Homeರಾಜಕೀಯಮಿತ್ರೋ... ಮಿತ್ರೋ... ಮಿತ್ರೋ...

ಮಿತ್ರೋ… ಮಿತ್ರೋ… ಮಿತ್ರೋ…

- Advertisement -
- Advertisement -

ಮಿತ್ರೊ…. ಟೆಡ್ಡಿ ಫೋನ್ ಮಾಡಿದ್ರು.. ಸಡುನ್ ಆಗಿ ಎಂಜಿಲು ಮುಖಕ್ಕೆ ಬಿತ್ತು.. `ಥೂ ಬೋ$%&@#, 2008ರಲ್ಲಿ ನೀವಿಲ್ದೆ 110 ಸೀಟ್ ಗೆದಿದ್ದೆ, ಮೋದಿ ಅಲೆ, ದೇಶಭಕ್ತಿ, ಶಾ ಅಂತ 104ಕ್ಕೆ ತಂದು ನಡುನೀರ್ನಲ್ ನಿಲ್ಸಿ ಕೈಕೊಟ್ರಲ್ಲೋ..’ ಫುಲ್ ಸಂಸ್ಕೃತ.. ಇನ್ನು ಏನೋ ಹೇಳೋಕೆ ಹೋದ್ರು, ಕೋಪ ಮಾಡಿಕೊಂಡೊವ್ರೆ ಅಂಥ ಫೋನ್ ಕಟ್ ಮಾಡಿಬಿಟ್ಟೆ..
* * * *
ಮಿತ್ರೊ…. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 104 ಡಾಲರ್ ಇದ್ದಾಗ uಠಿಚಿ ಸರ್ಕಾರ ಬರಿ 4.5% ಕೇಂದ್ರೀಯ ತೆರಿಗೆ ಹಾಕಿ ಭಾರತ ಅಭಿವೃದ್ಧಿ ಆಗದಂತೆ ಮಾಡಿತ್ತು.. ನಾವು ಅಧಿಕಾರಕ್ಕೆ ಬಂದಾಗಿನಿಂದ ಅದೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ಗೆ 35 ಡಾಲರ್ ಇಂದ ಹಿಡಿದು 60 ಡಾಲರ್ ಆಗಿದೆ.. ನಾವು 4.5% ಇದ್ದ ಕೇಂದ್ರೀಯ ತೆರಿಗೆಯನ್ನು 19.5% ಹೆಚ್ಚಿಸಿ ದೇಶದ ಅಭಿವೃದ್ದಿಯ್ಯನ್ನು ಭಯಂಕರ ಹೆಚ್ಚಿಸಿದ್ದೇವೆ..!
* * * *
ಮಿತ್ರೊ…. ವೇದಾಂತ ಕಂಪನಿಯ ಅನಿಲ್ ಫೋನ್ ಮಾಡಿದ್ದ.. ಮಚ್ಚ, ಕಂಪನಿಗೆ ಬೀಗ ಹಾಕ್ಬಿಟ್ರು, ಏನಾರ ಮಾಡು ಅಂತ.. ನಾನು ಕೂಡ ಮೊನ್ನೆಯಿಂದ ಕ್ಯಾಲ್ಕುಲೇಟರ್ ಇಡ್ಕೊಂಡ್ ಲೆಕ್ಕ ಹಾಕ್ತಿದ್ದೆ. ಇವನು, ಕಾಂಗಿಗಳು ಮತ್ತು ನಮ್ಮ ಕೃಪೆಯಿಂದ, ಭಾರತೀಯ ಬ್ಯಾಂಕುಗಳಿಂದ ಪಡೆದಿರುವ ಒಟ್ಟೂ ಸಾಲ 2 ಲಕ್ಷ ಕೋಟಿಯಂತೆ. ಒಂದು ಅಂದಾಜಿನ ಮೇಲೆ ಇವನ ಕಂಪನಿಯಲ್ಲಿ ಒಟ್ಟು ಕೆಲಸಗಾರರು 60000.. ಅಂದರೆ ಪ್ರತಿ 3 ಕೋಟಿ 33 ಲಕ್ಷಕ್ಕೆ ಒಂದು ಉದ್ಯೋಗ ಶೃಸ್ಟಿ ಮಾಡುತ್ತಿದ್ದಾನಂತೆ! ಅಂದರೆ ಇವನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಕೋಟ್ಯಧಿಪತಿಗಳೇ? ಇಲ್ಲ, ಇವನ ಕಂಪನಿಯಲ್ಲಿ 90% ಮೇಲೂ ಕಾರ್ಮಿಕರು, ತಿಂಗಳಿಗೆ 20,000ಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ.. ಕಾಂಗಿ ಮತ್ತು ನಮಗೆ ಇವನು ಲೆಕ್ಕದಲ್ಲಿ ಕೊಟ್ಟಿರುವ ದೇಣಿಗೆ ಬರಿ 29 ಕೋಟಿ.. ಇನ್ನ ಮಿಕ್ಕ ಅಷ್ಟೊಂದು ಕಾಸಿನಲ್ಲಿ ಏನ್ ಮಾಡ್ತಾ ಇದ್ದಿಯೊ ಅಂತ ಡೌಟ್ನಲ್ಲಿ ಕೇಳ್ದೆ .. ಅವನು “ದೇಶದ್ರೋಹಿ, ಸೈನಿಕರು ಗಡಿಯಲ್ಲಿ ದೇಶಕ್ಕೋಸ್ಕರ ಸಾಯಿತಾ ಇದ್ರೆ ನಿಂಗೆ ಲೆಕ್ಕದ್ ಚಿಂತೆ” ಅಂತ ಫೋನ್ ಕಟ್ ಮಾಡ್ಬಿಡೋದ!!!
* * * *
ಮಿತ್ರೊ…. , ನನ್ನ ಗುರು ಸಾವರ್ಕರ್ ಅವರ ಬಗ್ಗೆ ನಾನು ಚಿಕ್ಕಂದಿನಿಂದಲೇ ಓದಲು ಶುರು ಮಾಡಿದ ಪುಸ್ತಕ “ಲೈಫ್ ಒಫ್ ಬ್ಯಾರಿಸ್ಟರ್ ಸಾವರ್ಕರ್”. ಇದು ಅವರು ಬ್ರಿಟಿಷರಿಂದ ಭಿಕ್ಷೆ ಬೇಡಿ, ನಾನು ಇನ್ನೆಂದಿಗೂ ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲ, ಇನ್ನು ಮುಂದೆ ನಾನು ನಿಮ್ಮ ಗುಲಾಮ ಎಂದು ಒಂದರ ಮೇಲೆ ಒಂದರಂತೆ ಹನ್ನೊಂದು ಪತ್ರಗಳನ್ನು ಬೆರೆದು 1924ರಲ್ಲಿ ಷರತ್ತಿನ ಮೇಲೆ ಬಿಡುಗಡೆಯಾಗಿ ಎರೆಡನೆ ವರ್ಷದಲ್ಲಿ(1926) ಅನಾಮಧೇಯ ಚಿತ್ರಗುಪ್ತ ಎಂಬುವವರು ಪ್ರಕಟಿಸಿದ ಪುಸ್ತಕ.. ಈ ಪುಸ್ತಕ ಎಷ್ಟು ರೋಚಕವಾಗಿತ್ತೆಂದರೆ, ಸಾವರ್ಕರ್ ಹುಟ್ಟಿನಿಂದಲೇ ಅತಿ ಬುದ್ದಿವಂತ, ಆಜನ್ಮ ಹೋರಾಟಗಾರ, ಅನ್ಯಾಯಗಳ ವಿರುದ್ಧ ಸಿಡಿದೇಳುವ ವೀರ, ಶೂರ, ಯಾವುದೇ ತಂತ್ರಕ್ಕೆ, ಮಣಿಯದೆ ಪ್ರತಿತಂತ್ರ ಹೆಣೆಯುವ ಶಕ್ತಿ ಮತ್ತು ಯುಕ್ತಿಯುಳ್ಳ ವೀರ ಎಂದು ಪುಸ್ತಕದ ಪ್ರತಿಯೊಂದು ಹಂತದಲ್ಲೂ ಬರೆಯಲಾಗಿತ್ತು.. ಯಾವುದೇ ಫಿಕ್ಷನ್ ಪುಸ್ತಕ ಓದುತ್ತಿದ್ದರೆ ಆ ಪಾತ್ರಗಳ ಒಳಗೆ ನಾವು ಹೇಗೆ ನುಸುಳಿ ಮಾರುಹೋಗುತ್ತೇವೋ ಅದೇ ರೀತಿ ಸಾವರ್ಕರರೇ ನಾನು ಎಂಬಂತೆ ಕಲ್ಪಿಸಿಕೊಳ್ಳಲು ಆರಂಭಿಸಿದೆ (ಒಂದು ರೀತಿಯ ನಾಗವಲ್ಲಿ ಟೈಪ್ಸ್). ನನ್ನ ಮೂವತ್ತೊಂದನೆ ವರ್ಷದಲ್ಲಿ, ಅದೆ 1987ರಲ್ಲಿ ತಿಳಿಯಿತು ಆ ಚಿತ್ರಗುಪ್ತ ಬೇರ್ಯಾರು ಅಲ್ಲ, ಖುದ್ದು ಸರ್ವರ್ಕರ್, ಚಿತ್ರಗುಪ್ತ ಎಂಬ ಹೆಸರಿನಲ್ಲಿ ಬರೆದ ಪುಸ್ತಕ ಎಂದು.. ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು.. ನಾನು ಸಾವರ್ಕರ್ ಆಗಿಹೋಗಿದ್ದೆ.. ನಿಜಜೀವನದಲ್ಲಿ ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಥರ ವೀರರಾಗದಿದ್ದರೂ ಮುಖವಾಡಗಳಲ್ಲಿ ಹೀರೊ ಅಗೋ ಖುಷಿನೆ ಬೇರೆ.. ಈಗಲೂ ಅದನ್ನೇ mಚಿiಟಿಣಚಿiಟಿ ಮಾಡ್ಕೊಂಡ್ ಹೋಗ್ತಾ ಇದ್ದೀನಿ..
* * * *
ಮಿತ್ರೊ….
ನಾನು ಕೆಲಸ ಮಾಡುವವನು ಅಲ್ಲವೇ ಅಲ್ಲ, ನಾನು ಕಲರ್‍ಪುಲ್ ಮಾತಿನ ಗಿರಾಕಿ. ನಾಲ್ಕು ವರ್ಷಗಳಿಂದ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದೆ. ನನ್ನ ತುಘಲಕ್ ತೀರ್ಮಾನವಾದ ಅಮಾನ್ಯೀಕರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಇನ್ನೂ ದೇಶದ ಆಡಳಿತ ನಡೆಸಲು ಬಾರದೆ ವಿದೇಶಿ ಪ್ರವಾಸ ಮಾಡಿಕೊಂಡು ಅಲ್ಲಿಯೂ ಭಾಷಣ ಮಾಡಿಕೊಂಡು ದಿನ ನೂಕಿದೆ. ಇನ್ನೂ ಹೀಂಗೆ ಹೇಳುತ್ತ ಹೋದರೆ ನೂರಾರು ಸಾಧನೆಗಳನ್ನು ಹೇಳಬಹುದು. ನೀವುಗಳು ನನ್ನ ಮಾತಿನಿಂದಲೇ ಹೊಟ್ಟೆ ತುಂಬಿಸಿಕೊಂಡು ದೇಶಕ್ಕಾಗಿ ಮಾಡುತ್ತಿರುವ ತ್ಯಾಗ ನೆನಸಿಕೊಂಡರೆ ಇನ್ನೂ ಅರ್ಧ ಕೆಜಿ ಅಣಬೆ ತಿನ್ನುವ ಅನ್ನಿಸುತ್ತೆ. 2019 ಕ್ಕೂ ನನ್ನ ಮಾತನ್ನೆ ರಾಷ್ಟ್ರ ನಿರ್ಮಾಣ ಎಂದು ತಿಳಿದುಕೊಂಡು ಮತ್ತೊಮ್ಮೆ ಪ್ರಧಾನಿ ಮಾಡುತ್ತಿರಿ ಅನ್ನುವ ಗ್ಯಾರಂಟಿ ನನಗೆ ಇದೆ.
