬ ಸುದ್ದಿ ಬಿತ್ತರಿಸಿವೆಯಲ್ಲಾ. ಅಂದರೆ ಆರೆಸ್ಸೆಸ್ಸಿಗರು ಶ್ರೇಷ್ಠವಾದ ಜನತಂತ್ರ ರಾಜಕಾರಣ. ಎಡೂರಪ್ಪನದಲ್ಲ ಎಂದು ಅತ್ತ ಎಡೂರಪ್ಪನನ್ನ ದೂರಿ ಇತ್ತ ತಾವು ಮಾತ್ರ ಧರ್ಮವಂತರೆಂದು ಬಿಂಬಿಸಲು ಹೊರಟಿರುವುದು ಸ್ವತಃ ಎಡೂರಪ್ಪನಿಗೇ ಸಿಟ್ಟು ತರಿಸಿದೆಯಂತಲ್ಲಾ. ಕಂಠಪೂರ್ತಿ ಭ್ರಷ್ಟ ಎಂಬುದನ್ನ ಬಿಟ್ಟರೆ, ಎಡೂರಪ್ಪ ಎಂದು ಮುಸ್ಲಿಮರನ್ನ ದೂಷಿಸಿದವರಲ್ಲಾ ಇದಕ್ಕೆ ಕಾರಣ ಅವರ ಕ್ಷೇತ್ರದ ಮುಸ್ಲಿಮರ ಬೆಂಬಲ. ಜೊತೆಗೆ ಈ ಅನಂತ, ಈಶ್ವರ, ಜೋಷಿ, ಯತ್ನಾಳ ಇಂತ ಮತಾಂಧರಾಡುವ ಮಾತನ್ನ ಯಡ್ಡಿ ಎಂದೂ ಆಡಿದವರಲ್ಲ. ಆದ್ದರಿಂದ ಚಿಡ್ಡಿಗಳು ಬಿಟ್ಟುಹೋದ ಮನೆಗೆ ಬಂದ ಯಡ್ಡಿ ಬಗ್ಗೆ ಎಚ್ಚರಿಕೆಯಿಂದಲೇ ವರ್ತಿಸುತ್ತಿವೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮತ ಉಳಿಸಿ ಎಂದು ಜನ ಬೇಡಿಕೊಳ್ಳುವಂತೆ ಮಾಡಬೇಡಿ’: ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ, ಇಡೀ ದೇಶದ ಸಮಸ್ಯೆ: ಬಹುಭಾಷಾ ನಟ ಪ್ರಕಾಶ್ ರಾಜ್

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಧಾನದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕರೆದಿದ್ದ ಮಹತ್ವದ ಪತ್ರಿಕಾಗೋಷ್ಠಿ ಆಗಸ್ಟ್ 14, 2026ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ...

‘ನಲ್ಸಾರ್’ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಅಡ್ಡಬಂದ BCI ನಡೆಗೆ CJI ಗರಂ

ಹೈದರಾಬಾದ್‌ನ 'ನಲ್ಸಾರ್' (NALSAR) ಕಾನೂನು ವಿಶ್ವವಿದ್ಯಾಲಯದ ಪದವೀಧರರ ಸನ್ನದು (ಎನ್‌ರೋಲ್‌ಮೆಂಟ್) ನೋಂದಣಿಯನ್ನು ಅಮಾನತಿನಲ್ಲಿಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ವಿವಾದಾತ್ಮಕ ನಿರ್ದೇಶನದ ವಿರುದ್ಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,...

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ: ಯೋಗಿ ಆದಿತ್ಯನಾಥ್ ಸೇರಿ 8 ಅಧಿಕಾರಿಗಳ ನಿರ್ಬಂಧಕ್ಕೆ ಕೆನಡಾ ಮಾನವ ಹಕ್ಕುಗಳ ಸಂಸ್ಥೆ ಆಗ್ರಹ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ರಾಜ್ಯ ಬೆಂಬಲಿತ ದೌರ್ಜನ್ಯಗಳನ್ನು ಖಂಡಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎಂಟು ಪ್ರಮುಖ...

SIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು...

ASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ...

SIR: 62 ವರ್ಷದ ಜೀವಂತ ವ್ಯಕ್ತಿಯನ್ನು ‘ಮೃತ’ ಎಂದು ಪಟ್ಟಿ ಮಾಡಿದ ಆಯೋಗದ ಕುತಂತ್ರ ಬಯಲು

ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ದೋಷಮುಕ್ತ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಚುನಾವಣಾ ಆಯೋಗವು ಬರೋಬ್ಬರಿ 1.08 ಕೋಟಿ ಮತದಾರರನ್ನು...

‘ಸಿದ್ದಾರ್ಥ ವಿಹಾರ ಟ್ರಸ್ಟ್’ ನ ದಾಖಲೆ ನೀಡುತ್ತೇನೆ: ಆರ್‌ಎಸ್‌ಎಸ್, ರಾಮಮಂದಿರದ ಲೆಕ್ಕ ನೀಡಲು ಸಿದ್ಧವಿದ್ದೀರಾ?: ಬಿಜೆಪಿ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ‘ಸಿದ್ದಾರ್ಥ ವಿಹಾರ ಟ್ರಸ್ಟ್‌’ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತಮ್ಮ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ...

ಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

ಆಗಸ್ಟ್ 13, 2026 ರಂದು ಕ್ಯೂಬಾ ತನ್ನ ಕ್ರಾಂತಿಕಾರಿ ನಾಯಕ, ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಐದು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ನಾಯಕನ ಶಾಶ್ವತ ಸಿದ್ಧಾಂತಗಳು...

‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ: ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಸರ್ಕಾರಕ್ಕೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಒತ್ತಾಯ

ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಜಾತಿ ತಾರತಮ್ಯ, ಕಿರುಕುಳ ಹಾಗೂ ವಂಚನೆಯನ್ನು ತಡೆಗಟ್ಟಲು ಅತ್ಯಂತ ನಿರ್ಣಾಯಕವಾಗಿರುವ 'ಕರ್ನಾಟಕ ರೋಹಿತ್ ವೇಮುಲಾ...

SIR: ತೆಲಂಗಾಣ ಸರ್ಕಾರ ಮತದಾರರಿಗೆ ನೀಡಿದ್ದ FRC ಯನ್ನು , ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC...