Homeರಾಜಕೀಯಮಿತ್ರೋ... ಮಿತ್ರೋ... ಮಿತ್ರೋ...

ಮಿತ್ರೋ… ಮಿತ್ರೋ… ಮಿತ್ರೋ…

- Advertisement -
- Advertisement -

ಮಿತ್ರೊ…. ಟೆಡ್ಡಿ ಫೋನ್ ಮಾಡಿದ್ರು.. ಸಡುನ್ ಆಗಿ ಎಂಜಿಲು ಮುಖಕ್ಕೆ ಬಿತ್ತು.. `ಥೂ ಬೋ$%&@#, 2008ರಲ್ಲಿ ನೀವಿಲ್ದೆ 110 ಸೀಟ್ ಗೆದಿದ್ದೆ, ಮೋದಿ ಅಲೆ, ದೇಶಭಕ್ತಿ, ಶಾ ಅಂತ 104ಕ್ಕೆ ತಂದು ನಡುನೀರ್ನಲ್ ನಿಲ್ಸಿ ಕೈಕೊಟ್ರಲ್ಲೋ..’ ಫುಲ್ ಸಂಸ್ಕೃತ.. ಇನ್ನು ಏನೋ ಹೇಳೋಕೆ ಹೋದ್ರು, ಕೋಪ ಮಾಡಿಕೊಂಡೊವ್ರೆ ಅಂಥ ಫೋನ್ ಕಟ್ ಮಾಡಿಬಿಟ್ಟೆ..
* * * *
ಮಿತ್ರೊ…. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 104 ಡಾಲರ್ ಇದ್ದಾಗ uಠಿಚಿ ಸರ್ಕಾರ ಬರಿ 4.5% ಕೇಂದ್ರೀಯ ತೆರಿಗೆ ಹಾಕಿ ಭಾರತ ಅಭಿವೃದ್ಧಿ ಆಗದಂತೆ ಮಾಡಿತ್ತು.. ನಾವು ಅಧಿಕಾರಕ್ಕೆ ಬಂದಾಗಿನಿಂದ ಅದೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ಗೆ 35 ಡಾಲರ್ ಇಂದ ಹಿಡಿದು 60 ಡಾಲರ್ ಆಗಿದೆ.. ನಾವು 4.5% ಇದ್ದ ಕೇಂದ್ರೀಯ ತೆರಿಗೆಯನ್ನು 19.5% ಹೆಚ್ಚಿಸಿ ದೇಶದ ಅಭಿವೃದ್ದಿಯ್ಯನ್ನು ಭಯಂಕರ ಹೆಚ್ಚಿಸಿದ್ದೇವೆ..!
* * * *
ಮಿತ್ರೊ…. ವೇದಾಂತ ಕಂಪನಿಯ ಅನಿಲ್ ಫೋನ್ ಮಾಡಿದ್ದ.. ಮಚ್ಚ, ಕಂಪನಿಗೆ ಬೀಗ ಹಾಕ್ಬಿಟ್ರು, ಏನಾರ ಮಾಡು ಅಂತ.. ನಾನು ಕೂಡ ಮೊನ್ನೆಯಿಂದ ಕ್ಯಾಲ್ಕುಲೇಟರ್ ಇಡ್ಕೊಂಡ್ ಲೆಕ್ಕ ಹಾಕ್ತಿದ್ದೆ. ಇವನು, ಕಾಂಗಿಗಳು ಮತ್ತು ನಮ್ಮ ಕೃಪೆಯಿಂದ, ಭಾರತೀಯ ಬ್ಯಾಂಕುಗಳಿಂದ ಪಡೆದಿರುವ ಒಟ್ಟೂ ಸಾಲ 2 ಲಕ್ಷ ಕೋಟಿಯಂತೆ. ಒಂದು ಅಂದಾಜಿನ ಮೇಲೆ ಇವನ ಕಂಪನಿಯಲ್ಲಿ ಒಟ್ಟು ಕೆಲಸಗಾರರು 60000.. ಅಂದರೆ ಪ್ರತಿ 3 ಕೋಟಿ 33 ಲಕ್ಷಕ್ಕೆ ಒಂದು ಉದ್ಯೋಗ ಶೃಸ್ಟಿ ಮಾಡುತ್ತಿದ್ದಾನಂತೆ! ಅಂದರೆ ಇವನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಕೋಟ್ಯಧಿಪತಿಗಳೇ? ಇಲ್ಲ, ಇವನ ಕಂಪನಿಯಲ್ಲಿ 90% ಮೇಲೂ ಕಾರ್ಮಿಕರು, ತಿಂಗಳಿಗೆ 20,000ಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ.. ಕಾಂಗಿ ಮತ್ತು ನಮಗೆ ಇವನು ಲೆಕ್ಕದಲ್ಲಿ ಕೊಟ್ಟಿರುವ ದೇಣಿಗೆ ಬರಿ 29 ಕೋಟಿ.. ಇನ್ನ ಮಿಕ್ಕ ಅಷ್ಟೊಂದು ಕಾಸಿನಲ್ಲಿ ಏನ್ ಮಾಡ್ತಾ ಇದ್ದಿಯೊ ಅಂತ ಡೌಟ್ನಲ್ಲಿ ಕೇಳ್ದೆ .. ಅವನು “ದೇಶದ್ರೋಹಿ, ಸೈನಿಕರು ಗಡಿಯಲ್ಲಿ ದೇಶಕ್ಕೋಸ್ಕರ ಸಾಯಿತಾ ಇದ್ರೆ ನಿಂಗೆ ಲೆಕ್ಕದ್ ಚಿಂತೆ” ಅಂತ ಫೋನ್ ಕಟ್ ಮಾಡ್ಬಿಡೋದ!!!
* * * *
ಮಿತ್ರೊ…. , ನನ್ನ ಗುರು ಸಾವರ್ಕರ್ ಅವರ ಬಗ್ಗೆ ನಾನು ಚಿಕ್ಕಂದಿನಿಂದಲೇ ಓದಲು ಶುರು ಮಾಡಿದ ಪುಸ್ತಕ “ಲೈಫ್ ಒಫ್ ಬ್ಯಾರಿಸ್ಟರ್ ಸಾವರ್ಕರ್”. ಇದು ಅವರು ಬ್ರಿಟಿಷರಿಂದ ಭಿಕ್ಷೆ ಬೇಡಿ, ನಾನು ಇನ್ನೆಂದಿಗೂ ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲ, ಇನ್ನು ಮುಂದೆ ನಾನು ನಿಮ್ಮ ಗುಲಾಮ ಎಂದು ಒಂದರ ಮೇಲೆ ಒಂದರಂತೆ ಹನ್ನೊಂದು ಪತ್ರಗಳನ್ನು ಬೆರೆದು 1924ರಲ್ಲಿ ಷರತ್ತಿನ ಮೇಲೆ ಬಿಡುಗಡೆಯಾಗಿ ಎರೆಡನೆ ವರ್ಷದಲ್ಲಿ(1926) ಅನಾಮಧೇಯ ಚಿತ್ರಗುಪ್ತ ಎಂಬುವವರು ಪ್ರಕಟಿಸಿದ ಪುಸ್ತಕ.. ಈ ಪುಸ್ತಕ ಎಷ್ಟು ರೋಚಕವಾಗಿತ್ತೆಂದರೆ, ಸಾವರ್ಕರ್ ಹುಟ್ಟಿನಿಂದಲೇ ಅತಿ ಬುದ್ದಿವಂತ, ಆಜನ್ಮ ಹೋರಾಟಗಾರ, ಅನ್ಯಾಯಗಳ ವಿರುದ್ಧ ಸಿಡಿದೇಳುವ ವೀರ, ಶೂರ, ಯಾವುದೇ ತಂತ್ರಕ್ಕೆ, ಮಣಿಯದೆ ಪ್ರತಿತಂತ್ರ ಹೆಣೆಯುವ ಶಕ್ತಿ ಮತ್ತು ಯುಕ್ತಿಯುಳ್ಳ ವೀರ ಎಂದು ಪುಸ್ತಕದ ಪ್ರತಿಯೊಂದು ಹಂತದಲ್ಲೂ ಬರೆಯಲಾಗಿತ್ತು.. ಯಾವುದೇ ಫಿಕ್ಷನ್ ಪುಸ್ತಕ ಓದುತ್ತಿದ್ದರೆ ಆ ಪಾತ್ರಗಳ ಒಳಗೆ ನಾವು ಹೇಗೆ ನುಸುಳಿ ಮಾರುಹೋಗುತ್ತೇವೋ ಅದೇ ರೀತಿ ಸಾವರ್ಕರರೇ ನಾನು ಎಂಬಂತೆ ಕಲ್ಪಿಸಿಕೊಳ್ಳಲು ಆರಂಭಿಸಿದೆ (ಒಂದು ರೀತಿಯ ನಾಗವಲ್ಲಿ ಟೈಪ್ಸ್). ನನ್ನ ಮೂವತ್ತೊಂದನೆ ವರ್ಷದಲ್ಲಿ, ಅದೆ 1987ರಲ್ಲಿ ತಿಳಿಯಿತು ಆ ಚಿತ್ರಗುಪ್ತ ಬೇರ್ಯಾರು ಅಲ್ಲ, ಖುದ್ದು ಸರ್ವರ್ಕರ್, ಚಿತ್ರಗುಪ್ತ ಎಂಬ ಹೆಸರಿನಲ್ಲಿ ಬರೆದ ಪುಸ್ತಕ ಎಂದು.. ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು.. ನಾನು ಸಾವರ್ಕರ್ ಆಗಿಹೋಗಿದ್ದೆ.. ನಿಜಜೀವನದಲ್ಲಿ ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಥರ ವೀರರಾಗದಿದ್ದರೂ ಮುಖವಾಡಗಳಲ್ಲಿ ಹೀರೊ ಅಗೋ ಖುಷಿನೆ ಬೇರೆ.. ಈಗಲೂ ಅದನ್ನೇ mಚಿiಟಿಣಚಿiಟಿ ಮಾಡ್ಕೊಂಡ್ ಹೋಗ್ತಾ ಇದ್ದೀನಿ..
* * * *
ಮಿತ್ರೊ….
ನಾನು ಕೆಲಸ ಮಾಡುವವನು ಅಲ್ಲವೇ ಅಲ್ಲ, ನಾನು ಕಲರ್‍ಪುಲ್ ಮಾತಿನ ಗಿರಾಕಿ. ನಾಲ್ಕು ವರ್ಷಗಳಿಂದ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದೆ. ನನ್ನ ತುಘಲಕ್ ತೀರ್ಮಾನವಾದ ಅಮಾನ್ಯೀಕರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಇನ್ನೂ ದೇಶದ ಆಡಳಿತ ನಡೆಸಲು ಬಾರದೆ ವಿದೇಶಿ ಪ್ರವಾಸ ಮಾಡಿಕೊಂಡು ಅಲ್ಲಿಯೂ ಭಾಷಣ ಮಾಡಿಕೊಂಡು ದಿನ ನೂಕಿದೆ. ಇನ್ನೂ ಹೀಂಗೆ ಹೇಳುತ್ತ ಹೋದರೆ ನೂರಾರು ಸಾಧನೆಗಳನ್ನು ಹೇಳಬಹುದು. ನೀವುಗಳು ನನ್ನ ಮಾತಿನಿಂದಲೇ ಹೊಟ್ಟೆ ತುಂಬಿಸಿಕೊಂಡು ದೇಶಕ್ಕಾಗಿ ಮಾಡುತ್ತಿರುವ ತ್ಯಾಗ ನೆನಸಿಕೊಂಡರೆ ಇನ್ನೂ ಅರ್ಧ ಕೆಜಿ ಅಣಬೆ ತಿನ್ನುವ ಅನ್ನಿಸುತ್ತೆ. 2019 ಕ್ಕೂ ನನ್ನ ಮಾತನ್ನೆ ರಾಷ್ಟ್ರ ನಿರ್ಮಾಣ ಎಂದು ತಿಳಿದುಕೊಂಡು ಮತ್ತೊಮ್ಮೆ ಪ್ರಧಾನಿ ಮಾಡುತ್ತಿರಿ ಅನ್ನುವ ಗ್ಯಾರಂಟಿ ನನಗೆ ಇದೆ.
* * * *
ಮಿತ್ರೊ…. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ರೆ ನಿಮ್ಗೆ ಇಷ್ಟ್ ಮಜಾ ಇರ್ತೀತ್ತ? ನಂಗೊತ್ತು ನೀವ್ ಯಾಕ್ ಬಿಜೆಪಿಗೆ ವೋಟ್ ಹಾಕುದ್ರಿ ಅಂತ.. ಗೋವಾ, ಕೇರಳ, ರೆಸಾರ್ಟ್ ರಾಜಕೀಯ, 100 ಕೋಟಿ, ಅವ್ನು ಅಲ್ಲಿಂದ ಇಲ್ಲಿಗೆ, ಇಲ್ಲಿರೋವ್ನು ಅಲ್ಲಿಗೆ.. ಇವ್ನು ಅವ್ನ ಭ್ರಷ್ಟ ಅನ್ನೋದು, ಅವ್ನು ಇವ್ನ ಭ್ರಷ್ಟ ಅನ್ನೋದು.. ಎಲ್ಲ ಮಿಸ್ ಮಾಡ್ಕೊಂಡಿದ್ರಿ ಅಂತ ಗೊತ್ತು..
* * * *
ಮಿತ್ರೊ…. ನಾನು ತೈವಾನ್ ಇಂದ ತರ್ಸಿರೋ ಇಂಪೋರ್ಟೆಡ್ ಅಣಬೆ ತಿನ್ನೋದು.. ಯಾರೋ ಕಿಡಿಗೇಡಿಗಳು ನಾನು ಭಾಷಣ ಪ್ರಾರಂಭ ಮಾಡೋಕು ಮುಂಚೆ ಕೊಡೈ ಕನಲ್ ಅಣೆಬೆ ಸೇರ್ಸಿ ಕೊಡ್ತಿದ್ದಾರೆ ಅನ್ಸುತ್ತೆ.. ಅದಕ್ಕೆ ನಾನೇನು ಮಾತಾಡ್ತಾ ಇದ್ದೀನಿ ಅಂಥ ನಂಗೆ ಗೋತೈತಿಲ್ಲ.. ಹಂಗೆ ನಮ್ಮ ಈಶ್ವರಪ್ಪ ಹೇಳ್ದಂಗೆ ಒಂದ್ ಫ್ಲೋ ನಲ್ಲಿ ಬಾಯಿಗೆ ಬಂದದ್ದು ಸುಳ್ಳೋ ಪೊಳ್ಳೋ ಜೋರಾಗಿ ಹೇಳ್ಬಿಡ್ತೀನಿ.. ಆ ಕಿಡಿಗೇಡಿಗಳನ್ನು ಹಿಡಿಯಲು ನನ್ನ ಗೆಲ್ಲಿಸಿ…
* * * *
ಮಿತ್ರೊ…. ನಾನೀಗ ನೇಪಾಳದ ಮುಕ್ತಿನಾಥ ದೇವಸ್ಥಾನದಲ್ಲಿದ್ದೀನಿ.. ಇಲ್ಲಿ ಧಾರ್ಮಿಕ ಡಿಪ್ಲೊಮಾಸಿ ಮುಗಿಸಿ ಮೌಂಟ್ ಎವರೆಸ್ಟ್ ಹತ್ತಲು ಯೋಚಿಸ್ತಿದ್ದೀನಿ.. ಕಾಂಗ್ರೆಸ್ನವರು, ಮೌಂಟ್ ಎವರೆಸ್ಟ್ ಈವರೆಗೂ ಹತ್ತದೆ ಅದನ್ನು ಅವಮಾನ ಮಾಡಿದ್ದಾರೆ..