* * * *
ಮಿತ್ರೊ…. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ರೆ ನಿಮ್ಗೆ ಇಷ್ಟ್ ಮಜಾ ಇರ್ತೀತ್ತ? ನಂಗೊತ್ತು ನೀವ್ ಯಾಕ್ ಬಿಜೆಪಿಗೆ ವೋಟ್ ಹಾಕುದ್ರಿ ಅಂತ.. ಗೋವಾ, ಕೇರಳ, ರೆಸಾರ್ಟ್ ರಾಜಕೀಯ, 100 ಕೋಟಿ, ಅವ್ನು ಅಲ್ಲಿಂದ ಇಲ್ಲಿಗೆ, ಇಲ್ಲಿರೋವ್ನು ಅಲ್ಲಿಗೆ.. ಇವ್ನು ಅವ್ನ ಭ್ರಷ್ಟ ಅನ್ನೋದು, ಅವ್ನು ಇವ್ನ ಭ್ರಷ್ಟ ಅನ್ನೋದು.. ಎಲ್ಲ ಮಿಸ್ ಮಾಡ್ಕೊಂಡಿದ್ರಿ ಅಂತ ಗೊತ್ತು..
* * * *
ಮಿತ್ರೊ…. ನಾನು ತೈವಾನ್ ಇಂದ ತರ್ಸಿರೋ ಇಂಪೋರ್ಟೆಡ್ ಅಣಬೆ ತಿನ್ನೋದು.. ಯಾರೋ ಕಿಡಿಗೇಡಿಗಳು ನಾನು ಭಾಷಣ ಪ್ರಾರಂಭ ಮಾಡೋಕು ಮುಂಚೆ ಕೊಡೈ ಕನಲ್ ಅಣೆಬೆ ಸೇರ್ಸಿ ಕೊಡ್ತಿದ್ದಾರೆ ಅನ್ಸುತ್ತೆ.. ಅದಕ್ಕೆ ನಾನೇನು ಮಾತಾಡ್ತಾ ಇದ್ದೀನಿ ಅಂಥ ನಂಗೆ ಗೋತೈತಿಲ್ಲ.. ಹಂಗೆ ನಮ್ಮ ಈಶ್ವರಪ್ಪ ಹೇಳ್ದಂಗೆ ಒಂದ್ ಫ್ಲೋ ನಲ್ಲಿ ಬಾಯಿಗೆ ಬಂದದ್ದು ಸುಳ್ಳೋ ಪೊಳ್ಳೋ ಜೋರಾಗಿ ಹೇಳ್ಬಿಡ್ತೀನಿ.. ಆ ಕಿಡಿಗೇಡಿಗಳನ್ನು ಹಿಡಿಯಲು ನನ್ನ ಗೆಲ್ಲಿಸಿ…
* * * *
ಮಿತ್ರೊ…. ನಾನೀಗ ನೇಪಾಳದ ಮುಕ್ತಿನಾಥ ದೇವಸ್ಥಾನದಲ್ಲಿದ್ದೀನಿ.. ಇಲ್ಲಿ ಧಾರ್ಮಿಕ ಡಿಪ್ಲೊಮಾಸಿ ಮುಗಿಸಿ ಮೌಂಟ್ ಎವರೆಸ್ಟ್ ಹತ್ತಲು ಯೋಚಿಸ್ತಿದ್ದೀನಿ.. ಕಾಂಗ್ರೆಸ್ನವರು, ಮೌಂಟ್ ಎವರೆಸ್ಟ್ ಈವರೆಗೂ ಹತ್ತದೆ ಅದನ್ನು ಅವಮಾನ ಮಾಡಿದ್ದಾರೆ..

– ಭರತ್ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....