Homeರಾಜಕೀಯಮಿತ್ರೋ... ಮಿತ್ರೋ... ಮಿತ್ರೋ...

ಮಿತ್ರೋ… ಮಿತ್ರೋ… ಮಿತ್ರೋ…

- Advertisement -
- Advertisement -

ಮಿತ್ರೊ…. ಟೆಡ್ಡಿ ಫೋನ್ ಮಾಡಿದ್ರು.. ಸಡುನ್ ಆಗಿ ಎಂಜಿಲು ಮುಖಕ್ಕೆ ಬಿತ್ತು.. `ಥೂ ಬೋ$%&@#, 2008ರಲ್ಲಿ ನೀವಿಲ್ದೆ 110 ಸೀಟ್ ಗೆದಿದ್ದೆ, ಮೋದಿ ಅಲೆ, ದೇಶಭಕ್ತಿ, ಶಾ ಅಂತ 104ಕ್ಕೆ ತಂದು ನಡುನೀರ್ನಲ್ ನಿಲ್ಸಿ ಕೈಕೊಟ್ರಲ್ಲೋ..’ ಫುಲ್ ಸಂಸ್ಕೃತ.. ಇನ್ನು ಏನೋ ಹೇಳೋಕೆ ಹೋದ್ರು, ಕೋಪ ಮಾಡಿಕೊಂಡೊವ್ರೆ ಅಂಥ ಫೋನ್ ಕಟ್ ಮಾಡಿಬಿಟ್ಟೆ..
* * * *
ಮಿತ್ರೊ…. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 104 ಡಾಲರ್ ಇದ್ದಾಗ uಠಿಚಿ ಸರ್ಕಾರ ಬರಿ 4.5% ಕೇಂದ್ರೀಯ ತೆರಿಗೆ ಹಾಕಿ ಭಾರತ ಅಭಿವೃದ್ಧಿ ಆಗದಂತೆ ಮಾಡಿತ್ತು.. ನಾವು ಅಧಿಕಾರಕ್ಕೆ ಬಂದಾಗಿನಿಂದ ಅದೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ಗೆ 35 ಡಾಲರ್ ಇಂದ ಹಿಡಿದು 60 ಡಾಲರ್ ಆಗಿದೆ.. ನಾವು 4.5% ಇದ್ದ ಕೇಂದ್ರೀಯ ತೆರಿಗೆಯನ್ನು 19.5% ಹೆಚ್ಚಿಸಿ ದೇಶದ ಅಭಿವೃದ್ದಿಯ್ಯನ್ನು ಭಯಂಕರ ಹೆಚ್ಚಿಸಿದ್ದೇವೆ..!
* * * *
ಮಿತ್ರೊ…. ವೇದಾಂತ ಕಂಪನಿಯ ಅನಿಲ್ ಫೋನ್ ಮಾಡಿದ್ದ.. ಮಚ್ಚ, ಕಂಪನಿಗೆ ಬೀಗ ಹಾಕ್ಬಿಟ್ರು, ಏನಾರ ಮಾಡು ಅಂತ.. ನಾನು ಕೂಡ ಮೊನ್ನೆಯಿಂದ ಕ್ಯಾಲ್ಕುಲೇಟರ್ ಇಡ್ಕೊಂಡ್ ಲೆಕ್ಕ ಹಾಕ್ತಿದ್ದೆ. ಇವನು, ಕಾಂಗಿಗಳು ಮತ್ತು ನಮ್ಮ ಕೃಪೆಯಿಂದ, ಭಾರತೀಯ ಬ್ಯಾಂಕುಗಳಿಂದ ಪಡೆದಿರುವ ಒಟ್ಟೂ ಸಾಲ 2 ಲಕ್ಷ ಕೋಟಿಯಂತೆ. ಒಂದು ಅಂದಾಜಿನ ಮೇಲೆ ಇವನ ಕಂಪನಿಯಲ್ಲಿ ಒಟ್ಟು ಕೆಲಸಗಾರರು 60000.. ಅಂದರೆ ಪ್ರತಿ 3 ಕೋಟಿ 33 ಲಕ್ಷಕ್ಕೆ ಒಂದು ಉದ್ಯೋಗ ಶೃಸ್ಟಿ ಮಾಡುತ್ತಿದ್ದಾನಂತೆ! ಅಂದರೆ ಇವನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಕೋಟ್ಯಧಿಪತಿಗಳೇ? ಇಲ್ಲ, ಇವನ ಕಂಪನಿಯಲ್ಲಿ 90% ಮೇಲೂ ಕಾರ್ಮಿಕರು, ತಿಂಗಳಿಗೆ 20,000ಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ.. ಕಾಂಗಿ ಮತ್ತು ನಮಗೆ ಇವನು ಲೆಕ್ಕದಲ್ಲಿ ಕೊಟ್ಟಿರುವ ದೇಣಿಗೆ ಬರಿ 29 ಕೋಟಿ.. ಇನ್ನ ಮಿಕ್ಕ ಅಷ್ಟೊಂದು ಕಾಸಿನಲ್ಲಿ ಏನ್ ಮಾಡ್ತಾ ಇದ್ದಿಯೊ ಅಂತ ಡೌಟ್ನಲ್ಲಿ ಕೇಳ್ದೆ .. ಅವನು “ದೇಶದ್ರೋಹಿ, ಸೈನಿಕರು ಗಡಿಯಲ್ಲಿ ದೇಶಕ್ಕೋಸ್ಕರ ಸಾಯಿತಾ ಇದ್ರೆ ನಿಂಗೆ ಲೆಕ್ಕದ್ ಚಿಂತೆ” ಅಂತ ಫೋನ್ ಕಟ್ ಮಾಡ್ಬಿಡೋದ!!!
* * * *
ಮಿತ್ರೊ…. , ನನ್ನ ಗುರು ಸಾವರ್ಕರ್ ಅವರ ಬಗ್ಗೆ ನಾನು ಚಿಕ್ಕಂದಿನಿಂದಲೇ ಓದಲು ಶುರು ಮಾಡಿದ ಪುಸ್ತಕ “ಲೈಫ್ ಒಫ್ ಬ್ಯಾರಿಸ್ಟರ್ ಸಾವರ್ಕರ್”. ಇದು ಅವರು ಬ್ರಿಟಿಷರಿಂದ ಭಿಕ್ಷೆ ಬೇಡಿ, ನಾನು ಇನ್ನೆಂದಿಗೂ ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲ, ಇನ್ನು ಮುಂದೆ ನಾನು ನಿಮ್ಮ ಗುಲಾಮ ಎಂದು ಒಂದರ ಮೇಲೆ ಒಂದರಂತೆ ಹನ್ನೊಂದು ಪತ್ರಗಳನ್ನು ಬೆರೆದು 1924ರಲ್ಲಿ ಷರತ್ತಿನ ಮೇಲೆ ಬಿಡುಗಡೆಯಾಗಿ ಎರೆಡನೆ ವರ್ಷದಲ್ಲಿ(1926) ಅನಾಮಧೇಯ ಚಿತ್ರಗುಪ್ತ ಎಂಬುವವರು ಪ್ರಕಟಿಸಿದ ಪುಸ್ತಕ.. ಈ ಪುಸ್ತಕ ಎಷ್ಟು ರೋಚಕವಾಗಿತ್ತೆಂದರೆ, ಸಾವರ್ಕರ್ ಹುಟ್ಟಿನಿಂದಲೇ ಅತಿ ಬುದ್ದಿವಂತ, ಆಜನ್ಮ ಹೋರಾಟಗಾರ, ಅನ್ಯಾಯಗಳ ವಿರುದ್ಧ ಸಿಡಿದೇಳುವ ವೀರ, ಶೂರ, ಯಾವುದೇ ತಂತ್ರಕ್ಕೆ, ಮಣಿಯದೆ ಪ್ರತಿತಂತ್ರ ಹೆಣೆಯುವ ಶಕ್ತಿ ಮತ್ತು ಯುಕ್ತಿಯುಳ್ಳ ವೀರ ಎಂದು ಪುಸ್ತಕದ ಪ್ರತಿಯೊಂದು ಹಂತದಲ್ಲೂ ಬರೆಯಲಾಗಿತ್ತು.. ಯಾವುದೇ ಫಿಕ್ಷನ್ ಪುಸ್ತಕ ಓದುತ್ತಿದ್ದರೆ ಆ ಪಾತ್ರಗಳ ಒಳಗೆ ನಾವು ಹೇಗೆ ನುಸುಳಿ ಮಾರುಹೋಗುತ್ತೇವೋ ಅದೇ ರೀತಿ ಸಾವರ್ಕರರೇ ನಾನು ಎಂಬಂತೆ ಕಲ್ಪಿಸಿಕೊಳ್ಳಲು ಆರಂಭಿಸಿದೆ (ಒಂದು ರೀತಿಯ ನಾಗವಲ್ಲಿ ಟೈಪ್ಸ್). ನನ್ನ ಮೂವತ್ತೊಂದನೆ ವರ್ಷದಲ್ಲಿ, ಅದೆ 1987ರಲ್ಲಿ ತಿಳಿಯಿತು ಆ ಚಿತ್ರಗುಪ್ತ ಬೇರ್ಯಾರು ಅಲ್ಲ, ಖುದ್ದು ಸರ್ವರ್ಕರ್, ಚಿತ್ರಗುಪ್ತ ಎಂಬ ಹೆಸರಿನಲ್ಲಿ ಬರೆದ ಪುಸ್ತಕ ಎಂದು.. ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು.. ನಾನು ಸಾವರ್ಕರ್ ಆಗಿಹೋಗಿದ್ದೆ.. ನಿಜಜೀವನದಲ್ಲಿ ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಥರ ವೀರರಾಗದಿದ್ದರೂ ಮುಖವಾಡಗಳಲ್ಲಿ ಹೀರೊ ಅಗೋ ಖುಷಿನೆ ಬೇರೆ.. ಈಗಲೂ ಅದನ್ನೇ mಚಿiಟಿಣಚಿiಟಿ ಮಾಡ್ಕೊಂಡ್ ಹೋಗ್ತಾ ಇದ್ದೀನಿ..
* * * *
ಮಿತ್ರೊ….
ನಾನು ಕೆಲಸ ಮಾಡುವವನು ಅಲ್ಲವೇ ಅಲ್ಲ, ನಾನು ಕಲರ್‍ಪುಲ್ ಮಾತಿನ ಗಿರಾಕಿ. ನಾಲ್ಕು ವರ್ಷಗಳಿಂದ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದೆ. ನನ್ನ ತುಘಲಕ್ ತೀರ್ಮಾನವಾದ ಅಮಾನ್ಯೀಕರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಇನ್ನೂ ದೇಶದ ಆಡಳಿತ ನಡೆಸಲು ಬಾರದೆ ವಿದೇಶಿ ಪ್ರವಾಸ ಮಾಡಿಕೊಂಡು ಅಲ್ಲಿಯೂ ಭಾಷಣ ಮಾಡಿಕೊಂಡು ದಿನ ನೂಕಿದೆ. ಇನ್ನೂ ಹೀಂಗೆ ಹೇಳುತ್ತ ಹೋದರೆ ನೂರಾರು ಸಾಧನೆಗಳನ್ನು ಹೇಳಬಹುದು. ನೀವುಗಳು ನನ್ನ ಮಾತಿನಿಂದಲೇ ಹೊಟ್ಟೆ ತುಂಬಿಸಿಕೊಂಡು ದೇಶಕ್ಕಾಗಿ ಮಾಡುತ್ತಿರುವ ತ್ಯಾಗ ನೆನಸಿಕೊಂಡರೆ ಇನ್ನೂ ಅರ್ಧ ಕೆಜಿ ಅಣಬೆ ತಿನ್ನುವ ಅನ್ನಿಸುತ್ತೆ. 2019 ಕ್ಕೂ ನನ್ನ ಮಾತನ್ನೆ ರಾಷ್ಟ್ರ ನಿರ್ಮಾಣ ಎಂದು ತಿಳಿದುಕೊಂಡು ಮತ್ತೊಮ್ಮೆ ಪ್ರಧಾನಿ ಮಾಡುತ್ತಿರಿ ಅನ್ನುವ ಗ್ಯಾರಂಟಿ ನನಗೆ ಇದೆ.
* * * *
ಮಿತ್ರೊ…. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ರೆ ನಿಮ್ಗೆ ಇಷ್ಟ್ ಮಜಾ ಇರ್ತೀತ್ತ? ನಂಗೊತ್ತು ನೀವ್ ಯಾಕ್ ಬಿಜೆಪಿಗೆ ವೋಟ್ ಹಾಕುದ್ರಿ ಅಂತ.. ಗೋವಾ, ಕೇರಳ, ರೆಸಾರ್ಟ್ ರಾಜಕೀಯ, 100 ಕೋಟಿ, ಅವ್ನು ಅಲ್ಲಿಂದ ಇಲ್ಲಿಗೆ, ಇಲ್ಲಿರೋವ್ನು ಅಲ್ಲಿಗೆ.. ಇವ್ನು ಅವ್ನ ಭ್ರಷ್ಟ ಅನ್ನೋದು, ಅವ್ನು ಇವ್ನ ಭ್ರಷ್ಟ ಅನ್ನೋದು.. ಎಲ್ಲ ಮಿಸ್ ಮಾಡ್ಕೊಂಡಿದ್ರಿ ಅಂತ ಗೊತ್ತು..
* * * *
ಮಿತ್ರೊ…. ನಾನು ತೈವಾನ್ ಇಂದ ತರ್ಸಿರೋ ಇಂಪೋರ್ಟೆಡ್ ಅಣಬೆ ತಿನ್ನೋದು.. ಯಾರೋ ಕಿಡಿಗೇಡಿಗಳು ನಾನು ಭಾಷಣ ಪ್ರಾರಂಭ ಮಾಡೋಕು ಮುಂಚೆ ಕೊಡೈ ಕನಲ್ ಅಣೆಬೆ ಸೇರ್ಸಿ ಕೊಡ್ತಿದ್ದಾರೆ ಅನ್ಸುತ್ತೆ.. ಅದಕ್ಕೆ ನಾನೇನು ಮಾತಾಡ್ತಾ ಇದ್ದೀನಿ ಅಂಥ ನಂಗೆ ಗೋತೈತಿಲ್ಲ.. ಹಂಗೆ ನಮ್ಮ ಈಶ್ವರಪ್ಪ ಹೇಳ್ದಂಗೆ ಒಂದ್ ಫ್ಲೋ ನಲ್ಲಿ ಬಾಯಿಗೆ ಬಂದದ್ದು ಸುಳ್ಳೋ ಪೊಳ್ಳೋ ಜೋರಾಗಿ ಹೇಳ್ಬಿಡ್ತೀನಿ.. ಆ ಕಿಡಿಗೇಡಿಗಳನ್ನು ಹಿಡಿಯಲು ನನ್ನ ಗೆಲ್ಲಿಸಿ…
* * * *
ಮಿತ್ರೊ…. ನಾನೀಗ ನೇಪಾಳದ ಮುಕ್ತಿನಾಥ ದೇವಸ್ಥಾನದಲ್ಲಿದ್ದೀನಿ.. ಇಲ್ಲಿ ಧಾರ್ಮಿಕ ಡಿಪ್ಲೊಮಾಸಿ ಮುಗಿಸಿ ಮೌಂಟ್ ಎವರೆಸ್ಟ್ ಹತ್ತಲು ಯೋಚಿಸ್ತಿದ್ದೀನಿ.. ಕಾಂಗ್ರೆಸ್ನವರು, ಮೌಂಟ್ ಎವರೆಸ್ಟ್ ಈವರೆಗೂ ಹತ್ತದೆ ಅದನ್ನು ಅವಮಾನ ಮಾಡಿದ್ದಾರೆ..

– ಭರತ್ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...