– ಭರತ್ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...

ಇಂಡಿಗೋ ಹಾರಾಟದಲ್ಲಿ ಐದನೇ ದಿನವೂ ವ್ಯತ್ಯಯ: ವಿಮಾನ ದರಕ್ಕೆ ತಾತ್ಕಾಲಿಕ ಮಿತಿ ವಿಧಿಸಿದ ಕೇಂದ್ರ

ಇಂಡಿಗೋದ ದೇಶೀಯ ಕಾರ್ಯಾಚರಣೆಗಳು ಸತತ ಐದನೇ ದಿನವೂ ಅಸ್ತವ್ಯಸ್ತಗೊಂಡಿದ್ದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ (ಡಿಸೆಂಬರ್ 6) ವಿಮಾನ ಟಿಕೆಟ್ ದರಗಳ ಮೇಲೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ. ನಿಗದಿತ ಮಾನದಂಡಗಳ ಯಾವುದೇ...

ಪಶ್ಚಿಮ ಬಂಗಾಳ| ಎಸ್‌ಐಆರ್‌ನಲ್ಲಿ ಹೆಸರು ನೋಂದಾಯಿಸಲು ನಿರಾಕರಿಸಿದ 79 ಬುಡಕಟ್ಟು ಜನಾಂಗಗಳು

ಪಶ್ಚಿಮ ಬಂಗಾಳದ ಬಂಕುರಾದ ಮುಚಿಕಟಾ ಮತ್ತು ವೆದುವಾಶೋಲ್ ಗ್ರಾಮಗಳ ಬುಡಕಟ್ಟು ಜನಾಂಗದವರು 'ಸಮಾಜ್ವಾದ್ ಅಂತರ-ರಾಜ್ಯ ಮಾಝಿ ಸರ್ಕಾರ್'ಗೆ ನಿಷ್ಠೆಯನ್ನು ಉಲ್ಲೇಖಿಸಿ, ಚುನಾವಣಾ ಆಯೋಗ್ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ...